<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಪ್ರಬಂಧ &amp;laquo; WordPress.com Tag Feed</title>
	<link>http://wordpress.com/tag/ಪ್ರಬಂಧ/</link>
	<description>Feed of posts on WordPress.com tagged "ಪ್ರಬಂಧ"</description>
	<pubDate>Wed, 08 Oct 2008 06:37:50 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಒಂದಿಷ್ಟು ಚಿತ್ರಿಕೆಗಳು]]></title>
<link>http://saviganasu.wordpress.com/?p=36</link>
<pubDate>Tue, 16 Sep 2008 16:58:53 +0000</pubDate>
<dc:creator>pbanagi</dc:creator>
<guid>http://saviganasu.kn.wordpress.com/2008/09/16/%e0%b2%92%e0%b2%82%e0%b2%a6%e0%b2%bf%e0%b2%b7%e0%b3%8d%e0%b2%9f%e0%b3%81-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86%e0%b2%97%e0%b2%b3%e0%b3%81/</guid>
<description><![CDATA[ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ]]></description>
<content:encoded><![CDATA[<p>ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!</p>
<p>ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ<br />
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!</p>
<p>ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!</p>
<p>ಕಪ್ಪು ಹೊಲವ ತಬ್ಬಿದ ಸೂರ್ಯಕಾಂತಿಯ ಮುಖದ ಮೇಲೆ ಮುಗಿಲಲ್ಲಿ ಮೂಡಿದ ಕಾಮನಬಿಲ್ಲು ಸತ್ತು ತೇಲುತ್ತಿತ್ತು!</p>
<p>(ಕ್ಯಾನ್‌ವಾಸ್‌ನಲ್ಲಿ ಕೆತ್ತುವ ಪೇಂಟಿಂಗ್‌ನಂತ ಸಾಲುಗಳೆಂದರೆ ಅದೇನೋ ಆಕರ್ಷಣೆ. ಅದಕ್ಕೇ ಅವನ್ನು ಚಿತ್ರಿಕೆಗಳು ಅಂತಲೇ ಕರೆಯಬೇಕೆನಿಸಿತು. ಇಂತಹ ಸಾಲುಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ನಂತರ ವಲಯವೊಂದನ್ನು ನಿರ್ಮಿಸುತ್ತವೆ.ಮತ್ತೆ ಮತ್ತೆ ಓದಿದಾಗ ಹೊಸ ಅರ್ಥಗಳನ್ನು ನೇಯುತ್ತವೆ. ಅಂತೆಯೇ ಕೆಲವು ಸಾಲುಗಳು ಹುಟ್ಟಿಕೊಂಡಿವೆ. )</p>
]]></content:encoded>
</item>
<item>
<title><![CDATA[ಮುಂಗಾರಿನಾಭಿಷೇಕಕೆ ಮಿದುವಾಯಿತು ನೆಲವು...!]]></title>
<link>http://saviganasu.wordpress.com/?p=20</link>
<pubDate>Thu, 26 Jun 2008 11:23:14 +0000</pubDate>
<dc:creator>pbanagi</dc:creator>
<guid>http://saviganasu.kn.wordpress.com/2008/06/26/%e0%b2%ae%e0%b3%81%e0%b2%82%e0%b2%97%e0%b2%be%e0%b2%b0%e0%b2%bf%e0%b2%a8%e0%b2%be%e0%b2%ad%e0%b2%bf%e0%b2%b7%e0%b3%87%e0%b2%95%e0%b2%95%e0%b3%86-%e0%b2%ae%e0%b2%bf%e0%b2%a6%e0%b3%81%e0%b2%b5%e0%b2%be/</guid>
<description><![CDATA[ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ]]></description>
<content:encoded><![CDATA[<p>ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ...ಮತ್ತಿನ್ನೇನೋ... <br />
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ.  ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು. <br />
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? ಮಂದಿಯ ಮಾತು ಬಿಡಿ. ಮೊದಲ ಮಳೆಯ ಮುಂಚಿನ ಹನಿಗೆ ಚಿಪ್ಪಿನೊಳಗಣ ಮೆದು ಜೀವಿಯೂ ಉಸಿರು ಬಿಗಿ ಹಿಡಿದು ಬಾಯಿ ಬಿಡುತ್ತಂತೆ! ಉಳುವ ಯೋಗಿ ಮತ್ತವನ ಹೊಲವೂ ಬಾಯ್ಬಿಟ್ಟು ನಿಂತು ಕಾಯುವವರ ಸಾಲಿಗೆ ಸೇರಿಕೊಳ್ಳುತ್ತದೆ. ಮಳೆ, ಮತ್ತದು ಹಿಡಿಯುವ ಮಗುರೂಪಿ ರಚ್ಚೆ ತುಸು ಬೇಗನೇ ಕಿರಿ ಕಿರಿ ಹುಟ್ಟಿಸುತ್ತದಾದರೂ ಅದು ಉಳಿದೆರಡು ಕಾಲಗಳ ಬೇಸರಕ್ಕೆ ಸಮವಲ್ಲ.     <br />
ಬೇಸಿಗೆಯ ಬಿಸಿಲಿನಲ್ಲಿ ಕಾದು, ಬಿರುಕಾಗಿ ನಿಂತ ನೆಲದ ಮುಕ್ತಿಗೆ ವರುಣನ ಆಗಮನವಾಗಲೇ ಬೇಕು. ಮೊದಲ ಮಳೆಗೆ ಮಿದುವಾಗುವ ನೆಲವು ಚಿಮ್ಮಿಸುವ ಘಮ್ಮನೆ ವಾಸನೆಯೂ ಬಲು ಹಿತ. ಅಂದ ಹಾಗೆ ಮಳೆಯ  ವೈಖರಿ ನಿಖರವೇನಲ್ಲ. ಮಳೆಯೆಂಬುದು ಒಂದೆಡೆ ತಲೆದೂಗಿಸುವ ಭಾವಗೀತೆ, ಮತ್ತೊಂದೆಡೆ ಮೈ ಮರೆಯಿಸುವ ಶಾಸ್ತ್ರೀಯ, ಇನ್ನೊಂದೆಡೆ ಅಬ್ಬರಿಸುವ, ಹುಚ್ಚೆಬ್ಬಿಸುವ, ಕುಣಿಸುವ ವೆಸ್ಟರ್ನ್ ಕೂಡ!<br />
ಬಯಲು ಸೀಮೆಯ ಮಳೆ ಪ್ರಕೃತಿಯ ಪೊರೆಯುವ ಉದ್ದೇಶವಿರುವ ತುಂತುರಾಗಬಹುದಷ್ಟೇ. ಆದರೆ ಮಲೆನಾಡಿನ ಮಳೆಯ ಆರ್ಭಟ ಬಲು ಜೋರು.<br />
ತೀರ್ಥಳ್ಳಿ ಗೌಡ, ಭಟ್ಟರ ಅಡಿಕೆ ತೋಟಗಳ ಬೇಲಿ ತಡಿಕೆ<br />
ದಾಟಿ ಬುಡದಡಿಯ ಮೌನದ ಮಡಿಕೆ<br />
ಗಳ ಮಡಿಗೊಳಿಸಿ ಶಬ್ದದಿಂದ<br />
ಕಬ್ಬು ಭತ್ತವ ಥಳಿಸಿ,<br />
ಬೆಟ್ಟಗಳನಳಿಸಿ,<br />
ಸೋಂಭೇರಿ ಬಿಸಿಲ ಹೊಡೆದಟ್ಟಿ<br />
ಬಾನಗಲ ಬಿಡಾರಗಳ ಕಟ್ಟಿ...<br />
ಇದು ನಿಸಾರರು ಕಂಡ ಮಲೆನಾಡಿನ ಸಂಜೆ ಮಳೆ. ಭೋರಿಡುವ ಗಾಳಿ, ಗುಡುಗಿ ನಡುಗಿಸುವ ಗುಡುಗು, ಬಾನು-ಭೂಮಿಯನ್ನು ಒಂದಾಗಿಸುವ ಕೋಲ್ಮಿಂಚು, ಛಳ್ಳನೆ ಬೆಳಗುವ ಸಿಡಿಲು, ರೇಜಿಗೆ ಹುಟ್ಟಿಸುವ ಕಚ-ಪಿಚ ಕೆಸರು, ವಾರಕ್ಕೊಮ್ಮೆ ಇಣುಕಿದರೂ ಪ್ರಖರತೆ ಮರೆತ ಸೂರ್ಯ, ಮಳೆಗಾಲ ಬಂದೊಂಡನೆ ವರ್ಷದ ರಜೆ ಹಾಕಿ ಹೊರಡುವ ವಿದ್ಯುತ್... ಇವೆಲ್ಲಾ ಮಳೆಗಾಲದ ಮಲೆನಾಡಿನ ನಿತ್ಯ ಸ್ಥಿಥಿಗಥಿಗಳು. ಅಂತೆಯೇ ಮಳೆಯಿಂದ ರಸ್ತೆಯ ಇಕ್ಕೆಲಗಳ ಕಾಲುವೆಗಳಲ್ಲಿ ತುಂಬಿ ಹರಿಯುವ, ಕೆಂಪು ವರ್ಣದ ನೀರೆಬ್ಬಿಸುವುದು ಜುಳು ಜುಳು ನಾದವನ್ನಲ್ಲ, ಅಬ್ಬರವನ್ನ! ಆದರೆ ಈ ಎಲ್ಲಾ ಸಣ್ಣ ಪುಟ್ಟ ಕಷ್ಟಗಳು ಮಧುರಾತಿ ಮಧುರ ಸಂವೇದನೆಗೆ ಸಹಕಾರಿಗಳು. ಏತನ್ಮಧ್ಯೆ ಮಳೆಯೊಂದಿಗೇ ಪುನಃ ಚಾಲೂ ಆಗುವ ನಾಡೆಂಚಿನ ಶಾಲೆಗಳಿಗೆ ಪುಟ್ಟ ಬಣ್ಣದ ಛತ್ರಿ, ರೇನ್ ಕೋಟ್‌ನೊಡನೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವ ಪುಟಾಣಿಗಳು, ಕಂಬಳಿ ಹೊದ್ದು ಹಸಿರ ಬೆಟ್ಟದಲ್ಲಿ ದನ ಮೇಯಿಸುವ ಬಗೆ, ಸಂಜೆಯಾದೊಡನೆ ಗದ್ದಲವೆಬ್ಬಿಸುವ ಮಳೆ ಹುಳುಗಳ ವಾದ್ಯವೃಂದ! ಕಲ್ಪನೆಯೇ ನೆನಪುಗಳನ್ನು ಕೆದಕುವ ಕೆಲಸಕ್ಕೆ ಕೈ ಹಚ್ಚುತ್ತದಲ್ಲವಾ? ಅದೇ ಮಳೆಯ, ಅದರಲ್ಲೂ ಮಲೆನಾಡ ಮಳೆಯ ಕರಾಮತ್ತು. <br />
    <br />
ಛೇ! ಎನ್ನಿಸುವ ಬೇಸರದ ನಡುವೆ, ಹೊರಗೆ ಜಿಟಿ ಜಿಟಿ ಮಳೆ ಹೊಯ್ಯುತ್ತಿರುವಾಗ, ಅಮ್ಮ ಮಾಡಿಕೊಟ್ಟ ಬೆಚ್ಚಗಿನ ಹಬೆಯಾಡುವ ಕಾಫಿ ಸೇವನೆಯ ಅದ್ಭುತ ಅನುಭವ ಮಳೆಗಾಲದಲ್ಲಷ್ಟೇ ಸಾಧ್ಯ ತಾನೇ? ಹಳೆಯ ನೋಟ್ ಬುಕ್ಕಿನ ಒಂದೊಂದೇ ಪುಟವನ್ನು ಕತ್ತರಿಸಿ, ಒಂದು ಕಡೆ ಊನವಾದ ದೋಣಿ ಮಾಡಿ ಅದರೊಳಗೊಂದು ಚಿಕ್ಕ ಕಲ್ಲಿಟ್ಟು ಹರಿಯುವ ನೀರಿನಲ್ಲಿ ತೇಲಿಬಿಡುವ ಆಸೆಯೂ ಮಳೆಯೊಂದಿಗೆ ಮತ್ತೆ ಕುಡಿಯೊಡೆಯುತ್ತದೆ. <br />
ಸುರಿಯುವುದರೊಂದಿಗೆ ಮನಸುಗಳನ್ನೂ ಒದ್ದೆ ಮಾಡುವ ಮಳೆಯೆಂಬ ಲಗಾಟಿಕೋರನೆಬ್ಬಿಸುವ ದಾಂಧಲೆಗೂ ಲೆಕ್ಕವಿಲ್ಲವೆನ್ನಿ! ಆದುದರಿಂದಲೇ ಮಳೆ ಕೆಲವೊಮ್ಮೆ ಯಾರಿಗೂ ಬೇಡದ, ಎಲ್ಲರೂ ತೆಗಳುವ ಬಿಕನಾಶಿಯಾಗಿಬಿಡುತ್ತದೆ. <br />
ಕಂಪೆಬ್ಬಿಸುವ ವರ್ಷಧಾರೆಗೊಂದು ಚರಣ ಹಾಡುತ್ತಾ, ಮೈ ಮನಸುಗಳನ್ನು ಆರ್ದ್ರಗೊಳಿಸುವ ಮಳೆ ಸುರಿವ ರೀತಿಗೆ ಅದರ ಬೆರಗಿಗೆ ಬಾಗುತ್ತಾ, ಸೃಷ್ಟಿಯ ಸುಂದರ ರೂಪಕಗಳ ಅಭಿವ್ಯಕ್ತಿಯಲ್ಲಿ ಚಿಣ್ಣಾಟವಾಡುವ ಮಗುವಾಗುತ್ತಾ, ಹರಿವ ಕೆಂಪು ಕೋಡಿಯನ್ನು ಸುಮ್ಮನೇ ನೋಡುತ್ತಾ ಹಾಗೇ ಒಮ್ಮೆ ಒದ್ದೆಯಾಗಿಬಿಡೋಣ ಬನ್ನಿ.</p>
<p>(ಮೊನ್ನೆ ಅಧಿಕೃತವೆಂಬಂತೆ ಮೈಸೂರಲ್ಲಿ ಮಳೆಗಾಲ ಶುರುವಾದ ಸಂದರ್ಭದಲ್ಲಿ ಒಂದಷ್ಟು ಖಾಯಂ ಕಾಡುವ ಸಂಗತಿಗಳಿಗೆ ಜೀವ ಬಂತು. ಮಲೆನಾಡ ನಮ್ಮನೆ ಕರೆಯಿತು! ಈ ನಡುವೆ ದಾಖಲಾದ ಬರಹವಿದು)<a href="http://saviganasu.files.wordpress.com/2008/06/kalasa-toor-1493.jpg"><img class="alignright size-medium wp-image-26" src="http://saviganasu.wordpress.com/files/2008/06/kalasa-toor-1493.jpg?w=300" alt="" width="300" height="225" /></a><a href="http://saviganasu.files.wordpress.com/2008/06/kalasa-toor-1583.jpg"></a><a href="http://saviganasu.files.wordpress.com/2008/06/kalasa-toor-1582.jpg"></a><a href="http://saviganasu.files.wordpress.com/2008/06/kalasa-toor-1491.jpg"></a></p>
]]></content:encoded>
</item>
<item>
<title><![CDATA[ಅವನು ಮಗುವಾಗಿಯೇ ಇದ್ದ, ನಾನು ದೊಡ್ಡವನಾಗಿದ್ದೆ !]]></title>
<link>http://chendemaddale.wordpress.com/?p=143</link>
<pubDate>Sat, 14 Jun 2008 18:46:04 +0000</pubDate>
<dc:creator>navada</dc:creator>
<guid>http://chendemaddale.kn.wordpress.com/2008/06/14/%e0%b2%85%e0%b2%b5%e0%b2%a8%e0%b3%81-%e0%b2%ae%e0%b2%97%e0%b3%81%e0%b2%b5%e0%b2%be%e0%b2%97%e0%b2%bf%e0%b2%af%e0%b3%87-%e0%b2%87%e0%b2%a6%e0%b3%8d%e0%b2%a6-%e0%b2%a8%e0%b2%be%e0%b2%a8%e0%b3%81/</guid>
<description><![CDATA[

ಹೌದು, ನೀವು ಹೇಳಿದಂತೆಯೇ ಆಯಿತು. ಕಣ್ಣು ತು]]></description>
<content:encoded><![CDATA[<p><a href="http://chendemaddale.files.wordpress.com/2008/06/son1.jpg"></a></p>
<p><a href="http://chendemaddale.files.wordpress.com/2008/06/son1u.jpg"><img class="alignright size-medium wp-image-144" style="border:2px solid black;float:right;" src="http://chendemaddale.wordpress.com/files/2008/06/son1u.jpg?w=225" alt="" width="225" height="300" /></a></p>
<p>ಹೌದು, ನೀವು ಹೇಳಿದಂತೆಯೇ ಆಯಿತು. ಕಣ್ಣು ತುಂಬಿ ಬಂದಿತು. ಹೃದಯ ಭಾರವಾಯಿತು. ಆದರೂ ಹೊರಟು ಬಂದೆ. ನನ್ನ ಮಗ ಋತುಪರ್ಣ ಶಾಲೆಗೆ ಹೋದನೆಂಬ ಸಂಭ್ರಮದ ಹೆಗ್ಗಳಿಕೆಯೆಲ್ಲಾ ಈ ಮಧ್ಯೆ ಮಸುಕು ಮಸುಕಾಗಿ ತೋರಿತು. ಮಕ್ಕಳನ್ನು ಅನಿವಾರ್ಯವಾಗಿ ಶಾಲೆಗೆ ಕಳುಹಿಸಬೇಕಾದ ಸಂಕಷ್ಟ ಸಹಿಸಿಕೊಳ್ಳುವುದೇ ದೊಡ್ಡ ಕಷ್ಟವೆನಿಸಿದ್ದು ಆಗಲೇ.<br />
ಜೂ. ೧೧ ರಂದು ನನ್ನ ಮಗ ಮೊದಲ ದಿನ ಶಾಲೆಗೆ ಹೋದ. ಅವನ ಹಿಂದೆಯೇ ನಾನೂ ಮತ್ತು ನನ್ನ ಮಾವ ಅವನ ಶಾಲೆಯನ್ನು ನೋಡಿ ಬಂದೆವು. ಬಹಳ ಚೆನ್ನಾಗಿದೆ ಶಾಲೆ. ಎಷ್ಟೋ ಬಾರಿ ಇಂದಿನ ಒತ್ತಡದ, ಅಂಕ ಗಳಿಕೆಯಷ್ಟೇ ಮಾನದಂಡವಾಗಿಸಿದ ಶಿಕ್ಷಣದ ಬಗ್ಗೆ ಸಿಟ್ಟು ಬಂದದ್ದಿದೆ. ನಮ್ಮ ಮಕ್ಕಳಲ್ಲಿನ ನೈಜ ಪ್ರತಿಭೆಗೆ ಅವಕಾಶ ನೀಡದೇ ಯಾರೋ ನಿರ್ಧರಿಸಿದ "ಕಾಮನ್’ ಅಂಶಗಳನ್ನೇ ಎಲ್ಲಾ ಮಕ್ಕಳಿಗೂ ತುಂಬಿ ಕಳುಹಿಸುವ ಶಿಕ್ಷಣ ಒಂದು ಹೊರೆ ಎನಿಸಿದ್ದೂ ಇದೆ. ಅಷ್ಟೇ ಅಲ್ಲ. ನಮ್ಮ ಮಕ್ಕಳು ಒಮ್ಮೆ ಶಾಲೆಯ ಮೆಟ್ಟಿಲು ಹತ್ತಿದರೆಂದರೆ "ಕಟುಕರ ಮನೆಗೆ’ ಕಳುಹಿಸಿದಂತೆಯೇ ಎಂದೂ ಅತ್ಯಂತ ಕಟುವಾಗಿ ಅಂದುಕೊಂಡದ್ದಿದೆ.<br />
ಅದಕ್ಕೆ ಕಾರಣ ಹತ್ತು ಹಲವು. ಅವುಗಳನ್ನೆಲ್ಲಾ ವಿವರಿಸುತ್ತಾ ಕುಳಿತರೆ ದೊಡ್ಡ ಪ್ರಬಂಧವಾಗಿ ಬಿಡುತ್ತದೆ. ಆಡುವ ವಯಸ್ಸಿಗೆ ಆಡುವಂತಿಲ್ಲ, ಒಂದು ಸುಂದರ ಮಳೆ ಬಿದ್ದು ಶುಭ್ರವಾದ ಆಗಸದಲ್ಲಿ ಒಂದು ಚೆಂದಾದ ಮಳೆಬಿಲ್ಲು ಮೂಡಿದರೆ ನೋಡಲಿಕ್ಕೆ ಪುರಸೊತ್ತಿಲ್ಲ. ಹೊರಗೆಲ್ಲೋ ಆಕಾಶದಲ್ಲಿ ವಿಮಾನ ಹಾರಿದ ಸದ್ದು ಕೇಳಿ ಪಟ್ಟನೆ ಹೊರಬಂದು ಇಣುಕಿ ನೋಡುವಂತಿಲ್ಲ. ಅಡುಗೆ ಮನೆಯಲ್ಲಿರುವ ಅಮ್ಮ ಒಮ್ಮೆಲೆ ಗದರಿಸುತ್ತಾಳೆ..."ಮತ್ತೆ ಹೊರಗೆ ಹೋದೆಯಾ...ಕಲಿಯೋದು ಯಾವಾಗ?’.<br />
ಹೀಗೆ ಕಲಿಕೆಯಲ್ಲೇ ಕಲಿಯುವುದನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಯುವ ರಭಸ ನೋಡಿಯೇ ರೋಸಿ ಹೋದವನು ನಾನು. ಅದಕ್ಕೇ ನನ್ನ ಹೆಂಡತಿಗೇ ಅವನ ಪ್ರವೇಶ ಇತ್ಯಾದಿ ಕೆಲಸವನ್ನು ಮುಗಿಸಿಬಿಡು ಎಂದು ನಾನು ದೂರವಿದ್ದೆ. ವಾಸ್ತವವಾಗಿ ಮೊನ್ನೆ ಊರಿಗೆ ಹೋದಾಗ ಅವನ ಶಾಲೆ ನೋಡಿದ್ದೂ ನನ್ನ ಹೆಂಡತಿಯ ಬಲವಂತದಿಂದಲೇ.<br />
ಊರಲ್ಲಿ ರಾತ್ರಿ ಶುರುವಾದ ಮಳೆ ಬೆಳಗ್ಗೆಯಿರಲಿ, ಮಾರನೆ ದಿನ ಸಂಜೆವರೆಗೂ ಬಿಟ್ಟಿರಲಿಲ್ಲ. ಅದರಲ್ಲೂ ನನ್ನ ಮಗ ಶಾಲೆಗೆ ಕೊಡೆ ಕೊಂಡೊಯ್ಯುವಂತಿಲ್ಲವಂತೆ. ಮೊದಲಿಗೆ ಗಾಬರಿಯಾದದ್ದು ನಿಜ. ಆದರೆ ಈ ಶಾಲೆಯಲ್ಲಿ ಅದೇ ಸಂಪ್ರದಾಯ. ಮಕ್ಕಳನ್ನು ಬಸ್ಸಿನಲ್ಲಿ ಕರೆದೊಯ್ಯುತ್ತಾರೆ. ಅವರಿರುವ (ಮಳೆ ಬರುತ್ತಿದ್ದರೆ) ಶಾಲಾ ಅಂಗಳಕ್ಕೇ ಶಾಲೆಯ ಶಿಕ್ಷಕಿಯರು, ಕೆಲಸಗಾರರು ಕೊಡೆ ಹಿಡಿದು ಮಕ್ಕಳನ್ನು ಕರೆದೊಯುತ್ತಾರಂತೆ. ನಮ್ಮೂರಿನಲ್ಲಿ ಕೊಡೆ ಇಲ್ಲದವರು ಸಂಕದಲ್ಲಿ ಕೊಡೆ ಇರುವವರು ದಾಟಿಸಿದಂತೆಯೇ. ಚೆನ್ನಾಗಿದೆ ಎನಿಸಿತು.<br />
ಅಂದಹಾಗೆ ಶಾಲೆ ಚೆನ್ನಾಗಿದೆ, ನೋಡಲಿಕ್ಕೆ, ಕಲಿಯಲಿಕ್ಕೂ ಸಹ ಎನ್ನಬಹುದು. ಅದನ್ನು ನನ್ನ ಮಗ ದೊಡ್ಡವನಾಗಿ ದೃಢೀಕರಿಸಬೇಕು. ದೊಡ್ಡದಾದ ಊಟದ ಮನೆಯಿದೆ. ಅದನ್ನು ಕಂಡೇ ಅರ್ಧ ಖುಷಿಯಾಯಿತೆನಗೆ. ನಾನು ಮೂಲಭೂತವಾಗಿ ಆಹಾರಪ್ರಿಯ. ಶಾಲೆಗೆ ಹೋಗುವ ಮೊದಲು ಹೆಚ್ಚು ಊಟ ಮಾಡಬೇಡ, ನಿದ್ದೆ ಬರುತ್ತೆ ಎಂದು ನನ್ನ ದೊಡ್ಡಮ್ಮ ಎಚ್ಚರಿಸಿದರೂ ಪ್ರತಿ ಬಾರಿಯೂ ಉಲ್ಲಂಘಿಸುತ್ತಿದ್ದೆ. ಆಗ ನನ್ನ ಪ್ರಕಾರ "ನಿದ್ದೆ ಬಂದರೆ ತಪ್ಪಿಸಬಹುದು’, ಆದರೆ ಸಿಗುವ ಊಟ ತಪ್ಪಿದರೆ ಮತ್ತೆ ಸಿಗುವುದೇ ಎಂಬುದು ನನ್ನ ಲೆಕ್ಕಾಚಾರ.<br />
ಮಾರ್ಬಲ್ ಶಿಲೆಯಿಂದ ಕೊಯ್ದು ಮಾಡಿಸಿದ ಊಟದ ಬೆಂಚುಗಳು (ಡೆಸ್ಕ್‌ಗಳ ಹಾಗೆ) ಮಕ್ಕಳಿಗೆ ಎಟುಕುವ ಹಾಗಿವೆ. ನಿತ್ಯವೂ ಮಧ್ಯಾಹ್ನ ಸೊಗಸಾದ ಊಟ ಹಾಕುತ್ತಾರೆ. ಅದಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಸ್ವಚ್ಛತೆಗೆ ಆದ್ಯತೆಯಿದೆ. ನಾನು ಹೋದಾಗ ಹೊಸದಾಗಿ ಈ ವರ್ಷ ಅಡ್ಮಿಷನ್ ಆದ ಮಕ್ಕಳಿಗೆ ಹೊಸ ತಟ್ಟೆಗಳ ಬಂಡಲ್ ಬಂದು ಬಿದ್ದಿತ್ತು. ಅದನ್ನು ಲೆಕ್ಕ ಮಾಡಿ ತೆಗೆದುಕೊಳ್ಳುವುದರಲ್ಲಿ ಶಾಲೆಯ ಸಿಬ್ಬಂದಿಗಳು ಸುಸ್ತಾಗಿದ್ದರು. ಆ ತಟ್ಟೆಯಲ್ಲಿ ನನ್ನ ಮಗನಿಗೂ ಒಂದು ತಟ್ಟೆಯಿದೆ !<br />
ಹೀಗೆ ಊಟದ ಕಥೆ ಮುಗಿದ ಮೇಲೆ ಪ್ರಾಂಶುಪಾಲರ ಬಳಿಗೆ ಬಂದೆ. ಅವರು ಬಹಳ ವಿನಯವಾಗಿ ಎಲ್ಲವನ್ನೂ ವಿವರಿಸುತ್ತಾ ಒಂದು ಕಿವಿಮಾತನ್ನು ಜೋರಾಗಿಯೇ ಹೇಳಿದರೆನ್ನಿ. "ನೋಡಿ, ನಾವು ಈ ಮಕ್ಕಳಿಗೆ ೮ ತಿಂಗಳು ಏನನ್ನೂ ಕಲಿಸುವುದಿಲ್ಲ. ನೀವು ಬೇಸರ ಮಾಡಿಕೊಳ್ಳಬೇಡಿ. ನಂತರ ಏನೂ ಕಲಿಸಿಲ್ಲ ಎಂದು ನಮ್ಮನ್ನು ದೂರಬೇಡಿ’. ವಿಚಿತ್ರ ಹೇಳಿಕೆ ಎನಿಸಿದ್ದು ನಿಜ. ಕಾರಣವೆಂದರೆ, ಈಗ ಶಾಲೆಗೆ ಸೇರಿದ ಮೊದಲ ದಿನವೇ ಇಂಗ್ಲಿಷ್‌ನ ೨೬ ಅಕ್ಷರಗಳನ್ನು ಕಲಿಯಬೇಕು, ವಾಕ್ಯ ರಚನೆ ಸಾಮರ್ಥ್ಯ ಬಂದರೂ ಪರವಾಗಿಲ್ಲ ಎಂದು ಒತ್ತಡ ಹಾಕುವ ದಿನಗಳಿವೆ. ಅಂಥದ್ದರಲ್ಲಿ ಎಂಟು ತಿಂಗಳ ಕಾಲ ಏನೂ ಕಲಿಯುವಂತೆಯೇ ಇಲ್ಲ ಎಂದರೆ ಹೇಗಾಗಬೇಡ.<br />
"ಮತ್ತೆ ಅವರು ಏನು ಮಾಡುವುದು?’ ಎಂದು ಕೇಳಿದೆ. "ಸುಮ್ಮನೆ ಬಂದು ಕುಳಿತುಕೊಳ್ಳುತ್ತಾರೆ. ಹನ್ನೊಂದರ ಸುಮಾರಿಗೆ ಮತ್ತು ನಾಲ್ಕರ ಸುಮಾರಿಗೆ ಹಾಲು, ಬಿಸ್ಕತ್ ಕೊಡುತ್ತೇವೆ. ತಿಂದು ಕುಣಿದಾಡುತ್ತ ಇರುವುದು. ಅವರು ನಮಗೆ ಮೊದಲು ಶಾಲೆಯಲ್ಲಿರುವ ಅಭ್ಯಾಸ ಮಾಡಿಕೊಂಡರೆ ಸಾಕು’ ಎಂದು ಉತ್ತರಿಸಿದವರು ಪ್ರಾಂಶುಪಾಲರು. ಅದೂ ಚೆನ್ನೆಸಿತು.<br />
ಮಕ್ಕಳಿಗೆ ಪಿಕ್ಚರ್, ಸಂಗೀತ ಕೇಳಿಸ್ತೀರಾ ಎಂದದ್ದಕ್ಕೆ "ಆ ಅಭ್ಯಾಸವೂ ನಮಗಿದೆ’ ಎಂದು ಉತ್ತರಿಸಿದ್ದು ಅವರಲ್ಲ ; ಅಲ್ಲಿದ್ದ ಆಡಿಯೋ ಮತ್ತು ವಿಡೀಯೊ ಕೋಣೆ. ಆದರೆ ಈ ಶಾಲೆಯ ಮುಂದೆ ಒಂದಷ್ಟು ಹಸಿರಿದೆ, ಅಪ್ಪಟ ಹಳ್ಳಿಯ ವಾತಾವರಣವೇ ಇದೆ. ಮಳೆಯ ಹನಿಗಳನ್ನು ಕಾಣಲು ಯಾವ ತೊಂದರೆಯೂ ಇಲ್ಲ. ದೊಡ್ಡದಾದ ಪ್ರದೇಶದಲ್ಲಿ ತಲೆ ಎತ್ತಿರುವ ಈ ಶಾಲೆಯ ಬಾಗಿಲಲ್ಲಿ ನಿಂತರೆ ಎದುರಿನ ಪ್ರಕೃತಿ ವೈಭವವನ್ನು ಸವಿಯಬಹುದು. ಅಂದರೆ ಇಲ್ಲಿನ ಮಕ್ಕಳ ಕಣ್ಣು ಒಂದಷ್ಟು ಕಾಲ ತಂಪಾಗಿರಬಹುದು !<br />
ಒಟ್ಟೂ ನನ್ನ ಮಗನ ಶಾಲೆಯನ್ನು ಕಂಡು ವಾಪಸ್ಸಾದೆ. ಸಂಜೆ ೪ ಆಗುವಷ್ಟರಲ್ಲಿ ನನ್ನೊಳಗಿನ ತುಡಿತ ಹೆಚ್ಚುತ್ತಿತ್ತು. ಅವನು ಶಾಲೆಯಿಂದ ಬಸ್ಸಿನಲ್ಲಿ ಬಂದು ಇಳಿಯುವ ಸಂಭ್ರಮ ಹಾಗೂ ಅವನನ್ನು ಬರಮಾಡಿಕೊಳ್ಳಬೇಕೆಂಬ ನನ್ನ ಹಂಬಲ ಅದಕ್ಕೆ ಕಾರಣ. ಉಡುಪಿಗೆ ಹೋದ ನಾನು ಅಲ್ಲಿಂದ ಬಸ್ಸು ಹತ್ತಿದ್ದು ನಾಲ್ಕಕ್ಕೇ. ನನ್ನ ಮಗನ ಶಾಲೆಯ ಬಸ್ಸು ಸಾಲಿಗ್ರಾಮಕ್ಕೆ ತಲುಪುವುದು ೪. ೩೫ ರ ಸುಮಾರಿಗೆ. ಅದನ್ನು ಲೆಕ್ಕ ಹಾಕಿ ಬಸ್ಸು ಹತ್ತಿದರೂ ಪ್ರಯೋಜನವಾಗಲಿಲ್ಲ. ನನ್ನ ಬಸ್ಸು ಸಾಲಿಗ್ರಾಮಕ್ಕೆ ಮುಟ್ಟುವಾಗ ನನ್ನ ಮಗ ಅವನ ಬಸ್ಸಿನಿಂದ ಇಳಿದು ನಡೆದು ಹೋಗುತ್ತಿದ್ದ. ಜತೆಗೆ ಅಜ್ಜ ಇದ್ದರು. ಏನೇನೋ ಹೇಳುತ್ತಿದ್ದ.<br />
ನಿಜ, ಆ ಗಳಿಗೆಯನ್ನು ಕಳೆದುಕೊಂಡೆ. ಆ ಬೇಸರ ನನ್ನನ್ನು ಗಾಢವಾಗಿ ವ್ಯಾಪಿಸಿಕೊಂಡಿದೆ. ಮರು ದಿನ ಮೈಸೂರಿಗೆ ಹೊರಡಲೇಬೇಕಿತ್ತು. ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. "ನೀನ್ಯಾಕೆ ಹೋಗ್ತಿ ?’ ಎಂದು ಹಠ ಹಿಡಿದರೆ ಬಿಡಿಸಲು ಸಾಲಿಗ್ರಾಮದ ಗುರುನರಸಿಂಹನೇ ಬರಬೇಕು. ಅದಕ್ಕೇ ಆರು ತಿಂಗಳಿಂದ ಕೇಳುತ್ತಿದ್ದ ಸೈಕಲ್‌ನ್ನು, ಒಂದು ಚೆಂದವಾದ ಮಳೆ ಅಂಗಿ (ರೈನ್‌ಕೋಟ್) ನ್ನು ಕೊಂಡು ತಂದೆ. ಆವೆರಡರ ಸಂಭ್ರಮದಲ್ಲಿ ನಾನು ಹೋಗುತ್ತಿದ್ದೇನೆ ಎಂಬ ದುಃಖವನ್ನು ಮರೆಸಬೇಕಿತ್ತು ನನಗೆ. ನೋಡಿ, ನನ್ನ ದುರಾದೃಷ್ಟ. ಅಂದೂ ಮನೆಗೆ ಬಂದದ್ದು ಅವನು ಶಾಲೆಯಿಂದ ವಾಪಸ್ಸಾದ ಮೇಲೆಯೇ.<br />
ಅವನು ಬಚ್ಚಲಲ್ಲಿ ಕಾಲು ತೊಳಿಯುತ್ತಿದ್ದ. ನಾನು ಅಂಗಳಕ್ಕೆ ಸೈಕಲ್‌ನ್ನು ಹೊತ್ತು ತಂದೆ. ಅಜ್ಜ "ಬಂದೇ ಬಿಡ್ತಲ್ಲೋ’ ಎಂದು ಅಬ್ಬರಿಸಿದರು. ಅವನು ಒಂದೇ ಹೊಡೆತಕ್ಕೆ ಮಾವಿನಕಾಯಿ ಉದುರಿಸುವವನಂತೆ ಅಂಗಳಕ್ಕೆ ಜಿಗಿದು ಬಂದ. ಕಣ್ಣೆದುರು ಅವನ ಕನಸಿನ ಸೈಕಲ್ಲಿತ್ತು. "ಹಸಿರು...ಗ್ರೀನ್’ ಕಲರ್‌ದ್ದು ತಾ ಅಂದಿದ್ದ. ಜತೆಗೆ ಸಿಗದಿದ್ದರೆ ಕೆಂಪು ಎಂದು ಅವನೇ ಆಪ್ಚನ್ ಕೊಟ್ಟಿದ್ದ. ಕೆಂಪೇ ಸಿಕ್ಕಿತು. ಸೈಕಲ್ ಕಂಡವನಿಗೆ ಅಪ್ಪನೂ ಬೇಕಿರಲಿಲ್ಲ..ಅಮ್ಮ..ಅಜ್ಜ..ಅಮ್ಮಮ್ಮ...ಯಾರೂ ಬೇಕಿರಲಿಲ್ಲ !<br />
ಅಂಥದೊಂದು ಖುಷಿ ಅವನನ್ನು ಆವರಿಸಿಕೊಂಡು ಬಿಟ್ಟಿತ್ತು. ಸಣ್ಣದೊಂದು ಮಳೆ ರಾಗ ಹಾಡುತ್ತಿರುವ ಮಧ್ಯೆಯೇ ಸೈಕಲ್‌ನ್ನು ಕೊಂಚ ಓಡಿಸಿದ, ನಂತರ ಚಾವಡಿಗೆ ಬಂದ. ಅಲ್ಲಿ ಮತ್ತೆ ಅವನದ್ದು ಅದೇ ಅಭ್ಯಾಸ.<br />
ಸಂಜೆ ಎಂಟೂವರೆಗೆ ಬಸ್ಸು. ಮಗ ಹೊಸದಾದ ಮಳೆ ಅಂಗಿಯನ್ನು ತೊಟ್ಟು ಅಜ್ಜನೊಂದಿಗೆ ಬಂದಿದ್ದ ಅಪ್ಪನನ್ನು ಕಳುಹಿಸಲು. ಮೊದಲೇ ಮನೆಯಲ್ಲೇ ಷರತ್ತು ವಿಧಿಸಿದ್ದೆ "ನೀನು ಅಳಬಾರದೆಂದು’. ಅದಕ್ಕೆ ಅವನೂ ಸಹಿ ಹಾಕಿದ್ದ. ನಾನೂ ಅವನು ಬಸ್ಸು ನಿಲ್ದಾಣದ ಕಲ್ಲಿನ ಮೇಲೆ ಕುಳಿತು ಹರಟುತ್ತಿದ್ದೆವು. ಅವನೂ ಸೈಕಲ್‌ನ ಗುಂಗಿನಲ್ಲೇ ಇದ್ದ. ಅಷ್ಟರಲ್ಲಿ ಬಸ್ಸು ಬಂದು ನಿಂತಿತು. ಥಟ್ಟನೆ ಹೊರಟು ನಿಂತೆ. ಮಗ ದಿಟ್ಟಿಸಿ ನೋಡುತ್ತಲೇ ಇದ್ದ. ನಾನು ಮೇಲೆ ಹತ್ತಿ ಕಿಟಕಿಯಲ್ಲಿ ಇಣುಕಿದೆ. ಅವನ ಕಣ್ಣಿನಲ್ಲಿ ನೀರು ತುಂಬಿತ್ತು. "ಅಪ್ಪಾ...ಹೋಗ್ಬೇಡ..ಬಾ..’ ಎಂದು ಕೂಗುತ್ತಿದ್ದ. ಅಜ್ಜ ಮೊಬೈಲ್‌ನಲ್ಲಿ ಮಾತಾಡುತ್ತಿದ್ದರು. ಅಪ್ಪ ಮತ್ತು ಮಗನ ಭಾವನೆ ಮುಖಾಮುಖಿಯಾಗಿದ್ದೇ ಆಗ. ನನಗೂ ಕಣ್ಣು ತೇವಗೊಂಡಿತು. ಅಳು ಉಕ್ಕಿ ಬಂತು. ಆದರೆ ಅನಿವಾರ್ಯತೆ ಅದನ್ನು ಗಂಟಲಲ್ಲಿಯೇ ಉಳಿಸಿತು, ನೀರಾಗಿ ಹರಿಯಲು ಅವಕಾಶ ಕೊಡಲೇ ಇಲ್ಲ.<br />
ಅವನ ಸದಾ ಹೇಳುವ ಮಾತು "ಅಪ್ಪಾ...ನೀ ಹೀಗೆ ಮಾಡಿದ್ರೆ ನನ್ಗೆ ಬೇಜಾರಾಗುತ್ತೆ’ ಎಂಬುದು. ಈಗ ಮತ್ತೆ ಅವನಿಗೆ ಬೇಜಾರು ಆಗುವ ಹಾಗೆಯೇ ಮಾಡಿದ್ದೆ, ನಿಜಕ್ಕೂ ನನಗೂ ಬೇಜಾರೆನಿಸಿತು. ನಾವೀಗ ದಸರೆಯ ರಜೆ ಬರುವುದನ್ನೇ ಕಾಯುತ್ತಿದ್ದೇವೆ..ಅಲ್ಲಿಯವರೆಗೂ...ಏನೂ ಹೇಳುವಂತಿಲ್ಲ.ಬರಿಯ ಅನುಭವ. ಅವನು ರಸ್ತೆಯಲ್ಲಿ ನಿಂತ ಮನಸಾರೆ ಅತ್ತು ಹಗುರ ಮಾಡಿಕೊಂಡ. ನಾನು ದುಃಖವನ್ನು "ಬೌದ್ಧಿಕ’ ಲೆಕ್ಕಾಚಾರದಡಿ ಅನಿವಾರ್ಯತೆಯ ನೆವ ಹೇಳಿ ತಡೆದುಕೊಂಡೆ. <a title="ಅಹರ್ನಿಶಿ" href="www.aharnishisree.blogspot.com " target="_blank">ಅಹರ್ನಿಶಿ</a>ಯವರೂ ತಮ್ಮ ಬ್ಲಾಗ್ನಲ್ಲಿ ತಮ್ಮ ಮಗನ ಮೊದಲ ದಿನದ ಅನುಭವ ಬರೆದಿದ್ದಾರೆ. ನಿಜಕ್ಕೂ, ಎಲ್ಲೇ ಇರಲಿ, ಎಲ್ಲರೂ ಮಕ್ಕಳೇ !</p>
<p>ನಾನು ದೊಡ್ಡವನಾಗಿದ್ದೆ, ಅವನು ಮಗುವಾಗಿಯೇ ಉಳಿದಿದ್ದ !</p>
]]></content:encoded>
</item>
<item>
<title><![CDATA[ಕಣ್ಣ ಹನಿಗಳೊಂದಿಗೆ ಬರುತ್ತೇನೆ...!]]></title>
<link>http://chendemaddale.wordpress.com/?p=139</link>
<pubDate>Sat, 07 Jun 2008 16:54:18 +0000</pubDate>
<dc:creator>navada</dc:creator>
<guid>http://chendemaddale.kn.wordpress.com/2008/06/07/%e0%b2%95%e0%b2%a3%e0%b3%8d%e0%b2%a3-%e0%b2%b9%e0%b2%a8%e0%b2%bf%e0%b2%97%e0%b2%b3%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%ac%e0%b2%b0%e0%b3%81%e0%b2%a4%e0%b3%8d%e0%b2%a4%e0%b3%87/</guid>
<description><![CDATA[ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾ]]></description>
<content:encoded><![CDATA[<p>ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.</p>
<p>ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.</p>
<p>ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.</p>
<p>ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.</p>
<p>ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. "ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ "ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ "ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.</p>
<p>ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.<br />
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ "ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು "ಇರಲಿ ಬಿಡಿ’ ಎಂದಳಂತೆ. "ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !</p>
<p>ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !</p>
<p>ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ "ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.</p>
<p>ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ "ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.</p>
<p>ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ...<br />
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ... ಋತುಪರ್ಣ.</p>
]]></content:encoded>
</item>
<item>
<title><![CDATA[ನಿಮ್ಮೊಂದಿಗೆ]]></title>
<link>http://chamaraj.wordpress.com/?p=3</link>
<pubDate>Fri, 23 May 2008 08:48:59 +0000</pubDate>
<dc:creator>ಚಾಮರಾಜ ಸವಡಿ</dc:creator>
<guid>http://chamaraj.kn.wordpress.com/2008/05/23/%e0%b2%a8%e0%b2%bf%e0%b2%ae%e0%b3%8d%e0%b2%ae%e0%b3%8a%e0%b2%82%e0%b2%a6%e0%b2%bf%e0%b2%97%e0%b3%86/</guid>
<description><![CDATA[ಆತ್ಮೀಯರೇ,
ಬನ್ನಿ, ನಿಮ್ಮ ಅಭಿಪ್ರಾಯಗಳನ್ನ]]></description>
<content:encoded><![CDATA[<p>ಆತ್ಮೀಯರೇ,</p>
<p>ಬನ್ನಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.</p>
<p>- ಚಾಮರಾಜ ಸವಡಿ</p>
]]></content:encoded>
</item>
<item>
<title><![CDATA[ಮಾತೆಯೆಂದೊಡೆ ಮಮತೆಯಿರಲಿ]]></title>
<link>http://saviganasu.wordpress.com/?p=19</link>
<pubDate>Sun, 11 May 2008 15:06:57 +0000</pubDate>
<dc:creator>pbanagi</dc:creator>
<guid>http://saviganasu.kn.wordpress.com/2008/05/11/%e0%b2%ae%e0%b2%be%e0%b2%a4%e0%b3%86%e0%b2%af%e0%b3%86%e0%b2%82%e0%b2%a6%e0%b3%8a%e0%b2%a1%e0%b3%86-%e0%b2%ae%e0%b2%ae%e0%b2%a4%e0%b3%86%e0%b2%af%e0%b2%bf%e0%b2%b0%e0%b2%b2%e0%b2%bf/</guid>
<description><![CDATA[ಅಮ್ಮಾ ಎಂದರೆ ಏನೋ ಹರುಷವು&#8230; ನಮ್ಮ ಬಾಳಿಗೆ ]]></description>
<content:encoded><![CDATA[<p>ಅಮ್ಮಾ ಎಂದರೆ ಏನೋ ಹರುಷವು... ನಮ್ಮ ಬಾಳಿಗೆ ನೀನೇ ದೈವವು... ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.<br />
        <br />
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ ಅಪ್ಪನ ಬಳಿ ಹೇಳದೇ ತಿಳಿ ಹೇಳಿದ, ಸೈಕಲ್ ಕಲಿಯಲು ಹೋಗಿ ಬಿದ್ದು ಕಾಲಿಗೆ ಭಯಂಕರ ಗಾಯವಾದಾಗ ಮುಲಾಮು ತಿಕ್ಕುತ್ತಾ ಸಮಾಧಾನಿಸಿದ ಎಲ್ಲರ ಪ್ರೀತಿಯ ಅಮ್ಮ ಮನಸಿನಿಂದ ಮರೆಯಾಗುವುದು ಸಾಧ್ಯವೇ? ತಾಯಿಯೆಂಬ ಧೀಃ ಶಕ್ತಿಯ ಮಹತ್ವವೇ ಅಂಥಹುದು.</p>
<p>ಅಂತಹ ಅಮ್ಮನನ್ನು ಮತ್ತೆ ನೆನೆಸಿಕೊಳ್ಳುವ ದಿನ ಬಂದಿದೆ. ಹೌದು. ಮೇ ೧೧ ವಿಶ್ವ ಅಮ್ಮಂದಿರ ದಿನ. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸುವುದು ಲೋಕರೂಢಿ. ಈ ಅಭ್ಯಾಸಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಗ್ರೀಕರು. ಗ್ರೀಕ್ ದೇವತೆಯಾದ ರೆಯಾಳನ್ನು ಸಮಸ್ತ ಜಗತ್ತಿನ ಮಾತೆಯೆಂದು ನಂಬಲಾಗಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಕ್ರಿ.ಶ ೧೬೦೦ ರಿಂದ ಪ್ರತೀ ವರ್ಷದ ಒಂದು ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುವ ಪದ್ಧತಿಗೆ ನಾಂದಿ ಹಾಡಲಾಯಿತು. ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಆ ದಿನದಂದು ತಾಯಿಯನ್ನು ನೋಡಲು ವಿಶೇಷ ಉಡುಗೊರೆ, ಸಿಹಿತಿಂಡಿಗಳೊಡನೆ ಬರುತ್ತಿದ್ದರೆಂಬುದು ಚರಿತ್ರೆ.</p>
<p>ಆದರೂ ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್ ಊರಿನವಳಾದ ಆಯ್ಯನಾ ಜರ್ವೀಸ್ ಎಂಬಾಕೆ ಅಮ್ಮಂದಿರ ದಿನಕ್ಕೆ ಹೊಸ ಭಾಷ್ಯ ಬರೆಯುವವರೆಗೂ ಅದು ನಿಯಮಿತವಾಗಿ ಆಚರಿಸಲ್ಪಟ್ಟಿರಲೇ ಇಲ್ಲ. ಆಕೆ  ೧೯೦೮ರಲ್ಲಿ ಅಮ್ಮನ ಸವಿ ನೆನಪಿಗಾಗಿ ಚರ್ಚ್ ಒಂದನ್ನು ನಿರ್ಮಿಸಿದಳು. ಆನಂತರ ಫಿಲಡೆಲ್ಫಿಯಾಗೆ ತೆರಳಿದ ಜರ್ವೀಸ್ ಅಲ್ಲಿನ ಪ್ರಮುಖರಿಗೆ ಅಮ್ಮಂದಿರ ದಿನವನ್ನು ಆಚರಿಸಿ ಅದನ್ನು ರಾಷ್ಟ್ರೀಯ ದಿನವೆಂದು ಘೋಷಿಸಲು ವಿನಂತಿಸಿಕೊಂಡಳು. ಈ ವಿನಂತಿಯ ಕರೆಗೆ ಓಗೊಟ್ಟ ಅಧ್ಯಕ್ಷ ವುಡ್ರೋ ವಿಲ್ಷನ್ ಪ್ರತೀ ವರ್ಷದ ಮೇ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವೆಂದು ಘೋಷಿಸಿದರು.</p>
<p>ನಿಧಾನವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಅಮ್ಮಂದಿರ ದಿನ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದವು. ಹೀಗೆ ಚಾಲ್ತಿಗೆ ಬಂದ ಅಮ್ಮಂದಿರ ದಿನಾಚರಣೆ ಅನೇಕ ರಾಷ್ಟ್ರಗಳಲ್ಲಿ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆ. ಆದರೆ ಅಮ್ಮಂದಿರ ದಿನದ ಆಚರಣೆಯಲ್ಲೂ ಭಾರತ ಬಡರಾಷ್ಟ್ರವೆಂದೇ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. </p>
<p>ತಂದೆ, ತಾಯಂದಿರ ಕೂದಲು ಬೆಳ್ಳಗಾಗುತ್ತಿದ್ದಂತೆ ಬೆಳೆದು ನಿಂತ ಮಗ ಅವರನ್ನು ಕಡೆಗಣಿಸಲು ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯೊಡನೆ ಸೇರಿಕೊಂಡು ಜನ್ಮವಿತ್ತ ತಂದೆ-ತಾಯಿಯರ ಮೇಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾನೆ. ಕಡಿಮೆ ಬೆಲೆಯ ವೃದ್ಧಾಶ್ರಮಗಳಿಗಾಗಿ ಅರಸಿ ಅವರನ್ನು ಸಾಗು ಹಾಕಲು ಪ್ರಯತ್ನಿಸುತ್ತಾರೆ. ಇಂತಹ ದೇಶದಲ್ಲಿ ತಾಯಂದಿರ ದಿನವನ್ನು ನೆನಪಿಟ್ಟುಕೊಂಡು ಆಡಂಬರದಿಂದ ಆಚರಿಸುವುದು ಹೇಗೆ ಹೇಳಿ? ಪರಿಸ್ಥಿತಿ ಬದಲಾಗಬೇಕು. ತಾಯಿಯೆಂಬ ಕಣ್ಣೆದುರಿನ ದೇವತೆಯನ್ನು ಕೊನೆಯವರೆಗೂ ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ಪ್ರತೀ ಮಕ್ಕಳ ಕರ್ತವ್ಯವಾಗಬೇಕು. ಹೆಂಡತಿ ಬರುವವರೆಗಿನ ಅಕ್ಕರೆಯ ಅಮ್ಮ ಖಾಯಂ ಪ್ರೀತಿಯ ಅಮ್ಮನಾಗೇ ಇರಬೇಕು. ನಮ್ಮನ್ನು ಮಮಕಾರದಿಂದ ಪೋಷಿಸಿದ ಅಮ್ಮನಿಗೆ ವಯಸ್ಸಾದಾಗ ಕೈಲಾಗದವಳೆಂದು ಗಣಿಸದೇ ಕೊನೆಗಾಲದವರೆಗೂ ಪ್ರೀತಿಯನ್ನು ಪರತ್ ಮಾಡುತ್ತಿರಬೇಕು. ಅಕ್ಕರೆಯ ಅವ್ವ ಇಂದಿನ ಬಿಜಿ ಬದುಕಿನ ನಡುವೆ ಕಳೆದು ಹೋಗದಿರಲೆಂಬ ಆಶಯ ನಮ್ಮದಾಗಲಿ. ತಾಯಂದಿರ ದಿನಕ್ಕೆ ಮಹತ್ವ ದೊರಕುವುದು. ಆಗಲೇ... ಏನಂತೀರಾ?        </p>
]]></content:encoded>
</item>
<item>
<title><![CDATA[ಮಳೆ ನಿಂತು ಹೋದ ಮೇಲೆ... ]]></title>
<link>http://saviganasu.wordpress.com/?p=11</link>
<pubDate>Fri, 01 Feb 2008 10:30:49 +0000</pubDate>
<dc:creator>pbanagi</dc:creator>
<guid>http://saviganasu.kn.wordpress.com/2008/02/01/%e0%b2%ae%e0%b2%b3%e0%b3%86-%e0%b2%a8%e0%b2%bf%e0%b2%82%e0%b2%a4%e0%b3%81-%e0%b2%b9%e0%b3%8b%e0%b2%a6-%e0%b2%ae%e0%b3%87%e0%b2%b2%e0%b3%86/</guid>
<description><![CDATA[ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನ]]></description>
<content:encoded><![CDATA[<p>ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!</p>
<p>ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ... ನಿನ್ನೊಡನಿದ್ದಾಗ ನಾನು ಕೆಲವು ಕನಸುಗಳ ಕಟ್ಟಿದ್ದೆ, ಈಗಿಲ್ಲವೇ ಎಂದು ವ್ಯಂಗ್ಯವಾಡುವ ಅವಕಾಶ ನಿನಗಿಲ್ಲ. ಯಾಕೆಂದರೆ ಅಂದು ಕೆಲವಿದ್ದ ಕನಸುಗಳೀಗ ಹಲವಾಗಿವೆ!</p>
<p>ನಾನು ನಿನ್ನನ್ಮಡಿಗೆ, ನಡೆಗೆ, ಚೆಲುವಿಗಿಂತ ಹೆಚ್ಚಾಗಿ ಮನಸೋತದ್ದು ಆ ದಪ್ಪನೆಯ ಪುಸ್ತಕದಲ್ಲಿ ನೀನು ಜತನದಿಂದ ಎತ್ತಿಟ್ಟುಕೊಂಡು, ಮರಿ ಹಾಕುತ್ತದೆಂದು ಕಾಯ್ದಿದ್ದ ನವಿಲುಗರಿಗೆ! ಆ ಕಾಯುವಿಕೆಯಲ್ಲಿನ ಗಾಢತೆಗೆ. ಅದು ಮರಿ ಹಾಕಿತೋ ಇಲ್ಲವೋ ಕಾಣೆ, ಆದರೆ ನಿನ್ನ ಆ ಕಾಳಜಿ ನನ್ನಲ್ಲಿ ಸ್ಪಷ್ಟ ಮೊಹರೊತ್ತಿತ್ತು. ನಕ್ಷತ್ರಗಳನ್ನು ಎಣಿಸಿ, ಗುಣಿಸಿ ಸೋತ, ಆಕಾಶದ ಹರವು ಕಂಡು ಆಸೆಪಟ್ಟ, ಅಗಾಧ ಸಾಗರದ ನಡುವೆ ಕುಳಿತು ಹಾಯಿದೋಣಿಗಾಗಿ ಹಂಬಲಿಸುತ್ತಿದ್ದ ನನಗೆ ನೀನು, ಚಿಗುರುವ ಕನಸಿನ ಸನಿಹದ ಆಸರೆಯ ಮರವಾಗಿ ಕಂಡೆ ಅಷ್ಟೆ.</p>
<p>ಮಳೆ ಹೊಯ್ದು ಹದವಾದ ನೆಲದಲ್ಲಿ ಚಿಗುರು ಕೊನರಿ ಗಿಡವಾಯ್ತು, ಬಳ್ಳಿಯಾಯ್ತು ಮತ್ತು ಹಬ್ಬಿತು. ಆಸರೆಗೆ ಮರವಿದೆಯೆಂಬ ವಿಶ್ವಾಸ ಅದಕ್ಕಿತ್ತು. ನಿಜಕ್ಕೂ ನನಗಿವತ್ತು ಪಚ್ಚೆನಿಸುತ್ತಿದೆ. ಹಾದಿ ಸಿಕ್ಕಿದ ನಾನು ಕೊನೆಯ ಕುರಿತು ಯೋಚಿಸುವುದನ್ನು ಮರೆತು ಬಿಟ್ಟೆನಲ್ಲಾ ಎಂದು. ಹೋಗಲಿ ಬಿಡು, ನನಗಾಗ ಹತ್ತರೊಡನೆ ಹನ್ನೊಂದಾಗಬಾರದೆಂಬ ಮೊಂಡ ತನವೂ ಇತ್ತು. ಈಗಲೂ ಇದೆ. ಆದರೆ ಅದರ ತೀವ್ರತೆಗೆ ರೂಪು ರೇಖೆಗಳನ್ನೆಳೆದಿದ್ದೇನೆ. ನಿನಪಿಡು, ರೇಖೆಗಳೆಲ್ಲಾ ಚೌಕಟ್ಟಾಗಬೇಕೆಂದಿಲ್ಲ. ಚೌಕಟ್ಟು ಅಥವಾ ಮೇರೆಯೆಂಬುದು ವ್ಯಕ್ತಿಯ ಚಲನೆಯನ್ನು ನಿಯಂತ್ರಿಸಿ ಆತನ ವಿಪರಿಮೀತ ಬೆಳವಣಿಗೆಗೆ ತಡೆಯೊಡ್ಡುತ್ತದೆಂಬ ಅಚಲ ವಿಶ್ವಾಸ ನನಗೆ. ನಿಯಂತ್ರಿಸುವಿಕೆ, ಸ್ವಾತಂತ್ರ್ಯವಿಲ್ಲದ ಸ್ಥಿತಿಯ ಇನ್ನೊಂದು ರೂಪು. ಅದು ಬಂಧನ. ಬಂಧನವಿದ್ದಲ್ಲಿ ಬೆಳವಣಿಗೆ ಪೂರ್ವಾಗ್ರಹ ಪೀಡಿತ ತಾನೇ? ನೀನು ಒಪ್ಪಲೇ ಬೇಕು.</p>
<p>ನಾನು ಕವನ ಬರೀತಿದ್ದೆ ನೆನಪಿದೆಯಾ? ಅದೇನ್ ಬರೀತೀಯೋ ಮಾರಾಯಾ? ನಂಗಂತೂ ತಲೆಬುಡ ಅರಿಯೊಲ್ಲ ಅಂದಿದ್ದೆ ನೀನು. ನಾನು ನಕ್ಕಿದ್ದೆ! ಇವತ್ತು ಹೇಳುತ್ತೇನೆ. ನನ್ನೊಳಗಿನ ನಾನು ಹೊರಬಂದು ಮಲಗಿದರೆ ಕವನವಾಗುತ್ತಿತ್ತು. ನನ್ನೊಳಗಿನ ನಾನೇ ಸ್ಪಷ್ಟವಾಗಿಲ್ಲದಿದ್ದ ಕಾರಣ ಬರವಣಿಗೆಯೂ ಅಸ್ಪಷ್ಟವೆನಿಸುತ್ತಿತ್ತು. ಆದ್ದರಿಂದಲೇ ನನ್ನ ಬರಹಗಳು ಹಾಗೇ ಒಂಥರಾ ನಿನ್ನ ಹಾಗೆ!</p>
<p>ನೀನು ಬಾಲ್ಯದ ಹುಡುಗಾಟಗಳನ್ನೆಲ್ಲಾ ದಾಟಿ, ತಾರುಣ್ಯದ ಬಿಸುಪು, ಪ್ರಬುದ್ಧತೆ, ಮತ್ತೊಂದಿಷ್ಟು ಅನುಭವಗಳ ಬತ್ತಳಿಕೆ ಹೊತ್ತಿದ್ದೆ. ಹೊಸ ಹಾದಿಗಳ ಹುಡುಕಿ ಸವೆಸುವ ಪ್ರಯೋಗಶೀಲ ಮನಸ್ಸೂ ನಿಂದಾಗಿತ್ತು. ಪ್ರತಿ ಮುಂಜಾವು ಮೂಡುವ ರವಿ ನಿನ್ನಲ್ಲಿ ಹೊಸ ಕನಸುಗಳ ಅರಳಿಸುತ್ತಿದ್ದ. ಅದನ್ನು ಕಾವಲು ಕಾಯಲು ನಾನಿದ್ದೆನೆಂಬ ಧೈರ್ಯ ನಿನಗೆ ಹುಟ್ಟಲಿಲ್ಲ ಅಷ್ಟೆ. ಅಥವಾ ಇವೆಲ್ಲಕ್ಕೂ ಮಿಗಿಲಾದ ಮತ್ತಿನ್ನೇನೋ ನಿನಗೆ ಬೇಕೆನಿಸಿತು ಇಲ್ಲವೇ ಇವೆಲ್ಲಾ ಸಾಕೆನಿಸಿತು. ನಾನು ಪ್ರತಿಯಾಡುವುದಿಲ್ಲ ಗೆಳತಿ ಅದಕ್ಕೆ. ನನಗೆ ಗೊತ್ತು ಬದುಕು ಬದುಕುವವರಿಚ್ಛೆ! ಬದಲಾಯಿಸುವುದು ಕಷ್ಟ ಸಾಧ್ಯ, ಊಹುಂ ಬದಲಾಯಿಸಲು ಬಾರದು. ಮಾದರಿಯಾಗಬಹುದಷ್ಟೇ.</p>
<p>ಮರಕ್ಕೆ ಬಂದಳಿಕೆ ಬಂದಂಟಿದ ಸನ್ನಿವೇಶ ನನಗೆ ನೆನಪಿಲ್ಲ ಇವತ್ತು. ನಿನಗೆ ಧಾರಿಣಿಯೊಡನೆಗಿನ ಸಂಬಂಧ ಮತ್ತಷ್ಟು ಆಪ್ತಬಾಗಬೇಕೆಂದು ಅನ್ನಿಸಿರಲಿಕ್ಕೂ ಸಾಕು ಅವತ್ತು. ಕಾರಣಗಳಿಗಿಂತ ಸಾಧನೆ, ಪರಿಣಾಮ ಮುಖ್ಯವಲ್ಲವೇ? ಬಿಡು...</p>
<p>ಅವತ್ತು ಅಮ್ಮನೊಡನೆ ಅಮ್ಮಾ ನಂಗಿವತ್ತು ನಿನ್ನ ಮಡಿಲು ಬೇಕಿಲ್ಲ, ಒಬ್ಬನೇ ಮಲಗಿ ಕಾದು ನಿಂತ ಕನಸುಗಳಿಗೆ ಸ್ವಾಗತ ಕೋರುತ್ತೇನೆ ಎಂದಾಗಲೇ ಮೋಡ ಕಟ್ಟಿತ್ತು. ಜೋರು ಮಳೆ ಶುರುವಾಗಿದ್ದು ಅಂದುಕೊಂಡಿದ್ದಕ್ಕಿಂತ ಬೇಗ. ಗಾಳಿಯ ಅರ್ಭಟವೂ ಜೋರಿತ್ತು. ಮರ ಮುರಿದು ಬಿತ್ತು. ಅನಾಥವಾಗಲಿಲ್ಲ! ಬದಲಾಗಿ ಇನ್ನೊಂದು ಮರದ ಅರಸುವಿಕೆಗೆ ತೊಡಗಿತು. ನನಗೆ ಎಚ್ಚರವಾಯ್ತು.</p>
<p>ಬಹುಶಃ ಭವಿಷ್ಯದ ಕನಸನ್ನೂ ಹೇಳುವುದು ಪ್ರಸ್ತುತವೆನಿಸುತ್ತಿದೆ. ಇವನ್ನೆಲ್ಲವನ್ನೂ ನೀನು ಓದಲೇ ಬೇಕೆಂಬ ಕಟ್ಟುನಿಟ್ಟು ನಾ ಹಾಕೊಲ್ಲ. ಈ ಬರಹದ ಮೂಲಕ, ನೀನು ನನ್ನೆಲ್ಲಾ ಭಾವನೆಗಳನ್ನು ಗುಡಿಸಿ ಹಾಕಿದೆ ಎಂಬ ಆರೋಪ ಮಾಡುವ ಮನಸ್ಸೂ ನನ್ನದಲ್ಲ. ನನ್ನೊಬ್ಬಳು ಗೆಳತಿ ಹೇಳಿದ್ದಳು ಭಾವುಕತೆಯಿಂದ ಬುದ್ಧಿ ಕುಂಠಿತವಂತೆ. ನಾನಿಷ್ಟು ಹೊತ್ತು ಹೊತ್ತುಕೊಂಡಿದ್ದು ಅದನ್ನೇ. ಭಾವೋತ್ಕರ್ಷವೇ ಇಷ್ಟೆಲ್ಲಾ ಸಾಲುಗಳ ಜನುಮಕ್ಕೆ ಕಾರಣ. ನಾನು ಭಾವನಾ ಜೀವಿ ನಿಜ. ಇವತ್ತಿಗೂ ನನ್ನ ಕಂಪ್ಯೂಟರ್, ಐ ಪಾಡ್ ಗಳಲ್ಲಿ ತುಂಬಿರುವುದು ಅಪ್ಪಟ ಭಾವಗೀತೆ, ಶಾಸ್ತ್ರೀಯಗಳೇ. ಉನ್ನಿಕೃಷ್ಣನ್ ನಂಗೆ ಯಾವತ್ತೂ ಇಷ್ಟ ಅಂತ ನಿಂಗೂ ಗೊತ್ತು. ನಾನು ಆತನ ಅನಿಲ ತರಲ ಹಾಡನ್ನು ಮತ್ತೆ ಮತ್ತೆ ಕೇಳ್ತಿದ್ದಾಗ ನೀನು ಉರಿಬಿದ್ದಿದ್ದು, ಟೇಸ್ಟೇ ಇಲ್ಲ ನಿಂಗೆ ಅಂತ ಜರಿದಿದ್ದು ಎಲ್ಲಾ ನೆನಪಿದೆ ನಂಗೆ. ಆದರೂ ನಾನವತ್ತು ನೊಂದುಕೊಂಡಿರಲಿಲ್ಲ. ನಾನು ಬೇಸರಿಸಿಕೊಂಡರೆ ನೀನು ಪರಿತಾಪ ಪಡುವೆಯೆಂಬ ಗುಮನಿಯಿತ್ತು ನಂಗೆ.</p>
<p>ಇವತ್ತು ನಾನು ಖುಷಿಯಿಂದ ಹೇಳುವುದಿಷ್ಟೇ. ನನ್ನನ್ನು ತೊರೆದು ಹೋಗಿದ್ದಕ್ಕೆ ನಿನಗೆ ಭರಿಸಲಾರದಷ್ಟು ಥ್ಯಾಂಕ್ಸ್ ! ಅದೇ ನಗೆ ಬದುಕಿನ ಸಾಧ್ಯತೆಗಳನ್ನು, ವಿಕ್ಷಿಪ್ತತೆಗಳನ್ನು ಗಾಢವಾಗಿ ಪರಿಚಯಿಸಿದ್ದು. ನನಗೀಗ ಬಳ್ಳಿಯಾಗಿ ಬದುಕುವ ಹಂಬಲವಿಲ್ಲ. ಮರವಾಗಬೇಕು. ಲೆಕ್ಕ ತಪ್ಪಿಹೋಗುವಷ್ಟು ಬಳ್ಳಿಗಳನ್ನು ಪೊರೆಯಬೇಕು. ಬಳ್ಳಿಗಳೆಲ್ಲಾ ಬಲವಾದ ಮೇಲೊಮ್ಮೆ ಜೋರು ಮಳೆ, ಸಿಡಿಲಿಗೆ ಸಿಕ್ಕಿ ಜರ್ಜರಿತಗೊಂಡು ಬಿದ್ದು, ಭೂಮಿಯ ನಡುವೆ ಕರಗಿ ಕಳೆದು ಹೋಗೇಕು, ಅಷ್ಟೇ... ನನಗೀಗ ಮತ್ತೆ ನಕ್ಷತ್ರಗಳನ್ನು ಎಣಿಸುವಾಸೆ, ಮುಗಿಲು ಮುಟ್ಟುವಾಸೆ, ಶತಮಾನಗಟ್ಟಲೆ ದೋಣಿಗಾಗಿ ಕಾಯಬೇಕೆಂಬ ಬಯಕೆ, ಎಲ್ಲಕ್ಕಿಂತ ಹೆಚ್ಚಾಗಿ ಇವೆಲ್ಲಾ ನನ್ನಿಂದ ಮತ್ತು ನನ್ನೊಬ್ಬನಿಂದಲೇ ಸಾಧ್ಯವೆಂಬ ಅಚಲ ನಂಬಿಕೆ.</p>
<p>ಮತ್ತೊಮ್ಮೆ ಥ್ಯಾಂಕ್ಸ್, ಎಲ್ಲದಕ್ಕೂ...</p>
]]></content:encoded>
</item>
<item>
<title><![CDATA[ಒಂದು ಶುಕ್ರವಾರದ ಬೆಳಗು]]></title>
<link>http://mysorepost.wordpress.com/2007/06/16/shukravaarada-belagu/</link>
<pubDate>Fri, 15 Jun 2007 19:58:33 +0000</pubDate>
<dc:creator>Rasheed</dc:creator>
<guid>http://mysorepost.kn.wordpress.com/2007/06/16/shukravaarada-belagu/</guid>
<description><![CDATA[ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ.ರಾತ]]></description>
<content:encoded><![CDATA[<p align="left"><strong>ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ</strong>.ರಾತ್ರಿ ಹಾಜರಾಗಿ ಅತ್ತು  ಹಂಗಿಸಿ ಕಿರಿಕಿರಿ ಮಾಡಿ ನಾನು ಬದುಕಿರುವುದೇ ತಪ್ಪು ಎನ್ನುವಂತೆ ಶಪಿಸಿ ನಟಿಕೆ ಮುರಿದು ಕೊನೆಗೆ ಹೋಗುವಾಗ ಕರುಣೆಯಿಂದ ಒಮ್ಮೆ ನೋಡಿ<br />
ನಕ್ಕು ಹೋದ ಪ್ರತಿಮೆಗಳಂತಹ ಕಥಾ ಪಾತ್ರಗಳು ಈ ಬೆಳ್ಳನೆಯ ಬೆಳಗಿನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ನಾಚಿಕೊಂಡು ಸುಮ್ಮಗಿವೆ.ನಾನಾದರೋ ಹಿಂದೆ ಎಂದೂ ಇಲ್ಲದ ಹಾಗೆ ಇಂದು ಆಹ್ಲಾದಕರವಾಗಿರಬೇಕು ಎಂದುಕೊಂಡು ಕನಸು ಕಾಣುತ್ತಿದ್ದೇನೆ.ನಖಗಳನ್ನು ಕಡಿಯುತ್ತಿದ್ದೇನೆ.<img align="left" src="http://mysorepost.wordpress.com/files/2007/06/waiting.jpg" alt="waiting.jpg" /> ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ ಹೋಗುವ ಕೋಳಿ ಸಂಸಾರವನ್ನೂ ಕಂಟ್ರೋಲ್ ಮಾಡುತ್ತಾ,ಟೀವಿ ನೋಡುತ್ತಾ,ರೇಡಿಯೋ ಕೇಳುತ್ತಾ,ಕನ್ನಡ ಮಲಯಾಳಂ ಪತ್ರಿಕೆಗಳನ್ನು ಓದುತ್ತಾ ಮುಂದಿನ ಪೂಜ್ಯ ಪೋಪ್ ಯಾರಾಗಬಹುದೆಂದು ಊಹಿಸಿಕೊಂಡು ಈಗಿನ ಪೂಜ್ಯ ಪೋಪ್ ನಿಜವಾಗಿಯೂ ತೀರಿ ಹೋಗುವರಾ ಎಂದು ಹೆದರಿಕೊಂಡು ಒಂದು ಕಾಲನ್ನು ಮೆಲ್ಲಗೆ ಎತ್ತಿ ಎತ್ತಲಾಗದ ಇನ್ನೊಂದು ಕಾಲಿನ ಮೇಲೆ ಮೆತ್ತಗೆ ಇಡುತ್ತಾಳೆ.</p>
<p align="left"> ಈ ಬಲಗಾಲಿಗೆ ಇನ್ನೆಂದೂ ಜೀವ ಬರಲಿಕ್ಕಿಲ್ಲ ಅನ್ನಿಸುತ್ತದೆ.<!--more-->ತೀರ ಸಣ್ಣವಳಾಗಿದ್ದ ಸದಾ ಜೊತೆಯಲ್ಲೇ ಮಲಗುತ್ತೇನೆ ಎಂದು ಹಠ ಹಿಡಿದು ರಗಳೆ ಮಾಡುತ್ತಿದ್ದ ಮಗಳು ಈಗ ದೊಡ್ಡವಳಂತೆ ಲೋಟದಲ್ಲಿ ತಾನು ಕುಡಿಯಲಾರದೆ ಉಳಿಸಿದ್ದ ಹಾಲಿಲ್ಲದ ಕಾಪಿಯನ್ನ ಪೂರ್ತಿ ಕುಡಿದು ಮುಗಿಸುವಂತೆ ಕಣ್ಣಲ್ಲೇ ಒತ್ತಾಯಿಸಿ ಹೋಗಿದ್ದಾಳೆ.</p>
<p align="left">'ಯಾವುದನ್ನೂ ವ್ಯರ್ಥ ಮಾಡಬಾರದು' ಎಂದು ತಾನು ಪದೇಪದೇ ಮಕ್ಕಳ ತಲೆ ತಿಂದದ್ದರ ಫಲ ಎಂದು ಮನಸಲ್ಲೆ ನಗುತ್ತಾಳೆ.ದೂರ ದೂರ ಎಲ್ಲೋ ಇರುವ ಅಪ್ಪಚ್ಚಿ ಎಂಬ ತಂದೆಯನ್ನೂ ಅಮ್ಮಚ್ಚಿ ಎಂಬ ತಾಯಿಯನ್ನೂ ನಾಲ್ಕು  ಜನ ಅಕ್ಕಂದಿರನ್ನೂ ಐದು ಮಂದಿ ಅಣ್ಣಂದಿರನ್ನೂ ದುಬಾಯಿ ಯಲ್ಲಿರುವ ಗಂಡನನ್ನೂ ಜೋರಾಗಿ ಕಿರುಚಿ ಕರೆಯಬೇಕು ಅನ್ನಿಸುತ್ತದೆ.ನಗುಬರುತ್ತದೆ.ಮಗ ಜೋಯಿ ಕರಾಟೆ ಪಟುವಿನಂತೆ ಮನೆಯಿಡೀ ಓಡಾಡುತ್ತಿದ್ದಾನೆ.ಅವನಿಗೆ ಜಿಲ್ಲಾ ಮಟ್ಟದಲ್ಲಿ ಕರಾಟೆ ಚಾಂಪಿಯನ್ ಆಗಬೇಕೆಂಬ ಆಸೆ. ಹನ್ನೆರಡರ ಈ ಸಣ್ಣ ವಯಸ್ಸಿನಲ್ಲೇ ದಾಂಡಿಗನಂತೆ ಬೆಳೆದಿದ್ದಾನೆ.ಮುಖ ಮಾತ್ರ ಮಗುವಿನಂತೆಯೇ ಮುದ್ದಾಗಿದೆ.</p>
<p align="left"> ದೊಡ್ಡ ಅಣ್ಣನಾಗಿದ್ದ ಈಗ ಈ ಧರ್ಮಪ್ರಾಂತದ ಬಿಷಪ್ ಆಗಿರುವ  ಇಕ್ಕಿ ಚೇಟಾಯಿ ಈಗ ರೋಮ್ ತಲುಪಿರ ಬಹುದು ಅನಿಸುತ್ತಿದೆ.ಬಜಪೆ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಮೊದಲು ಕಾಲು ಅಲುಗಿಸಲಾಗದೆ ಮಲಗಿರುವ ತನ್ನನ್ನು ನೋಡಲು ಬಂದ ಬಿಷಪ್ ಅಣ್ಣ ಈ ಸಾರಿ ಪೂಜ್ಯ ಪೋಪ್ ಮಾರ್ ಪಾಪ ಬಹುತೇಕ ಉಳಿಯಲಿಕ್ಕಿಲ್ಲ ಅಂದಿದ್ದರು. ಮಾರ್ಚ್ ಕೊನೆಯ ಉರಿ ಮದ್ಯಾಹ್ನದ ಹೊತ್ತು. ಯಾರೂ ಇರಲಿಲ್ಲ,ಅಷ್ಟು ಬಿಸಿಲು ಬಿಟ್ಟರೆ. ಎಂದಿನಂತೆ ವಯಸ್ಸಾದ ಮುದಿ ಹೇಂಟೆ ತನ್ನ ಹತ್ತಿಪ್ಪತ್ತು ಮಕ್ಕಳು ಪಿಳ್ಳೆಗಳೊಡನೆ ಮನೆಯಿಡೀ ಸಂಚರಿಸುತ್ತ ಗಲೀಜು ಮಾಡುತ್ತ ಯಾವುದೇ ಹಂಗಿಲ್ಲದೆ ಓಡಾಡುತ್ತಿತ್ತು.ಅಣ್ಣ ಬಿಷಪ್ ಬಂದರೆ ಎದ್ದು ಕೂರಲೂ ಆಗಲಿಲ್ಲ.ಅವರು ಬಂದವರೇ ಪತ್ರಿಕೆಗಳಿಂದ ತುಂಬಿದ್ದ ಕುರ್ಚಿಯನ್ನು ಖಾಲಿ ಮಾಡಿಸಿ ಕುಳಿತು ಮಾತನಾಡಿ ಆಮೇಲೆ ಎದ್ದು ತಲೆಯ ಹತ್ತಿರ ನಿಂತು ತನಗಾಗಿ ಪ್ರಾರ್ಥಿಸಿದ್ದರು. ಸ್ವತಃ ಬಿಷಪ್ ಮನೆಗೆ ಬಂದು ತನಗಾಗಿ ಪ್ರಾರ್ಥಿಸುವುದನ್ನು ನೆನೆದು ಅಳು ಬಂದಿತ್ತು.ತಕ್ಷಣ ಅಣ್ಣನಲ್ಲವೇ ಎಂದು ಅರಿವಾಗಿ ಪ್ರೀತಿ ಉಕ್ಕಿ ಬಂದಿತ್ತು.ಅಣ್ಣ ಸಣ್ಣವನಾಗಿರುವಾಗ ಮಗ ಜೋಯಿಯ ಹಾಗೇ ಇದ್ದ ಅಂತ ಎಲ್ಲರಿಗೂ ಅನ್ನಿಸುವ ಹಾಗೆ ತನಗೂ ಒಮ್ಮೊಮ್ಮೆ ಅನ್ನಿಸುತ್ತದೆ.</p>
<p align="left"> ಅಣ್ಣ ಶಾಲೆಬಿಟ್ಟು ನೆಲ್ಯಾಡಿಯ ಚಡಾವು ಹತ್ತಿ ಮನೆಗೆ ಬರುವಾಗ ನಾಲ್ಕನೇ ತಿರುವು ಕಳೆದು ಐದನೇ ತಿರುವು ಹತ್ತುವ ಮೊದಲು ದಾರಿ ಬದಿಯಲ್ಲಿ ಉರುಳಿ ಬೀಳುವಂತೆ ನಿಂತಿದ್ದ ಕಲ್ಲು ಹತ್ತಿ ಕೆಳಗೆ ಬೆಳೆದಿದ್ದ ಕಮ್ಯೂನಿಸ್ಟ್ ಗಿಡಗಳ ಮೇಲೆ ಮೂತ್ರ ಮಾಡುತ್ತಿದ್ದುದು!.ಒಂದು ದಿನವೂ ಬಿಡದೆ ಅಲ್ಲೇ ಮೂತ್ರ ಮಾಡುತ್ತಿದ್ದುದು!ಯಾವಾಗಲೂ ಒಳ್ಳೆಯವನಾಗಿ, ಎಲ್ಲರಿಗೂ ಉಪಕಾರ ಮಾಡುತ್ತಾ,ಹಿತವಚನ ಹೇಳುತ್ತಾ,ಒಂದುದಿನವೂ ಜಗಳವಾಡದೆ ಇದ್ದ ಅಣ್ಣ ಸೆಮಿನರಿ ಸೇರಿ ಪಾದ್ರಿಯಾಗಿ  ಥಿಯಾಲಜಿ ಓದಿ ದೊಡ್ಡಪಂಡಿತನಾಗಿ ಕೊನೆಗೆ ಈ ದರ್ಮಪ್ರಾಂತದ ಬಿಷಪ್ ಆಗಿ!</p>
<p align="left">ಈಗಲೂ ತಾನು  ವಯಸ್ಸಾದ ಅಪ್ಪಚ್ಚಿ ಅಮ್ಮಚ್ಚಿ ಯರನ್ನು ನೋಡಲು ನೆಲ್ಯಾಡಿಯಲ್ಲಿ ಬಸ್ಸು ಹಿಡಿದು ಜೀಪು ಹತ್ತಿ ಹೋಗುವಾಗ ನಾಲ್ಕನೇ ತಿರುವು ಕಳೆದು ಐದನೇ ತಿರುವು ಹತ್ತುವ ಮೊದಲು ದಾರಿ ಬದಿಯಲ್ಲಿ ಇನ್ನೂ ಹಾಗೇ ಉರುಳಿ ಬೀಳದೇ ಇರುವ ಕಲ್ಲು!</p>
<p align="left"> ತಾನು ಮಕ್ಕಳಿಗೆ ಅದು ಬಿಷಪ್ ಮೂತ್ರ ಮಾಡುತ್ತಿದ್ದ ಕಲ್ಲು ಎಂದು ವಿವರಿಸಿ ಹೇಳುವುದು. ಅವರು ಕಣ್ಣರಳಿಸಿ ನೋಡುವುದು.ಇದು ಬಾಯಿಂದ ಬಾಯಿಗೆ ಹಬ್ಬಿ ತನ್ನ ಉಳಿದ ನಾಲ್ಕು ಅಣ್ಣಂದಿರ ಮಕ್ಕಳು, ಐದು ಅಕ್ಕಂದಿರ ಮಕ್ಕಳು,ಅವರ ಮಕ್ಕಳು- ಹೀಗೆ ಒಂದು ಮನೆತನವೇ ಆ ಕಲ್ಲನ್ನು ಒಂದು ರೀತಿಯ ಪ್ರೀತಿ ಬೆರೆತ ಗೌರವದಿಂದ ಆ ಕಲ್ಲನ್ನು ಕಾಣುವುದು.</p>
<p align="left"> ಅವಳು ಜೀವವಿದ್ದ ಕಾಲನ್ನು ಮಡಚಿ ಕೂತು ಟೀವಿ ಶುರು ಮಾಡಿದಳು. ಟೀವಿ ಯಲ್ಲಿ ವ್ಯಾಟಿಕನ್ ನಗರವನ್ನು ತೋರಿಸುತ್ತಿದ್ದರು.ಇಡೀ ನಗರವೇ ಒಂದು ದೊಡ್ಡ ಇಗರ್ಜಿಯಂತೆ ಕಾಣಿಸುತ್ತಿತ್ತು.ಎಲ್ಲರೂ ಬಿಷಪ್ ಅಣ್ಣನಂತೆ ಕಾಣಿಸುತ್ತಿದ್ದರು.ಪೂಜ್ಯ ಪೋಪ್ ಕರ್ತಾರನ ಸನಿಹವಾಗಿದ್ದಾರೆ ಎಂದು ಮಾತ್ರ ಪ್ರಕಟಿಸುತ್ತಿದ್ದಾರೆ.ತುಂಬ ವರ್ಷಗಳ ಹಿಂದೆ ಇದೇ ಪೂಜ್ಯ ಪೋಪ್ ಮಂಗಳೂರಿಗೆ ಬಂದಿದ್ದಾಗ ಕೊನೆಯ ಅಣ್ಣನ ಬೆನ್ನ ಮೇಲೆ ಹತ್ತಿ ಅವರನ್ನು ನೋಡಿದ್ದು ನೆನಪಾಗುತ್ತಿದೆ.</p>
<p align="left">  ದುಬಾಯಿಯಲ್ಲಿರುವ ಗಂಡ ತನ್ನ ಯೋಚನೆ ಗಳನ್ನೆಲ್ಲ ಓದುತ್ತಿರುವವನಂತೆ ಅಟ್ಟಹಾಸದಲ್ಲಿ ನಗುತ್ತಿರಬಹುದು ಅನ್ನಿಸುತ್ತದೆ . ಪ್ರೀತಿಸುವುದು,ಸಂಪಾದಿಸುವುದು ಮತ್ತು ಸದಾ ಅಟ್ಟಹಾಸದಲ್ಲಿ ನಗುವುದು ಇಷ್ಟು ಬಿಟ್ಟು ಬೇರೇನೂ ಗೊತ್ತಿಲ್ಲದ ಸುಂದರ ಪುರುಷ . ಅವಳಿಗೆ ಮೈಯಿಡೀ ಮಿಂಚು ಹರಿದಂತಾಗುತ್ತದೆ.ಎರಡು ತಿಂಗಳಿಗೊಮ್ಮೆ ಬಂದು ಎರಡು ವರ್ಷಕ್ಕಾಗುವಷ್ಟು ಸುಖ ಕೊಟ್ಟು ಹೋಗತ್ತಾನೆ.ಬದುಕಿರುವುದೇ ಮೈಥುನಕ್ಕಾಗಿ ಅನ್ನುವ ಹಾಗೆ ಆಡುತಾನ್ತೆ.ಈಗ ಒಂದು ಕಾಲಿಗೆ ಜೀವವಿಲ್ಲದೆ ಮಲಗಿರುವೆ ಎಂದರೆ ಒಂದು ಕಾಲಿನಲ್ಲೇ ಏನೆಲ್ಲಾ ಸರ್ಕಸ್ ಮಾಡಬಹುದು ಎಂದು  ಅಟ್ಟಹಾಸ ದಲ್ಲಿ ನಗುತ್ತಾನೆ. ದೇವರು,ಧರ್ಮ ಒಂದೂ ಬೇಡದ, ನಿಂತಲ್ಲಿ ಒಂದು ನಿಮಿಷವೂ ನಿಲ್ಲದ ಮೀನಿನಂತ ಗಂಡಸು .ರಾತ್ರಿಯಿಡೀ ದುಬಾಯಿ ಯಿಂದ ಫೋನ್ ಹಚ್ಚಿ ಮಾತನಾಡುತ್ತಾನೆ. 'ಇನ್ನು ಎರಡು ತಿಂಗಳಲ್ಲಿ ಅಲ್ಲಿರುತ್ತೇನೆ' ಅನ್ನುತ್ತಾನೆ...<br />
**********</p>
<p align="left"> ಇದು ನಾನು ಈ ವತ್ತು ಬರೆಯಬೇಕೆಂದಿದ್ದ ಕತೆ. ಈ ಕತೆಯ ನಾಯಕಿ  ಹೈಸ್ಕೂಲು ಓದುತ್ತಿದ್ದಾಗ ನನ್ನ ಪಕ್ಕದ ಡೆಸ್ಕ್ ನಲ್ಲಿ ಕೂರುತ್ತಿದ್ದ ಮಲಯಾಳಿ ಹುಡುಗಿ.ಆಗ ಆಕೆ ಮಲಯಾಳಿ ಅಂತ ಗೊತ್ತಿರಲಿಲ್ಲ.ಯಾಕೆಂದರೆ ನಾವೆಲ್ಲಾ ತುಳುವಿನಲ್ಲಿ ಮಾತನಾಡುತ್ತಿದ್ದೆವು.ನಾನು ಕ್ಲಾಸ್ ಮಾನಿಟರ್ ಆಗಿದ್ದೆ. ನಮ್ಮ ಕನ್ನಡ ಪಂಡಿತರು ಗಲಾಟೆ ಮಾಡಿದವರ ಹೆಸರನ್ನು ಬೋರ್ಡ್ ನಲ್ಲಿ ಬರೆಯಲು ಹೇಳಿ ಸೊಸೈಟಿಯಿಂದ ಸಕ್ಕರೆ ತರಲು ಹೋಗಿದ್ದರು.</p>
<p align="left">ಯಾರೋ ಹುಡುಗರು ಈ ಹುಡುಗಿ ಯಾವಾಗಲೂ ನಿನ್ನನ್ನೇ ನೋಡುತ್ತಾಳೆ,ಅವಳಿಗೆ ನೀನು ಬೇಕಂತೆ ಎಂದು ಸುಳ್ಳು ಸುದ್ದಿ ಹೇಳಿದ್ದರು. ನನಗೆ ಅಷ್ಟು ಸಣ್ಣ ವಯಸ್ಸಲ್ಲಿ ಹೇಗೆ ಮನೆ ಬಿಟ್ಟು ಇವಳ ಜೊತೆ ಓಡಿ ಹೋಗವುದು ಎಂದು ಹೆದರಿಕೆಯಾಗಿತ್ತು. ಆ ಅವಘಡ ದಿಂದ ತಪ್ಪಿಸಿಕೊಳ್ಳಲು ಮಾತೇ ಆಡದೆ ಮೌನವಾಗಿದ್ದ ಇವಳ ಹೆಸರನ್ನು ಬೋರ್ಡಿನಲ್ಲಿ ಬರೆದಿದ್ದೆ.ಕನ್ನಡ ಪಂಡಿತರು ಮುಗ್ಧಳಾದ ಆಕೆಯ ಮೃದುವಾದ ಅಂಗೈಗಳಿಗೆ ಬೆತ್ತದಲ್ಲಿ ಹೊಡೆದಿದ್ದರು.</p>
<p align="left">ಅಂದಿನಿಂದ ನನ್ನೊಡನೆ ಮಾತು ಬಿಟ್ಟಿದ್ದ ಆಕೆ ಸುಮಾರು ಹದಿನೈದು ವರ್ಷಗಳ ನಂತರ ಮಂಗಳೂರಿನ ಹಂಪನಕಟ್ಟೆಯ  ಸಿಗ್ನಲ್ ಕಾಯುತ್ತಿದ್ದಾಗ ಸಿಕ್ಕಿದ್ದಳು.ಇಬ್ಬರೂ ನಕ್ಕಿದ್ದೆವು.ಅವಳು ಮಗನಿಗೆ ಗಡ್ ಬಡ್ ತಿನ್ನಿಸಲು ಬಂದಿದ್ದಳು. ಕರಾಟೆ ಕ್ಲಾಸ್ ಮುಗಿದ ಮೇಲೆ ಗಡ್ ಬಡ್ ತಿನ್ನದಿದ್ದರೆ ತಂಗಿಗೆ ಕಿಕ್ ಮಾಡ್ತಾನೆ ಅಂದಿದ್ದಳು. ಆವತ್ತು ಅವನಿಗೆ ನಾನು ಗಡ್‌ಬಡ್ ಕೊಡಿಸಿದ್ದೆ</p>
<p align="left"> ಅವಳಿಗೆ ಈಗಲೂ ನನ್ನ ಮೇಲೆ ಸುಮ್ಮನೇ ಹೆಸರು ಬರೆದಿದ್ದಕ್ಕೆ ಸಿಟ್ಟಿದೆ.ಅವಳ ಹಾಗೆಯೇ ಕ್ಯಾಥೋಲಿಕ್ ಮಲಯಾಳಿ ಯಾಗಿರುವ ನನ್ನ ಹೆಂಡತಿಯೊಡನೆ ಗಂಟೆಗಟ್ಟಲೆ ಫೋನ್ ನಲ್ಲಿ ಹರಟುತ್ತಾಳೆ.ಇಬ್ಬರೂ ವಿನಾಕಾರಣ ಪಿಸುಗುಟ್ಟುತ್ತಿರುತ್ತಾರೆ.ಹೆಂಗಸರ ರಹಸಗಳು ಎನ್ನುತ್ತಾರೆ.ನಾನು ಸುಮ್ಮಗಿರುತ್ತೇನೆ.</p>
<p align="left"> ಈವತ್ತು ಕಥೆ ಬರೆಯಲು ಹೊರಟವನು ನಿಜವನ್ನೂ ಬರೆಯದೆ ಕಥೆಯನ್ನೂ ಬರೆಯದೆ ನಿಟ್ಟುಸಿರಿಡುತ್ತಿದ್ದೇನೆ.</p>
]]></content:encoded>
</item>
<item>
<title><![CDATA[ಒಂದು ದಶಕದ ಹಿಂದಿನ ಒಂದು ಪ್ರಬಂದ.....]]></title>
<link>http://mysorepost.wordpress.com/2007/05/16/yaake/</link>
<pubDate>Tue, 15 May 2007 20:01:32 +0000</pubDate>
<dc:creator>Rasheed</dc:creator>
<guid>http://mysorepost.kn.wordpress.com/2007/05/16/yaake/</guid>
<description><![CDATA[ ಯಾಕೆ ಈ ಪ್ರೇಮದ ಜೀವಕೆ ಸಾವಿನ ಚಿಂತೆ&#8230;..

  ]]></description>
<content:encoded><![CDATA[<p align="left"> <strong>ಯಾಕೆ ಈ ಪ್ರೇಮದ ಜೀವಕೆ ಸಾವಿನ ಚಿಂತೆ.....</strong></p>
<p style="text-align:center;"><img align="left" src="http://mysorepost.files.wordpress.com/2007/05/young3.jpg" alt="young3.jpg" /></p>
<p align="left" style="text-align:center;"><strong>  ಪು</strong>ಟ್ಟ ಹುಡುಗಿಯಾಗಿದ್ದ ಈ ಚಂದದ ಹುಡುಗಿ ಈಗ ದೊಡ್ಡವಳಾದ ಮೇಲೂ ಮರೆಯದೆ ಸುಂದರವಾದ ರಾಖಿಯೊಂದನ್ನು ಅಂಚೆಯಲ್ಲಿ ಕಳುಹಿಸಿದ್ದಾಳೆ. ಪತ್ರದಲ್ಲಿ ಏನು ಏನೆಲ್ಲ ಹುಚ್ಚು ಹುಚ್ಚಾಗಿ ಮೊದ್ದು ಮೊದ್ದಾಗಿ ತುಂಟತನದಿಂದ ಬರೆದಿದ್ದಾಳೆ. ಅವಳು ಕಳುಹಿಸಿದ ಈ ಪಂಚವರ್ಣದ ರಾಖಿ ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ಕೈಯ ಮೊಣಗಂಟಿನ ಬಳಿಯಲ್ಲಿ ವಿಚಿತ್ರವಾದ ಚಿತ್ರಗಳನ್ನು ಮೂಡಿಸಿದೆ. ನಾನು ಇವಳ ವೈಖರಿಯ ಕುರಿತು ಯೋಚಿಸುತ್ತಿದ್ದೇನೆ. ಚಂದದ ಪುಟ್ಟ ಹುಡುಗಿಯಾಗಿದ್ದ ಇವಳು ಬೆಳೆದು ಪುಟ್ಟ ಹೆಂಗಸಾಗಿರುವುದು ಚಂದಕ್ಕೆ ಏನೆಲ್ಲ ಗೀಚುತ್ತಾ, ಏನೆಲ್ಲ ಹರಟುತ್ತಾ, ಗೆಳತಿಯರ ಜೊತೆ ಸಿನಿಮಾ ನೋಡಿಬಂದು ಅದರ ಕತೆಯ ಕುರಿತು ಅವರೊಡನೆ ಹರಟುತ್ತಿದ್ದ ಇವಳು ಈಗ ಬೆಳೆದಿರುವುದು. ಕವಿತೆ ಬರೆಯುತ್ತಿರುವುದು, ಹಲವು ಹುಡುಗರ ನಿದ್ದೆಗೆಡಿಸಿ ಏನೂ ಆಗಿಯೇ ಇಲ್ಲವೆಂಬಂತೆ ಮೊದ್ದು ಮೊದ್ದಾಗಿ ತೊದಲುವುದು, ಅವರು ಅವಳ ಕುರಿತು ಹಲವು ಮಾತನ್ನಾಡಿ ಬಸವಳಿದು ಹೋಗುವುದು ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿದೆ. ನನಗೆ ವಯಸ್ಸಾಗಿ ಹೋಗುತ್ತಿದೆ ಅನಿಸಿ ಸಣ್ಣಗೆ ಕಂಪಿಸುತ್ತೇನೆ.        ಹಾಗೇ ಇಲ್ಲ ಎಂದು ಜೋರಾಗಿ ನಕ್ಕುಬಿಡುತ್ತೇನೆ.</p>
<p align="left">ದೂರದ ಊರಿಗೆ ಓದಲು ಹೋಗಿರುವ ಈ ಹುಡುಗಿ ಅಲ್ಲಿಂದ ನನಗೆ ಬರೆದಿದ್ದಾಳೆ: 'ಇಲ್ಲಿ ನನಗೆ ತುಂಬಾ ಜನ ಗುರುತಾಗಿದ್ದಾರೆ. ಎಲ್ಲರೂ ನಾನು ಪ್ರಶ್ನೆಯಾಗಿ ಕಾಡಿದೀನೋ ಅನ್ನೋ ಹಾಗೆ ನಡೀತಾರೆ. ನಂಗೆ ಎಲ್ಲಾ ತಮಾಷೆ ಅನ್ಸುತ್ತೆ.... ಹೇಗಿದ್ದಿಯಾ? ಅತ್ತಿಗೆ ಹೇಗಿದ್ದಾರೆ. ಮತ್ತೇನು ವಿಶೇಷ ?.... ರಾಖಿ ಕಳಿಸ್ತಿದೀನಿ.  ರಾಖಿಯ ಬಣ್ಣಗಳು ನಿನ್ನ ಕೈಮೇಲೆ ಹರಡೋದನ್ನ ನೆನಸ್ಕೊಂಡ್ರೆ ಒಂಥರಾ ಮಜ' ಎಂದು ಮುಗಿಸಿದ್ದಾಳೆ. ನಾನು ಅವಳು ಬರೆದ ಹಾಗೆ ಕೈಯ ಮೇಲೆ ರಾಖಿಯ ಬಣ್ಣ ಹರಡಿಕೊಂಡು ಎಲ್ಲ ಯೋಜಿಸಿಕೊಂಡು ಸುಸ್ತಾಗಿ ಕುಳಿತಿದ್ದೇನೆ. ಅಲ್ಲಿ ತಂಗಿ, ಅತ್ತಿಗೆ, ತಾಯಿ, ಮಗಳು, ಹೆಂಡತಿ ಹೀಗೆ ಈ ಹುಡುಗಿಯರ ಪಂಚವರ್ಣದ ಚಕ್ರ ಅಂಗೈಯಲ್ಲಿ ಗಿರ್ರನೆ ತಿರುಗಿ ಎಲ್ಲವೂ ದಿಗ್ಭ್ರಮೆಯಂತೆ ಕಾಣಿಸುತ್ತಿದೆ.</p>
<p align="left"><img src="http://mysorepost.files.wordpress.com/2007/05/young2.jpg" alt="young2.jpg" /></p>
<p align="left">ಈ ಹುಡುಗಿ ತಾನು ಓದುತ್ತಿರುವ ಕ್ಯಾಂಪಸ್ಸಲ್ಲಿ ಹಲವು ಹುಡುಗರ, ಹಲವು ಕವಿಗಳ, ಹಲವು ಪ್ರೇಮಿಗಳ, ಹಲವು ಮುದುಕು ಗಂಡಸರ, ಹಲವು ಒಂಟಿ ಹೆಂಗಸರ ನಡುವೆ ತಂಗಾಳಿಯಂತೆ, ನಿಟ್ಟುಸಿರಿನಂತೆ ಓಡಾಡುತ್ತಿದ್ದಾಳೆ.<!--more--> ಹಲವು ಹುಡಗುಗಳನ್ನು ಮುಳುಗಿಸಿದ ಗ್ರೀಕ್‌ನ ಸುಂದರಿ ಹೆಲೇನಾಳ ನೋಟದಂತೆ ಈ ಪುಟಾಣಿ ಹೆಂಗಸಿನ ಓಡಾಟ ಹಲವರ ಎದೆ ಬಡಿತವನ್ನು ರಕ್ತದ ಒತ್ತಡವನನು ಹಠಾತ್ತನೆ ಏರಿಸಿದೆ. ಮೂಲತಃ ಪುಕ್ಕಲರು, ಕವಿ ಹೃದಯಿಗಳೂ ಹಾಗು ಒಳ್ಳೆಯವರೂ ಆದ ಹಲವಾರು ಹುಡುಗರು ಆಶೆಯಿಂದ ಈಕೆಯನ್ನ ದೂರದಿಂದ ನೋಡುತ್ತ ಇವಳ ಮೈಯ ಪರಿಮಳ ಹತ್ತಿರವಾದಂತೆ ಕಣ್ಣನ್ನ ಭೂಮಿಗಿಳಿ ಬಿಡುತ್ತಾ, ತೊದಲುತ್ತಾ, ಉಗುಳ ನುಂಗಿ ಏನನ್ನೋ ಹೋಗಿ ಇನ್ನೇನೊ ಆಡುತ್ತಾ ಒಟ್ಟಾರೆ ಪೇಲವರಾಗಿ ಬಿಡುತ್ತಿದ್ದಾರೆ. ಮತ್ತೆ ಇವಳ ಕುರಿತು ಹಲವು ಕವಿತೆಗಳನ್ನೂ, ಕತೆಗಳನ್ನೂ ಹೇಳುತ್ತ, ಬರೆಯುತ್ತ, ದೂರಕ್ಕೆ ಮಾಯವಾದ ಅವಳ ರಂಗನ್ನು ಒಂದರೆಕ್ಷಣ ತಮ್ಮ ಹಂಗಿನಲ್ಲಿ ಹಿಡಿದಿಡಲು ನೋಡುತ್ತ, ಆಗದೆ ಒಟ್ಟಾರೆ ಸಖತ್ತಾಗಿ ಬೇಜಾರು ಮಾಡಿಕೊಂಡು ಬಿಡುತ್ತಾರೆ. ಆಮೇಲೆ ಮಾಯವಾಗುವ ಇವಳ ಮೈಯ ಪರಿಮಳವನ್ನು ಮರೆಯಲು ದೊಡ್ಡ ಗ್ರಂಥಗಳನ್ನೂ, ಇತಿಹಾಸವನ್ನೂ, ಮಾನವಶಾಸ್ತ್ರವನ್ನೂ ಓದುತ್ತಾ ಉದ್ಧಾಮ ಪಂಡಿತರಾಗ ಬಯಸುತ್ತಾರೆ. ಆ ದೊಡ್ಡ ವಿಶ್ವವಿದ್ಯಾನಿಲಯದ ದೊಡ್ಡ ದೊಡ್ಡ ಕಟ್ಟಡಗಳ ನಡುವೆ ಓದುತ್ತಾ ಕೂತಿರುವ ಈ ಹುಡುಗರು ಹಾಗೇ ಓದುತ್ತಲೇ ಕೂತಿರುವಂತೆ ಆ ಕಟ್ಟಡಗಳ ಹೊರಗಿನ ಹುಲ್ಲು ಮೈದಾನ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಮರಗಿಡಗಳು ಇಬ್ಬನಿ ಹೊತ್ತು ತಲೆತೂಗಿ ಬಾಗಿ ಹಕ್ಕಿಗಳು ಮಂಜಿನಲ್ಲಿ ಹಠಾತ್ತನೆ ಮಾಯವಾಗುತ್ತದೆ.</p>
<p align="left">ಈ ಹುಡುಗಿ ಇನ್ನೂ ಬೆಳಗಾದರೂ ಆಲಸಿಯಂತೆ ಮುಸುಕು ಹೊದ್ದುಕೊಂಡು ಕಿಟಕಿಯಿಂದ ತೂರಿ ಬರುವ ಎಳೆಯ ಸೂರ್ಯ ಕಿರಣಗಳನ್ನು ಮೈಯ ಮೇಲೆ ಆವಾಹಿಸುತ್ತಾ ಒಂದು ತರಹದ ನಿದ್ದೆಯ ಎಚ್ಚರದ ಆಟವಾಡುತ್ತಾ ಮಲಗಿದ್ಧಾಳೆ. ಅವಳ ಮುಖದಲ್ಲಿ ನಿದ್ದೆಯಿದೆ. ಆಲಸ್ಯವಿದೆ, ಹಾಗೇ ಹಲವು ಏರು ಜವ್ವನಿಗರ ನಿದ್ದೆ ಕೆಡಿಸಿದ ಅವ್ಯಕ್ತ ತೃಪ್ತಿ ಅವಳ ತುಟಿಗಳಲ್ಲಿ ಆಟವಾಡುತ್ತಿದೆ. ಅವಳು ನಿದ್ದೆ ಮುಗಿಸಿ ಎದ್ದು ಅರ್ಥವಾಗದ ಒಂದು ಪ್ರಶ್ನಾರ್ಥಕ, ಆಶ್ಚರ್ಯಸೂಚಕ ಚಿಹ್ನೆಯಂತೆ ಕ್ಯಾಂಪಸ್‌ನ ಗಾಳಿ, ಮಂಜು, ಮರ, ಹುಲ್ಲು ಹಾಸಿನ ನಡುವೆ ಎದೆಗೆ ಪುಸ್ತಕಗಳ ತಬ್ಬಿಕೊಂಡು ಓಡಾಡುತ್ತಾಳೆ. ಬೆಳಗೆಯೇ ಕಣ್ಣ ಪಿಸುರು ಒರಸುತ್ತಾ ರಾತ್ರಿಯ ಹ್ಯಾಂಗೋವರ್ ನ ಸುಸ್ತಿನಲ್ಲಿ ಓಡಾಡುವ ಹುಡುಗರು ಮತ್ತೆ ಇವಳತ್ತ ನೋಡಲು ಶುರು ಮಾಡುತ್ತಾರೆ. ಶ್ರಾವಣ ಮಾಸದ ಎರಚಲು ಮಳೆ, ಬಿಸಿಲಲ್ಲಿ ಬೀಳಲು ತೊಡಗುತ್ತದೆ. ಎಂತಹ ಮಳೆ ಬಿಸಿಲಿನ ಆಟ! ಕೆರೆಯ ಆಚೆ ಕಡೆಯಲ್ಲಿ ಎಂತಹ ಕಾಮನಬಿಲ್ಲು! ಮುಖದ ಮುಂದೆ ಓಡಾಡುತ್ತಿರುವ ಈ ಹುಡುಗಿಯ ನಡೆ! ಎಷ್ಟು ಎಷ್ಟು ಆಶೆ ಹುಟ್ಟಿಸುತ್ತಾಳೆ ಈ ಹುಡುಗಿ! ಕ್ಯಾಂಪಸ್‌ನಲ್ಲಿ ಕವಿಯಂತಹ ಬೆರಳುಗಳು ಉಳ್ಳ ಹುಚ್ಚನಂತೆ ಕೂದಲು ಕೆರೆದಿರುವ ಹುಡುಗನೊಬ್ಬ ಇವಳ ಪ್ರೇಮದ ಬಳ್ಳಿಯ ಭಾರಕ್ಕೆ ಕುಗ್ಗಿ ಹೋಗಿ ಮುದುಕನಂತಾಗಿ ನಡೆಯುತ್ತಿದ್ದಾನೆ. ಅವನ ಚಪ್ಪಲಿಯ ಉಂಗುಷ್ಟ ಕಿತ್ತುಹೋಗಿ ಅವನಿಗೆ ಅಳು ಬರುತ್ತಿದೆ ಅವನಿಗೆ ಅವ್ವನ ನೆನಪಾಗುತ್ತದೆ.<br />
ಎಲ್ಲ ನೆನಪಾಗುತ್ತ ಈ ಹುಚ್ಚು ಹಿಡಿಸುವ ಹುಡುಗಿಯರ ಗತ್ತು, ಮೋಹಕತೆಗಳ ಕುರಿತು ಹೊಟ್ಟೆ ಕಿಚ್ಚಾಗುವಷ್ಟು ಸಂಕಟವಾಗುತ್ತಿದೆ.</p>
<p align="left">ಹಾಗೇ ನೆನಪಾಗುತ್ತಿದೆ... ನನಗೆ ರಾಖಿ ಕಳುಹಿಸಿಕೊಟ್ಟಿರುವ ಈಕೆ ಬರೆದ ಕವಿತೆಯೊಂದರ ಸಾಲುಗಳು, ಅವುಗಳನ್ನು ಪತ್ರಿಕೆಯಲ್ಲಿ ಓದಿ ನಾನು ಅವಳಿಗೆ ಬರೆಯಬೇಕೆಂದಿದ್ದ ಮಾತುಗಳು ಎಲ್ಲವೂ ಹಾಗೇ ನಿಂತುಕೊಂಡು ಬಿಟ್ಟಿದೆ. ಹಾಗೆ ನೋಡಿದರೆ ಈ ಕವಿತೆಗಳಿಂದ, ಕವಿತೆಯನ್ನು ಓದಿ ಬರೆಯುವ ಮಾತುಗಳಿಂದ ಅಂತಹ ವ್ಯತ್ಯಾಸ ಏನು ಉಂಟಾಗುತ್ತದೆ? ಈ ಹುಡುಗಿಯ ಮನಸಿನಲ್ಲಿ ಕವಿತೆ ಹುಟ್ಟಿದ ಹೊತ್ತು ಆಕೆ ಅನುಭವಿಸಿದ್ದು, ಅದನ್ನು ಓದಿದ ಹೊತ್ತು ನಾನು ಅಂದುಕೊಂಡದ್ದು ಎಲ್ಲವೂ ಒಂದರೆಗಳಿಗೆ ಕಳೆದರೆ ಇಬ್ಬನಿಯಂತೆ ಕರಗಿ ಹೋಗಿರುತ್ತದೆ. ಆಮೇಲೆ ಏನು ಉಳಿದಿರುತ್ತದೆ?</p>
<p align="left">೨೨ರ ಹರೆಯದ ಆಕೆಯ ಇಪ್ಪತ್ತೆರಡು ಸಾಲಿನ ಈ ಕವಿತೆಯಲ್ಲಿ ಆಕೆ ಹುಡುಗನ ಕುರಿತು ಉತ್ಕಟ ಪ್ರೀತಿಯ ಸುಖದ ಕುರಿತು, ಸೂರ್ಯ ಚಂದ್ರರ ಕುರಿತು, ಹಾದರದ ಕುರಿತು, ಒಂಟಿತನದ ಕುರಿತು, ಹಾಗೇ ಕೊನೆಗೆ ಸಾವಿನ ಕುರಿತು ಬರೆದಿದ್ದಳು. ಇವಳು ಈ ವಯಸ್ಸಿನಲ್ಲಿ ಹೀಗೆ ಕವಿತೆಯೊಂದನ್ನು ತೊಡಗಿ ಮುಗಿಸುವಷ್ಟರಲ್ಲಿ ಪ್ರೀತಿಯಿಂದ ಸಾವಿಗೆ ಹೊರಟು ಹೋಗಿರುವುದರ ಕುರಿತು ಹೆದರಿಕೆಯಾಗಿತ್ತು. ಹಾಗೇ ಕೊಂಚ ಅಭಿಮಾನವೂ ಬೆಳೆದು ಬಿಟ್ಟಿತ್ತು. ಸುಂದರಿಯಾಗಿರುವ ಕವಿಯಿತ್ರಿಯಾಗಿರುವ ಪುಟ್ಟ ಹುಡುಗಿಯೇ ಸಾವಿನ ಕುರಿತು ಯೋಚಿಸಲು ಕಾಲ ಇದು ಸನ್ನಿಹಿತವಲ್ಲ' ಎಂದು ಬರೆಯಬೇಕೆಂದುಕೊಂಡವನು ಸುಮ್ಮನಾಗಿದ್ದೆ. ಹೀಗೆ ಸಾಸಿವೆಯಂತಿದ್ದ ಹುಡುಗಿ ಹಠಾತ್ತನೆ ಸಾಸಿವೆಯ ಗಿಡದಂತೆ ಉದ್ದಕ್ಕೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಬೆಳೆದು ಸುಂದರಿಯಾಗಿ ಈಗ ಯೋಗಿನಿಯಂತೆ  ಸಾವಿನ ಕುರಿತು ಯೋಚಿಸುತ್ತಿರುವುದರ ಪರಿಯನ್ನು ಕಂಡು ಬೆರಗಾಗಿದ್ದೇನೆ. ಏನಿದು ಈ ಹುಡುಗಿಯರ ರೂಪಾಂತರ ಎಂದು ಗಲಿಬಿಲಿಯಾಗಿದ್ದೇನೆ. ಮತ್ತೆ ಸುಮ್ಮನೆ ಆಗಿದ್ದೇನೆ. ನಾವು ಈ ಹುಡುಗಿಯರ ಕಂಡು ಪಡುವ ಆಸೆಗಳಲ್ಲಿ ಮಾನಸಿಕವಾದದ್ದು ಎಷ್ಟು, ದೈಹಿಕವಾದದ್ದು ಎಷ್ಟು? ಈ ಹುಡುಗಿಯರು ಹುಡುಗರ ಪ್ರೇಮದಲ್ಲಿ ಬಯಸುವುದು ಸಾವಿನಂತಹ ಖುಷಿಯನ್ನೆ? ಹಾಗೆ ನೋಡಿದರೆ ಎಲ್ಲಾ ಭಾಷೆಯಲ್ಲಿಯೂ ಉತ್ಕಟ ಪ್ರೇಮವೆಂಬುದು ಸಾವಿನಷ್ಟೇ ಮೋಹಕವೂ ಅಷ್ಟೇ ಭಯಾನಕವೂ ಆಗಿಲ್ಲವೆ? ಎಲ್ಲವನ್ನೂ ಕಳೆದು ಇಬ್ಬರೂ ಒಂದರಲ್ಲೇ ಲೀನರಾಗುವ ಈ ಹೊತ್ತು ಸಾವೇ ಅಲ್ಲವೆ....</p>
<p align="left">ಕ್ಯಾಂಪಸ್‌ನ ಹುಡುಗರು ಆಕೆಯ ಚಂದವನ್ನೂ, ಆಕೆಯ ನಡಿಗೆಯನ್ನೂ, ಆಕೆಯ ಧೈರ್ಯವನ್ನೂ ಅನುಭವಿಸಿಕೊಂಡು, ಮೋಹಿಸಿಕೊಂಡು ಇರುವ ಹೊತ್ತಿನಲ್ಲಿ ಈ ಮಂಜಿನಲ್ಲಿ, ಮಳೆಯಲ್ಲಿ ನೆನೆದು ನಡೆಯುವ ಈ ಹುಡುಗಿ ಸಾವಿನ ಕುರಿತೂ<br />
ಪ್ರೇಮದ ಕುರಿತು ಏಕ ಕಾಲದಲ್ಲಿ ಚಿಂತಿಸುತ್ತಿದ್ದಾಳೆ. ನಾನು ಆಕೆಯ ಕವಿತೆಯನ್ನೂ, ನಡಿಗೆಯನ್ನೂ, ದೂರದಿಂದಲೇ ಊಹಿಸಿಕೊಂಡು ಮೆಚ್ಚಿಕೊಂಡು ಸುಮ್ಮನಾಗಿದ್ದೇನೆ.</p>
<p align="left">ನಾವು ಎರಡನೆ, ಮೂರನೆಯ ತರಗತಿಗಳಲ್ಲಿರುವಾಗ ಹುಡುಗರೂ ಹುಡುಗಿಯರೂ ಜೂಟಾಟ ಆಡುತ್ತಿದ್ದೆವು. ಹುಡುಗರೆಂದರೇನು, ಹುಡುಗಿಯರೆಂದರೇನು ಎಂದು ಗೊತ್ತಿಲ್ಲದ ನಾವು ಆಗ ಜೂಟಾಟ ಆಡುತ್ತಾ ಶಾಲೆಯ ಕೋಣೆ, ಬೆಂಚು, ಕಪಾಟುಗಳ ನಡುವೆ ಮರೆಯಾಗುತ್ತ, ಆಟದ ಅಂಗಳಕ್ಕೆ ಇಳಿದು ಓಡಿ, ಚುಕ್ಕೆಗಳಂತೆ ಕಾಣೆಯಾಗುತ್ತ ಒಬ್ಬೊಬ್ಬರನ್ನೇ ಮುಟ್ಟಿ ಔಟ್ ಮಾಡುತ್ತ ಉಳಿದ ಕೆಲವರನನೂ ಆಯ್ದು ಹಿಡಿಯಲು ಸುತ್ತುವರಿಯುತ್ತಿದ್ದೆವು. ಹಾಗೆ ಯಾವಾಗಲೂ ಔಟಾಗದೆ ಕೊನೆಯವರೆಗೂ ತಪ್ಪಿಸಿಕೊಂಡೇ ಉಳಿಯುತ್ತಿದ್ದ ಬೆಳ್ಳಗೆ, ಕುಳ್ಳಗೆ ದಪ್ಪವಾಗಿದ್ದ ಗುಂಗುರು ಕೂದಲಿನ ಪುಟ್ಟ ಹುಡುಗಿಯೊಬ್ಬಳು ಈಗ ನೆನಪಾಗುತ್ತಿದ್ದಾಳೆ. ಆಕೆಯ ಹೆಸರೂ ಬಾಯಿಗೆ ಬರುತ್ತಿದೆ. ಆಕೆ ಕೊನೆಯವರೆಗೂ ಸಿಗದೆ ಓಡಿ ಕೊನೆಗೆ ಅವಳೊಬ್ಬಳೇ ಉಳಿದು ನಾವೆಲ್ಲರು ಆಕೆಯನ್ನು ನಾನಾ ದಿಕ್ಕುಗಳಿಂದ ಸುತ್ತುವರಿದು ಮುಟ್ಟಿ ಜೂಟಾಟ ಮುಗಿಸಿ ಬರುತ್ತಿದ್ದೆವು. ಅಂತಹ ಆ ವಿಚಿತ್ರ ಹಿಡಿಯುವ ಆಟದ ಆ ಪುಟ್ಟ ಹುಡುಗಿ, ಪುಟ್ಟ ಹುಡುಗರಾಗಿ ಅಟ್ಟಿಸಿಕೊಂಡು ಓಡಾಡುತ್ತಿದ್ದ ನಮಗೆ ಹೇಗೆ ಕಂಡಿದ್ದಳು? ನೆನಪಾಗುತ್ತಿದೆ, ಹೇಳಲು ಆಗುತ್ತಿಲ್ಲ. ಅಂತಹ ಆಟ ಇದು. ಎಷ್ಟು ಮೃದುವಾಗಿ ಹೆಸರಿಸಿದರೂ ಹೇಳಲು ಆಗದ ಹೆಸರು ಅವಳದು. ಅವಳು ಈಗ ದೊಡ್ಡ ಹೆಂಗಸಾಗಿ ಎಲ್ಲಿದ್ದಾಳೆ? ಯಾವ ಮನೆಯಲ್ಲಿ, ಯಾವ ಹೊಲದಲ್ಲಿ, ಯಾವ ತೋಟದಲ್ಲಿ, ಯಾವ ಮಗುವಿನ ತಾಯಿಯಾಗಿದ್ದಾಳೆ. ನನಗೆ ಯಾಕೋ ಆಕೆ ಓಡಲಾಗದ ಹಾಗೆ ಚಿಗುರುಗಳನ್ನೂ, ಬೇರುಗಳನ್ನು ಬೆಳೆಸಿಕೊಂಡಿರುವ ಗಿಡವಾಗಿ ಹೋಗಿದ್ದಾಳೆ ಅನಿಸುತ್ತದೆ. ಅಂತಹ ಹುಡುಗಿ ಅವಳು. ಬೇಡವೆಂದರೂ ಲೀಲಾಜಾಲವಾಗಿ ಬರುವ ಆ ಹುಡುಗಿಯ ಹೆಸರನ್ನು ಯಾರಿಗೂ ಹೇಳದೆ ಬಚ್ಚಿಟ್ಟುಕೊಳ್ಳುತ್ತಿದ್ದೇನೆ.</p>
<p align="left">ಉಯ್ಯಾಲೆಯಲ್ಲಿ ಕುಳಿತು ಉಯ್ಯಾಲೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಬೇರಯೇ ಆಗಿಬಿಡುವ ಹುಡುಗಿಯರ ಈ ರೂಪಾಂತರ ಎಷ್ಟು ಚಂದದ ಹಾಗೆಯೇ ಎಷ್ಟು ನೋವು ಮಾಡುವ ವಿಷಯ. ಅವಳ ಬಿಟ್ಟು ಇವಳ ಬಿಟ್ಟು ಅವಳು ಯಾರು ಎಂದು ಒಂದೇ ಹುಡುಗಿಯ ಹತ್ತು ಹನ್ನೆರಡು ಭಂಗಿಗಳನ್ನು, ನಡತೆಗಳನ್ನು ಒಮ್ಮೆಗೇ ಆಕೆಯ ಕೆನ್ನೆಗೆ ಬರುವ ಹಲವು ರಂಗುಗಳನ್ನೂ ಒಟ್ಟಿಗೆ ಒಂದೇ ಭಾಷೆಯಲ್ಲಿ ಹೇಳುವುದು ಹೇಗೆ?</p>
]]></content:encoded>
</item>
<item>
<title><![CDATA[ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ...]]></title>
<link>http://mysorepost.wordpress.com/2007/03/25/marquez-badukirali-devare/</link>
<pubDate>Sun, 25 Mar 2007 16:10:39 +0000</pubDate>
<dc:creator>Rasheed</dc:creator>
<guid>http://mysorepost.kn.wordpress.com/2007/03/25/marquez-badukirali-devare/</guid>
<description><![CDATA[
ಈಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾ]]></description>
<content:encoded><![CDATA[<p style="text-align:center;"><a href="http://www.oem.com.mx/elsoldesanluis/notas/n211088.htm"><img src="http://mysorepost.files.wordpress.com/2007/03/drink.jpg" alt="having a drink" height="331" width="398" /></a></p>
<p><strong><font size="6">ಈ</font></strong>ಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾನದ ಅದ್ಭುತ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್.ಇನ್ನೂ ಉಳಿದಿರುವ ಕಥೆಗಳನ್ನು ಹೇಳಿ ಮುಗಿಸಲಿಕ್ಕಾಗಿಯೇ ಬದುಕಿ ಉಳಿದಿದ್ದಾನೆ. ಆತನ ಆತ್ಮ ಚರಿತ್ರೆಯ ಉಳಿದಿರುವ ಎರಡು ಸಂಪುಟಗಳನ್ನು ಬರೆದ ನಂತರವೂ ಆತ ಬದುಕಿರಲಿ ಎಂದು  ನಾನೂ ಪ್ರಾರ್ಥಿಸುತ್ತಿದ್ದೇನೆ.<!--more--></p>
<p>ಈ ಮಾರ್ಕ್ವೆಜ್  ಸಣ್ಣದಿರುವಾಗ  ತುಂಬ ಕುಡುಮಿ ಹುಡುಗ. ಹೆಂಗಸರ ನೆರಳಲ್ಲೆ ಓಡಾಡಿಕೊಂಡು ದೆವ್ವಗಳಿಗೂ ಶಕುನಗಳಿಗೂ ಹೆದರಿಕೊಂಡು ತಾನು ಏನಕ್ಕೂ ಬಾರದವನು ಅಂದುಕೊಂಡು ಶಾಲೆಯಲ್ಲೂ ಎಲ್ಲರಿಂದ ಮುದುಕ ಎಂದು ತಮಾಷೆ ಮಾಡಿಸಿಕೊಂಡು ಹಾಡು ಹೇಳುತ್ತ ಚಿತ್ರ ಬರೆಯುತ್ತ ಇದ್ದವನು. ತಾನು ಶತದಡ್ಡ ಎಂದು ತಿಳಿದು ಕೊಂಡಿದ್ದವನು.ಆದರೆ ತರಗತಿಯಲ್ಲಿ ಯಾವಾಗಲೂ ಮೊದಲು ಬರುತ್ತಿದ್ದವನು. ಈತನ ಜೊತೆಗಿದ್ದ ಅಣ್ಣನಾದರೋ ಮಹಾ ತಿರುಗು. ಅಪ್ಪ ಸಾಲಕ್ಕೆ ಇಲಾಜು ಮಾಡಿಸಿಕೊಂಡಿದ್ದ ಯಾವುದೋ ರೋಗಿಯೊಬ್ಬನಿಂದ ಹಣ ಇಸಕೊಂಡು ಬಾ ಎಂದು ಕಳಿಸಿದರೆ ಆತ ಹಣ ಇಸಕೊಂಡು ಅದನ್ನು ಅಪ್ಪನಲ್ಲಿ ಹೇಳದೆ ಆ ಹಣದಲ್ಲಿ ಗಿಟಾರೊಂದನ್ನು ಕೊಂಡು ಹುಡುಗಿಯರನ್ನು ಮೆಚ್ಚಿಸಲೆಂದು ಅದನ್ನು ನುಡಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದವನು.</p>
<p>ಇಂತಹ ಅಣ್ಣನ ನೆರಳಲ್ಲಿ ಬೆಳೆದಿದ್ದ ಮಾರ್ಕ್ವೆಜ್ ಹುಡುಗಿಯರನ್ನು ಮೆಚ್ಚಿಸಲು ತಾನೂ ಏನಾದರೂ<a href="http://www.themodernword.com/gabo/gabo_images_parents.html" target="_blank"><img src="http://mysorepost.files.wordpress.com/2007/03/ggm_parents.jpg" alt="ggm_parents.jpg" align="right" height="264" width="326" /></a> ಮಾಡಬೇಕೆಂದಿರುವಾಗಲೇ ಅಪ್ಪ ಅಣ್ಣನನ್ನು ರಿಪೇರಿಮಾಡಲು ರಿಮಾಂಡ್‌ಹೋಂಗೆ ಸೇರಿಸಿದ್ದ. ಅಣ್ಣ ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಾ ರಿಮಾಂಡ್ ಸೇರಿದ್ದ. ಅಣ್ಣನಿಲ್ಲದ ಮನೆ ಮನೆ ಅಂತ ಅನಿಸುತ್ತಿರಲಿಲ್ಲ.</p>
<p>ಇಂತಹ ಹೊತ್ತಿನಲ್ಲೇ ಮಾರ್ಕ್ವೆಜ್ ಗೆ ಆಕೆಯ ಪರಿಚಯವಾಗಿದ್ದು.ಹಾಗೆ ನೋಡಿದರೆ ಮಾರ್ಕ್ವೆಜ್ ಕಳ್ಳಸನ್ನೆ ಮಾಡಿದ್ದು ಆಕೆಗೇನೂ ಆಗಿರಲಿಲ್ಲ.ಆಕೆ ಆ ಸನ್ನೆಯನ್ನು ಆಕೆಗೆಂದು ತಪ್ಪು ತಿಳಿದು 'ಈ ರಾತ್ರಿ ಬೇಡ,ಗಂಡ ಮನೆಯಲ್ಲಿದ್ದಾನೆ.ಎರಡು ರಾತ್ರಿ ಕಳೆದು ಬಾ.ಮುಂಬಾಗಿಲಿನ ಚಿಲಕ ತೆಗೆದು ಇಟ್ಟಿರುತ್ತೇನೆ.ಬಾಗಿಲು ಸದ್ದು ಮಾಡದೆ ಒಳಗೆ ಬಾ' ಅಂತ ಸಂಕೇತ ಕಳಿಸಿದ್ದಳು.</p>
<p>ಮಾರ್ಕ್ವೆಜ್ ಗೆ ಆಕೆಯ ಹೆಸರು ಈಗಲೂ ನೆನಪಿದೆ ಆದರೆ ಹೇಳುವುದಿಲ್ಲ.ಆಕೆ ಹೇಗಿದ್ದಳು,ಹೇಗೆ ಕಾಮಿಸುತ್ತಿದ್ದಳು ಎನ್ನುವುದನ್ನು ತನ್ನ ಆತ್ಮ ಕತೆಯಲ್ಲಿ ವಿವರಿಸುತ್ತಾನೆ. ಅವಳ ಉತ್ಕಟ ಆಕ್ರಂದನವನ್ನ ವರ್ಣಿಸುತ್ತಾನೆ.ಆಕೆಯ ಉನ್ಮಾದ ಮನುಷ್ಯ ಜೀವಿಯ ಹಾಗಿರಲಿಲ್ಲ,ಭೋರ್ಗರೆವ ನದಿಯ ಹಾಗಿತ್ತು ಅನ್ನುತ್ತಾನೆ.ಅವಳನ್ನು ಕೂಡಿದೊಡನೆ ಹುಚ್ಚು ಹಿಡಿದಂತಾಗುತ್ತಿತ್ತು ಅನ್ನುತ್ತಾನೆ.</p>
<p>ಆಕೆಯ ಗಂಡ ಒಬ್ಬ ಭಯಂಕರ ಗಾತ್ರದ ಗಂಡಸು. ಆದರೆ ಆತನ ಧ್ವನಿ ಎಳೆ ಬಾಲಕಿಯ ಹಾಗೆ ಇತ್ತಂತೆ. ಆತ ದೂರ ಎಲ್ಲೋ ಗಡಿಯಲ್ಲಿ ಪೋಲೀಸ್ ಆಫೀಸರಾಗಿದ್ದ.ತನ್ನ ಬಂದೂಕಿನ ಗುರಿಯನ್ನ ನಿಖರ ಗೊಳಿಸಲು ಜನರಿಗೆ ಗುಂಡಿಕ್ಕುತ್ತಿದ್ದನಂತೆ. ಅವರ ಮನೆಗೆ ಎರಡು ಬಾಗಿಲು. ಒಂದು ಬೀದಿಯ ಕಡೆ ತೆರೆದು ಕೊಂಡಿದ್ದರೆ ಇನ್ನೊಂದು ಸ್ಮಶಾನದ ಕಡೆ. ಆಕೆ ಕಾಮಿಸುವ ಕೂಗು ಒಂದು ಕಡೆಯಿಂದ ಬೀದಿಯಲ್ಲಿ ಹೋಗುವವರ ಶಾಂತಿಯನ್ನ ಕೆಡಿಸಿದರೆ ಇನ್ನೊಂದು ಕಡೆ ಸ್ಮಶಾನದ ಹೆಣಗಳ ಆತ್ಮಕ್ಕೆ ಶಾಂತಿಕೊಡುವ ಹಾಗಿತ್ತು ಎಂದು ಮಾರ್ಕ್ವೆಜ್ ವಯಸ್ಸಾದ ಮೇಲೆ ನೆನಪು ಮಾಡಿಕೊಂಡು ಬರೆಯುತ್ತಾನೆ.</p>
<p><img src="http://mysorepost.files.wordpress.com/2007/03/marquez2.jpg" alt="marquez2.jpg" align="left" height="265" hspace="4" width="208" />ಆಕೆಯ ವಯಸ್ಸು ಇಪ್ಪತ್ತು. ಮಾರ್ಕ್ವೆಜ್ ಇನ್ನೂ ತುಂಬಾ ಸಣ್ಣವನು. ಅವರಿಬ್ಬರು ಗುಟ್ಟಲ್ಲಿ ಕೂಡಲು ತೊಡಗಿದ ಮೊದಲ ವಾರದಲ್ಲಿ ಆತ ಎರಡು ಮೂರು ಬಾರಿ ನಡು ರಾತ್ರಿಯಲ್ಲೇ ಓಡಿ ಬರಬೇಕಾಯ್ತಂತೆ. ಏಕೆಂದರೆ ಪೋಲೀಸ್ ಆಫೀಸರ್ ಏಕಾಏಕಿ ಹೇಳದೆ ಕೇಳದೆ ಡ್ಯೂಟಿ ಮುಗಿಸಿ ಬಂದು ಬಿಡುತ್ತಿದ್ದನಂತೆ.</p>
<p>ಒಮ್ಮೆಯಂತೂ ಹಿಂದಿನ ಸ್ಮಶಾನದ ಬಾಗಿಲಿಂದ ಓಡಿ ಹೋಗುತ್ತಿದ್ದ ಮಾರ್ಕ್ವೆಜ್ ನನ್ನು ಆ ದಡೂತಿ ಗಾತ್ರದ ಗಂಡ ತಡೆದು ನಿಲ್ಲಿಸಿ ನಮಸ್ಕಾರ ಹೇಳಿ ಸಿಗರೇಟು ಹಚ್ಚಲು ಬೆಂಕಿಪೆಟ್ಟಿಗೆ ಕೇಳಿದನಂತೆ. ಮಾರ್ಕ್ವೆಜ್ ಆ ಗಾಳಿಯಲ್ಲಿ ಕಡ್ಡಿ ಆರಿಹೋಗದ ಹಾಗೆ ಆತನಿಗೆ ಅಂಟಿಕೊಂಡು ಸಿಗರೇಟು ಹಚ್ಚಿಕೊಟ್ಟನಂತೆ. ಅಷ್ಟು ಹತ್ತಿರ ಬಂದವನನ್ನು ದುರುಗುಟ್ಟಿ ನೋಡಿದ ಪೋಲೀಸ್ ಆಫೀಸರ್  'ಥೂ ನಿನ್ನ ಮೈಯಿಂದ ಯಾರೋ ಹಾದರಗಿತ್ತಿಯ ಮೈವಾಸನೆ ಹೊಡೆಯುತ್ತಿದೆ' ಎಂದು ಬೈದು ಹೋದನಂತೆ.</p>
<p>ನಂತರ ಇನ್ನೊಂದು ಬುಧವಾರ ಇರುಳು ಮಾರ್ಕ್ವೆಜ್  ಆಕೆಯ ಮೈಮೇಲೆ  ನಿದ್ದೆ ತೂಗುತ್ತಾ ಕನಸು ಕಾಣುತ್ತಿರುವಾಗ ಏನೋ ಸದ್ದಾಗಿ ಕಣ್ಣು ತೆರೆದು ನೋಡಿದರೆ ಪೋಲೀಸ್ ಆಫೀಸರ್ ಬೆತ್ತಲೆಯಾಗಿದ್ದ ತನ್ನ ಸುಂದರಿ ಮಡದಿಯನ್ನೂ ಆಕೆಯ ಮೇಲೆ ನಿದ್ದೆ ತೂಗುತ್ತಾ ಕನಸು ಕಾಣುತ್ತಿರುವ ತನ್ನನ್ನೂ ರಿವಾಲ್ವರ್ ನಿಂದ ಗುರಿಯಿಟ್ಟು ಕೂತಿರುವುದನ್ನು ಕಂಡ. ಹೆಂಡತಿ ಅಡಗಿಕೊಳ್ಳಲು ನೋಡಿದರೆ  ರಿವಾಲ್ವರ್ ನಳಿಕೆಯಿಂದ ಆಕೆಯನ್ನ ಬದಿಗೆ ತಳ್ಳಿ ನಮ್ಮ ಪ್ರೀತಿಯ ಲೇಖಕನ ತಲೆಗೆ ಗುರಿಯಿಟ್ಟು 'ಹಾದರಕ್ಕೆ ಬಂದೂಕು ಉತ್ತರ' ಎಂದು ಉತ್ತರಿಸಿದ. ಹಾಗೆ ಅಂದವನು ಇವರಿದ್ದ ಹಾಸಿಗೆಯಲ್ಲೇ ಕುಳಿತು ರಂ ಬಾಟಲಿನ ಮುಚ್ಚಳ ತೆಗೆದ ರಿವಾಲ್ವರ್    ಕೆಳಗಿಟ್ಟ.</p>
<p>ಮಾರ್ಕ್ವೆಜ್ ಮತ್ತು ಪೋಲೀಸ್ ಆಫೀಸರ್ ಇಬ್ಬರೂ ಕುಡಿಯಲು ಕುಳಿತರು. ಕುಡಿಯುತ್ತ ಕುಡಿಯುತ್ತ ಆತ ಕೊಲ್ಲಬೇಕಿಂದಿದ್ದರೆ ಸುಮ್ಮನೇ ಕೊಲ್ಲಬಹುದಿತ್ತಲ್ಲ ಈ ಕುಡಿಯುವ ನಾಟಕ ಯಾತಕ್ಕೆ ಅನಿಸಲು ತೊಡಗಿತ್ತು. ಕುಡಿದು ಒಂದು ಬಾಟಲು ಮುಗಿದು ಇಬ್ಬರೂ ಒಂದು ಹಂತಕ್ಕೆ ಬಂದು ಬಿರುಗಾಳಿ ಬೀಸಲು ತೊಡಗಿ ಪೋಲೀಸ್ ಆಫೀಸರ್ ರಿವಾಲ್ವರ್   ತನ್ನ ಹಣೆಗಿಟ್ಟುಕೊಂಡು ಟ್ರಿಗ್ಗರ್ ಎಳೆದ. ಅದು ಕ್ಲಿಕ್ ಸದ್ದು ಮಾಡಿ ಸುಮ್ಮಗಾಯಿತು. ಪೋಲೀಸ್ ಆಫೀಸರ್ ಬೆವರಿಬಿಟ್ಟಿದ್ದ.</p>
<p>ನಂತರದ ಸುತ್ತಿನ ಸರದಿ ಮಾರ್ಕ್ವೆಜ್ ನದ್ದು. ಆತ ಅದೇ ಮೊದಲ ಬಾರಿ ಜೀವನದಲ್ಲಿ ಬಂದೂಕು ಮುಟ್ಟುತ್ತಿರುವುದು. ಅದು ಎಷ್ಟು ಭಾರವಿದೆ ಬೆಚ್ಚಗಿದೆ ಅನ್ನಿಸಿತು. ಆತ ಈಗ ಅದನ್ನು ತನ್ನ ಹಣೆಗೆ ಹೊತ್ತಿ ಟ್ರಿಗ್ಗರ್ ಎಳೆಯಬೇಕಿತ್ತು.ಏನು ಮಾಡುವುದು ಗೊತ್ತಾಗದೆ ಸುಮ್ಮನೇ ಅದನ್ನ್ನ ಪೋಲೀಸ್ ಆಫೀಸರ್‌ಗೆ ಹಿಂತಿರುಗಿಸಿದ. ಪೋಲೀಸ್ ಆಫೀಸರ್ ಹೆಣ್ಣುದನಿಯಲ್ಲಿ ಗಹಗಹಿಸಿದ. ಚಡ್ಡಿಯಲ್ಲಿ ಮಾಡಿಕೊಂಡೆಯಾ ಅಂತ ತಮಾಷೆ ಮಾಡಿದ. ಅದಕ್ಕೇ ಅಲ್ವಾ ನನ್ನ ಹೆಂಡತಿಯ ಹತ್ತಿರ ಬಂದದ್ದು ಎಂದು ಗಹಗಹಿಸಿದ.</p>
<p style="text-align:center;" align="left"><a href="http://www.themodernword.com/gabo/gabo_images_family.html" target="_blank"><img src="http://mysorepost.files.wordpress.com/2007/03/ggm_with_family.jpg" alt="ggm_with_family.jpg" height="361" width="470" /></a></p>
<p>ಎಂತೆಂತಹ ಪೈಲ್ವಾನರೇ ಚಡ್ಡಿಯಲ್ಲಿ ಮಾಡಿಕೊಳ್ಳುತ್ತಾರೆ ಎಂದು ಹೇಳಬೇಕೆನಿಸಿತು. ಆದರೆ ಅಂತಹ ಮಾರಣಾಂತಿಕ ತಮಾಷೆಗೆ ಇದು ಹೊತ್ತಲ್ಲ ಅನ್ನಿಸಿ ಸುಮ್ಮಗಾದ. ಪೋಲೀಸ್ ಆಫೀಸರ್ ರಿವಾಲ್ವರ್‌ನ ಸಿಲಿಂಡರ್ ಬಿಚ್ಚಿದ. ಅದು ಖಾಲಿ ಇತ್ತು. ರಿವಾಲ್ವರ್ ನಲ್ಲಿ ಗುಂಡು ತುಂಬಿಸಿಯೇ ಇರಲಿಲ್ಲ. ಮಾರ್ಕ್ವೆಜ್ ಗೆ ಅವಮಾನದಲ್ಲಿ ಆಗ ಸಾಯಬೇಕೆನಿಸಿತಂತೆ.</p>
<p align="left"> ಬೆಳಗೆ ನಾಲ್ಕರ ಹೊತ್ತಿಗೆ ಬಿರುಗಾಳಿ ನಿಂತಿತಂತೆ. ಇಬ್ಬರಿಗೂ ಸುಸ್ತಾಗಿ ನಿದ್ದೆ ತೂಗುತ್ತಿತ್ತಂತೆ. ಆತ ಬಟ್ಟೆ ತೊಟ್ಟುಕೊಳ್ಳಲು ಹೇಳಿದನಂತೆ. ಮಾರ್ಕ್ವೆಜ್ ವಿದೇಯ ಹುಡುಗನಂತೆ ತೊಟ್ಟುಕೊಂಡನಂತೆ. ಅದೇನು ಅನ್ನಿಸಿತೋ ಪೋಲೀಸ್ ಆಫೀಸರ್ ಅಳಲು ತೊಡಗಿದನಂತೆ. ಕಣ್ಣೀರು ಒರಸಿಕೊಂಡನಂತೆ. ಕರ್ಚೀಫಿನಿಂದ ಮೂಗು ಸೀಟಿದನಂತೆ.<img src="http://mysorepost.files.wordpress.com/2007/03/living-to-tell-the-tale.jpg" alt="living-to-tell-the-tale.jpg" align="right" height="233" width="139" /></p>
<p>'ನಿನ್ನ ಅಪ್ಪ ಡಾಕ್ಟರ್ ಅದೇನೋ ಹೆಸರಿಲ್ಲದ ಕಾಯಿಲೆಯಿಂದ ನನ್ನನ್ನು ಉಳಿಸಿದ್ದ.ಅದಕ್ಕಾಗಿ ನಾನು ನಿನ್ನನ್ನು ಉಳಿಸಿರುವೆ.ಈಗ ಹೋಗು' ಎಂದು ಕಳಿಸಿದನಂತೆ.</p>
<p>ಇದನ್ನೆಲ್ಲ ಮಾರ್ಕ್ವೆಜ್ ಬರೆಯುತ್ತಾ ಹೋಗುತ್ತಾನೆ. ಆಮೇಲೆ ಆಕೆ ಪುನಃ ಚಿಲಕ ತೆರೆದಿಟ್ಟುಕರೆಯುತ್ತಿದ್ದುದು.ಆತ ಹೋಗದೆ ತಪ್ಪಿಸಿಕೊಳ್ಳುತ್ತಿದ್ದುದು.ಪೋಲೀಸ್ ಆಫೀಸರ್ ಕುಡಿದು ಚಿತ್ತಾಗಿ ತನ್ನನ್ನು ಕುಡಿಯಲು ಆಹ್ವಾನಿಸುತ್ತಿದ್ದು.ತಾನು ಕೆಲವೊಮ್ಮೆ ಆಹ್ವಾನ ತಿರಸ್ಕರಿಸಲಾಗದೇ ಜೊತೆ ಕೊಡುತ್ತಿದ್ದುದು.ಕೊನೆ ಕೊನೆಗೆ ಆತ ರಗಳೆಯಂತೆ ಅನ್ನಿಸುತ್ತಿದ್ದುದು..</p>
<p><strong>ಮಾ</strong>ರ್ಕ್ವೆಜ್ ನ ಆತ್ಮ ಚರಿತ್ರೆಯ ಒಂದು ಸಂಪುಟ ಇಂಗ್ಲಿಷ್ ನಲ್ಲಿ ಬಂದಿದೆ.ಇನ್ನು ಎರಡನ್ನು ಆತ ತನ್ನ ಸ್ಪಾನಿಷ್ ಭಾಷೆಯಲ್ಲಿ ಇನ್ನೂ ಬರೆದು ಮುಗಿಸಿಲ್ಲ.ಅದಕ್ಕಾಗಿ ನಾವೆಲ್ಲಗೆಳೆಯರು ಕಾಯುತ್ತಿದ್ದೇವೆ..</p>
]]></content:encoded>
</item>
<item>
<title><![CDATA[ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ]]></title>
<link>http://mysorepost.wordpress.com/2007/03/14/amithatha/</link>
<pubDate>Wed, 14 Mar 2007 14:11:36 +0000</pubDate>
<dc:creator>Rasheed</dc:creator>
<guid>http://mysorepost.kn.wordpress.com/2007/03/14/amithatha/</guid>
<description><![CDATA[ನನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋ]]></description>
<content:encoded><![CDATA[<p><strong><font size="6">ನ</font></strong>ನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’  ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ  ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.</p>
<p>ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit  ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ.<!--more--></p>
<p>ಇಟ್ಟರೆ ಸಗಣಿ ಯಾದೆ ತಟ್ಟಿದರೆ ಬೆರಣಿಯಾದೆ ನೀನಾರಿಗಾದೆಯೋ ಎಲೆಮಾನವಾ ಎಂದು ಯಾರಿಗೂ ಕ್ಯಾರೇ ಅನ್ನದೆ  ನಾನು ಬರೆಯುತ್ತಲೇ ಇರುತ್ತೇನೆ.</p>
<p>ಈಗಲೂ ಅಷ್ಟೇ. ಆಮಿತಾತ ತೀರಿಹೋದರು ಅಂತ ಸುದ್ದಿ ಗೊತ್ತಾದಾಗ ನಾನು ಎಲ್ಲೋ ಬೀದಿ ಸುತ್ತುತ್ತಿದ್ದೆ. ಆಮೇಲೆ ಸುಮ್ಮನೆ ಮನೆಗೆ ಬಂದು ನಿದ್ದೆ ಹೋದೆ.ಇನ್ನೂ ಮಳೆ ಸುರಿಯುತ್ತಲೇ ಇತ್ತು. ಹಗಲು ಸುಸ್ತು ಹೊಡೆದಂತೆ ಮಂಕಾಗಿ ಹೋಗಿತ್ತು.</p>
<p>ಬಾಗಿಲು ಬಡಿಯುವ ಕರ್ಕಶ ಸದ್ದಿಗೆ ಹೆದರಿ  ಎದ್ದು ಬಂದರೆ ಯಾವನೋ ಒಬ್ಬ ಜಮೀನು ದಲ್ಲಾಳಿ ಕಮಿಷನ್  ವಿಷಯಕ್ಕೆ ಜಗಳ ಕಾಯಲು ಬಂದು ಕೂತಿದ್ದ. ಹಳ್ಳಿಯ ದಲ್ಲಾಳಿ. ಆತನಿಗೆ ಜಮೀನು ವ್ಯವಹಾರದ ಆದುನಿಕೋತ್ತರ ನಯ ನಾಜೂಕು ಒಂದೂ ಗೊತ್ತಿದ್ದಂತಿರಲಿಲ್ಲ.ಕುರಿ ಮರಿ ವ್ಯಾಪಾರದವನಂತೆ ಜಗಳಕ್ಕೇ ನಿಂತು ಕೊಂಡಿದ್ದ.ನಾನೂ ಅಷ್ಟೆ. ಅಷ್ಟೇ ಮೊಂಡನಂತೆ ಇದಕ್ಕಿಂತ ಹೆಚ್ಚು ಒಂದು ಕಾಸು ಕೊಡುವುದಿಲ್ಲ.ಅದೇನು ಕಿಸೀತೀಯಾ ಕಿಸಿ ಅಂತ ನಿದ್ದೆಗಣ್ಣಲ್ಲಿ ಜಗಳಕ್ಕೆ ನಿಂತಿದ್ದೆ.</p>
<p>ಆತನೂ ಹೆಗಲಲ್ಲಿದ್ದ ಕೊಳಕು ಟವಲ್ಲು ಕೊಡವಿ `ಅದೆಂಗಾದಾತೂ.. ದೇಸದಲ್ಲಿ ನಡೀತಿರೋ ವ್ಯವಹಾರ ಬುಟ್ಟು ನಾನು ಬೇರೇನಾದ್ರೂ ಕೇಳಿವ್ನಾ? ನನ್  ಕೂಲಿ ಕೊಡಿ. ಇಲ್ಲಾ ನ್ಯಾಯ ತೀರ್ಮಾನ ಆಗ್ಲಿ" ಅಂತ  ದಲ್ಲಾಳಿ ಕೆಲಸವನ್ನು ಕೂಲಿ ಕೆಲಸದ ಜೊತೆ ಸಮೀಕರಿಸಿಕೊಂಡು ಜಾಗತೀಕರಣ ಮುಕ್ತ ಮಾರುಕಟ್ಟೆ   ಇತ್ಯಾದಿಗಳ  ವಕ್ತಾರನಂತೆ ಸಡ್ಡು ಹೊಡೆಯುತ್ತಿದ್ದ.</p>
<p>ಸಿಕ್ಕಾಪಟ್ಟೆ ಕೋಪದ ನಡುವೆಯೂ ನಗು ಬರುತ್ತಿತ್ತು. ನಾನೇನೂ ದೊಡ್ಡ ಜಮೀನ್ದಾರನಾಗಲು ಹೊರಟಿರಲಿಲ್ಲ. ಎಷ್ಟು ಅಂತ ಈ ಊಳಿಗಮಾನ್ಯ ಜಮೀನ್ದಾರಿ   ವ್ಯವಸ್ಥೆಯ ಕುರಿತು ಯೋಚಿಸುವುದು. ಅದಕ್ಕಿಂತ ಜಮೀನು ಹೊಂದುವುದೇ ಮಿಗಿಲು   ಎಂದುಕೊಂಡು ಹೊರಟರೆ ಈ ವ್ಯವಹಾರ ಜ್ಞಾನವಿಲ್ಲದ ಹಳ್ಳಿಯ ದಲ್ಲಾಳಿ ವ್ಯವಹಾರಕ್ಕೂ ಮೊದಲೇ ವ್ಯವಹಾರ ಜ್ಞಾನವಿಲ್ಲದ  ನನ್ನಿಂದ ಸಾಕಷ್ಟು ಇಸಕೊಂಡು ಈಗ ನ್ಯಾಯ ತೀರ್ಮಾನವಾಗಲಿ  ಎಂದು ಜಗಳಕ್ಕೆ ನಿಂತಿದ್ದ.</p>
<p>'ಬುದ್ದೀ ಒಂದು ಮಾತು ಕೇಳಿ. ಈಗ ದೇಶವೆಲ್ಲಾ ವ್ಯವಹಾರ ಮಾಡ್ತಾ ಅದೆ. ಕೂಲಿ ಮಾಡ್ದೋರಿಗೆ ಕೂಲಿ ಕೊಡಿ  ಇಲ್ಲಾಂದ್ರೆ ದೇಶ ನಡಿಯಾಕಿಲ್ಲ ' ಎಂದು ಬೆದರಿಕೆ ಹಾಕುತ್ತಿದ್ದ. ಅವನು ಮಗನ ಮದುವೆಗೆ ಅಂತ ಇಸಕೊಂಡಿದ್ದು. ಮಗಳ ಸೀಮಂತಕ್ಕೆ ಮಟನ್  ತಗೊಳ್ಳಕ್ಕೆ ಅಂತ ಕಿತ್ತುಕೊಂಡದು, ಸಿದ್ಧರಾಮಯ್ಯನವರನ್ನ ನೋಡ್ಲಿಕ್ಕೆ ಅಂತ  ಖಾದಿ ಅಂಗಿ ಶಾಲು ತಗಳ್ಳಕ್ಕೆ ಅಂತ ಇಸಕೊಂಡಿದ್ದು. ಹೆಂಡತಿ ಬೆಂಡೋಲೆ ಅಡ ಇಟ್ಟಲ್ಲಿಂದ  ಬಿಡಿಸಿಕೊಳ್ಳಕ್ಕೆ ಅಂತ ತಗೊಂಡಿದ್ದು ಎಲ್ಲವನ್ನೂ ನೆನಪು ಮಾಡುತ್ತಾ ಹೋದರೆ ಛೆ ಅದೆಲ್ಲಾ ಲೆಕ್ಕಕ್ಕೆ ತಗೋತಾರಾ ಬುದ್ದೀ ಅಂತ ನನ್ನನ್ನ ಯಾಮಾರಿಸಲು ನೋಡುತ್ತಿದ್ದ.</p>
<p>ನಾನೂ ಒಬ್ಬ ಬ್ಯಾರಿಯಂತೆ ಎಲ್ಲವನ್ನೂ ಲೆಕ್ಕ ಹಾಕುತ್ತಾ ಕವಿಯಂತೆ ಮರೆತು ಹೋಗುತ್ತಾ ಜಗಳದ ಸುಖದಲ್ಲಿ ಮೈಮರೆತು ಆಮಿತಾತ ಎಂಬ ನನ್ನ ಪ್ರೀತಿಯ ಅಜ್ಜಿ ತೀರಿ ಹೋಗಿದ್ದನ್ನ ಮರೆತು ಬಿಟ್ಟಿದ್ದೆ. ಆಮೇಲೆ ನೆನಸಿಕೊಂಡು ಗೌಡ್ರೇ ನಮ್ಮ  ವ್ಯವಹಾರ ನಾಳೆ  ಮಾತಾಡೋಣ. ಈಗ ನನಗೆ ಕಥೆ ಬರೆಯಲು ಇದೆ ಎಂದು ತಪ್ಪಿಸಿಕೊಂಡಿದ್ದೆ.</p>
<p>`ಆಯ್ತು ಬುದ್ದಿ ನಾಳೆ ಬೆಳಕು ಹರಿಯುವ ಹೊತ್ಗೆ ಬರ್ತೀನಿ ವ್ಯವಹಾರ ಮುಗಿಸಿಬಿಡೋಣ' ಅಂತ ಬಸ್ ಚಾರ್ಜಿಗೆ ಕಾಸು ಇಸಕೊಂಡು ಆತ ಹೊರಟು ಹೋಗಿದ್ದ.</p>
<p>ಈ ದಲ್ಲಾಳಿ ಹಳ್ಳಿಯವ ಯಾವಾಗಲೋ ಒಮ್ಮೆ ಟೀವಿಯಲ್ಲಿ ನನ್ನನ್ನು ನೋಡಿದ್ದ. ಅದ್ಯಾಕೆ ಬುದ್ದಿ ನಮ್ಮನೆ ಟೀವಿಯಲ್ಲಿ ನೀವು ಬಂದಿದ್ರಿ ಅಂತ ಅಚ್ಚರಿ ಪಟ್ಟು ಕೇಳಿದ್ದ. ಅವನಿಗೆ ನಾನು ಕತೆ ಬರೆವ ವಿಷಯ ಪೇಪರಲ್ಲಿ ಬರುವ ವಿಷಯ ಎಲ್ಲ ವಿವರಿಸಿ ಹೇಳಿದ್ದೆ. ಓ ನೀವೂ ನಮ್ಮ ಹಾ ಮಾ ನಾಯಕರಿದ್ದಂಗೆ ದೇಜಗೌ ಇದ್ದಂಗೆ. ನಿಮ್ಮನ್ನ  ನೋಡಿದ್ರೆ ಸಾಬರ ಥರ ಇಲ್ವೇ ಇಲ್ಲ ಬುದ್ದಿ. ನಮ್ಮಂಗೇ ಎಂದು ಆಗಾಗ ನನಗೆ ಗೌರವವನ್ನೂ ಕೊಡುತ್ತಿದ್ ದ.ನಾನೂ ಯಾಕೆ ಈ ಗೌರವವನ್ನ ಸುಮ್ಮನೇ ಬಿಡುವುದು ಎಂದು ಆಗಾಗ ಅದನ್ನೂ ತಗೊಳ್ಳುತ್ತಿದ್ದೆ.</p>
<p>ದಲ್ಲಾಳಿ ಹೊರಟು ಹೋದ ಮೇಲೆ ಮಕ್ಕಳ ಹತ್ತಿರ ತೀರಿ ಹೋದ ಆಮಿತಾತನ ಕತೆ ಹೇಳುತ್ತಾ ಕುಳಿತಿದ್ದೆ. ನಾವು ಸಣ್ಣವರಾಗಿರುವಾಗ ಈ ಆಮಿತಾತ ಎಂಬ ಅಜ್ಜಿಗೆ ಕಾಡಿನಿಂದ ಗಿಳಿಗಳನ್ನು ಹಿಡಿದು ತಂದು ಕೊಡುತ್ತಿದ್ದುದು, ಬೆಕ್ಕುಗಳು ಅವುಗಳನ್ನು ಹಿಡಿದು ತಿನ್ನುತ್ತಿದ್ದುದು. ಆಮೇಲೆ ನಾವು ಪುನಃ ಹೊಸ ಗಿಳಿಗಳನ್ನು ತಂದು ಕೊಡುತ್ತಿದ್ದುದು, ಅವುಗಳನ್ನ ಪುನಃ ಬೆಕ್ಕುಗಳು ತಿನ್ನುತ್ತಿದ್ದುದು, ನಾವು ಪುನಃ ತಂದು ಕೊಡುತ್ತಿದ್ದುದು.. ಮಕ್ಕಳು ಈ ಗಿಳಿ ಮತ್ತು ಬೆಕ್ಕುಗಳ ಪುನಃ ಪುನಃ ಪುನರಾವರ್ತನೆ ಕತೆ ಕೇಳಿ ಬೇಜಾರಾಗಿ ಎದ್ದು ಹೋಗಿದ್ದರು. ಈ ಅಜ್ಜಿಯ ಇನ್ನೂ ರೋಚಕ ಕತೆಗಳನ್ನು ಮಕ್ಕಳಿಗೆ ಹೇಳಲಾಗದೆ ನಾನೂ ಒಂದು ತರಹದ ಅಸಹಾಯಕತೆಂದ ಒದ್ದಾಡುತ್ತಿರುವಾಗ ಊರಿನಿಂದ ನನ್ನ ತಾಯಿ ಫೋನ್ ಮಾಡಿ 'ಯಾಕೆ ಆಮಿತಾತಳ ಮೃತ ದೇಹವನ್ನು ನೋಡಲು ಬರಲಿಲ್ಲ' ಎಂದು ಬೇಜಾರು ಮಾಡಿಕೊಂಡರು. ಆಮೇಲೆ 'ಬರದಿದ್ದುದು ಒಳ್ಳೆಯದೇ ಆಯಿತು ಬಿಡು ನಿನಗೆ ಬೇಜಾರಾಗುತ್ತಿತ್ತು' ಅಂದರು.</p>
<p>ಯಾಕೆ ಎಂದು ಕೇಳಿದೆ  'ಅಂತ್ಯಸಂಸ್ಕಾರ ಅಷ್ಟೇನೂ ಚೆನ್ನಾಗಿರಲಿಲ್ಲ. ಮೆರವಣಿಗೆ ಇರಲಿಲ್ಲ. ತರಾರಿಯಲ್ಲಿ ಮಣ್ಣಲ್ಲಿ ಮರೆಮಾಡಿದರು' ಅಂದರು.</p>
<p>'ಹಾಗೆ ಯಾಕಂತೆ' ಎಂದು ಕೇಳಿದೆ.</p>
<p>ಈ ಆಮಿತಾತನ ಸಾಕು ಮಗನೊಬ್ಬ ಸೌದಿ ಅರೇಬಿಯಾದಲ್ಲಿದ್ದಾನೆ. ಆತ ಇಸ್ಲಾಮಿನ ಇನ್ನೊಂದು ಪಂಥದ ಅನುಯಾಯಾಗಿದ್ದಾನೆ. ಆ ಪಂಥವನ್ನು ಶುರುಮಾಡಿದವರು ಅರೆಬಿಯಾದ ರಾಜ ಮನೆತನದವರು. ಆ ಪಂಥದ ಪ್ರಕಾರ ಸಾವಿನಲ್ಲಿ ಬಡವರೂ ಅರಸರೂ ಒಂದಾಗತ್ತಾರೆ. ಅಲ್ಲಿ ಅರಸರು ತೀರಿಹೋದರೂ ಬಡವರು ತೀರಿಹೋದರೂ ಅಂತ್ಯಸಂಸ್ಕಾರ  ಸರಳವಾಗಿರುತ್ತದೆ. ಶೋಕಾಚರಣೆ ಇರುವುದಿಲ್ಲ. ಮೊನ್ನೆ ಅರೇಬಿಯಾದ ಮಹಾರಾಜ ತೀರಿ ಹೋದಾಗಲೂ ಅಂತ್ಯ ಸಂಸ್ಕಾರ ಸರಳವಾಗಿತ್ತಂತೆ. ಆಮಿತಾತಾಳ ಸಾಕು ಮಗ ಅರೇಬಿಯಾದಿಂದ ಫೋನ್ ಮಾಡಿ ಹೇಳಿದನಂತೆ. ಅದಕ್ಕೇ ಹೀಗೆ ಮಾಡಿದರು. ಪಾಪ  ನಮ್ಮ ಆಮಿತಾತ ಎಂಬ ಅಜ್ಜಿಗೆ ಸಾವಿನಲ್ಲೂ ಸುಖ ಇರಲಿಲ್ಲ ಎಂದು ಬೇಜಾರು ಮಾಡಿಕೊಂಡಳು.</p>
<p>ಈ ಆಮಿತಾತ ತೀರಿಹೋಗುವ ದಿನದವರೆಗೂ ತನಗೆ ಕಾಫಿತೋಟವೊ೦ದರ ಅರ್ಧಪಾಲು ಸಿಗುವುದು ಎಂದು ನಂಬಿಕೊಂಡು ಬದುಕಿದ್ದಳು.ನೂರಾರು ವರ್ಷಗಳ ಹಿಂದೆ ಬ್ರಿಟಿಶ್ ದೊರೆಯೊಬ್ಬ ಆಕೆಗೆ ಈ  ಆಸೆ ಕೊಟ್ಟು ಕೊಡಗಿಗೆ ಕರೆದು ಕೊಂಡು ಬಂದನಂತೆ. ಆ ತೋಟ ಹಲವು ಸಾಹುಕಾರರ ಕೈದಾಟಿದ್ದರೂ ಆ ಪಾಲು ತನಗೆ ಸಿಗುವುದು ಎಂದು ಆಕೆ ನಂಬಿದ್ದಳು.ಅದರಲ್ಲಿ ಒಂದು ಪಾಲು ನನಗೂ ನೀಡುವುದಾಗಿ ಆಕೆ ಆಸೆ ಕೊಟ್ಟಿದ್ದಳು. ಇಂದು ಆಮಿತಾತ ತೀರಿಹೋಗುವವರೆಗೆ ನನಗೂ ಆ ನಂಬಿಕೆ ಇತ್ತು. ಇನ್ನು ಇಲ್ಲ.</p>
<p>ನಾಳೆ ಬೆಳಕು ಹರಿಯುವ ಹೊತ್ತು ಹಳ್ಳಿಂದ ಜಮೀನು ದಲ್ಲಾಳಿ ಬರುತ್ತಾನೆ.ಇನ್ನು ಆತನೇ ಗತಿ.</p>
<p>ಶುಭಂ.ಮ೦ಗಳಂ</p>
]]></content:encoded>
</item>

</channel>
</rss>
