<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಬಾಲ್ಕನಿ &amp;laquo; WordPress.com Tag Feed</title>
	<link>http://wordpress.com/tag/ಬಾಲ್ಕನಿ/</link>
	<description>Feed of posts on WordPress.com tagged "ಬಾಲ್ಕನಿ"</description>
	<pubDate>Sun, 20 Jul 2008 00:19:41 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಸತಿಸಾವಿತ್ರಿಯ ಸುಖ ದುಃಖ]]></title>
<link>http://pichchar.wordpress.com/2007/03/07/%e0%b2%b8%e0%b2%a4%e0%b2%bf%e0%b2%b8%e0%b2%be%e0%b2%b5%e0%b2%bf%e0%b2%a4%e0%b3%8d%e0%b2%b0%e0%b2%bf%e0%b2%af-%e0%b2%b8%e0%b3%81%e0%b2%96-%e0%b2%a6%e0%b3%81%e0%b2%83%e0%b2%96/</link>
<pubDate>Wed, 07 Mar 2007 11:01:58 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/03/07/%e0%b2%b8%e0%b2%a4%e0%b2%bf%e0%b2%b8%e0%b2%be%e0%b2%b5%e0%b2%bf%e0%b2%a4%e0%b3%8d%e0%b2%b0%e0%b2%bf%e0%b2%af-%e0%b2%b8%e0%b3%81%e0%b2%96-%e0%b2%a6%e0%b3%81%e0%b2%83%e0%b2%96/</guid>
<description><![CDATA[ 
ಮೊನ್ನೆ ಡೈಸಿ ಬೋಪಣ್ಣ ಪತ್ರಕರ್ತರನ್ನೆಲ್]]></description>
<content:encoded><![CDATA[<p align="center"><font size="4" face="Tunga"><img width="357" src="http://pichchar.files.wordpress.com/2007/03/daisy11.jpg" alt="daisy11.jpg" height="441" style="width:357px;height:441px;" /> </font></p>
<p><font size="3" face="Tunga"><font face="Georgia">ಮೊನ್ನೆ ಡೈಸಿ ಬೋಪಣ್ಣ ಪತ್ರಕರ್ತರನ್ನೆಲ್ಲ ಭೇಟಿಯಾಗಿದ್ದರು. ಹಳೆಯದನ್ನು ನೆನಪು ಮಾಡಿಕೊಂಡರು. ಹೊಸದರ ಕುರಿತು ಹರಟಿದರು. ಅದರ ವರದಿ ಇಲ್ಲಿದೆ. </font></font> <!--more--></p>
<p><font size="3" face="Tunga">ಡೈಸಿ ಪತ್ರಕರ್ತರನ್ನು ಭೇಟಿಯಾಗಿದ್ದರು. ಸತ್ಯವಾನ್‌ ಸಾವಿತ್ರಿಯ ಪಾತ್ರದ ಕುರಿತು ಮಾತಾಡುವುದು ಅವರ ಉದ್ದೇಶವಾಗಿತ್ತು. ಆದರೆ `ಐಶ್ವರ್ಯ'ದ ಕುರಿತು ಮಾತಾಡಿ ಅವರು `ಸತ್ಯವಾನ್‌' ಆದರು! ಅವರು ಹೇಳಿದ್ದು ಇಷ್ಟೇ: `ಐಶ್ವರ್ಯ' ಚಿತ್ರದಲ್ಲಿ ಪಾತ್ರ ಒಪ್ಪಿಕೊಂಡು ತಪ್ಪು ಮಾಡಿದೆ!</font><font size="3" face="Tunga"> </font><font size="3" face="Tunga">ಅರೆರೇ, ಐಶ್ವರ್ಯದಲ್ಲಿ ಡೈಸಿ ಪಾತ್ರವನ್ನು ಎಲ್ಲರೂ ಹೊಗಳಿದ್ದರಲ್ಲವಾ ಎಂದು ಪತ್ರಕರ್ತರು ಗೊಂದಲಗೊಂಡರು. ಇದನ್ನು ಡೈಸಿಯೂ ಒಪ್ಪಿಕೊಂಡರು: `ಐಶ್ವರ್ಯ' ಚಿತ್ರದಲ್ಲಿ ನಾನು ಮಾಡಿದ ಪಾತ್ರವನ್ನು ಬಹಳಷ್ಟು ಜನ ಮೆಚ್ಚಿಕೊಂಡರು. ಈಗಲೂ ಜನ ನನ್ನನ್ನು `ಐಶ್ವರ್ಯ' ಚಿತ್ರದಲ್ಲಿನ ಪಾತ್ರಕ್ಕಾಗಿಯೇ ಗುರುತಿಸುತ್ತಾರೆ. ಅದೊಂದು ಒಳ್ಳೆಯ ಪಾತ್ರವಾಗಿತ್ತಾದರೂ ನನಗೆ ತುಂಬಾ ನೋವಾಯಿತು!</font><font size="3" face="Tunga">ಒಳ್ಳೆಯ ಪಾತ್ರ. ಜನ ಮೆಚ್ಚಿಕೊಂಡರು. ಹೀಗಿದ್ದರೂ ನೋವಾಗಿದ್ದೇಕೆ ಎಂಬ ಪ್ರಶ್ನೆ ಬಂತು. `ಹೇಳಿದ್ದು ಒಂದು ಮಾಡಿದ್ದು ಇನ್ನೊಂದು' ಎಂದರು ಡೈಸಿ. `ಗಜನಿ' ಮತ್ತು `ಮನ್ಮಥಡು' ಚಿತ್ರಗಳ ಕೋಲಾಜ್‌ ಆಗಿದ್ದ ಚಿತ್ರದಲ್ಲಿ ನನ್ನ ಪಾತ್ರ ಬೇರೆ ರೀತಿ ಇರುತ್ತದೆಯೆಂದು ಹೇಳಲಾಗಿತ್ತು. ಚಿತ್ರೀಕರಣ ಮಾಡುವ ಹಂತದಲ್ಲಿ ಅದು ಬದಲಾಯಿತು. ಮೊದಲೇ ಹೇಳಬೇಕಾದ ಸಾಕಷ್ಟು ಸಂಗತಿಗಳನ್ನು ನನಗೆ ತಡವಾಗಿ ತಿಳಿಸಲಾಯಿತು ಎಂದರು ಡೈಸಿ. ಅವರಿಗೆ ಮೊದಲು ತಿಳಿಸಿದಂತೆ ಸಿನಿಮಾ ಆಗಿದ್ದರೆ ಅವರು ಇಡೀ ಚಿತ್ರದಲ್ಲಿ ಇರಬೇಕಾಗಿತ್ತಂತೆ!</font><font size="3" face="Tunga">ಸಾವಿತ್ರಿ ಫಾಸ್ಟ್‌</font><font size="3" face="Tunga">`ಸತ್ಯವಾನ್‌ ಸಾವಿತ್ರಿ'ಯಲ್ಲಿ ಸಾವಿತ್ರಿ ಪಾತ್ರ ತುಂಬಾ ಇಷ್ಟವಾಗಿದೆ ಎಂದು ಮಾತು ಬದಲಿಸಿದರು ಡೈಸಿ. ಸಿನಿಮಾದಲ್ಲಿ ನಟಿಸುವ ಸಂತೋಷವನ್ನು ಅವರು ನಿಜವಾಗಿ ಅನುಭವಿಸಿದ್ದು `ರಾಮ ಶಾಮ ಭಾಮ' ಚಿತ್ರೀಕರಣದಲ್ಲಂತೆ. ರಮೇಶ್‌ ಎಲ್ಲವನ್ನೂ ಅದ್ಭುತವಾಗಿ ಪ್ಲಾನ್‌ ಮಾಡುವುದರಿಂದ ಇದು ಸಾಧ್ಯವಾಯಿತಂತೆ. `ಸತ್ಯವಾನ್‌ ಸಾವಿತ್ರಿ' ಚಿತ್ರದಲ್ಲೂ ರಮೇಶ್‌ ಎಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಮುಗಿಸುತ್ತಿದ್ದಾರಂತೆ. ಪರಿಣಾಮ: 35 ದಿನ ಚಿತ್ರೀಕರಣ ನೆಡೆಸಬೇಕಿದ್ದ ಸತ್ಯವಾನ್‌ ಸಾವಿತ್ರಿ ಬರೀ 28 ದಿನಗಳಲ್ಲಿ ಮುಗಿಯುತ್ತಿದೆ!</font><font size="3" face="Tunga"> </font><font size="3" face="Tunga">`ಬಿಂಬ' ಚಿತ್ರದ ಪಾತ್ರ ನನಗೆ ಬಹಳ ಸವಾಲಿನದಾಗಿತ್ತು ಎಂದು ಫ್ಲ್ಯಾಶ್‌ಬ್ಯಾಕಿಗೆ ಹೊರಳಿದರು ಡೈಸಿ. ಸ್ಕೂಟಿಯಲ್ಲಿ ಕಾಲೇಜಿಗೆ ಹೊರಟಿದ್ದವಳನ್ನು ಕರೆದು ಮಗು ಕೊಟ್ಟು ಸಾಕು ಎಂದಂತಾಗಿ ಅವರು ಸಾಕಷ್ಟು ಚಡಪಡಿಸಿದ್ದರಂತೆ. ಹೀಗಾಗಿ ಸಿನಿಮಾದ ಥ್ರಿಲ್‌ ಅನುಭವಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಈಗಂತೂ ಅವರು ಸಿನಿಮಾದಲ್ಲಿ ನಟಿಸುವ ರೋಮಾಂಚನವನ್ನು ಅಕ್ಷರಶಃ ಅನುಭವಿಸುತ್ತಿದ್ದಾರಂತೆ. ಎಲ್ಲ ಸರಿ ಹೋದರೆ ಸಾವಿತ್ರಿ ಪಾತ್ರಕ್ಕೆ ತಾವೇ ದನಿ ಕೊಡಬೇಕು ಎಂದೂ ಡೈಸಿ ಅಂದುಕೊಂಡಿದ್ದಾರೆ.</font><font size="3" face="Tunga">ಡೈಸಿ ಈಗ ಪಾತ್ರಗಳನ್ನು ಅಳೆದು ಸುರಿದು ಒಪ್ಪಿಕೊಳ್ಳುತ್ತಾರೆ. `ಐಶ್ವರ್ಯ'ದಲ್ಲಿ ಮಾಡಿದ ತಪ್ಪನ್ನು ಮಾಡಲಾರೆ ಎಂದು ಅವರು ಪುನರುಚ್ಛರಿಸುತ್ತಾರೆ. ಈ ಕಾರಣಕ್ಕೇ ಅವರು ಸಾವಿತ್ರಿಯ ಪಾತ್ರದ ಹೊರತಾಗಿ ಬೇರೆ ಏನನ್ನೂ ಒಪ್ಪಿಕೊಂಡಿಲ್ಲ. `ರಾಮ ಶಾಮ ಭಾಮ'ದಲ್ಲಿ ಗರ್ಲ್‌ಫ್ರೆಂಡ್‌ ಆಗಿದ್ದ ಡೈಸಿಗೆ ಈ ಚಿತ್ರದಲ್ಲಿ ಪ್ರಮೋಷನ್‌ ಸಿಕ್ಕಿದೆ ಎನ್ನುವುದು ಕುತೂಹಲಕರ. ಅವರು ಈ ಚಿತ್ರದಲ್ಲಿ ರಮೇಶ್‌ ಹೆಂಡತಿ. ಗರ್ಲ್‌ಫ್ರೆಂಡ್‌ ಪಾತ್ರವನ್ನು ಜೆನ್ನಿಫರ್‌ ನಿಭಾಯಿಸುತ್ತಿದ್ದಾರೆ. ಆ ಪಾತ್ರ ಕೊಟ್ಟರೆ ಒಪ್ಪಿಕೊಳ್ಳುತ್ತಿರಲಿಲ್ಲವಾ ಎಂದು ಕೇಳಿ ನೋಡಿ. ತಕ್ಷಣ ಡೈಸಿ ರಾಯಭಾರಿಯಾಗುತ್ತಾರೆ: ಇಲ್ಲ, ಇಲ್ಲ. ಅದೂ ತುಂಬಾ ಒಳ್ಳೆಯ ಪಾತ್ರ. ಜೆನ್ನಿಫರ್‌ ತುಂಬಾ ಒಳ್ಳೆಯ ನಟಿ!</font><font size="3" face="Tunga">ಡೈಸಿ ಈಗಲೂ ಮುಂಬೈ ನಿವಾಸಿ. ಅಂದರೆ ಅನಿವಾಸಿ ಕನ್ನಡಿಗರಲ್ಲಿ ಒಬ್ಬರು. ಹಿಂದಿ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ಇದಕ್ಕೆ ಕಾರಣ ಅಲ್ಲವಂತೆ. ನಮ್ಮ ಕುಟುಂಬದ ಸದಸ್ಯರ ವ್ಯವಹಾರ ಅಲ್ಲಿದೆ. ಹಾಗಾಗಿ ಅಲ್ಲಿದ್ದೇನೆ ಎನ್ನುತ್ತಾರೆ ಅವರು. ಹೀಗಿದ್ದರೂ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ವಿಷಯದಲ್ಲೂ ಅವರ ಪ್ರಯತ್ನ ಗಂಭೀರವಾಗಿದೆ. ಈಗಾಗಲೇ ಅವರು ಅಂಥ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರೀಕರಣ ಇನ್ನೂ ಶುರುವಾಗಬೇಕು.</font><font size="3" face="Tunga">ಹಿಂದಿಯಲ್ಲಿ ಹಣ ಹೆಚ್ಚು ಸಿಗುತ್ತದೋ ಕನ್ನಡದಲ್ಲೋ ಎಂದು ಪತ್ರಕರ್ತರು ತೌಲನಿಕ ಅಧ್ಯಯನ ಶುರು ಮಾಡಿದರು. ಇಲ್ಲೂ ಡೈಸಿ ಪುನಃ ರಾಯಭಾರಿಯಾದರು. ಎಲ್ಲಿ ಹೆಚ್ಚು ಎನ್ನುವುದನ್ನು ಅವರು ಕೊನೆಗೂ ಬಾಯಿಬಿಡಲಿಲ್ಲ. `ನೀವು ಯಾವ ಬ್ಯಾನರ್‌ನಲ್ಲಿ ನಟಿಸುತ್ತಿದ್ದೀರಿ ಎನ್ನುವುದರ ಮೇಲೆ ಸಂಭಾವನೆ ತೀರ್ಮಾನವಾಗುತ್ತದೆ' ಎಂದರು ಅವರು. ಹೀಗಿದ್ದರೂ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿರುವ ಶಿಸ್ತು ಮಾತ್ರ ಅಲ್ಲಿಲ್ಲವಂತೆ. ಉದಾಹರಣೆಗೆ ಇಲ್ಲಿ ಎಷ್ಟೇ ಪ್ರಸಿದ್ಧ ನಟರಾದರೂ ಹೇಳಿದ ಸಮಯಕ್ಕೆ ಸೆಟ್‌ಗೆ ಬರುತ್ತಾರೆ. ಹಿಂದಿಯಲ್ಲಿ ಹಾಗಿಲ್ಲ!</p>
<p>ಡೈಸಿ ಮುಂದಿರುವ ಗುರಿಗಳೇನು? ತುಂಬಾ ಇದೆ ಎಂದರು ಡೈಸಿ. ನನ್ನಲ್ಲಿ ಇರುವ ಪ್ರತಿಭೆ ಏನು ಎನ್ನುವುದು ಗೊತ್ತಿದೆ. ಇನ್ನೂ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕು ಎನ್ನುವುದು ಅವರ ಆಸೆಯಂತೆ.</p>
<p></font></p>
]]></content:encoded>
</item>
<item>
<title><![CDATA[ಗಣೇಶ್‌ ಮನೆ ಅರಮನೆ!]]></title>
<link>http://pichchar.wordpress.com/?p=77</link>
<pubDate>Wed, 20 Feb 2008 14:16:49 +0000</pubDate>
<dc:creator>Gundkal</dc:creator>
<guid>http://pichchar.wordpress.com/?p=77</guid>
<description><![CDATA[
ಅರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾ]]></description>
<content:encoded><![CDATA[<blockquote>
<p align="left"><strong><img border="4" vspace="4" align="left" width="251" src="http://pichchar.wordpress.com/files/2008/02/img_8446.jpg" hspace="4" alt="img_8446.jpg" height="416" />ಅ</strong>ರಮನೆಗೆ ಮೊದಲು ಸಿಗುವ ಮನೆ ಕತೆಯಿದು. ತ್ಯಾಗರಾಜ ನಗರದಲ್ಲಿರುವ ನಾಗಸಂದ್ರ ಸರ್ಕಲ್‌ ಪಕ್ಕದಲ್ಲೊಂದು ಗಲ್ಲಿ. ಅದು ಮಾಡೆಲ್‌ಹೌಸ್‌ ಸ್ಟ್ರೀಟ್‌. ಅಲ್ಲಿ ಮನೆ ಎಂದು ಹೇಳಿಕೊಳ್ಳಬಹುದಾದ ರೂಮು ಅಥವಾ ರೂಮು ಎಂದು ಕರೆದುಬಿಡಬಹುದಾದ ಮನೆ. ಆ ಪುಟ್ಟ ಮನೆಗೊಂದು ಟೆರೇಸು.</p>
</blockquote>
<p>ನಾಲ್ಕು ವರ್ಷಗಳ ಹಿಂದಿನ ರಾತ್ರಿಗಳಲ್ಲಿ ಆ ಟೆರೇಸಿನ ಮೇಲೆ ಕುಳಿತು ಇನ್ನೂ ಹುಟ್ಟಿಕೊಳ್ಳಬೇಕಾಗಿದ್ದ ತಾರೆ ಗಣೇಶ್‌ ಮತ್ತು ಹುಟ್ಟಿಕೊಳ್ಳಬೇಕಾಗಿದ್ದ ನಿರ್ದೇಶಕ ನಾಗಶೇಖರ್‌ ಹರಟೆ ಹೊಡೆಯುತ್ತಿದ್ದರು. ಮೈಗೊಂದು ಟವೆಲ್‌ ಸುತ್ತಿಕೊಂಡು ಆಕಾಶದಲ್ಲಿ ತಾರೆಗಳನ್ನು ನೋಡುತ್ತಾ ಬದಲಾಗದ ತಮ್ಮ ತಾರಾಬಲದ ಕುರಿತು ಗೊಂದಲಗೊಳ್ಳುತ್ತಾ ಸಿನಿಮಾಗಳ ಕುರಿತು ಮಾತಾಡುತ್ತಿದ್ದರು. ಸಣ್ಣದೊಂದು ಸಿನಿಮಾದಲ್ಲಿ ಮಾಡಿದ ಸಣ್ಣದೊಂದು ಪಾತ್ರಕ್ಕೆ ಬಂದಿದ್ದ ಹಣದಲ್ಲೇ ತಿಂಗಳು ಮುಗಿಸುವ ಆಲೋಚನೆಯ ನಡುವೆ ದಿನಾ ರಾತ್ರಿ ತಾರೆ ಟೆರೇಸ್‌ ಪರ್‌!</p>
<p><!--more--></p>
<p>ಪ್ರತಿದಿನವೂ ರಾತ್ರಿ ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ಒಂದು ವಿಮಾನ ಹಾರಿ ಹೋಗುತ್ತಿತ್ತು. ಈ ವಿಮಾನ ಹಾರಿ ಹೋಗುತ್ತಲೇ ಹುಡುಗರ ಮಾತುಕತೆ ಮುಗಿಯುತ್ತಿತ್ತು. ಈ ಕಷ್ಟದ ದಿನಗಳಲ್ಲೂ ಗಣೇಶ್‌ ಸದಾ ಆಶಾವಾದಿ. `ನೋಡ್ತಿರು ಗೆಳೆಯಾ. ಒಂದು ದಿನ ಬರುತ್ತೆ. ಆ ದಿನ ನಮ್ಮನ್ನು ಹಿಡಿದು ನಿಲ್ಲಿಸೋದಕ್ಕೇ ಯಾರಿಗೂ ಸಾಧ್ಯವಾಗೊಲ್ಲ. ಅಂಥಾ ದಿನ ಬರುತ್ತೆ' ಎಂದು ದಿನವೂ ಗಣೇಶ್‌ ಹೇಳುತ್ತಿದ್ದರೆ ನಾಗಶೇಖರ್‌ ನಿರ್ಲಕ್ಷ್ಯದಿಂದ ಕಾಣೆಯಾಗುತ್ತಿದ್ದ ವಿಮಾನ ನೋಡುತ್ತ ಕುಳಿತಿರುತ್ತಿದ್ದರು.</p>
<p>ದಿನಗಳು ಕಳೆದವು. ನಾಗಶೇಖರ್‌ ಮತ್ತು ಗಣೇಶ್‌ ಇಬ್ಬರೂ ನಾಗಸಂದ್ರ ಸರ್ಕಲ್‌ ಬಿಟ್ಟರು. ಬೇರೆ ಬೇರೆ ಮನೆ ಸೇರಿಕೊಂಡರು. ಈ ಹಂತದಲ್ಲೇ ಮಳೆ ಬಂದು ಗಣೇಶ್‌ ದೊಡ್ಡ ನಟರಾದರು. ಆಗಲೇ ಚೆಲ್ಲಾಟ ಬಂದಿತ್ತು. ಹುಡುಗಾಟ ಬರುವುದರಲ್ಲಿತ್ತು. `ಕೃಷ್ಣ' ಚಿತ್ರೀಕರಣಕ್ಕಾಗಿ ಗಣೇಶ್‌ ಬ್ಯಾಂಕಾಕ್‌ಗೆ ಹೊರಟಿದ್ದರು. ಗಣೇಶ್‌ ಹೇಳುತ್ತಿದ್ದ `ಆ ಒಂದು ದಿನ ' ಆಗಲೇ ಬಂದುಬಿಟ್ಟಿತ್ತು.</p>
<p>ಗಣೇಶ್‌ಗೆ ಮೊದಲ ವಿದೇಶ ಪ್ರವಾಸ. ನಾಗಶೇಖರ್‌ಗೆ ಸಂಭ್ರಮವಾಗಿತ್ತು. ಗಣೇಶ್‌ರನ್ನು ಬೀಳ್ಕೊಡುವುದಕ್ಕೆ ನಾಗಶೇಖರ್‌ ಆ ದಿನ ರಾತ್ರಿ ವಿಮಾನ ನಿಲ್ದಾಣದಲ್ಲಿದ್ದರು. ಅದು ನಡುರಾತ್ರಿಯ ವಿಮಾನ. ಹನ್ನೆರಡೂವರೆ ಗಂಟೆಯಾಗಿ ಐದು ನಿಮಿಷಗಳ ನಂತರ ವಿಮಾನ ಹಾರುವುದೆಂದು ನಿಗದಿಯಾಗಿತ್ತು. ನಾಗಶೇಖರ್‌ಗೆ ಪುನಃ ನಾಗಸಂದ್ರ ಸರ್ಕಲ್‌ ನೆನಪಾಯಿತು. ಮಾಡೆಲ್‌ ಹೌಸ್‌ ಸ್ಟ್ರೀಟ್‌ ನೆನಪಾಯಿತು. ಟೆರೇಸು, ತಾರೆಗಳು, ಸಿನಿಮಾಗಳ ಕುರಿತು ಹರಟೆ ಮತ್ತು ಅದೇ ಸಮಯಕ್ಕೆ ಹಾರುವ ವಿಮಾನ. ಬಹುಶಃ ಈಗ ಅದೇ ವಿಮಾನದಲ್ಲಿ ಗಣೇಶ್‌ ಬ್ಯಾಂಕಾಕ್‌ಗೆ ಹೋಗುತ್ತಿದ್ದಾರೆ!</p>
<p>`ಹಾಗಂತ ನನಗೆ ಅನಿಸಿತು' ಎಂದು ನೆನಪು ಮಾಡಿಕೊಂಡರು ನಾಗಶೇಖರ್‌. ತಾರೆಗಳನ್ನು ನೋಡುತ್ತ ಮಾತಾಡುತ್ತಿದ್ದ ಗೆಳೆಯ ತಾರೆಯೇ ಆಗಿಬಿಟ್ಟ ಸಮಯದಲ್ಲಿ ನಾಗಶೇಖರ್‌ ಬದುಕಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. `ಸಂಜು ವೆಡ್ಸ್‌ ಗೀತಾ' ಎಂದು ಅವರು ಒಂದು ಕತೆ ಬರೆದಿಟ್ಟುಕೊಂಡಿದ್ದರು. ಇದೊಂದು ಮದುವೆ ಕತೆ ಮತ್ತು ಮಳೆಯ ಕತೆ. ಆಗಷ್ಟೇ `ಮುಂಗಾರು ಮಳೆ' ಯಶಸ್ವಿಯಾಗಿದ್ದರಿಂದ ನಾಗಶೇಖರ್‌ ಅದನ್ನು ಕೈಬಿಟ್ಟರು. ಈ ಹಂತದಲ್ಲಿ ಅವರ ಸ್ನೇಹಿತ, ಛಾಯಾಗ್ರಾಹಕ ಚಂದ್ರು ಒಂದು ಎಳೆ ಹೇಳಿದರು. ನಾಗಶೇಖರ್‌ ಖುಷಿಯಾದರು. ಪ್ರೀತಮ್‌ ಗುಬ್ಬಿ ಚಿತ್ರಕತೆ ಬರೆಯಲು ನೆರವಾದರು. ರಂಗ ಸಂಭಾಷಣೆಗೆ ಕುಳಿತರು. ಹತ್ತು ದಿನಗಳಲ್ಲಿ `ಅರಮನೆ'ಯ ನೀಲಿನಕ್ಷೆ ಸಿದ್ಧವಾಯಿತು.</p>
<p>ಆ ಮಂಜು ಕೆ ಮಂಜು</p>
<p>ಒಂದು ದಿನ ಸಂಜೆ ನಿರ್ಮಾಪಕ ಜಾಕ್‌ ಮಂಜು ಅವರಿಗೆ ಕತೆ ಹೇಳಿದರು ನಾಗಶೇಖರ್‌. ಕತೆ ಕೇಳಿ ಅವರು ಖುಷಿಯಾದರು. `ಒಂದಿನ ಟೈಮ್‌ ಕೊಡಿ. ನಾಳೆ ಮಾತಾಡೋಣ' ಎಂದರು. ಕತೆ ಇಟ್ಟುಕೊಂಡು ಒಂದು ದಿನ ಕಾಯುವುದೂ ನಾಗಶೇಖರ್‌ಗೆ ಕಷ್ಟ ಅನಿಸಿತು. ಮರುದಿನ ಬೆಳಿಗ್ಗೆಯೇ ಅವರು ಕೆ ಮಂಜು ಎದುರು ಕುಳಿತಿದ್ದರು. ಆ ದಿನ ಮಂಜು ಹುಟ್ಟಿದ ಹಬ್ಬ. ಕತೆ ಕೇಳಿದ ಮಂಜು ರೋಮಾಂಚಿತರಾಗಿ(!) ಎದ್ದು ನಿಂತು ಒಂದು ಲಕ್ಷದ ಒಂದು ರೂಪಾಯಿ ಅಡ್ವಾನ್ಸ್‌ ಕೊಟ್ಟರು. ಗಣೇಶ್‌ ಜೊತೆ ಫೋನಲ್ಲೇ ಮಾತುಕತೆಯಾಯಿತು. ಗೆಳೆಯನ ಸಿನಿಮಾವನ್ನು ಗಣೇಶ್‌ ಕತೆ ಕೇಳದೇ ಒಪ್ಪಿಕೊಂಡಿದ್ದರು. ಅಲ್ಲಿಂದ ಸಂಭ್ರಮದಿಂದ ಹೊರಕ್ಕೆ ಬರುತ್ತಿದ್ದಾಗ ನಾಗಶೇಖರ್‌ಗೆ ಆ ಮಂಜು ಫೋನ್‌. ಮುಂಗಡ ಹಣ ಕೊಡುವುದಕ್ಕೆಂದು ಅವರು ಫೋನ್‌ ಮಾಡಿದ್ದರು.</p>
<p>ಇಂಥ ಆಕಸ್ಮಿಕಗಳ ಕತೆಗಳನ್ನು ನಾಗಶೇಖರ್‌ ಒಂದಾದ ಮೇಲೆ ಒಂದರಂತೆ ಬಿಚ್ಚಿಡುತ್ತಾ ಹೋಗುತ್ತಾರೆ. ಮಂಡ್ಯದ ಮಳವಳ್ಳಿಯ ಪಕ್ಕದ ದಲಿತ ಕುಟುಂಬದಲ್ಲಿ ಹುಟ್ಟಿದ್ದು, ಹಟದಿಂದ ಇಂಗ್ಲಿಷ್‌ ಮೀಡಿಯಮ್‌ನಲ್ಲಿ ಓದಿದ್ದು, ಬೆಂಗಳೂರಿಗೆ ಬಂದಿದ್ದು, ಪುನಃ ಮಂಡ್ಯಕ್ಕೆ ಹೋಗಿ ಎಂಜಿನೀಯರಿಂಗ್‌ ಓದಿದ್ದು, ವಾಪಸ್‌ ಬೆಂಗಳೂರಿಗೆ ಬಂದು ನಾಟಕ, ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದು ಹೀಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಧಾರಾವಾಹಿಯಿಂದ ಸಿನಿಮಾ ಪ್ರಪಂಚಕ್ಕೆ ಅವರು ಕಾಲಿಟ್ಟಿದ್ದೂ ಒಂದು ಕತೆ. `ನಿನಗಾಗಿ' ಚಿತ್ರಕ್ಕೆ ನಿರ್ದೇಶಕ ಮಹೇಂದರ್‌ ನಾಯಕಿಯಹುಡುಕಾಟದಲ್ಲಿದ್ದರು. ಅವರ ಸಹನಿರ್ದೇಶಕರಾಗಿದ್ದ ಶಶಾಂಕ್‌ ಟೀವಿ ಧಾರಾವಾಹಿಗಳಲ್ಲಿ ಹೊಸ ಮುಖದ ಹುಡುಕಾಟ ನಡೆಸುತ್ತಿದ್ದರು. ಹುಡುಗಿಯೊಬ್ಬಳ ಅಭಿನಯ ಅಳೆಯಲು ಶಶಾಂಕ್‌ ಒಂದು ಸೀನ್‌ ನೋಡಬೇಕಾಯಿತು. ಆ ಸೀನ್‌ನಲ್ಲಿ ಆಕೆಯೊಂದಿಗೆ ಅಭಿನಯಿಸಿದ್ದು ಇದೇ ನಾಗಶೇಖರ್‌. ಸೀನ್‌ ಮುಗಿಯುವ ಹೊತ್ತಿಗೆ `ನಿನಗಾಗಿ' ಚಿತ್ರದ ಪಾತ್ರವೊಂದಕ್ಕೆ ನಾಗಶೇಖರ್‌ ಆಯ್ಕೆಯಾಗಿದ್ದರು.</p>
<p>ಭಾವನೆಗಳ ಅರಮನೆ</p>
<p>ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ.</p>
<p>ಪ್ರೀತಿಯಿಲ್ಲದ ಅರಮನೆಯೂ ಸೆರೆಮನೆ!</p>
<p>ಇಂಥದ್ದೊಂದು ಎಳೆ ಇಟ್ಟುಕೊಂಡು ನಾಗಶೇಖರ್‌ `ಅರಮನೆ' ಸಿನಿಮಾ ಮಾಡಿದ್ದಾರೆ. ಒಟ್ಟಾರೆ 55 ದಿನ ಚಿತ್ರೀಕರಣ ನಡೆಸಿದ್ದಾರೆ. ಗಣೇಶ್‌ ಜೊತೆಯಲ್ಲಿ ಅನಂತ್‌ನಾಗ್‌ ಅಭಿನಯಿಸಿದ್ದಾರೆ. ಇಂಥದ್ದೊಂದು ಸಿನಿಮಾ ಆಗುವುದಕ್ಕೆ ಮಂಜು ಕೊಟ್ಟ ಸಹಕಾರವನ್ನು ನಾಗಶೇಖರ್‌ ನೆನೆಯುತ್ತಾರೆ. `ನನ್ನ ಸಹನಿರ್ದೇಶಕರೂ ಮಂಜು. ಪ್ರೊಡಕ್ಷನ್‌ ಮ್ಯಾನೇಜರೂ ಮಂಜು. ಅಷ್ಟು ಸಹಕಾರ ಕೊಟ್ಟಿದ್ದಾರೆ' ಎಂದು ಖುಷಿ ಪಡುತ್ತಾರೆ ನಾಗಶೇಖರ್‌.</p>
<p>ನಾಯಕ ನಟ ಗಣೇಶ್‌ಗೆ ಇಲ್ಲಿ ಭಿನ್ನವಾದ ಪಾತ್ರ. `ಮುಂಗಾರು ಮಳೆ' ಮತ್ತು `ಗಾಳಿಪಟ' ಚಿತ್ರಕ್ಕಿಂತ ಭಿನ್ನವಾದ ಮಾತಿನ ಶೈಲಿ. `ಗಣೇಶ್‌ ಅದನ್ನು ತುಂಬಾ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೀರಿಯಸ್ಸಾಗಿ ಹೇಳ್ತೀನಿ. ಗಣೇಶ್‌ಗೆ ಏನೋ ಆಗಿಬಿಟ್ಟಿದೆ. ಆತ ಅಭಿನಯಿಸುತ್ತಿರೋ ರೀತಿ ನೋಡಿದರೆ ಸಂಭ್ರಮ ಆಗುತ್ತೆ' ಎನ್ನುತ್ತಾರೆ ಅವರು.</p>
<p>ಅರಮನೆ ಒಂದು ಪ್ರೇಮಕತೆ. ಭಾವನೆಗಳ ಸುತ್ತ ಸುತ್ತುವ ಕತೆ. ಚಿತ್ರದಲ್ಲಿ ಆರು ಹಾಡುಗಳಿವೆ. ಮೂರು ಹಾಡುಗಳನ್ನು ಕವಿರಾಜ್‌ ಬರೆದರೆ ಉಳಿದ ಹಾಡುಗಳನ್ನು ಜಯಂತ್‌, ಯೋಗರಾಜ್‌ ಭಟ್‌ ಮತ್ತು ನಾಗೇಂದ್ರಪ್ರಸಾದ್‌ ಬರೆದಿದ್ದಾರೆ. ಗುರುಕಿರಣ್‌ ಸಂಗೀತ ಕೊಟ್ಟಿದ್ದಾರೆ. ಹಾಡುಗಳು ಹಿಟ್‌ ಆಗುತ್ತವೆ ಎನ್ನುವುದರಲ್ಲಿ ನಿರ್ದೇಶಕರಿಗೆ ಅನುಮಾನಗಳಿಲ್ಲ. ಮಾರ್ಚ್‌ ಮೊದಲ ವಾರ ಹಾಡುಗಳು ಮಾರುಕಟ್ಟೆಯಲ್ಲಿರುತ್ತವೆ.</p>
<p>ಸಿನಿಮಾ ಓದು</p>
<p>`ನನಗೆ ಮೊದಲಿಂದಲೂ ಬಂಗಾರದ ಮನುಷ್ಯ ಇಷ್ಟ. ಕಸ್ತೂರಿ ನಿವಾಸ ಇಷ್ಟ. ಪುಟ್ಟಣ್ಣ, ಬಾಲಚಂದರ್‌, ಮಣಿರತ್ನಮ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದೋರು ನಾವು' ಎನ್ನುತ್ತಾರೆ ನಾಗಶೇಖರ್‌. ಈ ಸಿನಿಮಾವೂ ಅದೇ ಥರ ಭಾವನೆಗಳ ಸುತ್ತ ಸುತ್ತುತ್ತದೆ ಎನ್ನುವುದು ಅವರು ಕೊಡುವ ಭರವಸೆ.</p>
<p>ಅಂದಹಾಗೆ ಈ ಚಿತ್ರವನ್ನು ಭಿನ್ನ ಪ್ರಯತ್ನ ಎಂದು ಕರೆದುಕೊಳ್ಳಲು ನಾಗಶೇಖರ್‌ಗೆ ಇಷ್ಟವಿಲ್ಲ. ಪ್ರಚಾರವನ್ನು ಬೇರೆ ರೀತಿ ಮಾಡುವ ಕುರಿತೂ ಅವರು ಯೋಚನೆ ಮಾಡುತ್ತಿಲ್ಲ. ಸಿನಿಮಾಗಳನ್ನು ಟ್ರಿಕ್‌ಗಳಿಂದ ಗಿಮಿಕ್‌ಗಳಿಂದ ಗೆಲ್ಲಿಸಲಾಗುವುದಿಲ್ಲ ಎನ್ನುವುದು ಅವರ ನಂಬಿಕೆ.</p>
<p>`ಗಣೇಶ್‌ ಕುರಿತು ಇಂದು ಜನರಿಗೆ ಪ್ರೀತಿ ಇದೆ. ಕ್ರೇಜ್‌ ಇದೆ. ಸತ್ಯ ಹೇಳ್ತೀನಿ. ಈ ಸಿನಿಮಾ ನೂರು ದಿನ ಓಡಿದರೆ ಅದು ಗಣೇಶ್‌ದು. ಅದಕ್ಕಿಂತ ಹೆಚ್ಚು ಓಡಿದರೆ ನನ್ನದು' ಎನ್ನುತ್ತಾರೆ ಅವರು. ಇಡೀ ಸಿನಿಮಾದಲ್ಲಿ ಅವರು ನೀಲಿ ಮತ್ತು ಬಿಳಿಯನ್ನು ಯಥೇಚ್ಛವಾಗಿ ಬಳಸಿದ್ದಾರೆ. ಪ್ರಚಾರ ಸಾಮಗ್ರಿಗಳಲ್ಲೂ ಅದೇ ನೀಲಿ. ಅದೇ ಬಿಳಿ.</p>
<p>ಚಾಕೊಲೇಟ್‌ ಹೀರೋಯಿನ್‌</p>
<p>ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ರೋಮಾ ಈ ಚಿತ್ರದ ನಾಯಕಿ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕನ್ನಡದ ರಮ್ಯಾ ನಾಯಕಿಯಾಗಬೇಕಿತ್ತು. ಡೇಟ್ಸ್‌ ಹೊಂದಾಣಿಕೆ ಆಗದೇ ಅದು ಸಾಧ್ಯವಾಗಲಿಲ್ಲ. `ನೋಟ್‌ಬುಕ್‌' ಚಿತ್ರದ ಮೂಲಕ ಖ್ಯಾತಿಗೆ ಬಂದಿರುವ ರೋಮಾ `ಚಾಕೋಲೇಟ್‌' ಚಿತ್ರದಲ್ಲೂ ನಾಯಕಿ. ರೋಮಾಗೆ ಇದು ಮೊದಲ ಕನ್ನಡ ಚಿತ್ರ.</p>
<p>`ಯಾವಾಗ್ಲೂ ನಾನು ತಿಪ್ಪೆಯಿಂದ ಎದ್ದು ಬಂದಿರೋ ಥರಾ ಇರ್ತೀನಿ. ಮೊದಲಿಂದಲೂ ಎಲ್ಲದರಲ್ಲೂ ಗಣೇಶ್‌ ಅಚ್ಚುಕಟ್ಟು. ಬದುಕಿನ ವಿಷಯದಲ್ಲೂ ಆತ ಈಗಲೂ ಒಳ್ಳೊಳ್ಳೆಯ ಸಲಹೆ ಕೊಡುತ್ತಾನೆ' ಎನ್ನುತ್ತಾರೆ ನಾಗಶೇಖರ್‌. ಗಣೇಶ್‌ ಹೇಳುವ ಒಂದು ಮಾತಿನೊಂದಿಗೆ ಅವರ ಮಾತು ಮುಗಿಯುತ್ತದೆ. ಆ ಮಾತು ಹೀಗಿದೆ: ಕುಡಿತ ನಮ್ಮ ಚಟ ಆಗಬಾರದು. ಶ್ರಮ ಮತ್ತು ಗುರಿ ನಮ್ಮ ಚಟ ಆಗಬೇಕು!</p>
<p>ಅಂದಹಾಗೆ ಏಪ್ರಿಲ್‌ ಮೊದಲ ವಾರ `ಅರಮನೆ' ಬಿಡುಗಡೆ.</p>
]]></content:encoded>
</item>
<item>
<title><![CDATA[ದಾದಾಗಿರಿಯ ದಿನಚರಿ]]></title>
<link>http://pichchar.wordpress.com/2007/10/21/%e0%b2%a6%e0%b2%be%e0%b2%a6%e0%b2%be%e0%b2%97%e0%b2%bf%e0%b2%b0%e0%b2%bf%e0%b2%af-%e0%b2%a6%e0%b2%bf%e0%b2%a8%e0%b2%9a%e0%b2%b0%e0%b2%bf/</link>
<pubDate>Sun, 21 Oct 2007 11:13:28 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/10/21/%e0%b2%a6%e0%b2%be%e0%b2%a6%e0%b2%be%e0%b2%97%e0%b2%bf%e0%b2%b0%e0%b2%bf%e0%b2%af-%e0%b2%a6%e0%b2%bf%e0%b2%a8%e0%b2%9a%e0%b2%b0%e0%b2%bf/</guid>
<description><![CDATA[ಪುಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜ]]></description>
<content:encoded><![CDATA[<p><font size="3"><strong>ಪು</strong>ಸ್ತಕ ಓದುವಾಗ ನಮ್ಮ ತಲೆಯಲ್ಲಿ ನಮ್ಮದೇ ಜಗತ್ತಿನಿಂದ ಹುಟ್ಟಿಕೊಂಡ ಚಿತ್ರಗಳು ಮೂಡುತ್ತಿರುತ್ತವೆ. ಕೊತ್ವಾಲ ಅಂತ ರೌಡಿ ಇದ್ದ ಎಂದರೆ ನಮ್ಮ ತಲೆಯಲ್ಲಿ ನಮ್ಮ ಭಾವಕ್ಕೆ, ನಮ್ಮ ಗ್ರಹಿಕೆಗೆ ತಕ್ಕುದಾದ ಕೊತ್ವಾಲ ಕಾಣತೊಡಗುತ್ತಾನೆ. ಸಿನಿಮಾ ಆಗುವಾಗ ನಮ್ಮ ಎದುರು ಸ್ಪಷ್ಟ ಚಿತ್ರ ಕಾಣಿಸತೊಡಗುತ್ತದೆ. ಅದು ನಮ್ಮ ಕಲ್ಪನೆಯ ಚಿತ್ರಕ್ಕಿಂತ ಬೇರೆ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಪುಸ್ತಕವೊಂದನ್ನು ಓದಿ ಅದನ್ನು ಆಧರಿಸಿದ ಸಿನಿಮಾ ನೋಡುವಾಗ ನಮಗೆ ಗೊಂದಲವಾಗುತ್ತದೆ. `ದಾದಾಗಿರಿಯ ದಿನಗಳು' ಪುಸ್ತಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನನಗೆ `ಆ ದಿನಗಳು' ಚಿತ್ರವನ್ನು ನೋಡುವಾಗ ಹಲವು ಸಲ ಇಂಥ ಗೊಂದಲ ಕಾಡಿತು. ಇದರ ನಡುವೆಯೂ ಚಿತ್ರ ಮನಸ್ಸು ತಟ್ಟಿತು. ಚಿತ್ರದ ಕುರಿತು ಅನಿಸಿದ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದೇನೆ.<!--more--></font><font size="3"> </font></p>
<p><font size="3"> <strong>ಭೂ</strong>ಗತ ಜಗತ್ತಿನ ಕತೆ ಹೇಳುವ ಕನ್ನಡ ಚಿತ್ರಗಳ ಗುಣಲಕ್ಷಣಗಳೇನು?</font><font size="3"> </font><font size="3">ಹಳ್ಳಿಯಿಂದ ಬಂದ ಹುಡುಗ, ಮುಗ್ಧ, ಪರಿಸ್ಥಿತಿಯ ಪಿತೂರಿಯಿಂದ ರೌಡಿ, ಮುಚ್ಚು, ಹೊಡೆದಾಟ, ಹಿರೋಯಿಸಂ, ನಡುವೆ ಹುಡುಗಿ ಪ್ರೀತಿ, ತಾಯಿ ಸೆಂಟಿಮೆಂಟ್‌, ರಾಜಕಾರಣಿಗಳಿಂದ ಕುಮ್ಮಕ್ಕು, ಪೊಲೀಸರಿಂದ ಎನ್‌ಕೌಂಟರ್‌! `ಆ ದಿನಗಳು' ಚಿತ್ರದಲ್ಲಿ ಇದೆಲ್ಲ ಇಲ್ಲ. ಭೂಗತ ಜಗತ್ತನ್ನು ಪರಿಸ್ಥಿತಿಯ ಪಿತೂರಿಯಿಂದ ಪ್ರವೇಶಿಸುವ ಒಬ್ಬ ಪ್ರೇಮಿಯ ಕುರಿತು ನಿರ್ದೇಶಕ ಚೈತನ್ಯ ಹೇಳಿದರೂ ಅದು ಮೇಲೆ ಹೇಳಿದ ಜನಪ್ರಿಯ ಲಕ್ಷಣಗಳಿಂದ, ಕ್ಲಿಷೆಗಳಿಂದ ಮುಕ್ತವಾದ ಚಿತ್ರ.</p>
<p>ಇಲ್ಲಿ ಮಚ್ಚು ಇದೆ. ಕೊಚ್ಚುವವರಿಲ್ಲ. ಪ್ರೀತಿ ಇದೆ. ಹುಸಿ ರಮ್ಯತೆ ಹೆಚ್ಚೇನಿಲ್ಲ. ಸಿಟ್ಟು, ಸಣ್ಣತನ, ದ್ವೇಷಗಳೆಲ್ಲ ಇವೆ. ಹೊಡೆದಾಟಗಳಿಲ್ಲ. ಅಮ್ಮ, ತಂಗಿ ಇದ್ದಾರೆ. ಸೆಂಟಿಮೆಂಟಿಗೆ ಜಾಗವಿಲ್ಲ. ಕೊಲೆ ಕೊನೆಗೂ ನಡೆದೇ ಹೋಗುತ್ತದೆ. ಆದರೆ ವೈಭವೀಕರಣ ಇಲ್ಲ! ಭೂಗತ ಜಗತ್ತಿನ ಮೋಸ, ರಾಜಕೀಯ, ಚಿಲ್ಲರೆತನ, ಕ್ರೌರ್ಯ ಎಲ್ಲವೂ ಸರಕಾರಿ ಒಕ್ಕಣೆಯಂತೆ ನಿರ್ಭಾವುಕವಾಗಿ ನಡೆಯುತ್ತವೆ. ಶ್ರೀಧರ್‌ ಬರವಣಿಗೆಯಂತೆ ತಣ್ಣಗೆ ಹರಿಯುತ್ತದೆ. ಭೂಗತ ಜಗತ್ತಿನ ಚಿತ್ರಗಳ ರೋಚಕ ಶೈಲಿಯ ನಿರೂಪಣೆಯನ್ನು ಆರಿಸಿಕೊಳ್ಳದೇ ನಿರ್ದೇಶಕರು ಕುತೂಹಲ ಉಳಿಸಿಕೊಂಡಿರುವ ರೀತಿ ಗಮನಾರ್ಹ.</p>
<p>`ಆ ದಿನಗಳು' ಚಿತ್ರ ಕೋತ್ವಾಲ ರಾಮಚಂದ್ರನ ಕೊನೆಯ ದಿನಗಳನ್ನು ಹೇಳುತ್ತದೆ. ನಗರದಲ್ಲಿರುವ ಉದ್ಯಮಿಯೊಬ್ಬರ ಮಗ ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದಾನೆ. ಆ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲು ಉದ್ಯಮಿಗೆ ಇಷ್ಟವಿಲ್ಲ. ಅದಕ್ಕಾಗಿ ಮಗನ ವಿರುದ್ಧ ಕೋತ್ವಾಲನನ್ನು ಛೂ ಬಿಡುತ್ತಾನೆ. ಮಗ ಕೋತ್ವಾಲನನ್ನೇ ಸಾಯಿಸಿ ತನ್ನ ಪ್ರೀತಿಯನ್ನು ಬದುಕಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಈ ನಡುವೆ ಕೋತ್ವಾಲನನ್ನು ಮುಗಿಸಲು ಜಯರಾಜ್‌ ಕಾಯುತ್ತಿದ್ದಾನೆ. ಬಚ್ಚನ್‌-ಶ್ರೀಧರ್‌ ಕಾಯುತ್ತಿದ್ದಾರೆ. ಇವರ ಜೊತೆಯಲ್ಲಿ ಉದ್ಯಮಿಯ ಮಗನೂ ಸೇರಿಕೊಳ್ಳುತ್ತಾನೆ. ಇದು ಕತೆ.</p>
<p>ಈ ಕತೆಯನ್ನು ಹೇಳಲು ನಿರ್ದೇಶಕರು ದೃಶ್ಯ ಸಾಧ್ಯತೆಗಳಿಗಿಂತ ಹೆಚ್ಚಾಗಿ ಸಂಭಾಷಣೆಗಳನ್ನೇ ಬಳಸಿಕೊಂಡಿದ್ದಾರೆ. ಹಳೆಯ ಕಾರುಗಳು, ಅರೆ ಹಳದಿ ಕಲರ್‌ ಟೋನ್‌ ಮತ್ತು ಉದಾರೀಕರಣದ ನಂತರದ ಜಗತ್ತಿನ ಕೆಲ ಸಂಗತಿಗಳು ಇಲ್ಲದಿದ್ದರೆ ಇಪ್ಪತ್ತು ವರ್ಷಗಳ ಹಿಂದಿನ ಬೆಂಗಳೂರು ಸೃಷ್ಟಿಯಾಗಿಬಿಡುತ್ತದೆ ಎಂದು ಭಾವಿಸಿಕೊಂಡಿರುವುದೂ ಕುತೂಹಲಕರವಾಗಿದೆ. ಜೊತೆಯಲ್ಲಿ ಕತೆಯ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗಳ ಕುರಿತೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಬಹುದು. ಹೀಗಿದ್ದರೂ ಭೂಗತ ಜಗತ್ತಿನ ಕತೆಯನ್ನು ಸಾಮಾನ್ಯ ಜಗತ್ತಿನ ವಿಸ್ತತ ಭಾಗದಂತೆ ನೋಡಿ ಸಂಯಮದೊಂದಿಗೆ ನಿರೂಪಿಸಲಾಗಿರುವುದು `ಆ ದಿನಗಳು' ವಿಶೇಷ. ಶ್ರೀಧರ್‌ ಬರೆದ ಕತೆಗೇ ಅಂಥ ತಣ್ಣಗಿನ ಗುಣವಿತ್ತು. ಗಿರೀಶ್‌ ಕಾರ್ನಾಡ್‌ ಜೊತೆ ಸೇರಿ ಅವರು ಬರೆದ ಚಿತ್ರಕತೆ ಮತ್ತು ಸಂಭಾಷಣೆ ಆ ಗುಣವನ್ನು ಇನ್ನಷ್ಟು ದಟ್ಟಗೊಳಿಸಿದೆ. ಅತುಲ್‌ ಕುಲಕರ್ಣಿ, ಗಿರೀಶ್‌ ಕಾರ್ನಾಡ್‌, ಚೇತನ್‌, ಆಶೀಷ್‌ ವಿದ್ಯಾರ್ಥಿಯ ಅಭಿನಯ ಅದನ್ನು ಸಮರ್ಥವಾಗಿ ತೆರೆಗೆ ವರ್ಗಾಯಿಸಿದ್ದಾರೆ. ಮುಗುಳ್ನಗುವ ಕೊಲೆಗಾರನ ಪಾತ್ರದಲ್ಲಿ ಅತುಲ್‌ ಕುಲಕರ್ಣಿ ಅಭಿನಯ ಬೆರಗು ಹುಟ್ಟಿಸುತ್ತದೆ. ಇಳೆಯರಾಜ ಸಂಗೀತ, ಹಿನ್ನೆಲೆ ಸಂಗೀತ ಕತೆಗೆ ಪೂರಕ. ನಾಯಕಿಯ ಅಭಿನಯದ ಕುರಿತು ಇದೇ ಮಾತು ಹೇಳುವಂತಿಲ್ಲ. ವೇಣು ಛಾಯಾಗ್ರಹಣ ಕತೆಯ ನಿರೂಪಣೆಗೆ ಪೂರಕವಾಗಿದೆ. ಹುಡುಕಾಟದ ಸನ್ನಿವೇಶಗಳಲ್ಲೂ ಸ್ಟೆಡಿಕ್ಯಾಮ್‌ ಫೀಲ್‌ ಇಲ್ಲ ಎನ್ನುವುದೇ ಅದಕ್ಕೊಂದು ಉದಾಹರಣೆ.</p>
<p>`ದಾದಾಗಿರಿಯ ದಿನಗಳು' ಪುಸ್ತಕದಲ್ಲಿ 1980 ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ರೌಡಿ ಜಗತ್ತಿನ ಚಟುವಟಿಕೆಗಳನ್ನು ತಣ್ಣಗಿನ ಶೈಲಿಯಲ್ಲಿ ಹೇಳುತ್ತಾ, ಆ ದಿನಗಳ ರಾಜಕೀಯವನ್ನು ಶ್ರೀಧರ್‌ ಹೇಳಿದ್ದರು. ಆ ದಿನಗಳ ಸಾಮಾಜಿಕ ಸ್ಥಿತಿ, ಜಾತಿ ಜಗಳಗಳ ಕುರಿತು ಬೆಳಕು ಚೆಲ್ಲಿದ್ದರು. ರಾಜಕಾರಣಿಗಳು ಮತ್ತು ರೌಡಿಗಳ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ವಿವರಣೆಗಳೂ ಸೇರಿಕೊಂಡು ಕತೆ ಬೇರೆ ಬೇರೆ ಸ್ತರಗಳಲ್ಲಿ ತೆರೆದುಕೊಂಡಿತ್ತು. `ಆ ದಿನಗಳು' ಚಿತ್ರ ಹೀಗೆ ಬೇರೆ ಬೇರೆ ಸ್ತರಗಳಲ್ಲಿ ಬೆಳೆಯದಿದ್ದರೂ ರೌಡಿ ಜಗತ್ತಿನ ನೈಜ ಚಿತ್ರಣವಾಗಿ ಗಮನ ಸೆಳೆಯುತ್ತದೆ.</p>
<p></font></p>
]]></content:encoded>
</item>
<item>
<title><![CDATA[ಕನಸುಗಳ ಕಥಾಸಂಕಲನ]]></title>
<link>http://pichchar.wordpress.com/2007/10/21/%e0%b2%95%e0%b2%a8%e0%b2%b8%e0%b3%81%e0%b2%97%e0%b2%b3-%e0%b2%95%e0%b2%a5%e0%b2%be%e0%b2%b8%e0%b2%82%e0%b2%95%e0%b2%b2%e0%b2%a8/</link>
<pubDate>Sun, 21 Oct 2007 10:16:56 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/10/21/%e0%b2%95%e0%b2%a8%e0%b2%b8%e0%b3%81%e0%b2%97%e0%b2%b3-%e0%b2%95%e0%b2%a5%e0%b2%be%e0%b2%b8%e0%b2%82%e0%b2%95%e0%b2%b2%e0%b2%a8/</guid>
<description><![CDATA[ಡ್ರೀಮ್ಸ್‌! ಹೆಸರೇ ಹೇಳುವಂತೆ ಕನಸುಗಳ ಕತೆ]]></description>
<content:encoded><![CDATA[<p><font size="3"><strong>ಡ್ರೀ</strong>ಮ್ಸ್‌! ಹೆಸರೇ ಹೇಳುವಂತೆ ಕನಸುಗಳ ಕತೆಯಿರುವ ಸಿನಿಮಾ. ನಿರೂಪಕನ(ನಿರ್ದೇಶಕನ) ಬದುಕಿನ ಬೇರೆ ಬೇರೆ ಅವಸ್ಥೆಗಳಲ್ಲಿ ಕಂಡ ಕನಸುಗಳ ಕಥಾ ಸಂಕಲನ ಇದು. ಒಂದೊಂದು ಕನಸಿನದು ಒಂದೊಂದು ಕತೆ. ಆ ಕನಸಿಗೂ ಅನಂತರ ಹೇಳುವ ಕನಸಿಗೂ ಅರ್ಥಾತ್‌ ಸಂಬಂಧವಿಲ್ಲ. ಆದರೂ ಸಂಬಂಧ ಇದೆ! ಏಕೆಂದರೆ ಈ ಕನಸುಗಳನ್ನೆಲ್ಲಾ ಒಬ್ಬನೇ ಕಾಣುತ್ತಿದ್ದಾನೆ. ಆತನಲ್ಲಿ ಅವಸ್ಥಾಂತರಗಳು ಸಂಭವಿಸುತ್ತಿವೆ. ಹೀಗೆ ಎಂಟು ಕನಸುಗಳು ಬೇರೆ ಬೇರೆಯಾಗಿದ್ದೂ ಒಂದೇ ಕನಸಾಗುವ, ಕತೆಯಾಗುವ ವಿಸ್ಮಯವನ್ನು ನಿರ್ದೇಶಕ ಅಕಿರಾ ಕುರಸೋವಾ `ಡ್ರೀಮ್ಸ್‌' ಸಿನಿಮಾದಲ್ಲಿ ಸೃಷ್ಟಿಸುತ್ತಾರೆ.<!--more--></font><font size="3"> </font></p>
<p><font size="3">ನಿರೂಪಕ, ಅಂದರೆ ನಿರ್ದೇಶಕ ಬಾಲ್ಯದಲ್ಲಿ ಕಂಡಿರಬಹುದಾದ ಕನಸಿನ ಜೊತೆಯಲ್ಲಿ ಸಿನಿಮಾ ಶುರುವಾಗುತ್ತದೆ. ಆ ದಿನ ಬಿಸಿಲು ಮತ್ತು ಮಳೆ ಬರುತ್ತಿದೆ. ಸಣ್ಣ ಹುಡುಗನೊಬ್ಬ ಮನೆಯಿಂದ ಹೊರಕ್ಕೆ ಹೊರಡುತ್ತಾನೆ. ಅಮ್ಮ ಆತನನ್ನು ತಡೆಯುತ್ತಾಳೆ. `ಬಿಸಿಲು ಮಳೆ ಇರುವಾಗ ನರಿಗಳ ಮದುವೆ ನಡೆಯುತ್ತದೆ. ಅದನ್ನು ನೋಡಕೂಡದು' ಎನ್ನುತ್ತಾಳೆ. ಅಮ್ಮನ ಮಾತು ಮೀರಿ ಹುಡುಗ ಕಾಡಿನ ನಡುವೆ ನಡೆಯುವ ನರಿಗಳ ಮದುವೆಯ ಮೆರವಣಿಗೆಯನ್ನು ಕದ್ದು ನೋಡುತ್ತಾನೆ. ಈ ಹುಡುಗ ಕದ್ದು ನೋಡುತ್ತಿರುವುದನ್ನು ನರಿಯೊಂದು ನೋಡುತ್ತದೆ. ಬಾಲಕ ಅಲ್ಲಿಂದ ಓಟ ಕೀಳುತ್ತಾನೆ. ಮನೆಗೆ ಬಂದರೆ ಅಮ್ಮ ಬಾಗಿಲಲ್ಲೇ ನಿಂತಿದ್ದಾಳೆ. ಅವಳಿಗೆ ಸಿಟ್ಟು ಬಂದಿದೆ ಮತ್ತು ಆತನಿಗೆ ಮನೆಗೆ ಪ್ರವೇಶವಿಲ್ಲ ಎಂದು ಹೇಳುತ್ತಿದ್ದಾಳೆ. ಜೊತೆಯಲ್ಲಿ ನರಿಯೊಂದು ಆತನನ್ನು ಹುಡುಕಿಕೊಂಡು ಅಲ್ಲಿಗೆ ಬಂದ ವಿಷಯ ಹೇಳುತ್ತಾಳೆ. ನರಿ ಕೊಟ್ಟ ಹೋದ ಪುಟ್ಟ ಚೂರಿಯನ್ನು ಆತನಿಗೆ ಕೊಡುತ್ತ `ಮಾಡಿದ ತಪ್ಪಿಗೆ ನಿನ್ನನ್ನು ನೀನೇ ಕೊಂದುಕೊಳ್ಳಬೇಕು' ಎಂದು ಹೇಳುತ್ತಾಳೆ. ಬಾಲಕ ಭಯದಲ್ಲಿ ನಿಂತು ಹೋಗುತ್ತಾನೆ. `ಹೋಗು, ನರಿಗಳ ಕ್ಷಮೆ ಕೇಳು. ಅವರು ಸಾಮಾನ್ಯವಾಗಿ ಕ್ಷಮಾದಾನ ಮಾಡುವುದಿಲ್ಲ' ಎಂದು ಹೇಳಿ ಮನೆಯ ಬಾಗಿಲು ಹಾಕಿಕೊಳ್ಳುತ್ತಾಳೆ. ಅಲ್ಲಿಂದ ಹೊರಡುವ ಹುಡುಗ ಬೆಟ್ಟ ಗುಡ್ಡಗಳನ್ನು ಹಾದು ಕಾಮನಬಿಲ್ಲುಗಳ ಕೆಳಗೆ ಇದ್ದಿರಬಹುದಾದ ನರಿಗಳನ್ನು ಹುಡುಕಿಕೊಂಡು ಹೊರಡುತ್ತಾನೆ. ನಿರೂಪಕನ ಮೊದಲ ಕನಸು ಇಲ್ಲಿಗೆ ನಿಲ್ಲುತ್ತದೆ.</font><font size="3"> </font><font size="3">ಇನ್ನೊಂದು ಕನಸು ಕಂಡೆ ಎಂದು ನಿರೂಪಕ ಇನ್ನೊಂದು ಕನಸಿನ ಕತೆ ಬಿಚ್ಚಿಡತೊಡಗುತ್ತಾನೆ. ಕತ್ತರಿಸಿದ ಮರಗಳ ಕತೆ ಹೇಳುತ್ತಾನೆ. ಮೊದಲ ಕನಸಿನಲ್ಲಿ ಸಣ್ಣ ಹುಡುಗ ಈಗ ಸ್ವಲ್ಪ ದೊಡ್ಡವನಾಗಿದ್ದಾನೆ. ಇದು ಮುಗಿಯುತ್ತಲೇ ಸಾಹಸದ ಕನಸು. ಅನಂತರ ಆತ ಯುದ್ಧ ಮುಗಿಸಿ ಮನೆಗೆ ಬರುತ್ತಿದ್ದಾನೆ. ಮುಂದಿನ ಕನಸಿನಲ್ಲಿ ವ್ಯಾನ್‌ಗೋನ ಕಲಾಕೃತಿಯನ್ನು ನೋಡುತ್ತ ನೋಡುತ್ತ ಅದರ ನಡುವೆ ನಡೆದುಕೊಂಡು ಹೊರಟು ಕಲಾವಿದ ವ್ಯಾನ್‌ಗೋನನ್ನೇ ಭೇಟಿಯಾಗುತ್ತಾನೆ. ಆತನನ್ನು ಹಿಂಬಾಲಿಸಿ ದಾರಿ ತಪ್ಪಿ ಆತನ ಇತರ ಕಲಾಕೃತಿಗಳಲ್ಲಿ ಹಾದು ಹೋಗುತ್ತ ವ್ಯಾನ್‌ಗೋನನ್ನು ಹುಡುಕುತ್ತಾನೆ. ನಂತರ ಅಣು ಸ್ಫೋಟದ ನಂತರದ ಬರ್ಬರತೆ ಜಗತ್ತನ್ನು ನೋಡುತ್ತಿದ್ದಾನೆ. ವಿನಾಶದ ಅಂಚಿನಲ್ಲಿರುವಂತೆ ಕಾಣುವ ಜಗತ್ತಿನಲ್ಲಿ ಅಳುವ ದೆವ್ವಗಳನ್ನು ಕಂಡು ಗಾಬರಿಯಾಗುತ್ತಿದ್ದಾನೆ. ಕೊನೆಯ ಕನಸಿನಲ್ಲಿ ನೀರಿನ ಗಿರಣಿಗಳೇ ತುಂಬಿರುವ ಊರಿನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಂಡು ವಿಸ್ಮಿತನಾಗುತ್ತಿದ್ದಾನೆ.</p>
<p>ಈ ಕನಸುಗಳ ಕತೆಯನ್ನು ನಿರ್ದೇಶಕ ಅಕಿರಾ ಕುರಸೋವಾ ಜೋಡಿಸಿರುವ ರೀತಿಯೇ ಒಂದು ಸುಂದರ ಕತೆಯಾಗುತ್ತದೆ. ಸಣ್ಣ ಹುಡುಗನೊಬ್ಬ ದೊಡ್ಡವನಾಗುವ ಹಾದಿಯಲ್ಲಿ ಕಾಣುವ ಕನಸುಗಳು ವಯಸ್ಸಿನೊಂದಿಗೆ ಮನಃಸ್ಥಿತಿಯಲ್ಲಾಗುವ ಪಲ್ಲಟ, ಭಯ ಮತ್ತು ಗೊಂದಲಗಳನ್ನು ಸುಂದರವಾಗಿ ಬಿಂಬಿಸುತ್ತವೆ. ಬಾಲ್ಯದ ಕನಸಿಗೆ ಇರುವ ರಮ್ಯ ಗುಣ ಮುಂದಿನ ಕನಸಿನಲ್ಲಿ ಕಮ್ಮಿಯಾಗಿ, ಅದರ ಮುಂದಿನ ಕನಸಿನಲ್ಲಿ ಇನ್ನೂ ಕಮ್ಮಿಯಾಗಿ, ಕೊನೆ ಕೊನೆಯಲ್ಲಿ ಮನುಕುಲದ ವೇದನೆ, ವಿಶಾಶದ ಕತೆಯಾಗುತ್ತದೆ. ಈ ಹಾದಿಯನ್ನು ಕುರಸೋವಾ ಹೇಳಿರುವ ರೀತಿಯೂ ಅಷ್ಟೇ ಪರಿಣಾಮಕಾರಿ. ಮೊದಲ ಕನಸಿನಲ್ಲಿ ಅಮ್ಮನ ಮಾತು ಕೇಳದೇ ನರಿಗಳ ಮದುವೆ ನೋಡಿದ ಹುಡುಗ ದೊಡ್ಡವನಾಗುತ್ತ ಕಡಿದು ಹಾಕಿದ ಮರಗಳ ನಡುವೆ ನಿಂತು ಅಳುತ್ತಾನೆ. ಅನಂತರ ಮಂಜುಗಡ್ಡೆಗಳ ಬೆಟ್ಟ ಹತ್ತುವ ಸಾಹಸ ಮಾಡುತ್ತಾನೆ. ಯುದ್ಧದಲ್ಲಿ ಸತ್ತುಹೋದ ತನ್ನದೇ ತುಕಡಿಯ ಸೈನಿಕರು ಹಿಂಬಾಲಿಸುವುದು ನೋಡಿ ಬೆಚ್ಚಿ ಬೀಳುತ್ತಾನೆ. ಕಲಾಕೃತಿಗಳನ್ನು ವ್ಯಾನ್‌ಗೋನನ್ನು ಹುಡುಕುತ್ತ ದಿಕ್ಕುತಪ್ಪುತ್ತಾನೆ. ಅಣುರಿಯಾಕ್ಟರ್‌ಗಳ ಅನಾಹುತ ಕಂಡು ಬೆಚ್ಚಿ ಬೀಳುತ್ತಾನೆ. ಅಳುವ ದೆವ್ವಗಳನ್ನು ನೋಡಿ ಭಯವಾಗಿ ಕತ್ತಲೆಯಲ್ಲಿ ಕಳೆದು ಹೋಗುತ್ತಾನೆ. ಕೊನೆಯಲ್ಲಿ ಆಧುನಿಕತೆ, ತಂತ್ರಜ್ಞಾನಗಳಿಂದ ದೂರ ಇರುವ ನೀರಿನ ಗಿರಣಿಗಳಿರುವ ಹಳ್ಳಿಯ ಬದುಕನ್ನು ನೋಡಿ ವಿಸ್ಮಯಗೊಳ್ಳುತ್ತಾನೆ. ವಿಜ್ಞಾನ, ಆಧುನಿಕತೆ ಮತ್ತು ತಂತ್ರಜ್ಞಾನದಿಂದ ದೂರ ಇರುವ ಊರು ಹೇಗೆ ಆರೋಗ್ಯಕರವಾಗಿದೆಯಲ್ಲಾ ಎಂದು ಕನವರಿಸುತ್ತಾನೆ. ಹೀಗೆ ಕನಸುಗಳ ಕತೆಯ ಮೂಲಕ ಕುರಸೋವಾ ಮನುಷ್ಯನ ಬೆಳವಣಿಗೆ, ದುರಂತ ಮತ್ತು ಕೊನೆಯಲ್ಲಿ ಆರೋಗ್ಯಕರ ಬದುಕಿಗಾಗಿನ ಕನವರಿಕೆಯನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತಾರೆ.</p>
<p>ಇದು ಕುರಸೋವಾ ಮಾಡಿದ ಬಣ್ಣದ ಚಿತ್ರಗಳಲ್ಲಿ ಒಂದು. ಬಣ್ಣಗಳನ್ನು ಈ ಚಿತ್ರದಲ್ಲಿ ಅವರು ಬಳಸಿಕೊಂಡಿರುವ ರೀತಿ ಬೆರಗು ಮೂಡಿಸುತ್ತದೆ. ದೃಶ್ಯಗಳನ್ನು ಸಂಯೋಜಿಸಿದ ರೀತಿ, ಕತೆ ಹೇಳುತ್ತ ಹೋದ ರೀತಿಯೂ ಅಷ್ಟೇ ಪರಿಣಾಮಕಾರಿ. ವಿನ್ಸೆಂಟ್‌ ವ್ಯಾನ್‌ಗೋನ ಕಲಾಕೃತಿಗಳನ್ನು ನೋಡುತ್ತ ನಿಂತ ಒಬ್ಬ ವಿದ್ಯಾರ್ಥಿ ಆತನ ಕಲಾಕೃತಿಗಳ ಜಗತ್ತಿಗೇ ಹೋಗಿಬಿಡುವ ಮತ್ತು ಅಲ್ಲಿ ಕಲಾವಿದನನ್ನು ಭೇಟಿಯಾಗಿಬಿಡುವ, ಆತನನ್ನು ಹಿಂಬಾಲಿಸುತ್ತ ದಾರಿ ತಪ್ಪಿಬಿಡುವ ಕಲ್ಪನೆಯೇ ರೋಮಾಂಚನ ಉಂಟುಮಾಡುತ್ತದೆ.</p>
<p>ಚಿತ್ರ ಎಂಟು ಕನಸುಗಳ ಗುಚ್ಛವಾದರೂ, ಎಂಟು ಬೇರೆ ಬೇರೆ ಕನಸುಗಳ ಕತೆ ಈ ಚಿತ್ರದಲ್ಲಿ ಇದ್ದರೂ ಇದನ್ನು ನೋಡಿದಾಗ ಒಂದೇ ಕತೆ ನೋಡಿದ ಅನುಭವ ದಕ್ಕುತ್ತದೆ. ಒಂದು ಕತೆಯಿಂದ ಇನ್ನೊಂದು ಕತೆಗೆ ಸಹಜವಾಗಿ ನಡೆದುಕೊಂಡು ಹೋದ ಹಾಗೆ ಭಾಸವಾಗುತ್ತದೆ. ಇದು ಕುರಸೋವಾ ಸೃಷ್ಟಿಸಿದ ಕನಸುಗಳ ಗೆಲುವು.</p>
<p></font></p>
]]></content:encoded>
</item>
<item>
<title><![CDATA[ಮೂಡುವನು ರವಿ ಮೂಡುವನು!]]></title>
<link>http://pichchar.wordpress.com/2007/08/01/%e0%b2%ae%e0%b3%82%e0%b2%a1%e0%b3%81%e0%b2%b5%e0%b2%a8%e0%b3%81-%e0%b2%b0%e0%b2%b5%e0%b2%bf-%e0%b2%ae%e0%b3%82%e0%b2%a1%e0%b3%81%e0%b2%b5%e0%b2%a8%e0%b3%81/</link>
<pubDate>Wed, 01 Aug 2007 09:44:52 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/08/01/%e0%b2%ae%e0%b3%82%e0%b2%a1%e0%b3%81%e0%b2%b5%e0%b2%a8%e0%b3%81-%e0%b2%b0%e0%b2%b5%e0%b2%bf-%e0%b2%ae%e0%b3%82%e0%b2%a1%e0%b3%81%e0%b2%b5%e0%b2%a8%e0%b3%81/</guid>
<description><![CDATA[ನಟನೆಯಿಂದ ನಿರ್ದೇಶನ, ಅಲ್ಲಿಂದ ಸಂಗೀತ ನಿರ]]></description>
<content:encoded><![CDATA[<p><font size="3">ನಟನೆಯಿಂದ ನಿರ್ದೇಶನ, ಅಲ್ಲಿಂದ ಸಂಗೀತ ನಿರ್ದೇಶನ, ಹಾಡು, ಕ್ಯಾಮರಾ, ಸಂಕಲನ ಮತ್ತು ವ್ಯವಕಲನ! ರವಿಚಂದ್ರನ್‌ ಮಾತುಗಳು ಹೀಗೆ ಜಿಗಿದಾಡುತ್ತವೆ. 24 ಫ್ರೇಮುಗಳ ವೇಗವನ್ನು ಮೀರಿ ಎಲ್ಲೆಂದರಲ್ಲಿ ಸರಿದಾಡುತ್ತವೆ. ಈ ಮಾತುಗಳು ಟ್ರಾಲಿಯ ಹಳಿಯ ಮೇಲೆ ಶಿಸ್ತುಬದ್ಧವಾಗಿ ಚಲಿಸುವುದಿಲ್ಲ. ಸ್ಟೆಡಿ ಕ್ಯಾಮರಾದಂತೆ ಸಿಕ್ಕಿದಲ್ಲೆಲ್ಲ ನುಗ್ಗುತ್ತವೆ. ಏಕೆಂದರೆ ಸಿನಿಮಾ ಕುರಿತು ಮಾತಾಡತೊಡಗಿದರೆ ರವಿಚಂದ್ರನ್‌ ಕ್ರೇಜಿಯಾಗುತ್ತಾರೆ!<!--more--></p>
<p>ಸಿನಿಮಾವನ್ನು ಹುಚ್ಚನಂತೆ ಪ್ರೀತಿಸುವ ರವಿಚಂದ್ರನ್‌ ಬಳಿ `ಮಂಜಿನ ಹನಿ' ಎಂದು ಮಾತು ಶುರುಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ಅವರು `ಅಂತರ್ಯಾಮಿ' ಅಂತ ಹೊಚ್ಚ ಹೊಸ ಸಿನಿಮಾ ಕುರಿತು ಹೇಳತೊಡಗುತ್ತಾರೆ. ಅದೇನು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ `ಕಂಬನಿ' ಅಂತ ಇನ್ನೊಂದು ಸಿನಿಮಾದ ಕತೆ ಹೇಳಿ ಮುಗಿಸಿರುತ್ತಾರೆ. ಅಬ್ಬಬ್ಬಾ ಎಂದು ಕಿಟಕಿಯಾಚೆ ಕಣ್ಣು ಹಾಯಿಸುವಷ್ಟರಲ್ಲಿ `ವಿಂಡೋ' ಅಂತ ಒಂದು ಚಿತ್ರ ಮಾಡಬೇಕು ಎಂದಿದ್ದೇನೆ ಎನ್ನುತ್ತಾರೆ ರವಿ. `ಕ್ಯಾಮರಾ ಒಂದೇ ಕಡೆ ಇರುತ್ತದೆ. ಕಿಟಕಿಯ ಕರ್ಟನ್‌ ಆಚೆ ಏನೇನೋ ನಡೆಯುತ್ತದೆ' ಎಂದು ಕ್ರೇಜಿ ಐಡಿಯಾಗಳ ಜಗತ್ತಿನಲ್ಲಿ ಬದುಕುವ ಜನರೇ ಕ್ರೇಜಿಯಾಗುವಂಥ ಐಡಿಯಾ ಮುಂದಿಡುತ್ತಾರೆ.</p>
<p>ರವಿಚಂದ್ರನ್‌ ಸಿನಿಮಾ ಬಿಟ್ಟು ಬೇರೆ ಯೋಚನೆ ಮಾಡುವುದಿಲ್ಲ. ಮೂರು ಮೊಬೈಲುಗಳನ್ನು ಇಟ್ಟುಕೊಂಡರೂ ಗೊತ್ತಿಲ್ಲದ ನಂಬರುಗಳಿಂದ ಬರುವ ಕರೆಗಳನ್ನು ಸ್ವೀಕರಿಸುವುದಿಲ್ಲ. ಕೆಲವು ನಂಬರುಗಳು ಗೊತ್ತಿರುವುದರಿಂದಲೇ ಸ್ವೀಕರಿಸುವುದಿಲ್ಲ! ಹೀಗಿದ್ದರೂ ಬಿಡುವಿನ ಸಮಯದಲ್ಲಿ ಮುಖವನ್ನೇ ನೋಡದ ಹದಿನಾರೋ ಹದಿನೇಳೋ ವರ್ಷದ ಅನಾಮಿಕ ಅಭಿಮಾನಿ ಹುಡುಗಿಯೊಂದಿಗೆ ಮಾತಿಗಿಳಿಯುತ್ತಾರೆ. ಹಾಗೆ ಮಾತಾಡುತ್ತಲೇ ನೀಲಿ ನೋಟ್‌ಬುಕ್‌ ತೆಗೆದು ತಾವು ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಕೇಳಿಸತೊಡಗುತ್ತಾರೆ.</p>
<p>ರವಿಚಂದ್ರನ್‌ ನೂರಾರು ರಾಗಗಳನ್ನು ಸಂಯೋಜಿಸಿ ಇಟ್ಟಿದ್ದಾರೆ. ಹತ್ತಾರು ರಾಗಗಳಿಗೆ ಹಾಡುಗಳನ್ನು ಬರೆದಿಟ್ಟಿದ್ದಾರೆ. ಕೆಲವು ಹಾಡುಗಳ ಪಲ್ಲವಿ ಮುಗಿದಿದೆ. ಇನ್ನು ಕೆಲವು ಹಾಡುಗಳ ಚರಣ ಮುಗಿದಿದೆ. ಸರಳ ಶಬ್ದಗಳನ್ನೇ ಆರಿಸಿ ಆರಿಸಿ ಹಾಡುಗಳ ಮಾಲೆ ಪೋಣಿಸುತ್ತಾರೆ ರವಿಚಂದ್ರನ್‌. ಈ ಸರಳ ಹಾಡುಗಳ ಮೂಲಕವೇ ಕೆಲವೊಮ್ಮೆ ಗಾಢವಾಗಿ ತಟ್ಟುವುದೂ ಅವರಿಗೆ ಗೊತ್ತಿದೆ. `ಹನಿ ಹನಿ ಸೇರಿ ನೀರಾದೆ' ಎಂದು ಮೊದಲ ಸಾಲು ಬರೆಯವ ರವಿ `ಹರಿಕೃಷ್ಣನ ಪ್ರೇಮಿ ನೀ ರಾಧೆ!' ಎಂದು ಬರೆಯುತ್ತ ಕಾಣದ್ದನ್ನು ಹುಡುಕುವ ಕವಿಯಾಗುತ್ತಾರೆ!</p>
<p>ಖುಷಿಗೊಂದು ಹಾಡು. `ಕಂಬನಿ'ಗೊಂದು ಹಾಡು. ಮಗನ ಇಂಟ್ರಡಕ್ಷನ್‌ಗೆ ಇನ್ನೊಂದೇ ಹಾಡು. ಹಾಡು ಹಾಡು ಹಾಡು ಎಂದು ರವಿಚಂದ್ರನ್‌ ಒಂದು ರಾಶಿ ಹಾಡುಗಳನ್ನು ಪೇರಿಸಿ ಇಟ್ಟಿದ್ದಾರೆ. ಇನ್ನು ಐದು ವರ್ಷ ರಾಗ ಸಂಯೋಜನೆ ಮಾಡುವುದೇ ಬೇಡ ಎನ್ನುವಷ್ಟು ಹಾಡುಗಳು ಅವರ ಖಜಾನೆಯಲ್ಲಿವೆ.</p>
<p><strong>ಇಬ್ಬನಿಯ ಸೃಷ್ಟಿ</strong></p>
<p>ಹುಚ್ಚು ಪ್ರೇಮಿಯಂತೆ ರವಿಚಂದ್ರನ್‌ ಪ್ರೀತಿ ಮಾಡುತ್ತ `ಮಂಜಿನ ಹನಿ' ಮಾಡುತ್ತಿದ್ದಾರೆ. ಸಿಗದಿರುವ ಶಾಟ್‌ಗಾಗಿ ಅವರು ಎಲ್ಲೆಲ್ಲೋ ಅಲೆದಾಡಿದ್ದಾರೆ. ಮಂಜು ಮತ್ತು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ವಾಪಸಾಗಿದ್ದಾರೆ. ದಿನಕ್ಕೊಂದು ಜಾಗಗಳಲ್ಲಿ ಸುತ್ತಾಡುತ್ತ, ಸೀತಾರಾಮ್‌ ಜೊತೆಯಲ್ಲಿ `ಮಂಜಿನ ಹನಿ'ಗಳನ್ನು ಪೋಣಿಸಿದ್ದಾರೆ!</p>
<p>`ಸೆಂಚುರಿ ಗ್ಯಾರಂಟಿ. ಮುಂದಿನದು ದೈವೇಚ್ಛೆ' ಎನ್ನುತ್ತಾ `ಮಂಜಿನ ಹನಿ' ಕುರಿತು ಮಾತಾಡತೊಡಗುತ್ತಾರೆ ರವಿಚಂದ್ರನ್‌. `ಈ ಸಿನಿಮಾದಲ್ಲಿ ನಾನು ಇಲ್ಲಿಯ ತನಕ ಅನುಸರಿಸಿಕೊಂಡು ಬಂದಿದ್ದ ಗ್ರಾಮರ್‌ಗಳನ್ನೆಲ್ಲಾ ಮುರಿದಿದ್ದೇನೆ' ಎನ್ನುವ ಅವರಿಗೆ ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಸಂದೇಶ್‌ ನಾಗರಾಜ್‌ಗಾಗಿ ಈ ಸಿನಿಮಾ ಮಾಡಿಕೊಡುತ್ತಿದ್ದರೂ ಅವರು ಒಂದು ದಿನವೂ ಚಿತ್ರೀಕರಣ ನಡೆಯುತ್ತಿರುವ ತಾಣಕ್ಕೆ ಬಂದಿದ್ದಿಲ್ಲವಂತೆ. ಎಲ್ಲವೂ ಸರಿ ಹೋದರೆ ನವೆಂಬರ್‌ ಮೊದಲ ವಾರ ಚಿತ್ರದ ಬಿಡುಗಡೆ.</p>
<p><strong>ಚಿತ್ರಕತೆ ಕತೆ!</strong></p>
<p>ರವಿಚಂದ್ರನ್‌ ಸ್ಕ್ರಿಪ್ಟ್‌ ಸಿದ್ಧಪಡಿಸುವ ರೀತಿ ವಿಶಿಷ್ಟ. ಚಿತ್ರಕತೆಯೆಂದರೆ ತಯಾರಾಗಲಿರುವ ಸಿನಿಮಾದ ನೀಲಿನಕ್ಷೆ ಮಾತ್ರ ಎಂದು ಅವರಿಗೆ ಅನಿಸುವುದಿಲ್ಲ. ಸಿಡ್‌ ಫೀಲ್ಡ್‌ರಂಥ ಚಿತ್ರಕತೆ ಪಂಡಿತರು ಹೇಳುವ ಸೂತ್ರಗಳ ಕುರಿತೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಅದಕ್ಕೆ ತಮ್ಮದೇ ಶೈಲಿಯನ್ನು ಅನುಸರಿಸುತ್ತಾರೆ.</p>
<p>ಚಿತ್ರಕತೆಯನ್ನು ಇಂಗ್ಲಿಷಿನಲ್ಲಿ ಬರೆಯುತ್ತಾರೆ. ಅದಕ್ಕಾಗಿಯೇ ಲ್ಯಾಪ್‌ಟಾಪೊಂದು ಅವರ ಜೊತೆಯಿರುತ್ತದೆ. ಚಿತ್ರಗಳನ್ನೆಲ್ಲ ಕಂಪ್ಯೂಟರ್‌ನಲ್ಲಿಯೇ ಕತ್ತರಿಸಿ, ಅಕ್ಷರಗಳನ್ನೆಲ್ಲ ಸಿಂಗರಿಸಿ ಅವರು ಚಿತ್ರಕತೆ ಸಿದ್ಧಪಡಿಸುತ್ತಾರೆ. ಹೀಗೆ ಸಿದ್ಧವಾದ ಚಿತ್ರಕತೆಯನ್ನು ಅತ್ಯುತ್ತಮವಾದ ಆರ್ಟ್‌ ಪೇಪರ್‌ನಲ್ಲಿ ಬಣ್ಣ ಬಣ್ಣಗಳೊಂದಿಗೆ ಮುದ್ರಿಸಿ ಅದನ್ನು ಬೈಂಡ್‌ ಮಾಡಿಸುತ್ತಾರೆ. ಚಿತ್ರಕತೆಯ ಹಿನ್ನೆಲೆಯಲ್ಲಿ ರವಿಚಂದ್ರನ್‌ ಅವರ ಬಣ್ಣ ಬಣ್ಣದ, ವಿಧವಿಧವಾದ ಚಿತ್ರಗಳು ಸೇರಿಕೊಂಡು ಅದು ನಿಜ ಅರ್ಥದಲ್ಲಿ ಚಿತ್ರಕತೆಯಾಗುತ್ತದೆ! ಈ ಪುಸ್ತಕದ ಕುರಿತು ಅವರಿಗೆ ಇನ್ನಿಲ್ಲದ ಪ್ರೀತಿ. ಇದು ಅವರ ಸೂಟ್‌ಕೇಸಿನಲ್ಲಿ ಭದ್ರವಾಗಿರುತ್ತದೆ. ಚಿತ್ರೀಕರಣ ನಡೆಯುವಾಗ ಚಿತ್ರಕತೆ ಪುಸ್ತಕವನ್ನು ಯಾರಾದರೂ ಗಡಿಬಿಡಿಯಿಂದ ತಿರುವಿ ಹಾಕುತ್ತಿದ್ದರೆ ಅವರು ಚಡಪಡಿಸುತ್ತಾರೆ. ಈಗಷ್ಟೇ ಪ್ರಸವವಾಗಿರುವ ಮಗುವಿನಷ್ಟೇ ಜೋಪಾನದಿಂದ ಅದನ್ನು ಎತ್ತಿಕೊಳ್ಳಬೇಕು ಎನ್ನುವುದು ಅವರ ಆಸೆ.</p>
<p><strong>ಹೊಕ್ಕಳು, ದ್ರಾಕ್ಷಿ ಮತ್ತು ನವಿಲುಗರಿ</strong></p>
<p>ಹೊಕ್ಕಳ ಮೇಲೆ ದ್ರಾಕ್ಷಿ ಉದುರಿಸುತ್ತಾರೆ ಎಂದು ತಮಾಷೆ ಮಾಡಿದರೆ ರವಿಚಂದ್ರನ್‌ಗೆ ಇಷ್ಟವಾಗುವುದಿಲ್ಲ. `ಹೊಕ್ಕಳು ಅಥವಾ ಹೊಟ್ಟೆ ನನಗೆ ಯಾವಾಗಲೂ ಅಷ್ಟು ಚೀಪ್‌ ಆಗಿ ಕಂಡಿಲ್ಲ' ಎನ್ನುತ್ತ ಫಿಲಸಫಿಕಲ್‌ ಆಗುತ್ತಾರೆ ರವಿ. `ನಾನು ಹುಟ್ಟಿರುವುದೇ ಹೊಟ್ಟೆಯಲ್ಲಿ. ಅದರ ಕುರಿತು ನನಗೆ ಅಪಾರವಾದ ಗೌರವ' ಎನ್ನುವುದು ಅವರ ಅಭಿಪ್ರಾಯ.</p>
<p>ಹುಡುಗಿ ಮತ್ತು ನವಿಲುಗರಿ ವಿಷಯದಲ್ಲಿ ಅವರು ಯಾವಾಗಲೂ ರಾಜಿಯಾಗುವುದಿಲ್ಲ. `ನವಿಲುಗರಿ ಇರುವ ಒಂದಾದರೂ ಶಾಟ್‌ ಇರಬೇಕು ಅಂತ ನನಗೆ ಆಸೆ' ಎನ್ನುತ್ತಾರೆ ಅವರು. ನವಿಲುಗರಿ ಇದ್ದಮೇಲೆ ಕೇಳಬೇಕೇ? ಪಕ್ಕದಲ್ಲೇ ನಾಯಕಿಯಿರುತ್ತಾಳೆ. ಅವಳ ಪಕ್ಕದಲ್ಲಿ ನಿಲ್ಲುವ ನಾಯಕ ಕನಸುಗಾರನಾಗಿರುತ್ತಾನೆ. ಅದಕ್ಕೆ ಸೀತಾರಾಮ್‌ ಬೆಳಕುಗಳ ಅಲಂಕಾರ ಮಾಡುತ್ತಾರೆ. ಕನಸುಗಾರನ ಬಣ್ಣದ ಕನಸು ಹೀಗೆ ಮುಂದುವರೆಯುತ್ತದೆ!</p>
<p></font></p>
]]></content:encoded>
</item>
<item>
<title><![CDATA[ಉಪ್ಪಿಯ ನೆನಪುಗಳು]]></title>
<link>http://pichchar.wordpress.com/2007/04/11/%e0%b2%89%e0%b2%aa%e0%b3%8d%e0%b2%aa%e0%b2%bf%e0%b2%af-%e0%b2%a8%e0%b3%86%e0%b2%a8%e0%b2%aa%e0%b3%81%e0%b2%97%e0%b2%b3%e0%b3%81/</link>
<pubDate>Wed, 11 Apr 2007 04:28:03 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/04/11/%e0%b2%89%e0%b2%aa%e0%b3%8d%e0%b2%aa%e0%b2%bf%e0%b2%af-%e0%b2%a8%e0%b3%86%e0%b2%a8%e0%b2%aa%e0%b3%81%e0%b2%97%e0%b2%b3%e0%b3%81/</guid>
<description><![CDATA[ಡಾ.ರಾಜ್‌ಕುಮಾರ್‌ ಇಲ್ಲದೇ ಒಂದು ವರ್ಷ. 365 ದಿ]]></description>
<content:encoded><![CDATA[<p><font size="3"><strong><img vspace="3" align="left" width="87" src="http://pichchar.files.wordpress.com/2007/04/uppi-gokarna.jpg" hspace="6" alt="uppi-gokarna.jpg" height="99" style="width:87px;height:99px;" />ಡಾ.</strong>ರಾಜ್‌ಕುಮಾರ್‌ ಇಲ್ಲದೇ ಒಂದು ವರ್ಷ. 365 ದಿನಗಳ ನಂತರವೂ ವರನಟನ ಸಾವು ನಮ್ಮ ಮನಸ್ಸಿನಲ್ಲಿನ್ನೂ ಜೀವಂತವಾಗಿದೆ. `ಓಂ' ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ರಾಜ್‌ಕುಮಾರ್‌ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು ನಟ, ನಿರ್ದೇಶಕ ಉಪೇಂದ್ರ. ತಮ್ಮ ಮನೆಯ ಟೆರೇಸಿನ ಮೇಲೆ ಕುಳಿತು ಆ ದಿನಗಳನ್ನು ಉಪ್ಪಿ ನೆನಪು ಮಾಡಿಕೊಂಡರು. ಆಗ ಹೆಕ್ಕಿಕೊಂಡ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ.<!--more--></font><font size="3">.......</font><font size="3">.......</p>
<p>.......</p>
<p>ರಾಜ್‌ಕುಮಾರ್‌ ಅವರನ್ನು ಮೊದಲೂ ನಾನು ಭೇಟಿ ಮಾಡಿದ್ದೆ. ಆ ಸಮಾರಂಭದಲ್ಲಿ, ಈ ಸಮಾರಂಭದಲ್ಲಿ, ಜನಗಳ ನಡುವೆ ಹೀಗೆ ಅವರನ್ನು ಕಂಡಿದ್ದೆ. ಹೀಗಿದ್ದರೂ ಅವರು ನನಗೆ ಸರಿಯಾಗಿ ಸಿಕ್ಕಿದ್ದು ಮಾತ್ರ `ಓಂ' ಚಿತ್ರದ ನಿರ್ದೇಶನದ ಸಂದರ್ಭದಲ್ಲಿ.</p>
<p>ಇನ್ನೂ ನೆನಪಿದೆ. `ಓಂ' ಚಿತ್ರದ ಕತೆ ಹೇಳಲು ಹೋಗುವಾಗ ನಾನು ಜೊತೆಯಲ್ಲಿ ಪೇಪರ್‌ ಕಟ್ಟಿಂಗ್‌ಗಳನ್ನು ಇಟ್ಟುಕೊಂಡು ಹೋಗಿದ್ದೆ. ಆಯಿಲ್‌ ಧಂಧೆಯ ಕುರಿತು ಕಲೆ ಹಾಕಿದ ಮಾಹಿತಿಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದೆ. ಅದನ್ನೆಲ್ಲ ಅವರಿಗೆ ಆರಂಭದಲ್ಲಿಯೇ ವಿವರಿಸಿದೆ. ಹೀಗೊಂದು ಧಂಧೆಯಿದೆ ಮತ್ತು ಅದರಲ್ಲಿ ಈ ರೀತಿಯ ಜನರೆಲ್ಲಾ ಇದ್ದಾರೆಂದು ಹೇಳುತ್ತ ಹೀರೋ ಕ್ಯಾರೆಕ್ಟರ್‌ ಕುರಿತು ಹೇಳಿದೆ. ಇದನ್ನು ಆದಷ್ಟು ನೈಜವಾಗಿ ಚಿತ್ರೀಕರಿಸೋಣ ಅಂತ ನನಗಿರುವ ಆಸೆಯನ್ನು ಹೇಳಿಕೊಂಡಿದ್ದೆ.</p>
<p>ರಾಜ್‌ಕುಮಾರ್‌ ಖುಷಿಪಟ್ಟರು. ಚಿತ್ರದ ಕತೆಗಾಗಿ ಮಾಡಿಕೊಂಡ ತಯಾರಿಗಳನ್ನೆಲ್ಲ ಆಸಕ್ತಿಯಿಂದ ಗಮನಿಸಿ ಒಳ್ಳೆಯ ನಿರ್ದೇಶಕನಾಗುತ್ತೀಯಾ ಎಂದು ಮೆಚ್ಚಿಕೊಂಡರು. ಆಮೇಲೆ ನಾನು ಕತೆ ಹೇಳಿದೆ. ಸರಿಯಾಗಿ ನೆನಪಿಲ್ಲ. ಸಾಮಾನ್ಯವಾಗಿ ನಾನು ಕತೆ ಹೇಳುವಾಗ ಒಂದು ಟ್ರಾನ್ಸ್‌ನಲ್ಲಿ ಹೇಳುತ್ತ ಹೋಗುತ್ತೇನೆ. ಬಹುಶಃ ಆ ದಿನವೂ ನಾನು ಅದೇ ರೀತಿ ಕತೆ ಹೇಳಿರಬೇಕು.</p>
<p>ಡಾ.ರಾಜ್‌ಕುಮಾರ್‌ ಆಸಕ್ತಿಯಿಂದ ಕತೆ ಕೇಳುತ್ತಿದ್ದರು. ಅವರ ಜೊತೆಯಲ್ಲಿ ಕತೆ ಕೇಳಲು ವರದಪ್ಪ ಇರಲೇಬೇಕಿತ್ತು. ನನಗೆ ಅನ್ನಿಸುವ ಪ್ರಕಾರ ಅವರಿಬ್ಬರೂ ಸೇರಿದಾಗ ಅದೊಂದು ಪರಿಪೂರ್ಣ ಚರ್ಚೆಗೆ ಅವಕಾಶ ಒದಗಿಸುತ್ತಿತ್ತು. ಏಕೆಂದರೆ ವರದಪ್ಪ ಒಟ್ಟಾರೆ ಕತೆಯ ಗ್ರಾಫ್‌ ನೋಡುತ್ತಿದ್ದರು. ಓಹೋ, ಕತೆ ಹೀಗೆ ಶುರುವಾಗಿ ಹೀಗೆಲ್ಲಾ ಆಗಿ ಅಲ್ಲೊಂದು ತಿರುವು ಬಂದು ಹೀಗೆ ಮುಗಿಯುತ್ತದೆ ಎಂದು ಚಿತ್ರದ ಕತೆಯನ್ನು ಅವರು ಒಟ್ಟಾರೆಯಾಗಿ ಗ್ರಹಿಸುತ್ತಿದ್ದರು. ರಾಜ್‌ಕುಮಾರ್‌ ಹೇಳಿಕೇಳಿ ಒಬ್ಬರು ಕಲಾವಿದರು. ಅವರು ಪ್ರತಿ ಸೀನ್‌ನ ಒಳಕ್ಕೆ ಇಳಿಯುತ್ತಿದ್ದರು. ಯಾವ್ಯಾವ ಸೀನ್‌ನಲ್ಲಿ ಏನೇನಿದೆ ಎಂದು ಕೇಳುತ್ತ ಅದರೊಳಕ್ಕೆ ಪ್ರವೇಶ ಮಾಡುತ್ತಿದ್ದರು. `ಅಲ್ಲಿ ಕಾರು ನಿಲ್ಲುತ್ತೆ. ಅಲ್ಲಿಂದ ಇಳಿದ ಹೀರೋ ಹಾಗೆ ಮುಂದೆ ಬಂದು ಹೀಗೆ ಮಾಡುತ್ತಾನೆ' ಎಂದೆಲ್ಲ ಮನನ ಮಾಡುತ್ತ ಅವರು ಕತೆಯನ್ನು ಕೇಳುತ್ತಿದ್ದರು. ಅಲ್ಲೇ ಮೆಚ್ಚುಗೆ ವ್ಯಕ್ತಪಡಿಸುತ್ತ ಹೇಳುವಾತನಿಗೆ ಖುಷಿ ಕೊಡುತ್ತಿದ್ದರು.</p>
<p>ಆದರ್ಶಗಳ ಚಿಂತನೆಯಲ್ಲಿ ಇದ್ದ ಕಾಲ ಅದು. ನಾನು ಅವರಿಗೆ ಕೇಳಿದ ಮೊದಲ ಪ್ರಶ್ನೆ ನನಗೆ ಈಗಲೂ ನೆನಪಿದೆ. ನಾನು ಕೇಳಿದ್ದೆ: `ನಿಮ್ಮ ದೃಷ್ಟಿಯಲ್ಲಿ ಸಮಾಜ ಸೇವೆ ಅಂದರೆ ಏನು?' ಅಂತ. `ಸಮಾಜ ಅಂದರೆ ಯಾರು? ನಾನು, ನೀವು, ಅಕ್ಕ, ತಂಗಿ, ಅಣ್ಣ, ಅಪ್ಪ ಇವರೆಲ್ಲ ತಾನೇ? ಅವರೆಲ್ಲ ಅವರವರ ಸೇವೆಯನ್ನು ಸರಿಯಾಗಿ ಮಾಡಿಕೊಂಡರೆ ಅದೇ ಸಮಾಜಸೇವೆ' ಎಂದು ರಾಜ್‌ಕುಮಾರ್‌ ಉತ್ತರ ಕೊಟ್ಟಿದ್ದರು. ಈ ಮಾತಿನಲ್ಲಿ ಎಷ್ಟು ಸೊಗಸಾದ ಅರ್ಥ ಇದೆ ನೋಡಿ.</p>
<p>`ಓಂ' ಚಿತ್ರೀಕರಣ ಶುರುವಾಯಿತು. ಒಂದು ದೃಷ್ಟಿಯಲ್ಲಿ ನನಗೆ ಸರಿಯಾದ ಬ್ಯಾನರ್‌, ಸರಿಯಾದ ಹೀರೋ ಸಿಕ್ಕಿದ ಮೊದಲ ಚಿತ್ರ ಅದು. ಕತೆಯನ್ನು ವರದಪ್ಪ ಮತ್ತು ರಾಜ್‌ಕುಮಾರ್‌ ಇಷ್ಟಪಟ್ಟಿದ್ದರು. ಚಿತ್ರೀಕರಣ ನಡೆಯುತ್ತಿರುವಾಗಲೂ ಯಾವಾಗೋ ಒಮ್ಮೆ ಬಂದಿದ್ದರು. ಶಿವರಾಜ್‌ಕುಮಾರ್‌ ಅವರಿಗಂತೂ ನಾಲ್ಕನೇ ದಿನಕ್ಕೇ ಚಿತ್ರೀಕರಣ ಖುಷಿಕೊಟ್ಟು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ನನ್ನನ್ನು ಹೋಲಿಸಿದ್ದರು. ಹೀಗಿದ್ದರೂ ಕೆಲವರಿಗೆ ಅನುಮಾನಗಳಿದ್ದವು. `ಅವರನ್ನು ಯಾರೂ ಏನೂ ಡಿಸ್ಟರ್ಬ್‌ ಮಾಡಬೇಡಿ' ಅಂತ ಈ ಹಂತದಲ್ಲಿ ವರದಪ್ಪನವರು ಹೇಳಿದ್ದರಂತೆ. ಹೀಗಾಗಿ ಚಿತ್ರವನ್ನು ಅಂದುಕೊಂಡಂತೆ ಚಿತ್ರೀಕರಿಸುವುದು ಸಾಧ್ಯವಾಯಿತು.</p>
<p>ಚಿತ್ರೀಕರಣ ಮುಗಿಯಿತು. ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೆಲ್ಲ ಮುಗಿದು ಮೊದಲ ಕಾಪಿ ಬಂತು. ಸಿನಿಮಾ ಸೆನ್ಸಾರ್‌ ಆಗಬೇಕು. ಈ ಹಂತದಲ್ಲಿ ವರದಪ್ಪ ಮತ್ತು ರಾಜ್‌ಕುಮಾರ್‌ ಗಾಜನೂರಿಗೆ ಹೋಗಿಬಿಟ್ಟಿದ್ದರು. ಹೀಗಾಗಿ ಅವರು ಸಿನಿಮಾ ನೋಡಿರಲಿಲ್ಲ.</p>
<p>ಸೆನ್ಸಾರ್‌ ಮಂಡಳಿ ಒಂದಿಷ್ಟು ಕಟ್‌ಗಳನ್ನು ಸೂಚಿಸಿತ್ತು. ಅದರಲ್ಲಿ ಕೆಲವಷ್ಟನ್ನು ನಾನು ಅರೆಮನಸ್ಸಿನಿಂದ ಒಪ್ಪಿಕೊಂಡಿದ್ದೆ. ಬೇರೆ ಕಟ್‌ಗಳನ್ನೂ ಒಪ್ಪಿಕೊಂಡುಬಿಡೋಣ ಎಂಬ ಒತ್ತಡ ಇತ್ತು. ಆದರೆ ಯಾಕೋ ನನಗೆ ಚಿತ್ರವನ್ನು ವರದಪ್ಪ ಮತ್ತು ರಾಜ್‌ಕುಮಾರ್‌ ನೋಡಬೇಕು ಅನಿಸಿತು. ಅವರೂ ಈ ಕಟ್‌ಗಳನ್ನು ಸೂಚಿಸಿದರೆ ಸೆನ್ಸಾರ್‌ ಜೊತೆ ವಾದ ಮಾಡುವುದು ಬೇಡ ಅಂದುಕೊಂಡಿದ್ದೆ. ಗಾಜನೂರಿನಿಂದ ಹಿಂದಿರುಗಿದವರೇ ಸಿನಿಮಾ ನೋಡಿದರು. ನಾನು ಕಟ್‌ಗೆ ಒಪ್ಪಿಕೊಂಡಿದ್ದನ್ನೂ ಕಟ್‌ ಮಾಡಕೂಡದು ಎಂದು ಇಬ್ಬರೂ ಹೇಳಿದರು. ಕೊನೆಗೆ ಸಿನಿಮಾ ಹೇಗಿದೆಯೋ ಹಾಗೆಯೇ ಹೊರಕ್ಕೆ ಬಂತು. ಜನರು, ವಿಮರ್ಶಕರು, ಬೇರೆ ಭಾಷೆಯವರು ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.</p>
<p>ಇದಾಗಿ ಒಂದೆರಡು ವಾರ ಕಳೆದಿರಬೇಕು. ಸಿನಿಮಾ ಎಲ್ಲಾ ಕಡೆ ಚೆನ್ನಾಗಿ ಓಡುತ್ತಿತ್ತು. ಜನರಿಂದಲೂ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ. ಈ ಹಂತದಲ್ಲಿ ರಾಜ್‌ಕುಮಾರ್‌ ಮನೆಗೆ ಹೋದೆ. `ಓಂ' ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆಯಿಂದ ಮನಸ್ಸು ಬ್ಲ್ಯಾಂಕ್‌ ಆಗಿತ್ತು. ಮುಂದೇನು ಎನ್ನುವುದು ಗೊತ್ತಿರಲಿಲ್ಲ.</p>
<p>ಹೋಗುತ್ತಲೇ ನನ್ನ ಮುಖ ನೋಡಿದ ರಾಜ್‌ಕುಮಾರ್‌ ಆಶ್ಚರ್ಯಪಟ್ಟರು. ಯಾಕೆ ಹೀಗಿದ್ದೀರಿ ಎಂದು ಕೇಳಿದರು. `ಸಿನಿಮಾ ಚೆನ್ನಾಗಿ ಓಡುತ್ತಿದೆ. ನೀವು ಫ್ಲಾಪ್‌ ಸಿನಿಮಾ ಕೊಟ್ಟವರಂತೆ ಮುಖ ಮಾಡಿಕೊಂಡಿದ್ದೀರಿ' ಎಂದು ಪ್ರೀತಿಯಿಂದ ಗದರಿದರು. ನನಗೆ ಆ ದಿನ ಕಣ್ಣೀರೇ ಬಂದುಬಿಟ್ಟಿತ್ತು.</p>
<p>ಹೀಗೆ `ಓಂ' ಚಿತ್ರ ಮಾಡಿದ ದಿನಗಳನ್ನು ಮಾಡಿಕೊಂಡರೆ ರಾಜ್‌ಕುಮಾರ್‌ ಜೊತೆ ಕಳೆದ ಕ್ಷಣಗಳೇ ಬುತ್ತಿ ಬಿಚ್ಚಿಕೊಳ್ಳುತ್ತವೆ.</p>
<p><strong><em>(`ಓಂ' ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್‌ ವತಿಯಿಂದ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ್ದರು. ಆ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭೂಗತ ಜಗತ್ತು, ಅಲ್ಲಿರುವ ಆಯಿಲ್‌ ಧಂಧೆಯ ನಡುವೆ ಅರಳುವ ಪ್ರೇಮಕತೆಯ ಚಿತ್ರ ಆ ದಿನಗಳಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತ್ತು)</em></strong></p>
<p></font></p>
]]></content:encoded>
</item>
<item>
<title><![CDATA[ವರದಿ:ಪ್ರೇಮ್‌ ಗೀತೆ]]></title>
<link>http://pichchar.wordpress.com/2007/01/30/%e0%b2%b5%e0%b2%b0%e0%b2%a6%e0%b2%bf%e0%b2%aa%e0%b3%8d%e0%b2%b0%e0%b3%87%e0%b2%ae%e0%b3%8d%e2%80%8c-%e0%b2%97%e0%b3%80%e0%b2%a4%e0%b3%86/</link>
<pubDate>Fri, 30 Mar 2007 07:03:35 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/01/30/%e0%b2%b5%e0%b2%b0%e0%b2%a6%e0%b2%bf%e0%b2%aa%e0%b3%8d%e0%b2%b0%e0%b3%87%e0%b2%ae%e0%b3%8d%e2%80%8c-%e0%b2%97%e0%b3%80%e0%b2%a4%e0%b3%86/</guid>
<description><![CDATA[ಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್‌]]></description>
<content:encoded><![CDATA[<p align="left"><font size="3"><img vspace="3" align="left" src="http://pichchar.files.wordpress.com/2007/03/prem-rakshitha-1.jpg" hspace="6" alt="prem-rakshitha-1.jpg" />ಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್‌ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್‌ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ'ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್‌ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ.<!--more--></font></p>
<p><font size="3">ರಾಮ್‌ಪ್ರಸಾದ್‌ ಮತ್ತು ಪ್ರೇಮ್‌ ಎಂದಿನಂತೆ ಅತ್ಯುತ್ಸಾಹದಲ್ಲಿದ್ದಾರೆ. ಕಾರಣ: `ಪ್ರೀತಿ ಏಕೆ ಭೂಮಿ ಮೇಲಿದೆ?' ಹಾಡುಗಳು ಮಾರುಕಟ್ಟೆಯಲ್ಲಿವೆ. `ಹುಡುಗರಿಗೆ ಮಲ್ಲಿಕಾ ಶೆರವಾತ್‌ ಹಾಡು ಇಷ್ಟವಾಗಿದೆ. ಕೆಲವರಿಗೆ ಸುಳ್ಳೇ ಸುಳ್ಳು ಹಾಡು ಖುಷಿಕೊಟ್ಟಿದೆ. ಫ್ಯಾಮಿಲಿಗೆ ಚಂದಮಾಮ ಹಾಡು. ನನಗೆ ಎಲ್ಲಾ ಹಾಡುಗಳೂ ಖುಷಿಕೊಟ್ಟಿವೆ' ಎನ್ನುತ್ತಾರೆ ನಿರ್ದೇಶಕ ಪ್ರೇಮ್‌. ಸಿಡಿಗಳ ಗುಣಮಟ್ಟವೂ ಅತ್ಯುತ್ತಮವಾಗಿದೆ ಎನ್ನುತ್ತಾ ತಯಾರಿಕೆ ನಡೆದಿದ್ದು ವಿದೇಶದಲ್ಲಿ ಎಂದು ವಿವರಣೆ ಒಪ್ಪಿಸುತ್ತಾರೆ ನಿರ್ಮಾಪಕ ರಾಮ್‌ಪ್ರಸಾದ್‌.</font><font size="3">ಹೀಗೆ ಸಂಭ್ರಮದಲ್ಲಿರುವ ಚಿತ್ರತಂಡ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ಪುರಾವೆಯಾಗಿ ಆಡಿಯೋ ಬಿಡುಗಡೆಯ ಔಪಚಾರಿಕ ಸಮಾರಂಭ ಧಾರವಾಡದಲ್ಲಿ ಏರ್ಪಾಟಾಗಿದೆ. ಏಪ್ರಿಲ್‌ ಮೊದಲ ವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಂದಿನಂತೆ ಸಾವಿರಾರು ಜನರನ್ನು ಸೇರಿಸುವ ಕುರಿತು ಪ್ರೇಮ್‌ ಯೋಚಿಸುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಬಿಡುಗಡೆ ಮಾಡುವುದೆಂದು ಪುನಃ ನಿಕ್ಕಿ ಮಾಡಿಕೊಳ್ಳಲಾಗಿದೆ.</font><font size="3">ಹಾಗಾದರೆ ಚಿತ್ರೀಕರಣ ಎಲ್ಲಿಯ ತನಕ ಬಂದಿದೆ? ನಿರ್ದೇಶಕ ಪ್ರೇಮ್‌ ಫುಲ್‌ ಸ್ವಿಂಗ್‌ನಲ್ಲಿ ವಿವರಿಸತೊಡಗುತ್ತಾರೆ. ಸುಮಾರು ಅರವತ್ತು ಶೇಕಡಾದಷ್ಟು ಚಿತ್ರೀಕರಣ ಪೂರ್ತಿಯಾಗಿದೆ . ಹಾಡುಗಳನ್ನು ಬೇರೆ ರೀತಿ ಚಿತ್ರೀಕರಿಸಲಾಗಿದೆ. ಮರಸುತ್ತುವ ಹಾಡುಗಳನ್ನು ಸುತ್ತಲು ನನಗೆ ಯಾವಾಗಲೂ ಇಷ್ಟವಿಲ್ಲ. ಹೀಗೆ ಅವರ ವಿವರಣೆ ಮುಂದುವರೆಯುತ್ತದೆ. ಹೀಗಿದ್ದರೂ ಪೊಲ್ಲಾಚಿಯಲ್ಲಿ ಅರ್ಧ ಚಿತ್ರೀಕರಣ ನಡೆಸಿರುವ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಅದನ್ನು ಎಲ್ಲಿ ಚಿತ್ರೀಕರಿಸುವುದು ಮತ್ತು ಹೇಗೆ ಮ್ಯಾಚ್‌ ಮಾಡುವುದು ಎಂದು ಈಗ ಪ್ರೇಮ್‌ ತಲೆಕೆಡಿಸಿಕೊಳ್ಳುತ್ತಿದ್ದಾರೆ.</p>
<p>ನಿರ್ದೇಶನದ ಜೊತೆಯಲ್ಲಿ ನಟನೆ ಕಷ್ಟವಾಗುವುದಿಲ್ಲವೇ ಎಂದು ಪ್ರೇಮ್‌ರನ್ನು ಕೇಳಿನೋಡಿ. ಕಷ್ಟ ಕಷ್ಟ ಎಂದು ಅವರು ಒಪ್ಪಿಕೊಳ್ಳುತ್ತಾರೆ. `ಕೆಲಸದ ವಿಷಯದಲ್ಲಿ ನನ್ನನ್ನೇ ನಾನು ನಂಬುವುದಿಲ್ಲ' ಎನ್ನುತ್ತ ಪ್ರತಿ ಶಾಟ್‌ ತೆಗೆದ ನಂತರ ವಿಡಿಯೋ ನೋಡಿ ತೀರ್ಮಾನಕ್ಕೆ ಬರುವುದನ್ನೂ ರಸವತ್ತಾಗಿ ವಿವರಿಸುತ್ತಾರೆ. `ನಾನು ಇಲ್ಲದ ಶಾಟ್‌ಗಳು ಸಮಸ್ಯೆ ಇಲ್ಲ. ನಾನು ಇರುವ ಶಾಟ್‌ಗಳು ಯಾವಾಗಲೂ ಕಷ್ಟ. ಹಾಗಾಗಿಯೇ ವಿಡಿಯೋ ಕ್ಯಾಮರಾದಲ್ಲೂ ಅದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದೇವೆ. ಅದನ್ನು ಹಾಕಿ ಹಾಕಿ ನೋಡಿ, ಮತ್ತೆ ಮತ್ತೆ ವಿಮರ್ಶೆ ಮಾಡಿ ಚಿತ್ರೀಕರಣ ಮುಂದುವರೆಸುತ್ತಿದ್ದೇನೆ' ಎನ್ನುತ್ತಾರೆ ಅವರು.</p>
<p><strong>ಸಿಂಗಲ್‌ ಶಾಟ್‌ ಫೈಟ್‌</strong></p>
<p>ಮೈಸೂರು ಲ್ಯಾಂಪ್ಸ್‌ನಲ್ಲಿ ಫೈಟ್‌ ಚಿತ್ರೀಕರಣ. ಸ್ಟೆಡಿ ಕ್ಯಾಮ್‌ ಬಳಸಿ ಚಿತ್ರೀಕರಣ ಮಾಡೋಣ ಎಂದು ಪ್ರೇಮ್‌ ತೀರ್ಮಾನಿಸಿದರು. ನಾಲ್ಕೂವರೆ ನಿಮಿಷದ ಫೈಟ್‌ ಅದು. ಒಂದೇ ಒಂದು ಶಾಟ್‌ನಲ್ಲಿ ಫೈಟ್‌ ಮುಗಿಯಬೇಕು ಎನ್ನುವುದು ಅವರ ಆಸೆ. ಅದಕ್ಕಾಗಿ ಅವರು ಮೂರು ದಿನ ರಿಹರ್ಸಲ್‌ ನಡೆಸಿದರು. ನಾಲ್ಕನೇ ದಿನ ಚಿತ್ರೀಕರಣ. ನಾಲ್ಕುವರೆ ನಿಮಿಷಗಳ ಫೈಟ್‌ ನಡೆಸಿ ಶಾಟ್‌ ಓಕೆ ಆಗುತ್ತಲೇ ಪ್ರೇಮ್‌ ನೆಲಕ್ಕೆ ಮಲಗಿಬಿಟ್ಟರು.`ಅಷ್ಟು ಸುಸ್ತಾಗಿಬಿಟ್ಟಿತ್ತು. ಕೈಗೆಲ್ಲಾ ರಕ್ತ ಬಂದುಬಿಟ್ಟಿತ್ತು' ಎಂದು ನೆನಪು ಮಾಡಿಕೊಳ್ಳುತ್ತಾರೆ ಪ್ರೇಮ್‌. ಈ ಚಿತ್ರದ ಹೈಲೈಟ್‌ಗಳಲ್ಲಿ ಈ ಫೈಟ್‌ ಕೂಡ ಒಂದು. ಕಟ್‌ ಮಾಡಿ ಫೈಟ್‌ಗಳನ್ನು ಸಂಕಲಿಸಿದರೆ ಫೀಲ್‌ ಹೋಗಿಬಿಡುತ್ತದೆ ಎಂಬ ಕಾರಣಕ್ಕೆ ಅವರು ಹೀಗೆ ಒಂದೇ ಶಾಟ್‌ನಲ್ಲಿ ಫೈಟ್‌ ಚಿತ್ರೀಕರಣ ನಡೆಸಿದರಂತೆ.</p>
<p><strong>ಕಾಲೇಜ್‌ ಪ್ರೀತಿ</strong></p>
<p>ಬೆಂಗಳೂರಿನ ಹನ್ನೆರಡು ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ರೀತಿಯ ಪ್ರೀತಿಗಳಿವೆ ಎಂಬ ಕಾನ್ಸೆಪ್ಟನ್ನು ಪ್ರೇಮ್‌ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ನ್ಯಾಷನಲ್‌ ಕಾಲೇಜ್‌ದು ಫ್ಲ್ಯಾಶ್‌ಬ್ಯಾಕ್‌ ಲವ್‌. ಜೈನ್‌ ಕಾಲೇಜಿನದು ಒನ್‌ ವೇ ಲವ್‌. ಮೌಂಟ್‌ ಕಾರ್ಮೆಲ್‌ ಕಾಲೇಜಿನದು ಇನ್ನೊಂಥರಾ ಲವ್‌ ಆದರೆ ಮತ್ಯಾವುದೋ ಕಾಲೇಜಿನದು ರಫ್‌ ಲವ್‌.</p>
<p>`ಇದನ್ನೆಲ್ಲಾ ಕಾಲೇಜು ಮುಂದೆ ನಿಂತು ನಾನು ಗಮನಿಸಿದ್ದೇನೆ. ರಿಸರ್ಚ್‌ ಮಾಡಿದ್ದೇನೆ' ಎನ್ನುತ್ತಾರೆ ಪ್ರೇಮ್‌. ಹಿಂದಿನ ಚಿತ್ರಗಳನ್ನು ಮಾಡುವಾಗಲೂ ಅವರು ಇಂಥ ಹೋಮ್‌ವರ್ಕ್‌ ಮಾಡಿಕೊಂಡಿದ್ದುಂಟು. ಸಹಜತೆಯ ಫೀಲ್‌ ಕೊಡಲು ಇದೆಲ್ಲಾ ಅವಶ್ಯಕ ಎನ್ನುತ್ತಾರೆ ಪ್ರೇಮ್‌.</p>
<p><strong>ಅರಳುವ ಹೂವುಗಳು</strong></p>
<p>`ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದ ಸೀಡಿ ಕವರ್‌ ಭಿನ್ನವಾಗಿದೆ. ಭೂಮಿ ಆಕಾರದಲ್ಲಿ ಇರುವ ಸಿಡಿ ಕವರ್‌ ಬಿಚ್ಚಿದರೆ ಹೂ ಕಾಣಿಸುತ್ತದೆ. ಅದನ್ನು ಬಿಚ್ಚಿದರೆ ಪ್ರೀತಿಯ ಸೀಡಿ. `ಈ ರೀತಿಯ ಕವರ್‌ ತಯಾರಿಕೆಗೆ ನಮಗೆ ಒಂದಕ್ಕೆ ಮೂರು ಖರ್ಚಾಯಿತು' ಎಂದು ಪುನಃ ಉತ್ಸಾಹದಿಂದ ಮಾತಾಡತೊಡಗುತ್ತಾರೆ ರಾಮ್‌ಪ್ರಸಾದ್‌. ಪ್ರೇಮ್‌ ಪ್ರಕಾರ ಈಗ ಹಳ್ಳಿ ಹಳ್ಳಿಗಳಲ್ಲೂ ಜನ ಸೀಡಿ ಕೇಳುತ್ತಿದ್ದಾರೆ. `ಜೋಗಿ ಚಿತ್ರದ ಹಾಡುಗಳು ಶೇಕಡಾ ಎಂಬತ್ತರಷ್ಟು ಕ್ಯಾಸೆಟ್‌ಗಳಲ್ಲಿ ಖರ್ಚಾಗಿತ್ತು. ಉಳಿದಿದ್ದು ಸೀಡಿ. ಈ ಸಲ ಅರ್ಧದಷ್ಟು ಸೀಡಿಗಳೇ ಖರ್ಚಾಗುತ್ತಿವೆ' ಎನ್ನುತ್ತಾರೆ ಅವರು.</p>
<p><strong>ಜೋಗಿ ಸ್ಟೈಲ್‌</strong></p>
<p>ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಪ್ರಚಾರ ತಂತ್ರಗಳಲ್ಲಿ `ಜೋಗಿ' ಛಾಯೆ ಸ್ಪಷ್ಟವಾಗಿ ಕಾಣಿಸುತ್ತದೆ. `ಜೋಗಿ' ಹಾಡುಗಳ ಸೀಡಿಗಳನ್ನು ರಾಮ್‌ಪ್ರಸಾದ್‌ ಜೋಳಿಗೆಯ ಆಕಾರದ ಕವರ್‌ಗಳಲ್ಲಿ ಬಿಡುಗಡೆ ಮಾಡಿದ್ದರೆ ಇಲ್ಲಿ ಭೂಮಿ ಆಕಾರದ ಕವರ್‌ಗಳನ್ನು ಬಳಸಿದ್ದಾರೆ. `ಜೋಗಿ' ಹಾಡುಗಳು ಹುಬ್ಬಳ್ಳಿಯಲ್ಲಿ ಬಿಡುಗಡೆಯಾದರೆ ಇದು ಧಾರವಾಡದಲ್ಲಿ ಬಿಡುಗಡೆಯಾಗಲಿದೆ. ಹಾಡುಗಳ ಧಾಟಿಯಲ್ಲೂ ಜೋಗಿ, ಎಕ್ಸ್‌ಕ್ಯೂಸ್‌ಮಿ ಚಿತ್ರಗಳ ಕೋಲಾಜ್‌ ಕಾಣಿಸುತ್ತದೆ. ಒಟ್ಟಾರೆ ಯಶಸ್ಸಿಗೆ ಹೊಸ ಸೂತ್ರ ಕಂಡುಕೊಂಡಿದ್ದ ರಾಮ್‌-ಪ್ರೇಮ್‌ ಜೋಡಿ ಈಗ ಅದೇ ಸೂತ್ರದೊಂದಿಗೆ ಪುನಃ ಯಶಸ್ಸಾಗಲು ಹೊರಟಿರುವುದು ಕುತೂಹಲಕರ. ಅಂದಹಾಗೆ ಈ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ್‌ ಹೇಳುವ ಪ್ರಕಾರ ಅದು ರಕ್ಷಿತಾರ ಕೊನೆಯ ಚಿತ್ರ.</p>
<p></font></p>
]]></content:encoded>
</item>
<item>
<title><![CDATA[ಅವಳು]]></title>
<link>http://pichchar.wordpress.com/2007/03/29/%e0%b2%85%e0%b2%b5%e0%b2%b3%e0%b3%81/</link>
<pubDate>Thu, 29 Mar 2007 13:12:44 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/03/29/%e0%b2%85%e0%b2%b5%e0%b2%b3%e0%b3%81/</guid>
<description><![CDATA[ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯ]]></description>
<content:encoded><![CDATA[<p><font size="3">ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯೆನ್ನಬಹುದು. ಡೈರಿ ಬರವಣಿಗೆ ಎನ್ನಬಹುದು. ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪ್ರೀತಿಯ ಹುಟ್ಟಿನ ಕತೆ. ಅಥವಾ ಅವಳು ಹುಟ್ಟಿದ ಕತೆ. ಅವಳು ಬೆಳೆದ ಕತೆ. ಬೆಳೆಯುತ್ತ ಬೆಳೆಯುತ್ತ ಅವಳು ಬದಲಾದ ಕತೆ. ಬದಲಾಗುತ್ತ ಬದಲಾಗುತ್ತ ಬದಲಾಗುತ್ತಲೇ ಹೋದ ಕತೆ. ಅಥವಾ ಬದಲಾಗಿದ್ದು ನಾನಾ? ಓದಿದ ನೀವೇ ಹೇಳಬೇಕು.<!--more--></p>
<p><strong>ಬಿನ್ನೆ ಯತ್ತೆ</p>
<p>ಒಂದನೇ ಕತ್ತೆ</p>
<p>ಎರಡನೇ ಯತ್ತೆ</p>
<p>ಮೂರನೇ ಕತ್ತೆ</p>
<p>ನಾಲ್ಕನೇ ಯತ್ತೆ</p>
<p></strong>ಗುಡ್ಡದ ಮೇಲಿರುವ ಸಂಪಿಗೆ ಕಾಡು ಶಾಲೆಯ ವರಾಂಡದ ತುದಿ ಕಂಬಕ್ಕೆ ನೇತು ಹಾಕಿದ್ದ ಗಂಟೆ ಢಣಢಣನೇ ಬಾರಿಸಿಕೊಂಡಿತು. ನಾಲ್ಕನೇ ಇಯತ್ತೆಯವರೆಗೆ ಕಲಿಸುವ ಲೋಯರ್‌ ಪ್ರೈಮರಿ ಸ್ಕೂಲು ಅದು. ಎದುರಿಗೆ ಎರಡು ತೆಂಗಿನ ಸಸಿಗಳು. ಸಾಲಾಗಿ ಗೆಂಟಗೆ,ಜಿನಿಯಾ, ಸೋಣೆ ಗಿಡಗಳು. ಅದರ ಮಧ್ಯದಲ್ಲೇ ಜನವರಿ ಇಪ್ಪತ್ತಾರು ಮತ್ತು ಅಗಸ್ಟ್‌ ಹದಿನೈದಕ್ಕೆ ಮದುಮಗಳಂತೆ ಸಿಂಗರಿಸಿಕೊಳ್ಳುವ ಧ್ವಜಗಂಬ. ಎದುರಿಗೆ ಬೇಲಿ.</p>
<p>ಆಗ ನನಗೆ ಏಳು ವರ್ಷಗಳಾಗಿತ್ತೆಂದು ಶಾಲಾ ದಾಖಲೆ ಹೇಳುತ್ತಿತ್ತಾದರೂ ನನಗೇ ಗೊತ್ತಿರುವಂತೆ `ನಾನು' ಹುಟ್ಟಿ ಕೆಲವೇ ದಿನಗಳಾಗಿದ್ದವು. ಅಥವಾ ಆಗಲೂ `ನಾನು' ಹುಟ್ಟಿರಲೇ ಇಲ್ಲವಾ? ಗೊತ್ತಿಲ್ಲ. ಒಟ್ಟಾರೆ `ನಾನು' ಹುಟ್ಟಿ ದ ಕೆಲವೇ ದಿನಗಳಲ್ಲಿ ಹೆಚ್ಚೆಂದರೆ ತಿಂಗಳುಗಳಲ್ಲಿ ಅವಳು ಹುಟ್ಟಿದ್ದಳು ಅಥವಾ ಅವಳು ಹುಟ್ಟಿದ ಕ್ಷಣವೇ ನಾನು ಹುಟ್ಟಿಕೊಂಡಿದ್ದೆ. ನನಗೆ ಗೊತ್ತಿಲ್ಲ. ಕ್ಷಮಿಸಿ .</p>
<p>ಅದು ಜುಲೈ ತಿಂಗಳಿರಬೇಕು.</p>
<p>ಮಳೆ ಎಷ್ಟೋ ದಿನಗಳಿಂದ ಹೊಯ್ಯುತ್ತಲೇ ಇರುವಂತಿತ್ತು. ಒಮ್ಮೆ ಸಣ್ಣ ಮಳೆ. ಇನ್ನೊಮ್ಮೆ ದೊಡ್ಡ ಮಳೆ. ಮಧ್ಯದಲ್ಲಿ ಸ್ವಲ್ಪ ಹೊತ್ತು ಪಿರಿ ಪಿರಿ, ಜಿಟಿ ಜಿಟಿ ಮಳೆ, ಸೋನೆ ಮಳೆ! ಶಾಲೆಯ ಎಡ ಪಕ್ಕದ ಮೈದಾನದ ಬದಿಯೆಲ್ಲ ಹಾವಸೆ ಬೆಳೆದು ಹಸಿರಾಗಿತ್ತು. ಅಲ್ಲಿ ಯಾರೋ ಹುಡುಗರು ಜಾರಿ ಬಿದ್ದ ಗುರುತೂ, ಪಕ್ಕದಲ್ಲಿಯೇ ಕಿಲಾಡಿ ಹುಡುಗರು ಮಾಡಿದ ಜಾರುಗುಂಡಿಯೂ ಮಳೆಯಲ್ಲಿ ತೊಯ್ಯುತ್ತಿದ್ದವು.</p>
<p>ಹತ್ತಿರದಲ್ಲಿ ಎಲ್ಲೂ ಮನೆಯಿಲ್ಲ.</p>
<p>ಆ ಶಾಲೆಯಲ್ಲಿ ಹೆಚ್ಚೇನೂ ಮಕ್ಕಳಿರಲಿಲ್ಲ. ಗದ್ದೆಮನೆ ರವಿಯನ್ನೂ ವಿದ್ಯಾರ್ಥಿಯೆಂದು ಒಪ್ಪಬಹುದಾದರೆ ಒಟ್ಟೂ 24 ವಿದ್ಯಾರ್ಥಿಗಳು. ಒಬ್ಬರೇ ಮಾಸ್ತರರು. ಅವರು ಘಟ್ಟದ ಕೆಳಗಿನ ಅಂಕೋಲೆಯವರು. ಒಂದೇ ಕ್ಲಾಸ್‌ ರೂಮು ಮತ್ತು ಮಾಸ್ತರರು ಇರುವಾಗ ಘಂಟೆ ಯಾಕೆ ಎನ್ನುವ ಪ್ರಶ್ನೆ ಮಾಸ್ತರರು ಸೇರಿದಂತೆ ಯಾರಿಗೂ ಬಂದಿರಲಿಲ್ಲ. ಆ ಗಂಟೆಯನ್ನು ತಂದು ಶಾಲೆ ಚಿಟ್ಟೆ ತುದಿಗೆ ಎಷ್ಟೋ ವರ್ಷಗಳಿಂದ ತಪಸ್ಸು ಮಾಡುವಂತೆ ನಿಂತಿರುವ ನೀಲಿ ಕಂಬಕ್ಕೆ ಮೊಳೆ ಜಡಿದು ಸಿಗಿಸಿದವರೂ ಮಾಸ್ತರರೇ.</p>
<p>ಆ ಘಂಟೆಯೇ ಒಂದು ಮಾಯಾವಿ. ಪ್ರತಿ ಸಲ ಗಂಟೆ ಹೊಡೆದಾಗ ಕೇಳಿಸುವ ಸದ್ದು ಒಂದೇ ರೀತಿ ಇರುತ್ತಿತ್ತಾದರೂ ಹುಟ್ಟಿಸುವ ಭಾವನೆಗಳು ಮಾತ್ರ ತದ್ವಿರುದ್ಧವಾಗಿರುತ್ತಿದ್ದವು. ಬೆಳಿಗ್ಗೆ ಪ್ರಾರ್ಥನೆಗೆ ಹೊಡೆಯುವ ಗಂಟೆ ನನ್ನಲ್ಲಿ ಅವಸರ ಮತ್ತು ತಳಮಳವನ್ನು ಹೆಚ್ಚಿಸಿ ನಾನು ಭಾರವಾಗುತ್ತಿದ್ದೆ. ಮಧ್ಯಾಹ್ನ ಗಂಟೆ ಕೇಳಿದೊಡನೆ ಹಸಿವಾಗುತ್ತಿತ್ತು. ಸಂಜೆ ಬಾರಿಸಿಕೊಳ್ಳುವ ಗಂಟೆಯ ಸದ್ದಿನೊಡನೆ ನಾನು ನೆಹರೂ ಫೋಟೋದ ಸಂದಿಗೆ ಗೂಡು ಕಟ್ಟಿದ ಪಾರಿವಾಳಗಳಷ್ಟು ಹಗುರವಾಗಿಬಿಡುತ್ತಿದ್ದೆ.</p>
<p>ಈ ಸಂಜೆಯೂ ಅದು ಹಾಗೇ ಇತ್ತು.</p>
<p>`ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ' ಎಂದು ಎಲ್ಲರೂ ದೊಡ್ಡದಾಗಿ ಪ್ರಾರ್ಥನೆ ಹೇಳಿ ಅಲ್ಲಿಂದ ಹೊರಕ್ಕೆ ಬೀಳುತ್ತಲೇ ಮಳೆ ಹೆಚ್ಚಾಗಿ ಆಕಾಶವೇ ಕಳಚಿಬೀಳುತ್ತದೆಯೇನೋ ಎನ್ನುವಂತೆ ಸುರಿಯತೊಡಗಿತು. ಮಾಸ್ತರರು ಬಯ್ದಿದ್ದರಿಂದ ಎಲ್ಲ ಹುಡುಗರೂ ವರಾಂಡಾದ ಮೇಲೆಯೇ ನಿಂತುಕೊಂಡರು. ಅಷ್ಟು ದೊಡ್ಡ ಮಳೆಯಲ್ಲಿ ಮನೆಗೆ ಹೊರಟು ಮಕ್ಕಳು ಏನಾದರೂ ಮಾಡಿಕೊಂಡುಬಿಡಬಹುದು ಎನ್ನುವ ಭಯ ಮಾಸ್ತರರಿಗೆ. ಹತ್ತು ನಿಮಿಷಗಳೇ ಕಳೆದಿರಬಹುದು.</p>
<p>ಸುಮ್ಮನೇ ನಿಂತಿದ್ದೆ, ಎಲ್ಲರಂತೆ.</p>
<p>ಸಂಜೆ ಹೊತ್ತು ಮಳೆ ಅಷ್ಟು ಜೋರಾಗಿ ಸುರಿದದ್ದು ಕೆಲ ಹುಡುಗರಿಗೆ ಅಷ್ಟೇನೂ ಇಷ್ಟವಾಗಲಿಲ್ಲ. ಸಂಜೆ ಮಳೆ ಬಂದರೆ ಹೊಟ್ಟೆ ಉರಿಯುತ್ತಿತ್ತು. ಬೆಳಿಗ್ಗೆ ಜೋರಾಗಿ ಮಳೆ ಸುರಿದರೆ ಬೇರೆ ರೀತಿಯ ಅನುಕೂಲಕಗಳಿದ್ದವು. ಹಾಗೆ ಮಳೆ ಸುರಿಯುತ್ತಲೇ ಉಳಿದರೆ ಸೈಕಲ್‌ ತುಳಿದು ಬರಬೇಕಾಗಿರುವ ಮಾಸ್ತರರು ಒಮ್ಮೊಮ್ಮೆ ಬರುತ್ತಿರಲಿಲ್ಲ. ಅಂದರೆ ಆ ದಿನ ರಜೆ. ಇನ್ನು ಕೆಲವರು ಹಾಗೆ ಮಳೆ ಸುರಿದ ದಿನ ಹಳ್ಳ ದಾಟಲಾಗುವುದಿಲ್ಲವೆಂದು ಶಾಲೆಗೇ ಬರುತ್ತಿರಲಿಲ್ಲ. ಹಾಗೆ ಹಳ್ಳ ತುಂಬಿ ಹರಿಯುವ ದಿನ ಶಾಲೆಗೆ ಬರಬೇಡಿ ಎಂದು ಮಾಸ್ತರರೇ ಹೇಳಿಬಿಟ್ಟಿದ್ದರು. ಮಾಸ್ತರರು ಹಾಗೆ ಹೇಳಿದ ಅನಂತರ ಸಣ್ಣ ಸಣ್ಣ ಮಳೆಗೂ ಹಳ್ಳ ತುಂಬಿ ಹರಿಯತೊಡಗಿತ್ತು!</p>
<p>ನಾನು ಅಂಥದ್ದನ್ನೇನೂ ಯೋಚಿಸುತ್ತಿರಲಿಲ್ಲ.</p>
<p>ಏಕೆಂದರೆ ನಮ್ಮನೆ ಹಾದಿಯಲ್ಲಿ ದೊಡ್ಡ ಹಳ್ಳವೂ ಇರಲಿಲ್ಲ.</p>
<p>ಮತ್ತೂ ಐದು ನಿಮಿಷ ಕಳೆದಿರಬಹುದು. ಮಳೆ ಸ್ವಲ್ಪ ಸಣ್ಣದಾಯಿತು. ಆಗಲೇ ಆಕಳಿಸುತ್ತಿದ್ದ ಮಾಸ್ತರರು ಹೋಗುವುದಕ್ಕೆ ಅನುಮತಿ ನೀಡಿ ತಾವೂ ಹೊರಡುವುದಕ್ಕೆ ಕೊಡೆ ಬಿಚ್ಚಿ ಸೈಕಲ್‌ ಸ್ಟ್ಯಾಂಡ್‌ ತೆಗೆದರು. ಇದ್ಯಾವುದರ ಬಗ್ಗೂ ಅಷ್ಟೇನೂ ತಲೆ ಕೆಡಿಸಿಕೊಳ್ಳದೇ ಕೊಡೆ ಅರಳಿಸಿ ಅಂಗಳಕ್ಕಿಳಿದೆ. ಕಾಲಿಗೆ ಆಗ ಚಪ್ಪಲಿಯೂ ಇರಲಿಲ್ಲ ಎನ್ನುವಂತೆ ನೆನಪು. ಕಾಡಿನ ನಡುವೆ ಇರುವ ಕಾಲು ಹಾದಿಯಲ್ಲಿ ಮಳೆ ನೀರು ಆಡುತ್ತ ಸುಮ್ಮನೇ ನಡೆಯತೊಡಗಿದೆ. ಜೊತೆಗೆ ಪಕ್ಕದ ಮನೆಯಿಂದ ಶಾಲೆಗೆ ಬರುವ ಮೂರನೇ ಕ್ಲಾಸಿನ ಹುಡುಗ ಮೂರ್ತಿಯೂ ಇದ್ದ.</p>
<p>ಶಾಲೆಯ ಅಂಗಳದಿಂದ ದಣಪೆ ದಾಟಿ ಎಡಕ್ಕೆ ಹೊರಳಿದೊಡನೆ ಕಾಲುಗಳು ಗುಡ್ಡೆಯಿಳಿಯತೊಡಗಿದವು. ಹೋಗುತ್ತ ಹೋಗುತ್ತ ಸಿಂಬಳ್ಳಿ ಕಡೆ ಹೊರಟಿದ್ದ ಭಾಗೀರಥಿ ಮತ್ತು ಗಣಪತಿಯನ್ನು ನೋಡಿದವರು ಒಂದು ಕ್ಷಣ ಹಾಗೇ ನಿಂತುಕೊಂಡೆವು. ವಿಶೇಷವೆಂದರೆ ಭಾಗೀರಥಿ ಮತ್ತು ಗಣಪತಿ ಒಂದೇ ಕೊಡೆಯಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ನಡೆದು ಹೋಗುತ್ತಿದ್ದರು. ಅವರು ಕಾಣದಾಗುವ ತನಕ ಮೂರ್ತಿ ಆಸಕ್ತಿಯಿಂದ ಅವರನ್ನು ನೋಡುತ್ತಲೇ ಇದ್ದ.</p>
<p>ನನಗೆ ಅವರಿಬ್ಬರೂ ಅಷ್ಟೇನೂ ಹತ್ತಿರದವರಲ್ಲ. ನಾಲ್ಕನೇ ಕ್ಲಾಸಿನವರಾಗಿದ್ದರಿಂದ ಗಣಪತಿ ಆವಾಗಾವಾಗ ಒಂದನೇ ಕ್ಲಾಸಿನ ನಮ್ಮ ಮೇಲೆ ದಬ್ಬಾಳಿಕೆ ಮಾಡುವುದಿತ್ತು. ಆದರೆ ಭಾಗೀರಥಿ ಯಾವಾಗಲೂ ಹಾಗಲ್ಲ. ಉಪ್ಪಿನಕಾಯಿ ಮಿಡಿ, ಹುಣಸೆ ಹಣ್ಣು ಕೊಡುತ್ತ ಕಿಸಕ್ಕನೇ ವಿನಾಕಾರಣ ನಗುತ್ತ ಇರುತ್ತಿದ್ದ ಹುಡುಗಿ.</p>
<p>ಅವರಿಬ್ಬರೂ ಹಾಗೆ ಒಂದೇ ಕೊಡೆಯಲ್ಲಿ ಹೊಕ್ಕಿ ಹೊರಟಿದ್ದು ವಿಶೇಷವೆನಿಸಿದರೂ ಬೇರೇನೂ ಅನಿಸಿರಲಿಲ್ಲ. ಗಣಪತಿಯೋ ಭಾಗೀರಥಿಯೋ ಕೊಡೆ ಬಿಟ್ಟು ಬಂದಿರಬಹುದು. ಒಂದೇ ಊರಿನವರಾಗಿದ್ದರಿಂದ ಒಟ್ಟಿಗೇ ಹೋಗುತ್ತಿದ್ದಾರೆ ಎಂದು ಅಂದುಕೊಂಡು ಸುಮ್ಮನಾಗಿ ಮನೆ ಕಡೆ ಹೊರಟೆ.</p>
<p>ಮಳೆ ಮತ್ತೆ ಜೋರಾಗಿ ಸುರಿಯತೊಡಗಿತು. ಕಪ್ಪೆಗಳು ವಟಗುಡುತ್ತಿದ್ದವು. ಸಂಜೆಯಾಗುತ್ತ ಬಂದಿದ್ದರಿಂದ ಅವುಗಳ ಜೊತೆ ಜೀರುಂಡೆ-ನೊರಜುಗಳೂ ಸೇರಿಕೊಂಡು ಗೌಜೆಬ್ಬಿಸುತ್ತಿದ್ದವು. ರಭಸದಿಂದ ಹರಿಯುವ ಹಳ್ಳದ ಸದ್ದು ಈ ಸದ್ದಿನೊಂದಿಗೆ ಸ್ಪರ್ಧೆಗೆ ಇಳಿದಂತಿತ್ತು.</p>
<p>ಮೂರ್ತಿಯೊಂದಿಗೆ ಜಾರಿಕೆ ನೆಲದ ಮೇಲೆ ಹುಶಾರಿಯಿಂದ ಗುಡ್ಡ ಇಳಿದು ಹಳ್ಳಕ್ಕೆ ಸಮಾನಾಂತರವಾದ ಪುಟ್ಟ ಹಾದಿಯಲ್ಲಿ ನಡೆಯತೊಡಗಿದೆ. ಯಾಕೋ ಮೂರ್ತಿ ಒಂಥರಾ ಇದ್ದಾನೆ ಅಂತ ಅನಿಸಿತ್ತು. ಒಂದು ಏರು ಏರಿ ದಣಪೆ ದಾಟುವ ಹೊತ್ತಿಗೆ- ಆ ಗೇರು ಗಿಡದ ಬುಡದ ಕಪ್ಪು ಎಲೆಗಳ ಹಾಸಿನ ಮೇಲೆ , ಸರಿಯಾಗಿ ಆ ಬಿದಿರು ಮೆಳೆ ಪಕ್ಕ ಅಂದರೆ ಕರಿಮುಳ್ಳೆಣ್ಣು ಗಿಡದ ಎದುರು ನಿಂತು- ಗುಟ್ಟು ಹೇಳುವವನಂತೆ ಮೂರ್ತಿ ಹೇಳಿದ್ದ.</p>
<p>`ಭಾಗೀರಥಿ ಮತ್ತು ಗಣಪತಿ ಒಂದೇ ಕೊಡೆ ಹಿಡಿದು ಜೊತೆಯಾಗಿ ಹೋಗಿದಾರೆ'</p>
<p>ಅದನ್ನು ಯಾಕೆ ಹೇಳುತ್ತಿದ್ದಾನೆಂದು ಅರ್ಥವಾಗಲಿಲ್ಲ. ಆಗಲೇ ನಾನು ಗಣಪತಿ-ಭಾಗೀರಥಿಯನ್ನು ಮರೆತುಬಿಟ್ಟಾಗಿತ್ತು. ಮೂರ್ತಿ ವಿವರಿಸಿ ಹೇಳಿದ. ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅನಂತರ ಅವನಿಗೆ ತಿಳಿದಂತೆ ಗಣಪತಿ-ಭಾಗೀರಥಿಯರ ಮಿಥುನ ಭಂಗಿಗಳನ್ನೆಲ್ಲ ವಿವರಿಸಿದ. ಆಗಲೂ ಅರ್ಥವಾಗದಿದ್ದಾಗ ನೀನು ಹುಟ್ಟಿದ್ದೇ ಹೀಗೆ ಎಂದುಬಿಟ್ಟ.</p>
<p>ಏನೋ ಹೊಳೆದಂತಾಯಿತು. ಹಾಗೆ ಹೊಳೆದಂತಾದಾಗ ಯಾಕೋ ಒಂಥರಾ ಪುಳಕವಾಯಿತು. ಹಾಗೆ ನೋಡಿದರೆ ಅವನು ಹೇಳಿದ್ದು ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ ಆದರೂ ಅರ್ಥವಾಗಿ ಮೈ ಬಿಸಿಯಾಗಿತ್ತು!</p>
<p>ಹಾಗೆ `ಅರ್ಥ'ವಾದ ಆ ಕ್ಷಣದಲ್ಲಿ ಕ್ರೋಮೋಸೋಮ್‌ಗಳು ಸಂಯೋಜನೆಗೊಂಡವು.</p>
<p>ಇಪ್ಪತ್ಮೂರಕ್ಕೆ ಇಪ್ಪತ್ಮೂರು ಸೇರಿ ನಲವತ್ತಾರಾಯಿತು.</p>
<p>ಅವಳ ಜೀವಕೋಶವೊಂದು ಹುಟ್ಟಿಕೊಂಡಿತು.</p>
<p>ಆ ಕೋಶ ಎರಡಾಯಿತು.</p>
<p>ಎರಡು ನಾಲ್ಕಾಯಿತು.</p>
<p>ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಎರಡನೂರಾ ಐವತ್ತಾರಾಯಿತು.</p>
<p>ಅದು ಮತ್ತೆ ದ್ವಿಗುಣಿಸಲ್ಪಡುತ್ತ ಹೋಗಿ ಮನಸ್ಸಿನ ಗರ್ಭದಲ್ಲಿ ಅವಳ ಭ್ರೂಣ ರೂಪುಗೊಂಡಿತು.</p>
<p>ಅವಳಿಗೆ ಕಣ್ಣಿರಲಿಲ್ಲ. ಕಿವಿ, ಮೂಗು, ಬಾಯಿ, ಕಾಲು-ಕೈ,ತೊಡೆ, ಮನಸ್ಸು, ಮೊಲೆ, ಮಾಲೆ,ಮೈಲಿಗೆ ಏನೂ ಇರಲಿಲ್ಲ.</p>
<p>***</p>
<p>ಸಂಪಿಗೆಕಾಡು ಶಾಲೆಗೆ ಹೋಗುವುದು ಬರುವುದು ಮುಂದುವರೆದಿತ್ತು. ಶಾಲೆಗೆ ಹೋಗುವುದರಲ್ಲಿ ಉತ್ಸಾಹವೇ ಇರಲಿಲ್ಲ. ಸುಮ್ಮನೇ ಎಲ್ಲಾದರೂ ಮುಳ್ಳೆಣ್ಣು ಕೊಯ್ಯುತ್ತ ಉಳಿದುಬಿಡುವ ಮನಸ್ಸಾಗುತ್ತಿತ್ತು. ಇಲ್ಲದಿದ್ದರೆ ನಾಯ್ಕನ ಮನೆ ರಾಮಚಂದ್ರನ ಜೊತೆ ಸೇರಿ ಅಥವಾ ಅಚ್ಚೆ ಮನೆ ಮೂರ್ತಿಯೊಂದಿಗೆ ಸೇರಿ ಗೋಲಿ ಆಡುತ್ತ ಉಳಿದುಬಿಡೋಣ ಎನಿಸುತ್ತಿತ್ತ್ತು. ಆದರೂ ಯಾರದೋ ಆಜ್ಞೆಗೆ ಬದ್ಧವಾದವನಂತೆ ಹೋಗುತ್ತಿದ್ದೆ.</p>
<p>ಹಾಗೆ ಒಂದು ವಾರ ಅಥವಾ ತಿಂಗಳೇ ಕಳೆದಿರಬಹುದು.</p>
<p>ಮಳೆ ಒಂದು ಸುತ್ತಿನ ತನ್ನ ಆರ್ಭಟ ಮುಗಿಸಿತ್ತು. ವಟರುಗುಟ್ಟುವ ಕಪ್ಪೆಗಳು, ಸುರಿಯುವ ಮಳೆ ಮತ್ತು ಹೊಸ ಸಂಗತಿಗಳಿಗೆ ತೆರೆದುಕೊಳ್ಳುವ ಪುಳಕದಲ್ಲಿ ತೇಲಿಹೋಗುತ್ತಿದ್ದಾಗ ಭ್ರೂಣ ಒಂದು ರೂಪವಾಗಿ ಬದಲಾಗತೊಡಗಿತು.</p>
<p>ಮೊದಲು ಅವಳಿಗೆ ಕಣ್ಣು ಬಂತು. ಕೈ ಕಾಲು, ಮೂಗು, ಬಾಯಿ, ಕಿವಿ ಮತ್ತು ಜಡೆ . ಜಡೆಗೆ ಮಲ್ಲಿಗೆ ದಂಡೆ. ಬೆನ್ನಿಗೆ ಪಾಟೀ ಚೀಲ, ಹಣೆಗೆ ಕಾಡಿಗೆ, ಕೈಯ್ಯಲ್ಲಿ ಕೊಡೆ ಮತ್ತು ಬೆಳ್ಳಕ್ಕಿಯಷ್ಟು ಬೆಳ್ಳಗಿನ ಮೈಗೆ ಲಂಗ-ಪಲಕ. ಇದೆಲ್ಲ ಬಹಳ ಬೇಗ ನಡೆದುಹೋಯಿತು.</p>
<p>ಅವಳು ಹುಟ್ಟಿಕೊಂಡಿದ್ದಳು.</p>
<p>ಹುಟ್ಟುವಾಗಲೇ ಅವಳಿಗೆ ಏಳು ವರ್ಷ ವಯಸ್ಸಾಗಿತ್ತು!</p>
<p>ಅವಳು ಸೀತಾಲಕ್ಷ್ಮಿ</p>
<p>ಸೀತಾಲಕ್ಷ್ಮಿ ನನ್ನ ಕ್ಲಾಸಿನವಳೇ. ನಮ್ಮದೇ ಬೇಂಚಿನಲ್ಲಿ ಸುಬ್ರಾಯನ ಪಕ್ಕ ಕೂರುತ್ತಿದ್ದ ಹುಡುಗಿ. ಯಾರೊಂದಿಗೂ ಹೇಳಿಲ್ಲ. ಈಗ ಹೇಳುತ್ತಿದ್ದೇನೆ. ಅವಳು ನನ್ನ ಮೊದಲ ಪ್ರೀತಿ.</p>
<p>***</p>
<p>ಈ ಪ್ರೀತಿ ಅಂದರೆ ಅವಳು ಅಂದರೆ ಸೀತಾಲಕ್ಷ್ಮಿ ಏನೆಲ್ಲಾ ಆಗಿ ನನ್ನ ಮನಸ್ಸಿನಲ್ಲಿ ಬೆಳೆದಳು, ಹೇಗೆಲ್ಲಾ ಮುಖ, ಮೈ, ಹೆಸರು ಬದಲಿಸಿಕೊಂಡಳು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಾನು ಐದನೇ ಕ್ಲಾಸಿಗೆ ಬರುವಾಗ ಸೀತಾಲಕ್ಷ್ಮಿ ಸವಿತಾ ಆಗಿ ಬದಲಾಗಿದ್ದಳು. ಆರನೇ ಕ್ಲಾಸಿಗೆ ಬರುವಷ್ಟರಲ್ಲಿ `ಅವಳು' ಟೀಚರ್‌ ಆಗಿಬಿಟ್ಟಿದ್ದಳು! ಏಳನೇ ಕ್ಲಾಸಿನಲ್ಲಿ ಅವಳು ಬದಲಾಗಿ ಬೇರೆ ಹುಡುಗಿಯಾದಳು. ಆ ಹುಡುಗಿಗೂ ಒಂದು ಹೆಸರಿತ್ತು. ಅದು ಈಗ ಮರೆತು ಹೋಗಿದೆ. ಎಂಟನೆ ಕ್ಲಾಸಿಗೆ ಬರುವ ಹೊತ್ತಿಗೆ ನಾನು ಪತ್ರಿಕೆಯೊಂದರಲ್ಲಿ ನೋಡಿದ ಸುಂದರ ಹುಡುಗಿಯ ಚಿತ್ರವಾದಳು. ಮೂಕಾಂಬಿಕೆಯಾದಳು. ಕಮಲಾಂಬಿಕೆಯಾದಳು. ದೀಪ್ತಿಯಾದಳು. ತಬಸ್ಸುಮ್‌ ಆದಳು. ವಿಜಯಲಕ್ಷ್ಮಿಯಾದಳು.</p>
<p>ಅಷ್ಟರಲ್ಲಿ ಎಸ್ಸೆಸ್ಸೆಲ್ಸಿ ಮುಗಿಯಿತು.</p>
<p>ನಂತರದ ದಿನಗಳಲ್ಲಿ ಅವಳು ಇನ್ನೇನೇನೋ ರೂಪಾಂತರಗಳನ್ನು ಪಡೆಯುತ್ತ `ಕಾದಲಕ್ಕು ಮರ್ಯಾದೈ' ಸಿನಿಮಾ ನೋಡುವ ಹೊತ್ತಿಗೆ ಶಾಲಿನಿಯಾದಳು. ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತ ಪಕ್ಕಕ್ಕೆ ಸಿಕ್ಕಿದ ಜಾನಕಿಯಾದಳು. ಚಾಲುಕುಡಿಯಿಂದ ವಾಪಸಾಗುತ್ತ ಎದುರಿಗೆ ಕುಳಿತ ಘಲ್‌ ಘಲ್‌ ಗೆಜ್ಜೆಯ ಹುಡುಗಿಯಾದಳು. ಎಂಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸಿಕ್ಕಿದ ಹೆಸರು, ವಿಳಾಸಗಳೇ ಗೊತ್ತಿಲ್ಲದ ಹೈಹೀಲ್ಡ್‌ ಸುಂದರಿಯಾದಳು. ಸಪ್ನಾ ಬುಕ್‌ ಸ್ಟಾಲಿನಲ್ಲಿ ಅರ್ಧ ಮಾತ್ರ ನೋಡಲು ಸಿಕ್ಕಿದ ಜಿಂಕೆಮರಿಯಾದಳು. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ ಚೆಂದದ ಅಕ್ಕ ತಂಗಿಯರಲ್ಲಿ ಒಮ್ಮೆ ಅಕ್ಕ ಆದಳು. ಇನ್ನೊಮ್ಮೆ ತಂಗಿಯಾದಳು. ಒಮ್ಮೆ ಜೀನ್ಸ್‌ ಹಾಕಿದಳು. ಇನ್ನೊಮ್ಮೆ ಮಿಡಿ ತೊಟ್ಟಳು.</p>
<p>ಹೀಗೆಲ್ಲಾ ಆಗಿ ಇನ್ನೇನೇನೋ ಆಗಿ ಒಮ್ಮೆ ಫೋನಿನಲ್ಲಿ ಕೇಳಿದ ಸುಂದರ ದನಿಯಾದಳು. ಎಫ್‌ ಎಂ ನಲ್ಲಿ ರಾತ್ರಿ ತೇಲಿ ಬಂದ ಅಭಿಸಾರಿಕೆಯಾದಳು. ಇಂಟರ್ನೆಟ್‌ನಲ್ಲಿ ಸಿಕ್ಕಿದ ಇನ್ನೇನೋ ಹೆಸರಿನವಳಾದಳು. ಹೆಸರೇ ಗೊತ್ತಿಲ್ಲದ ಅವಳಾದಳು. ಅವಳಾದಳು ಮತ್ತು ಅವಳಾದಳು. ಕೊನೆಗೊಮ್ಮೆ ಲಾಲ್‌ಬಾಗ್‌ನಲ್ಲಿ ಸಿಕ್ಕುವ ಹುಡುಗಿಯಾದಳು.</p>
<p>ದಾಖಲಿಸಲೇಬೇಕಾದ ಸಂಗತಿಯೆಂದರೆ ಅವಳು ಒಮ್ಮೆ ನನ್ನ ಹೆಂಡತಿಯೂ ಆಗಿದ್ದಳು!</p>
<p></font></p>
]]></content:encoded>
</item>
<item>
<title><![CDATA[ಕತೆ:ಮೌಢ್ಯ]]></title>
<link>http://pichchar.wordpress.com/2007/03/22/%e0%b2%95%e0%b2%a4%e0%b3%86%e0%b2%ae%e0%b3%8c%e0%b2%a2%e0%b3%8d%e0%b2%af/</link>
<pubDate>Thu, 22 Mar 2007 10:08:23 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/03/22/%e0%b2%95%e0%b2%a4%e0%b3%86%e0%b2%ae%e0%b3%8c%e0%b2%a2%e0%b3%8d%e0%b2%af/</guid>
<description><![CDATA[ಇದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದ]]></description>
<content:encoded><![CDATA[<p><font size="3"><strong>ಇ</strong>ದು ನನ್ನ ಮೊದಲ ಕತೆ. ಹದಿನಾರು ವರ್ಷಗಳ ಹಿಂದೆ ಬರೆದಿದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಬರೆದಿದ್ದು. ಅದನ್ನು ಪತ್ರಿಕೆಯೊಂದಕ್ಕೆ ಕಳುಹಿಸಿದ್ದೆ ಕೂಡ. ಯಥಾಪ್ರಕಾರ ಪ್ರಕಟವಾಗಲಿಲ್ಲ. ಕತೆಯ ಇನ್ನೊಂದು ಪ್ರತಿ ನನ್ನ ಬಳಿ ಈಗಲೂ ಇಲ್ಲ. ಆದರೆ ಕತೆ ನನಗೆ ನಿನ್ನೆ, ಮೊನ್ನೆ ಬರೆದಷ್ಟೇ ಚೆನ್ನಾಗಿ ನೆನಪಿದೆ. ಅದನ್ನು ಎರಡು ವರ್ಷಗಳ ಹಿಂದೆ ಇನ್ನೊಂದು ಸಲ ಬರೆದೆ. ಕಥಾ ವಸ್ತು, ನಿರೂಪಣೆಯನ್ನು ಬದಲಾಯಿಸಲಿಲ್ಲ. ಬರಹದ ಶೈಲಿ ಮಾತ್ರ ಬದಲಾಗಿದೆ. ಕತೆಗೆ `ಮೌಢ್ಯ' ಎಂದು ಹೆಸರು ಏಕೆ ಕೊಟ್ಟಿದ್ದೆ ಎನ್ನುವುದು ಮಾತ್ರ ಈಗಲೂ ನನಗೆ ಅರ್ಥವಾಗುತ್ತಿಲ್ಲ.<!--more--></font><font size="3"> </p>
<p> </font><font size="3"><strong>ಹ</strong>ಳ್ಳ ಅಲ್ಲಿ ಡೊಂಕಾಗಿ ಹರಿದಿದೆ.</font><font size="3">ಹಾಗಾಗಿ ಅದು ಡೊಂಕಳ್ಳ.</font><font size="3">ಆ ಹಳ್ಳದ ಪಕ್ಕದಲ್ಲಿ ನಮ್ಮ ಗದ್ದೆಯಿತ್ತು. ಈಗ ನಾಲ್ಕು ವರ್ಷಗಳಿಂದ ಅದು ಅಡಿಕೆ ತೋಟವಾಗಿದೆ. ಅಡಿಕೆ ತೋಟ ಅಂದರೆ ಬರೀ ಅಡಿಕೆ ಗಿಡಗಳಷ್ಟೇ ಅಲ್ಲ. ಅದರ ಮಧ್ಯದಲ್ಲಿ ಬಾಳೆ ಗಿಡಗಳೂ ಇದ್ದವು.</font><font size="3">ಅಲ್ಲಿ ಅಡಿಕೆ ತೋಟ ಮಾಡುವುದು ಅಜ್ಜನಿಗೆ ಒಂದಿಷ್ಟೂ ಇಷ್ಟವಿರಲಿಲ್ಲ. ಆದರೆ ಎಲ್ಲರೂ ತೋಟ ಮಾಡುವಾಗ ಅಡಿಕೆ ತೋಟ ಮಾಡದಿರುವುದು ಹೇಗೆ ಎನ್ನುವುದು ಅಪ್ಪನ ವಾದವಾಗಿತ್ತು. ಗದ್ದೆಯಲ್ಲಿ ಹುಲ್ಲು ಮಾತ್ರ ಲಾಭ ಎಂದು ಅಪ್ಪ ಪದೇ ಪದೇ ಅಜ್ಜನ ಬಳಿ ವಾದಿಸುತ್ತಿದ್ದ್ದ. ಈ ವಾದ ವಿವಾದ ಒಂದಷ್ಟು ದಿನ ನಡೆಯಿತು.</p>
<p></font>ಒಂದಷ್ಟು ದಿನ ಅಷ್ಟೇ.</p>
<p>ಕೊನೆಗೂ ಅಪ್ಪನ ವಾದವೇ ಗೆದ್ದಿತು.</p>
<p>ಡೊಂಕಳ್ಳ ಗದ್ದೆ ಅಡಿಕೆ ತೋಟವಾಯಿತು. ಸುತ್ತಲೂ ಇದ್ದ ಗದ್ದೆ ಮಾತ್ರ ಗದ್ದೆಯಾಗಿಯೇ ಉಳಿದಿತ್ತು. ಹಾಗಾಗಿ ಬೇಸಿಗೆಯಲ್ಲಿ ಬಿಸಿಲ ಝಳವನ್ನು ಅಡಿಕೆ ಗಿಡಗಳು ಸಹಿಸಿಕೊಳ್ಳುತ್ತವೆಯೋ ಎನ್ನುವ ಕುರಿತು ಅಜ್ಜನಿಗೆ ಅನುಮಾನಗಳಿದ್ದವು. `ಅಡಿಕೆ ಗಿಡಗಳೆಲ್ಲ ಪಡಿಬಿಸಿಲಿಗೆ ಸುಟ್ಟು ಹರಣಿಯಾಗಿದ್ದರೆ ಕೇಳು' ಎಂದು ಅಜ್ಜ ಯಾವಾಗಲೂ ಹೇಳುತ್ತಿದ್ದ. ಅಪ್ಪ ಮತ್ತು ಅಪ್ಪಚ್ಚಿ ನಗುತ್ತಿದ್ದರು.</p>
<p>ತೋಟ ಆದ ಮೇಲೆ ಅಜ್ಜ ಎರಡು ವರ್ಷ ಬದುಕಿದ್ದ. ಅಡಿಕೆ ಗಿಡಗಳಿಗೆ ನೀರು ಹಾಕುವಾಗಲೂ ಅವನದು ಅದೇ ಮಾತು -ಪಡಿಬಿಸಿಲು. ಗೊಬ್ಬರ ಹಾಕುವಾಗಲೂ ಅದೇ ಮಾತು. ಪಡಿಬಿಸಿಲು. ಕೊನೆ ಕೊನೆಗೆ ಅಪ್ಪನನ್ನೂ ಈ ಭಯ ಆವರಿಸಿಕೊಂಡಿತ್ತು. ಅಜ್ಜ ಸತ್ತು ಹೋದ ಮೇಲೆ ಸಹ ಇದೇ ಮಾತು ಚರ್ಚೆಯಾಗುವುದಿತ್ತು.</p>
<p>ಇನ್ನೂ ಎರಡು ವರ್ಷಗಳು ಕಳೆದವು.</p>
<p>ಡೊಂಕಳ್ಳ ತೋಟಕ್ಕೆ ತೊಂದರೆ ಅಜ್ಜ ಹೇಳಿದಂತೆ ಬಿಸಿಲಿನಿಂದ ಬರಲಿಲ್ಲ. ಆದರೆ ಬೇರೆ ರೀತಿಯಿಂದ ಎದುರಾಯಿತು.</p>
<p>ಎಲ್ಲವೂ ಆರಂಭವಾಗಿದ್ದು ಡೊಂಕಳ್ಳ ತೋಟಕ್ಕೆ ಒಂದಷ್ಟು ಬೆಳ್ಳಕ್ಕಿಗಳು ಬರುವುದರೊಂದಿಗೆ. ಬೆಳ್ಳಕ್ಕಿಗಳಿಂದ ಯಾರಿಗಾದರೂ ಏನಾದರೂ ತೊಂದರೆ ಆಗಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಹಾಗೆ ಬಂದ ಬೆಳ್ಳಕ್ಕಿಗಳು ತೋಟ, ಪಕ್ಕದ ಗದ್ದೆಯಲ್ಲೆಲ್ಲ ಹಾರಾಡಿಕೊಂಡಿದ್ದವು.</p>
<p>ಅಷ್ಟೊಂದು ಬೆಳ್ಳಕ್ಕಿಗಳು ತೋಟಕ್ಕೆ ಏಕೆ ಬಂದವು ಎನ್ನುವುದಕ್ಕೆ ಯಾರೂ ಯಾವಾಗಲೂ ತಲೆ ಕೆಡಿಸಿಕೊಳ್ಳಲಿಲ್ಲ. ತೋಟದ ಪಕ್ಕದಲ್ಲೇ ಬಿಡಾರ ಮಾಡಿಕೊಂಡಿದ್ದ ಲಕ್ಷ್ಮಣ ಸಿದ್ದಿ ಮಾತ್ರ ಒಂದೇ ಒಂದು ಬೆಳ್ಳಕ್ಕಿಯನ್ನು ಹೊಡೆದು ತಿನ್ನಲಾಗದ ತನ್ನ ನಿಷ್ಕ್ರಿಯತೆಯನ್ನು ಬಯ್ದುಕೊಳ್ಳುತ್ತ ಇರುತ್ತಿದ್ದ.</p>
<p>ಹೀಗಿರುವಾಗ ಒಂದು ದಿನ ಹೋಗಿ ನೋಡಿದರೆ ತೋಟದಲ್ಲಿ ಒಂದಷ್ಟು ಕಾಗೆಗಳಿದ್ದವು. ಹತ್ತಿಪ್ಪತ್ತು ಸಂಖ್ಯೆಯಲ್ಲಿ ಬಂದಿದ್ದವು. ನಾಲ್ಕೋ ಆರೋ ಕಾಗೆಗಳನ್ನು ನೋಡಿ ಮಾತ್ರ ಅಭ್ಯಾಸವಿದ್ದ ನಮಗೆ ಹತ್ತಿಪ್ಪತ್ತು ಸಂಖ್ಯೆಯಲ್ಲಿ ಕಾಗೆಗಳನ್ನು ನೋಡಿ ಸ್ವಲ್ಪ ಗಾಬರಿಯೇ ಆಗಿತ್ತು. ಆದರೆ ಮರುದಿನದ ಹೊತ್ತಿಗೆ ಆ ಕಾಗೆಗಳೆಲ್ಲ ಹಾರಿ ಹೋಗಿದ್ದವು.</p>
<p>ಮತ್ತೂ ಎರಡು ದಿನ ಕಳೆಯಿತು.</p>
<p>ಈ ಸಲ ತೋಟಕ್ಕೆ ಹೋದಾಗ ಇನ್ನೂ ಸಂಜೆ ನಾಲ್ಕು ಗಂಟೆ. ಎಲ್ಲಿಂದಲೋ ನಾಲ್ಕು ಕಾಗೆಗಳು ಹಾರಿ ಬಂದವು. ಕೆಲವೇ ನಿಮಿಷಗಳಲ್ಲಿ ಅವು ಎಂಟಾದವು. ಎಂಟು ಹದಿನಾರಾಯಿತು. ಹದಿನಾರು ಮೂವತ್ತೆರಡಾಯಿತು. ಮೂವತ್ತೆರಡು ಅರವತ್ನಾಲ್ಕಾಯಿತು. ಅರವತ್ನಾಲ್ಕು ನೂರಿಪ್ಪತ್ತೆಂಟಾಯಿತು.</p>
<p>ಅಷ್ಟೂ ಕಾಗೆಗಳು ಸಂಜೆ ಹೊತ್ತಿಗೆ ಅಸಾಧ್ಯ ಗಲಾಟೆ ಆರಂಭಿಸಿದ್ದವು. ಕಾಗೆಗಳ ಈ ಸಂಜೆ ಗಲಾಟೆ ನೋಡಿ ನಮಗೆಲ್ಲ ಭಯವೇ ಆಗಿತ್ತು.</p>
<p>ಕಾಗೆಗಳೆಂದರೆ ಅಶುಭ. ಅವು ಗಲಾಟೆ ಮಾಡಿದರೆ ಸತ್ತ ಸುದ್ದಿ ಕೇಳಬೇಕಾಗುತ್ತದೆ!</p>
<p>ರಾತ್ರಿ ಕೂಡ ಕಾಗೆಗಳು ತೋಟದಲ್ಲಿಯೇ ಉಳಿದುಕೊಂಡವು. ರಾತ್ರಿಯೂ ಅವು ಅಲ್ಪ ಸ್ವಲ್ಪ ಗಲಾಟೆ ಮಾಡಿದ್ದವು. ಆದರೆ ಬೆಳಿಗ್ಗೆ ಹಾರಿ ಹೋದವು. ಜೊತೆಗೆ ನಮ್ಮ ಆತಂಕ ಸಹ!</p>
<p>ಸಂಜೆಯಾಯಿತು.</p>
<p>ಗುಂಪು ಗುಂಪಾಗಿ ಕಾಗೆಗಳು ತೋಟಕ್ಕೆ ಲಗ್ಗೆ ಇಡತೊಡಗಿದವು. ಇಂದು ನಿನ್ನೆಗಿಂತ ಹೆಚ್ಚು ಸಂಖ್ಯೆಯಲ್ಲಿವೆ ಎಂದು ನಾನು ಹೇಳಿದ್ದೆ. `ಬೀರಬಲ್ಲನ ಕಾಗೆ ಲೆಕ್ಕ' ಅಂತ ಗಾದೆಯೇ ಇದೆ ಎಂದು ಅಪ್ಪ ತಮಾಷೆ ಮಾಡಿದ್ದ. ಆದರೆ ತೋಟಕ್ಕೆ ಕಾಗೆಗಳು ಬರುವುದು ಅವನಿಗೆ ತಮಾಷೆಯ ವಿಷಯವಂತೂ ಆಗಿರಲಿಲ್ಲ. ಅದೊಂದು ಕೆಟ್ಟ ಶಕುನದಂತೆ, ಬರಲಿರುವ ಅಪಾಯದ ಮುನ್ಸೂಚನೆಯಂತೆ ಅಪ್ಪನಿಗೆ ಅನಿಸಿತ್ತು.</p>
<p>ಇನ್ನೂ ಒಂದಷ್ಟು ದಿನಗಳು ಕಳೆದವು.</p>
<p>ಕಾಗೆಗಳು ಮಾತ್ರ ತಮ್ಮ ನಿತ್ಯ ಭೇಟಿಯನ್ನು ತಪ್ಪಿಸಲಿಲ್ಲ. ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗತ್ತಿದೆ ಎಂದು ನಮಗೆ ಅನಿಸಲು ಶುರುವಾಗಿತ್ತು.</p>
<p>ಇಡೀ ಊರಿನಲ್ಲಿ ಇದೊಂದು ಚರ್ಚೆಯ ವಿಷಯವಾಯಿತು. ನಮ್ಮ ತೋಟಕ್ಕೆ ಕಾಗೆಗಳು ಬಂದು ಈ ಪ್ರಮಾಣದಲ್ಲಿ ಗಲಾಟೆ ಮಾಡುತ್ತಿರುವುದು ಒಂದು ಭಾರೀ ಅನಾಹುತಕ್ಕೆ ಮುನ್ನುಡಿ ಎಂದು ಎಲ್ಲರೂ ಹೇಳಿದರು. ಒಬ್ಬಬ್ಬರೂ ಒಂದೊಂದು ರೀತಿಯ ಸಲಹೆ ನೀಡಿದರು.</p>
<p>ಶನಿದೇವಸ್ಥಾನಕ್ಕೆ ಹೋಗಿ ಎಂದರು. ಹೋಗಿ ಬಂದಾಯಿತು. ಶನಿಗೆ ಹವನ ಮಾಡಿ ಎಂದರು. ಹವನ ಮಾಡಿದ್ದೂ ಆಯಿತು. ಶನಿವಾರ ವಿಶೇಷ ಪೂಜೆಗಳಾದವು. ಏನನ್ನೋ ತೆಗೆದುಕೊಂಡು ಹೋಗಿ ತೋಟದಲ್ಲಿ ಹುಗಿಯಲಾಯಿತು. ಪೂಜೆ ಮಾಡಲಾಯಿತು. ಶಿರಸಿ ಆಶ್ರಮ ಆಯಿತು. ಸೋಂದಾ ಮಠ ಆಯಿತು. ಡೊಂಕಳ್ಳ ತೋಟದಲ್ಲಿ ಚೌಡಿ ಏನಾದರೂ ಇದೆಯೋ ಎಂದು ಅಷ್ಟಮಂಗಲ ಪ್ರಶ್ನೆ ಹಾಕಿಸಿದ್ದು ಅಂಥ ಪ್ರಯತ್ನಗಳಲ್ಲಿ ಕೊನೆಯದು.</p>
<p>ಎಲ್ಲವೂ ಡೊಂಕಳ್ಳದಲ್ಲಿ ಮಾಡಿದ ಹೋಮವಾಯಿತು!</p>
<p>ಕಾಗೆಗಳ ಭೇಟಿ ನಿಲ್ಲಲಿಲ್ಲ. ಪ್ರತಿದಿನ ಸಂಜೆಯೂ ಅವು ನೂರಾರು ಸಂಖ್ಯೆಯಲ್ಲಿ ನಮ್ಮ ಎರಡೆಕರೆ ತೋಟಕ್ಕೆ ಬಂದು ಅಡಿಕೆ ಗರಿ, ಬಾಳೆ ಎಲೆಗಳ ಮೇಲೆ ಕುಳಿತು ಗದ್ದಲ ಮಾಡುವುದು ಮುಂದುವರೆಯಿತು.</p>
<p>ಸ್ವಲ್ಪವೇ ದಿನ ಅಷ್ಟೇ.</p>
<p>ಕಾಗೆಗಳು ಬರುತ್ತಿದ್ದುದರಿಂದ ಆಗುವ ಆರ್ಥಿಕ ಹಾನಿಗಳು ಗೋಚರಿಸತೊಡಗಿದವು. ಕಾಗೆಗಳು ಸಾಲಾಗಿ ಬಾಳೆ ಎಲೆಯ ಮೇಲೆ ಕುಳಿತುಕೊಳ್ಳುತ್ತಿದ್ದವು. ಕಾಲು ಉಗುರಿಗೆ ಸಿಕ್ಕು ಬಾಳೆ ಎಲೆಗಳೆಲ್ಲ ಹರಿದುಹೋಗುತ್ತಿದ್ದವು. ಅವುಗಳ ಹಿಕ್ಕೆ ಬಿದ್ದು ಬಿದ್ದು ಬಾಳೆ ಎಲೆಗಳು ಗಲೀಜಾದವು. ಅಡಿಕೆ ಗಿಡದ ಸುಳಿ ಮೇಲೆ ಕುಳಿತುಕೊಂಡು ಕಾಗೆಗಳು ಅದನ್ನೂ ಮುರಿದು ಹಾಕುತ್ತಿದ್ದವು. ಇದರಿಂದಾಗಿ ತೋಟ ಬೆಳೆಸುವುದಕ್ಕೆ ಅನಿರೀಕ್ಷಿತ ತೊಂದರೆ ಎದುರಾದಂತಾಗಿತ್ತು.</p>
<p>ಈಗ ಊರ ಜನರಿಂದ ಇನ್ನಷ್ಟು ಸಲಹೆಗಳು ಬರತೊಡಗಿದವು. ಬೆಳ್ಳಕ್ಕಿಗಳು ಬಂದಿದ್ದರಿಂದ ಅವುಗಳ ಮೊಟ್ಟೆ ಹುಡುಕಿಕೊಂಡು ಕಾಗೆಗಳು ಬಂದಿವೆ ಎಂಬುದು ಅದರಲ್ಲಿ ಒಂದು ವಾದ. ಹಾಗಾಗಿ ಬೆಳ್ಳಕ್ಕಿಗಳನ್ನು ಓಡಿಸಿದರೆ ಕಾಗೆಗಳು ಓಡುತ್ತವೆ ಎಂಬ ಸೂತ್ರ ಹುಟ್ಟಿಕೊಂಡಿತು.</p>
<p>ಆದರೆ ಬೆಳ್ಳಕ್ಕಿಗಳನ್ನು ಓಡಿಸುವುದು ಕಾಗೆಗಳನ್ನು ಓಡಿಸಿದಷ್ಟೇ ಕಷ್ಟವಿತ್ತು. ಇಷ್ಟಕ್ಕೂ ಈ ಕಾಗೆಗಳು ಬೆಳ್ಳಕ್ಕಿಗಳ ಮೊಟ್ಟೆ ಹುಡುಕುತ್ತಿರುವಂತೇನೂ ಕಾಣಲಿಲ್ಲ. ಈ ನಡುವೆ ಅಚ್ಚೆಮನೆ ಹಿರ್ಪ ಹೊಸ ಐಡಿಯಾ ಕೊಟ್ಟ. ಅದೆಂದರೆ ಒಂದು ಕಾಗೆಯನ್ನು ಹೊಡೆದು ಅದನ್ನು ತೋಟದ ತುದಿಗೆ ನೇತು ಹಾಕುವುದು!</p>
<p>ಮೊದಲ ಸಲ ಅಪ್ಪ ಕಾಗೆಗಳನ್ನು ಹೊಡೆಸಲು ಮುಂದಾದ. ಒಂದು ಕಾಗೆ ಹೊಡೆಸಿ ಅದನ್ನು ತೋಟದ ತುದಿಗೆ ನೇತು ಹಾಕಲಾಯಿತು. ಸತ್ತ ಕಾಗೆಯ ಸುತ್ತ ಒಂದಷ್ಟು ಕಾಗೆಗಳು ಗಲಾಟೆ ಮಾಡಿದವು. ಆದರೆ ಕಾಗೆಗಳ ಭೇಟಿ ಮಾತ್ರ ನಿಲ್ಲಲಿಲ್ಲ. ಈ ರೀತಿಯ ಬೆದರಿಕೆ ತಂತ್ರಗಳಿಗೆ ಜಗ್ಗದಿರಲು ಕಾಗೆಗಳು ನಿರ್ಧರಿಸಿದಂತಿದ್ದವು.</p>
<p>ಅಪ್ಪನಿಗೂ ಸಾಕು ಸಾಕಾಗಿತ್ತು. ಕಾಗೆಗಳು ತೋಟ ಮಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿದವನಂತೆ ಆತ ಕಾಗೆಗಳ ಮಾರಣ ಹೋಮಕ್ಕೆ ತೀರ್ಮಾನ ಮಾಡಿದ. ಆರಂಭದಲ್ಲಿ ಒಂದು ಕಾಗೆಗೆ ಹತ್ತು ರೂಪಾಯಿ ಸ್ಕೀಮು ಜಾರಿಗೆ ಬಂತು. ಸಂಜೆಯಾದರೆ ತೋಟದಲ್ಲೇ ಠಳಾಯಿಸುತ್ತಿದ್ದ ಕಾಗೆಗಳನ್ನು ಲಕ್ಷಣ ಸಿದ್ದಿ ಒಂದೊಂದಾಗಿ ಹೊಡೆದು ಹಾಕಿದ. ಅವನು ಎಣಿಸುತ್ತಿದ್ದ ಒಂದೊಂದು ಹತ್ತು ರೂಪಾಯಿ ನೋಟಿನ ಹಿಂದೆಯೂ ಒಂದೊಂದು ಕಾಗೆಯ ಸಮಾಧಿಯಿತ್ತು.</p>
<p>ಕೆಲವು ದಿನ ಅಷ್ಟೇ.</p>
<p>ಈ ಉಪಾಯ ಆರ್ಥಿಕವಾಗಿ ಸಾಕಷ್ಟು ನಷ್ಟದಾಯಕ ಎಂದು ಅಪ್ಪನಿಗೆ ಅನಿಸಲಾರಂಭಿಸಿತು. ಅಲ್ಲದೇ ಅದರಿಂದ ಪ್ರಯೋಜನ ಆದಂತೆಯೂ ಇರಲಿಲ್ಲ. ಈ ಹಂತದಲ್ಲಿ ಯಾರೋ ಒಂದು ಉಪಾಯ ಕೊಟ್ಟರು. ಅನ್ನಕ್ಕೆ ವಿಷ ಬೆರೆಸಿ ಇಡುವ ಅನಾಹುತಕಾರಿ `ಪಾಯ' ಅದು.</p>
<p>ಒಂದು ದಿನ ಅದನ್ನು ಅಪ್ಪ ಜಾರಿಮಾಡಿಯೇ ಬಿಟ್ಟ. ತೋಟದಲ್ಲಿ ಅಲ್ಲಲ್ಲಿ ಅನ್ನ ಇಡಲಾಯಿತು. ಅದಕ್ಕೆ ವಿಷ ಬೆರಸಲಾಯಿತು. ಅದನ್ನು ತಿನ್ನಲು ಕಾಗೆಗಳು ಸ್ಪರ್ಧೆಯನ್ನೇ ತೋರಿಸಿದವು. ಸಾವಿಗಾಗಿ ಹೋರಾಟ ನಡೆಸಿದವು. ಒಂದೇ ದಿನದಲ್ಲಿ ನೂರಾರು ಕಾಗೆಗಳು ಸತ್ತುಹೋದವು.</p>
<p>ಅದು ಕೊನೆ.</p>
<p>ಡೊಂಕಳ್ಳ ತೋಟಕ್ಕೆ ಕಾಗೆಗಳು ಪುನಃ ಭೇಟಿ ಕೊಡಲಿಲ್ಲ.</p>
<p>***</p>
<p>ಮೂರ್ನಾಲ್ಕು ತಿಂಗಳೇ ಕಳೆದಿರಬೇಕು. ಮನೆಯಲ್ಲಿ ಅಜ್ಜನ ತಿಥಿ. ಊರವರೆಲ್ಲ ಬಂದಿದ್ದರು. ಭಟ್ಟರೂ ಬಂದಿದ್ದರು. ಅಜ್ಜನಿಗೆ ಪಿಂಡ ಪ್ರದಾನ ಆಯಿತು. ದಾನ, ಬ್ರಾಹ್ಮಣರ ಊಟ ಮುಗಿಯಿತು.</p>
<p>ಈಗ ಅಪ್ಪ ಪಿಂಡವನ್ನು ತೆಗೆದುಕೊಂಡು ಕೊಟ್ಟಿಗೆ ತುದಿಗೆ ಹೋದ. ಅಲ್ಲಿ ಅದನ್ನು ಇಟ್ಟು ಎಂದಿನಂತೆ `ಹಾರ್‌ ಹಾರ್‌' ಎಂದು ಕರೆದ. ಅದನ್ನು ಕಾಗೆಗಳು ಬಂದು ತಿನ್ನಬೇಕು. ತಿಂದ ಮೇಲೇ ಶ್ರಾದ್ಧದಲ್ಲಿ ತೊಡಗಿಕೊಂಡವ ಊಟ ಮಾಡಬೇಕು ಎನ್ನುವುದು ಪದ್ದತಿ.</p>
<p>ಅಪ್ಪ ಕರದೇ ಕರೆದ.</p>
<p>`ಹಾರ್‌ ಹಾರ್‌'</p>
<p>ಕಾಗೆಗಳು ಬರಲಿಲ್ಲ.</p>
<p>`ಹಾರ್‌ ಹಾರ್‌'</p>
<p>ಕಾಗೆಗಳು ಬರಲಿಲ್ಲ.</p>
<p>`ಹಾರ್‌ ಹಾರ್‌ ಹಾರ್‌ ಹಾರ್‌'</p>
<p>ಕಾಗೆಗಳು ಬರಲೇ ಇಲ್ಲ!</p>
]]></content:encoded>
</item>
<item>
<title><![CDATA[ವರದಿ: ದುನಿಯಾ ಐ ಲವ್‌ ಯೂ]]></title>
<link>http://pichchar.wordpress.com/2007/03/14/%e0%b2%b5%e0%b2%b0%e0%b2%a6%e0%b2%bf-%e0%b2%a6%e0%b3%81%e0%b2%a8%e0%b2%bf%e0%b2%af%e0%b2%be-%e0%b2%90-%e0%b2%b2%e0%b2%b5%e0%b3%8d%e2%80%8c-%e0%b2%af%e0%b3%82/</link>
<pubDate>Wed, 14 Mar 2007 11:40:10 +0000</pubDate>
<dc:creator>Gundkal</dc:creator>
<guid>http://pichchar.wordpress.com/2007/03/14/%e0%b2%b5%e0%b2%b0%e0%b2%a6%e0%b2%bf-%e0%b2%a6%e0%b3%81%e0%b2%a8%e0%b2%bf%e0%b2%af%e0%b2%be-%e0%b2%90-%e0%b2%b2%e0%b2%b5%e0%b3%8d%e2%80%8c-%e0%b2%af%e0%b3%82/</guid>
<description><![CDATA[
ದುನಿಯಾ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯ]]></description>
<content:encoded><![CDATA[<p><img vspace="3" align="left" src="http://pichchar.files.wordpress.com/2007/03/suri.jpg" hspace="5" alt="suri.jpg" /></p>
<p><a href="http://pichchar.files.wordpress.com/2007/03/suri.jpg" title="suri.jpg"></a><font size="3"><strong>ದು</strong>ನಿಯಾ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೆಜೆಸ್ಟಿಕ್‌ ಚಿತ್ರಮಂದಿರದಲ್ಲಿ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಬ್ಲ್ಯಾಕ್‌ನಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ. ಮೆಜೆಸ್ಟಿಕ್‌ನಲ್ಲಿ ಕನ್ನಡ ಚಿತ್ರವೊಂದಕ್ಕೆ ಬ್ಲ್ಯಾಕ್‌ನಲ್ಲಿ ಟಿಕೆಟ್‌ ಕೊಡದೇ ಎಷ್ಟೆಲ್ಲ ವರ್ಷಗಳಾಗಿತ್ತು ಎಂದು ಅಲ್ಲಿನ ಸಿಬ್ಬಂದಿಗಳು ಉದ್ಗರಿಸುತ್ತಿದ್ದಾರೆ.</font><font size="3">ತಾಂತ್ರಿಕವಾಗಿ ನೋಡಿದರೆ `ದುನಿಯಾ' ಇತ್ತೀಚೆಗೆ ಬಂದ ಕನ್ನಡ ಚಿತ್ರಗಳಲ್ಲೇ ಅತ್ಯುತ್ತಮ. ಹಳೆಯ ವಸ್ತುವನ್ನೇ ನಿರ್ದೇಶಕ ಸೂರಿ ಹೊಸ ರೀತಿಯಲ್ಲಿ ಟ್ರೀಟ್‌ ಮಾಡಿದ ರೀತಿ ಹಲವರ ಮೆಚ್ಚುಗೆ ಪಡೆಯುತ್ತಿದೆ. ಹೀಗಿದ್ದರೂ `ಮುಂಗಾರು ಮಳೆ'ಗೆ ಹೋಲಿಸಿದರೆ ಚಿತ್ರದ ಗಳಿಕೆ ಹೆಚ್ಚು ದಿನ ನಿಲ್ಲುವ ಸಾಧ್ಯತೆಗಳಿಲ್ಲ. ಕಾರಣ: ಮಹಿಳೆಯರು, ಹುಡುಗಿಯರನ್ನು ಸೆಳೆಯುವಲ್ಲಿ ಚಿತ್ರ ಅಷ್ಟು ಯಶಸ್ವಿಯಾಗಿಲ್ಲ.</font><font size="3"> </font><font size="3">ಕಾರಣ ಏನು ಎನ್ನುವುದು ಇಡೀ ಗಾಂಧೀನಗರಕ್ಕೆ ಗೊತ್ತು. `ದುನಿಯಾ'ದಲ್ಲಿರುವ ಪ್ರೀತಿಯ ಕತೆಯನ್ನು ಅದರಲ್ಲೇ ಇರುವ ರೌಡಿ ಜಗತ್ತಿನ ದ್ವೇಷದ ಕತೆ ಹಿಂದಕ್ಕೆ ಹಾಕಿದೆ. ರೌಡಿ ಜಗತ್ತಿನ ಸಂಬಂಧಗಳಿಗಿಂತ ಪ್ರೀತಿಯ ಜಗತ್ತಿನ ಸಂಬಂಧಗಳು ಮುಖ್ಯವಾಗಿಬಿಟ್ಟಿದ್ದರೆ ಈ ಸಿನಿಮಾ ಎಲ್ಲರನ್ನೂ ಆಕರ್ಷಿಸುವುದು ಸಾಧ್ಯವಿತ್ತಲ್ಲವೇ ಎನ್ನುವುದು ಈಗ ಚರ್ಚೆಯ ವಿಷಯ.</font><font size="3">ಅದೇನೇ ಇರಲಿ. ನಿರ್ದೇಶಕ ಸೂರಿಗೆ ಇದು ಮೊದಲ ಸಿನಿಮಾ. ಬಲ್ಲವನೇ ಬಲ್ಲ ಸಿನಿಮಾ ಬಿಡುಗಡೆಯ ವೇದನೆ. ಅದರಲ್ಲೂ ಸ್ಟಾರ್‌ಗಳಿಲ್ಲದ ದುನಿಯಾದಂಥ ಸಿನಿಮಾ ನಿರ್ದೇಶಕನ ಕತೆಯೇನು? ಬಿಡುಗಡೆಗೆ ಮೊದಲಿನ ದಿನ ಸಂಜೆಯ