<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ತೇಜಸ್ವಿ &amp;laquo; WordPress.com Tag Feed</title>
	<link>http://wordpress.com/tag/ತೇಜಸ್ವಿ/</link>
	<description>Feed of posts on WordPress.com tagged "ತೇಜಸ್ವಿ"</description>
	<pubDate>Sun, 20 Jul 2008 00:18:05 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಕರುನಾಡಿಗೆ ಕನ್ನಡ ಕನಸುಗಳು - ಅಣಿಯಾಗಬೇಕಿವೆ ಕನ್ನಡ ಮನಸುಗಳು - ಗಣೇಶ್.ಕೆ,2ganesh@gmail.com]]></title>
<link>http://pratispandana.wordpress.com/?p=41</link>
<pubDate>Fri, 23 May 2008 13:17:40 +0000</pubDate>
<dc:creator>Ganesh K</dc:creator>
<guid>http://pratispandana.wordpress.com/?p=41</guid>
<description><![CDATA[
 ಕರುನಾಡಿಗೆ ಕನ್ನಡ ಕನಸುಗಳು - ಅಣಿಯಾಗಬೇಕ]]></description>
<content:encoded><![CDATA[<div>
<p style="text-align:justify;margin:0;"> <span style="font-size:large;color:#000000;font-family:Tunga;"><span style="font-size:medium;color:#000000;font-family:Tunga;"><strong>ಕರುನಾಡಿಗೆ ಕನ್ನಡ ಕನಸುಗಳು - ಅಣಿಯಾಗಬೇಕಿವೆ ಕನ್ನಡ ಮನಸುಗಳು</strong></span><span style="font-size:large;color:#000000;font-family:Tunga;"><span style="font-size:large;color:#000000;font-family:Tunga;">    </span></span></span></p>
<p style="text-align:justify;margin:0;"><span style="font-size:large;color:#000000;font-family:Tunga;"><span style="font-size:medium;">     ತೇಜಸ್ವಿ ಹೇಳುತ್ತಿದ್ದರು ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಅಂತ. ಆದರೆ ಹಾಗಾಗಬೇಕಾದರೆ ಕರ್ನಾಟಕದ ಅನ್ನ ತಿನ್ನುವವರೆಲ್ಲರೂ(ಕನಿಷ್ಟ ಪಕ್ಷ ಒಂದಿಷ್ಟು ಮಂದಿಯಾದರೂ) ಕನ್ನಡಕ್ಕಾಗಿ ದುಡಿಯಬೇಕು. ನವೆಂಬರ್ ತಿಂಗಳಿನಲ್ಲಿ ಜೋರಾಗಿ ಕನ್ನಡ ಚಿತ್ರಗೀತೆ ರೆಕಾರ್ಡುಗಳನ್ನು ಹಾಕಿಸಿ, ಆರ್ಕೆಸ್ಟ್ರಾದವರನ್ನ ಕರೆಸಿ ಕಿವಿ ಹರಿದು ಹೋಗುವಷ್ಟು ಸ್ಪೀಕರ್ ಸೌಂಡ್ ಇಟ್ಟು, ದೊಡ್ಡ ದೊಡ್ಡ ಭಾಷಣ ಬಿಗಿದರೆ ಕನ್ನಡ ಉದ್ಧಾರವಾಗುವುದಿಲ್ಲ. ಇವೆಲ್ಲವೂ ಕನ್ನಡವನ್ನು ಜೀವಂತವಾಗಿಡಲಿಕ್ಕೆ ಸಹಕಾರಿಯಾಗಬಹುದು. ಕನ್ನಡವಿರದ ಕಡೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ರೂಪುಗೊಳ್ಳುವುದು ಶುಭ ಸಂಕೇತವೇ. ಆದರೆ ಅದು ಕೇವಲ "ಅಸ್ತಿತ್ವ(ಅಸ್ಥಿತ್ವ..!?)ಪ್ರದರ್ಶನ"ವಾಗಬಾರದು. </span></span><span style="font-size:medium;"> </span></p>
<blockquote>
<p style="text-align:justify;margin:0;"><span style="font-size:medium;color:#000000;font-family:Tunga;">    ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯವೊಂದನ್ನು ಬಿಟ್ಟು ಉಳಿದೆಲ್ಲದರ ಬಗ್ಗೆ ಗಮನಹರಿಸುತ್ತದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ್ನು ನಂಬಿ ಕುಳಿತುಕೊಳ್ಳುವಂತಿಲ್ಲ. ಕನ್ನಡ ನಮ್ಮ ಮನೆ ದೇವರಿದ್ದಂತೆ. ಅದಕ್ಕೆ ಊದುಬತ್ತಿ, ಕರ್ಪೂರ ಬೆಳಗಲಿಕ್ಕೂ ಸರ್ಕಾರದ ಅನುದಾನ ಕೇಳುವುದು ಎಷ್ಟು ಸರಿ..? ಇದರ ಬಗ್ಗೇನೇ ನಕಾರಾತ್ಮಕವಾಗಿ ಬರೀತಾ ಹೋದ್ರೆ ಈ ಬರಹವೂ ಅದೇ ಕೆಟಗರಿಗೆ ಸೇರಿಬಿಡುತ್ತದೆ. ಈಗ ಸಕಾರಾತ್ಮಕವಾಗಿ ಕನ್ನಡದ ಅಭ್ಯುದಯದ ಬಗ್ಗೆ ಯೋಚಿಸೋಣ.</span></p>
<p style="text-align:justify;margin:0;"><span style="font-size:medium;"> </span></p>
<p style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡದ ಏಳ್ಗೆಗಾಗಿ, ಕನ್ನಡವನ್ನು ವೃತ್ತಿಪರವಾಗಿಸಲು ಕೆಲವು ಅಂಶಗಳನ್ನು ಸಿದ್ಧಪಡಿಸಿದ್ದೇನೆ. ಇವುಗಳ ಬಗ್ಗೆ ಚರ್ಚೆಯಾಗಬೇಕು.</span></p>
<p style="text-align:justify;margin:0;"><span style="font-size:medium;"> </span></p>
<p style="text-align:justify;margin:0;"><span style="font-size:medium;"> </span></p>
<p style="text-align:justify;margin:0;"><span style="font-size:medium;color:#000000;font-family:Tunga;">    ಇಲ್ಲಿ ಕೆಲವು ರಚನಾತ್ಮಕ ಕಾರ್ಯಗಳನ್ನು ಮಾತ್ರ ಹೇಳಿದ್ದೇನೆ. ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಆದರೆ ಬರೀ ಪ್ರತಿಭಟನೆಗಳಿಂದ ಏನೂ ಲಭಿಸುವುದಿಲ್ಲ. ಪ್ರತಿಭಟನೆಗಳು ಬೇಡ ಎಂದು ಇದರ ಅರ್ಥವಲ್ಲ. ಅವು ಕಾರ್ಯಕ್ರಮಗಳ ಸಾಂಕೇತಿಕ ಭಾಗವಾಗಬೇಕು. ಅವುಗಳೇ ಕಾರ್ಯಕ್ರಮಗಳಾಗಬಾರದು..! ಆದರೆ ಎಲ್ಲದಕ್ಕೂ ಪ್ರತಿಭಟನೆ ನೆಡೆಸುತ್ತಾ ಹೊರಟರೆ..? ಪ್ರತಿಭಟನೆಗೊಂದು ಅರ್ಥವೇ ಇರುವುದಿಲ್ಲ. </span></p>
<p style="text-align:justify;margin:0;"><span style="font-size:medium;"> </span></p>
<p style="text-align:justify;margin:0;"><span style="font-size:medium;color:#000000;font-family:Tunga;">    ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆಯಾಗಬೇಕು. ಕಾರ್ಯಗತಗೊಳಿಸಲು ಇರುವ ಅಡೆತಡೆಗಳಬಗ್ಗೆ ಚರ್ಚೆಯಾಗಬೇಕು. ನಿಮ್ಮ ಪ್ರತಿಕ್ರಿಯೆಗಳಿಗೆ, ಸಲಹೆಗಳಿಗೆ, ಸೂಚನೆಗಳಿಗೆ ಸದಾ ಸ್ವಾಗತವಿದ್ದೇ ಇದೆ. </span></p>
<p style="text-align:justify;margin:0;"><span style="font-size:medium;"> </span></p>
</blockquote>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಜಾಗತೀಕರಣವನ್ನು ನಾವು ಒಪ್ಪಿಯಾಗಿದೆ. ಕೈಯಲ್ಲಿ ಹಿಡಿದಿರುವ ಮೊಬೈಲು ಜಾಗತೀಕರಣದ್ದು, ಮನೆ ಮನೆಗಳನ್ನು ಹೊಕ್ಕಿರುವ ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್‌ಗಳು ಜಾಗತೀಕರಣದ ಫಲಗಳು. ಈಗ ಕವಿಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ದಲಿತಪರ ಕಾಳಜಿ ಹೊಂದಿರುವವರು ಏನೇ ಹೋರಾಟಗಳನ್ನು ಮಾಡಿದರೂ ಅದು ಫಲರಹಿತ ಪ್ರಯತ್ನ. ಆದರೆ ಅವರ ವಿಚಾರವನ್ನು ತೆರೆದಿಡುವ ಹಕ್ಕು ಅವರಿಗಿದೆ. ಹೋರಾಟದ ರೂಪ-ರೇಷೆಗಳು ಬದಲಾಗಬೇಕಿದೆ. ಜಾಗತೀಕರಣವನ್ನು ಬದಲಾಯಿಸುವುದು ಸಾಧ್ಯವಾಗದ ಮಾತು. ಜಾಗತೀಕರಣದ ಉಪಯೋಗವನ್ನು ಪಡೆದು ಅದರಲ್ಲಿನ ಲೋಪ-ದೋಷಗಳನ್ನು ಸರಿಪಡಿಸಿ, ನಮ್ಮ ಸಂಸ್ಕೃತಿಗೆ, ಭಾಷೆಯ ಅನುಕೂಲಕ್ಕೆ ತಕ್ಕಂತೆ ಜಾಗತೀಕರಣವನ್ನು ಬದಲಾಯಿಸಿಕೊಳ್ಳುವುದು ಇಂದಿನ ಅಗತ್ಯ. </span></div>
</li>
<li>
<div style="text-align:justify;margin:0;"><span style="font-size:medium;"> <span style="color:#000000;font-family:Tunga;">ಜಾಗತೀಕರಣದಿಂದ ನಮ್ಮ ಭಾಷೆಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದಕ್ಕೆ ಪೂರ್ಣಚಂದ್ರ ತೇಜಸ್ವಿ ಅಗ್ರಪಂಕ್ತಿ ಹಾಕಿ ಕೊಟ್ಟು ಹೋಗಿದ್ದಾರೆ. ಕನ್ನಡ ವಿಶ್ವವ್ಯಾಪಿಯಾಗಬೇಕಾದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡಬೇಕು. ಸಾರ್ವತ್ರಿಕವಾದ ಕನ್ನಡ ತಂತ್ರಾಂಶಗಳು ರೂಪುಗೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಡಿಗ ಸಾಫ್ಟ್‌ವೇರ್ ತಂತ್ರಜ್ಞರಿಗೆ ಕೊರತೆಯೇ? ಈಗ ಆಗಬೇಕಾಗಿರುವುದು ಅವರಲ್ಲಿನ ಕನ್ನಡತನವನ್ನು ಬಡಿದೆಬ್ಬಿಸುವ ಕೆಲಸ. ಇದು ಸರಕಾರದಿಂದ ಆಗದ ಕೆಲಸ. ಸರ್ಕಾರದ ಅಧೀನದಲ್ಲಿರುವ ಯಾವುದೇ ಸಮಿತಿ, ಪರಿಷತ್ತುಗಳುಗಳು ಉಪಯೋಗಕ್ಕೆ ಬಾರವು. ಸರ್ಕಾರದಿಂದ ಆದೇಶ ಬಂದರೂ ಕೆಲಸ ಮಾಡದ ಕೆಲಸಗಾರರಿಂದ ಕನ್ನಡತನವನ್ನು ಅಪೇಕ್ಷಿಸುವುದು ಮೂರ್ಖತನ. ಏನಿದ್ದರೂ ಸರಕಾರದ ಸಹಾಯ ಪಡೆಯಬಹುದು. ಕನ್ನಡತನ ನಮ್ಮ ಮನೆ ಹಬ್ಬದಂತೆ. ಅದನ್ನು ಆಚರಿಸಲಿಕ್ಕೆ ಸರಕಾರಕ್ಕೆ ಮೊರೆ ಹೋಗುವುದು ಎಷ್ಟು ಸರಿ?</span></span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು, ಸಕ್ರಿಯವಾಗಿ ಕನ್ನಡ ಅಂತರ್ಜಾಲ ಕಾರ್ಯದಲ್ಲಿ ಭಾಗವಹಿಸಿರುವ ಸಾಫ್ಟ್‌ವೇರ್ ತಂತ್ರಜ್ಞರ ಯುವ ಪಡೆಯೊಂದನ್ನು ಕಟ್ಟಬೇಕಿದೆ. ಇಂತಿಷ್ಟು ಶುಲ್ಕದಂತೆ ಸಂಗ್ರಹಿಸಿ, ಸದಸ್ಯತ್ವ ನೀಡಿ ಸಂಸ್ಥೆ ಮಾಡಬೇಕಿದೆ. ಆ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಹಣದ ವೆಚ್ಚದ ವಿವರಗಳೆಲ್ಲವೂ ಪಾರದರ್ಶಕವಾಗಿರಬೇಕು. ಹಣವನ್ನ ಕನ್ನಡ ವಿದ್ಯಾರ್ಥಿಗಳ ಬೆಳವಣಿಗೆಗೆ ಉಪಯೋಗಿಸಬಹುದು. ಇದು ತಂತ್ರಜ್ಞ ಕನ್ನಡಿಗರ ಸಬಲೀಕರಣದ ಮೊದಲ ಹೆಜ್ಜೆಯಾಗಲಿದೆ. </span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಈಗಾಗಲೇ ತಂತ್ರಾಂಶ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಟ್ಟಿರುವ, ಅಕ್ಷರ ಕ್ರಾಂತಿಗೆ ಸಹಕರಿಸಿರುವ "ಬರಹ"ದ ಶೇಷಾದ್ರಿ ವಾಸುರಂಥವರನ್ನು ತಂತ್ರಾಂಶಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಿಸಿಕೊಳ್ಳಬೇಕು.</span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಎಂಜಿನಿಯರಿಂಗಿನ ಕೊನೆಯ ಸೆಮಿಸ್ಟರಿನ ವಿದ್ಯಾರ್ಥಿಗಳಿಗೆ ಕನ್ನಡ ತಂತ್ರಾಶದ ಅಭಿವೃದ್ಧಿಯ ಪ್ರಾಜೆಕ್ಟ್ ನೀಡಿ, ಈ ದೆಸೆಯಲ್ಲಿ ಮುಂದುವರಿದ ಹಿರಿಯ ಸಾಫ್ಟ್‌ವೇರ್ ತಂತ್ರಜ್ಞರಿಂದ ಮಾರ್ಗದರ್ಶನ ಕೊಡಿಸಿ, ವಿದ್ಯಾರ್ಥಿವೇತನ ನೀಡಿದರೆ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವ್ಯಯಿಸುವ ಅಪಾರ ಖರ್ಚು-ವೆಚ್ಚಗಳನ್ನು ಉಳಿಸಬಹುದು. ಮತ್ತು ಕಡಿಮೆ ವೆಚ್ಚದಲ್ಲಿ ತಂತ್ರಾಂಶವನ್ನು ತಯಾರಿಸಬಹುದು. ಎಂಜಿನಿಯರಿಂಗ್ ಹಂತದಲ್ಲಿಯೇ ಕನ್ನಡತನವನ್ನ ಜಾಗೃತಗೊಳಿಸಬಹುದು.  </span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಇನ್ನು ಗ್ರಂಥಾಲಯಗಳಲ್ಲಿ, ಗ್ರಂಥಾಲಯಗಳ ಬಳಿಯಲ್ಲಿ ಬರಹಗಾರರಿಗಾಗಿಯೇ ಒಂದು ಸಂಕೀರ್ಣವನ್ನು ನಿರ್ಮಿಸಬೇಕು. ಬರಹಗಾರರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುವಂತೆ ಮಾಡಬೇಕು. ಬರೆಯಲು ಸೂಕ್ತ ವಾತಾವರಣ, ಅನ್ಯ ಬರಹಗಾರರ ಸಾಂಗತ್ಯ ದೊರಕುವಂಥಾ ವಾತಾವರಣ ನಿರ್ಮಿಸಬೇಕು. ಗ್ರಂಥಾಲಯಗಳ ಪುಸ್ತಕಗಳಲ್ಲಿ ವಿಶೇಷ ಪುಸ್ತಕಗಳ ಗುಣವಿಶೇಷಗಳನ್ನು ಸಾದರಪಡಿಸುವ ಕೈಪಿಡಿ ತಯಾರಿಸಬೇಕು. ಏಕೆಂದರೆ, ಯಾವುದನ್ನೇ ಆಗಲಿ ನಾವು ಆಸಕ್ತಿ ಮೂಡದ ಹೊರತು ಓದಲಿಕ್ಕೆ ಶುರುವಿಟ್ಟುಕೊಳ್ಳುವುದೇ ಇಲ್ಲ. ಹಾಗಾಗಿ ಒಂದೊಂದು ವಿಧದ ಆಸಕ್ತಿಗೆ ಅನುಗುಣವಾಗಿ, ಪುಸ್ತಕಗಳ ಪಟ್ಟಿ ಹೊಂದಿರುವ ಕೈಪಿಡಿ ಅನಿವಾರ್ಯ. ಕೈಪಿಡಿಯು  ಇದು ಒಂಥರಾ ಗೂಗಲ್ ಸರ್ಚ್ ನಂತೆ. ನಿಮಗೆ ಬೇಕಾದದ್ದನ್ನ ಹುಡುಕಿ ತೆಗೆದುಕೊಳ್ಳಬಹುದು. ಪುಸ್ತಕದ ಬಗ್ಗೆ ಆಸಕ್ತಿ, ಕೌತುಕ ಮೂಡಿಸುವ ಕೈಪಿಡಿ, ಕ್ರಾಂತಿ ಖಂಡಿತ ಮಾಡಬಲ್ಲದು. </span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಸೃಜನಶೀಲ ಸಾಹಿತ್ಯದ ಜೊತೆ-ಜೊತೆಗೆ ಜನೋಪಯೋಗಿ, ಮಾಹಿತಿಯುತ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಪುಸ್ತಕಗಳನ್ನು ರಚಿಸಲು ಯುವ ಬರಹಗಾರರಿಗೆ ಉತ್ತೇಜನ, ಮಾರ್ಗದರ್ಶನ ನೀಡಬೇಕು.  ಪ್ರಕಟಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಇದು ಕನ್ನಡದ ಮಾರುಕಟ್ಟೆಯನ್ನ ವಿಸ್ತಾರಗೊಳಿಸುವಲ್ಲಿ ಸಫಲವಾಗುತ್ತದೆ. ಮಾರುಕಟ್ಟೆ ಇಲ್ಲದೆ ಅಭಿವೃದ್ಧಿ ಜಪ ಮಾಡಿದರೆ, ಏನೂ ಸಿಗದು, ಸಾಗದು. ಬರಹಗಾರರಿಗೆ ಸೂಕ್ತ ಸಂಭಾವನೆ ದೊರಕುವಂತೆ ಮಾಡಿ, ಬರಹಗಾರರಿಗೆ "ಬರಹದ ಬದುಕು" ಹಿಡಿಸುವಂತೆ ಮಾಡಿದರೆ "ಬರವಣಿಗೆಯು ನಿತ್ಯ ಸಮಾರಾಧನೆ"ಯಾಗುತ್ತದೆ. ಇದಕ್ಕೆ ನನ್ನ ಬಳಿ ಒಂದು ಚಿಂತನೆಯಿದೆ. ಒಂದು ಮಧ್ಯವರ್ತಿ ಸಂಸ್ಥೆ ಬರಹಗಾರರ ಬರಹಗಳನ್ನ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು. ಒಂದು ರೀತಿಯಲ್ಲಿ ಮಾನ್ಸ್ಟರ್ ಡಾಟ್ ಕಾಂ ಇದ್ದಂತೆ. ತಮ್ಮ ತಮ್ಮ ರೆಸ್ಯೂಮ್ ಹಾಕಿದಂತೆ. ಇದರ ಮೂಲಕವಾಗಿ ಮಾಧ್ಯಮಗಳು, ಪತ್ರಿಕೆಗಳು, ಪ್ರಕಾಶಕರು ಬರಹಗಳನ್ನ ಪಡೆದುಕೊಳ್ಳಬಹುದು. ಇದು ಬರಹಗಾರ ಮತ್ತು ಮಾಧ್ಯಮ, ಪ್ರಕಾಶಕರ ನಡುವೆ ಸ್ನೇಹಸೇತುವಾಗುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಇಂಟರ್ನೆಟ್ ನಲ್ಲಿ, ಬ್ಲಾಗುಗಳಲ್ಲಿ ಕಂಡುಬರುತ್ತಿರುವ ಕನ್ನಡ ಬರಹಗಳನ್ನ ನೋಡಿದರೆ, ಈ ಕ್ರಮ ಪರಿಣಾಮಕಾರಿಯಾಗುತ್ತದೆ ಎನಿಸುತ್ತದೆ. ಇದರಿಂದ ಉಭಯತರರಿಗೂ ಲಾಭ ಮತ್ತು ಸಂಪರ್ಕ ಒದಗಿದಂತಾಗುತ್ತದೆ. ಜೊತೆಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಅತಿಯಾಗಿ ಕಾಡುವ ಬರಹಗಳ ಕೊರತೆ ನೀಗಿಸಬಹುದು.</span></div>
</li>
<li>
<div style="text-align:justify;margin:0;"><span style="font-size:medium;"><span style="color:#000000;font-family:Tunga;">ಸರ್ಕಾರ ಬೇರೆ ರಾಜ್ಯಗಳಲ್ಲಿ ಕನ್ನಡ ಪೀಠ ಸ್ಥಾಪನೆಗೆ ಎಲ್ಲಾ ನೆರವು ನೀಡಬೇಕು. ಇದನ್ನು ಹೊರದೇಶಗಳಿಗೂ ವಿಸ್ತರಿಸಬೇಕು. ಅಲ್ಲಿ ಅಭ್ಯಾಸಿಸುವವರಿಗೆ, ಸಂಶೋಧನೆ ನೆಡೆಸುವವರಿಗೆ ವಿದ್ಯಾರ್ಥಿವೇತನ, ಆರ್ಥಿಕ ನೆರವು ಘೋಷಿಸಬೇಕು. ಕಂಡ ಕಂಡವುಗಳಿಗೆಲ್ಲಾ ಬೇಕಾ"ಬಿಟ್ಟಿ" ಹಣ ಮಂಜೂರು ಮಾಡುವ ಸರ್ಕಾರ ಇವುಗಳತ್ತ ಗಮನ ಹರಿಸಿ, ಹೊರದೇಶದ, ಹೊರರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪೀಠ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡೋದಕ್ಕೇ ಇಷ್ಟೊಂದು ಸತಾಯಿಸಿದ ಸರ್ಕಾರಗಳು ಇದನ್ನು ಮಾಡುವುದರ ಬಗ್ಗೆ ಒಲವು ಹರಿಸುವುದು ಕಡಿಮೆ ಎಂದೆನಿಸುತ್ತದೆ. ಆದರೆ ಹೋರಾಟ ನೆಡೆಸಿ, ಕನ್ನಡದ ಪರ ಲಾಬಿ ನೆಡೆಸುವುದು ಅನಿವಾರ್ಯ</span><span style="font-family:Tunga;">.</span></span></div>
</li>
<li>
<div style="text-align:justify;margin:0;"><span style="font-size:medium;font-family:Tunga;">ಡಾ&#124;&#124;ಯು.ಆರ್.ಅನಂತಮೂರ್ತಿಯವರು ಸೂಚಿಸಿದಂತೆ, ಪಂಪನ ಹೆಸರಿನಲ್ಲಿ ವರ್ಷಕ್ಕೊಂದು ಅಗ್ರಗಣ್ಯ ಸಾಹಿತಿಯನ್ನು, ಅವರ ಸಾಹಿತ್ಯವನ್ನು ಗುರುತಿಸಿ,  ಒಂದು ರಾಷ್ಟ್ರೀಯ ಪ್ರಶಸ್ತಿ ಕೊಡಬೇಕು. ಇದು ರಾಷ್ಟ್ರ ಮಟ್ಟದ್ದಾಗಿರಬೇಕು. ಎಲ್ಲಾ ಭಾಷೆಗಳೂ ಗಣನೆಗೆ ಬರಬೇಕು. ಇದರಿಂದ ಕರ್ನಾಟಕದ ಬಗ್ಗೆ, ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಹೊರ ರಾಜ್ಯಗಳಲ್ಲೂ ಬೆಳೆಯುವಂತೆ ಮಾಡಬಹುದು. </span></div>
</li>
<li>
<div style="text-align:justify;margin:0;"><span style="font-size:medium;font-family:Tunga;">ಕನ್ನಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳು ಈಗಿರುವ MW(Medium Wave) ನಂತೆ SW(Short Wave)ನಲ್ಲಿ ಕೂಡಾ ಬರುವಂತೆ ನೋಡಿಕೊಂಡರೆ, ಕನ್ನಡದ ಕಂಪು ದೇಶದೆಲ್ಲೆಡೆ ಪಸರಿಸುತ್ತದೆ. ಹೊರ ರಾಜ್ಯದ ಕನ್ನಡಿಗರ ನಾಡಿಮಿಡಿತವಾಗುತ್ತದೆ. ಏಕೆಂದರೆ, SW ನ ತರಂಗಗಳು ಅತಿ ದೂರದವರೆಗೆ ಪಸರಿಸಬಲ್ಲವು. ಆದರೆ, AM ತರಂಗಗಳ ಪರಿಮಿತಿ ಕೇವಲ 150-200ಕಿ.ಮೀ. SW ನ ತರಂಗಗಳಲ್ಲಿ ಕನ್ನಡ ಕೇಂದ್ರಗಳು ಪ್ರಸಾರ ಆರಂಭಿಸಿದರೆ, ಪಕ್ಕದ ರಾಜ್ಯದಲ್ಲೂ ಕೇಳಬಹುದು. ಪಕ್ಕದ ಶ್ರೀಲಂಕಾದಲ್ಲಿ, ಪಾಕಿಸ್ತಾನದಲ್ಲಿ, ನೇಪಾಳದಲ್ಲಿ ಕೂಡಾ ಕೇಳಬಹುದು. ಇದು ಕನ್ನಡ ಮನಸುಗಳ ಏಕತ್ರೀಕರಣಕ್ಕೆ ಸಹಕಾರಿ.</span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡ ಸಾಹಿತ್ಯದ ಬಗ್ಗೆ ಆಸ್ಥೆವಹಿಸಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹದಿನೈದು ದಿನ, ತಿಂಗಳಿಗೊಂದರಂತೆ ಸಾಹಿತ್ಯ ಕಾರ್ಯಕ್ರಮ ನೆಡೆಯುವಂತೆ, ಸಾಹಿತ್ಯ ಪುಸ್ತಕಗಳು ಎಲ್ಲರಿಗೂ ಒದಗುವಂತೆ ಸಾಹಿತ್ಯ ಮಳಿಗೆಗಳನ್ನು ತೆರೆಯಬೇಕು. ಆದಷ್ಟು, ಜನರನ್ನು ಸೆಳೆಯುವಂಥ, ಮನೋರಂಜಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಚಿಂತನಗೋಷ್ಠಿಗಳು, ಉಪನ್ಯಾಸಗಳನ್ನು ಜನ ದಿನಾಲೂ ಕೇಳಿರುತ್ತಾರೆ. ಅದೇ ಊದಿದ್ದೇ ಊದೋ ತುತ್ತೂರಿ ಊದಿದರೆ ಯಾರು ತಾನೇ ಬಂದಾರು? ಜನಸಾಮಾನ್ಯರಿಗೆ, ಇನ್ನೂ ಕನ್ನಡ ಓದುಗವಲಯಕ್ಕೆ ಪ್ರವೇಶಿಸುವವರಿಗೆ ನವೋದಯ, ನವ್ಯ, ನವ್ಯೋತ್ತರಗಳು ಬೇಕಿಲ್ಲ. ವಿವಾದಗಳು ಬೇಕಿಲ್ಲ. ಕೇಳಿದರೆ ಅಹ್ಲಾದತೆಯನ್ನುಂಟುಮಾಡುವ, ಹೃದಯಸ್ಪರ್ಶಿಯಾದ ಕಾರ್ಯಕ್ರಮಗಳು ನೆಡೆಯಬೇಕು. ಉರ್ದು ಸಾಹಿತ್ಯದ "ಮುಶಾಯಿರಾ"ಗಳು ಇದಕ್ಕೆ ಸ್ಪೂರ್ತಿಯಾಗಬಹುದು. ಯುವ ಸಮೂಹದ ಸಾಹಿತ್ಯಾಭಿಮಾನಿಗಳನ್ನು, ಸಾಹಿತ್ಯರಚನಾಕಾರರನ್ನು, ಬರಹಗಾರರನ್ನು ಹೊಸ ದಿಕ್ಕಿನತ್ತ ಕರೆದೊಯ್ಯುವುದು ಈಗಿನ ಅಗತ್ಯತೆ. ಬರೀ ಭ್ರಷ್ಟಾಚಾರ, ಜಾಗತೀಕರಣ, ಕೋಮುವಾದ, ಜಾತ್ಯಾತೀತತೆ ಇವೇ ವಿಷಯಗಳಲ್ಲ ಬರೆಯಲಿಕ್ಕೆ. ಸಾಕಷ್ಟು ವಿಷಯಗಳಿವೆ, ಗಮನ ಹರಿಸಿದರೆ. ಜಾಗತೀಕರಣ ಬಂದಾಗಿದೆ. ಈಗೇನಿದ್ದರೂ ಅಳಿವು ಉಳಿವಿನ ಪ್ರಶ್ನೆ. ಈಗ ಜಾಗತೀಕರಣವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನೆಡೆಯಬೇಕು. </span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡದ ಉಳಿವಿಗಾಗಿ ಹೋರಾಟಗಳು ನೆಡೆಯುತ್ತವೆಯೇ ಹೊರತು, ಕನ್ನಡದ ಬೆಳವಣಿಗೆಗಾಗಿ ಯಾರೂ ದನಿಯೆತ್ತುತ್ತಿಲ್ಲ. ಬೆಳವಣಿಗೆಯಿಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಬರೀ ಅಸ್ತಿತ್ವವನ್ನು ಉಳಿಸಿಕೊಂಡರೆ ಅದು ಬರೀ ಬೆದರುಗೊಂಬೆಯಾದೀತು. ಉಳಿದರೆ ಸಾಲದು. ಬೆಳೆಯಬೇಕು.  </span></div>
</li>
<li>
<div style="text-align:justify;margin:0;"><span style="font-size:medium;color:#000000;font-family:Tunga;">ಇನ್ನು ಮುಖ್ಯವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸಬೇಕು. ಸರ್ಕಾರಿ ನೌಕರರು, ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸಿದರೆ, ಕನ್ನಡ ಮಾಧ್ಯಮದಲ್ಲಿ ಓದಿಸಿದರೆ ಅವರನ್ನು ಉತ್ತೇಜಿಸುವ ಸಲುವಾಗಿ ಬಡ್ತಿ ನೀಡಬೇಕು. ಸರಕಾರಿ ಶಾಲೆಗಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಕ್ಕಳೇ ಇಲ್ಲದ ಮೇಲೆ ಶಾಲೆಗಳನ್ನು ನೆಡೆಸುವುದು ಸಾಧ್ಯವೇ? ಇನ್ನು ಕೆಲವೇ ವರ್ಷಗಳಲ್ಲಿ ಶಾಲೆಗಳೇ ನಿರ್ನಾಮವಾಗುವ ಪರಿಸ್ಥಿತಿಯಿದೆ. ನಗರ ಪ್ರದೇಶಗಳಲ್ಲಂತೂ ಈ ಪರಿಸ್ಥಿತಿ ಭಯಾನಕವಾಗಿದೆ. ಶಾಲೆಗಳೇ ಮುಚ್ಚಿದ ಮೇಲೆ ಹೊಸದಾಗಿ ಶಿಕ್ಷಕರು ನೇಮಕಗೊಳ್ಳಲು ಸಾಧ್ಯವೇ? ವಿದ್ಯಾರ್ಥಿಗಳು, ಶಾಲೆಗಳು ಉಳಿದರೆ ತಾನೇ ಶಿಕ್ಷಕರು..? ಶಿಕ್ಷಕರು ತಮ್ಮ ಮೇಲೆ ನೇತಾಡುತ್ತಿರುವ ತೂಗುಕತ್ತಿಯನ್ನು ನೋಡಬೇಕಿದೆ. </span></div>
</li>
<li>
<div style="text-align:justify;margin:0;"><span style="font-size:medium;font-family:Tunga;">ಶಿಕ್ಷಣ ಕ್ಷೇತ್ರದಲ್ಲಿ, ಬರೀ ಅಂಕಿ-ಅಂಶಗಳನ್ನಿಡಲಿಕ್ಕೇ ಶಿಕ್ಷಕರನ್ನ ನೇಮಿಸಿಕೊಂಡಂತಿದೆ ಸರ್ಕಾರ. ಏಕೆಂದರೆ, ಸರ್ಕಾರಕ್ಕೆ ಬೇಕಿರುವುದು ಗುಣಾತ್ಮಕ ಬೆಳವಣಿಗೆಯಲ್ಲ. ಅಂಕಿ-ಅಂಶಗಳ ಬೆಳವಣಿಗೆ. ಬರೀ ಉತ್ತೀರ್ಣತೆಯ ಪ್ರತಿಶತವನ್ನ ಹೆಚ್ಚಿಸುವುದೇ ತಮ್ಮ ಆದ್ಯ ಕರ್ತವ್ಯ ಎಂಬಂತೆ ಇಲಾಖೆ ವರ್ತಿಸುತ್ತಿದೆ. ಕನ್ನಡ ಭಾಷೆ ಪತ್ರಿಕೆಯಲ್ಲೂ ೪೦ ಅಂಕಗಳನ್ನ ಬಹುಆಯ್ಕೆ ಪ್ರಶ್ನೆಗಳನ್ನಿರಿಸುವುದು ನೋಡಿದರೆ ಇದರ ಮಹತ್ವ ತಿಳಿಯುತ್ತದೆ.  ಸರ್ಕಾರಿ ಶಿಕ್ಷಕರು ಮಕ್ಕಳನ್ನ ಓದಿಸುವುದಕ್ಕಿಂತ ಎಷ್ಟು ಮಂದಿಗೆ ಏನು ಓದಲು ಬರುತ್ತದೆ, ಏನು ಬರುವುದಿಲ್ಲ, ಯಾಕೆ ಅನ್ನೋ ಅಂಕಿ ಅಂಶಗಳನ್ನಿಡುವುದರಲ್ಲೇ ಕಾಲ ವ್ಯಯವಾಗುತ್ತದೆ. ಶಿಕ್ಷಣ ವಿಧಾನ ಸುಧಾರಣೆ ಹೆಸರಿನಲ್ಲಿ ನೆಡೆದಿರುವ ಸಂಕೀರ್ಣಮಯತೆ ಇಲ್ಲವಾಗಬೇಕು. ಶಿಕ್ಷಕರು ಇವೆಲ್ಲವುಗಳಿಂದ ಬೇಸತ್ತಿದ್ದಾರೆ. ಸರ್ಕಾರಗಳು ತಮಗೆ ಅಂಕಿ ಅಂಶಗಳೇ ಪ್ರಧಾನವಾಗಿದ್ದಲ್ಲಿ, ಬೇಕಾದರೆ ಚುನಾವಣಾ ಸಮೀಕ್ಷೆ ನೆಡೆಸುವ ಏಜೆನ್ಸಿಗಳಿದ್ದಂತೆ ಶಿಕ್ಷಣ ಕ್ಷೇತ್ರದ ಸಮೀಕ್ಷೆ ನೆಡೆಸಲಿಕ್ಕೆ ಏಜೆನ್ಸಿಗಳನ್ನ ನೇಮಿಸಿಕೊಳ್ಳಲಿ. ಶಿಕ್ಷಕರ ಜೀವ ಹಿಂಡುವುದರಿಂದ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಶಿಕ್ಷಕರು ಪಾಠ ಮಾಡುವುದರ ಬಗ್ಗೆ ಗಮನಹರಿಸುವುದನ್ನ ಬಿಟ್ಟು ಬಿಸಿಯೂಟ, ಜನಗಣತಿ, ದನಗಣತಿ ಅಂತಾ ಹೊರಟರೆ ವಿದ್ಯಾರ್ಥಿಗಳ ಗತಿ? ಶಿಕ್ಷಣ ಸುಧಾರಕರು ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಸರಳೀಕರಣದ ಬದಲಾಗಿ ಶಿಕ್ಷಕರ ಕೆಲಸಗಳ ಸರಳೀಕರಣ ಮಾಡಬೇಕಿದೆ. </span></div>
</li>
<p style="text-align:justify;margin:0;"><span style="font-size:medium;font-family:Tunga;">    </span><span style="font-size:large;color:#000000;font-family:Tunga;"><span style="font-size:medium;">ಭವ್ಯ ಕರ್ನಾಟಕದಲ್ಲಿ ಸುಂದರ, ಸುಭದ್ರ, ಶುದ್ಧ ಕನ್ನಡದ ಕನಸೊಂದು ನನಸಾಗಲೆಂದು ಬಯಸುವೆ.</span> </span></p>
<blockquote>
<p style="text-align:justify;margin:0;"><span style="font-size:large;color:#000000;font-family:Tunga;">- <span style="font-size:medium;">ಗಣೇಶ್.ಕೆ, </span></span><span style="font-size:medium;color:#000000;font-family:Arial;"><a href="mailto:2ganesh@gmail.com">2ganesh@gmail.com</a></span></p>
<p style="text-align:justify;margin:0;"> </p>
</blockquote>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡ ಅಳಿವಿನಂಚಿನಲ್ಲಿರುವುದು ಗೊತ್ತಿದೆ. ಅದಕ್ಕೆ ಬೊಬ್ಬೆ ಹಾಕಿದರೆ ಏನೂ ಬರುವುದಿಲ್ಲ. ರಚನಾತ್ಮಕ ಕಾರ್ಯಕ್ರಮಗಳಿಂದ ಮಾತ್ರ ಸುಧಾರಣೆ ಸಾಧ್ಯ. ತಮ್ಮ ಎಲ್ಲ ಸಿದ್ಧಾಂತಗಳನ್ನು, "ಇಗೋ"ಗಳನ್ನು ಬದಿಗೆ ಸರಿಸಿ, ಇಗೋ ಬಂದೆ ಎಂದು ಬರಬೇಕಿದೆ. </span></div>
<div style="text-align:justify;margin:0;"><span style="font-size:medium;color:#000000;font-family:Tunga;">ಕನ್ನಡೇತರರಿಗೆ ಕನ್ನಡದ ಕಲಿಸುವ, ಕನ್ನಡದ ಬಗ್ಗೆ ತಿಳಿಸಿ ಹೇಳುವ, ಕನ್ನಡ ನಾಡಿನ ಬಗ್ಗೆ ಸವಿಸ್ತಾರವಾಗಿ ವಿವರಿಸುವ ವ್ಯಕ್ತಿಗಳನ್ನು ತರಬೇತುಗೊಳಿಸಿ, ಕನ್ನಡ ಕಲಿಸುವ ಕೈಂಕರ್ಯಕ್ಕೆ ಕೈಹಾಕಬೇಕು. ಈ ಕೆಲಸವನ್ನು ಸಂಘ ಸಂಸ್ಥೆಗಳು, ಕನ್ನಡಪರ ಕಾಳಜಿಯುಳ್ಳ ವಿದ್ಯಾವಂತರು, ದುಭಾಷಿಗಳು ವಹಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಆಗಲೇ ಕಾರ್ಯನಿರತರಾಗಿರುವ ಸಮೂಹಗಳನ್ನ ಪ್ರೋತ್ಸಾಹಿಸಬೇಕು. </span></div>
</div>
]]></content:encoded>
</item>
<item>
<title><![CDATA[ಯಾಕಳುವೆ ಮಗು ತೇಜಸ್ವಿ...]]></title>
<link>http://mysorepost.wordpress.com/2007/04/06/tejaswi/</link>
<pubDate>Fri, 06 Apr 2007 11:37:02 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/04/06/tejaswi/</guid>
<description><![CDATA[ 
ತೇಜಸ್ವಿಯವರಿಲ್ಲದ  ಮೊದಲ ದಿನ ಈವತ್ತು..
&#8216;]]></description>
<content:encoded><![CDATA[<p align="center"><strong><img src="http://mysorepost.files.wordpress.com/2007/04/kukkanakere4.jpg" alt="kukkanakere4.jpg" /> </strong></p>
<p align="center"><strong>ತೇಜಸ್ವಿಯವರಿಲ್ಲದ  ಮೊದಲ ದಿನ ಈವತ್ತು..</strong></p>
<p align="center"><strong>'ಯಾಕಳುವೆ ಮಗು ತೇಜಸ್ವಿ..'ಎಂದು ಕುವೆಂಪು ಬರೆದಿದ್ದರು</strong></p>
<p align="center"><strong>'ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ' ಎಂದಿದ್ದರು.</strong></p>
<p align="center"><strong>ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು</strong></p>
<p align="center"><strong>ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು</strong></p>
<p align="center"><strong>ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.</strong></p>
<p align="center"><strong>ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,</strong></p>
<p align="center"><strong>ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,</strong></p>
<p align="center"><strong>ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.</strong></p>
<p align="center"><strong>ತೇಜಸ್ವಿ, ನೀವಿಲ್ಲದ ಮೊದಲ  ದಿನ - ಕೈ ಆಡುತ್ತಿಲ್ಲ.ಬಾಯಿ ಬರುತ್ತಿಲ್ಲ</strong></p>
<p align="center">&#160;</p>
]]></content:encoded>
</item>
<item>
<title><![CDATA[ಪಾಕಕ್ರಾಂತಿ ಮತ್ತು ತೇಜಸ್ವಿ.]]></title>
<link>http://gubbacchi.wordpress.com/?p=79</link>
<pubDate>Mon, 14 Apr 2008 07:48:30 +0000</pubDate>
<dc:creator>gubbacchi</dc:creator>
<guid>http://gubbacchi.wordpress.com/?p=79</guid>
<description><![CDATA[
ನಮ್ಮ ಹುಡುಗ ಶ್ರೀನಿಧಿ ಕಸ್ತೂರಿ ವಾಹಿನಿಯ ]]></description>
<content:encoded><![CDATA[<p><a href="http://gubbacchi.wordpress.com/files/2008/04/picture-013aa1.jpg"></a></p>
<p style="text-align:justify;">ನಮ್ಮ ಹುಡುಗ <a href="http://shree-lazyguy.blogspot.com/2008/04/blog-post_12.html">ಶ್ರೀನಿಧಿ</a> ಕಸ್ತೂರಿ ವಾಹಿನಿಯ ಪಾಲಾದ ಮೇಲೆ, ಅವನಿಂದ ಬರುತ್ತಿದ್ದ ಮೆಸೇಜುಗಳೆಲ್ಲ ಬ್ರೇಕಿಂಗ್ ನ್ಯೂಸುಗಳೆ. ಕುಮಾರಣ್ಣನ ರಾಜಿನಾಮೆ, ಯಡ್ಡಿಯ ಪ್ರಮಾಣವಚನ, ಗೌಡರ ಗದ್ದಲ ಹೀಗೆ ಸಾಗಿತ್ತು ಮೆಸೇಜುಗಳ ಹಾವಳಿ. ಮೊನ್ನೆ ಶುಕ್ರವಾರ ಮೊಬೈಲ್ ಸುದ್ದಿ ಪೆಟ್ಟಿಗೆಯಲ್ಲಿ ಬಂದು ಕುಳಿತಿದ್ದ ಸುದ್ದಿ ಓದಿ ಅರೆ ತೇಜಸ್ವಿ ಹೊಸ ಪುಸ್ತಕ ಬಂದಿದೆ ಅಂಕಿತದಲ್ಲಿ ತೊಗೊಂಡೆ ಎಂದು ಬರೆದಿದ್ದ. ಎಲಾ ಎಲಾ ಅಂದವನೆ ಫೋನಾಯಿಸಿದೆ ಆ ಕಡೆಯಿಂದ ಶ್ರೀ ಮಸ್ತ್ ಇದೆ ಮಗಾ, ಸಂಜೆ ಅಂಕಿತ ಕಡೆ ಆಫೀಸಿಂದ ಬರ್ತಾ ಹೊಗಿದ್ದೆ, ಪುಸ್ತಕ ಕಾಣಸ್ತು ಎತ್ತಾಕ್ಕೊಂಡು ಬಂದೆ ಎಂದು ನಕ್ಕ, ಕೊನೆಗೆ ದಿನಚರಿ ವಿಚಾರಿಸಿ ಮತ್ತೆ ಸಿಗುವ ಜೈ ಎಂದು ಫೋನಿಟ್ಟಾಯಿತು. ಸುದ್ದಿ ತಿಳಿದು ತಲೆಗೆ ಹುಳ ಬಿಟ್ಟ ಹಾಗೆ ಆದದ್ದು ದಿಟ, ಸುಮ್ಮನೆ ಇರುವುದಾರು ಹೇಗೆ? ಶನಿವಾರ ಬೆಳಗ್ಗೆಯೇ ಸಪ್ನಗೆ ನುಗ್ಗಿ "ಪಾಕಕ್ರಾಂತಿ ಮತ್ತು ಇತರ ಕಥೆಗಳು" ತಂದಾಗಿತ್ತು. ಆದರೆ ಓದಲಿಕ್ಕೆ ಸಮಸ ಸಿಗಲಿಲ್ಲ, ಕೊನೆಗೆ ಭಾನುವಾರ ಪಾಕಕ್ರಾಂತಿಗೆ ಮಂಗಳ ಹಾಡಿದ್ದಾಯಿತು.</p>
<p style="text-align:justify;">ಈ ಪುಸ್ತಕದಲ್ಲಿನ ಕಥೆಗಳು ಈ ಮೊದಲು ಲಂಕೇಶ್ ಪತ್ರಿಕೆ, ತುಷಾರ, ಸುಧಾ, ವಿಕ್ರಾಂತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಾಕ ಕ್ರಾಂತಿ ಎಂದಿನ ತೇಜಸ್ವಿಯವರ ಲವಲವಿಕೆಯ ಬರಹದಂತೆ ಒಮ್ಮೆ ನವಿರು ಹಾಸ್ಯ ಮತ್ತೊಮ್ಮೆ ಗಂಭಿರ ವಿಚಾರಗಳನ್ನು ಹೇಳುತ್ತಾ ಸಾಗುತ್ತೆ. ಮೊದಲನೆ ಕಥೆ ಪಾಕಕ್ರಾಂತಿ ಅಡುಗೆ ಮನೆಯಿಂದ ಶುರುವಾಗಿ ಕಲೆ, ವಿಜ್ಞಾನ, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳತ್ತ ಓದುಗನನ್ನ ಕರೆದೊಯ್ಯುತ್ತಾ ಪಾಕಕ್ರಾಂತಿಯ ಹಲವಾರು ಮಜಲುಗಳನ್ನ ನವಿರಾಗಿ ನಿರೂಪಿಸುತ್ತೆ.</p>
<p style="text-align:justify;"><strong><a href="http://gubbacchi.wordpress.com/files/2008/04/picture-013aa1.jpg"><img class="alignnone size-medium wp-image-82" src="http://gubbacchi.wordpress.com/files/2008/04/picture-013aa1.jpg" alt="" width="203" height="300" /></a></strong></p>
<p style="text-align:justify;"><strong>ಪಾಕ ಕ್ರಾಂತಿ.</strong></p>
<p style="text-align:justify;">ಕೆಲವೆಲ್ಲಾ ಮನುಷ್ಯನಿಗೆ ಅನುಭಸಿದ ಮೇಲೆ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೊಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು. ಯಾವ್ಯಾವ ಡಬ್ಬದಲಿ ಏನೇನಿದೆ. ಸಾರಿನ ಪುಡಿ ಎಲ್ಲಿದೆ, ಸಾಸಿವೆ ಎಲ್ಲಿದೆ, ಮೆಣಸಿನಕಾಯಿ ಎಲ್ಲಿಟ್ಟಿದ್ದೇನೆ ಇತ್ಯಾದಿ. ಇದರ ಜೊತೆದೆ ಅಡುಗೆಮನೆ ಚೊಕ್ಕಟವಾಗಿ ಇಡುವ ಅಗತ್ಯವನ್ನೂ ಒತ್ತಿ ಹೇಳುದಳು. ನನಗೆ ಇದರಿಂದ ಸ್ವಲ್ಪ ರೇಗಿತು. ನಾನು ಒಳಗೊಳಗೇ ಹೆಂಗಸರು ತಾವು ಇಲ್ಲದಿದ್ದರೆ ಪ್ರಪಂಚದ ಗಂಡಸರೆಲ್ಲಾ ಊಟವಿಲ್ಲದೆ ಸತ್ತೇ ಹೋಗುತ್ತಾರೆಂದು ತಿಳಿದಿದ್ದಾರೆ. ಬೇಳೆ ಬೇಯಿಸಿ ಅದಕೊಂದಷ್ಟು ಉಪ್ಪೂ ಖಾರ ಹಾಕಿ ಸಾರು ಮಾಡಿ, ಅನ್ನ ಬೇಯಿಸಿಕೊಂಡು ತಿನ್ನೂವಷ್ಟೂ ನಮ್ಗೆ ಚೈತನ್ಯ ಇಲ್ಲವೆ? ಅಡಿಗೆ ಮನೆ ಚೊಕ್ಕಟವಾಗಿಡಬೇಕೆನ್ನುವುದು ಅದೇನು ಅಷ್ಟೊಂದು ಮುಖ್ಯವೆ? " ಅಡುಗೆಮನೆ ಆಪರೇಶನ್ ಥಿಯೇಟರೆ? ಏಕೆಂದರೆ ಅಡುಗೆಮನೆಯ ಕಸ, ಧೂಳು ಇತ್ಯಾದಿಗಳು ತಿನ್ನುವ ಆಹಾರದೊಳಗೆ ಬೀಳದಂತೆ ನೋಡಿಕೊಂಡರೆ ಸಾಕು. ಬೇಕಾದಷ್ಟಾಯ್ತು" ಎಂದು ಗೊಣಗಿಕೊಂಡರೂ ಊರಿಗೆ ಹೊರಟವಳ ಹತ್ತಿರ ಮತ್ತೆ ಯಾಕೆ ಕ್ಯಾತೆ ತೆಗೆದು ಜಗಳವಾಡುವುದು, ಇವಳು ಹೇಳುವುದನ್ನೆಲ್ಲಾ ಹೇಳಿ ಮುಗಿಸಲಿ ಎಂದು "ಹು ಹು" ಎಂದೆ. ಅಡಿಗೆ ಪಾತ್ರೆಗಳನ್ನು ದಿನಾ ತೊಳೆಯುವುದರ ಬಗ್ಗೆಯೂ ನನ್ನದೇ ಆದ ಕೆಲವು ಅಭಿಪ್ರಾಯಗಳಿದ್ದವು. ಅಡಿಗೆ ಪಾತ್ರೆಗಳ ಹೊರಭಾಗಗಳನ್ನು ದಿನಾ ತೊಳೆಯುವುದು ಅನವಶ್ಯಕ ಎಂದೇ ನನ್ನ ಅಭಿಮತ. ಮತ್ತೆ ಒಲೆಯ ಮೇಲಿಟ್ಟು ತಳವೆಲ್ಲಾ ಮಸಿ ಹಿಡಿಯುವ ಈ ಪಾತ್ರೆಗಳ ಹೊರಭಾಗ ಕ್ಲಿನಾಗಿದ್ದರೆಷ್ಟು! ಬಿಟ್ಟರೆಷ್ಟು! ಅಡಿಗೆಯ ರುಚಿಗೂ ಪಾತ್ರೆಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಭಂದವಿದೆಯ? ಹೆಲ್ತ್ ಇನ್ಸ್ ಪೆಕ್ಟರ್ ಏನಾದರೂ ನಮ್ಮ ಅಡುಗೆಮನೆ ಒಳಗೆ ಬಂದು ಇವನೆಲ್ಲಾ ಚೆಕ್ ಮಾಡಿ ಸರ್ಟಿಫಿಕೇಟ್ ಕೊಡುತ್ತಾನ? ಕೆಲವು ಪದಾರ್ಥಗಳನ್ನು ದಿನಾ ಮಾಡುವುದೂ ಸಹ ಅನವಶ್ಯಕವೆಂದೇ ನನ್ನ ಅಭಿಪ್ರಾಯ. ಉದಾಹರಣೆಗೆ ತಿಳಿಸಾರು ಇತ್ಯಾದಿ ಯಾಕೆ ದಿನಾ ಬೆಳಿಗ್ಗೆ ಎದ್ದು ಖಾರ ಕಡೆದು ಒಗ್ಗರಣೆ ಕೊಟ್ಟು ಮಾಡುತ್ತಾ ಇರಬೇಕು. ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಹೇಗೆ ನನಗೆ ಕೆಲವು ಅಮೋಘವಾದ ಅಭಿಪ್ರಾಯಗಳಿವೆ. ಆದರೆ ಯಾವ ಹೆಂಗಸರ ಹತ್ತಿರ ಇದನ್ನು ಹೇಳಿದರೂ ಅವರು ನನ್ನ ಅಭಿಪ್ರಾಯಗಳನ್ನು ಸ್ತ್ರೀ ಸ್ವಾತಂತ್ರ್ಯದ ಹಲವು ವಿದಾನಗಳೆಂದು ಪರಿಗಣಿಸದೆ ಬೆಚ್ಚಿಬಿದ್ದು, ಇಷ್ಟೋಂದು ಅನಾಗರೀಕ ಅಭಿರುಚಿ ಇರುವ ಮನುಷ್ಯನನ್ನು ಉತ್ತಮ ಕತೆಗಾರನೆಂದು ಕರೆಯುತ್ತೇವಲ್ಲ ಎಂದು ಆಶ್ಚರ್ಯಪಡುತ್ತಾರೆ. ಆದುದರಿಂದಲೇ ಅಡುಗೆಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಬೇಕೆಂದ ಯೋಚಿಸಿದ್ದ ನನ್ನ ಚಿಂತನೆ ಹೆಂಗಸರ ಬಳಿ ಹೇಳುವುದನ್ನು ನಿಲ್ಲಿಸಿದೆ. ಗಂಡಸರಿಗೆ ಹೇಳಿದರೋ, ತಮ್ಮ ಮನೆ ಹೆಂಗಸರಿಗೆ ವಿರಾಮ ಬಿಡುವು ಹೆಚ್ಚು ದೊರಕಿಸುವ ನನ್ನ ಯೋಜನೆಗಳ ಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.</p>
<p style="text-align:justify;">ಹೀಗೆ ಸಾಗುತ್ತೆ ತೇಜಸ್ವಿಯವರ ಪಾಕಕ್ರಾಂತಿ...</p>
<p style="text-align:justify;"><a href="http://shree-lazyguy.blogspot.com/2008/04/blog-post_12.html">ಪಾಕಕ್ರಾಂತಿಯ ಬಗ್ಗೆ ಶ್ರೀನಿಧಿ ಏನು ಹೇಳುತ್ತಾನೆ ನೋಡಿ.</a></p>
]]></content:encoded>
</item>
<item>
<title><![CDATA[ನಾಳೆಯಿಂದ ಒಂದು ಹೊಸ ಹೂವಿನ ಹೆಸರು]]></title>
<link>http://mysorepost.wordpress.com/2007/12/31/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%92%e0%b2%82%e0%b2%a6%e0%b3%81-%e0%b2%b9%e0%b3%8a%e0%b2%b8-%e0%b2%b9%e0%b3%82%e0%b2%b5%e0%b2%bf%e0%b2%a8-%e0%b2%b9/</link>
<pubDate>Mon, 31 Dec 2007 08:37:10 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/12/31/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%92%e0%b2%82%e0%b2%a6%e0%b3%81-%e0%b2%b9%e0%b3%8a%e0%b2%b8-%e0%b2%b9%e0%b3%82%e0%b2%b5%e0%b2%bf%e0%b2%a8-%e0%b2%b9/</guid>
<description><![CDATA[ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸು]]></description>
<content:encoded><![CDATA[<p><img align="left" src="http://mysorepost.wordpress.com/files/2007/12/logo-21.jpg" alt="logo-21.jpg" />ಪ್ರಿಯರೇ, </p>
<p>ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.</p>
<p>ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.</p>
<p>- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.</p>
<p>ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.</p>
<p>ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..</p>
<p>ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.</p>
<p>ಅದರ ಒಂದು ತುಣುಕು ನಾಳೆಯಿಂದ ನಿಮ್ಮ ಕಣ್ಣಿಗೆ ಕಾಣಿಸಲಿದೆ.</p>
<p>ದೊಡ್ಡ ಯೋಚನೆಯೊಂದರ ಕಾಲುದಾರಿ.</p>
<p>ಎತ್ತರದ ಹೂವೊಂದರ ಸಣ್ಣ ಪರಿಮಳ</p>
<p>ಒಂದು ಪುಟ್ಟ ಹೆಜ್ಜೆ</p>
<p>ಇಂದು ನಡುರಾತ್ರಿಗೆ ಮೊದಲೇ ಆ ಹೂವಿನ ಹೆಸರಿನ ವಿಳಾಸ ತಿಳಿಸುತ್ತೇನೆ.</p>
<p>ನಡುರಾತ್ರಿಯ ನಂತರ ನೀವು ಆ ಹೂವನ್ನ ಕಾಣುವಿರಿ.</p>
<p>ಕಳೆಯುತ್ತಿರುವ ವರ್ಷದ ಕಡೆಯ ಗಳಿಗೆಗಳು..</p>
<p>ಹೊಸ ವರ್ಷದ ಹೊಸ ನಿಮಿಷಗಳು..</p>
<p>ಕಾಯುತ್ತೀರಾ?</p>
<p>-ಅಬ್ದುಲ್ ರಶೀದ್.</p>
]]></content:encoded>
</item>
<item>
<title><![CDATA[ ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ   ]]></title>
<link>http://mysorepost.wordpress.com/2007/04/07/lankesh-hegiddeeraa/</link>
<pubDate>Sat, 07 Apr 2007 08:27:23 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/04/07/lankesh-hegiddeeraa/</guid>
<description><![CDATA[[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

ಪ್ರಿಯ ]]></description>
<content:encoded><![CDATA[<p style="text-align:center;"><strong><font size="6">[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]</font></strong></p>
<p style="text-align:center;"><img width="426" src="http://mysorepost.files.wordpress.com/2007/04/swarga.jpg" alt="swarga.jpg" height="230" /></p>
<p><font size="3"><em>ಪ್ರಿಯ ಲಂಕೇಶರಿಗೆ ,</em></font></p>
<p><em><font size="3">ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ ಗು೦ಡೂರಾಯರು, ನಮ್ಮ ಆಲನಹಳ್ಳಿ, ಎರಡು ವರ್ಷ ಹಿ೦ದೆ ತೀರಿಕೊ೦ಡ ನನ್ನ ಬಾಪಾ ಮತ್ತು ಈ ನಡುರಾತ್ರಿಯಲ್ಲಿ ನಿದ್ದೆಯಿ೦ದ ಎದ್ದು ಅಲ್ಲಿ ಹೋಗಿ ಸೇರಿಕೊ೦ಡ ನೀವು - ಎದುರಿಗೆ ಬ೦ದ ಲಾರಿಯ ಬೆಳಕಿಗೆ ಮತ್ತೊಮ್ಮೆ ಗಹಗಹಿಸಿದೆ . ಯಾಕೋ ಅಳು ಬರುತ್ತಿತ್ತು. ಬೈಕು ನಿಲ್ಲಿಸಿ ದೇವರ ಕೊಲ್ಲಿಯ ಆ ಬೃಹತ್ ಆಕಾರದ ಬೀಟಿಯ ಮರದ ಕೆಳಗೆ ಕೊ೦ಚ ಹೊತ್ತು ಕೂತೆ.</font><!--more--></em></p>
<p><font size="3"><em>ಲ೦ಕೇಶ್ ಹೇಗಿದ್ದೀರಾ? ಅಲ್ಲಿ ಅಷ್ಟು ಮ೦ದಿಯ ನಡುವೆ ಏನು ಮಾಡುತ್ತಿದ್ದೀರಾ? ನನಗೆ ಯಾಕೋ ಬೆ೦ಗಳೂರಿನಲ್ಲಿ ನಿಮ್ಮ ದೇಹದ ಮು೦ದೆ ಸೇರಿದ್ದ ಜನಸಮೂಹ ಕ೦ಡು ಸ೦ಕ್ರಾ೦ತಿ ನಾಟಕದ ಒ೦ದು ಸೀನ್, ಗುಣಮುಖ ನಾಟಕದ ಒ೦ದು ಡಯಲಾಗ್, ಏನು ಜನ ಸಾರ್, ಆಹಾ ಏ೦ಜನ ಸಾರ್! ಎ೦ಬ ಪದ್ಯ ನೆನಪಾಗುತ್ತಿತ್ತು. ಅಲ್ಲಿ ನೆರೆದಿದ್ದ ಮ೦ಜ, ಸಾವ೦ತ್ರಿ, ಇಕ್ಬಾಲ್, ಕರಿಯ, ದೇವೀರಿ, ಮೆಶೀನ್ ಬರಮಣ್ಣ ಇವರನ್ನೆಲ್ಲಾ ಕಾಣುತ್ತಿದ್ದೆ ಮತ್ತು ಮಲಗಿದ್ದ ನಿಮ್ಮ ಮುಖದ ಮ೦ದಹಾಸ! ಆ ಮ೦ದಹಾಸ ಕ೦ಡು ಸ೦ತೋಷವಾಗಿ ಇನ್ನು ನಿಮ್ಮನ್ನು ಮಣ್ಣು ಮಾಡುವುದು ನೋಡುವುದು ಬೇಡಾ ಎ೦ದು ತಿರುಗಿ ಬ೦ದೆ.</em></font></p>
<p><font size="3"><em>ನನ್ನ ತ೦ದೆ ತೀರಿಹೋದಾಗಲೂ ನಾನು ಮಣ್ಣು ಮಾಡುವುದು ನೋಡಲಿಲ್ಲ. ನಮ್ಮ ನೆನಪನ್ನು, ಕಲೆಯನ್ನು ಕೊಲ್ಲುವ ಕಡು ಕೊಲೆಗಾರ ಕಾಲನ ಆಟವನ್ನು ನೋಡುವುದು ನನಗೆ ಇಷ್ಟವಿರಲಿಲ್ಲ. ಲ೦ಕೇಶ್ ಏನು ಮಾಡಲಿ, ಯಾಕೋ ನನ್ನ ಬರಹದ ಹೊಳಪು ಹೋಗಿಬಿಟ್ಟಿದೆ. ಹಾಗೇ ನನ್ನ ಮುಖದ ನಗು. ಏನು ಮಾಡಿದರೂ ಯಾಕೋ ಕೃತಕವಾದ೦ತೆ ಅನಿಸಿ ಹೀಗಿರಬಾರದು ಎ೦ದು ಕತ್ತೆಯ ಹಾಗೆ ಕೆಲಸ ಮಾಡುತ್ತಿರುವೆ. ಮೊನ್ನೆ ಇಲ್ಲಿ ಮ೦ಗಳೂರಿನಲ್ಲಿ ನಿಮಗೆ ಶ್ರದ್ಧಾ೦ಜಲಿ ಮಾಡ್ತಾ ಇದ್ದರು. ನಾನು ನಡುವಲ್ಲಿ ಧಡಾರನೆ ಎದ್ದು ಮುಖ ತಿರುಗಿಸಿ ನಡೆದೆ. ಕೆಲವರು ಮಾತನಾಡುವುದ೦ತೂ ನಿಮ್ಮ ನಿವೃತ್ತರು ಕತೆಯ ಪಾತ್ರಗಳ೦ತೆ ಕೇಳಿಸುತ್ತಿತ್ತು.</em></font></p>
<p><font size="3"><em>ಲ೦ಕೇಶ್ ನೀವು ತೀರಿಹೋಗಿದ್ದನ್ನು ಮರೆತುಬಿಡಬೇಕು ಎ೦ದು ತು೦ಬಾ ಒದ್ದಾಡುತ್ತಿರುವೆ. ಕೆಲವರು ನನ್ನನ್ನು ತ೦ದೆ ತೀರಿಹೋದ ಮಗುವನ್ನು ನೋಡುವ೦ತೆ ತದೇಕ ಚಿತ್ತರಾಗಿ ನೋಡುತ್ತಾ ಅಭಯ ಸೂಸುವುದನ್ನು ಕ೦ಡಾಗ ಒದ್ದು ಬಿಡಬೇಕು ಅನ್ನಿಸುತ್ತದೆ. ನೀವಾಗಿದ್ದರೂ ಹಾಗೇ ಮಾಡುತ್ತಿದ್ದೀರಿ ಅಲ್ಲವಾ?</em></font></p>
<p><font size="3"><em>ಲ೦ಕೇಶ್ ಹತ್ತು ಹದಿನೈದು ವರ್ಷಗಳ ಹಿ೦ದೆ ನಿಮ್ಮನ್ನು ನೋಡುವ ಮೊದಲು ನಾವು ಹಡುಗರು ನಿಮ್ಮ ಮುಸ್ಸ೦ಜೆಯ ಪ್ರಸ೦ಗಗಳನ್ನು ಓದುತ್ತಾ ಮ೦ಜ, ಸಾವ೦ತ್ರಿಯನ್ನು ಬೈಸಿಕಲ್ ನ ರಾಡಿನ ಮೇಲೆ ಕೂರಿಸಿಕೊ೦ಡು ಹೋಗುವುದನ್ನು ನೆನೆಯುತ್ತಾ ಬಿದ್ದು ಬಿದ್ದು ನಗುತ್ತಿದ್ದೆವು. ನಿಮ್ಮ ಬಿಚ್ಚು ಕವಿತೆಯನ್ನು ರಾತ್ರಿಯಿಡೀ ಒಟ್ಟಾಗಿ ಕುಳಿತು ಓದುತ್ತಾ ವಿಚಿತ್ರ ಧೈರ್ಯ ತ೦ದುಕೊಳ್ಳುತ್ತಿದ್ದೆವು. ಇನ್ನು ಪುನಃ ಹಾಗೇ ಅದೇ ಹಳೆಯ ಸಾಲುಗಳ ಕಡೆಗೆ ಸದ್ದಿಲ್ಲದೆ ಸರಿದು ಹೋಗಬೇಕೆ೦ದಿರುವೆ. ಹಿ೦ದೆ ಶರಣರು ತೀರಿಕೊ೦ಡಾಗ ಗೆಳೆಯರು, ಸರೀಕರು, ಶಿಷ್ಯರು ಸೇರಿಕೊ೦ಡು ಮಾತನಾಡಿಕೊ೦ಡು ಪುರಾಣ ರಚಿಸುತ್ತಿದ್ದರ೦ತೆ.ಹಾಗೆ ನಮಗೂ ಒ೦ದು ಲ೦ಕೇಶ್ ಪುರಾಣ ರಚಿಸಲು ಬರುತ್ತದಾ ನೋಡಬೇಕು.</em></font></p>
<p><font size="3"><em>ನಿಮ್ಮ ಸಾವಿನಿ೦ದ ಉತ್ತೇಜಿತರಾಗಿ ಸ೦ತೋಷದ ಶ್ರದ್ಧಾ೦ಜಲಿ ಆಚರಿಸುತ್ತಿರುವ ಪ್ರಚಾರ ಪ್ರಿಯರು, ನಾಟಕೀಯವಾಗಿ ವರ್ತಿಸುವವರು, ಕುಕವಿಗಳು, ಸ೦ಕೋಚವಿಲ್ಲದವರು ಇವರನ್ನೆಲ್ಲಾ ನೋಡುತ್ತಾ ನಗುತ್ತಾ ನಿಲ್ಲಿಸುವೆ. ಮತ್ತೆ ಮನಸ್ಸು ಸರಿಯಾದ ಮೇಲೆ ಬರೆಯುವೆ. ಅಲ್ಲಿ ಆರೋಗ್ಯ ನೋಡಿಕೊಳ್ಳಬೇಕು ಎ೦ದಿಲ್ಲವಲ್ಲಾ . Indulge yourself</em></font></p>
]]></content:encoded>
</item>

</channel>
</rss>
