<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ವಿಚಾರವಾದ &amp;laquo; WordPress.com Tag Feed</title>
	<link>http://wordpress.com/tag/ವಿಚಾರವಾದ/</link>
	<description>Feed of posts on WordPress.com tagged "ವಿಚಾರವಾದ"</description>
	<pubDate>Tue, 07 Oct 2008 14:50:10 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಮತದಾರರಿಗೇಕೆ..?]]></title>
<link>http://pratispandana.wordpress.com/?p=38</link>
<pubDate>Wed, 30 Apr 2008 04:07:20 +0000</pubDate>
<dc:creator>Ganesh K</dc:creator>
<guid>http://pratispandana.kn.wordpress.com/2008/04/30/%e0%b2%b0%e0%b2%be%e0%b2%9c%e0%b2%95%e0%b2%be%e0%b2%b0%e0%b2%a3%e0%b2%bf%e0%b2%97%e0%b2%b3%e0%b2%bf%e0%b2%97%e0%b3%87-%e0%b2%87%e0%b2%b2%e0%b3%8d%e0%b2%b2%e0%b2%a6-%e0%b2%a8%e0%b2%bf%e0%b2%af%e0%b2%a4/</guid>
<description><![CDATA[    ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪ]]></description>
<content:encoded><![CDATA[<p><span style="font-size:medium;">    ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪಂಚೆ, ಟಿ.ವಿ, ಫ್ರಿಡ್ಜು ಮುಂತಾದ ಸಕಲ ಸಾಮಗ್ರಿಗಳನ್ನ ಹೊತ್ತ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣಿನಿಂದಾಗಿ ಈಗ "ಉಡುಗೊರೆ" ನೀಡುವ ಪರಿ ಕೂಡಾ ಬದಲಾಗಿದೆ. ಮೊದಲು ಮೊದಲು ಮನೆಗಳಿಗೇ ಸಾಮಾನುಗಳನ್ನ ತಲುಪಿಸುತ್ತಿದ್ದವರು ಈಗ "ಕೂಪನ್" ನೀಡಿ, ನಿರ್ದಿಷ್ಟ ಅಂಗಡಿಗಳಲ್ಲಿ "ಉಡುಗೊರೆ" ಪಡೆಯುವಂತೆ ಸೂಚಿಸುತ್ತಿದ್ದಾರೆ. ರಾಜಕಾರಣಿಗಳೇನೋ ಆಮಿಷ ಒಡ್ಡುತ್ತಾರೆ. ಇಷ್ಟು ದಿನ ಹಾಯಾಗಿ ಗೂಳಿಗಳಂಗೆ "ತಿಂದುಂಡು" ಅಲೆದಾಡಿದ್ದಕ್ಕೆ ದಂಡ ಪಾವತಿಸುತ್ತಿದ್ದಾರೆ. ಆದರೆ, ಮತದಾರರರು ಇವರ ಋಣಭಾರದಲ್ಲೇಕೆ ಇರಬೇಕು ಎಂಬುದು ನನ್ನ ಪ್ರಶ್ನೆ. ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಜನಕ್ಕೇಕೆ? ಎಲ್ಲರಿಂದನೂ ಬರೋದನ್ನೆಲ್ಲವನ್ನ ತೊಗೋಬೇಕು. ತಮಗೆ ಬೇಕಾದವರಿಗೆ ಒತ್ತಬೇಕು. ಆದರೆ, ಬಡವರ, ದಲಿತರ, ಸ್ಲಂ ಜನರ "ನಿಯತ್ತು" ಹೊಲಸು ರಾಜಕಾರಣಿಗಳನ್ನ ಇನ್ನೂ ಜೀವಂತ ಇಟ್ಟಿದೆ. ಮುಗ್ಧ ಜನರ ಮುಗ್ಧತೆಯನ್ನ ಎನ್‍ಕ್ಯಾಷ್ ಮಾಡಿಕೊಳ್ತಾ ಇದಾರೆ ಅಷ್ಟೇ. </span></p>
<p><span style="font-size:medium;">    ಇನ್ನ ಜಾಗೃತ, ಪ್ರಜ್ಞಾವಂತ ಮತದಾರ ಮಹಾಪ್ರಭುಗಳ ಬಗ್ಗೆ ಹೇಳಬೇಕು. ಮೊನ್ನೆ ಮೊನ್ನೆ ನೆಡೆದ ನಮ್ಮೂರಿನ ಕಾರ್ಪೊರೇಷನ್ ಎಲಕ್ಷನ್‍ಗೆ ಹೋಗಿದ್ದೆ ಮತದಾನಕ್ಕೇ ಅಂತಲೇ. ಬಹಳ ಜನ ಕಟಕಿಯಾಡಿದ್ದರು ನಿನೊಬ್ಬ ಓಟುಹಾಕದಿದ್ರೆ ಯಾವನಿಗೂ ಏನೂ ಆಗಲ್ಲ ಅಂತಾ. ಹೋದಾಗ, ಇರುವ ಎಲ್ಲಾ ಕ್ಷೇತ್ರಗಳನ್ನ ಒಮ್ಮೆ ಗಾಡಿಯಲ್ಲಿ ಸುತ್ತಿ ಬಂದಿದ್ದೇನೆ. ೨೦ ವರ್ಷಗಳಲ್ಲಿ ತಿರುಗಾಡದ ಪ್ರದೇಶಗಳನ್ನ, ಕೇವಲ ಹೆಸರು ಕೇಳಿದ್ದ ಪ್ರದೇಶಗಳನ್ನ, ಇನ್ನೂ ಕೆಲವು ಹೆಸರೇ ಕೇಳದ ಏರಿಯಾಗಳನ್ನ ಸುತ್ತಿಬಂದಿದ್ದೇನೆ. ಸಮೀಕ್ಷೆ ಮಾಡಿದ್ದೇನೆ. ಎಲ್ಲೆಲ್ಲಿ ಬಡವರಿದ್ದಾರೋ, ದಲಿತರಿದ್ದಾರೋ, ಸ್ಲಂ ನಿವಾಸಿಗಳಿದ್ದಾರೋ, ನಿರ್ಗತಿಕರಿದ್ದಾರೋ ಅಲ್ಲೆಲ್ಲಾ ಎಲಕ್ಷನ್ ಅಂದರೆ ಹಬ್ಬದ ವಾತಾವರಣ. ಕೆ.ಟಿ.ಜೆ ನಗರ, ನಿಟ್ಟುವಳ್ಳಿ, ಆಜಾದ್ ನಗರ, ಹಳೇ ದಾವಣಗೆರೆಯ ಪ್ರದೇಶಗಳು ಜನಸಂದಣಿಯ ಪ್ರದೇಶಗಳಾಗಿದ್ದವು. ಜನ ಮನೆಯಲ್ಲಿಯೇ ಇರಲಿಲ್ಲ..! ರೋಡ ತುಂಬೆಲ್ಲಾ ಜನ. ರಾಜಕಾರಣಿಗಳೂ, ಸಚಿವರಾಗಿದ್ದವರೂ ಆಗಾಗ ಬಂದು ಹೋಗುತ್ತಿದ್ದರು.  ಬ್ಯಾನರ್ ಬಂಟಿಗ್, ಎಲ್ಲಾ ರಸ್ತೆ ತುಂಬೆಲ್ಲಾ ತುಂಬಿಕೊಂಡಿತ್ತು. ಯಾವ ಧಾರ್ಮಿಕ ಹಬ್ಬಗಳಲ್ಲೂ ಕಾಣಬರದ ಉತ್ಸಾಹ, ಹುಮ್ಮಸ್ಸು, ಹಬ್ಬದ ವಾತಾವರಣ. ಜನ ಓಟು ಹಾಕಲ್ಲಿಕ್ಕೆ ಕ್ಯೂನಲ್ಲಿ ನಿಂತಿದ್ದರು.  ಇನ್ನೂ ಕೆಲವು "ವಿದ್ಯಾವಂತರ, ಪ್ರಜ್ಞಾವಂತರ" ಏರಿಯಾಗಳನ್ನ ತಿರುಗಾಡಿ ಬಂದಿದ್ದೇನೆ. ಎಸ್.ಎಸ್.ಲೇ ಔಟ್, ವಿದ್ಯಾನಗರಗಳಲ್ಲಿ, ಮೆಡಿಕಲ್, ಡೆಂಟಲ್ ಕಾಲೇಜುಗಳಿರುವ ಬಡಾವಣೆಗಳಲ್ಲಿ, ಆಂಜನೇಯ ಬಡಾವಣೆಗಳಲ್ಲಿ ಎಲಕ್ಷನ್ನಿನ ಕುರುಹುಗಳೇ ಕಾಣುತ್ತಿರಲಿಲ್ಲ. ಮತಗಟ್ಟೆಗಳ ಬಳಿ ಒಬ್ಬರೊ ಇಬ್ಬರೋ ಇರುತ್ತಿದ್ದರು. ಮತಗಟ್ಟೆ ಎಲ್ಲಿದೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಆದರೆ, ಅದೇ ಕೆಳ ಮಧ್ಯಮ ವರ್ಗದ ಜನರಿರುವ ಏರಿಯಾಗಳಲ್ಲಿ, ನಿಮ್ಮದೊಂದು ಓಟು ಇದೆ ಅಂದರೆ ಕೈ ಹಿಡಿದುಕೊಂಡು ಹೋಗಿ ಇಲ್ಲಿದೆ ಮತಗಟ್ಟೆ, ಅಣ್ಣಾ ನಮ್ಮ ಪಕ್ಷಕ್ಕೇ ಓಟು ಹಾಕಿ ಗೊತ್ತಲ್ಲಾ... ಅಂತಾ ಅನ್ನೋ ಮಂದಿ ಇದ್ದರು. </span></p>
<p><span style="font-size:medium;">    ಎಷ್ಟು ವಿರೋಧಾಭಾಸಗಳಲ್ಲವಾ? ನಾವು ಯಾರನ್ನ ವಿದ್ಯಾವಂತರು, ಪ್ರಜ್ಞಾವಂತರು ಅನ್ನೋದು? ಮತ ಹಾಕದವರನ್ನಾ? ಕೈಗೆ ಸಿಕ್ಕಾಗಲೆಲ್ಲಾ ನಮ್ಮ ಭಾರತ ಹಿಂಗೇ ಅಂತಾ ಹೀಗಳೆಯುವವರನ್ನಾ..? ನಮ್ ದೇಶ ಇನ್ನು ಉದ್ಧಾರ ಆಗೋಲ್ಲ ಅನ್ನೋ ಜೋಬದ್ರಗೇಡಿಗಳನ್ನಾ..? ಒಮ್ಮೆ ಯೋಚಿಸಬೇಕಾಗಿದೆ.  40*60 ಸೈಟುಗಳಿರುವ, ಮನೆಗಳಿರುವ ಏರಿಯಾಗಳಲ್ಲಿ ಮನೆಗೆ ಒಬ್ಬರೋ ಇಬ್ಬರೋ ಇರುತ್ತಿದ್ದರು. ಒಮ್ಮೊಮ್ಮೆ ಅದೂ ಇಲ್ಲ. ಎಲಕ್ಷನ್ನು ಬಂತೆಂದ್ರೆ, ರಜಾ ದಿನ ಕಳೆಯಲು ತಮ್ಮೂರಿಗೋ, ಮಗನೂರಿಗೋ ಪಿಕ್‍ನಿಕ್ ಹೊರಟುಬಿಡುತ್ತಿದ್ದರು. ರಾಜಕಾರಣಿಗಳು ನೋಡೋದು ತಲೆಗಳನ್ನ, ಎಣಿಸೋದು ತಲೆಗಳನ್ನ, ಓಟುಗಳನ್ನ. ಐಶ್ವರ್ಯವನ್ನಲ್ಲ. 10*10 ಇರೊ ಕೆಳಮಧ್ಯಮ ವರ್ಗದ, ಬಡವರ, ಹಿಂದುಳಿದವರ ಮನೆಗಳಲ್ಲಿ ಹತ್ತು ಓಟುಗಳಿರುತ್ತವೆ. ಒಬ್ಬರ ಮನೆಗೆ ಹೋಗಿ ಬಂದರೆ, ಅವರನ್ನ ಒಲಿಸಿಕೊಂಡರೆ, 10ಓಟು ಅನಾಮತ್ತಾಗಿ ಬಿತ್ತು ಅಂತಾನೇ ಅರ್ಥ. ವಿದ್ಯಾವಂತರ ಮನೆಗಳಲ್ಲಿ ಒಬ್ಬರು, ಇಬ್ಬರು ಇರುವ ಮನೆಗಳಲ್ಲಿ, ಇರುವ ಮಂದಿನೂ ಓಟು ಹಾಕದಿದ್ರೆ, ರಸ್ತೆ ಚರಂಡಿ ಲೈಟು ಎಲ್ಲಾ ಬರ್ತವಾ? ಕೈಯ್ಯಾಗೆ ಜುಟ್ಟು ಹಿಡ್ಕಳಕ್ಕೆ ಕೊಟ್ಟರೂ ಹಿಡಿದುಕೊಳ್ಳದ ಮಂದಿಯನ್ನೇನಾ ವಿದ್ಯಾವಂತರು, ಬುದ್ಧಿವಂತರು ಅನ್ನೋದು? </span></p>
<p><span style="font-size:medium;">    ಎಲ್ಲೆಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿತ್ತೋ ಅಲ್ಲೆಲ್ಲಾ ಸಿಮೆಂಟು ರೋಡುಗಳಾಗಿವೆ. ಪಾಪ, ಬಡವರು, ಸೂರಿದ್ದೂ ಕಡಿಮೆ ಜಾಗವಿರುವವರು, ಮಲಗೋದೇ ರಸ್ತೆಗಳ ಮೇಲೆ. ಹಾಗಾಗಿ ಓಟುಗಳಿರುವ ಕಡೆಗಳೆಲ್ಲಾ ಸಿಮೆಂಟು ರಸ್ತೆಗಳಾಗಿವೆ. ಅದೇ ವಿದ್ಯಾ ನಗರ, ಆಂಜನೇಯ ಬಡಾವಣೆ, ಎಸ್.ಎಸ್.ಲೇ ಔಟ್‍ಗಳಲ್ಲಿ ಒಂದು ಸರಿಯಾದ ಮಣ್ಣಿನ ರಸ್ತೇನೂ ಇಲ್ಲ. ಯಾಕಂದ್ರೆ, ಬರೀ ಮಾತಿನ ಮಲ್ಲರು ಸಿಗಬಲ್ಲರು, ದೇಶದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ನೀಡುವ ಮಂದಿ ಸಿಗಬಲ್ಲರೇ ಹೊರತು ಮತದಾರರಲ್ಲ.  ಎಲ್ಲೆಲ್ಲೆ ಮತದಾನ ನೆಡೆಯುವುದಿಲ್ಲವೋ ಆ ಕ್ಷೇತ್ರಗಳನ್ನ ರಾಜಕಾರಣಿಗಳು ನಿರ್ಲಕ್ಷಿಸಿಬಿಡುತ್ತಾರೆ. ಅವು ಅಸಲಿಗೆ ಸವಾಲುಗಳೇ ಅಲ್ಲ. ಅವರ ಮತಗಳು ನಿರ್ಣಾಯಕವಲ್ಲ. ನಿರ್ಣಾಯಕ ಮತಗಳಾಗದ ಹೊರತು ರಾಜಕಾರಣಿಗಳು ಗಮನ ಹರಿಸುವುದಿಲ್ಲ. ಹಾಗಾಗಿ 10-15 ವರ್ಷಗಳಾದರೂ ಏರಿಯಾಗಳು ಧೂಳು ಮಣ್ಣಿನಲ್ಲೇ ಇರಬೇಕಾಗುತ್ತದೆ. ಇದನ್ನ ನಮ್ಮ ಮಾನ್ಯ"ವಿದ್ಯಾವಂತ, ಪ್ರಜ್ಞಾವಂತ" ಮತದಾರರು ತಿಳಿಯುವುದೇ ಇಲ್ಲ.</span></p>
<p><span style="font-size:medium;">    ಹರಿಜನ ಕೇರಿಗಳಲ್ಲಿ, ಬಡವರ ಏರಿಯಾಗಳಲ್ಲಿ ಜನ ಹೆಂಡ, ಹಣ, ಸೀರೆ, ಪಂಚೆಗಳಿಗೆ ತಮ್ಮ ಮತಗಳನ್ನ ಮಾರಿಕೊಂಡಿರಬಹುದು. ಆದರೆ, ಅವರು ಮತದಾನ ಮಾಡಿದ್ದಾರೆ.  ತಮ್ಮ ಕ್ಷೇತ್ರದ ಮತಗಳು, ತಮ್ಮವರ ಮತಗಳು ನಿರ್ಣಾಯಕವಾಗುವಂತೆ ಮಾಡಿದ್ದಾರೆ. ಇದು ಮಹತ್ಕಾರ್ಯವಲ್ಲವೇ? ಇವರು ವಿವೇಚನಾಪೂರಿತ ಮತದಾರರಾಗಿಲ್ಲದೇ ಇರಬಹುದು ಆದರೆ, ಪ್ರಜ್ಞಾವಂತ ಮತದಾರರು. ಮತದಾನದ ಪ್ರಜ್ಞೆಯಿದೆ ಅವರಲ್ಲಿ. </span></p>
<p> </p>
]]></content:encoded>
</item>
<item>
<title><![CDATA[ಮರ್ಯಾದಸ್ಥರ ಮಾನನಷ್ಟ ಪ್ರಸಂಗ…  ಒಂದು ಪ್ರತಿಕ್ರಿಯೆ.  ]]></title>
<link>http://pratispandana.wordpress.com/?p=33</link>
<pubDate>Sun, 13 Apr 2008 12:37:18 +0000</pubDate>
<dc:creator>Ganesh K</dc:creator>
<guid>http://pratispandana.kn.wordpress.com/2008/04/13/%e0%b2%ae%e0%b2%b0%e0%b3%8d%e0%b2%af%e0%b2%be%e0%b2%a6%e0%b2%b8%e0%b3%8d%e0%b2%a5%e0%b2%b0-%e0%b2%ae%e0%b2%be%e0%b2%a8%e0%b2%a8%e0%b2%b7%e0%b3%8d%e0%b2%9f-%e0%b2%aa%e0%b3%8d%e0%b2%b0%e0%b2%b8%e0%b2%82/</guid>
<description><![CDATA[   ಅಂತರ್ಜಾಲದಲ್ಲಿ ಪರಿಚಯರಾದ ದಾವಣಗೆರೆಯ ]]></description>
<content:encoded><![CDATA[<p><span style="font-size:medium;">   ಅಂತರ್ಜಾಲದಲ್ಲಿ ಪರಿಚಯರಾದ ದಾವಣಗೆರೆಯ ಗೆಳೆಯ ಸುಪ್ರೀತ್‍ರವರ 'ಸೂರ್ಯನ ಶಿಕಾರಿ' ಬ್ಲಾಗ್‍ನಲ್ಲಿ ಅವರು ಬರೆದ <a href="http://uniquesupri.blogspot.com/2008/01/blog-post.html">ಮರ್ಯಾದಸ್ಥರ ಮಾನನಷ್ಟ ಪ್ರಸಂಗ…</a>  ಲೇಖನಕ್ಕೆ ಪ್ರತಿಕ್ರಿಯೆ.  </span></p>
<p><span style="font-size:medium;">ಪ್ರೀತಿಯ ಸಂಪ್ರೀತ್<br />
 <br />
    ಖಂಡಿತವಾಗಿ ಇದು ಚಿಂತನಾಶೀಲ, ವಿಮರ್ಶಾ ಲೇಖನ. ರವೀಂದ್ರ ರೇಷ್ಮೆಯವರು ತಮ್ಮ ವಿಕ್ರಾಂತ ಕರ್ನಾಟಕದಲ್ಲಿ ರವಿ ಬೆಳಗೆರೆ ಬಗ್ಗೆ, ಅವರ ಬೆಳವಣಿಗೆಗಳ ಹಸಿವಿನ ಬಗ್ಗೆ, ಹಪಹಪಿತನದ ಬಗ್ಗೆ ಬರೆದಿದ್ದರು. ಅದಕ್ಕೆ ಉತ್ತರವಾಗಿ ರವಿ ತಮ್ಮ ಸಂಪಾದಕೀಯದಲ್ಲಿ ಉತ್ತರವನ್ನೂ ನೀಡಿದ್ದಾರೆ. ಕರ್ನಾಟಕದ ಯಾವ ಪತ್ರಕರ್ತನೂ ಹೋಗದ ಸ್ಥಳಗಳಿಗೆ, ದೇಶಗಳಿಗೆ ಹೋಗಿ ಬಂದು ವರದಿ ಮಾಡಿದ್ದಾರೆ. ಸ್ವಲ್ಪ ವೈಭವೀಕರಣ ಜಾಸ್ತಿಯಾಯಿತು ಅಂತಾ ಒಪ್ಪಿಕೊಳ್ಳುತ್ತೇನೆ. ಬದುಕಿನ ಚಲನಶೀಲತೆಗೆ, ಪ್ರಯೋಗಶೀಲತೆಗೆ, ಹೊಸ ಅನುಭವಗಳಿಗೆ ಎದುರಾಗುವ ಕ್ರಿಯಾಶೀಲತೆ ರವಿ ಬೆಳಗೆರೆಯಲ್ಲಿದೆ. ತಝಕಿಸ್ಥಾನ, ಕಝಕಿಸ್ಥಾನ, ಪಾಕಿಸ್ಥಾನ, ಅಫಘನಿಸ್ಥಾನ ಮುಂತಾದ ಹೆಸರೇ ಕೇಳದ ದೇಶಗಳಿಗೆ ಹೋಗಿ ಬಂದಿದ್ದಾರೆ. ಬರೀ ಹೋಗಿ ಬಂದಿಲ್ಲ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಮುಸ್ಲಿಂ ಪುಸ್ತಕ ಬರೆಯುವಾಗ, ಮುಸ್ಲಿಂ ಕಟ್ಟರ್‌ವಾದಿಗಳ ಬಗ್ಗೆ ಬರೆಯುವಾಗ ಒಂದು ಮಾತು ಬರೆದಿದ್ದಾರೆ. 'ಇಲ್ಲಿ ಕುಳಿತು ಮುಸ್ಲೀಮರ ಪರವಾಗಿ ಅಥವಾ ಮುಸ್ಲೀಮರ ವಿರುದ್ಧವಾಗಿ ಮಾತನಾಡುವವರಿಗಿಂತ ನನ್ನ ಅನುಭವಗಳು ಬೇರೆಯಾಗಿಯೇ ನಿಲ್ಲುತ್ತವೆ' ಎಂದಿದ್ದಾರೆ. ಅದು ಅಕ್ಷರಶಃ ಸತ್ಯ. ಯಾಕೆಂದರೆ, ಇಲ್ಲಿನ ಯಾರೂ ಅಫಘನಿಸ್ಥಾನವನ್ನಾಗಲೀ, ಪಾಕಿಸ್ಥಾವನ್ನಾಗಲೀ ನೋಡಿದವರಲ್ಲ. ನೋಡಿದ್ದರೂ ಉಗ್ರಗಾಮಿಗಳನ್ನು ಕಂಡು ಅವರ ಅಭಿಪ್ರಾಯ ತಿಳಿದುಬಂದವರಲ್ಲ. ಆದರೂ ಇಲ್ಲಿ ಕುಳಿತು, ಅಧಿಕಾರವಾಣಿಯಿಂದ ಬರೆಯುತ್ತಾರೆ, ಮಾತಾಡುತ್ತಾರೆ. ಇದು ವಸ್ತುಸ್ಥಿತಿ ಅರಿಯದ ಜಾಣ ಮೌನ ಅಲ್ಲವೇ?<br />
 <br />
    ಇಂದು ಹಾಯ್ ಬೆಂಗಳೂರು ರಾಜ್ಯಾದ್ಯಂತ ಮಾತ್ರವಲ್ಲದೇ ಸೌದಿ ಅರೇಬಿಯಾಗಳಿಗೂ ಪಸರಿಸಿದೆ ಎಂದರೆ ಅದರ ಅಗಾಧತೆ ನಮ್ಮ ಅರಿವಿಗೆ ಬಾರದಿರದು. ಹೊರ ರಾಜ್ಯವನ್ನು ಮುಟ್ಟುವ, ಜನ ಪತ್ರಿಕೆಗಾಗಿ ಹಪ ಹಪಿಸುವ ಪರಿಸ್ಥಿತಿ ಸೃಷ್ಟಿಸಿರುವ ಪತ್ರಿಕೆಗಳನ್ನು ತೋರಿಸಿ ನೋಡೋಣ. ರವಿಗೆ ಹಪ ಹಪಿತನವಿತ್ತು, ಬೆಳವಣಿಗೆಯ ಹಸಿವಿತ್ತು. ಆ ಓದಿನ ಹಸಿವನ್ನು ಓದುಗರಿಗೂ ವಿಸ್ತರಿಸಿದ ಖ್ಯಾತಿ ಅವರದು. ಆದರೆ, ಈ ಯಾವುದನ್ನೂ ಗಮನಿಸದೇ ಬೆಳೆಯುವ ಅನಿವಾರ್ಯತೆ ಇತ್ತು. ಬೆಳೆದರು ಅನ್ನುವುದು ವೃತ್ತಿ ಮಾತ್ಸರ್ಯದ ನೆಲೆಗಟ್ಟಿನಲ್ಲಿ ಬಂದ ಬರವಣಿಗೆ ಏನೋ ಎಂದೆನಿಸದಿರದು. ಇವತ್ತಿಗೂ ಕರ್ನಾಟಕದ ಟ್ಯಾಬ್ಲಾಯ್ಡ್ಗ್ ಗಳಲ್ಲಿ ಪಕ್ಷಪಾತ ರಾಹಿತ್ಯವಾಗಿ ಬರೆಯುವ ಪತ್ರಿಕೆಗಳು ಎಷ್ಟಿವೆ ಹೇಳಿ? ಲಂಕೇಶ್ ಪತ್ರಿಕೆಯವರಿಗೆ ಬಿ.ಜೆ.ಪಿ ಕಟ್ಟಾ ವಿರೋಧಿ, ಕೋಮುವಾದಿ. ಅವರು ಆ ನಿಲುವು ತಳೆದಿರುವುದು ಪ್ರಶ್ನಾರ್ಹವೇನಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ. ಒಂದು ಪಕ್ಷಕ್ಕೆ ವಿರೋಧವಿರದಿದ್ದರೆ, ಅವರ ಉಪಟಳ ಸಹಿಸಲಾಗದು. ಆದರೆ, ವಸ್ತು ನಿಷ್ಟತೆ, ತಟಸ್ಥತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಜೆ.ಡಿ.ಎಸ್, ಕಾಂಗ್ರೇಸ್ ಗಳು ಏನೇ ವಿವೇಚನಾಹೀನ ಕೆಲಸ ಮಾಡಿದರೂ ಜಾತ್ಯಾತೀತ ಪಕ್ಷಗಳೆಂದು ಬೆಂಬಲಕ್ಕೆ ನಿಂತುಬಿಡುವುದು ಅಪಾಯಕಾರಿಯಲ್ಲವೇ? ಆದರೆ, ಹಾಯ್ ಬೆಂಗಳೂರು ಯಾವ ಪಕ್ಷಗಳನ್ನೂ ಬೆಂಬಲಿಸಿಲ್ಲವಲ್ಲ. ಬಿ.ಜೆ.ಪಿ ಬಗ್ಗೆ ಒಂದಿಷ್ಟು ಸಾಫ್ಟ್ ಕಾರ್ನರ್ ಹೊಂದಿರಬಹುದು. ಅದೂ ಈ ರಾಜಕೀಯ ರಾದ್ಧಾಂತಗಳೆಲ್ಲಾ ಆದ ಮೇಲೆ. ಆದರೆ, ಎಂದೂ ಅವರು ಮಾಡಿದವುಗಳನ್ನು ನಾಚಿಕೆ ಬಿಟ್ಟು ಬೆಂಬಲಿಸಿಲ್ಲ. ಇದಕ್ಕಿಂತ ಮೊದಲು ಕುಮಾರ ಸ್ವಾಮಿ ಹವಾ ಇದ್ದಾಗ ಕುಮಾರಣ್ಣನನ್ನೂ ಬೆಂಬಲಿಸಿದ್ದರು. ಸಮಯ ಬಂದಾಗ ಕ್ಯಾಕರಿಸಿ ಥೂ ಅಂದ್ದದ್ದೂ ಆಯಿತು. ಆದರೆ, ಅಧಿಕಾರ ಹಸ್ತಾಂತರ ಪ್ರಹಸನ ನೆಡೆಯುವಾಗ, ಬಿ.ಜೆ.ಪಿ ಗೆ ಅಧಿಕಾರ ನೀಡಬಾರದೆಂದು ಹೇಳುತ್ತಾ, ವಿಶ್ವಾಸದ್ರೋಹವನ್ನೂ ಸಮರ್ಥಿಸಿಕೊಂಡವಲ್ಲಾ ಕೆಲವು ಜಾತ್ಯಾತೀತ ಪತ್ರಿಕೆಗಳು, ಹಾಗೇನೂ ಹಾಯ್ ಬೆಂಗಳೂರು ಮಾಡಲಿಲ್ಲ. ಇನ್ನೊಂದು ಸಂಗತಿ ಎಂದರೆ, ಹಿಂದೂ ಮುಸ್ಲಿಂ ವ್ಯತ್ಯಾಸಗಳ ಬಗ್ಗೆ ನಿರ್ಭಾವುಕ ಮನಸ್ನಿನಿಂದ ವಿಶ್ಲೇಷಣೆ ಮಾಡಿದ್ದು ರವಿ.<br />
 <br />
    ಇಷ್ಟೆಲ್ಲಾ ಹೇಳಿ, ನಾನು ರವಿಯವರನ್ನು ಹೊಗಳುತ್ತಿದ್ದೇನೆಂದೇನಲ್ಲ. ಆದರೆ, ಜಡ್ಡುಗಟ್ಟಿದ ಪತ್ರಿಕೋದ್ಯಮಕ್ಕೆ, ಒಂದಷ್ಟು ಹೊಸತನವನ್ನು, ಭಾವನಾತ್ಮಕತೆಯನ್ನೂ ನೀಡಿದ್ದು ರವಿ ಬೆಳಗೆರೆ. ಹಾಯ್ ಬೆಂಗಳೂರು ಇಂದಿಗೂ ನಂಬರ್ ಒನ್ ಆಗಲಿಕ್ಕೆ ಕಾರಣ ಕ್ರೈಂ, ರಾಜಕೀಯ, ರಾಸಲೀಲೆ ವರದಿಗಳೇ ಕಾರಣಗಳಲ್ಲ. ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಇವೆಲ್ಲವನ್ನೂ ಮೀರಿದ್ದು. ಮನಸ್ಸಿನ ಒಳದನಿಗೆ ಕನ್ನಡಿ ಹಿಡಿಯುವ ಲೇಖನಗಳು ಆಪ್ತವಾಗುತ್ತವೆ. ಆ ದನಿ ಅವರ ಬಗೆಗಿನದಾಗಿರಬಹುದು. ನಮಗೂ ಅದೇ ಥರದ ಅನುಭೂತಿಗಳು ಕೆಲವೊಮ್ಮೆ ಆಗುವುದರಿಂದ ಅವು ನಮ್ಮ ದನಿಯನ್ನೇ ಪ್ರತಿಬಿಂಬಿಸುತ್ತವೇನೋ ಎಂಬಷ್ಟು ಆಪ್ತವಾಗುತ್ತವೆ. ಇದೇ ಥರಹದ ಲೇಖನಗಳುಳ್ಳ ಓ ಮನಸೇ ಕೂಡಾ ಉತ್ತುಂಗಕ್ಕೇರಿತು. ಈ ಥರಹದ ರಾಜಕೀಯ, ಸಿದ್ಧಾಂತ ಎಲ್ಲವನ್ನೂ ಮೀರಿದ ಬದುಕಿನ ಬಗ್ಗೆ ಬರಹಗಳು ಎಷ್ಟು ಟ್ಯಾಬ್ಲಾಯ್ಡ್ ಗಳಲ್ಲಿ ಬರುತ್ತವೆ? ಜನ ಸಹಜವಾಗಿಯೇ ಅದರತ್ತ ಆಕರ್ಷಿತರಾದರು. ಓರಗೆಯ ಪತ್ರಿಕೆಗಳಲ್ಲಿ, ಅತಿಯಾದ ಸಿದ್ಧಾಂತವಾದ, ಅತಿಯಾಗಿ ಒಂದು ಪಕ್ಷದ, ವ್ಯಕ್ತಿಯ, ಧರ್ಮದ ರೀತಿ ರಿವಾಜುಗಳ ಬಗ್ಗೆ ಪೂರ್ವಾಗ್ರಹಪೀಡಿತವಾಗಿ ವಿಷಯ ಮಂಡಿಸಿ ವರದಿ ಬರೆಯುವಾಗ, ಹಾಯ್ ಬೆಂಗಳೂರು ಸ್ವಲ್ಪ ತಟಸ್ಥತೆ ಕಾಯ್ದುಕೊಂಡಿದೆ ಎಂದೆನಿಸುತ್ತದೆ.<br />
 <br />
    ಪತ್ರಿಕೆಗಳ, ಮಾಧ್ಯಮಗಳ ಕೆಲಸ ಪಕ್ಷ ಕಟ್ಟುವುದಲ್ಲ, ಸರ್ಕಾರ ಬೀಳಿಸುವುದಲ್ಲ. ಕ್ರೈಂ ಇಲ್ಲವಾಗಿಸುತ್ತೇನೆಂದು ಹೊರಡುವುದಲ್ಲ. ರವೀಂದ್ರ ರೇಷ್ಮೆಯವರು ಹಿರಿಯರು. ಇವರು ಎಷ್ಟು ಸರ್ಕಾರಗಳನ್ನು ಉರುಳಿಸಬಲ್ಲರೆಂದು ಕೇಳಲಾದರೆ, ಉತ್ತರವೇನಾದೀತು? ಪತ್ರಿಕೆಗಳೂ ಶಕ್ತಿ ಪ್ರದರ್ಶನಕ್ಕೆ ತಮ್ಮನ್ನು ತಾವು ಒಡ್ಡಿಕೊಂಡರೆ ಜನಜಾಗೃತಿ ಹಳ್ಳ ಹಿಡಿಯುತ್ತದೆ. ಇದೆಲ್ಲವನ್ನೂ ಮೀರಿದ್ದು ಜನಜಾಗೃತಿ. ಟಿ.ಎನ್. ಸೀತಾರಾಂರವರ 'ಮುಕ್ತಾ' ಧಾರಾವಾಹಿ ಜನಾಭಿಮಾನದ, ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ಕೆಲವು ಜನ ಕೇಳಿದ್ದರು. ನೀವು ಇಷ್ಟೆಲ್ಲಾ ತೋರಿಸಿದ ತಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಯೇ? ಅಂತಾ. ಇತ್ತೀಚೆಗೆ ಜನಮನ್ನಣೆ ಗಳಿಸಿದ 'ಮಂಥನ'ದ ಸೇತುರಾಂರವರಿಗೆ ಕೆಲವು ಜನ ಪ್ರಶ್ನೆ ಕೇಳಿದ್ದರು. ನೀವು ಭ್ರಷ್ಟಾಚಾರದ ಬಗ್ಗೆ, ಇನ್‍ಕಂ ಟ್ಯಾಕ್ಸ್ ರೇಡ್‍ಗಳ ಬಗ್ಗೆ ಇಷ್ಟೆಲ್ಲಾ ತೋರಿಸಿದ್ದೀರಿ. ಭ್ರಷ್ಟಾಚಾರವೇನೂ ಕಡಿಮೆಯಾಗಿಲ್ಲವಲ್ಲ ಅಂತಾ. ಪ್ರತಿಸಲವೂ ಜನಪ್ರಿಯತೆಯ ಉತ್ತುಂಗಕ್ಕೇರಿದ ವ್ಯಕ್ತಿ, ವಸ್ತು ಬಗ್ಗೆ ನಮಗೆ ಮಾತ್ಸರ್ಯದ, ಕಡೆಗಣಿಕೆಯ ಮಾತುಗಳು ಹೊರಡುವುದು ಸಾಮಾನ್ಯ. ಅದನ್ನೇ ವಿಮರ್ಶೆ ಎನ್ನಲಾಗದು. Criticism ಅಂದರೆ ಬರೀ ಬಯ್ಯುವುದಲ್ಲ. ಮೌಲ್ಯಾತ್ಮಕವಾದ ಮೌಲ್ಯಮಾಪನ ನಡೆಯಬೇಕು.<br />
 <br />
    ಈ ಮೊದಲು ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಇನ್ನೆಲ್ಲಾ ಕ್ರೈಂ ಧಾರಾವಾಹಿಗಳ ಸಾಲಿನಲ್ಲಿ ಮೊದಲಿನಲ್ಲಿ ನಿಂತಿತ್ತು. ಉತ್ತರವೂ ಸ್ಪಷ್ಟ. ಬೇರೆ ಎಲ್ಲಾ ಕ್ರೈಂ ಧಾರಾವಾಹಿಗಳು ಪೇಲವವಾದ ನಿರೂಪಣೆ ಇದ್ದಿದ್ದರೆ(ಈಗಲೂ ಹಾಗೇ ಇವೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ ಅಂದುಕೊಂಡಿದ್ದೇನೆ), ಹೊಸತನವಿರದೇ, ವೈಭವೀಕರಣ ಇದ್ದಿದ್ದರೆ, ಕ್ರೈಂ ಡೈರಿಯಲ್ಲಿ ಎಲ್ಲ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಆಯಾಮ ಒದಗಿಸಿದ್ದು ಜನ ಇಷ್ಟಪಡುವಂತೆ ಮಾಡಿತ್ತು. ಈಗಲೂ ಒಮ್ಮೆ ಕ್ರೈಂ ಧಾರಾವಾಹಿಗಳತ್ತ ಒಮ್ಮೆ ಕಣ್ಣು ಹಾಯಿಸಿ. ಉದಯ ಟಿವಿಯ ಕ್ರೈಂ ಸ್ಟೋರಿ, ಟಿ.ವಿ.೯ ನ ವಾರಂಟ್ ಎಲ್ಲದರಲ್ಲೂ ಬರೀ ವೈಭವೀಕರಣವಿದೆ. ಪೇಲವ ನಿರೂಪಣೆ ಇದೆ. ಕಾರ್ಯಕ್ರಮದ ಕೊನೆಗೆ ಬುದ್ಧಿವಾದವನ್ನೂ ಅಧಿಕಾರವಾಣಿಯಿಂದ ಹೇಳುವ 'ಅತಿ ಬುದ್ಧಿವಂತ' ನಿರೂಪಕರಿದ್ದಾರೆ. ಇವೆಲ್ಲವುಗಳ ನಡುವೆ ಕ್ರೈಂ ಡೈರಿ ವಿಭಿನ್ನವಾಗಿಯೇ ನಿಂತಿತ್ತು. ಕ್ರೈಂ ಡೈರಿ ಎಷ್ಟು ನಂಬಿಗಸ್ಥನಾಗಿತ್ತು ಅಂದರೆ ನಮ್ಮೂರು ದಾವಣಗೆರೆಯಲ್ಲಿ ಒಂದೆರಡು ವರ್ಷಗಳ ಹಿಂದೆ ಇಬ್ಬರು ಸೌಹಾರ್ದಯುತವಾಗಿ ಬದುಕುತ್ತಿದ್ದ ಸವತಿಯರು ಗಂಡನ ಹಿಂಸೆ ತಾಳಲಾರದೆ ರವಿ ಬೆಳಗೆರೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರವಿಯವರು ತಮ್ಮಬಗೆಗಿನ ವೈಭವೀಕರಣದಿಂದ ಪಡೆದ ನಂಬಿಕೆ ಎಂದು ನನಗನ್ನಿಸುವುದಿಲ್ಲ. ಜನ ಅಷ್ಟೊಂದು ನಂಬುವ, ಪ್ರೀತಿಸುವ, ಜನಪ್ರಿಯತೆ ಗಳಿಸಿರುವ, ಬಹುರೂಪತೆಗಳಿಗೆ ಅಣಿಯಾಗುತ್ತಿರುವ ಕರ್ನಾಟಕದ ಒಬ್ಬೇ ಒಬ್ಬ ಪತ್ರಕರ್ತನನ್ನು ತೋರಿಸಿ ನೋಡೋಣ. ಇಲ್ಲೆಲ್ಲವೂ ನಾನು ವಸ್ತು ಸ್ಥಿತಿಯ ಬದಲಾಗಿ ವೈಭವೀಕರಣಕ್ಕೆ ಪ್ರಯತ್ನಿಸಿದ್ದೇನೆ ಎಂದೆನ್ನಬಹುದು. ಆದರೆ, ಇವೆಲ್ಲವೂ ಶ್ರೀಸಾಮಾನ್ಯನ ದನಿ ಎಂಬುದನ್ನು ನೆನಪಿನಲ್ಲಿಡಬೇಕು.<br />
 <br />
    ಇನ್ನು 'ಮುಖ್ಯಮಂತ್ರಿ ಐ ಲವ್ ಯು' ಚಿತ್ರ ತೆಗೆಯುತ್ತಿರುವ ಬಗ್ಗೆ. ಒಬ್ಬರ ಖಾಸಗಿ ಬದುಕನ್ನು ಪ್ರಶ್ನಿಸುವ, ಅನಾವರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಅನೈತಿಕ ಖಾಸಗಿ ಸಂಗತಿಗಳು ಸಾರ್ವತ್ರಿಕವಾದಾಗ, ಸಾರ್ವಜನಿಕರ ಸ್ವತ್ತಾಗಿಬಿಡುತ್ತವೆ. ಅದನ್ನು ಪ್ರಶ್ನಿಸುವ ಹಕ್ಕು, ವಿಮರ್ಶಿಸುವ ಹಕ್ಕು ಎಲ್ಲರಿಗೂ ಸೇರಿದ್ದು. ಎಲ್ಲದರಲ್ಲೂ ಉದಾರೀಕರಣವನ್ನು ಕಂಡಿರುವ, ಮುಕ್ತ ಲೈಂಗಿಗತೆಯ ಪ್ರತಿಪಾದಕ ಅಮೇರಿಕೆಯಲ್ಲಿ ಕೂಡಾ ಜನ ತಮ್ಮ ಅಧ್ಯಕ್ಷ ಅನೈತಿಕ ಸಂಬಂಧದಿಂದ ದೂರವಿರಬೇಕೆಂದು ಬಯಸುತ್ತಾರೆ. ಹಾಗಾಗಿಯೇ ಬಿಲ್ ಕ್ಲಿಂಟನ್ ಬಗ್ಗೆ ಅಷ್ಟೊಂದು ಗುಲ್ಲೆದ್ದಿದ್ದು. ಅಮೇರಿಕೆಗಿಂತ ಸುಸಂಸ್ಕೃತವಾಗಿರುವ ಭಾರತದಲ್ಲಿ ರಾಜಕೀಯ ನಾಯಕನ 'ಇತರ' ಸಂಬಂಧ ವೃತ್ತಾಂತಗಳು ವಿಮರ್ಶೆಗೆ ಒಳಪಡದಿರುತ್ತವೆಯೇ? ತೇಜೋವಧೆ ಎಂದೆನ್ನಿಸಿದರೆ, ಕೋರ್ಟ್ ತೀರ್ಮಾನಿಸುತ್ತದೆ. ಹಾಗೆ ಖಾಸಗಿ ಬದುಕನ್ನು ಪ್ರಶ್ನಿಸುವ ಸ್ವಾತಂತ್ರವಿಲ್ಲ ಅನ್ನೋದಾಗಿದ್ದರೆ, ಇಂದಿನ ಕ್ರೈಂ, ಸೆಕ್ಸ್ ಪತ್ರಿಕೆಗಳು, ಟ್ಯಾಬ್ಲಾಯ್ಡ್‍ಗಳು ಮುಚ್ಚಬೇಕಾಗುತ್ತಿತ್ತು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಪರಿಗಣಿಸಲ್ಪಡುತ್ತದೆ.<br />
 <br />
    ಇವೆಲ್ಲ ನಾನು ಹೇಳಿರುವ ಸಂಗತಿಗಳ ಹೊರತಾಗಿ, ರವಿ ಬೆಳಗೆರೆಯವರನ್ನು, ಸಾಧನೆಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ನೋಡಲು ಈ ಲೇಖನ ಪ್ರಯತ್ನಿಸಿದೆ. ನಿಮ್ಮ ಪ್ರಯತ್ನ ಮುಂದುವರಿಯಲೆಂದು ಬಯಸುತ್ತೇನೆ.<br />
 <br />
 ಕೆ.ಗಣೇಶ್.</span></p>
]]></content:encoded>
</item>
<item>
<title><![CDATA[ಬಸವೇಶ್ವರ ಬ್ರಾಹ್ಮಣ ಸಂಘ..!]]></title>
<link>http://pratispandana.wordpress.com/2008/01/03/%e0%b2%ac%e0%b2%b8%e0%b2%b5%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%ac%e0%b3%8d%e0%b2%b0%e0%b2%be%e0%b2%b9%e0%b3%8d%e0%b2%ae%e0%b2%a3-%e0%b2%b8%e0%b2%82%e0%b2%98/</link>
<pubDate>Thu, 03 Jan 2008 06:16:35 +0000</pubDate>
<dc:creator>Ganesh K</dc:creator>
<guid>http://pratispandana.kn.wordpress.com/2008/01/03/%e0%b2%ac%e0%b2%b8%e0%b2%b5%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%ac%e0%b3%8d%e0%b2%b0%e0%b2%be%e0%b2%b9%e0%b3%8d%e0%b2%ae%e0%b2%a3-%e0%b2%b8%e0%b2%82%e0%b2%98/</guid>
<description><![CDATA[ಮೊನ್ನೆ ಮೊನ್ನೆ ಪೇಪರ್ರಲ್ಲಿ ಕಾರ್ಯಕ್ರಮಗ]]></description>
<content:encoded><![CDATA[<p><span style="font-size:small;">ಮೊನ್ನೆ ಮೊನ್ನೆ ಪೇಪರ್ರಲ್ಲಿ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬಸವೇಶ್ವರನಗರ ಬ್ರಾಹ್ಮಣ ಸಂಘ ಅಂತಾ ಇತ್ತು. ಅದರೊಟ್ಟಿಗೇ ಇಂಥಾ ಯೋಚನೆಯೊಂದು ಸುಳಿದು ಹೋಯಿತು..! ಎಷ್ಟೇ ಆಗಲಿ ಬಸವಣ್ಣನವರು ಬ್ರಾಹ್ಮಣರಾಗಿಯೇ ಹುಟ್ಟಿದವರು ತಾನೇ. ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯದ ಅನಾಚಾರಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಈ ಹೆಸರಿನಲ್ಲಿ ಒಂದು ಸಂಘ ತೆರೆದರೆ, ಬ್ರಾಹ್ಮಣರು ಬಸವಣ್ಣನನ್ನು ತಮ್ಮವರೆಂದುಕೊಳ್ಳಲು ಒಂದು ಅವಕಾಶ! ನನ್ನ ಬ್ರಾಹ್ಮಣ ಗೆಳೆಯನಿಗೆ ಈ ಬಗ್ಗೆ ಹೇಳುತ್ತಿದ್ದೆ. ಆತ ನಕ್ಕು ಸುಮ್ಮನಾದ. ಸುಮ್ಮನೇ ಆತ್ಮೀಯತೆಯಿಂದ ಛೇಡಿಸುವಾಗ, ಆತನಿಗೆ ನೀವು ಬಾಮುಂಡ್ರು ಹಿಂಗೆಲ್ಲಾ ಮಾಡ್ಬಾರ್ದು ಅಂತಾ ಹೇಳಿದಾಗಲೆಲ್ಲಾ ಆತನ ಉತ್ತರ ಬ್ರಾಹ್ಮಣನಾಗಿ ಹುಟ್ಟಿ ಏನು ಉಪಯೋಗ ಆಯ್ತು ಹೇಳು ಎನ್ನುವುದೇ ಆಗಿರುತ್ತಿತ್ತು. ತೀರಾ ಮಧ್ಯಮ ವರ್ಗದಿಂದ ಬೆಳೆದು ಬಂದ ಆತನಿಗೆ ಜಾತಿಯಿಂದ ಏನೂ ಲಾಭವಾಗಿಲ್ಲ. </span></p>
<p><span style="font-size:small;">ಇನ್ನೊಂದು ವಿಷಯವೆಂದರೆ ನಮ್ಮೂರಿನ ಲಾಯರ್ ರೋಡಿನ "ಮಾಧ್ವ ಯುವಕ ಸಂಘ"ದ ಆಟದ ಮೈದಾನದಲ್ಲಿ ಬರೀ ಮಾಧ್ವ ಬ್ರಾಹ್ಮಣ ಹುಡುಗರೇ ಆಡುತ್ತಾರೆ. ಸ್ಮಾರ್ತ ಹುಡುಗರೂ ಹೋಗುವುದಿಲ್ಲ..! ಜನಿವಾರಕ್ಕೂ ಬೆಲೆಇಲ್ಲ..! ಇನ್ನು ಅದರ ಪಕ್ಕದ ದೀಕ್ಷಿತ್ ರೋಡಿನ ಕಥೆಯೂ ಅದೇ. ಬೇರೆ ಹುಡುಗರೊಂದಿಗೆ ಈ ಹುಡುಗರು ಸೇರುವುದೇ ಇಲ್ಲ. ಅದೇಕೆ ಆ ಮಟ್ಟಿಗೆ ಒಂದು ಗೆರೆ ಕೊರೆದುಕೊಂಡುಬಿಟ್ಟಿರುತ್ತಾರೆ? ದೇವರು ಧರ್ಮ ಸಂಪ್ರದಾಯ ಇವುಗಳಾಚೆಗಿನ ಬದುಕು ಏಕೆ ಕಣ್ಮರೆಯಾಗಿರುತ್ತದೆ? ಬೇರೆ ಹುಡುಗರ ಜೊತೆ ಹೋದರೂ ಬ್ರಾಹ್ಮಣ ಹುಡುಗರೊಂದಿಗೆ ಇರುವ ಆತ್ಮೀಯತೆ, ಸಲುಗೆ ಬೆಳೆಸಿಕೊಳ್ಳುವುದಿಲ್ಲ. ಇನ್ನು ಭಾರತೀಯ ಸಂಸ್ಕೃತಿ ಎಂದರೆ ವೇದ, ವೇದಾಂತ, ಭಗವದ್ಗೀತೆ, ಉಪನಿಷತ್ತು ಇಷ್ಟೇನಾ? ರಾಮಾಯಣ ಮಹಾಭಾರತ ಮಾತ್ರ ನಮ್ಮ ಸಂಸ್ಕೃತಿಯನ್ನು ಜೋಪಾನ ಮಾಡಿವೆಯಾ? ಬಸವಣ್ಣನಂಥವರು ೧೨ನೇ ಶತಮಾನದಲ್ಲಿ ಮಾಡಿದ ವೈಚಾರಿಕ ಕ್ರಾಂತಿ, ಜಾಗೃತವಾದ ಕಾಯಕ-ದಾಸೋಹ ಪ್ರಜ್ಞೆ ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಜತನವಾಗಿ ಕಾಪಾಡಲಿಕ್ಕೆ, ವಿಚಾರದ ಓರೆಗಲ್ಲಿಗೆ ಹಚ್ಚಲಿಕ್ಕೆ ಕಾರಣವಾಗಿವೆ.</span></p>
<p><span style="font-size:small;">ಬಸವಣ್ಣನ ಅನುಯಾಯಿಗಳಾದ ಲಿಂಗಾಯಿತರ ಮನೆಗಳಲ್ಲಿ ಬೇಕಾದ್ರೆ ಭಗವದ್ಗೀತೆ ಸಿಗುತ್ತದೆ. ಆದರೆ ಎಷ್ಟು ಜನ ಬ್ರಾಹ್ಮಣರ ಮನೆಗಳಲ್ಲಿ ಬಸವಣ್ಣನ ವಚನಗಳು ಸಿಗುತ್ತವೆ? ಸಂಸ್ಕೃತಿ ಎಂದರೆ ವೈದಿಕ ಮಾತ್ರವೇ ಅಲ್ಲ. ಅದನ್ನು ಧಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಹೊಸದೊಂದು ಕ್ರಾಂತಿಗೆ, ಧರ್ಮದ ಮರುಹುಟ್ಟಿಗೆ, ಮರುವಿಮರ್ಶೆಗೆ ಕಾರಣವಾದ ಅವೈದಿಕದ ನಿಲುವನ್ನೂ ಗಂಭೀರವಾಗಿ ಪರಿಗಣಿಸಬೇಕು. </span></p>
<p><span style="font-size:small;">ಮತಾಂತರ ನೆಡೆಯುತ್ತಿದೆ ಎಂದಾಕ್ಷಣ ಜಾಗೃತರಾಗಿ ಅದನ್ನು ತಡೆಯಲು, ಕ್ರೈಸ್ತ ಮಿಷಿನರಿಗಳ ಕುತಂತ್ರದ ಆಮಿಷಕ್ಕೆ ಬಲಿಯಾಗಿ ಮತಾಂತರವಾಗುವ ಅಮಾಯಕರನ್ನು, ದಲಿತರನ್ನು ರಕ್ಷಿಸಲು ಮುಂದಾಗುವ ಆರ್.ಎಸ್.ಎಸ್-ಬಜರಂಗದಳಗಳು ಅವರನ್ನು ಬ್ರಾಹ್ಮಣರನ್ನಾಗಿಸಿ ಜನಿವಾರ ದೀಕ್ಷೆ ನೀಡುತ್ತವೆಯೇ? ತುಳಿತಕ್ಕೊಳಗಾದವರು, ಶೋಷಿತರು, ಕಾಲಡಿಯಲ್ಲಿದ್ದವರು ಎಲ್ಲಿರಬೇಕೋ ಅಲ್ಲೇ ಇರಬೇಕೇ? ಇದು ಅವರ ನಿಲುವೇ? ಪ್ರಶ್ನೆಗಳ ಸರಮಾಲೆ ಇದೆ. ಉತ್ತರ... ಯಾರಿಗೆ ಕೇಳೋಣ? </span></p>
<p><span style="font-size:small;">ಇದನ್ನೆಲ್ಲಾ ನೆನಸಿಕೊಂಡಾಗ ವಿಚಾರವಂತ ಬ್ರಾಹ್ಮಣ ಹುಡುಗರು ಸೇರಿ ಇಂಥದೊಂದು ಸಂಘ ಕಟ್ಟಬಹುದಲ್ಲವೇ ಅನ್ನಿಸಿತ್ತು..! </span></p>
]]></content:encoded>
</item>

</channel>
</rss>
