<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಧಾರಾವಾಹಿ &amp;laquo; WordPress.com Tag Feed</title>
	<link>http://wordpress.com/tag/ಧಾರಾವಾಹಿ/</link>
	<description>Feed of posts on WordPress.com tagged "ಧಾರಾವಾಹಿ"</description>
	<pubDate>Sat, 30 Aug 2008 09:58:26 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ನಮ್ಮ ಸ್ವಾತಂತ್ರ್ಯ ದಿನಾಚರಣೆ !]]></title>
<link>http://chendemaddale.wordpress.com/?p=177</link>
<pubDate>Wed, 06 Aug 2008 17:52:47 +0000</pubDate>
<dc:creator>navada</dc:creator>
<guid>http://chendemaddale.wordpress.com/?p=177</guid>
<description><![CDATA[ಪುಟ ಹತ್ತು
ಇಂಥ ಸಹಕಾರಿಗಳಾದ ನಮ್ಮದು ವಿಚಿ]]></description>
<content:encoded><![CDATA[<p><strong>ಪುಟ ಹತ್ತು<br />
</strong>ಇಂಥ ಸಹಕಾರಿಗಳಾದ ನಮ್ಮದು ವಿಚಿತ್ರ ತಮಾಷೆಯ ಬದುಕು. ಹಲವು ಘಟನೆಗಳು ಮಾಸಿ ಹೋಗಿರುವಾಗ ರಾತ್ರೆಯಷ್ಟೇ ಹರ್ಷನಿಗೆ ಫೋನ್ ಮಾಡಿದ್ದೆ. ಒಂದೊಂದೇ ನೆನಪಿನ ಗರಿ ಷೋಕೇಸ್‌ನಲ್ಲಿಡತೊಡಗಿದ. ಒಂದರ ಬಣ್ಣವೂ ಮಾಸಿರಲಿಲ್ಲ. ಹಾಗೆಯೇ ಫಳ ಫಳ ಹೊಳೆಯುತ್ತಿತ್ತು.<br />
ಆಗಸ್ಟ್ ೧೫ ಕ್ಕೆ ಇನ್ನೇನು ಒಂಬತ್ತು ದಿನ ಬಾಕಿಯಿದೆ. ಅದಕ್ಕೇ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸುತ್ತೇನೆ. ಅದು ನಮ್ಮ "ಗುಣಾವಗುಣ’ಗಳನ್ನು ಹೇಳಬಹುದು ಎಂಬುದು ನನ್ನ ಲೆಕ್ಕಾಚಾರ. ಆಗಸ್ಟ್ ೧೫ ಎಂದಿನಂತೆಯೇ ಬಂತು ಎಲ್ಲರಿಗೂ, ಆದರೆ ನಮಗೆ ಮಾತ್ರ ಅಲ್ಲ. ಮೊದಲೇ ಹೇಳಿದಂತೆ ನಮ್ಮದು ಚಿಕ್ಕ ಗಲ್ಲಿ. ಆದರೆ ಆ ಗಲ್ಲಿ ಇದ್ದದ್ದು ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ. ನಮ್ಮ ಮನೆಯಲ್ಲಿ ಉಪ್ಪರಿಗೆ ಎಂಬುದೊಂದಿತ್ತು. ಇನ್ನೊಂದು ಲೆಕ್ಕದಲ್ಲಿ ಹೇಳುವುದಾದರೆ ಅದು ಬೇಸಿಗೆ ಅರಮನೆ. ಮಹಾರಾಜರ ಕಾಲದಲ್ಲಿದ್ದಂತೆಯೇ. ಬೇಸಿಗೆ ಕಾಲದಲ್ಲಿ ಅಲ್ಲಿ ಮಲಗಲು ಬೇಡಿಕೆ ಹೆಚ್ಚುತ್ತಿತ್ತು.<br />
ಆ ಆ. ೧೫ ರಂದು ಬೆಳಗ್ಗೆ ಬೇಗ ಎದ್ದೆವು. ನಮ್ಮ ಲೀಡರ್ ಟೈಲರ್ ರಮೇಶ್ ಅವರ ಮನೆಗೆ ಕೆಲವರು ಹೋಗಿ ಕರೆ ತಂದೆವು. ಅವರೇ ನಮ್ಮ ಅತಿಥಿ. ನಾವು ಎಂಟೂ ಮಂದಿ ರಸ್ತೆಯಲ್ಲಿ ಅಂದರೆ ಮನೆ ಮುಂದೆ ಸಾಲಾಗಿ ನಿಂತೆವು.<br />
ಉಪ್ಪರಿಗೆ ಮೇಲೆ ಹೋದ ರಮೇಶ್ ಬಾವುಟ ಹಾರಿಸಿದರು. ರಸ್ತೆಯಲ್ಲಿ ಸಾಲಾಗಿ ನಿಂತ ನಾವು "ಜನಗಣಮನ’ ರಾಷ್ಟ್ರಗೀತೆ ಹಾಡಿದೆವು. ಇದ್ದಕ್ಕಿದ್ದಂತೆ ಮನೆ ಎದುರು ರಾಷ್ಟ್ರಗೀತೆ ಗಾಯನ ಕೇಳಿಬಂದದ್ದಕ್ಕೆ ಅಚ್ಚರಿಪಟ್ಟ ಪಕ್ಕದ ಮನೆಯವರು ಹೊರಗೆ ಬಂದರು. ನಗುವುದೊಂದೇ ಬಾಕಿ.<br />
ರಸ್ತೆ ಮೇಲೆ ಹೋಗುತ್ತಿದ್ದವರೂ ನಮ್ಮ ಸಾಲು ಕಂಡು ದಂಗಾಗಿ ನಿಂತರು. ನಾವ್ಯಾರೂ ನಗಲಿಲ್ಲ. ಶಿಸ್ತಿನಿಂದ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವ ಮಕ್ಕಳ ಹಾಗೆ ಅತ್ತ ಇತ್ತ ನೋಡದೇ ಹಾಡಿದೆವು. ...ಜಯಹೇ ....ಜಯಹೇ ಎಂದು ಮುಗಿಸಿ ಹಿಂದೆ ತಿರುಗಿ ನೋಡುತ್ತೇವೆ...ಪಕ್ಕದ ಮನೆಯ ಗೆಳೆಯನ ತಂದೆ, ಚಿಕ್ಕ ತಮ್ಮ, ಅಮ್ಮ ಎಲ್ಲರೂ ಸಾಲಾಗಿ ನಿಂತು ಧ್ವಜ ವಂದನೆ ಸಲ್ಲಿಸುತ್ತಿದ್ದರು. ನಿಜವಾಗಲೂ ಆಗ ನಗು ಬಂದದ್ದು ನಮಗೇ ನಮ್ಮನ್ನು ಕಂಡು.<br />
ಗೆಳೆಯ ಹರ್ಷ ಮತ್ತು ಇತರರು ತಕ್ಷಣವೇ ತಂದ ಚಾಕಲೇಟ್ ನ್ನು ಎಲ್ಲರಿಗೂ ಹಂಚಿದರು. ರಸ್ತೆಯಲ್ಲಿ ನಿಂತವರಿಗೂ ಕೊಟ್ಟರು. ಪಕ್ಕದಲ್ಲೇ ಇದ್ದ ನರ್ಸರಿ ಶಾಲೆಯ ಹೋಗಿ ಮಕ್ಕಳಿಗೆ ಚಾಕಲೇಟ್ ಹಂಚಿದೆವು. ಅಲ್ಲಿನ ಟೀಚರ್..."ಎಲ್ಲಿಯದು?’ ಎಂದು ಕೇಳಿದ್ದಕ್ಕೆ ಅಲ್ಲಿಯದು ಎಂದು ತೋರಿಸಿದ ಗೆಳೆಯರ ಬೆರಳನ್ನೇ ನೋಡುತ್ತಾ ದಂಗಾಗಿ ನಿಲ್ಲುವ ಸರದಿ ಟೀಚರ್ ನದ್ದಾಗಿತ್ತು.<br />
ಬಾವುಟ ಹಾರಿಸಿದ ಅತಿಥಿಗಳಿಗೆ ಉಪಾಹಾರ ಸತ್ಕಾರವೂ ಆಯಿತು. ಉಪ್ಪಿಟ್ಟು ಮಾಡಿದ್ದೆವು. ಎಲ್ಲರೂ ಕುಳಿತು ಅತಿಥಿಗಳೊಂದಿಗೆ ಕುಳಿತು ಹರಟುತ್ತಾ, ನಮ್ಮನ್ನು ನಾವೇ ಗೇಲಿ ಮಾಡಿಕೊಳ್ಳುತ್ತಾ, ಒಬ್ಬೊಬ್ಬರೂ ಹಾಡಿದ ರಾಷ್ಟ್ರಗೀತೆಯಲ್ಲಿನ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಅನ್ನು ಎತ್ತಿ ಹಾಡುವಾಗ ಮಧ್ಯಾಹ್ನ ೧೨ ಕಳೆದದ್ದು ತಿಳಿಯಲಿಲ್ಲ.<br />
ಸರಕಾರಿ ರಜೆ ಇದ್ದರೆ ನಮ್ಮ ಆಫೀಸಿಗೆ ರಜೆ ಇರುವುದಿಲ್ಲ. ಆದರೆ ಸುದ್ದಿ ಮಾಡುವವರ ಮತ್ತು ಸುದ್ದಿಯಾಗುವವರು ಅಂದು ವಿರಾಮ ಘೋಷಿಸಿರುತ್ತಾರೆ. ಆದ್ದರಿಂದ ನಮಗೂ ಕೊಂಚ ಆರಾಮ.<br />
ನಿಧಾನಕ್ಕೆ ಅನ್ನ-ಸಾಂಬಾರ್ ಮಾಡಿಕೊಂಡು ಊಟ ಮಾಡಿ ಒಂದು ನಿದ್ರೆ ಮಾಡಿ ಆಫೀಸಿಗೆ ಹೊರಟೆವು. ನಮ್ಮ ದುರಾದೃಷ್ಟ ಕಚೇರಿಗೆ ಬಂದಾಗಲೇ ಗೊತ್ತಾಗಿದ್ದು...ನಗರದಲ್ಲಿ ಒಂದು ಕೊಲೆಯಾಗಿದೆ ಎಂಬುದು !<br />
ಇಷ್ಟರ ಮಧ್ಯೆ ಹರ್ಷನ ರಸಮಂಜರಿಯಲ್ಲಿ ಬಹಳ ಪ್ರಸಿದ್ಧವಾದ ಹಾಡು ಯಾವುದು ಗೊತ್ತೇ ?...!</p>
]]></content:encoded>
</item>
<item>
<title><![CDATA[ಎದೆಯ ದನಿ ೧ (ಧಾರಾವಾಹಿ)]]></title>
<link>http://kalaravapatrike.wordpress.com/2008/08/02/%e0%b2%8e%e0%b2%a6%e0%b3%86%e0%b2%af-%e0%b2%a6%e0%b2%a8%e0%b2%bf-%e0%b3%a7-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf/</link>
<pubDate>Sat, 02 Aug 2008 13:33:28 +0000</pubDate>
<dc:creator>uniquesupri</dc:creator>
<guid>http://kalaravapatrike.wordpress.com/2008/08/02/%e0%b2%8e%e0%b2%a6%e0%b3%86%e0%b2%af-%e0%b2%a6%e0%b2%a8%e0%b2%bf-%e0%b3%a7-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf/</guid>
<description><![CDATA[ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ]]></description>
<content:encoded><![CDATA[<p>ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ ಕೂಡ ಒಂದು ಎಂಬ ನಿರ್ಲಿಪ್ತತೆಯಲ್ಲಿ ಸೂರ್ಯ ಪಶ್ಚಿಮದ ಬಾನಿನಲ್ಲಿ ಮುಳುಗು ಹಾಕುತ್ತಿದ್ದ. ಪಕ್ಷಿಗಳು ಕಚಪಿಚವೆನ್ನುತ್ತಾ ದಿನವನ್ನು ಕಳೆದ ಸಂಭ್ರಮವನ್ನು ಆಚರಿಸುತ್ತಿದ್ದವು. ಮೆಲ್ಲಗೆ ಕತ್ತಲು ಕಿಟಕಿಗಳ ಮೂಲಕ ಬಸ್ಸಿನ ಒಳಕ್ಕೂ ತೂರಲು ಶುರುವಾದದ್ದನ್ನು ಸುಹಾಸ್ ಗಮನಿಸಿದ.</p>
<p>          <img src="http://kalaravapatrike.files.wordpress.com/2008/08/spirituality4.jpg" style="display:block;margin-left:auto;margin-right:auto;text-align:center;" height="334" alt="spirituality4.jpg">        </p>
<p>ಮಾತು ಮುಗಿಸಿದ ಡ್ರೈವರ್ ಬಸ್ಸಿನೊಳಕ್ಕೆ ಹಾರಿ ಬಸ್ಸಿನ ಲೈಟುಗಳನ್ನು ಹತ್ತಿಸಿದ. ಬಸ್ಸಿನೊಳಕ್ಕಿದವರಲ್ಲಿ ಅನೇಕರು ಕಣ್ಣು ಮುಚ್ಚಿ ಎದೆ ಮುಟ್ಟಿಕೊಂಡು ದೇವರನ್ನು ಸ್ಮರಿಸಿದ್ದು ಸುಹಾಸನಿಗೆ ಮಜವಾಗಿ ಕಂಡಿತು. ಡ್ರೈವರ್ ತನ್ನೆದುರಿದ್ದ ದೇವರ ಫೋಟೊಗೆ ಊದುಬತ್ತಿ ಬೆಳಗಿ ಅದನ್ನು ಸ್ಟೇರಿಂಗಿನ ಪಕ್ಕದಲ್ಲಿ ಅಂಟಿಸಿಕೊಂಡಿದ್ದ ಸ್ಟ್ಯಾಂಡಿನೊಳಕ್ಕೆ ಇಟ್ಟ. ಅಲ್ಲೇ ಪಕ್ಕದಲ್ಲಿ ಅಜ್ಜಿಯೊಬ್ಬಳಿಂದ ಕೊಂಡ ಮಲ್ಲಿಗೆ ಹೂವಿನ ಮಾಲೆ ದೇವರ ಫೋಟೊವನ್ನು ಅಪ್ಪಿಕೊಂಡಿತ್ತು. ಕ್ಲೀನರ್ ತನ್ನ ಕೆಲಸ ಮುಗಿಸಿ ಹಸಿಯಾದ ಬನಿಯನ್ ಬಿಚ್ಚಿ ಹಳೆಯ ದೊಗಲೆ ಶರ್ಟಿನೊಳಕ್ಕೆ ನುಸುಳಿದ. ಮೇಲೇರಿಸಿದ್ದ ಪ್ಯಾಂಟಿನ ಮಡಿಕೆಗಳನ್ನು ಬಿಡಿಸಿಕೊಂಡ. ಲಗೇಜ್ ವಿಚಾರದಲ್ಲಿ ಯಾರೊಂದಿಗೋ ಜಗಳ ತೆಗೆದಿದ್ದ ಕಂಡಕ್ಟರ್, 'ಹೌದ್ರೀ, ಲಗೇಜಿಗೂ ಟಿಕೆಟ್ ತಗೋ ಬೇಕು. ನೀವು ಟಿಕೆಟ್ ತಗೊಂಡ್ರೆ ಲಗೇಜನ್ನು ಫ್ರೀ ಸಾಗಿಸ್ತೀವಿ ಅಂತೇನು ನಾವು ಹೇಳಿಲ್ಲ' ಎನ್ನುತ್ತಾ ಸರಸವಾಡುತ್ತಿದ್ದ. ಆದರೆ ಅವನೊಂದಿಗೆ ವಾದಿಸುತ್ತಿದ್ದ ಪ್ರಯಾಣಿಕನಿಗೆ ಅವನ ಯಾವ ಸರಸದ ಮಾತಿನ ಮೇಲೂ ಗಮನವಿರಲಿಲ್ಲ. ಆತ ಧ್ವನಿಯೇರಿಸಿ ಏನನ್ನೋ ಬಡಬಡಿಸುತ್ತಿದ್ದ. ಡ್ರೈವರ್ ಹಾಗೂ ಕ್ಲೀನರ್ ಸಹ ಈ ಜಗಳ ನಡೆಯುತ್ತಿದ್ದ ಜಾಗಕ್ಕೆ ದೌಡಾಯಿಸಿದರು.</p>
<p>ಇದೇ ಸಮಯ ಕಾಯುತ್ತಿದ್ದಂತೆ ಕಾಣುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಕಂಕುಳಲ್ಲಿ ಮಲಗಿದ ಮಗುವನ್ನು ಎತ್ತಿಕೊಂಡು ಬಂದು ಕಾಸಿಗೆ ಕೈ ಚಾಚುತ್ತಿದ್ದಳು. ಯಾರೂ ಆಕೆಯ ಮುಖವನ್ನೂ ಸಹ ನೋಡುವ ಪ್ರಯತ್ನ ಮಾಡದೆ ಆಕೆಯನ್ನು ಮುಂದಕ್ಕೆ ಹೋಗುವಂತೆ ಹೇಳುತ್ತಿದ್ದರು. ಚಿಕ್ಕ ಮಕ್ಕಳು, ಹೆಂಗಸರು, ಫ್ಯಾಮಿಲಿ ಇರುವ ಕಡೆ ಆ ಪುಟ್ಟ ಭಿಕ್ಷುಕಿ ಎರಡು ಮೂರು ಸಲ 'ಮುಂದಕ್ಕೆ ಹೋಗು' ಎಂದು ಹೇಳಿದರೂ ಕದಲದೆ ನಿಲ್ಲುತ್ತಿದ್ದುದನ್ನು ಕಂಡ ಸುಹಾಸನಿಗೆ ಈಕೆ ಪಕ್ಕಾ ಫ್ರೊಫೆಶನಲ್ ಭಿಕ್ಷುಕಿಯಿರಬೇಕು ಎನ್ನಿಸಿತು. ತನ್ನೆದುರು ಆಕೆ ಬಂದು ಕೈಯೊಡ್ಡಿದಾಗ 'ಇದರಲ್ಲಿ ನಿನಗೆ ಎಷ್ಟು ವರ್ಷ ಎಕ್ಸ್ ಪೀರಿಯನ್ಸ್ ಇದೆ' ಎಂದು ಕೇಳಿಬಿಡಬೇಕೆನಿಸಿತು. ಸುಮ್ಮನೆ ಆತ ಆಕೆಯನ್ನು ದಿಟ್ಟಿಸಿದ. ಅವನ ನಗುವನ್ನು ಕಂಡು ಗಾಬರಿಯಾದ ಹುಡುಗಿ ಸುಮ್ಮನೆ ಮುಂದಕ್ಕೆ ಸರಿದಳು. ಆಕೆ ಏತಕ್ಕೆ ಗಾಬರಿಯಾಗಿರಬಹುದು ಎಂದು ಆಲೋಚಿಸಿದ. ತಲೆಯಲ್ಲಿ ಏನೇನೋ ಹರಿದಾಡಿದಂತಾಗಿ ಅರೆಕ್ಷಣ ಸುಹಾಸ ಮೈಮರೆತಿದ್ದ. ಅಷ್ಟರಲ್ಲಿ ಆತನ ಪಕ್ಕದಲ್ಲಿಂದ ಒಂದು ಧ್ವನಿ ಹೊರಟಿತು.</p>
<p>"ನಾನು ಹಾಗೆ ಅರ್ಧಕ್ಕೇ ಕಾಲೇಜು ಬಿಟ್ಟು ಹೋದದ್ದಕ್ಕೆ ಬರೀ ಹೋಂ ಸಿಕ್‌ನೆಸ್ ಕಾರಣ ಅಂತ ನಿಂಗೂ ಅನ್ನಿಸುತ್ತಾ?"</p>
<p>ಸುಹಾಸ ನಸುನಗುತ್ತಾ ಅಮರ್‌ನ ಮುಖ ನೋಡಿದ.</p>
<p>***</p>
<p>"ಇವ್ನು ಚಿಕ್ಕವನಾಗಿದ್ದಾಗ ಹಠ ಮಾಡಿದರೆ ರಾಜಗಿರಿಯ ಹಾಸ್ಟೆಲ್‌ಗೆ ಹಾಕ್ತೀವಿ ನೋಡು ಎಂದು ಇವರು ಗದರಿಸುತ್ತಿದ್ದರು. ಗಪ್ ಚುಪ್ ಆಗಿಬಿಡ್ತಿದ್ದ. ಮನೆ ಬಿಟ್ಟು ಹಾಸ್ಟೆಲ್ಲಿಗೆ ಹೋಗುವುದು ಅಂದರೇನೇ ಹೆದರಿ ನಡುಗುತ್ತಿದ್ದ ಈಗ ನೋಡು ಹೆಂಗೆ ಕುಣಿದುಕೊಂಡು ರೆಡಿಯಾಗ್ತಿದಾನೆ ರಾಜಗಿರಿ ಕಾಲೇಜಿಗೆ ಹೋಗೋದಕ್ಕೆ.." ಸುಹಾಸನ ಅಮ್ಮ ತನ್ನ ಗೆಳತಿಗೆ ಹೇಳುತ್ತಿದ್ದರು. ಸುಹಾಸ ಮುಜುಗರ ತಾಳಲಾಗದೆ ಹಾಲಿನಿಂದ ಎದ್ದು ಹೊರಗಿನ ಕೋಣೆಗೆ ಬಂದ. ತನ್ನ ಕ್ರಿಕೆಟ್ ಬ್ಯಾಟು ಹಾಗೂ ಬಾಲನ್ನು ತೆಗೆದುಕೊಂಡು ಹೋಗಿ ತನ್ನ ರೂಮಿನ ಮೂಲೆಯಲ್ಲಿ ಭದ್ರವಾಗಿರಿಸುತ್ತಾ ಇನ್ನು ಎರಡು ವರ್ಷ ಇವು ಬೇಕಾಗಲ್ಲ ಎಂದುಕೊಂಡ. ಮುಂದೆ ಏನು ಮಾಡಬೇಕು ಅನ್ನೋದು ತೋಚದೆ ವಾಪಸ್ಸು ಹಾಲಿಗೆ ಬಂದು ಕುಳಿತ.</p>
<p>ರಾತ್ರಿ ಹನ್ನೊಂದಕ್ಕೆ ಬಸ್ಸು ಬುಕ್ ಮಾಡಿ ಆಗಿತ್ತು. ಚಿತ್ರದುರ್ಗದಿಂದ ರಾಜಗಿರಿಗೆ ಎಂಟು ತಾಸು ಪ್ರಯಾಣ ಇತ್ತು. ಪಶ್ಚಿಮ ಘಟ್ಟವನ್ನು ಬಳಸಿ ಮಂಗಳೂರು ತಲುಪಿದರೆ ಅಲ್ಲಿಂದ ಒಂದು ತಾಸು ಪ್ರಯಾಣ ಮಾಡಬೇಕಿತ್ತು ರಾಜಗಿರಿಗೆ. ಘಾಟಿಯನ್ನು ಏರಬೇಕು ಎಂಬ ವಿಚಾರವೇ ಸುಹಾಸನ ಹೊಟ್ಟೆಯಲ್ಲಿ ತಳಮಳವನ್ನೇಳಿಸಿತ್ತು. ಆತನಿಗೆ ಬಸ್ ಪ್ರಯಾಣವೆಂದರೇನೆ ಆಗದು. ಅದರಲ್ಲೂ ಗುಡ್ಡಗಾಡುಗಳ ಘಾಟಿಯಾದರಂತೂ ಮುಗಿಯಿತು, ಬಸ್ಸಿನೊಳಗಿಂದ ಘಾಟಿಯನ್ನು ನೋಡುತ್ತಿದ್ದ ಹಾಗೆ ಈತನಿಗೆ ಹೊಟ್ಟೆ ತೊಳಲಿಸಿದಂತಾಗಿ ವಾಂತಿ ಕಾರಿಕೊಂಡು ಬಿಡುತ್ತಿದ್ದ. ಎಷ್ಟೇ ನಿಂಬೆ ಹಣ್ಣು ಮೂಸಿದರೂ ವಾಂತಿ ನಿಲ್ಲುತ್ತಿರಲಿಲ್ಲ. ಪ್ರಯಾಣದುದ್ದಕ್ಕೂ ಹೊಟ್ಟೆಯೊಳಗಿದ್ದುದನೆಲ್ಲಾ ಕಾರಿಕೊಂಡು ಬಸ್ಸು ಇಳಿಯುವಷ್ಟರಲ್ಲಿ ಹತ್ತು ದಿನದಿಂದ ಉಪವಾಸವಿದ್ದವನ ಹಾಗೆ ಸುಸ್ತಾಗಿರುತ್ತಿದ್ದ. ರಸ್ತೆಯನ್ನು ನೋಡುತ್ತಾ ಕೂರು, ಎಚ್ಚರವಾಗಿರಬೇಡ ಮಲಗಿಕೊಂಡುಬಿಡು ಎಂದು ಅಪ್ಪ ಎಷ್ಟೇ ಉಪದೇಶಿಸಿದರೂ ಈತನಿಗೆ ಘಾಟಿಯಲ್ಲಿನ ಬಸ್ ಪ್ರಯಾಣದಲ್ಲಿ ನರಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ಬಸ್ಸಿನ ಟೈಮಿಂಗ್ ವಿಚಾರಿಸುವ ಮುನ್ನ ಅಲ್ಲಿಗೆ ರೈಲು ಇದೆಯಾ ಎಂದು ಕೇಳಿಕೊಳ್ಳುತ್ತಿದ್ದ. ರೈಲಿನಲ್ಲಿ ಸಾವಿರ ಕಿಲೋಮೀಟರ್ ಬೇಕಾದರೂ ಕ್ರಮಿಸಬಲ್ಲೆ ಎಂಬ ವಿಶ್ವಾಸ ಅವನಲ್ಲಿತ್ತು. ರೈಲಿನ ಪ್ರಯಾಣವನ್ನು ಆತ ವಿಪರೀತವಾಗಿ ಎಂಜಾಯ್ ಮಾಡುತ್ತಿದ್ದ. ಎಷ್ಟೋ ಒಳ್ಳೆಯ ಪುಸ್ತಕಗಳನ್ನು ಆತ ಓದಿದ್ದು ರೈಲಿನಲ್ಲಿ ಓಡಾಡುವಾಗಲೇ. ರಾಜಗಿರಿಗೆ ರೈಲು ಇಲ್ಲ ಅಂತ ಕಾಲೇಜಿನ ಆಫೀಸಿನವರು ಫೋನಿನಲ್ಲಿ ಹೇಳಿದಾಗಲೇ ಸುಹಾಸನ ಮುಖದ ಮೇಲೆ ಅಪ್ರಸನ್ನತೆ ಸುಳಿದು ಮಾಯವಾಗಿತ್ತು. ಈಗ ರಾತ್ರಿಯ ಪ್ರಯಾಣವನ್ನು ಹೇಗೆ ನಿಭಾಯಿಸುವುದು ಎಂದು ಆಲೋಚಿಸುತ್ತಾ ಟಿವಿ ಆನ್ ಮಾಡಿದ, 'ಇನ್ನು ಎರಡು ವರ್ಷ ಇದನ್ನೂ ನೋಡೋಕೆ ಆಗೋದಿಲ್ಲ' ಅಂತ ಮತ್ತೆ ಅನ್ನಿಸಿತು. ಅಮ್ಮ ಆಂಟಿಯೊಂದಿಗೆ ಹರಟುತ್ತಿದ್ದದ್ದು ಕಿವಿಗೆ ಬೀಳುತ್ತಲೇ ಇತ್ತು.</p>
<p>          <img src="http://kalaravapatrike.files.wordpress.com/2008/08/sky-river.jpg" style="display:block;margin-left:auto;width:366px;margin-right:auto;height:334px;text-align:center;" height="1200" alt="Sky-River.jpg">        </p>
<p>"ಅಲ್ವೇ ರಾಜಗಿರಿಯ ಕಾಲೇಜಲ್ಲಿ ಸೀಟು ಸಿಕ್ಕೋದು ಬಹಳ ಕಷ್ಟ ಅಂತಾರೆ. ನಮ್ಮ ಅಣ್ಣನ ಮಗನಿಗೆ ಅಲ್ಲಿ ಟ್ರೈ ಮಾಡಿದ್ರು ಎಂ.ಎಲ್.ಎ ಕಡೆಯಿಂದ ಲೆಟರ್ ಒಯ್ದಿದ್ರು ಆದ್ರೂ ಸೀಟ್ ಸಿಕ್ಕಲಿಲ್ಲ. ಅವನ ಪರ್ಸೆಂಟ್ ನೋಡಿ ಎಂಟ್ರೆನ್ಸ್ ಬರೆಯೋಕೆ ಹೇಳಿದ್ರಂತೆ. ಇವರು ಇಂಟರ್ವ್ಯೂನಲ್ಲಿ ಎ.ಎಲ್.ಎ ರೆಕಮಂಡೇಶನ್ ಲೆಟರ್ ಕೊಟ್ಟರೆ ಅದನ್ನು ಪಕ್ಕಕ್ಕಿಟ್ಟು ಪ್ರಶ್ನೆಗಳನ್ನು ಕೇಳಿದರಂತೆ, ಆಮೇಲೆ ಒಂದು ವಾರ ಬಿಟ್ಟು ರಿಸಲ್ಟ್ ಕಳಿಸ್ತೇವೆ ಅಂದ್ರಂತೆ. ಒಂದು ವಾರ ಆದ್ಮೇಲೆ ಸೀಟ್ ಸಿಕ್ಕಿಲ್ಲ ಅಂತ ಉತ್ತರ ಬಂದಿತ್ತು. ನಮ್ಮಣ್ಣ ಏನೆಲ್ಲಾ ಪ್ರಯತ್ನ ಮಾಡಿದ್ರು ಆದ್ರೆ ಸೀಟು ಸಿಕ್ಕಲಿಲ್ಲ. ಸುಹಾಸಂಗೆ ಹೆಂಗೆ ಸಿಕ್ತು? ಪರ್ಸೆಂಟೇಜೇನೋ ಚೆನ್ನಾಗಿದೆ. ಆದ್ರೆ ಅಲ್ಲಿ ಹೊರಗಿನವರಿಗೆ ಸೀಟು ಸಿಕ್ಕೋದು ಕಷ್ಟ ಅಂತಾರಲ್ವಾ?" ಅಮ್ಮನ ಗೆಳತಿ ಅನುರಾಧಾ ಕೇಳಿದರು.</p>
<p>ಅಮ್ಮನಿಗೆ ಸುಹಾಸನ ಬಗ್ಗೆ ಹೇಳಿಕೊಳ್ಳಲು ಸಂಭ್ರಮ, "ಇವಂದು ತೊಂಭತ್ತೈದು ಪರ್ಸೆಂಟು ಇತ್ತಲ್ಲ ಎಸ್.ಎಸ್.ಎಲ್.ಸಿಯಲ್ಲಿ, ಅದಕ್ಕೇ ಎಂಟ್ರೆನ್ಸ್ ಎಕ್ಸಾಂ ಬರೆಯೋದಕ್ಕೆ ಹೇಳಿ ಕಳುಹಿಸಿದ್ರು. ಕಳೆದ ತಿಂಗಳೇ ಹೋಗಿ ಬರೆದು ಬಂದ. ಇವಂಗೂ ಇಂಟರ್ವ್ಯೂ ಮಾಡಿದ್ರು. ಅಷ್ಟೇನು ಚೆನ್ನಾಗಿ ಮಾಡಿಲ್ಲ ಅಂದಿದ್ದ. ಅವ್ರು ರಿಸಲ್ಟು ಕಳ್ಸೋಕೆ ಎರಡು ದಿನ ಮುಂಚೆಯೇ ಇಲ್ಲಿ ಎಲ್ಲಾ ಕಾಲೇಜ್‌ಗಳಲ್ಲಿ ಅಡ್ಮಿಷನ್ ಡೇಟ್ ಮುಗಿದು ಆಗಿತ್ತು. ಇವ್ನ ಎಲ್ಲಾ ಫ್ರೆಂಡ್ಸು ಕಾಲೇಜು ಸೇರಿಕೊಂಡಿದ್ರು. ಅಷ್ಟು ದೂರ ಯಾಕೆ ಹೋಗ್ತೀಯ ಅಂತ ಇವನ ಟೀಚರ್ ಕೇಳಿದ್ರಂತೆ. ಇವನಿಗೆ ಏನೋ ಒಮ್ಮೆ ಮನೆಯಿಂದ ದೂರ ಇದ್ದು ಓದಬೇಕು ಅನ್ನಿಸಿದೆ. ನಂಗೆ ಕಚ್ಚಿಕೊಂಡು ಬೆಳಿದಿದ್ದಾನೆ ಅಂತ ಇವರಪ್ಪ ರೇಗಿಸುತ್ತಿದ್ದರಲ್ಲ, ಅದ್ಕೇ ಏನಾದರಾಗಲೀ ಎರಡು ವರ್ಷ ಅಮ್ಮನಿಂದ ದೂರ ಇರಬೇಕು ಅನ್ನಿಸಿದೆ ಇವ್ನಿಗೆ. ಇಲ್ಲಿ ಎಲ್ಲಾ ಕಾಲೇಜ್ ಅಡ್ಮಿಶನ್ ಮುಗಿದ ಮೇಲೆ ಅಲ್ಲಿಂದ ಫೋನ್ ಬಂದಿತ್ತು. ಸೆಲೆಕ್ಟ್ ಆಗಿದಾನೆ ಅಂದ್ರು. ಹತ್ತು ದಿನದಲ್ಲಿ ಬಂದು ಅಡ್ಮಿಶನ್ ಮಾಡಿಸಿ ಅಂದ್ರು. ಇವ್ರು ಹೋಗಿ ಅಡ್ಮಿಶನ್ ಮಾಡಿಸಿ ಬಂದಿದ್ದಾರೆ." ಅಮ್ಮ ಹೇಳುತ್ತಲೇ ಇದ್ದಳು.</p>
<p>ಸುಹಾಸ ಟಿವಿ ನ್ಯೂಸ್ ನೋಡುವುದರಲ್ಲಿ ಮಗ್ನನಾಗಿದ್ದ. ಸಂಜೆ ಎಂಟಕ್ಕೇ ಮನೆ ಬಿಡಬೇಕು. ಬಸ್ಸು ಕರೆಕ್ಟ್ ಟೈಮಿಗೆ ಹೊರಡುತ್ತಂತೆ, ಅದಕ್ಕೂ ಮುಂಚೆ ಶ್ರೀನಾಥ, ವಿಜಯ್, ಮಂಜುಗೆ ಫೋನ್ ಮಾಡಿ ತಾನು ಹೋಗುತ್ತಿರೋದನ್ನು ತಿಳಿಸಬೇಕು. ಹಂಗೇ ಸುರೇಶ್ ಸರ್‌ಗೂ ಫೋನ್ ಮಾಡ್ಬೇಕು ಅಂದುಕೊಂಡ. ಅದಕ್ಕೂ ಮುನ್ನ ಅರ್ಧಕ್ಕೆ ಬಿಟ್ಟಿದ್ದ ಪ್ಯಾಕಿಂಗನ್ನು ಮುಗಿಸಬೇಕು ಎಂದುಕೊಂಡು ತನ್ನ ರೂಮಿಗೆ ಬಂದ. ಹಾಲಿನಲ್ಲಿ ಅಮ್ಮ ತನ್ನ ಬಟ್ಟೆಗೆ ಇಸ್ತ್ರಿ ಹಾಕುತ್ತಾ ರಾಧಾ ಆಂಟಿಯ ಜೊತೆಗೆ ಮಾತಾಡುತ್ತಿದ್ದುದನ್ನು ಗಮನಿಸಿ ಒಳಕ್ಕೆ ಹೋದ.</p>
<p>ತನ್ನ ರೂಮನ್ನೊಮ್ಮೆ ಗಮನಿಸಿದ. ಇನ್ನೆರಡು ವರ್ಷ ಅದು ಹೇಗೆ ಮನೆ ಬಿಟ್ಟು ಇರುತ್ತೇನೋ ಅನ್ನಿಸಿತು. ಎಲ್ಲಿಗೂ ಹೋಗೋದು ಬೇಡ. ಇಲ್ಲೇ ಮನೆಯಲ್ಲೇ ಇದ್ದು ಬಿಡೋಣ. ಇಲ್ಲೇ ಯಾವ್ದಾದರೂ ಕಾಲೇಜಿಗೆ ಸೇರಿದರೆ ಆಯ್ತು ಅನ್ನಿಸಿತು. ಒಡನೆಯೇ ತಾನು ದುರ್ಬಲನಾಗಬಾರದು. ತಾನು ಅಳುಮುಂಜಿಯಾಗಬಾರದು. ಧೈರ್ಯ ತಂದುಕೊಳ್ಳಬೇಕು. ಎಷ್ಟೋ ಜನಕ್ಕೆ ಸಿಕ್ಕದ ಅವಕಾಶ ನನಗೆ ಸಿಕ್ಕಿದೆ. ಹಾಸ್ಟೆಲ್ಲಿನಲ್ಲಿ ಇದ್ದು ಓದುವ ಹೊಸ ಅನುಭವವನ್ನು ನನ್ನದಾಗಿಸಿಕೊಳ್ಳಬೇಕು. ಎಷ್ಟು, ಅಬ್ಬಬ್ಬಾ ಎಂದರೆ ಎರಡು ವರ್ಷ ಎಂದು ಮನಸ್ಸಿನ ವ್ಯಾಪಾರಗಳನ್ನು ತಹಬಂದಿಗೆ ತಂದುಕೊಂಡು ಪ್ಯಾಕಿಂಗ್ ಮಾಡಲು ತೆಗೆದಿಟ್ಟುಕೊಂಡಿದ್ದ ತನ್ನ ಪುಸ್ತಕಗಳನ್ನು ತಡವಿದ. ಪುಸ್ತಕಗಳ ರಾಶಿಯ ನಡುವೆ ಇಣುಕುತ್ತಿದ್ದ ಕಾರ್ಡನ್ನು ಕೈಗೆತ್ತಿಕೊಂಡ. 'ಟು ಡಿಯರ್ ಸುಹಾಸ್...' ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು ಆಶಾ. ಸುರೇಶ್ ಸರ್ ಅವಳಿಗೆ, ಇನ್ನೂ ನಾಲ್ಕೈದು ಮಂದಿಗೆ ಹೇಳಿ ನನಗೆ ಅಂಥ ಪತ್ರಗಳನ್ನು ಬರೆಸಿದ್ದರು, ನಾನು ದೂರದ ಊರಿಗೆ ಹೋಗುತ್ತಿದ್ದೇನೆ ಎಂಬುದನ್ನು ಕೇಳಿ. ಎಲ್ಲಾ ಗೆಳೆಯರೂ ತಮ್ಮ ನೆನಪುಗಳನ್ನು ಹಂಚಿಕೊಂಡು ಆತ್ಮೀಯವಾಗಿ ಪತ್ರಗಳನ್ನು ಬರೆದು ತಾನು ಶಾಲೆಗೆ ಹೋದಾಗ ಕೊಟ್ಟಿದ್ದರು. ಅವತ್ತು ಗಂಟಲ ಸೆರೆ ಉಬ್ಬಿಬಂದಂತಾಗಿ ಮಾತು ಮರೆತುಹೋಗಿತ್ತು. ಈಗ ಆಶಾ ಬರೆದ ಪತ್ರವನ್ನು ಕೈಗೆತ್ತಿಕೊಂಡು ನಾಲ್ಕು ಸಾಲು ಓದುತ್ತಿದ್ದ ಹಾಗೆ ಮತ್ತೆ ಮನಸ್ಸಿನ ವ್ಯಾಪಾರಗಳು ಜಿಗಿಯಲು ಶುರುಮಾಡಿದ್ದವು. ಯಾವ ರಗಳೆಯೂ ಬೇಡ ಅಂದುಕೊಂಡು ಆ ಪತ್ರವನ್ನೂ, ಇನ್ನುಳಿದ ಐದು ಪತ್ರಗಳನ್ನೂ ಜೋಡಿಸಿ ಒಂದು ಪುಸ್ತಕದೊಳಗಿಟ್ಟು ಟ್ರಂಕಿನಲ್ಲಿಟ್ಟ. ಸುರೇಶ್ ಸರ್ ಅವತ್ತು ಯಾಕೆ ಹಾಗೆ ಹೇಳಿದರು ಎಂಬ ಪ್ರಶ್ನೆ ಧುತ್ತೆಂದು ಎದ್ದು ಅವನ ಪ್ರಜ್ಞೆಯನ್ನೆಲ್ಲಾ ಆವರಿಸಿತು!</p>
<p>          <strong>(ಸಶೇಷ)</strong>        </p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಗಳ ಪುಟ ಒಂಬತ್ತು]]></title>
<link>http://chendemaddale.wordpress.com/?p=174</link>
<pubDate>Fri, 01 Aug 2008 14:29:47 +0000</pubDate>
<dc:creator>navada</dc:creator>
<guid>http://chendemaddale.wordpress.com/?p=174</guid>
<description><![CDATA[ಅಧ್ಯಾಯ ಒಂಬತ್ತು
ಚುನಾವಣೆ ಸೇರಿದಂತೆ ಹತ್ತ]]></description>
<content:encoded><![CDATA[<p>ಅಧ್ಯಾಯ ಒಂಬತ್ತು</p>
<p>ಚುನಾವಣೆ ಸೇರಿದಂತೆ ಹತ್ತು ಹಲವು "ಬ್ಯುಸಿ’ ನಡುವೆ ಕಳೆದು ಹೋಗಿದ್ದೆ. ಆಗಾಗ್ಗೆ ಬೇರೆ ಬರಹಗಳನ್ನು ಹಾಕುತ್ತಿದ್ದರೂ ಧಾರಾವಾಹಿ ಮುಂದುವರಿಸಲು ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೊಮ್ಮೆ ಧಾರಾವಾಹಿ ಅಪ್‌ಟುಡೇಟ್ ಮಾಡುವ "ಶಪಥ’ ಮಾಡಿದ್ದೇನೆ. ನೋಡಬೇಕು...<br />
ಅಂದ ಹಾಗೆ ಈ "ಸ್ಕೂಪ್’ ಪ್ರಕರಣ ನಮ್ಮೊಳಗೆ ತುಂಬಿದ ಆತ್ಮವಿಶ್ವಾಸ ಅಪಾರ. ಅಷ್ಟೇ ಅಲ್ಲ. ನಮ್ಮ ನಡುವಿನ ಬಂಧವನ್ನೂ ಇನ್ನಷ್ಟು ಬಿಗಿಯಿತು. ಹೊಸ ಕನಸು ಅರಳಿಕೊಂಡಿದ್ದ ಬಗೆಯೂ ಹಾಗೆಯೇ. ಎಲ್ಲರೂ ಒಟ್ಟಿಗಿದ್ದರೆ ಚೆಂದವಾದೀತೆಂಬ ಅನಿಸಿಕೆಯೂ ನಮ್ಮದಾಗಿತ್ತು. ಸಿಗದಾಳನೊಡನೆ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಹಲಸೂರಿನ ಆ ಮನೆಯನ್ನು ಸೇರುವುದೆಂದು ನಿರ್ಧರಿಸಿದೆವು. ಹರ್ಷ ಮತ್ತು ನವೀನರ ಪ್ರಸ್ತಾಪವನ್ನು ಒಪ್ಪಿದೆವು. ಸರಿ, ದಿನ ನೆನಪಿಲ್ಲ. ಆ ಮನೆಗೆ ಪ್ರವೇಶ ಮಾಡಿದೆವು. ಅಲ್ಲಿಗೆ ತ್ಯಾಗರಾಜನಗರದ ಸಂಬಂಧ ಕಡಿದುಕೊಂಡಿತು. ಸಿಗದಾಳನ ಗೆಳೆಯರು ಕೆಲವರು ಅಲ್ಲಿದ್ದದ್ದರಿಂದ ಅವನೇನೋ ಹೋಗಿ ಬರುತ್ತಿದ್ದ. ನಾನಂತೂ ತೀರಾ ಕಡಿಮೆ.<br />
ಹಲಸೂರಿನ ಜೋಗುಪಾಳ್ಯದ ಒಂದು ರಸ್ತೆ. ಮನೆಯನ್ನು ಹುಡುಕಲು ಬಹಳ ಸಲೀಸು. ಜೋಗುಪಾಳ್ಯದ ಕಡೆ ತಿರುಗಿ ಕೊಂಚ ಮುಂದಕ್ಕೆ ಹೋಗಿ ಎರಡನೇ ರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ಮತ್ತೆ ಬಲಕ್ಕೆ ಮೊದಲ ಮನೆಯೇ ನಮ್ಮ ಮನೆ. ಎದುರಿಗೆ ಮಲಯಾಳಿಗಳ ಮನೆಯೊಂದಿತ್ತು. ತಮಾಷೆಯೆಂದರೆ ಅದರಲ್ಲಿದ್ದವರೂ ನನ್ನ ಹಳೆಯ ಗೆಳೆಯರು. ನಂತರ ಒಂದು ಶಾಲೆ.<br />
ಮೊದಲೇ ಹೇಳಿದಂತೆ ಆ ಮನೆಯಲ್ಲಿ ಬದುಕುತ್ತಿದ್ದವರು ಎರಡು ಬಗೆಯ ಜನರು. ವರದಿಗಾರರಾಗಿದ್ದ ನಾವು ನಿಶಾಚರರು. ಉಳಿದವರು ಪರವಾಗಿಲ್ಲ, ಬಿಡಿ. ನಾನು, ನವೀನ, ಹರ್ಷ ಬರುತ್ತಿದ್ದುದೇ ರಾತ್ರಿ ೧೨ ರ ಮೇಲೆಯೇ.<br />
ಆಗಲೇ ಹೇಳಿದಂತೆ ಶಿಸ್ತು ಇರಲಿಲ್ಲ ಎಂದು ತಿಳಿಯುವ ಅಗತ್ಯವಿಲ್ಲ. ನಾವು ಅಲ್ಲಲ್ಲಿ ಶಿಸ್ತಿನ ಬೆಂಚುಗಳನ್ನು ಹಾಕಿದ್ದೆವು, ಕುಳಿತುಕೊಳ್ಳುವುದು ಕಡಿಮೆ ಎನ್ನಿ.<br />
ಮನೆಗೊಂದು ವೇಳಾಪಟ್ಟಿಯಿತ್ತು. ಅಡುಗೆಮನೆಯಲ್ಲಿ ಯಾವ್ಯಾವ ದಿನ ಬೆಳಗ್ಗೆ ಏನೇನು ತಿಂಡಿ ಎನ್ನುವ ಮೆನು ಪಟ್ಟಿಯನ್ನೂ ತೂಗು ಹಾಕಿದ್ದೆವು. ಅದರಂತೆಯೇ ತಿಂಡಿಯ ತಯಾರಿ. ಬೆಳಗ್ಗೆ ಒಂಬತ್ತಕ್ಕೆ ಕಚೇರಿಗೆ ಹೊರಡುವವರಿದ್ದರಿಂದ ಅವರಿಗೆ ನಾನು, ಹರ್ಷ, ನವೀನ ಸೇರಿ ತಿಂಡಿ ಮಾಡಿಕೊಡಬೇಕು. ಬೆಳಗ್ಗೆ ತಿಂಡಿ ಹೋದವರು ರಾತ್ರಿ ನಾವು ಬರುವಾಗ ನಮಗೆ ಊಟ ಸಿದ್ಧಪಡಿಸಿರುತ್ತಾರೆ. ಇಂಥದೊಂದು ಕರಾರು.<br />
ಪಾತ್ರೆ ತೊಳೆಯುವ, ಕಸ ಗುಡಿಸುವವ ಹೊಣೆ ಬೇರೆ ಬೇರೆಯವರಿಗೆ ನೀಡಲಾಗಿತ್ತು. ಇಷ್ಟೆಲ್ಲಾ ಆದ ಮೇಲೂ ಮನೆಯಲ್ಲಿ ಪಾತ್ರೆ ತೊಳೆಯುವುದಕ್ಕಾಗಲೀ, ಬಟ್ಟೆ ಒಗೆಯುವುದಕ್ಕಾಗಲೀ ಮನೆಯಾಳನ್ನು ಇಟ್ಟುಕೊಂಡಿರಲಿಲ್ಲ. ವಾಷಿಂಗ್ ಮೆಷಿನ್ ಬಂದೇ ಇರಲಿಲ್ಲ ಬಿಡಿ. ನಾನು ಸ್ವಲ್ಪ ಹಿರಿಯ. ಅಂದರೆ ಒಂದೆರಡು ವರ್ಷವಿರಬಹುದು. ಅದಕ್ಕೇ ಸ್ವಲ್ಪ ಹೆಚ್ಚಿನ ಗೌರವ ಸಿಗುತ್ತಿತ್ತು. ಏನೋ...ಮನೆಯ ನಿಭಾಯಿಸುವಿಕೆಯ ಹೊಣೆ ವಹಿಸಿದ್ದರು. ಹಾಗೆಯೇ ಸಿಗದಾಳ್ ಲೆಕ್ಕಗಾರ. ಹಾಗಾಗಿ ಮನೆಯ ಲೆಕ್ಕವನ್ನೆಲ್ಲಾ ಲೆಕ್ಕ ಮಾಡಿ ಹಂಚುವುದು ಅವನ ಕೆಲಸವಾಗಿತ್ತು.<br />
ಪ್ರತಿ ತಿಂಗಳ ಮೊದಲ ವಾರದಲ್ಲಿ ನಮ್ಮ ಪಾವತಿ ಪಟ್ಟಿ ಸಿದ್ಧವಾಗುತ್ತಿತ್ತು. ಮನೆ ಬಾಡಿಗೆ, ದಿನಸಿ ಸಾಮಾನು...ಇತ್ಯಾದಿ ವೆಚ್ಚವನ್ನು ಯಾರಿಗೆ ಮೊದಲು ಸಂಬಳ ಬರುತ್ತಿತ್ತೋ ಅವರು ಕೊಡುತ್ತಿದ್ದರು. ನಂತರ ಊರಿನವರು ತಮ್ಮ ತಮ್ಮ ಪಾಲನ್ನು ಸಂಬಳ ಬಂದ ಕೂಡಲೇ ಕೊಡಬೇಕಿತ್ತು. ಒಮ್ಮೊಮ್ಮೆ ಈ ಶಿಸ್ತನ್ನು ಉಲ್ಲಂಘಿಸಿ ಕೊಟ್ಟರಾಯಿತು ಎಂದು ನಿಲುವು ತಳೆದದ್ದೂ ಇದೆ. ಆಗ ಮೊದಲು ಕೊಟ್ಟವ ಕೋಡಂಗಿಯಂತಾಗಿ ಮುಂದಿನ ಬಾರಿ ಜಪ್ಪಯ್ಯ ಎಂದರೂ ಕೊಡಲಾರೆ ಎಂಬ ನಿಲುವಿಗೂ ಬಂದದ್ದಿದೆ. ಎಲ್ಲಿಯೂ ಹಗ್ಗ ಹರಿದು ಹೋಗದಂತೆ ಸೂಕ್ಷ್ಮತೆ, ನಾಜೂಕುತನ ಪ್ರದರ್ಶಿಸಲಾಗಿತ್ತು. ಅದಕ್ಕೇ ಏನೋ ? ಮೂರು ವರ್ಷ ಒಟ್ಟಿಗೆ ಬದುಕಿದೆವು. ಆಮೇಲೆ ನಮ್ಮ ನಮ್ಮ ವಯಸ್ಸಿನ ಅಗತ್ಯ (ಮದುವೆ) ಬಂಧವನ್ನು ಮುರಿಯುತ್ತಾ ಬಂದಿತೇ ಹೊರತು ಇನ್ಯಾವ ಲೆಕ್ಕಾಚಾರಗಳೂ ಅಲ್ಲ.<br />
ಸೋಮವಾರ ಪೊಂಗಲ್, ಮಂಗಳವಾರ ಚಪಾತಿ, ಬುಧವಾರ ಹೀಗೆಯೇ ಪುಳಿಯೋಗರೆ ಅಥವಾ ಚಿತ್ರಾನ್ನ, ಗುರುವಾರ ಬಿಸಿಬೇಳೆಬಾತ್, ಶುಕ್ರವಾರ ವಾಂಗೀಬಾತ್, ಶನಿವಾರ ಉಪ್ಪಿಟ್ಟು, ಭಾನುವಾರ ಮಾತ್ರ ವಿಶೇಷ ತಿಂಡಿ. ಒಮ್ಮೊಮ್ಮೆ ನಮ್ಮ ನೀರು ದೋಸೆ ಸ್ಥಾನ ಪಡೆಯುತ್ತಿತ್ತು. ಸಾಲುಗಟ್ಟಿ ತಿನ್ನುತ್ತಿದ್ದರು. ಮೊದಲು ಬಂದವರಿಗೆ ಮೊದಲು ಆದ್ಯತೆ ಎನ್ನುವುದಕ್ಕಿಂತಲೂ ಮೊದಲು ಬಂದವರಿಗೆ ಹೆಚ್ಚು ಎಂಬಂತಾಗುತ್ತಿತ್ತು.<br />
ನನಗೆ ಸ್ವಲ್ಪ ಅಡುಗೆ ಬರುತ್ತಿದ್ದುದ್ದರಿಂದ ತಿಂಡಿಯ ನೇತೃತ್ವ ವಹಿಸುತ್ತಿದ್ದೆ. ಹರ್ಷ, ನವೀನ ಎಲ್ಲರೂ ಸಹಕರಿಸುತ್ತಿದ್ದರು. ನಾನು ಮಾಡುತ್ತಿದ್ದ ವಾಂಗೀಬಾತ್‌ಗೆ ಮಾತ್ರ ಯಾಕೋ ಡಿಮ್ಯಾಂಡೇ ಇರುತ್ತಿರಲಿಲ್ಲ. ಮುಖ ಕಪ್ಪಿಟ್ಟುಕೊಂಡೇ ಕೆಲವರು ತಿನ್ನುತ್ತಿದ್ದರು. ಇನ್ನು ಕೆಲವರಿಗೆ ಚೆನ್ನಾಗಿಲ್ಲದಿದ್ದರೂ ಅನಿವಾರ್ಯ ಕರ್ಮ. ಇನ್ನೂ ಕೆಲವರಂತೂ ಬೆಳಗ್ಗೆ ಬೇಗನೆ ಮನೆ ಬಿಡುತ್ತಿದ್ದುದುಂಟು.<br />
ಉಪ್ಪಿಟ್ಟು ಮಾಡಿದಾಗಲೂ ಸ್ವಲ್ಪ ಬೇಸರವೇ. ಪೊಂಗಲ್, ಪುಳಿಯೋಗರೆ ಎಲ್ಲಾ ಓಕೆ. ಇನ್ನು ರಾತ್ರಿಯ ಮೆನು ಕೇಳಬೇಡಿ. ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತಿತ್ತು. ಅದರ ಹೊಣೆ ಸಿಗದಾಳ್‌ಗೆ, ಯೋಗೀಶ್, ಅರುಣ್ ಅವರೆಲ್ಲಾ ಸಹಕಾರಿಗಳು.<br />
ಈ ಅರ್ಥದಲ್ಲಿ ಹೇಳುವುದಾದರೆ ನಾವೆಲ್ಲಾ ಒಂದರ್ಥದಲ್ಲಿ "ಸಹಕಾರಿ"ಗಳು (ಕೋಆಪರೇಟಿವ್ಸ್) !</p>
]]></content:encoded>
</item>
<item>
<title><![CDATA[ಟಿ.ವಿ. ಸೀರಿಯಲ್ಲೂ... ದೇವರ ಟ್ರಬಲ್ಲೂ...]]></title>
<link>http://vijaykannantha.wordpress.com/?p=55</link>
<pubDate>Fri, 13 Jun 2008 06:49:19 +0000</pubDate>
<dc:creator>vijayraj</dc:creator>
<guid>http://vijaykannantha.wordpress.com/?p=55</guid>
<description><![CDATA[
ಇದೇನಪ್ಪಾ&#8230; ಒಂದಕ್ಕೊಂದು ಅರ್ಥಾರ್ಥ ಸಂಬ]]></description>
<content:encoded><![CDATA[<p class="MsoNormal" style="margin:0;"><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಇದೇನಪ್ಪಾ... ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ</span><span style="font-size:10pt;font-family:Tunga;">; </span><span style="font-size:10pt;font-family:Tunga;" lang="KN">ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಬಾವಲಿ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ಹಾಗಿದ್ರೆ ಓದಿ ನೋಡಿ.</span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಮೊಟ್ಟ ಮೊದಲನೆಯದಾಗಿ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ದೇವನೊಬ್ಬ ನಾಮ ಹಲವು</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ಅನ್ನುವ ಮಾತಿದೆಯಷ್ಟೇ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಪ್ರೈಮ್ ಟೈಮ್‌</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN">ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಅದೇ ಮಧ್ಯಮ ವರ್ಗದ ಕನಸು-ಆಸೆ-ನಿರಾಸೆಗಳು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಅತ್ತೆ-ಸೊಸೆ ಜಗಳಗಳು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಮಿಂದು ಮುಳುಗಿ ಹೋಗಿರುವಾಗ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ಕಥೆ ಒಂದು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಶೀರ್ಷಿಕೆ</span><span style="font-size:10pt;font-family:Tunga;">-</span><span style="font-size:10pt;font-family:Tunga;" lang="KN">ಚ್ಯಾನೆಲ್ ಹಲವು</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ಅಂತನ್ನುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೇ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ಅದೂ ಅಲ್ಲದೆ ಆ ಧಾರಾವಾಹಿಯಲ್ಲಿ ಗೀತಾ ಆದವಳು ಇಲ್ಲಿ ಸೀತಾ</span><span style="font-size:10pt;font-family:Tunga;">; </span><span style="font-size:10pt;font-family:Tunga;" lang="KN">ಅಲ್ಲಿ ಶ್ಯಾಮನಾದವನು ಇಲ್ಲಿ ರಾಮನಾಗಿ ಅವತಾರವೆತ್ತಿರುವಾಗ</span><span style="font-size:10pt;font-family:Tunga;">,</span><span style="font-size:10pt;font-family:Tunga;" lang="KN"> ಅದೇ ಅದೇ ಮುಖಗಳು ಕಾಣಿಸಿಕೊಂಡು </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಪಾತ್ರಧಾರಿ ಒಬ್ಬನೇ ಪಾತ್ರ ಬೇರೆ</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ಅನ್ನೋದು ಕೂಡಾ ಸರಿ ಅಂದ ಹಾಗಾಯ್ತು.</span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಅದೂ ಅಲ್ಲದೆ ದೇವರು ಎಷ್ಟೇ ಕಷ್ಟ ಕೊಟ್ಟರೂ ಸಮಚಿತ್ತದಿಂದ ನಗುನಗುತ್ತಾ ಸ್ವೀಕರಿಸುವ ಹೆಣ್ಣು ಮಕ್ಕಳನ್ನೆಲ್ಲಾ ಸಾಮೂಹಿಕವಾಗಿ ಕಣ್ಣೀರು ಸುರಿಸುವಂತೆ ಮಾಡುವ ಧಾರಾವಾಹಿಯ ನಿರ್ದೇಶಕ ಅನ್ನುವ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಸೂತ್ರಧಾರ</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN">ನಿಗೆ ಆ ಪಟ್ಟವನ್ನು ದೇವರೇ ಹತಾಶೆಯಿಂದ ನೀಡಿದ್ದಾನೆ ಅನ್ನುವುದು ಒಂದು ವದಂತಿ. ಜೊತೆಗೆ ಟಿ.ಆರ್.ಪಿ.ಗೆ ಅನುಗುಣವಾಗಿ ಪಾತ್ರಗಳ ಬದುಕಿನ ಆಟಗಳನ್ನು ಹಿಗ್ಗಿಸುವ ಕುಗ್ಗಿಸುವ ಶಕ್ತಿ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಕಿರಿಕ್ ಪಾರ್ಟಿಗಳನ್ನು ತಟಕ್ಕನೆ ಸಾಯಿಸಿ ಹೂಹಾರ ಹಾಕಿ ಕೈತೊಳೆದುಕೊಳ್ಳುವ ನಿರ್ದೇಶಕನ ಸಾಮರ್ಥ್ಯದಿಂದ ದೇವರು ತನ್ನ ಸರ್ವಶಕ್ತ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಪದ</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ತ್ಯಾಗ ಮಾಡಿರುವುದು ಇದೀಗ ಬಂದ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಫ್ಲಾಶ್ ನ್ಯೂಸ್</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN">.</span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲವೇನೋ. ಆದ್ರೆ ನೀವೆ ನೋಡಿರುವಂತೆ ಬೆಂಗಳೂರಿನ ಚಾಮರಾಜ ಪೇಟೆಯಿಂದ ಮಡಿಕೇರಿಯ ವಿರಾಜಪೇಟೆಯವರೆಗೆ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಶಿವಮೊಗ್ಗದ ಶಿಕಾರಿಪುರದಿಂದ ಹಿಡಿದು ಗುಲ್ಬರ್ಗದ ಅಫ್ಜಲ್‌ಪುರದವರೆಗೂ ಸಂಜೆ </span><span style="font-size:10pt;font-family:Tunga;">6</span><span style="font-size:10pt;font-family:Tunga;" lang="KN">ರಿಂದ ರಾತ್ರಿ </span><span style="font-size:10pt;font-family:Tunga;">1</span><span style="font-size:10pt;font-family:Tunga;" lang="KN">೦ರವರೆಗೆ ನೀವು ಯಾರ ಮನೆ ಹೊಗ್ಗಿ ಹೊರಟರೂ ಎಲ್ಲೆಲ್ಲೂ ಮಿಂಚು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಮುಗಿಲು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಮಾಂಗಲ್ಯಗಳೇ. ಇದನ್ನು ಕಂಡ ಮೇಲೆ ಧಾರಾವಾಹಿ ಸರ್ವಾಂತರ್ಯಾಮಿ ಅನ್ನೋದನ್ನು ಒಪ್ಕೋತೀರ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ಇಷ್ಟೆಲ್ಲಾ ಆದ ಮೇಲೆ ದೇವರಿಗೆ ತನ್ನ ಪಟ್ಟದ ಬಗ್ಗೆ ಹೆದರಿಕೆ ಹುಟ್ಟುವುದು ಸಹಜ ತಾನೆ</span><span style="font-size:10pt;font-family:Tunga;">?</span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಅಸಲಿ ಟ್ರಬಲ್ಲು ಇರುವುದು ಬೇರೆಯದೇ ಆದ ಒಂದು ಕಾರಣಕ್ಕೆ. ಹಿಂದೆಲ್ಲಾ ವಯಸ್ಸಾದವರು ನೇರವಾಗಿ ಸ್ವರ್ಗಕ್ಕೆ ಹೋಗೋ ಆಸೆಯಿಂದ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಉತ್ತರಾಯಣ ಕಾಲದವರೆಗೆ ನನ್ನನ್ನು ಬದುಕಿಸಪ್ಪಾ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಆಮೇಲೆ ಬೇಕಾದ್ರೆ ಕೊಂಡುಹೋಗುವಿಯಂತೆ</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;"> </span><span style="font-size:10pt;font-family:Tunga;" lang="KN">ಅಂತ ಬೇಡ್ಕೊಳ್ತಾ ಇದ್ದದ್ದು ನಿಜವಷ್ಟೇ</span><span style="font-size:10pt;font-family:Tunga;">? </span><span style="font-size:10pt;font-family:Tunga;" lang="KN">ದೇವ್ರೂ ಕೂಡಾ ಹೋಗ್ಲಿ ಬಿಡಿ ಪಾಪ ಅಂತ ಆಗೀಗ ಅಸ್ತು ಅಂದಿರಲೂ ಸಾಕು. ಆದ್ರೆ ಈಗ ಏನಾಗಿದೆ ನೋಡಿ. </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ಈ ಧಾರಾವಾಹಿ ಮುಗಿಯೋವರೆಗಾದ್ರೂ ನನ್ನನ್ನು ಕರ್ಕೋಬೇಡಪ್ಪಾ</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN"> ಅಂತ ಬೇಡ್ಕೊಳ್ಳೋರು ಜಾಸ್ತಿ ಆಗಿದಾರೆ. ದೇವರೂ ಕರಗಿ ತಥಾಸ್ತು ಅಂದಿದ್ದೇ ಈಗ ಫಚೀತಿಗಿಟ್ಟುಕೊಂಡಿದೆ. ಅತ್ಲಾಗೆ ಧಾರಾವಾಹಿ ಮುಗ್ಯೋದೂ ಇಲ್ಲಾ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಇತ್ಲಾಗೆ ಡೆಡ್‌ಲೈನ್ ಮೀರಿದ್ರೂ ಟಾರ್ಗೆಟ್ ಮುಟ್ಲಿಲ್ಲ ಅಂತ ಅವನ ಬಾಸ್ ಬೇರೆ ರಗಳೆ ಮಾಡ್ತಾ ಇದ್ದಾನೆ. ಒಟ್ರಾಶಿಯಾಗಿ ದೇವರ ಸ್ಥಿತಿ ಅವನ ಶತ್ರುವಿಗೂ ಬೇಡ ಅನ್ನೋಹಾಗಾಗಿ ಬಿಟ್ಟಿದೆ. ಅದನ್ನು ಅವ್ನು ಕಳ್ಳಬಟ್ಟಿ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಅಪಘಾತಗಳ ಲೆಕ್ಕದಲ್ಲಿ ಹೇಗೋ ಸರಿದೂಗಿಸಿ ಅಯ್ಯಬ್ಬಾ ಅಂತ ಉಸಿರುಬಿಡ್ತಾ ಇದ್ದಾನಂತೆ.</span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;" lang="KN">ಇದೆಲ್ಲದರಿಂದ ಬೇಸತ್ತು ಹೋಗಿ ದೇವ್ರು ಈಗ </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ನಂಗೆ ಈ ಕೆಲ್ಸಾನೇ ಬೇಡ. ಈ ಪಟ್ಟ</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಬಿರುದು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ಬಾವಲಿಗಳೆಲ್ಲಾ ಧಾರಾವಾಹಿಗೇ ಇರಲಿ ಅಂದ್ಕೊಂಡು</span><span style="font-size:10pt;font-family:Tunga;">, </span><span style="font-size:10pt;font-family:Tunga;" lang="KN">ರಾಜೀನಾಮೆ ಕೊಟ್ಟು </span><span style="font-size:10pt;"><span style="font-family:Times New Roman;">‘</span></span><span style="font-size:10pt;font-family:Tunga;" lang="KN">ನೋಟೀಸ್ ಪಿರಿಯಡ್</span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN">ನಲ್ಲಿ ಇದ್ದಾನಂತೆ. ಈಗ ಅವನದ್ದು ಒಂದೇ ಹಾಡು...</span><span style="font-size:10pt;font-family:Tunga;" lang="KN"> </span><span style="font-size:10pt;"><span style="font-family:Times New Roman;">’</span></span><span style="font-size:10pt;font-family:Tunga;" lang="KN">ಎಂದು ಆದೇನು ನಾನು..... ಮುಕ್ತ...ಮುಕ್ತ...ಮುಕ್ತ </span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><span style="font-size:10pt;font-family:Tunga;">( </span><span style="font-size:10pt;font-family:Tunga;" lang="KN">ಎಲ್ಲಾ ಆಸ್ತಿಕ ಮಹಾಶಯರ ಕ್ಷಮೆ ಕೋರಿ )</span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;">- </span><span style="font-size:10pt;font-family:Tunga;" lang="KN">ವಿಜಯ್‌ರಾಜ್ ಕನ್ನಂತ್</span><span style="font-size:10pt;font-family:Tunga;"></span></p>
<p> </p>
]]></content:encoded>
</item>
<item>
<title><![CDATA[ಸೀರಿಯಲ್ ರಕ್ಕಸನ ಸಾವು?!]]></title>
<link>http://nagenagaaridotcom.wordpress.com/2008/04/26/%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%b0%e0%b2%95%e0%b3%8d%e0%b2%95%e0%b2%b8%e0%b2%a8-%e0%b2%b8%e0%b2%be%e0%b2%b5%e0%b3%81/</link>
<pubDate>Sat, 26 Apr 2008 03:38:31 +0000</pubDate>
<dc:creator>Nage samrat</dc:creator>
<guid>http://nagenagaaridotcom.wordpress.com/2008/04/26/%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%b0%e0%b2%95%e0%b3%8d%e0%b2%95%e0%b2%b8%e0%b2%a8-%e0%b2%b8%e0%b2%be%e0%b2%b5%e0%b3%81/</guid>
<description><![CDATA[(ನಗಾರಿ ಮನೋರಂಜನಾ ಬ್ಯೂರೋ)
ಆ ರಕ್ಕಸ ಭೀಕರವಾ]]></description>
<content:encoded><![CDATA[<p style="text-align:center;"><strong>(<span style="color:#008000;">ನಗಾರಿ</span> ಮನೋರಂಜನಾ ಬ್ಯೂರೋ)</strong></p>
<p>ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.</p>
<p>ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, "ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು" ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ. <img src="http://nagenagaaridotcom.files.wordpress.com/2008/04/ipl-collage.jpg"></p>
<p>ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ <a href="http://www.ndtv.com/convergence/ndtvcricket/ipl/news_story.aspx?ID=SPOEN20080047902&#38;keyword=news" target="_blank">ಪ್ರಚಂಡ ಹುಟ್ಟಿಬಿಟ್ಟಿದ್ದಾನೆ</a>. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!</p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಯ ಪುಟಗಳು ಎಂಟು]]></title>
<link>http://chendemaddale.wordpress.com/?p=126</link>
<pubDate>Fri, 25 Apr 2008 10:36:32 +0000</pubDate>
<dc:creator>navada</dc:creator>
<guid>http://chendemaddale.wordpress.com/?p=126</guid>
<description><![CDATA[ಅಂದಿನ ರಾತ್ರಿ ಕಳೆದ ಬಗೆ ಇನ್ನೂ ಚೆನ್ನಾಗಿ ]]></description>
<content:encoded><![CDATA[<p>ಅಂದಿನ ರಾತ್ರಿ ಕಳೆದ ಬಗೆ ಇನ್ನೂ ಚೆನ್ನಾಗಿ ನೆನಪಿದೆ. ಯಾವುದೂ ಮಾಸಿಲ್ಲ. ನಮ್ಮ ವೃತ್ತಿಯ ರೋಚಕ ಅನುಭವ. ನನಗಂತೂ ಸಹಜವಾಗಿಯೇ ವಿದೇಶದಲ್ಲಿ ಬದುಕುವವರ ಜೀವನಶೈಲಿ-ಆಹಾರ-ವಿಹಾರದ ಬಗ್ಗೆ ಕುತೂಹಲವಿತ್ತು. ಅದರಂತೆ ಬಹಳ ಆಸಕ್ತಿಯಿಂದಲೇ ಅವನು ಗಮನಿಸುತ್ತಿದ್ದೆ.</p>
<p>ಅವತ್ತು ರಾತ್ರಿಯೇನೋ ಅವನನ್ನು ಮನೆಗೆ ಕರೆದುತಂದೆವು. ಅವನಿಗೆ ಕೊಡಲು ಏನೂ ಇರಲಿಲ್ಲ. ರಾತ್ರಿ ಹತ್ತರ ಸಮಯ. ಏನು ಅಂತ ತರೋದು. ಅಂಗಡಿಗೆ ಹೋದೆ. ಅವನಿಗೆ ಏನು ರುಚಿಸುತ್ತೆ ಎಂದು ಕೇಳಿದೆವು. ಸುಮ್ಮನೆ ನಕ್ಕ. ತಕ್ಷಣವೇ ನೆನಪಿಗೆ ಬಂದದ್ದು ನೂಡಲ್ಸ್.</p>
<p>ತಮಾಷೆಯೆಂದರೆ ನೂಡಲ್ಸ್ ಮಾಡುವ ಬಗೆ ನನಗೆ ಗೊತ್ತಿರಲಿಲ್ಲ. ಆದರೆ ಶಾವಿಗೆ ಬಾತ್ ತಿಳಿದಿತ್ತು. ಅಂಗಡಿಯಿಂದ ಸಿಗದಾಳನಿಗೆ ಶಾವಿಗೆ ತರಲು ಹೇಳಿದೆ. ಜತೆಗೆ ಕ್ಯಾರೆಟ್, ಬೀನ್ಸನ್ನೂ ತಂದ. ಅವೋ ಒಣಗಿದ್ದವು. ಇದ್ದದ್ದು ಇರಲಿ ಎಂದು ಕತ್ತರಿಸಿ ಅರ್ಧ ಗಂಟೆಯಲ್ಲಿ ಬಾತ್ ಸಿದ್ಧವಾಯಿತು. ಕೊಂಚ ಎಣ್ಣೆ ಕಡಿಮೆ ಹಾಕಿದ್ದೆ. ಚೈನೀಸ್ ಡಿಶ್ ತರವೇ ಬೀನ್ಸ್‌ನ್ನು ಕತ್ತರಿಸಿದ್ದೆ.</p>
<p>ಅವನು ನೂಡಲ್ಸ್ ಮಾದರಿಯಲ್ಲೇ ತಿಂದ. "ಚೆನ್ನಾಗಿದೆ’ ಎಂದೂ ಹೇಳಿದ. ನಮಗೋ ಕರೆದು ತಂದ ತಪ್ಪಿಗೆ ಅವನನ್ನು ಮರುದಿನ ಸಂಜೆವರಗೆ ಸಾಗ ಹಾಕಿದರೆ ಸಾಕು ಎಂದಾಗಿತ್ತು. ಬ್ರೆಡ್ ಪಡೆದು ತಿಂದು, ನೀರು ಕುಡಿದು ಮಲಗಿದ. ಬೆಳಗ್ಗೆ ಆಗುವುದನ್ನೇ ಕಾಯುತ್ತಿದ್ದೆವು. ಸಿಗದಾಳನಿಗೆ ಸೋಮವಾರ ಬೆಳಗ್ಗೆ ತುಸು ಬೇಗ ಆಫೀಸಿಗೆ ಹೋಗಬೇಕಿತ್ತು. ನಾವೂ ಬೇಗ ಎದ್ದು  ಹೋಟೆಲ್‌ನಲ್ಲಿ ತಿಂಡಿ ತಿಂದೆವು. ಹರ್ಷ ಮತ್ತು ನವೀನ್ ಅವನನ್ನು ವಾಪಸು ಮನೆಗೆ ಕರೆ ತಂದು ಉಸ್ತುವಾರಿ ವಹಿಸಿಕೊಂಡರು.</p>
<p>ಮಧ್ಯಾಹ್ನ ಮತ್ತೆ ಶಾವಿಗೆ, ಬ್ರೆಡ್ ಕಥೆ. ಬೇಕೆಂದೇ ನಾನು ಅಂದು ಸ್ವಲ್ಪ ಬೇಗ ಕಮೀಷನರ್ ಕಚೇರಿಯ ಮಾಧ್ಯಮ ಕೇಂದ್ರಕ್ಕೆ ಬಂದೆ. ನನಗೆ ನಮ್ಮ ವಿರೋಧಿ ಗುಂಪಿನ ಇಂಗು ತಿಂದ ಮಂಗನ ಕಥೆ ನೋಡಬೇಕಿತ್ತು. ವಿರೋಧಿ ಗುಂಪಿನ ನಾಯಕ ಬುಸುಗುಡುತ್ತಲೇ ಒಳಗೆ ಬಂದ. ಅವನ ಗುಂಪಿನ ಕೆಲವರನ್ನೇ "ಹೆಂಗ್ ಮಿಸ್ಸಾಯ್ತು, ಆ ಸ್ಟೋರಿ? ನಿಮಗೆ ಗೊತ್ತಾಗಲಿಲ್ವಾ?’ ಎಂದು ಬಡಬಡಿಸತೊಡಗಿದ. ಅವನ ಧ್ವನಿಯಲ್ಲಿ ಅಸಹನೆ ಇತ್ತು.</p>
<p>ಬಹಳ ದಿನಗಳಾದ ಮೇಲೆ ಕೊಟ್ಟ ಚೋಕ್ ಅದು. ಜತೆಗೆ ಆ ಸ್ಟೋರಿ ಅವನ ಗುಂಪಿಗೆ ಮಹತ್ವವಲ್ಲದಿದ್ದರೂ ಅವನಿಗೆ ಅತ್ಯಂತ ಮುಖ್ಯ. ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಬಂದ ಸ್ಟೋರಿ ನೋಡಿ ಅವರ ಚೀಫ್ ಕೆಂಡಮಂಡಲವಾಗಿದ್ದರು. ಯಾಕೆಂದ್ರೆ ಅವನ ಪತ್ರಿಕೆಯ ಲಂಡನ್ ಎಡಿಷನ್ ಇತ್ತು. ಅದಕ್ಕೆ ಲೀಡ್ ಸ್ಟೋರಿ. ಕ್ರೆಗ್ ಆರ್ಕೆಲ್ ಅಲ್ಲಿಯವನೇ. ಅದೆಲ್ಲವೂ ಅವನ ಧ್ವನಿಯಲ್ಲಿ ಕಾಣುತ್ತಿತ್ತು. ನನ್ನನ್ನು ಕಂಡು ಗುರಾಯಿಸಿ ಹೊರಟ.</p>
<p>ಅವನು ವಿರೋಧಿ ಗುಂಪಿಗೆ ಸಿಗದಂತೆ ನೋಡಿಕೊಂಡೆವು. ನಾನು ಮಧ್ಯಾಹ್ನ ಆದದ್ದನ್ನೆಲ್ಲಾ ಕಚೇರಿಗೆ ಹೋಗಿ ಹರ್ಷ, ನವೀನ್‌ರಿಗೆ ವರದಿ ಕೊಟ್ಟೆ. ಸಂಜೆಯಷ್ಟೊತ್ತಿಗೆ ಅವನನ್ನು ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸಿಗೆ ಹರ್ಷ ಕರೆದು ತಂದ. ಸಂತೋಷದ ಸಂಗತಿಯೊಂದಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸ್‌ಗೆ ಫೋನ್ ಮಾಡಿದ ಸಾರ್ವಜನಿಕರೊಬ್ಬರು ಅವನ ಪ್ರಯಾಣಕ್ಕೆ5 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದರು. ಹೀಗೆ ನಮ್ಮ ಆಫೀಸ್‌ಗಳಿಗೂ ಕೆಲವು ಕರೆಗಳು ಬಂದಿದ್ದವು. ಅಂತಿಮವಾಗಿ ಅವನಿಗೆ ಸುಮಾರು 10 ಸಾವಿರ ರೂ. ಗಳು ಹೊಂದಿಕೆಯಾದಂತೆ ನೆನಪು.</p>
<p>ಸಂಜೆ ಬಾಂಬೆಗೆ ಹೋಗುವ ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಅವನನ್ನು ಕೂರಿಸಿ, ಪಕ್ಕದ್ದಲ್ಲಿದ್ದವರಿಗೆ ಪರಿಚಯ ಮಾಡಿಸಿದೆ. ಕೆಲ ಕ್ಷಣಗಳಲ್ಲಿ ರೈಲು ಹೊರಟಾಗ ಅವನು ನನ್ನೆಡೆ ಅಭಿಮಾನದಿಂದ ಕೈ ಬೀಸಿದ. ಯಾವುದೋ ಸಂಬಂಧ ನಮ್ಮನ್ನು ಬೆಸೆದಿತ್ತು.</p>
<p>ಕೊನೆಗೂ ಸ್ವಲ್ಪ ದಿನಗಳ ನಂತರ ಅವನ ಊರಿನಿಂದ ನಮಗೆ ಕಾಗದ ಬಂತು. ಅವನು ಆರಾಮಾಗಿ ತಲುಪಿದ ಬಗೆಯನ್ನು ವಿವರಿಸಿ, ನಮ್ಮೆಲ್ಲರ ನೆರವನ್ನು ಕೊಂಡಾಡಿದ್ದ. ನಮಗೆ ಕೃತಾರ್ಥ ಭಾವನೆ ಮೂಡಿತ್ತು. ನಮ್ಮ ಸ್ಟೋರಿಗಾಗಿ ಸ್ವಾರ್ಥದಿಂದ ವರ್ತಿಸಿದೆವೇನೋ ಎನಿಸಿದರೂ, ಜತೆಗೆ ಮಾನವೀಯತೆಯಿಂದ ನಡೆದುಕೊಂಡೆವು ಎಂಬ ಸಮರ್ಥನೆ ಇತ್ತು. ನಿಮಗೆ ಏನನ್ನಿಸುತ್ತದೋ ಗೊತ್ತಿಲ್ಲ.</p>
<p>ಅವನ ಪತ್ರದ ಒಕ್ಕಣಿಕೆ ಹೀಗಿತ್ತು. ಮಿ. ಹ್ಯಾಪಿ, ಮಿ. ಲೋಟಸ್ 1, ಲೋಟಸ್ 2, ಮಿ. ನ್ಯೂ... ನಮ್ಮ ಭಾರತೀಯ ಹೆಸರುಗಳು ಅವನಿಗೆ ಉಚ್ಚರಿಸಲು ಬರುತ್ತಿರಲಿಲ್ಲ. ಹಾಗಾಗಿ ನಮ್ಮ ಹೆಸರಿನ ಅರ್ಥ ಅವನ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದೆವು. ಹಾಗಾಗಿ ಹರ್ಷ ಎಂಬವ ಮಿ. ಹ್ಯಾಪಿ ಆಗಿದ್ದ, ನವೀನ್ ಮಿ. ನ್ಯೂ, ಅರವಿಂದ ಸಿಗದಾಳ ಮಿ. ಲೋಟಸ್ 1 ಹಾಗೂ ಅರವಿಂದ ಮಿ. ಲೋಟಸ್ 2...!</p>
<p>ಎಲೆಕ್ಷನ್ ಗಲಾಟೆ ಧಾರಾವಾಹಿಯ ಮುಂದಿನ ಕಂತು ಬರೆಯಲು ತಡವಾಯಿತು. ಕ್ಷಮಿಸಿ. (ಸಶೇಷ)</p>
]]></content:encoded>
</item>
<item>
<title><![CDATA[ಮೆಚ್ಚಿನ ಧಾರಾವಾಹಿಗೊಂದು ನಲ್ಮೆಯ ವಿದಾಯ]]></title>
<link>http://kalaravapatrike.wordpress.com/2008/04/24/%e0%b2%ae%e0%b3%86%e0%b2%9a%e0%b3%8d%e0%b2%9a%e0%b2%bf%e0%b2%a8-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf%e0%b2%97%e0%b3%8a%e0%b2%82%e0%b2%a6%e0%b3%81-%e0%b2%a8%e0%b2%b2/</link>
<pubDate>Thu, 24 Apr 2008 19:09:29 +0000</pubDate>
<dc:creator>uniquesupri</dc:creator>
<guid>http://kalaravapatrike.wordpress.com/2008/04/24/%e0%b2%ae%e0%b3%86%e0%b2%9a%e0%b3%8d%e0%b2%9a%e0%b2%bf%e0%b2%a8-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf%e0%b2%97%e0%b3%8a%e0%b2%82%e0%b2%a6%e0%b3%81-%e0%b2%a8%e0%b2%b2/</guid>
<description><![CDATA[ಈ ಟಿವಿಯಲ್ಲಿ ರಾತ್ರಿ ಎಂಟೂ ವರೆಗೆ &#8216;ಮಂಥನ]]></description>
<content:encoded><![CDATA[<p>ಈ ಟಿವಿಯಲ್ಲಿ ರಾತ್ರಿ ಎಂಟೂ ವರೆಗೆ 'ಮಂಥನ' ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. 'ಇದು ಇನ್ನೊಂದು ಮುಕ್ತ' ಅಂತ ಹೆಸರು ಪಡೆದ ಈ ಧಾರಾವಾಹಿ ಇತ್ತೀಚೆಗೆ ಮುಕ್ತಾಯ ಕಂಡಿತು. ಧಾರಾವಾಹಿಗಳು ಎಂದರೆ ಸಾವಿಲ್ಲದ, ಕೊನೆಯಿಲ್ಲದ ಚಿರಂಜೀವಿಗಳು ಎಂದೇ ಜನರು ಭಾವಿಸಿರುವ ಇತ್ತೀಚಿನ ದಿನಗಳಲ್ಲಿ ಒಂದು ಧಾರಾವಾಹಿ ಮುಕ್ತಾಯವಾಯ್ತಂತೆ ಎಂದು ಕೇಳಿದರೇನೇ ಆಶ್ಚರ್ಯವಾಗುತ್ತದೆ!</p>
<p>ಈ 'ಮಂಥನ'ದ ಬಗೆಗೊಂದು ಪುಟ್ಟ ಟಿಪ್ಪಣಿ, ಒಂದೊಳ್ಳೆ ಧಾರಾವಾಹಿಯ ನೆನಪಿಗಾಗಿ… 'ಮಂಥನ'ದಪಾತ್ರಗಳ ಸಂಭಾಷಣೆ ಮೊದಲ ವೀಕ್ಷಣೆಯಲ್ಲೇ ನಮ್ಮ ಗಮನವನ್ನು ಸೆಳೆದುಬಿಡುತ್ತದೆ. ತುಂಬಾ ನಾಟಕೀಯ ಎನ್ನಿಸುವಂತಹ ಸಂಭಾಷಣೆಗಳು, ಗ್ರಾಂಥಿಕ ಭಾಷೆ ಎಲ್ಲವೂ ಹೊಸ ಪ್ರಯೋಗದಂತೆ ಮನಸ್ಸನ್ನು ಸೆಳೆಯುತ್ತವೆ. ಆದರೆ ಇಡೀ ಧಾರಾವಾಹಿಯನ್ನು ಆ ಹೊಸತನವೇ ಆಕ್ರಮಿಸಿಕೊಂಡು ಹೊಸಕಿ ಹಾಕಿಬಿಡುತ್ತದೆ. ಸೃಜನಶೀಲತೆ, ಬುದ್ಧಿವಂತಿಕೆ, ವೈಚಾರಿಕತೆಯನ್ನು ಮೆರೆಸುವ ಸಡಗರದಲ್ಲಿ ಸಹಜತೆ ನರಳುತ್ತದೆ. ಕಾವ್ಯಾತ್ಮಕವಾದ ಅಭಿವ್ಯಕ್ತಿ ಕಾಣೆಯಾಗುತ್ತದೆ, ಕಲಾಕೃತಿಯಾಗುವ ಬದಲು ಅದೊಂದು ಹತ್ತು ಬಟ್ಟೆ ಸೇರಿಸಿ ಹೊಲಿದ ಕೌದಿಯಾಗಿಬಿಡುತ್ತದೆ. ಚಿಕ್ಕ ಮಕ್ಕಳ ಬಾಯಲ್ಲಿ ದೊಡ್ಡವರೂ ಅರ್ಥಮಾಡಿಕೊಳ್ಳಲಾಗದಂತಹ ಮಾತುಗಳನ್ನು ತುರುಕುವುದು ಇದಕ್ಕೆ ಸಾಕ್ಷಿ. ಮೊದಲೇ ತಯಾರಿಸಿಟ್ಟುಕೊಂಡ ವಾದವನ್ನು, ವಿಚಾರವನ್ನು ಎರಡು ಪಾತ್ರಗಳು ಮಂಡಿಸುವಂತೆ ಸಂಭಾಷಣೆಯಿರುತ್ತದೆ. ಪಾತ್ರಗಳ ಸಂಸ್ಕಾರ, ವಯೋಮಾನ, ಮನೋಧರ್ಮಕ್ಕನುಗುಣವಾಗಿ ಸಂಭಾಷಣೆಯಿದ್ದರೆ ಕಲಾಕೃತಿ ಗೆಲ್ಲುತ್ತದೆ ಇಲ್ಲವಾದರೆ ಸಂಭಾಷಣೆ ಬರೆಯುವವ ಮಾತ್ರ ಗೆಲ್ಲುತ್ತಾನೆ.</p>
<p>ಹಾಗೆ ನೋಡಿದರೆ, ಈಗ ಕನ್ನಡದ ಚಾನಲ್ಲುಗಳಲ್ಲಿ ಹರಿಯುತ್ತಿರುವ 'ಧಾರಾವಾಹಿ'ಗಳಿಗೆ ಹೋಲಿಸಿದರೆ 'ಮಂಥನ' ಸಾವಿರ ಪಾಲು ಶ್ರೇಷ್ಠ. ಮನುಷ್ಯ ಸಂಬಂಧಗಳನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅಗ್ನಿ ಪರೀಕ್ಷೆಗೊಡ್ಡುವ, ಸಂಶಯದಿಂದ ಕಾಣುವ, ಸೀಳಿ ನೋಡಿ ವಿಶ್ಲೇಷಿಸುವ ಪ್ರಯತ್ನ ಹೊಸತನದಿಂದ ಕೂಡಿದೆ. ಮದುವೆ, ಮಕ್ಕಳ ಮೇಲಿನ ಪ್ರೀತಿ, ನಿರೀಕ್ಷೆ, ಕುಟುಂಬ ವ್ಯವಸ್ಥೆ, ಸಂಬಂಧಗಳ ಸ್ವರೂಪವನ್ನು ಎಳೆ ಎಳೆಯಾಗಿ ಕಾಣುವ ಪ್ರಯತ್ನ ಮನಸ್ಸಿಗೆ ಮುಟ್ಟುತ್ತದೆ. ವ್ಯವಹಾರ, ಪ್ರಾಮಾಣಿಕತೆ- ಸುತ್ತಲಿನ ಭ್ರಷ್ಟ ಪರಿಸರದಲ್ಲಿ ಅದು ಪ್ರಾಮಾಣಿಕನಲ್ಲಿ ಹುಟ್ಟಿಸುವ ಅಹಂಕಾರ, ಹಣದ ಗುಣ, ಸರಕಾರಿ ಅಧಿಕಾರಿ, ಕಾರ್ಖಾನೆಯ ಶ್ರೀಮಂತರು, ತೆರಿಗೆ ಸಂಸ್ಕೃತಿ -ಹೀಗೆ ಅನೇಕ ಸಾಮಾಜಿಕ ಮುಖಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಸ್ತುತ್ಯಾರ್ಹ.</p>
<p>ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿಯೆಂದರೆ, 'ಮಂಥನ'ದ ಪ್ರತಿ ಪಾತ್ರದ ಆಲೋಚನೆಯಲ್ಲೂ ಹೊಸತನವನ್ನು ಒತ್ತಾಯದಿಂದ ತೂರಿಸುವ ಪ್ರಯತ್ನ ಉಂಟುಮಾಡುವ ಕಿರಿಕಿರಿ. ಎಲ್ಲಾ ಪಾತ್ರಗಳಿಗೂ ಮಾನವೀಯ ಸಂಬಂಧಗಳ ಬಗ್ಗೆ ಸಮಾಜ ಸೃಷ್ಟಿಸಿರುವ 'ಮಾದರಿ'(stereotype)ಗಳನ್ನು ಧಿಕ್ಕರಿಸುವ, ಅವುಗಳ ಹಂಗನ್ನು ಮೀರುವ ಉನ್ಮಾದವಿದೆ, ಹೊಸ ಆಯಾಮಗಳಿಗೆ ಕೈಚಾಚುವ ಹಸಿವಿದೆ. ಇದು ಮೆಚ್ಚುಗೆಗೆ ಅರ್ಹವಾದ ವಿಚಾರವೇ ಆದರೆ ಈ ಭಾವ ಎಲ್ಲಾ ಪಾತ್ರಗಳನ್ನೂ ಆವರಿಸುವುದರಿಂದ ಕಥಾನಕದ ಒಟ್ಟು ಅಂದಕ್ಕೆ ತೊಂದರೆಯಾಗುತ್ತದೆ. ಸಮಾಜದಲ್ಲಿ ಸಂಬಂಧಗಳು ಪುನರ್ ಮೌಲ್ಯಮಾಪನ ಗೊಳ್ಳುತ್ತಾ ಹೋಗುತ್ತಲೇ ಇರುತ್ತವೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಲೇ ಹೋಗುತ್ತಿರುತ್ತವೆ. ಹತ್ತಾರು ವರ್ಷಗಳ ನಂತರ ಈ ಧಾರಾವಾಹಿಯನ್ನು ನೋಡುವವನಿಗೆ ಇವೆಲ್ಲಾ ಹೊಸ ಚಿಂತನೆಗಳು ಅನ್ನಿಸದಷ್ಟು ಸಹಜವಾಗಿಬಿಟ್ಟಿರುತ್ತವೆ, ಇಲ್ಲವೆ ಅಪ್ರಸ್ತುತವಾಗಿಬಿಟ್ಟಿರುತ್ತವೆ. ಸತಿ ಪದ್ಧತಿ, ಬಾಲ್ಯವಿವಾಹಗಳ ಪ್ರಶ್ನೆ ನಮ್ಮಲ್ಲಿ ಅಪ್ರಸ್ತುತವಾಗಿರುವಂತೆ. ಈ ಬಗೆಯ ಸಂಬಂಧಗಳ ವಿಶ್ಲೇಷಣೆ ಸಲ್ಲದು ಅಂತಲ್ಲ, ಆ ಅಂಶದ ನೆರಳು ಎಲ್ಲಾ ಪಾತ್ರಗಳ ಮೇಲೂ ಬೀಳುವುದು ಸರಿಯಲ್ಲ.</p>
<p>ಇಷ್ಟೆಲ್ಲಾ ವಿಚಾರಗಳನ್ನು- ಅವುಗಳಲ್ಲಿ ನೆಗೆಟೀವ್ ಅಭಿಪ್ರಾಯಗಳೂ ಸೇರಿದ್ದರೂ- ಹುಟ್ಟುಹಾಕುವ ಕೆಲಸವನ್ನು ಒಂದು ಕನ್ನಡ ಧಾರಾವಾಹಿ ಮಾಡಿದೆಯೆಂದರೆ ಅದು ಆ ಧಾರಾವಾಹಿಯ ಯಶಸ್ಸೆಂದೇ ಕರೆಯಬೇಕು.ಇದು 'ಮಂಥನ'ಕ್ಕೊಂದು ಆತ್ಮೀಯ ವಿದಾಯ...</p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಗಳ ಪುಟಗಳು ಏಳು ]]></title>
<link>http://chendemaddale.wordpress.com/?p=117</link>
<pubDate>Wed, 09 Apr 2008 11:19:29 +0000</pubDate>
<dc:creator>navada</dc:creator>
<guid>http://chendemaddale.wordpress.com/?p=117</guid>
<description><![CDATA[ತಕ್ಷಣವೇ ನವೀನ ಮತ್ತು ಹರ್ಷ ಸೌತ್ ಡಿಸಿಪಿ ಗ]]></description>
<content:encoded><![CDATA[<p>ತಕ್ಷಣವೇ ನವೀನ ಮತ್ತು ಹರ್ಷ ಸೌತ್ ಡಿಸಿಪಿ ಗೆ ಫೋನ್ ಮಾಡಿದರು. ನನಗೋ ಕುತೂಹಲ. ಆ ಬದಿಯಿಂದ ಶುರುವಾದ ಸಂಭಾಷಣೆ ಇವರಿಬ್ಬರ ಮುಖದಲ್ಲೂ ಗೆಲುವು ತರಲಿಲ್ಲ. ಕೆಲ ಕ್ಷಣಗಳ ನಂತರ ನವೀನ್ ಫೋನ್ ಆಫ್ ಮಾಡಿ ಇದು ಕೊಲೆಯಲ್ಲವಂತೆ ಎಂದು ಹೇಳಿದ. ನಿಜ, ನಮಗಿಬ್ಬರಿಗೂ ಬೇಸರವಾಗಿತ್ತು. ಒಳ್ಳೆ ಸ್ಕೂಪ್ ಸಿಗಬಹುದೆಂದು ನಿರೀಕ್ಷಿಸಿದ್ದವರಿಗೆ ಸಿಂಗಲ್ ಕಾಲಂ ಸುದ್ದಿ ಸಿಕ್ಕಿತ್ತು.</p>
<p>ಆ ಹೆಣದ ಕುಲಗೋತ್ರ ಗೊತ್ತಿರಲಿಲ್ಲ. ಪತ್ರಿಕಾ ಭಾಷೆಯಲ್ಲಿ ಅದರಲ್ಲೂ ಕ್ರೈಮ್ ಬೀಟ್‌ನಲ್ಲಿ ಇದನ್ನು ಯುಡಿಆರ್ ಎಂದು ಪರಿಗಣಿಸಿ ಪುಣ್ಯಾರ್ಥವಾಗಿ ಹಾಕೋ ಸುದ್ದಿ. ಇವನ ಸಂಬಂಧಿಕರ್‍ಯಾರಾದರೂ ಗುರುತು ಪರಿಚಯ ಹಚ್ಚಿ ಹೆಣ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡ್ಲಿ ಎನ್ನೋ ಧಾಟಿಯಲ್ಲಿ ಹಾಕ್ತೀವಿ. ಅದಕ್ಕೆ ಕೊಡೋ ಶೀರ್ಷಿಕೆಯೂ ಅದೇ ತೆರನಾದದ್ದು. ಯಾವುದೋ ಪುಟದ, ಕಾಲಮ್ಮಿನ ಫಿಲ್ಲರ್ ಆಗಿ "ಅಪರಿಚಿತ ಶವ ಪತ್ತೆ’ ಎನ್ನೋ ಶಿರೋನಾಮೆಯಲ್ಲಿ ಮಾರನೇ ದಿನ ಸುದ್ದಿ ಪ್ರಕಟವಾಗುತ್ತದೆ.</p>
<p>ಇಷ್ಟೆಲ್ಲಾ ಆದ್ಮೇಲೆ ಆ ಹೆಣದ ಪೂರ್ವಾಪರ ತಿಳಿದ ನಮಗೆ ಅದು ಭಿಕ್ಷುಕನ ಹೆಣ ಅಂತ ತಿಳೀತು. ಇನ್ನೇನೂ ಮಾಡುವಂತಿರಲಿಲ್ಲ. ಸುಮ್ಮನೆ ಹೊರಟೆವು ಅಲ್ಲಿಂದ ಕಚೇರಿಗಳಿಗೆ. ಭಾನುವಾರವಾದರೇನು ? ಸೋಮವಾರವಾದರೇನು ? ದೇವಸ್ಥಾನಕ್ಕೆ ಹೋಗೋಕೆ ವಾರವಿದೆಯಾ? ಅನ್ನೋ ಹಾಗಿ ಕಮೀಷನರ್ ಕಚೇರಿಯತ್ತ ಹೊರಟೆವು. ಕಚೇರಿಗೆ ಹೋಗಿ ಕುಳಿತು ಬರೆಯೋವಷ್ಟು ಸುದ್ದಿ ಇರಲಿಲ್ಲ.</p>
<p>ಸಂಡೇ ಎಂದರೆ ಒಂದು ಬಗೆಯಲ್ಲಿ ಡ್ರೈ ಡೇ. ಸಾಮಾನ್ಯವಾಗಿ ರಾತ್ರಿ ಎಂಟರವರೆಗೂ ಒಂದು ಪ್ಯಾರಾ ಸುದ್ದಿಯೂ ಇರೋದಿಲ್ಲ. ಎಲ್ಲೂ ಅಪಘಾತ ಆಗಿರೋದಿಲ್ಲ, ಯಾರೂ ಕುಡಿದು ಟೈಟಾಗಿ ಬಿದ್ದು ಸತ್ತಿರೋದಿಲ್ಲ, ಯಾರ ಮಧ್ಯೆಯೂ ಮಾರಾಮಾರಿ ನಡೆದಿರೋದಿಲ್ಲ. ಆದರೆ ಎಂಟಾಗುತ್ತಿದ್ದಂತೆ ಅಪರಾಧದ ಟಿಆರ್‌ಪಿ (ರೇಟ್) ಏರುತ್ತಾ ಹೋಗುತ್ತದೆ. ಒಂದೊಂದು ಭಾನುವಾರವಂತೂ ನಮ್ಮ ಹೆಣ ಬಿದ್ದು ಹೋಗುವಷ್ಟು ಅಪರಾಧಗಳು ನಡೆದಿರುತ್ತವೆ. ನಮ್ಮ ಚೀಫ್ ರಿಪೋರ್ಟರ್ ಸೇರಿದಂತೆ ವರದಿಗಾರರ ಎಲ್ಲರೂ ಮನೆಯಲ್ಲಿ ಹೋಗಿ ಉಂಡು ಮಲಗಿದ್ದಾಗಲೂ ನಮ್ಮ ಕೆಲಸ ನಡೆಯುತ್ತಲೇ ಇರುತ್ತದೆ.</p>
<p>ಇಂಥದ್ದರ ನಡುವೆ ಮಾಡಲು ಕೆಲಸವಿಲ್ಲವಾದ್ದರಿಂದ ಸೀದಾ ಕಮೀಷನರ್ ಕಚೇರಿ ಒಳಗೆ ಹೋಗುತ್ತಿದ್ದಂತೆ ಒಬ್ಬ ಮಿಕ ಕಂಡು ಬಂದ. ಬೆಳ್ಳಗಿನ ಚರ್ಮ, ಕೆಂಚನೆಯ ಕೂದಲು, ಕುರುಚಲು ಗಡ್ಡ. ವಿದೇಶಿ ಪ್ರಜೆ ಎಂಬುದು ಪಕ್ಕ ಆಯಿತು. ಕಮೀಷನರ್ ಕಚೇರಿಯಲ್ಲಿಯೇ ವಲಸಿಗರ ಕುರಿತ ಮಾಹಿತಿ ಕಚೇರಿ ಇರುವುದರಿಂದ ವಿದೇಶಿಯರ ಆಗಮನ ಸಾಮಾನ್ಯ. ಹಾಗಾಗಿ ಇವನೂ ಬಂದಿರಬಹುದು ಎಂದು ನಾನು ಸುಮ್ಮನೆ ಮುಂದಕ್ಕೆ ಹೋದೆ. ಹರ್ಷ, ನವೀನನೂ ಹಿಂಬಾಲಿಸಿದ.</p>
<p>ಅಷ್ಟರಲ್ಲಿ ಒಬ್ಬ ಪರಿಚಿತ ಪೇದೆ ಬಂದವನೇ, "ಸಾರ್, ಯಾರೋ ಇಂಗ್ಲೆಂಡ್‌ನವನು ಬಂದವ್ನೆ. ಏನೋ ಇಂಗ್ಲಿಷ್ ನಲ್ಲಿ ಹೇಳ್ತಾನೆ’ ಎಂದ. ಹೆಲ್ಪ್ ಮಾಡೋ ದೃಷ್ಟಿಯಿಂದ ನಾವು ಅತ್ತ ಸಾಗಿದೆವು. ಹರ್ಷ ಮಾತನಾಡಿಸಲು ಶುರು ಮಾಡಿದ. ಒಂದೊಂದೇ ವಿವರ ಹೊರಬಂತು. ಅದೆಲ್ಲವೂ ದೊಡ್ಕ ಸ್ಕೂಪ್ ಆಗಿಬಿಡಬೇಕೇ ?</p>
<p>ಇಂಗ್ಲೆಂಡ್‌ನ ಗ್ಲುಕೋಸ್ಟೈರ್ ಪ್ರದೇಶದವನು ಆತ. ಅವನ ಹೆಸರು ಕ್ರೆಗ್ ಆರ್ಕೆಲ್. ವಯಸ್ಸು ಸುಮಾರು ೨೮. ಕೆಲಸವೇನೂ ಇಲ್ಲ. ಹೀಗೆ ಊರೂರು ತಿರುಗಿ ಅಲ್ಲಿನ ಅನುಭವದ ಬಗ್ಗೆ ಪುಸ್ತಕ ಬರೆಯೋದು. ಹಾಗೆಯೇ ಭಾರತಕ್ಕೂ ಬಂದಿದ್ದ. ಮುಂಬಯಿಗೆ ಬಂದವ, ಹೀಗೆ ದಾರಿ ಹಿಡಿದು ಬೆಂಗಳೂರಿಗೂ ಬಂದಿದ್ದ. ಆದರೆ ಮುಂಬಯಿಯ ರೈಲಿನಲ್ಲಿ ಅವನ ಭವಿಷ್ಯವನ್ನೇ ಬದಲಿಸಿತ್ತು. ಯಾರೋ ಅವನಿಗೆ ಟೋಪಿ ಹಾಕಿದ್ದರು.</p>
<p>ಅವನ ಸ್ಥಿತಿ ಹೇಗಿತ್ತೆಂದರೆ ಮುಂಬಯಿಗೆ ವಾಪಸು ಹೋಗುವ ಟ್ರೈನಿನ ಟಿಕೇಟೂ ಸಹ ಇರಲಿಲ್ಲ. ಕೈಯಲ್ಲಿದ್ದ ಎಲ್ಲ ಹಣ ಕಳೆದುಕೊಂಡಿದ್ದ. ಅಗತ್ಯ ದಾಖಲೆಗಳೂ ಕಾಣೆಯಾಗಿದ್ದವು. ತೀರಾ ಹತಾಶನಾಗಿ ಕಮೀಷನರ್ ಅವರ ಸಹಾಯ ಕೋರಲು ಬಂದಿದ್ದ. ಎಲ್ಲ ವಿವರ ಪಡೆದಾಗ ನಮ್ಮ ಮುಖದಲ್ಲಿ ಗೆಲುವು ಕಂಡು ಬಂದಿದ್ದು ಸತ್ಯ.</p>
<p>ಅಂದು ಭಾನುವಾರ. ಯಾವ ಅಧಿಕಾರಿಯೂ ಸಿಗಲಾರರು. ಸೋಮವಾರದವರೆಗೂ ಆತ ಕಾಯಬೇಕು. ನಮ್ಮೊಳಗೆ ಒಮ್ಮೆಲೆ ಸ್ಕೂಪ್ ಪ್ರಜ್ಞೆ ಮತ್ತು ಮಾನವೀಯತೆ ಎರಡೂ ಜಾಗೃತವಾಯಿತು. ಎರಡನ್ನೂ ನಿರ್ವಹಿಸುವುದು ಹೇಗೆ ಎಂಬ ಜಿಜ್ಞಾಸೆಯೂ ಎದುರಾಯಿತು.</p>
<p>ಅಷ್ಟರಲ್ಲಿ ಮೂವರೂ ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆವು. ಅವನಿಗೆ ಒಂದು ಪಂಚತಾರಾ ಹೋಟೆಲ್‌ನಲ್ಲಿ ರೂಮ್ ಮಾಡಿಸಿ ಕೂರಿಸಲು ಒಂದು ದಿನದ ಕೋಣೆಯ ಬಾಡಿಗೆಯಷ್ಟೂ ಸಂಬಳ ನಮಗೆ ಬರುತ್ತಿರಲಿಲ್ಲ. ಅವನನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಇದೆಲ್ಲದರ ಜತೆಗೆ ನಮ್ಮ ಎದುರಿನ ಗುಂಪಿಗೆ ಮಿಸ್ ಮಾಡುವ ಸ್ಕೆಚ್ ನ್ನೂ ರೂಪಿಸಲಾಯಿತು. ಅದರಂತೆ ಹರ್ಷ ಕ್ರೆಗ್‌ನನ್ನು ಕರೆದೊಯ್ದು ತನ್ನ ಕಚೇರಿಯ ವಿಸಿಟರ್ ಲಾಂಜ್‌ನಲ್ಲಿ ಕುಳ್ಳಿರಿಸಿದ.</p>
<p>ಎರಡೂ ಗುಂಪು ಪರಸ್ಪರ ಮಣಿಸಲು ಹಣಾಹಣಿ ನಡೆಸುತ್ತಿದ್ದರಿಂದ ಪತ್ತೇದಾರಿಕೆ ನಡೆಯುತ್ತಲೇ ಇತ್ತು. ಅವನಿಗೆ ಇವತ್ತು ಯಾವ ಸುದ್ದಿ ಸಿಕ್ಕಿರಬಹುದು? ನಮಗೆ ಯಾವುದು? ಹೀಗೆ ಫಾಲೋ ಮಾಡುತ್ತಲೇ ಇದ್ದವು. ನಮ್ಮ ನೆರವು ಕೋರಿದ್ದ ಪೇದೆಗೆ ಈ ವಿಷಯ ಯಾರಿಗೂ ತಿಳಿಸದಂತೆ ಹೇಳಿದ್ದೆವು. ನಾನು ಮತ್ತು ನವೀನ್ ನಮ್ಮಮ್ಮ ಕಚೇರಿಗೆ ಹೋಗಿ ಸುದ್ದಿ ಬರೆದೆ. ನನ್ನಲ್ಲಿ "ಆದರ್ಶ ಭಾರತ ಕಾಣಲು ಬಂದ, ಮೋಸ ಹೋದ’ ಎಂದು ಶೀರ್ಷಿಕೆ ಕೊಟ್ಟು ಸುದ್ದಿ ಬರೆದಾಯಿತು.</p>
<p>ಎಲ್ಲ ಮುಗಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಬಸ್ ಸ್ಟಾಪ್‌ಗೆ ನಾನು ಬಂದೆ. ಕ್ರೆಗ್ ಆರ್ಕೆಲ್ ಅನ್ನು ನಮ್ಮೊಡನೆ ಎನ್ ಆರ್ ಕಾಲೋನಿಯ ಮನೆಗೆ ಕರೆದೊಯ್ದೆವು. ನಮ್ಮ ಮಾನವೀಯತೆಯ ಉಪಚಾರಕ್ಕೆ ಅವನು ಸೋತು ಹೋದ. ಅಂದು ಮಲಗಿದ್ದು ತೆರೇಸಿನಲ್ಲಿ. ಕಣ್ಣು ಬಿಟ್ಟರೆ ಆಕಾಶ, ಎಣಿಸಲಿಕ್ಕೆ ಸಾಕಷ್ಟು ತಾರೆ. ರಾತ್ರಿ ಕಳೆದದ್ದೇ ತಿಳಿಯಲಿಲ್ಲ !</p>
<p>ಬೆಳಗಾಗುವಷ್ಟರಲ್ಲಿ  ಉದಯವಾಣಿ, ಹೊಸದಿಗಂತ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ನಮ್ಮ ಮುಖದಲ್ಲಿ ಕಾಂತಿ ಫಳಫಳಿಸುತ್ತಿತ್ತು ! (ಬ್ರಹ್ಮಚಾರಿಯ ಪುಟಗಳು ಆರನೆಯದನ್ನು ಬೇರೆ ಶೀರ್ಷಿಕೆಯಲ್ಲಿ ಹಾಕಿದ್ದೆ. ಆದರೆ ಓದುಗರಿಗೆ ಕಮ್ಯುನಿಕೇಷನ್ ಆಗಲಿಲ್ಲವೆಂದು ತೋರುತ್ತದೆ. ಅದಕ್ಕೇ ಹಳೇ ಶೀರ್ಷಿಕೆಯಲ್ಲೇ ಮುಂದುವರಿಸಿದ್ದೇನೆ)    </p>
]]></content:encoded>
</item>
<item>
<title><![CDATA[ಹೆಣ ನಮ್ಮ ಕೈ ಬಿಟ್ಟಿರಲಿಲ್ಲ... !]]></title>
<link>http://chendemaddale.wordpress.com/?p=113</link>
<pubDate>Fri, 28 Mar 2008 13:47:47 +0000</pubDate>
<dc:creator>navada</dc:creator>
<guid>http://chendemaddale.wordpress.com/?p=113</guid>
<description><![CDATA[ಬ್ರಹ್ಮಚಾರಿಯ ಪುಟಗಳು ಆರು 
ಅಂದು ಭಾನುವಾರ.]]></description>
<content:encoded><![CDATA[<p><strong>ಬ್ರಹ್ಮಚಾರಿಯ ಪುಟಗಳು ಆರು</strong> </p>
<p>ಅಂದು ಭಾನುವಾರ. ಇದು ಮಾತ್ರ ಸರಿಯಾಗಿ ನೆನಪಿದೆ. ಸಾಮಾನ್ಯವಾಗಿ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಹರ್ಷ ಮತ್ತು ನವೀನ್ ನಮ್ಮ ಎನ್. ಆರ್. ಕಾಲೋನಿ ಮನೆಗೆ ಬರುತ್ತಿದ್ದರು. ಈ ಹಿಂದೆಯೇ ಹೇಳಿದಂತೆ ಅಂದು ಚೆಂದವಾದ ಊಟ. ರಾತ್ರಿ ಅಡುಗೆ ಗೆಳೆಯ ಸಿಗದಾಳ್ ಮುಗಿಸಿಡುತ್ತಿದ್ದ. ಬೆಳಗ್ಗೆ ಅವನಿಗೆ ನಾನು ತಿಂಡಿ ಮಾಡಿಕೊಡುತ್ತಿದ್ದೆ. ಒಮ್ಮೊಮ್ಮೆ ಸೋಮಾರಿ ಎನಿಸಿ ತಡವಾಗಿ ಎದ್ದು, ಏಳಲು ಮನಸ್ಸಾಗದಿದ್ದಾಗ ಸುಳ್ಳನೊಂದು ಕಾಯಿಲೆ (ತಲೆನೋವು, ಯಾಕೋ ಸುಸ್ತು) ಹೇಳಿ ಸಾಗ ಹಾಕುತ್ತಿದ್ದ ದಿನಗಳೂ ಇದ್ದವು.</p>
<p>ಅದರಲ್ಲಿ ಸಿಗದಾಳ್ ಒಳ್ಳೆ ಮನುಷ್ಯ. ರಾತ್ರಿ ಅಡುಗೆ ಮಾಡಿಡುತ್ತಿದ್ದ. ಕೈಲಾಗದ ದಿನ ಮೊದಲೇ ಹೇಳುತ್ತಿದ್ದ. ಎಲ್ಲೋ ಬೇಕರಿಯಲ್ಲಿ ತಿಂದು ದಿನ ದೂಡುತ್ತಿದ್ದೆವು. ಆದರೆ ಶನಿವಾರ ಸ್ವಲ್ಪ ಸ್ಪೆಷಲ್ಲು. ಅಂಥದ್ದೇ ಒಂದು ಶನಿವಾರದ ರಾತ್ರಿ ಸುಮಾರು ೧೧. ೩೦ ಗೆ ಹರ್ಷ, ನವೀನ್ ಇಬ್ಬರೂ ಮನೆಗೆ ಬಂದರು. ಅವತ್ತು ಬದನೆಕಾಯಿ ಹುಳಿ ಮಾಡಿದ್ದ ಸಿಗದಾಳ್. ಸೆಂಡಿಗೆ ಬೇಕಿತ್ತು, ಆದರೆ ಇರಲಿಲ್ಲ. ನಾನು ಕಚೇರಿಯಿಂದ ಬರುವ ಹಾದಿಯಲ್ಲಿ ಸ್ವಲ್ಪ ಕಡ್ಲೇಬೇಳೆ ವಡೆ (ಚಟ್ಟಂಬಡಿ) ತಂದಿದ್ದೆ.</p>
<p>ಎಲ್ಲರೂ ಹಂಚಿಕೊಂಡು ತಿಂದೆವು. ಒಂದಷ್ಟು ಹೊತ್ತು ಹರಟಿದೆವು. ಎರಡು ದಿನದ ಹಿಂದೆಯಷ್ಟೇ ನಮ್ಮ ಎದುರಿನ ಗುಂಪಿಗೊಂದು ಶಾಕ್ ಕೊಟ್ಟಿದ್ದೆವು. ಪೊಲೀಸ್ ಅಧಿಕಾರಿಯೊಬ್ಬರ ಎತ್ತಂಗಡಿ ಸುದ್ದಿ ಬರೆದು ಗಪ್‌ಚುಪ್ ಎನ್ನುವಂತೆ ಮಾಡಿದ್ದೆವು. ಅದೇ ಝೂಮ್‌ನಲ್ಲಿದ್ದ ನಾವೆಲ್ಲಾ ಮತ್ತೊಂದು ಸ್ಕೂಪ್‌ನ ಅನ್ವೇಷಣೆಯಲ್ಲಿದ್ದೆವು. ಈ ಮಧ್ಯೆ ಸಿಗದಾಳ್ ಲೆಕ್ಕಾಚಾರ (ಅಕೌಂಟೆಂಟ್) ದ ವ್ಯಕ್ತಿ. ಅವನಿಗೆ ನಮ್ಮ ಕ್ಷೇತ್ರವೂ ಹೊಸತು.</p>
<p>ಹಾಗಾಗಿ, ಮಧ್ಯೆ ಮಧ್ಯೆ ಡಿಕ್ಟೇಷನ್ ನಡುವೆ "ಏನಂದ್ರಿ?’ ಎಂದು ಕೇಳುವ ಹಾಗೆ ಆಗಾಗ್ಗೆ "ಹಂಗಂದ್ರೆ’ ಎಂದು ಕೇಳುತ್ತಿದ್ದ. ಅತ್ಯಂತ ಕುತೂಹಲದ ಜೀವಿ. ಪುಸ್ತಕ ಅವನ ಚಟ. ಭೈರಪ್ಪನನ್ನು ಅರೆದು ಕುಡಿದಿದ್ದ. ಹಾಗೆ ಹೇಳುವುದಾದರೆ ಭೈರಪ್ಪನಿಂದಲೇ ಅವನು ನನಗೆ ಸಿಕ್ಕಿದ್ದು ಗೆಳೆಯನಾಗಿ. ಇಂದಿಗೂ ಜೀವದ-ಜೀವನದ ಗೆಳೆಯನಾಗಿದ್ದಾನೆ ಕೂಡ. ಅವನು ಗೆಳೆಯನಾದ ಪರಿ ಮತ್ತೊಮ್ಮೆ ಹೇಗಾದರೂ ಉಲ್ಲೇಖಿಸುತ್ತೇನೆ. ಇಂಥ ಸಿಗದಾಳನಿಗೆ ಇದೇನೂ ಕಷ್ಟಕರವಾದ ವಿಷಯವಾಗಿರಲಿಲ್ಲ.</p>
<p>ಆದರೆ ಮಾತಿನ ಮಧ್ಯೆ ಕೋಡ್ ವರ್ಡ್‌ಗಳು, ವ್ಯಕ್ತಿಗಳು ಬಂದಾಗ ಸ್ವಲ್ಪ ವಿಚಲಿತನಾಗುತ್ತಿದ್ದ. ಎಂದಿಗೂ "ನೀವೇನು ಬೇಕಾದ್ರೂ ಮಾಡ್ಕೊಳ್ರೋ’ ಎಂದು ರಗ್ಗು ಹೊದ್ದು ಮಲಗಿಕೊಂಡವನಲ್ಲ. ಅಂದೂ ರಾತ್ರಿ ಎರಡೂವರೆವರೆಗೆ ಚರ್ಚಿಸಿದೆವು. ನಾವು ಇದ್ದದ್ದು ಮೊದಲ ಅಂತಸ್ತಿನಲ್ಲಿ (ಆ ಮನೆಗೆ ಇದ್ದದ್ದು ಒಂದೇ ಅಂತಸ್ತು ಬಿಡಿ). ಅಂತೂ ಮಲಗಲೇ ಬೇಕೆಂದು ನಿರ್ಧರಿಸಿ ತಾರಸಿಯ ಬಯಲಿನಲ್ಲಿ ನಾಲ್ಕೂ ಮಂದಿ ಮಲಗಿಕೊಂಡೆವು.</p>
<p>ಬೆಳಗ್ಗೆ ಎದ್ದಾಗ ಎಂಟೂವರೆ. ಅಂದು ಬಿಸಿಬೇಳೇಬಾತ್ ನಮ್ಮ ಮೆನು. ಜತೆಗೆ ಪಕೋಡವಿರಲಿಲ್ಲ. ಬೆಳಗ್ಗೆ ಎದ್ದವನೇ ಸಿಗದಾಳ್ ಹೋಗಿ ಬೀನ್ಸ್, ಕ್ಯಾರೆಟ್ ತಂದ. ಅಷ್ಟರಲ್ಲಿ ಈರುಳ್ಳಿ ಬಿಡಿಸಲು ಹರ್ಷ ಎದ್ದು ಬಂದ. ಬಿಸಿಬೇಳೆ ಭಾತ್ ಮುಗಿಯುವಷ್ಟರಲ್ಲಿ ನವೀನ, ಎರಡು ಬಾರಿ ಬಂದ ಪತ್ರಿಕೆಗಳನ್ನೆಲ್ಲಾ ತಿರುವಿ ಹಾಕಿ ಮಿಸ್ ಆದದ್ದು ಎಷ್ಟು ? ಮಿಸ್ ಮಾಡಿದ್ದು ಎಷ್ಟು ? ಎಂದು ಪಟ್ಟಿ ಮಾಡಿದ್ದ. ನಮಗೆ ಒಂದು ಯುಡಿಆರ್ (ಅಪರಿಚಿತನ ಆತ್ಮಹತ್ಯೆ ಎಂದು ಹೇಳಲು ಪೊಲೀಸರು ಬಳಸುವ ಕೋಡ್) ಮಿಸ್ ಆಗಿತ್ತು. ಅಂಥದ್ದೇ ಚಿಕ್ಕಪುಟ್ಟ ಎರಡು ಕಳ್ಳತನಗಳು ನಮ್ಮಲ್ಲೂ ಬಂದಿದ್ದವು.</p>
<p>ಆದರೆ ಯುಡಿಆರ್ ತಲೆ ಕೆಡಿಸಿದ್ದು ನಿಜ. ಅದೂ ನನ್ನ ಎದುರಿನ ಗುಂಪಿನವರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತಲೆ ಕೆಡಿಸಿಕೊಳ್ಳಲು ಮೂಲ ಕಾರಣ.  ಬಿಸಿಬೇಳೆಭಾತ್ ನ ತರಕಾರಿಗಳು ಗಂಟಲಿನಿಂದ ಕೆಳಗಿಳಿಯಲಿಲ್ಲ. ನವೀನ ಆಗಲೇ ಲೆಕ್ಕ ಶುರು ಮಾಡಿದ್ದ. ಹರ್ಷನೂ ಸುಮ್ಮನಿರಲಿಲ್ಲ. ನಾನು ಭಾತ್ ಬಡಿಸೋದರಲ್ಲಿ ನಿರತನಾಗಿದ್ದೆ.</p>
<p>ಕೊನೆಗೆ ಒಂದು ನಿರ್ಧಾರಕ್ಕೆ ಬಂದೆವು. ಅಷ್ಟರಲ್ಲಿ ನವೀನನ ಫೋನ್ ಬೊಬ್ಬೆ ಹಾಕತೊಡಗಿತು. ಬಹಳ ಬೇಸರದಿಂದ ತೆಗೆದುಕೊಂಡವನೇ ...ಹೌದಾ...ಎಲ್ಲಿ...? ನಿನ್ನೆಯೇ...? ಕಾರಣವೇನು...?’ ಹೀಗೆ ಪ್ರಶ್ನೆಗಳ ಸುರಿಮಳೆಯನ್ನು ಹಾಕಿದ. ನಮಗೆಲ್ಲರಿಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಎಲ್ಲಾ ಮುಗಿದ ಮೇಲೆ ಫೋನ್ ಇಟ್ಟವನೇ ಬಟ್ಟಲಿನತ್ತ ಬಂದ.</p>
<p>ಏನಯ್ಯಾ...? ಎಂದು ಕೇಳಿದೆ. ಒಂದು ಮರ್ಡರ್ ಆಗಿದೆಯಂತೆ ಎಂದ. ಎಲ್ಲಿ? ಎಂದು ಕೇಳಿದ್ದಕ್ಕೆ ಬಸವನಗುಡಿ ಪೊಲೀಸ್ ಸ್ಟೇಷನ್ ಲಿಮಿಟ್ಸ್ ಎಂದು ಉತ್ತರಿಸಿದ. ಏನಾದ್ರೂ ಕ್ಲೂ ? ಎಂದು ಕೇಳಿದ್ದಕ್ಕೆ ಹೊಸತೊಂದು ಸ್ಕೂಪ್ ಸಿಕ್ಕಿದ ಸಂಭ್ರಮದಲ್ಲಿ ನವೀನ, "ಅದೇನೂ ಗೊತ್ತಿಲ್ಲ. ಹುಡುಕಬೇಕು, ಈಗಲೇ ಹೊರಡೋಣ’ ಎಂದು ಅಪ್ಪಣೆ ಹೊರಡಿಸಿದ. ನಾವೂ ತಿರುಗೇಟು ನೀಡಲು ಕಾಯುತ್ತಿದ್ದಕ್ಕೆ ಸಿಕ್ಕಿದ್ದೇ ಸೀರುಂಡೆ ಎನ್ನುತ್ತಾ ಹೊರಟೆವು.</p>
<p>ಪಾಪ, ಸಿಗದಾಳನೊಂದಿಗೆ ಕಳೆಯಬೇಕಾದ ಭಾನುವಾರಕ್ಕೆ ಖೋತಾ ಆಯಿತು. ಮನೆಯಿಂದ ನಡೆದು ಹೊರಟ ನಾವು ಯಡಿಯೂರು ಸರ್ಕಲ್‌ನ ಬಳಿ ಮತ್ತೊಂದು ಕೆಲಸ ಮುಗಿಸಿಕೊಂಡು ಅಲ್ಲಿನ ಕೆನರಾ ಬ್ಯಾಂಕ್ ಕಚೇರಿ ಎದುರು ನಿಂತೆವು. ನಮಗೆ ಬಂದ ಮಾಹಿತಿ ಪ್ರಕಾರ ಅದರ ಮಹಡಿ ಮೇಲೆ ಕೊಲೆಯಾಗಿ ಬಿದ್ದ ಹೆಣವಿತ್ತು. ಹೆಂಗಸೋ, ಗಂಡಸೋ ಗೊತ್ತಿಲ್ಲ. ಯಾವಾಗ ಕೊಲೆಯಾದದ್ದು ಎಂಬುದೂ ಸ್ಪಷ್ಟವಾಗಿ ತಿಳಿದಿರಲಿಲ್ಲ.</p>
<p>ಅಂದು ಭಾನುವಾರವಲ್ಲವೇ? ಬ್ಯಾಂಕ್‌ಗೆ ರಜ. ಅವರೋ ಬರೀ ಬ್ಯಾಂಕ್ ಬಾಗಿಲಿಗೆ ಬೀಗ ಜಡಿದಿರಲಿಲ್ಲ. ಅದರ ಗೇಟಿಗೂ ಬೀಗ ಜಡಿದಿದ್ದರು. ಜತೆಗೆ ಹಳೆ ಕಟ್ಟಡ. ಮೇಲೆ ಹತ್ತುವುದು ಹೇಗೆ? ಹೆಣವನ್ನು ಪತ್ತೆ ಹಚ್ಚುವುದು ಹೇಗೆ ? ಎಂದೆಲ್ಲಾ ಪ್ರಶ್ನೆಗಳೊಡನೆ ನಮ್ಮ "ಚಾರಣ’ದ ಮಾರ್ಗ ಗುರುತಿಸಿಕೊಂಡೆವು. ನವೀನ ಹತ್ತಲು ಸಿದ್ಧನಾದ. ನಾವು ಮೇಲಿಂದ ಅವನು ಕೊಡೋ ಡೀಟೇಲ್ಸ್ ನ್ನ ಸ್ಟೋರ್ ಮಾಡಿಕೊಳ್ಳೋಕೆ ಸಿದ್ಧವಾದೆವು.</p>
<p>ಕೊನೆಗೂ ಮೇಲೆ ಹತ್ತಿ ನೋಡಿದರೆ....ಇಡೀ ಮಹಡಿ ಖಾಲಿ ಖಾಲಿ. ಅಲ್ಲಿ ಹೆಣವಿರಲಿ, ಅದರ ಬಟ್ಟೆಯೂ ಇರಲಿಲ್ಲ ! ಬೇಸ್ತು ಬಿದ್ದದ್ದು ನಾವು...ಬೇಸರದಿಂದ ಕಟ್ಟಡದ ಹಿಂದೆ ಇಣುಕಿದರೆ ಅಲ್ಲೊಂದು ಹೆಣವಿತ್ತು..ಅದೂ ಅಪರಿಚಿತವೇ... ನಮಗೆ ಆಶ್ಚರ್ಯ. ಕೊನೆಗೂ ಹೆಣ ನಮ್ಮ ಕೈ ಬಿಟ್ಟಿರಲಿಲ್ಲ....!’</p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಗಳ ಪುಟಗಳು-ಐದು]]></title>
<link>http://chendemaddale.wordpress.com/?p=111</link>
<pubDate>Sun, 23 Mar 2008 15:20:05 +0000</pubDate>
<dc:creator>navada</dc:creator>
<guid>http://chendemaddale.wordpress.com/?p=111</guid>
<description><![CDATA[ಒಂದು ವಾರದಿಂದ ನಮ್ಮ ಐದನೇ ಕಂತನ್ನು ಬರೆಯಬ]]></description>
<content:encoded><![CDATA[<p>ಒಂದು ವಾರದಿಂದ ನಮ್ಮ ಐದನೇ ಕಂತನ್ನು ಬರೆಯಬೇಕೆಂದುಕೊಂಡಿದ್ದೆ. ಸಮಯದ ಕೊರತೆ ಮುಂದೂಡುತ್ತಿತ್ತು. ಇವುಗಳನ್ನು ಬರೆದದ್ದು ಸುಮ್ಮನೆಂದು. ಆದರೆ ಬರುತ್ತಿರುವ ಪ್ರತಿಕ್ರಿಯೆ ಚೆನ್ನಾಗಿದೆ. ಪ್ರಾಮಾಣಿಕತೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಸುಮ್ಮನೆ ಎದುರಿನ ಪಾತ್ರಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಿದ್ದೇನೆ. ಅದು ಮೈದುಂಬಿಕೊಂಡು ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ.</p>
<p>ನಾನು, ಹರ್ಷ, ನವೀನ್ ಅಪರಾಧ ವರದಿಗಾರರಾಗಿದ್ದೆವು ಎಂದು ಮೊದಲೇ ಹೇಳಿದ್ದೆ. ಆಗಿನ ಪರಿಸ್ಥಿತಿಯನ್ನು ಉಲ್ಲೇಖಿಸಬೇಕು. ರೌಡಿಗಳ ಗ್ಯಾಂಗ್‌ವಾರ್‌ನಂತೆಯೇ ನಮ್ಮಲ್ಲೂ ಸುದ್ದಿಗಾಗಿ "ಬೌದ್ಧಿಕ ವಾರ್’ ನಡೆಯುತ್ತಿತ್ತು. ನಾವೂ ಮೂರು ಮಂದಿ ಒಂದು ಗುಂಪು. ನಮ್ಮ ವಿರುದ್ಧವಾಗಿ ಇಂಗ್ಲಿಷ್ ಪೇಪರ್‌ವೊಂದರ ವರದಿಗಾರನ ನೇತೃತ್ವದಲ್ಲಿ ಮತ್ತೊಂದು ಗುಂಪಿತ್ತು. ಅವರೆಲ್ಲೂ ಬೆಂಗಳೂರಿನ ಮೂಲ ನಿವಾಸಿಗಳು. ನಾವು ಹೊರಗಿನಿಂದ ಬಂದವರೆಂಬ ಭಾವವೂ ಇದಕ್ಕೆ ಕಾರಣವಾಗಿತ್ತು. ಅಂಥದೊಂದು ಸ್ಥಿತಿಯನ್ನು ಆ ವರದಿಗಾರರು ನಿರ್ಮಿಸಿದ್ದರು.</p>
<p>ಈ ಜಿದ್ದಾಜಿದ್ದಿ ಕಾಳಗ ರೊಟೀನ್ ಸುದ್ದಿಗಳಿಗೆ ಅನ್ವಯಿಸುತ್ತಿರಲಿಲ್ಲ. ಬೆಳಗ್ಗೆ ೧೧ ರ ಸುಮಾರಿಗೆ ಆಯುಕ್ತರ ಕಚೇರಿಯ ಮಾಧ್ಯಮ ಕೋಣೆಯಲ್ಲಿ ಕುಳಿತು ಗೀಚಿಕೊಳ್ಳುವುದು ಸಾಮಾನ್ಯವಾದದ್ದು. ಈ ಸಂಜೆಯ ರಾಮಸ್ವಾಮಿಯವರು ಬೆಳಗ್ಗೆ ೧೦ ಕ್ಕೇ ಬಂದು ಎಲ್ಲ ಸುದ್ದಿಗಳನ್ನು ಪಟ್ಟಿ ಮಾಡಿಕೊಂಡು ಮಧ್ಯಾಹ್ನ ೧ ಕ್ಕೆ ಎಲ್ಲರಿಗೂ ಡಿಕ್ಟೇಷನ್ ಕೊಡುತ್ತಿದ್ದರು. ಸಾಮಾನ್ಯವಾಗಿ ಒಂದು ಆತ್ಮಹತ್ಯೆ, ಎರಡು ಕಳ್ಳತನ, ಒಂದೆರಡು ಬಂಧನ ಇರುತ್ತಿತ್ತು. ಒಂದೊಂದು ದಿನ ಏನೂ ಇಲ್ಲ.</p>
<p>ಕೆಲವೊಮ್ಮೆ ಮಹತ್ವದ ಆತ್ಮಹತ್ಯೆಯೇನಾದರೂ ನಡೆದಿದ್ದರೆ ಬೆಳಗ್ಗೆಯೇ ಗೊತ್ತಾಗುತ್ತಿತ್ತು. ಆಗ ಮೂರು ಮಂದಿಯಲ್ಲಿ ಯಾರಾದರೊಬ್ಬರು ಶವ ಬರೋ ಆಸ್ಪತ್ರೆಗೆ ಹೋಗಿ ಶವಾಗಾರದ ಮುಂದೆ ನಿಲ್ಲುತ್ತಿದ್ದೆವು. ಅಲ್ಲೆಲ್ಲಾ ಒಂದೊಂದು ಸುದ್ದಿ ಮೂಲಗಳು ಇದ್ದುದ್ದರಿಂದ ಶವಾಗಾರಕ್ಕೆ ಬರೋ ಹೆಣಗಳ ಬಗ್ಗೆ ಡೀಟೇಲ್ಸ್ ಸಿಗುತ್ತಿತ್ತು. ಓಡಿ ಹೋಗುತ್ತಿದ್ದೆವು. ಶವ ಕೊಯ್ದು ವಿವರ ಗೊತ್ತಾಗೋದು ಒಂದು ಕಥೆ. ಆದರೆ ಅಲ್ಲಿಗೆ ಬಂದ ಸತ್ತವರ ಬಂಧುಗಳನ್ನು ಮಾತನಾಡಿಸಿ "ಆತ್ಮಹತ್ಯೆಗೆ ಆಂಗಲ್’ ಹುಡುಕಿಕೊಳ್ಳುತ್ತಿದ್ದೆವು.<br />
 <br />
ನಾವೇ ಬುದ್ಧಿವಂತರೆಂದಲ್ಲ. ನಾವು ಹೋದ ಸುದ್ದಿ ಬೇರೆಯವರಿಗೂ ತಿಳಿಯುತ್ತಿತ್ತು. ನಾವು ಹೋಗಿ ಪಟ್ಟ ಪರಿಶ್ರಮಕ್ಕೆ ಫಲ (ಹೊಸ ಆಯಾಮ) ಸಿಕ್ಕರೆ ಮತ್ತೆ ಕಮೀಷನರ್ ಕಚೇರಿಗೇ ಬರುತ್ತಿರಲಿಲ್ಲ. ಊಟ ಮುಗಿಸಿ ನೇರವಾಗಿ ಕಚೇರಿಗೆ ಬರುತ್ತಿದ್ದೆವು. ಬಹಳ ಸ್ಕೂಪ್ ಎನ್ನೋದೇನಾದರೂ ಸಿಕ್ಕರೆ "ಗ್ರೂಪ್ ಕಾಲ್ಸ್’ ಬಿಟ್ಟರೆ (ನಮ್ಮ ಗುಂಪಿನವರಿಗೆ) ಇನ್ನಾರಿಗೂ ಸಿಕ್ಕುತ್ತಿರಲೇ ಇಲ್ಲ. ಬಹಳ ಗೌಪ್ಯವಾಗಿಯೇ ಕಾರ್‍ಯಾಚರಣೆ ಮುಗಿಸುತ್ತಿದ್ದೆವು.</p>
<p>ನಾನು ಆಗ ತಾನೇ ಪತ್ರಿಕೋದ್ಯಮಕ್ಕೆ ಆಗಮಿಸಿದವನು. ಮೊದಲು (ನನ್ನದೇ ಚರಿತ್ರೆ ಜಾಸ್ತಿಯಾಗುತ್ತೆ ಅಂತ ಅಂದುಕೊಳ್ಳಬೇಡಿ) ಹೊಸದಿಗಂತ ಪತ್ರಿಕೆಯಲ್ಲಿ ಅಪರಾಧ ವರದಿಗಾರನಾಗಿ ಸೇರಿಕೊಂಡೆ. ಇದು ದಿನಪತ್ರಿಕೆಯ ಇತಿಹಾಸ. ಅದಕ್ಕಿಂತ ಮೊದಲು ಮಾಸ ಪತ್ರಿಕೆಯಲ್ಲಿದ್ದೆ. ಆಕಾಶವಾಣಿಯ ಯುವವಾಣಿಯಲ್ಲಿ ಒಂದಷ್ಟು ಕಾರ್‍ಯಕ್ರಮ ನೀಡುತ್ತಿದ್ದೆ. ಆಕಾಶವಾಣಿ ಗೆಳೆಯರು ಬೆಳೆಸಿದ ಬಗೆ ನಿಜಕ್ಕೂ ಖುಷಿಯಾಗುವಂಥದ್ದು. ಇದನ್ನೆಲ್ಲಾ ಉಲ್ಲೇಖಿಸುತ್ತಿರುವುದಕ್ಕೆ ಪ್ರಮುಖ ಕಾರಣವಿಷ್ಟೇ.</p>
<p>ನಾವೂ ಮೂರು ಮಂದಿಯಷ್ಟೇ ಅಲ್ಲ ; ಬ್ರಹ್ಮಚಾರಿಗಳಾಗಿ ಇದ್ದ ಎಂಟೂ ಮಂದಿ ಯಾವುದೋ ಊರಿನಿಂದ ಬದುಕನ್ನು ಹುಡುಕಿಕೊಂಡು ಬಂದವರು. ಹುಲ್ಲುಕಡ್ಡಿಯಷ್ಟು ಸಿಕ್ಕ ಅವಕಾಶಗಳನ್ನೆಲ್ಲಾ ತಮ್ಮದಾಗಿಸಿಕೊಳ್ಳುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದವರು. ಹಾಗಾಗಿ ಹಾಗೆ ಹುಲ್ಲುಕಡ್ಡಿಯನ್ನು ತೋರಿಸಿದ ಬಹಳಷ್ಟು ಮಂದಿಯಿದ್ದಾರೆ. ಅವರೆಲ್ಲರಿಗೂ ನಿಜಕ್ಕೂ ಋಣಿಯಾಗಿರಲೇಬೇಕು.</p>
<p>ಹೀಗೆ ಮೊದಲ ದಿನ ಕಮೀಷನರ್ ಕಚೇರಿಗೆ ಹೋದೆ. ಅಲ್ಲಿದ್ದ ಪಂಟರ್ (ಹಿರಿಯ ವರದಿಗಾರರು)ಗಳೆಲ್ಲಾ ನನ್ನನ್ನು ಮಿಕಿಮಿಕಿ ನೋಡತೊಡಗಿದರು. ಯಾರೊಡನೆ ಮಾತು ಆರಂಭಿಸುವುದೆಂದು ಯೋಚಿಸತೊಡಗಿದೆ. ಪಕ್ಕದಲ್ಲೇ ಕುಳಿತ ಒಬ್ಬರೊಡನೆ ಮೆಲ್ಲಗೆ ರಾಗ ತೆಗೆದೆ. ನಂತರ ಅವರು ನನ್ನನ್ನು ಎಲ್ಲರಿಗೂ ಪರಿಚಯಿಸಿದರು. ಅಷ್ಟರಲ್ಲಿ ನವೀನ್, ಹರ್ಷ ಸಿಕ್ಕರು. ಪರಿಚಯಿಸಿಕೊಂಡೆ. ಇವರಿಬ್ಬರೂ ಆಗಲೇ ಪಂಟರ್ ಗಳಾಗಿದ್ದರು.</p>
<p>ನನಗೂ ಅಂಥವರ ಆಶ್ರಯ ಬೇಕಿತ್ತು. ನನಗೆ ಯಾವುದೇ ಸುದ್ದಿಮೂಲಗಳಿರಲಿಲ್ಲ. ಇವರೇ ನನ್ನ ಸುದ್ದಿದಾತರು. ಹಾಗಾಗಿ ನಿತ್ಯವೂ ಸಂಜೆಯೊಮ್ಮೆ, ರಾತ್ರಿಯೊಮ್ಮೆ ಫೋನ್ ಮಾಡಿ ಸುದ್ದಿ ಪಡೆಯುತ್ತಿದ್ದೆ. ಹೇಗೋ ಸುದ್ದಿ ಹೊಂದಿಸಿಕೊಳ್ಳುವುದನ್ನು ಕಲಿತುಕೊಂಡೆ. ಕೆಲವೇ ದಿನಗಳಲ್ಲಿ ಅವರ ಸುದ್ದಿ ವಾರ್‌ನ ಗುಂಪಿನ ಸದಸ್ಯನಾದೆ.</p>
<p>ನಮ್ಮ ಎದುರಿನ ಗುಂಪಿಗೆ ನಿತ್ಯವೂ ಯಾವುದಾದರೊಂದು ಸುದ್ದಿ ಮಿಸ್ ಮಾಡಬೇಕೆಂಬುದೇ ನಮ್ಮ ಪ್ರತಿಜ್ಞೆ. ಅದಕ್ಕಾಗಿ ಲೇಟೆಸ್ಟ್ ಅಪರಾಧಕ್ಕಾಗಿ ಹದ್ದಿನಂತೆ ಕಾಯುತ್ತಿದ್ದೆವು. ನನ್ನ ಪತ್ರಿಕೆಯ ಡೆಡ್ ಲೈನ್ ಬೇಗ ಇತ್ತು. ಜತೆಗೆ ಮನೆ ದೂರ. ಹಾಗಾಗಿ ೧೦ ರಷ್ಟೊತ್ತಿಗೆ ಕಾರ್ಪೋರೇಷನ್ ತಲುಪಿಕೊಳ್ಳುತ್ತಿದ್ದೆ. ಇವರಿಬ್ಬರಿಗೆ ಹಕ್ಕ-ಬುಕ್ಕರೆನ್ನುತ್ತಿದ್ದರು. ಇಂಥ ಹರ್ಷ ಮತ್ತು ನವೀನ್ ಇಬ್ಬರೂ ನಿಧಾನವಾಗಿ ನಡೆದುಕೊಂಡು ಮನೆ ತಲುಪುವಾಗ ಮಧ್ಯರಾತ್ರಿ ಒಂದನ್ನು ಮೀರುತ್ತಿತ್ತು. ಆದರೂ ಮುಖದಲ್ಲೊಂದು ಗೆದ್ದ ನಗೆ, ಉತ್ಸಾಹ ಇತ್ತು.</p>
<p>ನವೀನ್ ಯಾವಾಗಲೂ ಹೇಳುತ್ತಿದ್ದ "ನಾಳೆ ಒಂದು ಸುದ್ದಿ ಮಿಸ್ಸಲ್ಲಾ...’. ಬೆಳಗ್ಗೆ ಎದ್ದ ಕೂಡಲೇ ಮೊದಲು ನೋಡುತ್ತಿದ್ದುದು ಪತ್ರಿಕೆಯ ಅಪರಾಧ ಸುದ್ದಿಗಳನ್ನು. ಯಾರಿಗೆ ಯಾರು ಚಕ್ ಕೊಟ್ಟೆವು ಎಂಬುದು ಎಸ್‌ಎಸ್‌ಎಲ್‌ಸಿ ಫಲಿತಾಂಶದಂತೆ ಪ್ರಕಟವಾಗುತ್ತಿತ್ತು. ನಮ್ಮದು ಮಿಸ್ ಆಗಿದ್ದರೆ ಕೈ ಕೈ ಹಿಸುಕಿಕೊಳ್ಳುತ್ತಿದ್ದೆವು. ನಮ್ಮ ಎದುರಿನ ಗುಂಪಿಗೆ ಮಿಸ್ ಆಗಿದ್ದರೆ ವಿಜಯೋತ್ಸವ. ಅಂದು ಕಮೀಷನರ್ ಕಚೇರಿಗೆ ಎಂದಿಗಿಂತ ಅರ್ಧಗಂಟೆ ಮೊದಲೇ ಬರುತ್ತಿದ್ದೆವು, ಎದುರಿನ ಗುಂಪಿನವರ ಪ್ರತಿಕ್ರಿಯೆಯ ವೀಕ್ಷಿಸಲು.</p>
<p>ಹೀಗೆ ಸ್ಕೂಪ್‌ಗೆ ಹಾತೊರೆಯುತ್ತಿದ್ದವರಿಗೆ ಸಿಕ್ಕ ದೊಡ್ಡ ಸ್ಕೂಪ್‌ನ್ನು ದಕ್ಕಿಸಿಕೊಂಡ ಬಗೆ ನಿಜಕ್ಕೂ ರೋಚಕ. ಎಲ್ಲೋ ಹೆಣ ಬಿದ್ದಿದೆ ಎಂದು ಹುಡುಕಲು ಹೋದವರಿಗೆ, ಜೀವಂತ ಶವದಂತಾಗಿದ್ದವ ಸಿಕ್ಕಿದ. ಅದೇ ಸ್ಕೂಪ್...!</p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಗಳ ಪುಟಗಳು-ನಾಲ್ಕು]]></title>
<link>http://chendemaddale.wordpress.com/2008/03/15/%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%9a%e0%b2%be%e0%b2%b0%e0%b2%bf%e0%b2%af-%e0%b2%aa%e0%b3%81%e0%b2%9f%e0%b2%97%e0%b2%b3%e0%b3%81-%e0%b2%a8%e0%b2%be%e0%b2%b2%e0%b3%8d%e0%b2%95/</link>
<pubDate>Sat, 15 Mar 2008 16:51:04 +0000</pubDate>
<dc:creator>navada</dc:creator>
<guid>http://chendemaddale.wordpress.com/2008/03/15/%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%9a%e0%b2%be%e0%b2%b0%e0%b2%bf%e0%b2%af-%e0%b2%aa%e0%b3%81%e0%b2%9f%e0%b2%97%e0%b2%b3%e0%b3%81-%e0%b2%a8%e0%b2%be%e0%b2%b2%e0%b3%8d%e0%b2%95/</guid>
<description><![CDATA[ಇಂಥದೊಂದು ಮನೆಯ ಕತ್ತಲ ಕೋಣೆಯ ಮೇಲೆ ಮತ್ತೊ]]></description>
<content:encoded><![CDATA[<p>ಇಂಥದೊಂದು ಮನೆಯ ಕತ್ತಲ ಕೋಣೆಯ ಮೇಲೆ ಮತ್ತೊಂದು ಅಟ್ಟವಿತ್ತು. ಅದರಲ್ಲಿ ಮತ್ತೆರಡು ಕೋಣೆಯಿತ್ತು. ಅದರಲ್ಲೊಂದರಲ್ಲಿ ದೆವ್ವವಿದೆ ಎಂದು ಭಯ ಹುಟ್ಟಿಸಲಾಗಿತ್ತು. ಯಾರೂ ಹೋಗಲು ಸಿದ್ಧರಿರಲಿಲ್ಲ. ಅಲ್ಲಿಗೆ ಏಳು ಕೋಣೆಗಳ ಕಥೆ ಮುಗಿಯಿತು. ಇಂಥ ಸುಂದರವಾದ ಮನೆಯನ್ನು ಕೊಳ್ಳಲು ನಮಗೆ ಸಹಕರಿಸಿದವರೆಷ್ಟು ಮಂದಿ ? ಅವರಿಗೆಲ್ಲಾ ನಮಸ್ಕಾರ.</p>
<p>ಮತ್ತೆ ಟ್ರ್ಯಾಕ್‌ಗೆ ಬರುತ್ತೇನೆ. ಈಗಾಗಲೇ ಸ್ಥೂಲವಾಗಿ ಹೇಳಿದ್ದೇನೆ. ಈ ಮನೆಯ ಮುಂಗಡ ಹಣಕ್ಕೆ ನವೀನ್ ಮತ್ತು ಹರ್ಷ ಕಷ್ಟಪಟ್ಟ ಬಗೆಯನ್ನು. ಆಗ ಎಂದರೆ ೧೯೯೮ ರಲ್ಲಿ, ಕೇವಲ ಹತ್ತು ವರ್ಷಗಳ ಅಂತರದ ಮಾತು. ದೊಡ್ಡ ವ್ಯತ್ಯಾಸವಲ್ಲ ಎನಿಸುತ್ತೆ. ನಮ್ಮಪ್ಪನ ಕಾಲದ ಮಾತನ್ನು ಕೇಳಿದವರಿಗೆ ಈ ಕಾಲ ದೊಡ್ಡ ಅಂತರವಲ್ಲ. ಆದರೆ ಈ ಹತ್ತು ವರ್ಷಗಳಲ್ಲೇ ಜೀವನ ಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.</p>
<p>ಇದೆಲ್ಲಾ ಒತ್ತಟ್ಟಿಗಿರಲಿ. ಮನೆಯ ಮೇಲೆ ಮೋಹಿತರಾದ ನವೀನ್ ಮತ್ತು ಹರ್ಷ ಕುಳಿತು ಮುಂಗಡ ಹಣ ಹೊಂದಿಸಲು ಆಲೋಚಿಸತೊಡಗಿದರು. ಸಿಕ್ಕ ಮಾರ್ಗಗಳು ಕೆಲವೇ ಕೆಲವು. ಟೈಲರ್ ರಮೇಶ್ ಮತ್ತೆ ಸಹಾಯಕ್ಕೆ ಬಂದರು, ಒಂದಷ್ಟು ಹಣ ಕೊಟ್ಟರು. ನವೀನ್ ಒಂದಿಷ್ಟು ಹಣ ತಂದ. ಹರ್ಷನೂ ಹಣ ಹೊಂದಿಸಲು ಶತ ಪ್ರಯತ್ನ ಮಾಡಿದ. ಅವನ ಗೆಳತಿ ಪತ್ರಕರ್ತೆ ನೀಳಾ ತನ್ನ ಮಹತ್ವದ ಕೆಲಸಕ್ಕೆಂದು ಇಟ್ಟುಕೊಂಡ ಹತ್ತು ಸಾವಿರ ರೂ. ಗಳನ್ನು ಸಹಾಯವಾಗಿ ಕೊಟ್ಟಳು. ನವೀನ್ ಮತ್ತೆ ಬ್ಯಾಂಕ್‌ಗೆ ಲೋನ್‌ಗೆ ಅರ್ಜಿ ಹಾಕಿದ. ಇನ್ನೂ ಹೀಗೇ...ಯಾರ್ ಯಾರೋ ಸಹಾಯ ಮಾಡಿದರು ;ಸಂಬಂಧಿಕರನ್ನು ಬಿಟ್ಟು. </p>
<p>ಜತೆಗೆ ಎಲ್ಲವೂ ಸುಖಾಂತಗೊಳ್ಳುತ್ತದೆ ಎನ್ನುವಾಗ ನಾವು ಪ್ರವೇಶವಾಗಿದ್ದು. ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಒಮ್ಮೆ ಕುಳಿತು ಚರ್ಚಿಸುತ್ತಿದ್ದಾಗ ಹೀಗೆ ಲೋಕಾಭಿರಾಮಕ್ಕೆ ನಾವ್ಯಾಕೆ ಒಟ್ಟಿಗೆ ಇರಬಾರದೆಂದೆನಿಸಿತು. ಆ ಕುರಿತು ಪ್ರಸ್ತಾಪವೂ ಆಯಿತು. ನಾನಾಗ "ಅರವಿಂದ ಸಿಗದಾಳ್‌ನೊಂದಿಗೆ ಚರ್ಚಿಸಿ ತಿಳಿಸುವೆ’ ಎಂದು ಹೇಳಿದ್ದೆ. ಅವನಿಗೆ ಕಚೇರಿಗೆ ಕೊಂಚ ದೂರವಾಗುತ್ತಿತ್ತೇನೋ ? ನನಗೆ ಇವರೊಂದಿಗೆ ಸೇರಿದ್ದರೆ ನನ್ನ ಕೆಲಸಕ್ಕೆ ಹತ್ತಿರವಾಗುವುದಂತೂ ಖಚಿತವಾಗಿತ್ತು.</p>
<p>ನನಗೆ ಊಟವೆಂದರೆ ಕೊಂಚ ಇಷ್ಟ. ಬೇಕಾದ್ರೆ ತಿಂಡಿಪೋತ ಎಂದುಕೊಳ್ಳಿ, ಬೇಸರವಿಲ್ಲ. ನಾನು ನನ್ನ ದೊಡ್ಡಮ್ಮ (ನನ್ನನ್ನು ಸಾಕಿದವರು)ನ ಆಶ್ರಯದಲ್ಲಿ ಬೆಳೆದೆ. ಅವರು ಎಂದಿಗೂ ನನಗೆ ತಿಂಡಿಗೆ ಕಡಿಮೆ ಮಾಡಲಿಲ್ಲ. ನಮ್ಮ ಮನೆಯಲ್ಲಿ ಉಳಿದ ಅಕ್ಕ, ಅಣ್ಣ-ತಮ್ಮನಿಗೆ ಹಸಿವು ಇಂಗಿಸುವುದು ಕಷ್ಟವೆನಿಸಿದ್ದರೂ ನನಗೆ ಕೊರತೆಯಿರಲಿಲ್ಲ. ಕಾಫಿ-ಟೀ ಕುಡಿಯುವ ಅಭ್ಯಾಸಕ್ಕೆ ಗುಡ್‌ಬೈ ಹೇಳಿ ಅದರ ಬದಲೆಲ್ಲಾ ಹೊಟ್ಟೆಯಲ್ಲಿ ತಿಂಡಿ-ಊಟಕ್ಕೇ ಜಾಗ ಮಾಡಿಕೊಂಡೆ. ಹಾಗಾಗಿ ತಿಂಡಿಪೋತ !</p>
<p>ಊಟ ಇಷ್ಟವಾದ ಮೇಲೆ ಅಡುಗೆಯ ಬಗ್ಗೆಯೂ ಒಲವು. ಕೊಂಚ ಅಡುಗೆ ಮಾಡಲು ಕಲಿತಿದ್ದೆ. ಹಾಗಾಗಿ ನಮ್ಮ ಮನೆಯಲ್ಲಿ ಆಗಾಗ್ಗೆ ಪ್ರಯೋಗಗಳು ನಡೆಯುತ್ತಿದ್ದವು. ಭಾನುವಾರದಂದು ಫಲಾವು, ಬಿಸಿಬೇಳೆಬಾತ್ ನಮ್ಮನೆ ಒಳಗೆ ಕಾಲಿಡುತ್ತಿದ್ದವು. ಅದು ಹೇಗಿರುತ್ತಿತ್ತೋ ? ತಿಂದ ನವೀನ್, ಸಿಗದಾಳ್, ಹರ್ಷನಿಗೆ ಕೇಳಬೇಕು. ಈ ಹಿನ್ನೆಲೆಯಲ್ಲಿ ಗೆಳೆಯರನ್ನೂ ಕರೆದು ಹರಟುತ್ತಾ ಊಟ ಮಾಡುತ್ತಿದ್ದೆವು.</p>
<p>ಆದೂ ರಾತ್ರಿಯೇ. ನವೀನ್ ಮತ್ತು ಹರ್ಷ ನನ್ನೊಡನೆ ಮನೆಗೆ ಬಂದರು. ಮಾಡಿದ್ದುಣ್ಣೋ ಮಾರಾಯಗಳಾ ಎಂದು ಎಲ್ಲರೂ ಊಟ ಮಾಡಿದೆವು. ಆಮೇಲೆ ನವೀನ್ ಮತ್ತು ಹರ್ಷ ಇಬ್ಬರೂ ನಮಗೆ ಅಹ್ವಾನವಿತ್ತರು. ಸಿಗದಾಳ್ ತಿಳಿಸುವುದಾಗಿ ಹೇಳಿದ. ಮತ್ತೊಂದು ದಿನ ನಾವು ಎನ್. ಆರ್. ಕಾಲೋನಿ ಬೇಕರಿ ಬಳಿ ನಿಂತು ಚರ್ಚಿಸಿದೆವು. ಸಿಗದಾಳ್ ಒಪ್ಪಿಕೊಂಡ. "ಎಲ್ಲರೊಟ್ಟಿಗೆ ಇರೋಣ. ಬದುಕಿನ ಅನುಭವ ಡಿಫರೆಂಟಾಗಿರುತ್ತೆ’ ಎಂದ. ಆಗಲೂ ಮುಂಗಡ ಹಣದ ಸಮಸ್ಯೆ ಎದುರಾಯಿತು. ನನ್ನಲ್ಲಿರಲಿಲ್ಲ. ನನ್ನ ಪಾಲಿನದೂ ಅವನೇ ಕೊಡುವುದಾಗಿ ಹೇಳಿದ. ನಾನು ಒಪ್ಪಿಗೆ ಸೂಚಿಸಿದೆ.</p>
<p>ಇನ್ನು ಮನೆ ನೋಡುವ ಕೆಲಸ. ಬಾಳ ಸಂಗಾತಿಯನ್ನು ಆಯ್ಕೆ ಮಾಡುವಷ್ಟೇ ಸಂಭ್ರಮ ನಮ್ಮದಾಗಿತ್ತು. ಅದಕ್ಕೆ ಕಾರಣವಿಷ್ಟೇ. ಅವರಿಬ್ಬರೂ ಮನೆಯ ಬಗ್ಗೆ ಬಹಳ ಹೊಗಳಿದ್ದರು. ಪ್ರತಿ ಅಂಗುಲ ಅಂಗುಲವನ್ನೂ ಹರ್ಷ ವಿವರಿಸಿದ್ದ. ಒಂದು ಭಾನುವಾರ (ನೆನಪಿನ ಲೆಕ್ಕಾಚಾರ) ಬೆಳಗ್ಗೆ ನಮ್ಮ ಸವಾರಿ ಮನೆಯತ್ತ ಧಾವಿಸಿತು. ಟೈಲರ್ ರಮೇಶ್ ಅವರು, ಮನೆ ಮಾಲೀಕರಿಂದ ಬೀಗ ಪಡೆದು ಬಂದು ಮನೆ ತೋರಿಸಿದರು. ಒಳಗೆಲ್ಲಾ ಸುತ್ತಿ ನೋಡಿದಾಗ ಖುಷಿಯಾಯಿತು. ಹರ್ಷ ಸುಳ್ಳು ಹೇಳಿರಲಿಲ್ಲ. ಮನೆ ನಮ್ಮೊಳಗೆ ಹೊಸದೊಂದು ಕನಸನ್ನು ಕಟ್ಟಿ ಬಿಟ್ಟಿತು.</p>
<p>ಇದಕ್ಕೆಲ್ಲಾ ಬೆಸುಗೆ ಹಾಕುವಂಥ ಘಟನೆ ಒಂದು ನಡೆಯಿತು. ನಾವೋ ಪತ್ರಕರ್ತರು. ಸಿಗದಾಳನಿಗೆ ಇಷ್ಟೊಂದು ಮಂದಿ ಪತ್ರಕರ್ತರೊಡನೆ ಕುತೂಹಲದಿಂದ ಜೀವನ ಸಾಗಿಸುವ ತವಕ. ಇದಕ್ಕೆ ಶೃಂಗವೆನ್ನುವಂತೆ ನಡೆದ ಘಟನೆಯಲ್ಲಿ ಇಂಗ್ಲೆಂಡ್‌ನ ಹುಡುಗನೊಬ್ಬ ಕೇಂದ್ರ ಪಾತ್ರವಾಗಿದ್ದ. ಮುಂದಿನ ಕಂತಿನಲ್ಲಿ ಅದೇ ಪ್ರಧಾನ ಭಾಗ.<br />
 </p>
]]></content:encoded>
</item>
<item>
<title><![CDATA[ಬ್ರಹ್ಮಚಾರಿಗಳ ಪುಟಗಳು-ಮೂರು]]></title>
<link>http://chendemaddale.wordpress.com/?p=96</link>
<pubDate>Wed, 12 Mar 2008 18:13:48 +0000</pubDate>
<dc:creator>navada</dc:creator>
<guid>http://chendemaddale.wordpress.com/?p=96</guid>
<description><![CDATA[ಹರ್ಷ, ನವೀನ್, ಅರುಣ್ ಹಾಗೂ ಯೋಗಿಶ್ ಆಗಲೇ ಹಲ]]></description>
<content:encoded><![CDATA[<p>ಹರ್ಷ, ನವೀನ್, ಅರುಣ್ ಹಾಗೂ ಯೋಗಿಶ್ ಆಗಲೇ ಹಲಸೂರಿನ ಜೋಗುಪಾಳ್ಯದಲ್ಲಿ ಒಂದೇ ರೂಮಿನಲ್ಲಿದ್ದರು. ಜತೆಗೆ ಇವರೆಲ್ಲರ ಕಷ್ಟ ಸುಖಕ್ಕೆ ಜತೆಯಾಗಿ ನಾಗೂರಿನ ರಮೇಶ್ ಇದ್ದರು. ಜತೆಗೆ ಉದಯವಾಣಿಯ ಸತೀಶ್ ಸಾಲಿಯಾನ, ಲಕ್ಷ್ಮೀನಾರಾಯಣರೆಲ್ಲ ಇದ್ದರು. ಹೇಗೋ ನಡೆಯುತ್ತಿದ್ದಾಗ ಮನೆ ಬದಲಿಸುವ ಬಗ್ಗೆ ಚಿಂತಿಸುತ್ತಿದ್ದುದು ಉಂಟು. ಆಗ ರಮೇಶ್ ಇದ್ದಾರಲ್ಲ, ಹಲಸೂರಿನಲ್ಲೇ ಒಂಥರಾ ಪಂಟರ್ ! ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಆದರೆ ಸದಾ ಉತ್ಸಾಹಿ. ಏನಾದರೂ ಮಾಡಬೇಕು ಎಂದು ತುಡಿಯುತ್ತಿರುವವರು. ತಮ್ಮ ಅಂಗಡಿಯ ಪಕ್ಕದಲ್ಲೇ ಇದ್ದ ಮನೆಯೊಂದನ್ನು ನೋಡಿದರು.</p>
<p>ಯಾವ ಕ್ಷಣದಲ್ಲಿ ಅವರ ತಲೆಯಲ್ಲಿ ಹೊಳೆಯಿತೋ ಏನೋ ಆ ಆಲೋಚನೆ. ಅದಕ್ಕೆ ಈ ನಾಲ್ಕೂ ಮಂದಿಯನ್ನೂ ಒಗ್ಗಿಸಲು ನೋಡಿದರು. ಮೂರು ಸಾವಿರ ರೂ. ಬಾಡಿಗೆ, ೫೦ ಸಾವಿರ ರೂ. ಅಡ್ವಾನ್ಸ್. ಇಷ್ಟೊಂದು ಹಣವನ್ನು ಒಮ್ಮೆಲೆ ಭರಿಸುವ ಶಕ್ತಿ ಯಾರಿಗೂ ಇರಲಿಲ್ಲ. ಈ ಮನೆಯ ಸದಸ್ಯರಲ್ಲಿ ಯಾರೂ ಊರಿನಲ್ಲಿ ಬಂಡವಾಳದ ಖಜಾನೆ ಇಟ್ಟುಕೊಂಡು ಬಂದವರಲ್ಲ ; ಊರಿನಿಂದ ಬರುವ ಹಣವನ್ನು ಖರ್ಚು ಮಾಡುವ ಸ್ಥಿತಿಯೂ ಯಾರದ್ದೂ ಅಲ್ಲ.</p>
<p>ಹುಡುಕಿಕೊಂಡ ಕೆಲಸದಲ್ಲೇ ದುಡಿದು ಬಂದ ಹಣದಲ್ಲಿ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಬೇಕಿತ್ತು. ಊರಿನಲ್ಲಿ ಎಲ್ಲರಿಗೂ ಹಲವು ಹೊಣೆ ಇದ್ದೇ ಇತ್ತು. ಅಲ್ಲಿಗೆ ಕಳುಹಿಸುವುದು ನಮ್ಮ ಜವಾಬ್ದಾರಿಯ ನಿರ್ವಹಣೆಯೇ ಹೊರತು ಎಂದಿಗೂ ಹೊರೆ ಎನಿಸಿರಲಿಲ್ಲ. ಇನ್ನೊಂದು ಮಾತು ಸತ್ಯ ಹೇಳುತ್ತೇನೆ. ಬೆಂಗಳೂರಿನಲ್ಲಿ ಚೆನ್ನಾಗಿ ಇರಬೇಕೆಂದರೆ ಮತ್ತೊಂದು ಊರು ಇರಬಾರದು. ಕಾರಣವಿಷ್ಟೇ. ಅಲ್ಲಿನ ಖರ್ಚಿಗೆ ಸರಿದೂಗಿಸಲು ದುಡಿದದ್ದೆಲ್ಲಾ ಬೇಕು. ಅಂಥದ್ದರಲ್ಲಿ ನಮ್ಮದೇ ಒಂದು ಎಂದು ಮತ್ತೊಂದು ಊರಿದ್ದರೆ ಅಲ್ಲಿಗೆ ಹೋಗಿ ಬರುವ ಖರ್ಚು ಮತ್ತಷ್ಟು ಹೊರೆ ಎನಿಸುತ್ತದೆ.</p>
<p>ಆದರೆ ಎಂದಿಗೂ ನಮಗೆ ಹಾಗೆನಿಸಲಿಲ್ಲ. ಊರಿಗೆ ಹೋಗುವುದು, ಅಲ್ಲಿನ ಮಣ್ಣಿನ ರಸ್ತೆಯ ಮೇಲೆ ಇಟ್ಟ ಹೆಜ್ಜೆಯನ್ನು ಹಿಂತಿರುಗಿ ನೋಡಿಕೊಳ್ಳುತ್ತಲೇ ನಗರ ಬದಲಾಯಿಸಿದ ಬಗೆಯನ್ನು ಅರ್ಥೈಸಿಕೊಳ್ಳುತ್ತಾ ಹೋಗುವುದು ಹೊಸ ಅನುಭವವೇ. ಮಾಮೂಲಿ ಚಪ್ಪಲಿನ ಗುರುತಿಗೂ ನಗರದ ಬ್ರಾಂಡ್‌ಗಳ, ಗಟ್ಟಿ ಸೋಲ್‌ಗಳ (ಚಪ್ಪಲಿ, ಶೂಗಳ ತಳಬದಿ) ಹೆಜ್ಜೆ ಕೊಂಚ ಢಿಪರೆಂಟ್ ಅನಿಸಿದ್ದೂ ಅದೇ. ನಮ್ಮೊಳಗಿನ ಊರು ಕಲಿಸಿಕೊಟ್ಟ ಬಾಂಧವ್ಯ, ಸ್ನೇಹ, ಸಂಭ್ರಮ ಪಡುವ ಬಗೆ ಎಲ್ಲವೂ ನಮ್ಮನ್ನು ಬಂಧಿಸಿತ್ತು. ಇಲ್ಲದಿದ್ದರೆ ನಾವ್ಯಾರೂ ಒಟ್ಟುಗೂಡುತ್ತಿರಲಿಲ್ಲ !</p>
<p>ಹೀಗೇ ಇರುವಾಗ ಟೈಲರ್ ರಮೇಶ್ ಹುಡುಕಿದ ರೂಮಿಗೆ ಹರ್ಷ ಮತ್ತು ನವೀನ್ ಬರಲು ತಾತ್ವಿಕವಾಗಿಯೇನೋ ಒಪ್ಪಿದರು. ಆದರೆ ಮುಂಗಡ ಹಣದ ಚಿಂತೆ ಕಾಡತೊಡಗಿತು. ಎಲ್ಲೆಲ್ಲೋ ಹೊಂದಿಸಲು ನೋಡಿದರೂ ಕಷ್ಟವಾಯಿತು. ೧೯೯೮ ರ ಮಾತಿದು. ಆಗ ನಮಗೆಲ್ಲಾ ಬರುತ್ತಿದ್ದುದು ಕೇವಲ ೨, ೫೦೦ ರಿಂದ ೩ ಸಾವಿರ ರೂ. ಸಂಬಳ. ಅದರಲ್ಲಿ ಊರು, ಮನೆಯತ್ತ ಸ್ವಲ್ಪ ಗಮನಹರಿಸಿ, ತಿಂಗಳೆಂಬುದನ್ನು ದೂಡಿಕೊಂಡು ಬದುಕಬೇಕಿತ್ತು. ಪ್ರತಿ ತಿಂಗಳೂ ಮುಗಿಯುವ ಹೊತ್ತಿಗೆ ಮುಂದಿನ ತಿಂಗಳು ಬಂದು ತಲೆ ಮೇಲೆ ಕುಳಿತುಕೊಳ್ಳುತ್ತಿದ್ದರಿಂದ ದೊಡ್ಡ ಸಮಸ್ಯೆ. ಆದರೆ ಆ ತಿಂಗಳ ಆರಂಭದಲ್ಲೇ ವರದಿಗಾರರಿಗೆ ಕೊಡುತ್ತಿದ್ದ ೫೦೦ ರೂ. ಅಲೋಯೆನ್ಸ್ ಸಂಬಳ ಬರುವವರೆಗಿನ ಆತಂಕವನ್ನು ಕೊಂಚ ನಿವಾರಿಸುತ್ತಿತ್ತು. ಕೆಲವೊಮ್ಮೆ ಅದೂ ಕೈ ಕೊಡುತ್ತಿದ್ದುದುಂಟು. ಇರಲಿ, ಬದುಕಿಗೆ ಹೆದರುವಂತೆ ಎಂದೂ ಮಾಡಿರಲಿಲ್ಲ.</p>
<p>ಮೂರೂ ಮಂದಿಯೇನು? ನಾವೆಲ್ಲರೂ (ನೀವೂ) ಬೆಂಗಳೂರಿಗೆ ಬಂದದ್ದು ಕನಸು ಕಟ್ಟಿಕೊಳ್ಳಲು ಹಾಗೂ ಕನಸು ಕಟ್ಟಿಕೊಂಡು. ಅದನ್ನು ಸುಳ್ಳಾಗಿಸಿಕೊಳ್ಳಲು ಯಾರ ಮನಸೂ ಇರಲಿಲ್ಲ. ಹಾಗಾಗಿ ಕಷ್ಟ ಪಡಲು ಸಿದ್ಧವಿದ್ದೆವು. ಪಾಪ, ಹರ್ಷ ಮತ್ತು ನವೀನ್ ಹೇಗಾದರೂ ಮಾಡಿ ಮನೆಯನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿಯೇ ಬಿಟ್ಟರು. ಯಾಕೆಂದರೆ ಆ ಮನೆಯಲ್ಲಿ ಅಂಥದೊಂದು ಸೆಳೆತವಿತ್ತು !</p>
<p>ಹಳೇ ಕಾಲದ ಮನೆ. ಸುಣ್ಣ ಬಳಿದುಕೊಂಡ ಮೈ. ಮಳೆಯಿಂದ ನೆನೆಯಬಾರದೆಂದು ಮಲೆನಾಡಿನಲ್ಲಿ ಗೋಣಿಗೊಪ್ಪೆಯಂತೆ ಉಪ್ಪರಿಗೆಯನ್ನು ಮುಸುಕು ಹಾಕಿಕೊಂಡ ಮನೆ. ಒಳಗೆ ಹೋಗುತ್ತಲೇ ಎಡ ಬದಿಗೆ ಚಿಕ್ಕದೊಂದು ರೂಮು. ಅದಕ್ಕೊಂದು ಕಿಟಕಿ. ಒಳಗಿದ್ದು ಬೇಸರಾದರೆ ಅಲ್ಲಿ ಕುಳಿತು ಕಿಟಕಿಯಲ್ಲಿ ರಸ್ತೆಯ ದರ್ಶನವನ್ನು ನೋಡಬಹುದಿತ್ತು. ಒಂದರ್ಥದಲ್ಲಿ "ವೇಯ್ಟಿಂಗ್ ರೂಂ’ ಎಂದರೂ ತಪ್ಪಿಲ್ಲ. ಅದನ್ನು ದಾಟಿ ಒಳಗೆ ಕಾಲಿಡುವ ಮೊದಲು ಬಲ ಬದಿಗೆ ಮೆಟ್ಟಿಲು ಹಾದು ಹೋಗುತ್ತದೆ, ಮರದ್ದು. ಅಲ್ಲಿ ಮೇಲೆ ಎರಡು ಕೋಣೆ. ಅದರಲ್ಲಿ ಒಂದು ನನ್ನದಾಗಿತ್ತು.</p>
<p>ಓದಲು, ಬರೆಯಲು ಅದು. ಮಲಗಿಕೊಳ್ಳಲು ಮತ್ತೊಂದು, ಅದೇ ಹಿಂದೆ ಹೇಳಿದೆನಲ್ಲ, ಕತ್ತಲ ಕೋಣೆ. ಮತ್ತೊಂದರಲ್ಲಿ ನವೀನ, ಹರ್ಷ ಮಲಗುತ್ತಿದ್ದರು. ಹಾಗೆಯೇ ಮೇಲಿಂದ ವಾಪಸು ಬನ್ನಿ. ಒಳಗೆ ಕಾಲಿಡಿ, ಅಲ್ಲಿ ದೊಡ್ಡದೊಂದು ಹಜಾರ. ಅಲ್ಲಿ ಬಲಕ್ಕೆ ಕತ್ತಲ ಕೋಣೆಗೆ ದಾರಿ. ಎಡಕ್ಕೆ ಕತ್ತು ಹೊರಳಿಸಿ ಸ್ವಲ್ಪ ಹಿಂದೆ ತಿರುಗಿದರೆ ಅಡುಗೆಮನೆ. ಇನ್ನು ಕತ್ತಲ ಕೋಣೆಯ ಎಡಕ್ಕೆ ಬಚ್ಚಲು, ಪಾಯಖಾನೆ ಎಲ್ಲವೂ. ಆ ಮನೆಗೆ ಎರಡೆರಡು ಬಚ್ಚಲು.</p>
<p>ಬ್ರಹ್ಮಚಾರಿಗಳಲ್ಲವೇ? ಶಿಸ್ತಿಲ್ಲ ಎಂದು ಕೊಳ