<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಕ್ರಿಯೇಟಿವ್-ಪೇಜ್ &amp;laquo; WordPress.com Tag Feed</title>
	<link>http://wordpress.com/tag/ಕ್ರಿಯೇಟಿವ್-ಪೇಜ್/</link>
	<description>Feed of posts on WordPress.com tagged "ಕ್ರಿಯೇಟಿವ್-ಪೇಜ್"</description>
	<pubDate>Wed, 08 Oct 2008 07:11:50 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಉಡುಪಿಯೆಂಬ ಉತ್ಸವನಗರಿಯ ನೆನಪಲ್ಲಿ...]]></title>
<link>http://aksharavihaara.wordpress.com/?p=146</link>
<pubDate>Mon, 06 Oct 2008 13:50:23 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/10/06/%e0%b2%89%e0%b2%a1%e0%b3%81%e0%b2%aa%e0%b2%bf%e0%b2%af%e0%b3%86%e0%b2%82%e0%b2%ac-%e0%b2%89%e0%b2%a4%e0%b3%8d%e0%b2%b8%e0%b2%b5%e0%b2%a8%e0%b2%97%e0%b2%b0%e0%b2%bf%e0%b2%af-%e0%b2%a8%e0%b3%86%e0%b2%a8/</guid>
<description><![CDATA[ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವ ಮೆರವಣಿ]]></description>
<content:encoded><![CDATA[<p>ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವ ಮೆರವಣಿಗೆಯಂತೆ ಅದು!  ದೀಪಾವಳಿ ಹತ್ತಿರ ಬಂದರೂ ಈ ಊರಲ್ಲಿ ಇನ್ನೂ ಗಣೇಶನಿಗೆ ಮುಕ್ತಿ ಸಿಕ್ಕಿಲ್ಲ  ಅಂದುಕೊಳ್ಳುತ್ತಾ ಮೆರವಣಿಗೆ ನೋಡಲು ಹೊರಗಡೆ ಬಂದೆ.  ಅದೇನು ಜಬರ್‌ದಸ್ತ್ ಉತ್ಸವ ಅಂತೀರಾ?! ಮೆರವಣಿಗೆ ಹೋಗಿ ಹತ್ತು ನಿಮಿಷವಾದರೂ ನನಗೆ ಹಾಯ್ದುಹೋಗಿದ್ದು  ಗಣೇಶನ ಮೆರವಣಿಗೆಯೋ ಅಥವಾ ಶವಯಾತ್ರೆಯೋ ಅನ್ನೋದು ಬಗೆಹರಿಯಲಿಲ್ಲ! </p>
<p>ಅದ್ಯಾಕೊ ನನಗೆ ಉತ್ಸವ, ಮೆರವಣಿಗೆ ಅಂದಾಗಲೆಲ್ಲಾ  ಉಡುಪಿಯದ್ದೇ ನೆನಪಾಗತ್ತೆ. ಅಲ್ಲಿನ ಕೊಂಕಣಿ ಮಂದಿ ನವರಾತ್ರಿ ವೇಳೆಯಲ್ಲಿ  ಒಂದು ಶಾರದೋತ್ಸವ ಮಾಡ್ತಾರೆ, ಚೌತಿಯಲ್ಲಿ  ಗಣೇಶೋತ್ಸವ ಮಾಡ್ತಾರೆ...ಆ ಎರಡು ಕಾರಣಕ್ಕೆ ಮಾತ್ರ ನಮಗೆಲ್ಲಾ  ಕೊಂಕಣಿ ಮಂದಿ ಇಷ್ಟವಾಗುವುದು! ವರ್ಷದ ೩೬೫ ದಿನವೂ ಆ ಮಂದಿ ಮನೆ ಬಾಗಿಲು ತೆರೆದಿರುವುದಿಲ್ಲ! ಆ ಮನೆಗಳಿಗೆ ಬಂದುಹೋಗುವವರೂ ಇಲ್ಲ  ಅನ್ನಿಸತ್ತೆ!  ನಾವು ಕಾಲೇಜಿಗೆ ಹೋಗುವ ಬೀದಿ ತುಂಬಾ ಕೊಂಕಣಿಗರದ್ದೇ ಮನೆಗಳಿತ್ತು. ಸದಾ ಬಾಗಿಲು ಮುಚ್ಚಿರುತ್ತಿತ್ತು. ವೈವೇ, ಕಸಲ್‌ರೇ, ಕಿತ್ತಲೇ ಮಾಮೂ...ಎನ್ನುತ್ತಾ ಪಕ್ತಾ ದುಡ್ಡು  ಮಾಡುವುದೊಂದು ಬಿಟ್ಟು  ಈ ಜುಗ್ಗರಿಗೆ ಮತ್ತೇನೂ ಗೊತ್ತಿಲ್ಲ  ಅಂತಾ ಕಾಲೇಜಿಗೆ ಹೋಗುವಾಗಲೆಲ್ಲಾ  ಆ ಮಂದಿಗೆ ಬೈದುಕೊಂಡೇ ಹೋಗುತ್ತಿದ್ದೇವು!</p>
<p>ಕೇವಲ ದುಡ್ಡು  ಮಾಡುವುದು ಮಾತ್ರವಲ್ಲ, ಮಾಡಿದ ದುಡ್ಡನ್ನು ಖರ್ಚು ಮಾಡುವ ಕಲೆಯನ್ನೂ ಕೊಂಕಣಿಗರು, ದಕ್ಷಿಣ ಕನ್ನಡದ ಮಂದಿಯಿಂದಲೇ ಕಲಿಯಬೇಕು. ಉತ್ಸವ ಅಂದಾಗ ನನಗೆ ಇವತ್ತಿಗೂ ಕಣ್ಮುಂದೆ ಬಂದು ನಿಲ್ಲುವುದು ಎಲ್.ವಿ.ಟಿ ದೇವಸ್ಥಾನದ ಶಾರದೋತ್ಸವ. ಏನಿಲ್ಲ  ಅಂದ್ರು ಸುಮಾರು ೧೫-೨೦ ಟ್ಯಾಬ್ಲೊಗಳ ಮೆರವಣಿಗೆ ಅದು. ಪ್ರತಿವರ್ಷವೂ ವಿಭಿನ್ನ ಟ್ಯಾಬ್ಲೊಗಳು. ಇನ್ನು ಚಂಡೆ ಬಡಿತಕ್ಕೆ ದಕ್ಷಿಣ ಕನ್ನಡ ಟ್ರೇಡ್ ಮಾರ್ಕ್. ಗಬ್ಬು  ಹಾ(ಆ)ರ್ಕೆಸ್ಟ್ರಾದ ಸೊಗಡಿಲ್ಲದ, ಚಂಡೆ, ವಾದ್ಯಗಳ ಅದ್ಬುತ ಉತ್ಸವ ಅದು. ಮಧ್ಯರಾತ್ರಿ ೧.೩೦-೨ ಗಂಟೆಯವರೆಗೂ ನಡೆಯುವ ಆ ಮೆರವಣಿಗೆಯನ್ನು ಉಡುಪಿಯಲ್ಲಿ  ಇದ್ದಷ್ಟು  ಕಾಲವೂ ಮಿಸ್ ಮಾಡಿಕೊಳ್ಳಲಿಲ್ಲ. </p>
<p>ಚಂಡೆಗೆ ಸರಿಯಾಗಿ ಕುಣಿಯುವ ಯಜಮಾನರ ತಂಡ ಒಂದು ದಿಕ್ಕಾದರೆ, ಇನ್ನೊಂದೆಡೆ ನಮ್ಮ  ಮಠದ ಹುಡುಗರ ನರ್ತನ! ಮೆರವಣಿಗೆ ಕುಣಿತ ಅಂದ್ರೆ ಕುಡುಕರ ಕುಣಿತ ಅನ್ನೋ ಆಪಾದನೆಯಿದೆ. ಆದ್ರೆ ಉಡುಪಿ ಮಾತ್ರ ಅದರಿಂದ ಹೊರತು. ಉಡುಪಿ ಪರಿಸರದ ಮೆರವಣಿಗೆಯಲ್ಲಿ  ಹೆಜ್ಜೆ ಹಾಕುವವರು ತೀರಾ ಸಭ್ಯಸ್ತ ಮಂದಿ. ಕಾಲೇಜಿಗೆ ಬರುವ ಚೆಂದ ಚೆಂದದ ಕೊಂಕಣಿ ಹುಡುಗಿಯರೂ ಹೆಜ್ಜೆ  ಹಾಕುತ್ತಿದ್ದರು. ಅದನ್ನು ನೋಡಲೇಂದೇ ಕೆಲವರು ಹೋಗುತ್ತಿದ್ದರೂ ಎಂಬುದು ಸತ್ಯವಾದರೂ, ಎಲ್ಲಿಯೂ ಅಸಭ್ಯ ವರ್ತನೆ  ಇರುತ್ತಿರಲಿಲ್ಲ.  ಹುಡುಗಿಯರೂ ಸೇರಿದಂತೆ ಎಲ್ಲರೂ ಉತ್ಸವದ ಆನಂದ ಸವಿಯುವ ಮನೋಭಾವದವರಾಗಿದ್ದರು. ಅಂದಹಾಗೆ ಕೆಲವರು ಟೈಟಾಗಿ ಬರುತ್ತಿರಲಿಲ್ಲ  ಎಂದೇನಲ್ಲ! ಅವರ ಕುಣಿತಕ್ಕೆ ಆಯೋಜಕರು ಪ್ರತ್ಯೇಕ ಗಲ್ಲಿ  ಒದಗಿಸಿಕೊಟ್ಟು ಮೆರವಣಿಗೆಯ ಶಿಸ್ತನ್ನು ಕಾಪಾಡುತ್ತಿದ್ದರು. ಆ ಶಿಸ್ತಿನಿಂದಲೇ ಇರಬೇಕು ಇವತ್ತಿಗೂ ಅಲ್ಲಿನ ಉತ್ಸವ ನೆನಪಾಗುವುದು.</p>
<p>ಆಡಂಬರಕ್ಕೆ ದಕ್ಷಿಣ ಕನ್ನಡದ ಮಂದಿ ಅಂತಾ ಮೊದಲೇ ಹೇಳಿದೆ. ಹೌದು, ಕೇವಲ ಕೊಂಕಣಿ ಮಂದಿಯ ಮೆರವಣಿಗೆ ಮಾತ್ರವಲ್ಲ, ರಥಬೀದಿಯಲ್ಲಿ  ನಡೆಯುವ ಮೆರವಣಿಗೆ, ಪರ್ಯಾಯದ ಮೆರವಣಿಗೆ, ಅಷ್ಟಮಿ,ವಿಟ್ಲಪಿಂಡಿ...ಊಹುಂ ಯಾವುದನ್ನೂ  ತೆಗೆದು ಹಾಕುವಂತಿಲ್ಲ. ಶಿರೂರು ಸ್ವಾಮಿಗಳನ್ನು ಜನ ಏನೂ ಬೇಕಾದರೂ ಆಡಿಕೊಳ್ಳಲಿ, ಆದರೆ ಆ ಸ್ವಾಮಿಗಳಿಂದ ಮೆರವಣಿಗೆಗೊಂದು ಹೊಸ ರಂಗು ಬರುತ್ತಿದ್ದದಂತೂ ಸುಳ್ಳಲ್ಲ. ಹುಲಿವೇಷ, ಡ್ರಮ್ ಕುಣಿತ...ಪ್ರತಿವರ್ಷ ಮೆರವಣಿಗೆಯಲ್ಲೊಂದು ಹೊಸತನ ತಂದಿಟ್ಟ  ಹೆಗ್ಗಳಿಕೆ ಶೀರೂರು ಶ್ರೀಗಳದ್ದೆ ಬಿಡಿ!</p>
<p>ತಗೋಳೇ, ತಗೋಳೇ...ಅವ ಕಿರುಚುತ್ತಲೇ ಇದ್ದ. ಯಾರು,ಯಾರಿಂದ,ಏನನ್ನು ತಗೋಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲರೂ ‘ಹೋ’ ಎಂದು ಕಿರುಚುತ್ತಾ, ನಲಿಯುತ್ತಲೇ ಇದ್ದರು...ಇದು ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವದ ಒಂದು ಸ್ಯಾಂಪಲ್ ಅಷ್ಟೇ. ಊರು ತುಂಬಾ ಬಣ್ಣ, ಬಣ್ಣದ ದೀಪ ಹಾಕಿ, ಒಂದಿಷ್ಟು  ಕುಡುಕರನ್ನು ಸೇರಿಸಿಕೊಂಡು , ಹಾರ್ಕೆಸ್ಟ್ರಾ ಮಾಡಿಕೊಂಡು, ಯಾರೋ ದೇಣಿಗೆ ಕೊಟ್ಟ  ಒಂದಿಷ್ಟು  ದುಡ್ಡು  ಹಾಳು ಮಾಡುವ ಬದಲು ದಕ್ಷಿಣ ಕನ್ನಡದ ರೀತಿಯಲ್ಲಿ  ಅಚ್ಚುಕಟ್ಟಾದ, ಸಂಸಾರವೇ ಭಾಗವಹಿಸಬಹುದಾದ ಮೆರವಣಿಗೆ ಆಯೋಜಿಸಲು ಬೆಂಗಳೂರಿನ ಮಂದಿಗೆ ಏಕೆ ಸಾಧ್ಯವಾಗುವುದಿಲ್ಲ  ಎಂಬುದೇ ನನಗೆ ಅರ್ಥವಾಗದು. ಅಂಥ ಉತ್ಸವ ನೋಡಿ ಒಂದಿಷ್ಟು  ಬೈದು, ಉಡುಪಿ ಉತ್ಸವ ನೆನಪಿಸಿಕೊಳ್ಳುವುದೊಂದೇ ನನ್ನಿಂದಾಗುವ ಕೆಲಸ ಎಂಬುದನ್ನು ನೆನಪಿಸಿಕೊಂಡಾಗಲೆಲ್ಲಾ  ಬೇಸರವಾಗತ್ತೆ...</p>
]]></content:encoded>
</item>
<item>
<title><![CDATA[ನಿನ್ನ ಪ್ರೀತಿಗೆ, ಅದರ ರೀತಿಗೆ...!]]></title>
<link>http://aksharavihaara.wordpress.com/?p=82</link>
<pubDate>Thu, 21 Aug 2008 06:41:30 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/08/21/%e0%b2%a8%e0%b2%bf%e0%b2%a8%e0%b3%8d%e0%b2%a8-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%97%e0%b3%86-%e0%b2%85%e0%b2%a6%e0%b2%b0-%e0%b2%b0%e0%b3%80%e0%b2%a4%e0%b2%bf%e0%b2%97/</guid>
<description><![CDATA[ಹೇ ಪುಟ್ಟಿ,
ನಿನಗೊಂದು ವಿಷ್ಯಾ ಗೊತ್ತಾ?  ನಿ]]></description>
<content:encoded><![CDATA[<h3>ಹೇ ಪುಟ್ಟಿ,<br />
ನಿನಗೊಂದು ವಿಷ್ಯಾ ಗೊತ್ತಾ?  ನಿನ್ನೆ ಅದೇನೋ ಸಿಗಲಿಲ್ಲ ಅಂತಾ ನನ್ನ ಸೂಟ್‌ಕೇಸ್‌ನಲ್ಲಿನ ಹರಗಣಗಳನೆಲ್ಲಾ ಹರಡಿಕೊಂಡು ಕೂತಿದ್ದೆ. ಆಗ ನಾನು, ನಿನಗೆ ಈಗ ನಾಲ್ಕು ವರ್ಷದ ಕೆಳಗೆ ಬರೆದ ಸೊಗಸಾದ... ಅಲ್ಲಲ್ಲ ನಿನ್ನನ್ನು ಅದ್ಬುತವಾಗಿ ಬಕರಾ ಮಾಡಿದ ಪತ್ರವೊಂದು ಸಿಕ್ತು! ವಾಸ್ತವವಾಗಿ ಆ ಪತ್ರ ನಿನ್ನ ಕೈಯಲ್ಲಿ ಇರಬೇಕಾಗಿತ್ತು. ಆದ್ರೆ ಅದು ಹೇಗೆ ಮತ್ತೆ ನನ್ನ  ಕೈಗೆ ಬಂತೋ ಗೊತ್ತಿಲ್ಲ. ಅಂದಹಾಗೇ ಆ ಪತ್ರ ಯಾವುದು ಅಂತಾ ನೆನಪಿಗೆ ಬಂತಾ? ನಾನು ಬಕರಾ ಆಗಿದ್ದರೆ  ನಿನಗೆ ಆ ಪತ್ರ ಚೆನ್ನಾಗಿ ನೆನಪಿರುತಿತ್ತು. ಆದರೆ ಬಕರಾ ಆಗಿದ್ದು ನೀನಲ್ಲ! ಹಾಗಾಗಿ ನೆನಪಿದ್ದರೂ ಖಂಡಿತಾ "ನೆನಪೇ ಇಲ್ಲ ಕಣೋ" ಅಂತಿಯಾ ಅನ್ನೋದು ಗೊತ್ತು. ಆದ್ರೂ ಹೀಗೆ ಸುಮ್ನೆ ಕೇಳಿದೆ ಅಷ್ಟೆ!</h3>
<h3>ಅದೇ ಕಣೇ, ನೀನು ನನಗೆ ಪ್ರಪೋಸ್ ಮಾಡಿದ ನಂತರ ನಾನು ನಿನಗೊಂದು ಸೊಗಸಾದ ಪತ್ರ ಬರೆದುಕೊಟ್ಟಿದ್ದೆನಲ್ಲ, ಅದೇ ಪತ್ರದ ಕುರಿತಾಗಿ ನಾನು ಮಾತಾಡ್ತ ಇರೋದು. ತಾಳು ಪತ್ರದ ಒಂದಿಷ್ಟು ಸಾಲನ್ನು ಓದುತ್ತೀನಿ. ಆಮೇಲಾದರೂ ನಿನಗೆ ಆ ಪತ್ರ ನೆನಪಿಗೆ ಬರತ್ತಾ ನೋಡು...</h3>
<h3>ಹಾಯ್ ಪುಟ್ಟಿ,<br />
"ಪುಟ್ಟಿ" ಇದು ನಾನು ಇನ್ಮೇಲೆ ನಿನ್ನನ್ನು ಪ್ರೀತಿಯಿಂದ ಕರೆಯೋ ಹೆಸರು. ನೀನು ನೋಡ್ಲಿಕ್ಕೆ ಹಳೇ ಮುದುಕಿ ತರ ಇದ್ದೀಯಾ. ಆದ್ರೂ ನಿನಗೆ ಅಜ್ಜಿ ಅಂತಾ ಕರೆದರೆ ಬೇಜಾರಾಗಬಹುದು... ಅಲ್ಲಲ್ಲ ನನಗೆ ಅವಮಾನ ಆಗಬಹುದು ಅಂತಾ ಪುಟ್ಟಿ ಅಂತಾ ಹೆಸರಿಟ್ಟಿದ್ದೇನೆ. ನೀನು ನನ್ನಂತ ಒಳ್ಳೆ ಹುಡುಗನ ಮೇಲೆ ಅದ್ಯಾಕೆ ಕಣ್ಣು ಹಾಕಿದೆಯೋ ನನಗಂತೂ ಅರ್ಥವಾಗ್ತಾ ಇಲ್ಲ! ನೀನು ಮೆಂಟಲಿ ಸ್ವಲ್ಪ ವೀಕ್ ಅಂತಾ ಯಾರೋ ಹೇಳಿದ್ದು ಕೇಳಿದ್ದೆ. ಬೇಜಾರಾಗಿ, ಲವ್ ಫೇಲ್ ಆಯಿತು ಅಂತಾ ಕೋಪ ಮಾಡಿಕೊಂಡು, ಬಾವಿ ಹಾರಿ ಸತ್ತರೆ ಅನ್ನೋ ಭಯದಿಂದ ನಾನು ನಿನ್ನ ಪ್ರಪೋಸ್‌ನ್ನು ಒಪ್ಪುತ್ತಿದ್ದೇನೆ. ಆದ್ರೆ ಹಾಗೆ ಒಪ್ಪುವ ಮೊದಲು ಒಂದಿಷ್ಟು ವಿಚಾರ ಹೇಳಿ ಬಿಡುತ್ತೇನೆ. ಆ ಮೇಲೂ ನೀನು ನನ್ನನ್ನು ಪ್ರೀತಿಸುತ್ತೇನೆ ಅಂದ್ರೆ ಪ್ರೀತಿಸು. ನನ್ನದೇನೂ ಅಭ್ಯಂತರವಿಲ್ಲ.</h3>
<h3>ನಾನು ಹುಟ್ಟಾ ಒರಟ. ಜತೆಗೆ ಜಗಳಗಂಟ ಕೂಡ. ಒಬ್ಬ ಹುಡುಗನಿಗೆ ಏನೆಲ್ಲಾ ಚಟಗಳು ಇರಬಾರದೋ ಅವೆಲ್ಲಾ ನನಗಿದೆ. ದಿನಾ ರಾತ್ರಿ ಮನೆಗೆ ಬಂದೇ ಬಿಡ್ತೀನಿ ಅಂತಾ ಹೇಳೋಕಾಗಲ್ಲ. ಆದ್ರೆ ವಾರಕೊಮ್ಮೆಯಾದ್ರೂ ಬರ್ತಿನಿ. "ಮದ್ವೆ ಆದಮೇಲೆ ಸರಿಹೋಗ್ತಾನೆ. ಹೆಂಡ್ತಿಯಾದ ನಾನು ನಿನಗೆ ಲಗಾಮು ಹಾಕ್ತಿನಿ...ಊಹುಂ ಅದನ್ನು ಕನಸಿನಲ್ಲಿಯೂ ಕಾಣಬೇಡ. ಹಾಗೆ ಕನಸು ಕಂಡು ಬಂದ ಎರಡು ಮೂರು ಹುಡುಗಿಯರೂ ಕೈಲಾಗದೇ ಸೋತು ವಾಪಾಸ್‌ ಹೋಗಿದಾರೆ. ನಮ್ಮ ಅಪ್ಪ, ಅಮ್ಮನಿಗೂ ನಾನು ಮದ್ವೆ ಆದ ಮೇಲೆ ಸರಿಹೋಗಬಹುದು ಅನ್ನೋ ತೆವಲಿದೆ. ಎಷ್ಟೊ ಗಂಡು ಹುಡುಗರ ಅಪ್ಪ,ಅಮ್ಮ ಹಾಗೇ ಅಂದುಕೊಂಡು ಮಗನಿಗೆ ಮದ್ವೆ ಮಾಡಿ, ಹೆಣ್ಣುಮಗಳೊಬ್ಬಳ ಸುಂದರವಾದ ಬಾಳನ್ನು ಹಾಳು ಮಾಡಿ ಬಿಡ್ತಾರೆ. ಹಾಗಾಗಿ ನಾನು ನಿನಗೆ ಮೊದಲೇ ಹೇಳಿಬಿಡ್ತೀನಿ ನನ್ನನ್ನು ಸರಿ ಮಾಡ್ತಿನಿ ಅನ್ನೋ ಕನಸು ಕಟ್ಟಿಕೊಂಡು ಮಾತ್ರ ನನ್ನ ಸಹವಾಸಕ್ಕೆ ಬೀಳಬೇಡ.</h3>
<h3>ಇನ್ನೂ ನನಗೊಂದು ಉದ್ಯೋಗ, ಮನೆ...ಊಹುಂ ಅವನ್ನೆಲ್ಲಾ ಕೇಳಲೇಬೇಡ. ನನ್ನ ಖರ್ಚಿಗೆ ಎಷ್ಟೋ ಬೇಕೋ, ಅಷ್ಟನ್ನು ಹೇಗೋ ಸಂಪಾದನೆ ಮಾಡ್ತೀನಿ. ಆಯುಷ್ಯ ಪೂರ್ತಿ ಹೋಟೆಲ್ಲು, ಬಾರ್‌ಗಳಲ್ಲಿ ಕಾಲ ಕಳೆಯೋ ನನಗೆ ಮನೆಯ ಅವಶ್ಯಕತೆಯೇ ಇಲ್ಲ. ಹೆಂಡ್ತಿ, ಸಂಸಾರ...ನನ್ನಂತವನಿಗೆ ಹೇಳಿ ಮಾಡಿಸಿದ್ದಲ್ಲಾ ಅಂತಾ ಯ್ಯಾವತ್ತೋ ನಿರ್ಧರಿಸಿಬಿಟ್ಟಿದ್ದೀನಿ.</h3>
<h3>ಈ ಶಾಕ್ ಸುಧಾರಿಸಿಕೊಳ್ಳಲು ನಿನಗೆ ತುಂಬಾ ದಿನ ಬೇಕು ಅಂದುಕೊಂಡಿದ್ದೀನಿ. ನೋಡು ಸರಿಯಾಗಿ ಆಲೋಚನೆ ಮಾಡು. ದೀಪ ಸುಡತ್ತೆ ಅಂತಾ ಗೊತ್ತಿದ್ದರೂ ಕೈ ಇಟ್ಟೆ ನೋಡುತ್ತೇನೆ ಅನ್ನೋದು ಸರಿಯಲ್ಲ ಅಂದುಕೊಳ್ಳುತ್ತೇನೆ. ಅದಕ್ಕೂ ಮೀರಿದ್ದು ನಿನ್ನಿಷ್ಟ.<br />
ಇಂತಿ<br />
ಮೂರು ಬಿಟ್ಟವ!</h3>
<h3>ಆವತ್ತಿನ ಶಾಕ್ ಸುಧಾರಿಸಿಕೊಳ್ಳಲು ನಿನಗೆ ತಿಂಗಳಗಟ್ಟಲೇ ಹಿಡಿಯಿತು. ನಾನು ಹೇಳಿದೆಲ್ಲಾ ನಿಜವಾ ಅನ್ನೋದನ್ನಾ ನೀನು ಸಾಕಷ್ಟು ಸಲ ಪರೀಕ್ಷೆ  ಮಾಡಿದ್ದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. "ಇಲ್ಲ ಕಣೋ ನನಗೆ ನಿನ್ನ ಮೇಲೆ ನಂಬಿಕೆ ಇತ್ತು. ಒಮ್ಮೆ  ನೀನು ಹಾಗೆ ಆಗಿದ್ರೂ ನಾನು ನಿನ್ನನ್ನೇ ಸ್ವೀಕರಿಸಬೇಕು ಅನ್ನುವಷ್ಟು ಪ್ರೀತಿ ಹೃದಯದಲ್ಲಿ ಉಕ್ಕಿತು’ ಅಂತೆಲ್ಲಾ  ಈಗ ನೀನು ಭಾಷಣ ಬಿಗಿತೀಯಾ ಬಿಡು! ಆದ್ರೂ ನನ್ನ ಕರ್ಮವೋ ನಿನ್ನ ಪುಣ್ಯವೋ ಗೊತ್ತಿಲ್ಲ ನಂಗೆ ಕೊನೆಗೂ ಗಂಟು ಬಿದ್ದೆ!<br />
ಇಂತಿ<br />
ನಿನ್ನವ.</h3>
]]></content:encoded>
</item>
<item>
<title><![CDATA[ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ?]]></title>
<link>http://aksharavihaara.wordpress.com/?p=55</link>
<pubDate>Tue, 01 Jul 2008 14:28:07 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/07/01/%e0%b2%a8%e0%b2%ae%e0%b3%8d%e0%b2%ae-%e0%b2%ac%e0%b2%a6%e0%b3%81%e0%b2%95%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%82%e0%b2%ac%e0%b2%82%e0%b2%a7%e0%b2%97%e0%b2%b3%e0%b2%a8/</guid>
<description><![CDATA[ಹೋಯ್ ಬಜಾರಿ
ನೀ ಪತ್ರ ಓದಲು ಒಲ್ಲೆ ಅಂದಮೇಲೆ ]]></description>
<content:encoded><![CDATA[<h3>ಹೋಯ್ ಬಜಾರಿ<br />
ನೀ ಪತ್ರ ಓದಲು ಒಲ್ಲೆ ಅಂದಮೇಲೆ ನಂಗೂ ಪತ್ರ ಬರೆಯಲು ಒಲ್ಲೆ ಅನ್ನಿಸುತ್ತಿದೆ! ನೀನು ಹೇಳಿದ ಹಾಗೇ ಬದುಕಿನ ಎಲ್ಲಾ ಘಟ್ಟಗಳು ಒಂದು ಕ್ರ್‍ಎಜು ಅಷ್ಟೆ. ಅವುಗಳಲ್ಲಿ ಈ ಲವ್ವು ಫೀಲುಗಳು ಒಂದು. ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬನೂ ತನ್ನ ಚಿಂತನೆ, ಆಲೋಚನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯುತ್ತಾನೆ. ಅಪ್ಪ, ಅಮ್ಮ, ಗೆಳೆಯ ಎಲ್ಲಾ ಐಡೆಂಟಿಗಳನ್ನು ಕಳಚಿಕೊಂಡು ಬದುಕಲು ಪ್ರಯತ್ನಿಸುತ್ತಾನೆ. ಒಂದಿಷ್ಟು ದಿನ ಬದುಕಿಯೂ ಬದುಕುತ್ತಾನೆ! ಆ ಮೇಲೆ ಅವನಿಗೆ ತಾನು ಒಂಟಿ ಎಂಬ ಭಾವನೆ ಕಾಡಲು ಶುರುವಿಡತ್ತೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಂಗಾತಿ ಬೇಕು ಅನ್ನಿಸತ್ತೆ. ಹಾಗೇ ಶುರುವಾಗುವುದು ಈ ಲವ್ವು, ಫೀಲು. "ಹೆಣ್ಣು ಬಂದು ಮೂರು ದಿನ ಎಮ್ಮೆ ಬಂದು ಆರು ದಿನ’ ಅನ್ನೋ ತರಹದ್ದು ಇದರ ಟೇಸ್ಟು. ಒಂದಷ್ಟು ದಿನಕ್ಕೆ ಹೆಚ್ಚಿನವರಿಗೆ ತಾವು ಆರಿಸಿಕೊಂಡ ಜೀವನದ ಸಂಗಾತಿ ಕೂಡ ಬೋರ್ ಅನ್ನಿಸಿ ಬಿಡುತ್ತಾಳೆ. ಹಾಗಾಗಿಯೇ ಇರಬೇಕು ಕಣೇ ಕೆಲವರು ೬೦ ದಾಟಿದರೂ ೨೦ರ ಕೂಸುಗಳ ಜೊತೆ ಸುತ್ತಲು ಹಾತೊರೆಯುವುದು!<br />
ಇದೊಂದು ತರಹ ವಿಚಿತ್ರ ಸಮಾಜ ಅಲ್ವಾ? ಎಲ್ಲಿ ನೋಡಿದರೂ ಗಂಡು, ಹೆಣ್ಣುಗಳ ಸಂಬಂಧ. ಕೆಲವು ನೈತಿಕವಂತೆ, ಇನ್ನೂ ಕೆಲವು ಅನೈತಿಕವಂತೆ! ಹುಡುಗ, ಹುಡುಗಿ ಒಟ್ಟಿಗೆ ಇದ್ದರು ಅಂದ್ರೆ ಅವರ ನಡುವೆ ಯಾವುದಾದರೂ ಒಂದು ಸಂಬಂಧ ಕಟ್ಟದೇ ಇದ್ದರೆ ನಮಗೆ ಸಮಾಧಾನವೇ ಇಲ್ಲ! ಇನ್ನೂ ನಮ್ಮ ಹಳ್ಳಿಯ ಮನೆಯ ಮಂದಿಗಳು ಇವತ್ತಿಗೂ ಬದುಕು ಅಂದ್ರೆ ಸಂಬಂಧ ಬೆಳೆಸುವುದು, ಮದ್ವೆ, ಸಂಸಾರ...ಇಷ್ಟೆ ಅನ್ನೋ ಜಾಡ್ಯದಲ್ಲೇ ಮುಳುಗಿ ಹೋಗಿದ್ದಾರೆ. ಒಂತರಹ ನಿನ್ನ ಅಪ್ಪ, ಅಮ್ಮಂದಿರಂತೆ! ಆದ್ರೆ ನಮಗೆಲ್ಲಾ ಅವುಗಳಿಗಿಂತ ಭಿನ್ನವಾದದ್ದು ಏನಿದೆ ಎಂದು ಆಲೋಚಿಸುವುದೇ ಒಂದು ಬದುಕು!<br />
ಹೌದಲ್ವಾ ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ? ನನಗಂತೂ ಗೊತ್ತಿಲ್ಲ. ನನ್ನ ಮಟ್ಟಿಗೆ ಬದುಕೆಂಬುದೊಂದು ಮೂಕಜ್ಜಿಯ ಕನಸೇ ಸರಿ. ಹೋಗ್ಲಿ ಬಿಡು ಕೆಲವಷ್ಟು ವಿಚಾರಗಳ ಕುರಿತಾಗಿ ಜಾಸ್ತಿ ಆಲೋಚಿಸಬಾರದಂತೆ. ಹಾಗೆ ಆಲೋಚಿಸಿದರೆ ನಾವು ಹುಚ್ಚರಾಗುತ್ತೇವಂತೆ ಹೊರತು ಸಮಾಜ ಬದಲಾಗದಂತೆ. ಮತ್ತೆ ನಿನ್ನ ಮದ್ವೆ ವಿಚಾರ  ಎಲ್ಲಿಯವರೆಗೆ ಬಂತು? ನನ್ನ ಜೀವನದ ಗೆಳತಿಯಾದ ನೀನು ಬೇರೆಯವರ ಮನೆ ಸೇರುತ್ತೀಯಾ, ನಾನು ನಿನ್ನನ್ನು ಕಳೆದುಕೊಳ್ಳುತ್ತೀನಿ ಅನ್ನೋ ಭಯ ಕಾಡಲು ಶುರುವಿಟ್ಟಿದ್ದೆ ಕಣೇ. ಅಂದಹಾಗೆ ಈ ಬದುಕಿನಲ್ಲಿ ನಾವು ಎಲ್ಲವನ್ನು ಕಳೆದುಕೊಳ್ಳುವುದೇ ಹೊರತು ಗಳಿಸುವುದೇನನ್ನು ಇಲ್ಲ. ಯಾಕಂದ್ರೆ ನಾವು ಬರುವಾಗ ಏನನ್ನು ತರುವುದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದು ನನ್ನ ನಿಲುವು. ಹಾಗಾಗಿಯೇ ನಾನು ನಿನಗೆ ಆವತ್ತೇ ಹೇಳಿದ್ದು, ನೀನು ನನ್ನ ಗೆಳತಿ ಹೊರತು ಮತ್ತೇನೂ ಅಲ್ಲ ಅಂತಾ. ಅದನ್ನು ನೀನು ಖುಷಿಯಿಂದ ಸ್ವೀಕರಿಸಿದ್ದೆ. ಆದ್ರೂ ಜನ ನನ್ನ, ನಿನ್ನ ನೋಡಿ ಏನೇನೋ ಆಡಿಕೊಂಡರು. ನಾನು ನಿನಗೆ ಬರೆದ ಪತ್ರವನ್ನೆಲ್ಲಾ ಪ್ರೇಮ ಪತ್ರ ಅಂತಾ ಕರೆದರು! ಹೋಗ್ಲಿ ಬಿಡು ನಾವು ಬದುಕುವುದು ಆ ಜನಕ್ಕಾಗಿ ಅಲ್ಲ. ನಮಗಾಗಿ. ಮತ್ತೆ ವಿಶೇಷ. ನಂಗೂ ಈಗ ಕೆಲಸದ ಬ್ಯುಸಿ ಕಣೇ! ವರ್ಷಗಳ ನಂತರ ವೃತ್ತಿಯಲ್ಲಿ ಹೌದೋ ಅಲ್ವೋ ಅನ್ನೋ ತರಹ ನೆಲೆ ಕಂಡುಕೊಂಡಿದ್ದೇನೆ. ಪತ್ರಿಕೋದ್ಯಮ ಎಂಬ ಹಾದರದ ದಂಧೆಯಲ್ಲಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದೇನೆ. ಅಂದಹಾಗೆ ನಿನಗೆ ಒಂದ್ಸಾರಿ ಈ ಹಾದರ ಲೋಕದ ಕಥೆ ಹೇಳಿದ್ದೆ ಅನ್ಸತ್ತೆ ಅಲ್ವಾ? ಒಂದಿಷ್ಟು ಕಚ್ಚೆ ಹರುಕರ, ಹುಡುಗಿಯರು ಅಂದ್ರೆ ಜೊಲ್ಲು ಸುರಿಸಿ ಅವಕಾಶ ಕೊಡುವ ಒಂದಿಷ್ಟು ತೆವಲು ತೆವಲು ಚೀಫ್‌ಗಳ ಜೀವನ ಚರಿತ್ರೆ ವಿವರಿಸಿದ್ದೆ ಅಲ್ವಾ? ಹೌದು ಕಣೇ ಈ ಫೀಲ್ಡ್‌ ಹಾಗೆ. ಎಷ್ಟೋ ಪತ್ರಕರ್ತ ಮಹಾಶಯರು ಇತರರಿಗೆ ಪುಂಖಾನು ಪುಂಖವಾಗಿ ಉಪದೇಶ ಮಾಡುತ್ತಾರೆ. ತಾವು ಮಾತ್ರ ಮಾಡಬಾರದ ಹಾದರವನ್ನೆಲ್ಲಾ ಮಾಡುತ್ತಾರೆ. ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಕ್ರಿಯೇಟಿವಿಟಿಗೆ ಅವಕಾಶವಿಲ್ಲ. ಇಲ್ಲಿ ನೆಲೆಯೂರಲು ಲಾಭಿ ಬೇಕು. ಅದಿಲ್ಲವಾದರೆ ದಷ್ಟಪುಷ್ಟವಾದ ಮೊಲೆ ಬೇಕು. ನನಗಂತೂ ಇಲ್ಲಿನ ಬದುಕು ಸಾಕು ಸಾಕೆನಿಸಿದೆ. ಆದ್ರೂ ಒಂದು ಹುಂಬು!<br />
ಯಾವ ರಾಜಕಾರಣಿಗೂ, ಯಾವ ರೌಡಿಗೂ, ಯಾವ ಲೋಪರ್‌ಗಳಿಗೂ ಕಮ್ಮಿಯಿಲ್ಲದ ಪತ್ರಕರ್ತರು ಅಲ್ಲಲ್ಲ ಪುತ್ರಕರ್ತರು ಇಲ್ಲಿದಾರೆ. ಅವರ ಬಗ್ಗೆ ನಾವೆಲ್ಲಾ ಮಾತಾಡೋದು ಮಹಾಪರಾಧವಾಗತ್ತೆ! ಹಾಗಾಗಿ ನನ್ನ ಮಾತನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಗೊತ್ತು ಗುರಿಯಿಲ್ಲದ ನಮ್ಮ ಬದುಕನ್ನೆಲ್ಲಾ ನೆನಸಿಕೊಂಡರೇನೆ ಮೈ ಜುಂ ಅನ್ನತ್ತೆ. ಎನಿ ವೇ ನೀನು ಮದ್ವೆಯಾಗಿ ಲೈಫಲ್ಲಿ ಬೇಗ ಸೆಟ್ಲ ಆಗಿ ಬಿಡು! ಮದ್ವೆ ಫಿಕ್ಸ್ ಆದರೆ ಕರೆಯೋಕೆ ಮರಿಬ್ಯಾಡ.<br />
ನಿನ್ನ ಮದ್ವೆ ಊಟಕ್ಕೆ ಕಾಯುವವ...</h3>
]]></content:encoded>
</item>
<item>
<title><![CDATA[ಓ ದೊರೆಯೇ ಪತ್ರ ಓದಲು ನಾ ಒಲ್ಲೆ...]]></title>
<link>http://aksharavihaara.wordpress.com/?p=51</link>
<pubDate>Tue, 17 Jun 2008 04:52:21 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/06/17/%e0%b2%93-%e0%b2%a6%e0%b3%8a%e0%b2%b0%e0%b3%86%e0%b2%af%e0%b3%87-%e0%b2%aa%e0%b2%a4%e0%b3%8d%e0%b2%b0-%e0%b2%93%e0%b2%a6%e0%b2%b2%e0%b3%81-%e0%b2%a8%e0%b2%be-%e0%b2%92%e0%b2%b2%e0%b3%8d%e0%b2%b2/</guid>
<description><![CDATA[ಹಾಯ್ ಕಪೀಶ
ನಾನು ನಿಂಗೆ ಹೊಸ ಹೆಸರಿಟ್ಟಿದ್]]></description>
<content:encoded><![CDATA[<h3>ಹಾಯ್ ಕಪೀಶ<br />
ನಾನು ನಿಂಗೆ ಹೊಸ ಹೆಸರಿಟ್ಟಿದ್ದೇನೆ ಅಂತಾ ಕಣ್ಣು ಮಿಟುಕಿಸುತ್ತಿದ್ದೀಯಾ? ನೀನು ಬರೀ ಕಪೀಶ ಅಲ್ಲ. ಕಪೀಶೋತ್ತಮ ಕಪೀಶ! ಅಣ್ಣಾ ದೊರೆಯೆ,  ನನ್ನ ಅಪ್ಪಾ ಜೋಯ್ಸನ್ನ ಸಾರ್ವಜನಿಕವಾಗಿ ಬೈಯ್ಯಬೇಡ ಅಂತಾ ನಾ ನಿಂಗೆ ಎಷ್ಟು ಸಲ ವದರಿದ್ದೀನಿ. ಆದ್ರೂ ನೀನು ಮಾತ್ರ ನಿನ್ನ ಚಾಳಿ ಬಿಟ್ಟಿಲ್ಲ. ಹಾಗಾಗಿ ಇನ್ನು ಮೇಲೆ ನಾನು ನಿನ್ನ ಪತ್ರವನ್ನು ಓದುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಎದುರಿಗಿರುವ ಎಮ್ಮೆ ಕೋಣಗಳೇ ಸಾಕ್ಷಿ!<br />
ಅದ್ಯಾಕೋ ಇತ್ತೀಚೆಗೆ ನಿನ್ನ ಪತ್ರಗಳು ತುಂಬಾ ಬೇಸರ ಮೂಡಿಸತೊಡಗಿವೆ. ಕಾಂಕ್ರೀಟು ಜಂಗಲ್ಲನ್ನು ಬೈಯ್ಯುವ ತೆವಲನ್ನು ಬಿಟ್ಟು ಮತ್ತೇನೂ ನಿನ್ನ ಪತ್ರದಲ್ಲಿ ಕಾಣುತ್ತಿಲ್ಲ. ಅದನ್ನ ಬಿಟ್ಟರೆ ಇನ್ನೂ ನಿನಗೆ ಗೊತ್ತಿರೋದು ನನ್ನನ್ನು ಅಣಗಿಸಿಸುವುದು ಮಾತ್ರ. ಮೊದಲೆಲ್ಲಾ ನೀನು ಪತ್ರದಲ್ಲಿ ಚೆಂದಚೆಂದದ ಪುಟ್ಟ ಪುಟಾಣಿ ಕಥೆಗಳನ್ನು ಬರೆಯುತ್ತಿದ್ದೆ ಅಲ್ವಾ? ಏ ಈಗ್ಲೂ ಅಂತಹದ್ದೇ ಕಥೆ ಬರೆಯೋ ಪ್ಲೀಸ್.<br />
ನೋಡು ನಮ್ಮಪ್ಪ ಜೋಯ್ಸ್ ಎಂತಹವನೇ ಆಗಿರಬಹುದು. ಆದ್ರೆ ಅವನನ್ನು ಸಾರ್ವಜನಿಕವಾಗಿ ಬೈಯ್ಯುವ ಅಧಿಕಾರ ನಿನಗಿಲ್ಲ. ಇನ್ನೂ ಮುಂದೆ ಮತ್ತೆ ಬೈದೆ ಅಂತಾದರೆ ನಾನಂತೂ ನಿನ್ನನ್ನು ಬಿಲ್‌ಕುಲ್ ಮಾತಾಡಿಸುವುದಿಲ್ಲ. ಏ ಬೆವರ್ಸಿ ಹೋಗೇ ನೀನಲ್ಲದಿದ್ದರೆ ಮತ್ತೊಬ್ಬಳು ಅಂತಾ ನೀನು ಹೇಳೆ ಹೇಳ್ತಿಯಾ ಅಂತಾ ನಂಗೆ ಗೊತ್ತು. ನಾನು ಈ ಸಲ ನಿನ್ನ ಆ ಗೊಡ್ಡು ಬೆದರಿಕೆಗಳಿಗೆಲ್ಲಾ ಬಗ್ಗುವುದಿಲ್ಲ ಎಂಬುದಾಗಿ ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.<br />
ಡಿಗ್ರಿ ಮುಗಿಸಿ ಮನೆಯಲ್ಲಿ ಕುಳಿತಿರುವ ನನ್ನ ಬದುಕು ನಿಜಕ್ಕೂ ನನಗೆ ಬೇಸರ ಮೂಡಿಸುತ್ತಿದೆ. ಅಪ್ಪಾ, ಅಮ್ಮ ನನ್ನ ಮದುವೆ ಮಾಡಬೇಕು ಅಂತಾ ಒಂದೇ ಸಮನೆ ಹಠ ಹಿಡಿದು ಕುಳಿತಿದ್ದಾರೆ. ನಾನು ಮದುವೆ ಆಗಲಾರೆ ಎಂದು ಕುಳಿತಿದ್ದೇನೆ. ಯಾಕೋ ನನಗೆ ಕೆಲವೊಮ್ಮೆ ಈ ಬದುಕು ಅರ್ಥವೇ ಆಗಲ್ಲ ಮಾರಾಯ. ಮದ್ವೆ ಆದ್ರೆ ನನ್ನ ಇಡೀ ಬದುಕೇ ಮುಗಿಯಿತು ಅನ್ನಿಸುತ್ತಾ ಇದೆ. ಆಫ್‌ಕೋರ್ಸ್ ನಿನ್ನನ್ನೇ ನಾನು ಮದ್ವೆ ಆದ್ರೂ ಕೂಡಾ! ಥೂ ಜೀವನೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಯಾವಾಗ ಸಾಯುತ್ತೇನೋ ಅನ್ನಿಸ್ತಾ ಇದೆ. ಬದುಕಿ ಸಾಧಿಸುವುದಾದರೂ ಏನು ಅಲ್ವಾ?<br />
ಕೆಲವರು ಬದುಕಿನ ಪ್ರತಿ ಕ್ಷಣವನ್ನು ಎನ್‌ಜಾಯ್ ಮಾಡುತ್ತಾರೆ. ಆದರೆ ನನ್ನಿಂದ ಅದು ಸಾಧ್ಯವೇ ಇಲ್ಲ. ಮಾರಾಯ. ಒಮ್ಮೊಮ್ಮೆ ಏನಾದ್ರೂ ಸಾಧಿಸಬೇಕು, ಒಂದಿಷ್ಟು ಹೆಸರು ಮಾಡಬೇಕು ಅನ್ನಿಸತ್ತೆ. ಮತ್ತೆ ಕೆಲವೊಮ್ಮೆ ಸಾಧಿಸಿ ಆಗಬೇಕಾದದ್ದು ಏನು ಅನ್ನಿಸತ್ತೆ. ಸಾಧನೆ ಮಾಡಿದವನು ಸಾಯುತ್ತಾನೆ. ಮಾಡದವನು ಸಾಯುತ್ತಾನೆ ಅಲ್ವಾ?<br />
ನನ್ನ ಪ್ರಶ್ನೆಗಳನ್ನೆಲ್ಲಾ ಕಂಡು ಅರವತ್ತರ ಅರಳು ಮರಳು ನಿನಗೆ ಈಗಲೇ ಶುರುವಾಗಿದೆ ಅಂತಾ ನೀನು ಅಣಗಿಸುತ್ತೀಯಾ ಅಂತಾ ಗೊತ್ತು. ಆದ್ರೂ ನನ್ನ ಸಮಸ್ಯೆಗಳನ್ನು ನಿನ್ನಲ್ಲಿ ಅಲ್ಲದೇ ಮತ್ಯಾರಲ್ಲಿ ಹೇಳಿಕೊಳ್ಳಲಿ ಅಲ್ವಾ? ಮದ್ವೆ ಆಗೋದು, ಸಮಸ್ಯೆ, ಆಗದೇ ಇರೋದು ಸಮಸ್ಯೆ. ನಿನ್ನನ್ನೇ ಮದ್ವೆ ಆಗ್ತೀನಿ ಅಂತಾ ಹಠ ಹಿಡಿದು ಕೂರೋದು ಮತ್ತು ದೊಡ್ಡ ಸಮಸ್ಯೆ. ದೊರೆ ನನ್ನ ಸಮಸ್ಯೆಗೆ ಏನಾದ್ರೂ ಪರಿಹಾರ ಹೇಳೋ ಪ್ಲೀಸ್.<br />
ಪರಿಹಾರಕ್ಕೆ ಕಾಯುತ್ತಾ<br />
             ನಿನ್ನವಳು</h3>
]]></content:encoded>
</item>
<item>
<title><![CDATA[ನಾನು ಎಸ್ಸೆಸ್ಸಲ್ಸಿ ಪಾಸಾಗಲೇ ಬಾರದಿತ್ತು...!]]></title>
<link>http://aksharavihaara.wordpress.com/?p=48</link>
<pubDate>Sat, 31 May 2008 05:55:38 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/05/31/%e0%b2%a8%e0%b2%be%e0%b2%a8%e0%b3%81-%e0%b2%8e%e0%b2%b8%e0%b3%8d%e0%b2%b8%e0%b3%86%e0%b2%b8%e0%b3%8d%e0%b2%b8%e0%b2%b2%e0%b3%8d%e0%b2%b8%e0%b2%bf-%e0%b2%aa%e0%b2%be%e0%b2%b8%e0%b2%be%e0%b2%97%e0%b2%b2/</guid>
<description><![CDATA[ಹಾಯ್ ಕೋತಿ
ನಿನಗೆ ನಾನು ಪತ್ರ ಬರೆಯದೇ ತುಂಬ]]></description>
<content:encoded><![CDATA[<h3>ಹಾಯ್ ಕೋತಿ<br />
ನಿನಗೆ ನಾನು ಪತ್ರ ಬರೆಯದೇ ತುಂಬಾ ದಿನಗಳೇ ಆಗಿಹೋಯಿತು ಮಾರಾಯಿತಿ. ಬರೀಬೇಕು ಅಂದುಕೊಂಡಿದ್ದೇ ಏನು ಮಾಡ್ತಿಯಾ ಹೇಳು ನಾನು ಬರೆಯಲಿಕ್ಕೆ ಅಂತಾ ಹೊರಟಾಗಲೆಲ್ಲಾ ನಮ್ಮ ಮನೆ  ಬೆಕ್ಕು ಅಡ್ಡಬಂತು! ನೀನೇ ಹೇಳಿದ್ದೆ ಅಲ್ವಾ ಕೆಲಸಕ್ಕೆ ಮುಂಚೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾ! ಬೆಕ್ಕು ಇಲ್ಲದ ಹೊತ್ತು ನೋಡಿಕೊಂಡು ಬರೆಯೋವಾಗ ಇಷ್ಟುದಿನ ಆಯಿತು ನೋಡು! ಹೋಗ್ಲಿ ಬಿಡು ಆ ಲಾಂಗ್ ಸ್ಟೋರಿಗಳೆಲ್ಲಾ ಈಗ್ಯಾಕೆ? ಮತ್ತೆ  ಹೇಗಿದ್ದಿಯಾ? ಜೋಯ್ಸರು ಹೇಗಿದ್ದಾರೆ?!<br />
 ಅಂದಹಾಗೆ ತುಂಗಾ ನದಿಗೆ ಹಾರಿ ಸಾಯುವ ನಿನ್ನ ಪ್ರಾಜೆಕ್ಟ್ ಏನಾಯಿತು?! ಈ ಕಾಗದ ನಿನ್ನ ಕೈ ಸೇರುವುದರೊಳಗೆ ನೀನು ಸತ್ತ ಸುದ್ದಿ ನನ್ನ ಕಿವಿ ಮುಟ್ಟಿದ್ದರೂ ಅಚ್ಚರಿ ಇಲ್ವೆನೋ ಅಲ್ವೇನೇ?! ಸುಮ್ನೆ ತಮಾಶೆ ಮಾಡಿದೆ ಕಣೇ...ನೀನು ಸತ್ತರೆ ಮತ್ತೆ ನಾನಿನ್ನೆಲ್ಲಿ ಬದುಕಿರುತ್ತೀನಿ ಅಲ್ವಾ?! ಹಾಳಾದ ದುಡಿಮೆ ಅನ್ನೋದು ತುಂಬಾ ಬೇಜಾರು ಬರಿಸಿ ಬಿಟ್ಟಿದೆ ಕಣೇ. ಜೀವನವೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಅದ್ಯಾಕೋ ತಿರ್ಥಹಳ್ಳಿಯ ಕಾಡಲ್ಲಿ ಒಂದಿಷ್ಟು ದಿನ ಹಾಯಾಗಿ ಇರೋಣ ಅಂತಾ ಆಲೋಚನೆ ಮಾಡ್ತಾ ಇದೀನಿ. ಮಲೆನಾಡು ಕಾಡಿನ ಪರಿಚಯವೇ ಮರೆತಂತಾಗಿದೆ. ಏ ನಿನಗೆ ನೆನಪಿದೆಯೇನೇ....ನಾನು ಈ ಹಾಳು ನಗರಕ್ಕೆ ಬರುವ ಮೊದಲು ನಾನು ನೀನು ಗುಡ್ಡ ಸುತ್ತಾ ಇದ್ದಿದ್ದು....ನೆರಳೆ ಹಣ್ಣು, ಮುಳ್ಳು ಹಣ್ಣು, ಪರಗಿ ಹಣ್ಣು ಅಂತೆಲ್ಲಾ ಕಾಡಲ್ಲಿ ಸಿಕ್ಕಸಿಕ್ಕ ಹಣನ್ನೆಲ್ಲಾ ತಿಂತಾ ಇದ್ದಿದ್ದು...ಕೋತಿಗಳ ತರಹ ಕಚ್ಚಾಡ್ತಾ ಇದ್ದಿದ್ದು...ಎಷ್ಟು ಸಖತ್ತಾಗಿ ಇತ್ತು ಅಲ್ವಾ ಆ ದಿನಗಳು? ಇವತ್ತು ನಂಗೆ ಅದೇ ತರಹ ಆಟ ಆಡಬೇಕು ಅನ್ನಿಸ್ತಾ ಇದೆ. ಆದ್ರೆ ಈ ಹಾಳು ಸಮಾಜ ಅದನ್ನ ಒಪ್ಪೋದೇ ಇಲ್ಲ ಕಣೇ...ಅದರಲ್ಲೂ ನಿಮ್ಮೂರಿನ ಆ ಗಯ್ಯಾಳಿಗಳು ನಾವು ಈಗಲೂ ಆಟ ಆಡಿದರೆ ಹುಚ್ಚು ಹಿಡಿದಿದೆ ಇವರಿಗೆ ಅಂತಾ ದೊಡ್ಡ ಸುದ್ದಿ ಹಬ್ಬಿಸಿ ಬಿಡ್ತಾರೆ. ಅದನೆಲ್ಲಾ ನೆನಸಿಕೊಂಡರೆ ಕೋಪ ಬರತ್ತೆ...<br />
 ನಾನು ದೊಡ್ಡವನಾಗಲೇ ಬಾರದಿತ್ತು ಎಸ್ಸೆಸಲ್ಸಿಲೀ ಫೇಲಾಗಬೇಕಿತ್ತು ಅನ್ನಿಸತ್ತೆ ಎಷ್ಟೋ ಸಲ. ನಿನ್ನಜ್ಜಿ ನಿನ್ನಿಂದಲೇ ಆಗಿದ್ದು ಎಲ್ಲಾ, ಓದಬೇಕು ನೀನು, ಹಾಗಾಬೇಕು, ಇದಾಗಬೇಕು ಅಂತೆಲ್ಲಾ ಆವತ್ತು ಪುರಾಣ ನನ್ನ ತಲೆಗೆ ತುರುಕಿದವಳು, ನನ್ನನ್ನು ಕಾಲೇಜು ಮೆಟ್ಟಿಲು ಹತ್ತಿಸಿದವಳು ನೀನೇ ಬೇವರ್ಸಿ! ನಿಂಗೆ ನಿಮ್ಮಪ್ಪನಿಗಿಂತ ಕ್ರೂರ ಗಂಡ ಸಿಗಲಿ, ನಿನ್ನ ಗಂಡ ಕುಡಿಯುವವನು, ಇಸ್ಪೀಟ್ ಆಡುವವನು, ಅದಕ್ಕಿಂತಲೂ ಕ್ರೂರಿಯಾಗಿರಲಿ....ಕತ್ತೆ ನೀನು ನಾನು ಕಾಡಲಿ ಇರಬೇಕು ಅಂದುಕೊಂಡಿದ್ದನ್ನು ಹಾಳು ಮಾಡಿದವಳು....!!!!<br />
 ಮತ್ತೆ ಸಮಾಚಾರ ಜೋಯ್ಸರು ಏನು ಮಾಡ್ತಾ ಇದಾರೆ. ಈಗಂತೂ ಚುನಾವಣೆ...ಜೋಯ್ಸರ ಜ್ಯೋತಿಷ್ಯದ ಬಿಸಿನೆಸ್ ಫುಲ್ ಜೋರಾ? ಸೋಮಯಾಜಿ ನೆಕ್ಸ್ಟ್ ಜ್ಯೋಯ್ಸರೆ ಇರಬೇಕು ಅಲ್ವಾ ಸುಳ್ಳು ಸುಳ್ಳು ಶಕುನ ಹೇಳೋರು...?!ನಿಮ್ಮಪ್ಪ ನಂಗೆ ಹೇಳಿದ ಒಂದೇ ಒಂದೇ ಒಂದು ಸತ್ಯ ಅಂದ್ರೆ ನಿಂಗೆ ಒಬ್ಬ ಲಫಂಗನ ಮಗಳು ಸಿಕ್ತಾಳೆ ಅಂತಾ! ಅದೊಂದು ಮಾತ್ರ ಸಖತ್ತಾಗಿ ಹೇಳಿದಾರೆ ಕಣೇ!</h3>
<h3> ನಿನ್ನ ಜೊತೆ ನಿನ್ನ ಗ್ಯಾಂಗ್‌ನಲ್ಲಿ ಉರಿಯುತ್ತಿದ್ದ ಹುಡಿಗಿಯರೆಲ್ಲಾ ಹೇಗಿದಾರೆ ಈಗ? ಏ ಮೊನ್ನೆ ಯಾರೋ ಒಬ್ಬಳು ನಿನ್ನ ಜೊತೆ ಇದ್ದವಳು ಸಿಕ್ಕಿದ್ಲು. ನನ್ನ ನಿನ್ನ ಕ್ಲಾಸ್‌ಮೇಟ್ ಅಂತೆ ಪಿಯುಸಿಲಿ ನಂಗೊಂತು ಚೂರು ಗುರುತು ಸಿಕ್ಕಲಿಲ್ಲ. ಅವಳಾಗಿಯೇ ಮಾತಾಡಿಸಿದಳು ನಿನ್ನ ಹುಡುಗಿ ಫ್ರೆಂಡು ನಾನು ಅಂತಾ! ಏನೋ ಕಾಲೇಜು ಮುಗಿದ ಎಲ್ಲಾ ಮುಗೀತು. ಯಾರದ್ದು ಪರಿಚಯವೂ ಇಲ್ಲ ಏನೂ ಇಲ್ಲ. ನಮ್ಮದೊಂದು ತೀರ ಅವರದೊಂದು ತೀರ ಅಲ್ವಾ? ಅದನೆಲ್ಲಾ ನೆನೆಸಿಕೊಂಡರೆ ಯಾಕೋ ತುಂಬಾ ಬೇಜಾರಾಗತ್ತೆ. ನಮ್ಮ ಜೊತೆ ಕುಣಿದವರು ಕಿತ್ತಾಡಿದವರು ಯಾರು ಕೊನೆಗೆ ಸಿಗೋದೇ ಇಲ್ಲ...ಹೋಗ್ಲಿ ಬಿಡು ನನ್ನ ಜೊತೆ ಆವತ್ತಿಂದಲೂ ಜಗಳ ಆಡುತ್ತಿದ್ದ ನೀನಾದ್ರೂ ಇದಿಯಲ್ವಾ ಅಷ್ಟೆ ಸಮಧಾನ ನಂಗೆ. ಅಯ್ಯೋ ಆಫೀಸ್‌ಗೆ ಲೇಟಾಯಿತು ...ಇನ್ನೊಂದು ಸಾರಿ ಮತ್ತೆ ಪತ್ರ ಬರಿತೀನಿ ಆಯಿತಾ...ಅಲ್ಲಿವರೆಗೂ ಬಾಯ್<br />
                       ಕೋತಿಯಲ್ಲದವ</h3>
]]></content:encoded>
</item>
<item>
<title><![CDATA[ಮಲೆನಾಡಿನ ಬ್ಯಾಸಿಗಿ ದಿನಚರಿ......!]]></title>
<link>http://aksharavihaara.wordpress.com/?p=41</link>
<pubDate>Fri, 02 May 2008 05:46:34 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/05/02/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%ac%e0%b3%8d%e0%b2%af%e0%b2%be%e0%b2%b8%e0%b2%bf%e0%b2%97%e0%b2%bf-%e0%b2%a6%e0%b2%bf%e0%b2%a8%e0%b2%9a%e0%b2%b0%e0%b2%bf/</guid>
<description><![CDATA[ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗ]]></description>
<content:encoded><![CDATA[<h3>ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು.  ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ.....ಛೇ ಇವತ್ತು ಅದನ್ನು ನೆನಸಿಕೊಂಡ್ರೆ ತುಂಬಾ ಫೀಲ್ ಆಗತ್ತೆ.<br />
ಬೆಳಿಗ್ಗೆ ಆರು ಗಂಟೆಗೆ ಶುರು ನಮ್ಮ ಕಿರಿಕೆಟ್ಟು ಮ್ಯಾಚು! ಸುಮಾರು ಒಂಬತ್ತು ಘಂಟೆಗೆವರೆಗೂ ಕಿರಿಕೆಟ್ಟಾಡಿ ಕೊನೆಗೆ ಲೈಟಾಗೊಂದು ನಾಸ್ಟಾ ಮಾಡಿ ಅಪ್ಪ ಮನೇಲಿ ಇದ್ದಿದ್ದೂ ಹೌದಾದ್ರೆ ಗಡದ್ದಾಗಿ ಸ್ನಾನ ಮಾಡಿ ಅಪ್ಪನ ಎದುರಿಗೆ ಸಂಧ್ಯಾವಂದನೆ ಮಾಡೋ ನಾಟಕವಾಡಿ, ಗಾಯಿತ್ರಿ ಮಂತ್ರ ಹೇಳೋ ಕಾಲದಲ್ಲಿ ಯಾರ್ಯಾರದ್ದೋ ಹೆಸರು ಹೇಳಿ ಅಮ್ಮನ ಹತ್ರಾ ಬೈಸಿಕೊಂಡು ಕೊನೆಗೆ ಗುಡ್ಡ ಹತ್ತಿದ್ವೀ ಅಂದ್ರೆ ಶುರು ನೋಡಿ ನಮ್ಮ ದಿನಚರಿ!<br />
ಹಾಳಾದ ಬೆಂಗಳೂರಿನಲ್ಲೂ ನಮ್ಮ ದಿನಚರಿಯಿದೆ. ಅದನ್ನಾ ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಅಂದಹಾಗೇ ಗುಡ್ಡ ಹತ್ತುವ ಮೊದಲು ಒಂದಿಷ್ಟು ನೇರಳೆ ಹಣ್ಣಿನ ನೈವೇದ್ಯ ನಮಗೆ ಆಗಲೇ ಬೇಕಿತ್ತು. ಮಲೆನಾಡಿನಲ್ಲಿ ಬಿಡುವ ವಿಶಿಷ್ಟ ಹಣ್ಣುಗಳ ಪೈಕಿ ನೇರಳೆ ಉತ್ಕೃಷ್ಟವಾದದ್ದು. ನಾನು ಅತೀ ಇಷ್ಟಪಡುವ ಹಣ್ಣು ಅದೆ.ತುಂಬಾ ಸಿಹಿಯಾಗಿರುವ ತುಂಬಾ ರುಚಿಯುತವಾದ ಹಣ್ಣು ಅದು. ತಿಂದಷ್ಟು ತಿನ್ನಬೆಕು ಅನ್ಸತ್ತೆ. ಅದರ ಮುಂದೆ ನಿಮ್ಮ ಆಪಲ್ಲು, ಗ್ರೇಪು ಯಾವುದೂ ಅಲ್ಲ! ಅಷ್ಟು ರುಚಿ. ಅದನ್ನ ಒಂದು ರೌಂಡ್ ತಿಂದು ಮುಗಿಸಿ ನಮ್ಮ ಸೈನ್ಯ ಪಯಣ ಮುಂದುವರೆಸುವಾಗ ಘಂಟೆ ಹನ್ನೆರಡು ಆಗಿರುತ್ತಿತ್ತು. ಕೊನೆಗೆ ಗೇರು ಬ್ಯಾಣಕ್ಕೆ ನುಗ್ಗಿ ಒಂದಿಷ್ಟು ಗೇರು ಹಣ್ಣು ತಿಂದು ಯಾರದ್ದೋ ಬ್ಯಾಣದ ಗೇರು ಪೀಠ ಕದ್ದು ಅವರ ಹತ್ರಾ ಬೈಸಿಕೊಂಡು ರಂಪಾ ರಾಮಾಯಣ ಮುಗಿಯುವ ಹೊತ್ತಿಗೆ ಊಟದ ನೆನಪು. ನಿಜವಾಗ್ಲೂ ಊಟ ನಮಗೆ ಬೇಡದೇ ಹೋದ್ರು ಅಪ್ಪ, ಅಮ್ಮ ಬೈತಾರಲ್ಲ ಅಂತಾ ನಾವು ಅವರನ್ನ ಬೈದುಕೊಳ್ಳುತ್ತಾ ಊಟಕ್ಕೆ ಬರೋದು.<br />
ಆಮೇಲೆ ದಿನಚರಿಯ ಎರಡನೇ ಅಧ್ಯಾಯ. ಈಚಲು ಹಣ್ಣಿನ ಬೇಟೆ! ಒಂತರಹ ಒಣ ದ್ರಾಕ್ಷಿ ರುಚಿಯುಳ್ಳಪಸಂದಾದ ಹಣ್ಣು ಅದು. ಈಗಂತೂ ಸುಡುಗಾಡು ನೀಲಗಿರಿ ಪ್ಲಾಂಟೇಶನ್ನಾಗಿ ಒಂದು ಈಚಲು ಮಟ್ಟಿನೇ ಇಲ್ಲ ನಮ್ಮ ಮನೆ ಹತ್ರಾ. ಇದಾದ ಮ್ಯಾಕೆ ಮರಕೋತಿ, ಮಣ್ಣು ಮಸಿ ಅಂತಾ ಹುಚ್ಚುಚ್ಚು ಆಟ. ಕೊನೆಗೆ ೪.೩೦ಕ್ಕೆ ಎಂಟರ್ ದೀ ಫೀಲ್ಡ್ ಫಾರ್ ಪ್ಲೇಯಿಂಗ್ ಕಿರಿಕೆಟ್ಟು. ಆಚೆ ಮನೆ ಅಜ್ಜ, ಇಚಿಗೆ ಕಾಡಜ್ಜನ ಮನೆ ಅಮ್ಮಮ್ಮ ಎಲ್ಲಾ ಗಟ್ಟಿಯಾಗಿ ನಿದ್ದೆ ಮಾಡ್ತಾ ಇದ್ದರೆ ನಾವು ಕೂಗಿ ಕಬ್ಬರಿಯುವುದು. ಅರೆನಿದ್ದೆಗಣ್ಣಲ್ಲಿದ್ದ ಅವರು ಬೆತ್ತ ತಗೊಂಡು ಆಲದ ಮರದವರೆಗೆ ನಮ್ಮನ್ನ ಬೆರೆಸಿಕೊಂಡು ಬರ್ತಾ ಇದ್ದಿದ್ದನ್ನು ನೆನಸಿಕೊಂಡ್ರೆ ಇವತ್ತಿಗೂ ನಗು ಬರತ್ತೆ.<br />
                                                                                                           ಮುಂದುವರೆಯುವುದು.....</h3>
]]></content:encoded>
</item>
<item>
<title><![CDATA[ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ.....]]></title>
<link>http://aksharavihaara.wordpress.com/?p=34</link>
<pubDate>Fri, 11 Apr 2008 08:50:57 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/04/11/%e0%b2%a8%e0%b3%80%e0%b2%b0%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%a8%e0%b2%a6%e0%b2%bf%e0%b2%af%e0%b3%8a%e0%b2%82%e0%b2%a6%e0%b2%95%e0%b3%8d%e0%b2%95%e0%b3%86-%e0%b2%b9%e0%b2%be%e0%b2%b0/</guid>
<description><![CDATA[ಹಾಯ್ ಅವಾಂತರೇಶ,
ಅಪ್ಪಾ, ಅಮ್ಮ ನನ್ನನ್ನು ಸು]]></description>
<content:encoded><![CDATA[<h3>ಹಾಯ್ ಅವಾಂತರೇಶ,<br />
ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ ಒಡಲಲ್ಲಿ ನೀರೆ ಇರಲಿಲ್ಲ. ಆದ್ರೂ ನಾನು ತುಂಗೆಗೆ ಹಾರಿಯೇ ಸಾಯೋದು ಅಂತಾ ನಿನ್ನ ಪತ್ರ ಓದಿದ ಮರುಕ್ಷಣವೇ ನಿರ್ಧರಿಸಿ ಆಗಿತ್ತು. ಹಾಗಾಗಿ ನೀರಿಲ್ಲದ ನದಿಗೆ ಕಣ್ಣು ಮುಚ್ಚಿ ಹಾರಿಯೇ ಬಿಟ್ಟೆ ಮಾರಾಯ!<br />
ಮತ್ತೆ ನೀನಿನ್ನು ಸಾಯಲಿಲ್ಲವಾ ಅಂತಾ ನನ್ನನ್ನು ಶಪಿಸುತ್ತಾ ನಿನ್ನಷ್ಟಕ್ಕೆ ನೀನೆ ಗೊಣಗಿಕೊಳ್ಳುತ್ತಿರುತ್ತೀಯಾ ಅಂತಾ ನಂಗೆ ಗೊತ್ತು ಕಣೋ ಚಿನ್ನುಮರಿ! ಆಮೇಲಿನ ಕಥೆ ಹೇಳ್ತಿನಿ ಕೇಳು. ನಾನು ಕಣ್ಣುಮುಚ್ಚಿ ತುಂಗೆಗೆ ಹಾರಿದ್ನಾ, ಅಯ್ಯೋ ಎಂತ ಮರುಳಿ ನಾನು ಯಕಶ್ಚಿತ ಹುಡುಗನೊಬ್ಬ ಬೈದ ಅಂತಾ ನನ್ನ ಬದುಕನ್ನ ಬಲಿಕೊಡ್ತಾ ಇದೀನಲ್ಲಾ ಅಂತಾ ಅನ್ನಿಸತೊಡಗಿತು ನಂಗೆ. ಆದ್ರೆ ಪ್ರಯೋಜನ ಏನು ಹೇಳು? ಅಷ್ಟೊತ್ತಿಗಾಗಲೇ ನಾನು ನದಿಗೆ ಜಿಗಿದು ಆಗಿತು. ನನ್ನ ಪುಣ್ಯವೋ ನಿನ್ನ ಪಾಪವೋ ಗೊತ್ತಿಲ್ಲ ತುಂಗೆ ನನ್ನ ಜೀವವನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ! ನದಿಗೆ ಹಾರಿದ್ದು ಅನ್ನೋದು ನಂಗೊಂದುಸಾರಿ ಈಜುಕೊಳಕ್ಕೆ ಹಾರಿದ ಹಾಗೆ ಆಯಿತು ಅಷ್ಟೆ! ಕೈಕಾಲೆಲ್ಲಾ ಕಲ್ಲಿಗೆ ತಾಗಿ ಕೆತ್ತಿಹೊಯಿತು. ರಕ್ತ ಒತ್ತರಿಸಿ ಬಂತು. ಅಷ್ಟೊತ್ತಿಗೆ ನಮ್ಮಪ್ಪ ಜೋಯ್ಸ್‌ಂಗೆ ಯಾರೋ ನಿಮ್ಮ ಮಗಳು ತುಂಗೆ ಹಾರಿದಾಳೆ ಅಂತಾ ಸುದ್ದಿ ಕೊಟ್ಟರಂತೆ!<br />
ಜೋಯ್ಸ್ ಓಡೋಡಿ ಬಂದವನೆ ಏ ಪುಣ್ಯಾತ್‌ಗಿತ್ತಿ ನೀನಿನ್ನು ಸಾಯಲಿಲ್ಲವೇನೆ ಮಾರಯಿತಿ ಅಂದ! ದನ ಎಳೆದುಕೊಂಡು ಹೋಗೋ ಹಾಗೆ ನನ್ನನ್ನು ದರದರನೆ ಎಳೆದುಕೊಂಡು ಹೋದ ಮನೆವರೆಗೂ. ಇವೆಲ್ಲಾ ಆಗಿದ್ದು ನಿನ್ನಿಂದಲೆ ತಲೆಹರಟೆ.<br />
ಆಮೇಲೆ ಅಮ್ಮ ಅದೇನೇನೋ ಸೊಪ್ಪು ಸದೆಯ ರಸವನ್ನೆಲ್ಲಾ ಹಿಂಡಿ ನನ್ನ ಗಾಯದ ಮೇಲೆ ಸುರಿದಳು ವಟವಟ ಅಂತಾ ನನ್ನ ಬೈಯ್ಯುತ್ತಾ! ನಂಗೆ ಆವಾಗ ಎಷ್ಟು ಉರಿಯಾಯಿತು ಗೊತ್ತಾ? ನಾನು ಆವಾಗ ನಿನಗೆ ಹಾಕಿದ ಶಾಪ ಇದೆಯಲ್ವಾ? ಏಳು ಜನ್ಮ ಕಳೆದರೂ ಹೋಗೋದಿಲ್ಲ ಬಿಡು. ಅಲ್ವೆ ಸಾಯೋವಂತದ್ದು ನಿನಗೆ ಏನಾಗಿತ್ತೆ? ನಾ ಆವತ್ತೆ ಅವ್ರ ಹತ್ರಾ ಬಡಿದುಕೊಂಡೆ ಹೆಣ್ಣುಮಗಳನ್ನು ಕಾಲೇಜಿಗೆ ಕಳುಹಿಸಬೇಡಿ ವಯಸ್ಸಿಗೆ ಬಂದಿದಾಳೆ ಬೇಗ ಮದ್ವೆ ಮಾಡಿಬಿಡಿ ಅಂತಾ. ಈಗ ನೋಡು ಅವಾಂತರಾನ. ನೀನೆನಾದ್ರೂ ಸತ್ತಿದ್ದರೆ ನಮ್ಮ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು ಅಂತಾ ಶುರುಹಚ್ಚಿಕೊಂಡರು ನೋಡು ಪ್ರವಚನನಾ......ಎಲ್ಲಾ ಆಗಿದ್ದು ನಿನ್ನಿಂದಲೆ ಮೂರುಕಾಸಿನವನೇ....<br />
ಇಲ್ಲ ಅಮ್ಮ ನಾನು ಸಾಯಬೇಕು ಅಂತಾ ಹೋಗಿದ್ದಲ್ಲಾ, ಈಜು ಕಲಿಯಬೇಕು ಅಂತಾ ಆಸೆಯಾಯಿತು ನೀರಿಲದ ತುಂಗೆ ನೋಡಿ ಅದ್ಕೆ ಹಾರಿದೆ....ಅಂತೆಲ್ಲಾ ಕಥೆ ಹೇಳಿ ತೆರೆದಿದ್ದ ಅಮ್ಮನ ಬಾಯಿ ಮುಚ್ಚಿಸುವಾಗ ಸಾಕುಸಾಕಾಗಿ ಹೋಯಿತು ಮಾರಾಯ. ಅಮ್ಮನ ಬಾಯಿ ಮುಚ್ಚಿಸೋದಕ್ಕಿಂತ ನಿನ್ನ ಜೊತೆ ಜಗಳವಾಡೋದೆ ಎಷ್ಟೋ ಲೇಸು ಕಣೋ. ಅಮ್ಮನದ್ದು ನಿಂತಿತು ಅನ್ನೋವಾಗ ಅಪ್ಪನದ್ದೂ ಶುರುವಾಯಿತು ಮಗಳು ಕಲಿತು ಜಾಣೆಯಾಗಲೀ ಅಂತಾ ಕಾಲೇಜಿಗೆ ಕಳುಹಿಸಿದರೆ ಇವಳು ಈಜೋದು, ಕೆದುಕೋದು ಅಂತಾ ಬರೀ ಬೇಡದೇ ಇರೋದನ್ನೇ ಕಲಿತು ಬಂದಿದಾಳೆ. ಈ ವರ್ಷ ಶ್ರಾವಣಕ್ಕೆ ಹೇಗಾದ್ರೂ ಮಾಡಿ ಇವಳನ್ನ ದಾಟಿಸಿಬಿಡಬೇಕು......ಗೊತ್ತಲ್ಲ ನಿಂಗೆ ಜೋಯ್ಸರ ಪುರಾಣ ಹೇಗಿರತ್ತೆ ಅಂತಾ.<br />
ನಿನ್ನಜ್ಜಿ ಇನ್ನೊದ್ಸಾರಿ ನಮ್ಮ ಮನೆ ಕಡೆ ಕಾಲಿಡು ನೀನು ಇವತ್ತಿಗೆ ನನ್ನ ನಿನ್ನ ಸಂಬಂಧ ಕಳೆಯಿತು ಅಂತಾ ನಿಂಗೆ ನೇರವಾಗಿ ಹೇಳಿ ಬಿಡಬೇಕು ಅನ್ನಿಸ್ತು ಆ ಘಟನೆಯಾದ ಬಳಿಕ. ಆದ್ರೂ ಯಾಕೋ ನಿನಗೆ ಹಾಗೆ ಹೇಳಲು ಮನಸೇ ಬರ್ತಾ ಇಲ್ಲ ಮಾರಾಯ. ಎಷ್ಟಂದ್ರೂ ನೀನು ನನ್ನವ ಅಂತಾ ಅನ್ನಿಸ್ತಾ ಇದೆ!<br />
                                 ಇಂತಿ<br />
                                 ಪುಟ್ಟಿ</h3>
]]></content:encoded>
</item>
<item>
<title><![CDATA[ಮೂಲಾ ನಕ್ಷತ್ರದ ಅನಿಷ್ಟದವಳೇ......]]></title>
<link>http://aksharavihaara.wordpress.com/?p=31</link>
<pubDate>Thu, 03 Apr 2008 12:04:58 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/04/03/%e0%b2%ae%e0%b3%82%e0%b2%b2%e0%b2%be-%e0%b2%a8%e0%b2%95%e0%b3%8d%e0%b2%b7%e0%b2%a4%e0%b3%8d%e0%b2%b0%e0%b2%a6-%e0%b2%85%e0%b2%a8%e0%b2%bf%e0%b2%b7%e0%b3%8d%e0%b2%9f%e0%b2%a6%e0%b2%b5%e0%b2%b3%e0%b3%87/</guid>
<description><![CDATA[
ಹಾಯ್ ಪುಟ್ಟಿ
&#8220;ಏನೇ ನಮ್ಮ ಅಪ್ಪಾ, ಅಮ್ಮನ್]]></description>
<content:encoded><![CDATA[<h3><a href="http://aksharavihaara.wordpress.com/files/2008/04/love.jpg" title="love.jpg"><img src="http://aksharavihaara.wordpress.com/files/2008/04/love.thumbnail.jpg" alt="love.jpg" /></a></h3>
<h3>ಹಾಯ್ ಪುಟ್ಟಿ<br />
"ಏನೇ ನಮ್ಮ ಅಪ್ಪಾ, ಅಮ್ಮನ್ನೇ ಗಯ್ಯಾಳಿ ಮನೆತನದವರು ಅಂತೀಯಾ? ನಿಂಗೆ ಕೊಬ್ಬು ತುಂಬಾ ಹೆಚ್ಚಾಗಿದೆ. ನೀನು ಏನು ಹೇಳಿದರೂ ನಾನು ತಿರುಗಿ ಮಾತಾಡಲ್ಲ ಅನ್ನೋ ಭಾವ ನಿನ್ನಲ್ಲಿ ಮೂಡಿದೆ. ನೋಡು ಇದು ನಿಂಗೆ ಲಾಸ್ಟ್ ವಾರ್ನಿಂಗ್. ಇನ್ನೊಂದು ಸಲ ಈ ರೀತಿ ಕಿರಿಕ್ ಮಾಡಿದ್ಯಾ ಅವಳು ಸರಿಯಿಲ್ಲ ಅಂತಾ ನಿಮ್ಮೂರಿಗೆಲ್ಲಾ ಹಬ್ಬಿಸುತ್ತೇನೆ. ನನ್ನಂತಹ ಪಾಪದ ಹುಡುಗನ ಜೊತೆಯೇ ಜಗಳ ಕಾಯೋ ಜಗಳಗಂಟಿ ಅಂತಾ ನಿಮ್ಮುರಿನ ಬಾಯಿಬಡುಕ ಹೆಂಗಸರಿದ್ದಾರಲ್ಲ, ಅದೇ ಸೀತಮ್ಮ, ಮೀನಾಕ್ಷಮ್ಮ...ಅವರ ಹತ್ರಾ ಹೇಳ್ತೀನಿ. ಆಮೇಲೆ ನಿನ್ನ ಮದ್ವೆಯಾಗಕೆ ಯಾರು ಬರಲ್ಲ. ಆಮೇಲೆ ಸಾಯೋವರೆಗೂ ನಿಮ್ಮಪ್ಪನ ಮನೇಲಿ ಮುಸುರೆ ತಿಕ್ಕಿಕೊಂಡು ಬಿದ್ದಿರಬೇಕು ನೀನು. ಆತರಹ ಮಾಡ್ತೀನಿ ನೋಡು" ಅಂತೆಲ್ಲಾ ಚೆನ್ನಾಗಿ ಬೈಯಬೇಕು ಅನ್ನೋವಷ್ಟು ಕೋಪ ಬಂದಿತ್ತು ನಿನ್ನ ಮೇಲೆ ನೀನು ಬರೆದ ಕಾಗದ ತೆರೆದು ನೋಡಿದಾಗ.<br />
ತಕ್ಷಣ ನಿಮ್ಮಪ್ಪ ನಿಂಗೆ ಮೂಲಾನಕ್ಷತ್ರದ ಅನಿಷ್ಟ ಅಂತಾ ಬೈಯ್ಯುತ್ತಿದ್ದದ್ದು ನೆನಪಾಯಿತು. ಹಾಗಾಗಿ ನಾನು ಬೈಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸ್‌ಲ್ ಮಾಡಿಬಿಟ್ಟೆ. ನಾನು ಬೈಯ್ಯೋದು, ಅದಕ್ಕೆ ನೀನು ಬೇಸರವಾಗೋದು ಕೊನೆಗೆ ನೀನು ತುಂಗಾ ನದಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋದು...ತುಂಗಾ ನದಿಗೆ ಹೋಗಿ ಹಾರ್ತಿಯಾ ಅಂದ್ರೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಖಂಡಿತವಾಗಿಯೂ ಬೈಯ್ಯುತ್ತಿದೆ. ಆದ್ರೆ ನಂಗೆ ಗೊತ್ತಿಲ್ವಾ ನೀನೆಷ್ಟು ಸೋಮಾರಿ ಅಂತಾ! ಸಾಯಲಿಕ್ಕೆ ತುಂಗಾ ನದಿವರೆಗೆ ನಡೆದುಕೊಂಡು ಹೋಗಬೇಕಾ? ನಮ್ಮ ಮನೆ ಹಿತ್ತಲಿನಲ್ಲಿರೋ ಬಾವಿ ಹಾರಿದರೆ ಆಗಲ್ವಾ ಅನ್ನೋ ಜಾತಿಯವಳು ನೀನು. ನೀನು ಬಾವಿಹಾರಿ ಸತ್ತರೆ ನಂಗೆ ಪ್ರಾಬ್ಲಂ! ಅಯ್ಯೋ ನಾನು ಜೀವನದಲ್ಲಿ ಉಳಿಸಿದ ಹಣಯೆಲ್ಲಾ ಖರ್ಚುಮಾಡಿ ಈ ಭಾವಿ ತೋಡಿಸಿದ್ದೆ ಈ ಮುಂಡೆಗೆ ಸಾಯಲಿಕ್ಕೆ ಈ ಭಾವಿನೇ ಬೇಕಿತ್ತಾ? ಅಂತಾ ನಿಮ್ಮಪ್ಪ ಜೋಯ್ಸ್ ಖಂಡಿತಾ ಕೂಗಾಡುತ್ತಾನೆ. ನಂಗೆ ಮುಸುರೆ ತಿಕ್ಕಿಕೊಡುತ್ತಿದ್ದವಳು, ನೀರೆತ್ತಿಕೊಡುತ್ತಿದ್ದವಳು ಸತ್ತೇ ಹೋದ್ಲಲ್ಲಾ..ನನ್ನ ಬಲಗೈ ಮುರಿದೇ ಹೋಯಿತಲ್ಲಾ ಅಂತಾ ನಿಮ್ಮಮ್ಮ ಕಿರುಚಾಡುತ್ತಾಳೆ. ನಿನ್ನ ಸಾವಿಗೆ ನಾನು ಬರೆದ ಪತ್ರವೇ ಕಾರಣ ಅಂತಾ ಊರವರಿಗೆಲ್ಲಾ ಹೇಳುತ್ತಾಳೆ. ಆಮೇಲೆ ಪೋಲಿಸ್‌ನವರು ಬಂದು ಸುಮ್ನೆ ನಂಗೆ ಕಿರಿಕಿರಿ ಮಾಡ್ತಾರೆ. ನೀನು ಬಾವಿ ಹಾರಿ ಸಾಯೋದು ಎಷ್ಟೆಲ್ಲಾ ನಷ್ಟ ಉಂಟುಮಾಡತ್ತೆ ಅಂತಾ ಆಲೋಚಿಸಿದ ಮೇಲೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸಲ್ ಮಾಡಿಬಿಟ್ಟೆ. ಈವಾಗ್ಲೂ ಕಾಲಮಿಂಚಿಲ್ಲ. ನೀನು ಬೈದರೆ ನಾನು ತುಂಗಾ ನದಿ ಹಾರಿಯೇ ಸಾಯುತ್ತೀನಿ ಅಂತಾ ಭರವಸೆ ಕೊಡು. ಖಂಡಿತಾ ನಾನು ನಿನಗೆ ಈ ಪತ್ರದ ಮೊದಲನೆ ಸಾಲುಗಳಲ್ಲಿ ಹೇಳಿದ ದಾಟಿಯಲ್ಲೇ ಬೈಯ್ಯುತ್ತೀನಿ!<br />
ಮತ್ತೆ ಏನು ಕಾರುಬಾರು ಊರಲ್ಲಿ. ನಮ್ಮೂರಲ್ಲಿ ಕಾರು ಇಲ್ಲ, ಬಾರು ಇಲ್ಲ ಅಂತಿಯಾ ನೀನು ಅಂತಾ ನಂಗೆ ಗೊತ್ತು ಆದ್ರೂ ಸುಮ್ನೆ ಕೇಳಿದೆ. ಹೆದರಬೇಡ ನಾನು ಬಂದ ಮೇಲೆ ನಿಮ್ಮೂರಿಗೆ ಕಾರು ಅಥವಾ ಬಾರು ಎರಡರ ಒಳಗೆ ಯಾವುದಾದರೂ ಒಂದು ಎಂಟ್ರಿಕೊಡತ್ತೆ! ಬೆಂಗಳೂರೆಂಬ ಈ ಸಿಮೆಂಟು ಜಂಗಲ್ಲಿನ ಲೈಪು ತುಂಬಾ ಬೋರ್ ಆಗ್ತಾ ಇದೆ ಕಣೇ. ಜಗಳ ಆಡೋಣ ಅಂದ್ರು ಯಾರು ಸಿಗಲ್ಲ. ಅದೇ ಕೆಲಸವಿಲ್ಲದ ಹಾಳು ಆಫೀಸು, ಸೊಳ್ಳೆ ತುಂಬಿರುವ ರೂಂಮು ಇದೆ ನನ್ನ ಸದ್ಯದ ಪ್ರಪಂಚವಾಗಿಬಿಟ್ಟಿದೆ. ಆದ್ರೂ ದುಡಿಲೇಬೇಕು. ನನಗೋಸ್ಕರ ಅಲ್ಲದಿದ್ದರೂ ನಿನ್ನ ಕಟ್ಟಿಕೊಳ್ಳುತ್ತೀನಲ್ಲಾ ಅದಕ್ಕಾದರೂ ದುಡಿಯಬೇಕು! ಹೋಗ್ಲಿಬಿಡು ನನ್ನ ಕಷ್ಟ ನಿನ್ನ ಹತ್ತಿರ ಹೇಳಿ ನಿನಗ್ಯಾಕೆ ಸುಮ್ನೆ ಖುಷಿಯಾಗೋ ಹಾಗೆ ಮಾಡಲಿ. ಮತ್ತೆ ಸಮಾಚಾರ.<br />
ಮಳೆ ಸಖತ್ತಾಗಿ ಹೊಯ್ಯುತ್ತಾ ಇದೆ ಅಂದೆ ಅಲ್ವಾ? ಛೇ ನಿಮ್ಮೂರಿನ ಮಳೆ ನೆನೆಸಿಕೊಂಡರೆ, ಮಳೆಯಲ್ಲಿ ನಾನು ನೀನು ನೆನೆಯೋದನ್ನಾ ನೆನಪಿಸಿಕೊಂಡರೆ ನಂಗೆ ತುಂಬಾ ಫೀಲ್ ಆಗತ್ತೆ ಕಣೇ. ಅಂದಹಾಗೆ ಬೆಂಗಳೂರಿನ ಮಳೆ ಕಥೆಯನ್ನಿನ್ನು ನಿಂಗೆ ಹೇಳಿಲ್ಲಾ ಅಲ್ವಾ? ಮುಂದಿನ ಪತ್ರದಲ್ಲಿ ಹೇಳ್ತೀನಿ. ಅಲ್ಲಿವರೆಗೂ ನೀನು ಬೆಂಗಳೂರು ಮಳೆ ಹೇಗಿರಬಹುದು ಅಂತಾ ಸುಮ್ನೆ ಆಲೋಚನೆ ಮಾಡ್ತಾ ಇರು. ಟಾಟಾ....ಬಾಬಾಯ್...<br />
                                                                                                                                                ಇಂತಿ ನಿನ್ನವ</h3>
]]></content:encoded>
</item>
<item>
<title><![CDATA[ಜಾತಿ ಬಿಟ್ಟ "ಜೋಕು"ಮಾರನೇ.....!!]]></title>
<link>http://aksharavihaara.wordpress.com/?p=18</link>
<pubDate>Mon, 24 Mar 2008 08:54:59 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/03/24/%e0%b2%9c%e0%b2%be%e0%b2%a4%e0%b2%bf-%e0%b2%ac%e0%b2%bf%e0%b2%9f%e0%b3%8d%e0%b2%9f-%e0%b2%9c%e0%b3%8b%e0%b2%95%e0%b3%81%e0%b2%ae%e0%b2%be%e0%b2%b0%e0%b2%a8%e0%b3%87/</guid>
<description><![CDATA[ಹಾಯ್ ಪೆದ್ದು,
 ನೀನು ಬರೆದ ಪತ್ರ ಕುಂಠುತ್ತ]]></description>
<content:encoded><![CDATA[<h3><a rel="attachment wp-att-19" href="http://aksharavihaara.wordpress.com/2008/03/24/%e0%b2%9c%e0%b2%be%e0%b2%a4%e0%b2%bf-%e0%b2%ac%e0%b2%bf%e0%b2%9f%e0%b3%8d%e0%b2%9f-%e0%b2%9c%e0%b3%8b%e0%b2%95%e0%b3%81%e0%b2%ae%e0%b2%be%e0%b2%b0%e0%b2%a8%e0%b3%87/19/" title="love.jpg"></a><a href="http://aksharavihaara.wordpress.com/files/2008/03/love.jpg" title="love.jpg"></a>ಹಾಯ್ ಪೆದ್ದು,<a rel="attachment wp-att-19" href="http://aksharavihaara.wordpress.com/2008/03/24/%e0%b2%9c%e0%b2%be%e0%b2%a4%e0%b2%bf-%e0%b2%ac%e0%b2%bf%e0%b2%9f%e0%b3%8d%e0%b2%9f-%e0%b2%9c%e0%b3%8b%e0%b2%95%e0%b3%81%e0%b2%ae%e0%b2%be%e0%b2%b0%e0%b2%a8%e0%b3%87/19/" title="love.jpg"><img width="81" src="http://aksharavihaara.wordpress.com/files/2008/03/love.thumbnail.jpg" alt="love.jpg" height="96" style="width:144px;height:131px;" /></a><br />
 ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು  ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್‌ ಆಯಿತು. ನಮ್ಮಪ್ಪನಿಗೇನಾದ್ರೂ ಓದ್ಲಿಕ್ಕೆ ಬಂದಿದ್ದರೆ, ನೀನು ಬರೆದ ಕಾಗದವನ್ನು ಓದಿ ಬಿಟ್ಟಿದ್ದರೆ, ನನ್ನ ನಿನ್ನ ಒಟ್ಟಿಗೆ ಯಾವ್ಯಾದೋ ಮಂತ್ರ ಹೇಳಿ ಬೇರೆ ಗ್ರಹಕ್ಕೆ ಪಾರ್ಸೆಲ್ ಮಾಡಿ ಬಿಡುತ್ತಿದ್ದರು! ನೀನು <a rel="attachment wp-att-19" href="http://aksharavihaara.wordpress.com/2008/03/24/%e0%b2%9c%e0%b2%be%e0%b2%a4%e0%b2%bf-%e0%b2%ac%e0%b2%bf%e0%b2%9f%e0%b3%8d%e0%b2%9f-%e0%b2%9c%e0%b3%8b%e0%b2%95%e0%b3%81%e0%b2%ae%e0%b2%be%e0%b2%b0%e0%b2%a8%e0%b3%87/19/" title="love.jpg"></a>ಮಾಡೋ ಕಪಿಚೇಷ್ಟೆಗೆ ಇದ್ದವರನ್ನೆಲ್ಲಾ ಬಲಿ ಕೊಡ್ತಿಯ ಮಾರಾಯ! ಮತ್ತೆ ಪೆದ್ದು ಅಂದ್ರೆ ಜಗಳಕ್ಕೆ ಬೇರೆ ಬರ್ತಿಯಾ!<br />
              ಇಲ್ಲಿ ಮಳೆ ಅಂದ್ರೆ ಮಳೆ ಕಣೋ. ಕರೆಂಟ್ ಇಲ್ಲದೆ ೧೫ದಿನ ಆಯಿತು. ಪೋನಿನ ಜೀವ ಹೋಗಿ ಎರಡು ವಾರಗಳ ಮೇಲಾಯಿತು. ಇನ್ನೂ ಆ ಅಂಚೆಯವನೋ...! ಸಂಬಂಧಿಕರ ಮನೇಲಿ, ಹೆಂಡ್ತಿ ಮನೆಲಿ ಎಲ್ಲೂ ಕಾರ್ಯಕ್ರಮಗಳು ಇಲ್ಲದೇ ಹೋದರೆ, ತಾನು ಅಂಚೆಯವ ಅನ್ನೋದು ನೆನಪಾದರೆ ಜೋಯ್ಸ್‌ರ ಮನೇಲಿ ಒಂದು ಲೋಟ ಕಾಫಿ ಕುಡಿದು, ಒಂದು ಕವಳ ಹಾಕಿ ಜೋಯ್ಸರ ಹತ್ತಿರ ಒಂದು ಗಡದ್ದಾದ ಹರಟೆಹೊಡೆದು ಹೋಗುವ ಮನಸಾದರೆ ಅಮ್ಮವ್ರೆ ನಿಮಗೊಂದು ಪತ್ರ ಬಂದೈತಿ ಅಂತಾ ಮನೆ ಕಡೆ ಬರ್ತಾನೆ. ಮೊದ್ಲೆಲ್ಲಾ ಕಾಲೇಜಿನಿಂದ ಬರೋವಾಗ ನಾನೇ ಹೋಗಿ ನಿನ್ನ ಪತ್ರ ಕಲೆಕ್ಟ್ ಮಾಡಿಕೊಂಡು ಬರ್ತಿದ್ದೆ. ಈಗ ಆ ಅಂಚೆಯವ ಬರೋವರೆಗೂ ಕಾಯಬೇಕು. ಇದನೆಲ್ಲಾ ನೆನಸಿಕೊಂಡರೆ ನಂಗಂತೂ ಈ ಊರು ತುಂಬಾ ಬೋರ್ ಅನ್ನಿಸ್ತಾ ಇದೆ. ನಿನ್ನನ್ನ ಯಾವಾಗ ಸೇರಿಕೊಳ್ಳುತ್ತೀನೋ ಅನ್ನಿಸ್ತಾ ಇದೆ!<br />
               ಏ ಈ ಸರಿ ಹಳೆ ಮಳೆ ಸಖತ್ತಾಗಿ ಹೊಯ್ತಾ ಇದೆ ಕಣೋ. ತುಂಗೆ ತುಂಬಿ ಹರಿತಾ ಇದೆ. ಹೋದ ವರ್ಷ ನೀನು ಇದೇ ಟೈಂನಲ್ಲೇ ನಮ್ಮ ಮನೆಗೆ ಬಂದಿದ್ದೆ ಅಲ್ವಾ? ನಾನು ನೀನು ದೊಪ್ಪನೆ ಬೀಳುತಿದ್ದ ಮಳೆಯಲ್ಲಿ ತುಂಗೆ ತೀರಕ್ಕೆ ಹೋಗಿ ಕುಣಿದು ಕುಪ್ಪಳಿಸಿದ್ವಲ್ಲಾ? ಮಳೆ ಬಂತ್ ಗಿಳಿ ಪೋಪೋಪೋ ಅಂತಾ ಚಿಕ್ಕ ಮಕ್ಕಳ ತರಹ ಹಾಡಿ ಆಟ ಆಡಿದ್ವಲ್ಲಾ? ಆ ಮೇಲೆ ಅಮ್ಮನ ಹತ್ರಾ ಬೈಸಿಕೊಂಡು ಹಲಸಿನ ಹಪ್ಪಳ ಸುಟ್ಟು ಅದನ್ನ ಪಾಲು ಮಾಡೋವಾಗ ನಂಗೆ ಜಾಸ್ತಿ ನಿಂಗೆ ಜಾಸ್ತಿ ಅಂತಾ ಕಿತ್ತಾಡಿಕೊಂಡಿದ್ವಲ್ಲಾ? ಈ ಮಳೆ ನೋಡೋವಾಗ ಅದೆಲ್ಲಾ ನೆನಪಾಗುತ್ತಿದೇಯೋ ಪೆದ್ದೇಶ!<br />
         ನಿಂಗೆ ಇವೆಲ್ಲಾ ಎಲ್ಲಿ ನೆನಪಾಗತ್ತೆ ಹೇಳು? ಹೋಗ್ಲಿ ನನ್ನ ನೆನಪಾದರೂ ಇದೆಯಲ್ವಾ ಅಷ್ಟೆ ಸಮಾಧಾನ ನಂಗೆ. ಮತ್ತೆ ಹೇಗೆ ನಡಿತಾ ಇದೆ ಕೆಲ್ಸಾ? ನಮ್ಮೂರ ಕಡೆ ಯಾವಾಗ ಬರ್ತಿಯಾ? ಅಲ್ವೋ ನಾನು ಜಾತಿ ಬಿಟ್ಟವನು ಅಂತಾ ಉದ್ದುದ್ದಾ ಭಾಷಣ ಬಿಗಿತೀಯಾ ಮತ್ತೆ ನನ್ನನ್ನು ಜ್ಯೋಯ್ಸರ ಮಗಳು ಅಂತಾ ಜಾತಿ ಹೆಸರಿನಲ್ಲೇ ಅಣಗಿಸುತ್ತೀಯಲ್ವೋ? ಸಾಹಿತಿಯಾಗ್ಲಿಕ್ಕೆ ಪೂರ್ವಭಾವಿಯಾಗಿ ತಯಾರಿನಾ ಇದು?! ಹೇಳೋದೊಂದು, ತಿನ್ನೊದೊಂದು ಅಂತಾರಲ್ಲಾ ಹಾಗೆ ಆಯಿತು ನೋಡು ನಿನ್ನ ಕಥೆ! ನಮ್ಮ ಅಪ್ಪಾ ನಿನ್ನ ತರಹ ಅಲ್ಲಾ, ಇಸ್ಕೂಲಿಗೆ ಹೋಗದೆ ಹೋದ್ರು ಆಡಿದ ಮಾತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೊದು ಅವರಿಗೆ ಚೆನ್ನಾಗಿ ಗೊತ್ತು. ಅಂದಹಾಗೆ ಮಾರ್ಕೇಟ್‌ನ ಗಯ್ಯಾಳಿಗಳು ನಂಗೆ ಮಾವನ ಮನೆ ಕಡೆಯಿಂದ ಸಂಬಂಧಿಗಳಾಗಲ್ಲಿಕ್ಕೆ ಇರುವವರು! ಹಾಗೆ ಹೇಳು ಅಂತಾ ನಮ್ಮ ಅಮ್ಮ ನಂಗೆ ಹೇಳಿಕೊಟ್ಟರು! ಖಂಡಿತವಾಗಿಯೂ ಇದು ನನ್ನ ಮಾತಲ್ಲ ಕಣೋ, ಅಮ್ಮನದ್ದೆ.<br />
ಅದೇನೋ ಬ್ಲಾಗ್ ಬರಹ ಅಂದ್ರೆ ಅದು ನಂಗೊಂಚೂರು ಅರ್ಥವಾಗ್ಲಿಲ್ಲ. ಬ್ಯಾಗ್ ಕುರಿತಾಗಿ ಬರೆಯೋದಾ? ಅದೇನೇನು ಕುರಿತಾಗಿ ಬರಿತೀಯೋ ನೀನು. ಒಟ್ಟಲ್ಲಿ ಬರೆದು ಬರೆದೇ ನನ್ನಂತಹವಳನ್ನ ಕುರಿಮಾಡ್ತಿಯಾ ನೋಡು ನೀನು. ಇನ್ನೂ ಏನೇನೋ ಬರಿಬೇಕು ಅಂದ್ಕೊಂಡಿದ್ದೆ. ಈಗ ಒಂದು ನೆನಪಾಗ್ತಾ ಇಲ್ಲ ನೋಡು. ನೆನಪಾದರೆ ಇನ್ನೊಂದು ಪತ್ರ ಹಾಕ್ತಿನಿ. ಅಂದಹಾಗೆ ಬೆಂಗಳೂರಲ್ಲಿ ಹಾಳುಮೂಳು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಹಾಗೆನೆ ಕಂಡ ಕಂಡ ಚೆಂದದ ಹುಡ್ಗಿಯರಿಗೆಲ್ಲಾ ಲೈನ್ ಹಾಕಿ ಕಣ್ಣು ನೋವು ಬರಿಸಿಕೊಳ್ಳಬೇಡ! ಬಾಯ್......<br />
                                                                                               ಇಂತಿ ನಿನ್ನ<br />
                                                                                                    ಪುಟ್ಟಿ </h3>
]]></content:encoded>
</item>
<item>
<title><![CDATA[ತಿರ್ಥಹಳ್ಳಿಯ ಜೋಯ್ಸರ ಮಗಳೇ!!!]]></title>
<link>http://aksharavihaara.wordpress.com/?p=14</link>
<pubDate>Tue, 18 Mar 2008 08:40:36 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/03/18/%e0%b2%a4%e0%b2%bf%e0%b2%b0%e0%b3%8d%e0%b2%a5%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%af-%e0%b2%9c%e0%b3%8b%e0%b2%af%e0%b3%8d%e0%b2%b8%e0%b2%b0-%e0%b2%ae%e0%b2%97%e0%b2%b3%e0%b3%87/</guid>
<description><![CDATA[ಪುಟ್ಟಿ,
ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶು]]></description>
<content:encoded><![CDATA[<h3>ಪುಟ್ಟಿ,<a href="http://aksharavihaara.wordpress.com/files/2008/03/love2.jpg" title="love2.jpg"><img src="http://aksharavihaara.wordpress.com/files/2008/03/love2.thumbnail.jpg" alt="love2.jpg" /></a></h3>
<h3>ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶುರುಹಚ್ಚಿಕೊಂಡ ಮೇಲೆ ನಿನಗೆ ಲೇಟರ್ ಬರೆಯೋದೇ ಮರೆತುಹೋಗಿತ್ತು ನೋಡು. ನಂಗೊತ್ತು ನೀನು ಚೂಪು ಮೂತಿ ಮಾಡಿಕೊಂಡು, ಮುಖ ಕೆಂಪೇರಿಸಿಕೊಂಡು, ನನ್ನ ಮೇಲೆ ಹರಿಹಾಯ್ತ ಕುತಿರುತ್ತೀಯಾ ಅಂತಾ. ಎಷ್ಟಂದ್ರೂ ನೀನು ಜೋಯ್ಸರ ಮಗಳಲ್ವಾ? ಹಾಗಾಗಿ ಮೂಗಿನ ತುದಿಗೆ ಸಿಟ್ಟು ನಿಂಗೆ!</h3>
<h3>ಏ ನೀನು ನಂಗೆ ಮೊದಲನೇ ಸಾರಿ ನೋಡ್ಲಿಕ್ಕೆ ಸಿಕ್ಕಿದ್ದು ಭಿಮನಕಟ್ಟೆಯ ದೋಣಿಯಲ್ಲಿ ಅಲ್ವಾ? ಅದೇ ಕಣೆ ನಾನು ದೋಣಿಯಲ್ಲಿ ಕೂತಿದ್ದೆ. ಅಷ್ಟೊತ್ತಿಗೆ ನೀನು ಗಯ್ಯಾಳಿ ತರ ಎಂಟ್ರಿ ಕೊಟ್ಟೆ. ದೋಣಿಯ ಅಂಬಿಗನ ಹತ್ತಿರ ಅದ್ಯಾವುದೋ ಭಾಷೆಯಲ್ಲಿ ಅದೇನೋ ಮಾತಾಡಿದೆ. ನಾನು ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ನಿನ್ನನ್ನೇ ನೋಡಿದಕ್ಕೆ ಏನೋ ಹುಡುಗ ಹುಡುಗಿ ಅಂದ್ರೆ ಕುಣಿಯೋ ಗೊಂಬೆನಾ ಅಂತಾ ನನ್ನ ಮೇಲೆ ಜಗಳ ಬಂದೆ! ಆಮೇಲೆ ನಾನು ಸಿಟ್ಟಾದೆ. ಕೊನೆಗೆ ಇವ ವಿಶ್ವಾಮಿತ್ರನ ವಂಶದವನಿರಬೇಕು ಅಂತಾ ಗೊಣಗುಟ್ಟಿ ಮತ್ತೆ ನೀನು ಸುಮ್ಮನಾದೆಯಲ್ಲಾ? ಹೋಗ್ಲಿಬಿಡು ಆ ವಿಚಾರ ಮತ್ತೆ ಈಗ್ಯಾಕೆ?</h3>
<h3>ಏನೇ ಹೇಳು ನಿಮ್ಮೂರು ಮಾತ್ರ ನಿಜಕ್ಕೂ ಸುಪರ್ ಕಣೇ.  ನಿನ್ನಂತಹ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸುಪರ್ ಅಂದಿದ್ದಲ್ಲಾ! ನಿಮ್ಮ ಮನೆ ಹತ್ರಾ ಇರೋ ತುಂಗಾನದಿ, ಆಚೆ ಕಡೆ ಇರೋ ದೇವಸ್ಥಾನ, ಸದಾ ಹಸಿರಾಗಿ ಕಂಗೊಳಿಸೋ ಗದ್ದೆಗಳು ಅವನ್ನೆಲ್ಲಾ ಕಂಡು ಸುಪರ್ ಅಂದಿದ್ದು ಗೊತ್ತಾಯ್ತ?! ನಿಮ್ಮಪ್ಪಾ ನಿಂಗೆ ಒಂಚೂರು ಆಸ್ತಿಕೊಡ್ತಾನಾ ಕೇಳು. ತಗೊಂಡು ಹಾಯಾಗಿ ಅಲ್ಲೆ ಸೆಟಲ್ ಆಗಿ ಬಿಡೋಣ. ನಂಗೆ ಅಂತಾ ಈ ಮಾತು ಹೇಳಿದಲ್ಲ. ಅಮ್ಮನ ಬಿಟ್ಟು ಅಭ್ಯಾಸವೇ ಇಲ್ಲದೇ ಇರೋ ನಿಂಗೋಸ್ಕರನೇ ಹೇಳಿದ್ದು! ಆಮೇಲೆ ಆಸ್ತಿಗೋಸ್ಕರ ನೀ ನನ್ನ ಇಷ್ಟಪಟ್ಟಿದ್ದಾ ಅಂತಾ ಜಗಳ ಆಡಬೇಡ!</h3>
<h3>ಮತ್ತೆ ವಿಶೇಷ? ಯಾವಾಗ ಬರ್ತಿಯಾ ಬೆಂಗಳೂರಿಗೆ... ಏನ್ ಸಖತ್ತಾಗಿದೆ ಗೊತ್ತಾ ಈ ಬೆಂಗಳೂರು. ಕೆಆರ್ ಮಾರ್ಕೆಟಗೆ ಹೋಗಿ ನಿಂತರೆ ನಿನಗಿಂತ ಬರೋಬ್ಬರಿ ಗಯ್ಯಾಳಿಗಳ ಹಿಂಡು ಹಿಂಡೇ ಇದೆ. ಅವರನ್ನ ಕಂಡಾಗಲೆಲ್ಲಾ ನಿನ್ನ ನೆನಪಾಗತ್ತೆ ಕಣೇ! ಅಂದಹಾಗೆ ಅವರೇನಾದ್ರೂ ನಿನ್ನ ಸಂಬಂಧಿಗಳಾ? ಅಪ್ಪನ ಕಡೆಯಿಂದ, ಅಮ್ಮನ ಕಡೆಯಿಂದ! ನಾನು ಹೀಗೆ ಕೇಳಿದೆ ಅಂತಾ ನಿಮ್ಮಪ್ಪನಿಗೆ ಮಾತ್ರ ಹೇಳ್ಬೇಡ ಮಾರಾಯಿತಿ. ಮೋದ್ಲೆ ನಂಗೆ ಜೋಯ್ಸರು ಅಂದ್ರೆ ಭಯ! ಹಾಗಂತ ಜೋಯ್ಸರ ಮಗಳಿಗೂ ಭಯಪಡ್ತೀನಿ ಅಂದ್ಕೊಬೇಡ...</h3>
<h3>ಸಾಕಲ್ವಾ ಇಷ್ಟು, ಕೊನೆಗೆ ಮತ್ತೊಂದು ಲೆಟರ್‌ಗೆ ವಿಷ್ಯನೇ ಇರಲ್ಲ. ನೀನೊಬ್ಬಳು ನೆಟ್‌ವರ್ಕ್ ಇಲ್ಲದ ಊರಲ್ಲಿ ಹುಟ್ಟಿಕೊಂಡಿದಿಯಾ. ನಿಮ್ಮನೇ ಪೋನು ಸರಿಯಿದ್ದಾಗ ನಿಂಗೆ ಸರಿಯಿರಲ್ಲ! ಅಂದ್ರೆ ನಿಂಗೆ ಪುರುಸೊತ್ತು ಇರಲ್ಲ ಅಂತಾ. ನಿಂಗೆ ಪುರುಸೊತ್ತು ಇದ್ದ್ರೂ ನಿಮ್ಮಪ್ಪ ಮನೇಲೇ ಇರ್ತಾರೆ ಅಂತಾ. ನಿವೆಲ್ಲಾ ಸರಿಯಿದ್ದಾಗ ಪೋನ್ ಸರಿಯಿರಲ್ಲ. ಒಟ್ಟಲ್ಲಿ ನಂಗೆ ಮಾತ್ರ ಕಾಗದ ಬರಿಯೋ ಕಾಟ ತಪ್ಪಿದಲ್ಲ.</h3>
<h3>                                                                          ಇಂತಿ</h3>
<h3>                                                                ಪುಟ್ಟ.</h3>
<h3></h3>
<h3></h3>
]]></content:encoded>
</item>
<item>
<title><![CDATA[ಹದ ಮಳೆಯ ಕಥೆ!]]></title>
<link>http://aksharavihaara.wordpress.com/?p=13</link>
<pubDate>Mon, 17 Mar 2008 12:30:30 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/03/17/%e0%b2%b9%e0%b2%a6-%e0%b2%ae%e0%b2%b3%e0%b3%86%e0%b2%af-%e0%b2%95%e0%b2%a5%e0%b3%86/</guid>
<description><![CDATA[ಮೊನ್ನೆ ತಾನೇ ಭಡ್ತಿಯವರು ಶಿವರಾತ್ರಿ ಕಳೆದ]]></description>
<content:encoded><![CDATA[<h3>ಮೊನ್ನೆ ತಾನೇ ಭಡ್ತಿಯವರು ಶಿವರಾತ್ರಿ ಕಳೆದರೂ ಹದ ಮಳೆ ಇನ್ನೂ ಬಿದ್ದಿಲ್ಲ ಅಂತಾ ಗಡ್ಡದಾಗಿ ವಿ.ಕ.ದಲ್ಲಿ ಬರೆದಿದ್ದರು ವರುಣ ದೇವನಿಗೆ ಅದ್ಯಾರೂ ಆ ಲೇಖನ ಒಯ್ದು ಕೊಟ್ಟರೋ ಗೊತ್ತಿಲ್ಲ! ಮಳೆ ಚೆನ್ನಾಗಿ ಜಡಿದಿದೆ. ಬೆಂಗ್ಳೂರಿಗರೆಲ್ಲಾ ಸಾಕಪ್ಪಾ ಹದ ಮಳೆಯ ಸಹವಾಸ ಅನ್ನೋ ತರಹ ಜಡಿದಿದೆ ನೋಡಿ ಮಳೆ! ಆದ್ರೂ ನಮ್ಮೂರಿನಲ್ಲಿ ಈ ಹದ ಮಳೆ ಹುಯ್ಯಿದಿದ್ದರೆ ಏನು ಪಸಂದಾಗಿತ್ತು ಗೊತ್ತಾ? ಅಲ್ಲಲ್ಲ ಈ ಮಳೆ ಹುಯ್ಯೋವಾಗ ನಾನು ನಮ್ಮೂರಲ್ಲಿ ಇದ್ದಿದ್ದರೆ ಏನೂ ಚೆಂದಾಗಿತ್ತು ಗೊತ್ತಾ? ಹೌದು ಮಲೆನಾಡಿನ ಹದ ಮಳೆಯ ಕಥೆಯೇ ಹಾಂಗೇ. ಅತ್ಲಾಗೇ ಆಲೆಮನೆ, ಇತ್ಲಾಗೇ ಚಾಲಿ ಸುಲಿಯದು ಮದ್ಯೆ ಈ ಮಳೆ ಕಾಟ ಮಾರಾಯ ಅಂತಾ ಮಲೆನಾಡಿನ ಯಜಮಾನರುಗಳು ಮಳೆ ಬಿದ್ದ ಮಾರನೇ ದಿನ ಹೇಳೋ ಕಥೆ ಕೇಳೋದಿದೆಯಲ್ಲಾ? ಅದು ಯಾವ ಪಿಕ್ಚರು ಕೊಡದ ಮಜ ಕೊಡತ್ತೆ!</h3>
<h3>ಹೋದ ವರ್ಷ ಈ ಮಳೆ ಯಾವಾಗ ಬಿದ್ದಿತ್ತು? ಈ ವರ್ಷ ಯಾವಾಗ ಬಿತ್ತು? ಇಷ್ಟು ಲೇಟಾಗಿ ಈ ಮಳೆ ಬಿದ್ದಿದ್ದರ ಪರಿಣಾಮ ಏನೂ? ಈ ಮಳೆಯಿಂದ ಯಾರ್ರ್ಯಾರ ಮನೆ ಮದ್ವೆ,ಉಪನಯನಗಳಿಗೆ ಹಾನಿಯಾಯಿತೂ ಅನ್ನೋದೆ ದೊಡ್ಡ ಚರ್ಚೆ ಈಗ ನಮ್ಮೂರಲ್ಲಿ!</h3>
<h3>ಮಳೆ ಬಿದ್ದು ಧೂಳು ಹಾರಿದ ಮೇಲೆ ನೆಲದಿಂದ ಘಮಗುಟ್ಟೋ ಮಣ್ಣಿನ ವಾಸನೆ ಇದೆಯಲ್ವಾ ಅದೇ ಒಂತರಹ ಚೆಂದ. ನಾವೆಲ್ಲಾ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಈ ದಿನಗಳು ಅಂದ್ರೆ ಶಾಲೆ ಪಾಠಗಳು ಮುಗಿದು ಥೈಯಾತಕ್ಕಾ ಅಂತಾ ಕುಣಿಯುವ ದಿನಗಳು. ಮಳೆ ಬಂತು ಅಂದ್ರೆ ಸಾಕು ಹುಯ್ಯೋ  ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಅಂತಾ ಬೈಲಲ್ಲಿ ನಮ್ಮ ಪೇರೆಡ್ ಸ್ಟಾರ್ಟು! ಕೊನೆಗೂ ಬರೋ ಜ್ವರ ಕೊನೆಗೆ ಸಿಗೋ ಪೆಟ್ಟು...ಅವೆಲ್ಲಾ ಹೇಳ್ತಾಹೋದ್ರೆ....</h3>
<h3>ಒಟ್ಟಲ್ಲಿ ಶಿವರಾತ್ರಿ ಮಾರನೇ ದಿವಸದ ಹದಾ ಮಳೆ ಅಂದ್ರೆ ಹಾಂಗೆ. ಮಳೆ ಬಂದಿಲ್ಲ ಅಂದ್ರೆ ಈಶ್ವರ ತಲೆ ಮೇಲೆ ಬಿಸಿನೀರು ಹೊಯ್ದು ಮಳೆ ತರಿಸೋ ಪುಣ್ಯಾತ್ಮರಿಗೂ ಮಲೆನಾಡಿನಲ್ಲೇನೂ ಕಮ್ಮಿ ಇಲ್ಲ! ಒಟ್ಟಲ್ಲಿ ಶಿವರಾತ್ರಿ ಬೆಳ್ಳಿಗ್ಗೆ ಒಂದು ಮಳೇ ಬೇಕೇ ಬೇಕು ಮಲೆನಾಡಿಗರಿಗೆ!</h3>
<h3>ಅಯ್ಯೋ ರಾಮ ಮೊನ್ನೆ ಬೆಂಗಳೂರಲ್ಲಿ ಮಳೆ ಬಂತಾ.. ನಾನು ಬಸ್ಸಲ್ಲಿ ಹೋಗ್ತಾ ಇದ್ನಾ... ಜನ ಮಳೆಗೆ ಏನು ಬೈದ್ರು ಬೈದ್ರು ಅಂತೀರಾ...ಅನ್ ಸೀಜ್ನ್ ಮಳೆಯಂತೆ ಇದು! ಪ್ರಕೃತಿ ಹಾಳಾಗಿದ್ದರ ಪರಿಣಾಮವಂತೆ!ಸೈಕ್ಲೋನ್ ಇಫೆಕ್ಟ್ ಅಂತೆ! ಬಸ್ಸಲ್ಲಿ ಜನ ಒಂದೊಂದು ನೆವ ಹೇಳಿ ಏನು ಬೈದ್ರೂ ಬೈದ್ರೂ ಅಂತೀರಾ? ಆದ್ರೆ ಬೈದದ್ದು ಯಾರಿಗೆ ಅಂತಾ ಮಾತ್ರ ನಗಂತೂ ಬಸ್ಸು ಇಳಿದ ಮೇಲೂ ಅರ್ಥ ಆಗಿಲ್ಲ. ಎಷ್ಟಂದ್ರು ಮುಂದುವರಿದ ಜನ ನೋಡಿ ಹಾಗಾಗಿ ಅರ್ಥ ಮಾಡ್ಕೋಳೊದು ಭಾರಿ ಕಷ್ಟ!</h3>
<h3>ಇಲ್ಲಿಯವರಿಗೆ ಪಕ್ತಾ ದುಡ್ಡು ಮಾಡೋದೊಂದು ಬಿಟ್ಟರೆ ಮತ್ತೇನೂ ಗೊತ್ತೆ ಇಲ್ಲ! ಅಂತಾ ಮಲೆನಾಡಿನ ಯಜಮಾನರು ಪ್ಯಾಟೆಯವರಿಗೆ ಬೈಯೋದ್ಯಾಕೆ ಅಂತಾ ಅರ್ಥ ಆಗಿದ್ದು ಹದ ಮಳೆಯಿಂದಲೇ! ಹೋಗ್ಲಿ ಬಿಡಿ ಆ ಸುದ್ದಿ ನಮಗ್ಯಾಕೆ?!</h3>
]]></content:encoded>
</item>
<item>
<title><![CDATA[ಆಯಿಯ ದೋಸೆ]]></title>
<link>http://aksharavihaara.wordpress.com/2008/03/16/%e0%b2%86%e0%b2%af%e0%b2%bf%e0%b2%af-%e0%b2%a6%e0%b3%8b%e0%b2%b8%e0%b3%86/</link>
<pubDate>Sun, 16 Mar 2008 10:55:18 +0000</pubDate>
<dc:creator>aksharavihaara</dc:creator>
<guid>http://aksharavihaara.kn.wordpress.com/2008/03/16/%e0%b2%86%e0%b2%af%e0%b2%bf%e0%b2%af-%e0%b2%a6%e0%b3%8b%e0%b2%b8%e0%b3%86/</guid>
<description><![CDATA[ಅದು ಬಾಲ್ಯದ ದಿನಗಳು. ಬೇಸಿಗೆ ರಜೆ ಬಂತೆಂದರ]]></description>
<content:encoded><![CDATA[<h3>ಅದು ಬಾಲ್ಯದ ದಿನಗಳು. ಬೇಸಿಗೆ ರಜೆ ಬಂತೆಂದರೆ ಅಜ್ಜನ ಮನೆಗೆ ಓಡುತ್ತಿದ್ದ ದಿನವದು. ಉತ್ತರ ಕನ್ನಡದ "ಚಪ್ಪರಮನೆ" ಅಂತಾ ಊರಿನ ಹೆಸರು. ಯಕ್ಷಗಾನದಿಂದ, ಮಾವನ ಭಾಗವತಿಕೆಯಿಂದ ಆ ಊರು ಪರಿಚಿತ ಅನ್ನೋದು ಬಿಟ್ಟರೆ ಅದಿಲ್ಲವಾದರೆ ಇವತ್ತಿಗೂ ಆ ಊರು ಒಂತರಹ ಭಯಾನಕ ಕೊಂಪೆಯೇ ಸರಿ! ಸಿದ್ದಾಪುರ ಸೀಮೆಯೆಂದರೆ ನಮ್ಮ ಸಾಗರದವರಿಗೆ ಒಂತರಹ ಮೂದಲಿಕೆ! ಅವರು ಸಾಗರ ಸೀಮೆಯವರ ಲೆಕ್ಕದಲ್ಲಿ ಗೊಡ್ಡುಗಳಂತೆ!(ನನ್ನ ಅಪ್ಪ ಅಮ್ಮನಿಗೆ ಬೈಯ್ಯುತ್ತಿದ್ದಾಗ ನನಗೆ ಈ ವಿಚಾರ ಗೊತ್ತಾಗಿದ್ದು!)ನಮಗೆಲ್ಲಾ ಅದು ಅಜ್ಜನ ಮನೆ ಅನ್ನೋದಕ್ಕಿಂತ ಆಯಿ ಮನೆ ಅಂತಲೇ ಚಿರಪರಿಚಿತ. ಬೆಳಿಗ್ಗೆ ೬.೩೦ ಅಂದರೆ ನನ್ನಗೊಂತು ರಜೆಯಲ್ಲಿ ಮದ್ಯರಾತ್ರಿಯೇ ಸರಿ! ಮಾಣಿ ಆಸ್ರಿಗಾತು ಏಳೋ ಅಂತಾ ಆಯಿ ಎಬ್ಬಿಸುತ್ತಿದ್ದಳು. ಅದೇ ದರಿದ್ರ ದೋಸೆ. ಅಮೆ, ಸೂತಕದಂತ ಅನಿಷ್ಟದ(ನನ್ನ ಲೆಕ್ಕದಲಲ್ಲ) ದಿನ ದೇವರ ಮುಡಿಗೆ ಹೂವು ತಪ್ಪಬಹುದು ಆದರೆ ಈ ಸಿದ್ದಾಪುರ ಸೀಮೆಯಲ್ಲಿ ಆರೂವರೆಗೆ, ದೋಸೆ ತಿನ್ನೋದು ಮಾತ್ರ ೩೬೫ದಿನವೂ ತಪ್ಪದು ಅಂತಾ ನನ್ನ ಗಲಾಟೆ. ಆ ಗಲಾಟೆ ಕೇಳಲಾರದೆ ಕೆಲ ದಿನ ಆಯಿ ನನಗೆ ಬೇರೆ ತಿಂಡಿ ಮಾಡಿ ಹಾಕುತ್ತಿದ್ದಳು. ನಿನ್ನೆ ಅದ್ಯಾಕೋ ನೆನಪಿಗೆ ಬಂತು. ನಾನು ದೋಸೆ ತಿನ್ನದೆ ಸುಮಾರು ಒಂದುವರೆ ವರ್ಷಗಳೇ ಕಳೆದಿರಬೇಕು. ಅಜ್ಜನ ಮನೆಗೆ ಹೋಗದೆ ೨ ವರ್ಷಗಳೇ ಕಳೆದಿದೆ ಬಿಡಿ! ಆಯಿ ಕೈ ದೋಸೆ ತಿನ್ನದೆ ೫ ವರ್ಷಗಳು ಕಳೆದಿವೆ. ಆಯಿ ದೂರ ನಡೆದು ೫ ವರ್ಷವಾಗಿದೆ. ಬಾಲ್ಯ ಕಳೆಯಿತೆಂದರೆ ಸಂಬಂಧಗಳು ಕಳೆದು ಬಿಡುತ್ತವೆ. ಕಳೆಯುತ್ತದೆ ಅನ್ನೋದಕ್ಕಿಂತ ಬೆಳೆಸಿಕೊಂಡು ಹೋಗಲು ನಮಗೆ ಪುರುಸೊತ್ತು ಇರೋಲ್ಲ!ಅನ್ನಿಸಿದ್ದು ಮನೆ ಬಿಟ್ಟು ಓದಲು ಹೊರಗಡೆ ಬಂದ ನಂತರ. ಮನೆಯಲ್ಲಿದ್ದಾಗ ರಜೆಯಲ್ಲಿ ಅಜ್ಜನ ಮನೆಗೆ ಹೊಗೋದು ರೂಢಿ. ಮನೆ ಬಿಟ್ಟ ನಂತರ ರಜೆಯಲ್ಲಿ ಮನೆ ಸೇರಿದರೆ ಸಾಕು ಅಂತಾ ಉದ್ಯೋಗ ಸೇರಿದ ನಂತರ ಅದನ್ನು ಸೇರುವುದು ಕಷ್ಟವೇ!ಯಾಕೋ ನೆನಸಿಕೊಂಡರೆ ಬೇಜಾರಾಗತ್ತೆ. ಇನ್ನೂ ಒಂದು ಶಾಕ್ ಅಂದ್ರೆ ಆ ಆಯಿಗೂ ಅಜ್ಜನ ಮನೆಗೂ ಇರುವ ಸಂಬಂಧವೇನೂ ಎಂಬುದು ಇವತ್ತಿಗೂ ನನಗೆ ಗೊತ್ತಿಲ್ಲ. ಅಜ್ಜನ ಅಕ್ಕನೋ ,ತಂಗಿಯೋ ಆಕೆ. ಮಕ್ಕಳಿಲ್ಲದ ಅವಳು ಗಂಡ ಸತ್ತ ಮೇಲೆ ಇಲ್ಲೇ ಬಂದಿದ್ದಾಳೆ ಅಂತಾ ಅಮ್ಮ ಹೇಳಿದ ನೆನಪು. ಆಕೆಯ ಪ್ರೀತಿ ಮಾತ್ರ ಗೊತ್ತು ಬಿಟ್ಟರೆ ನಿಜಕ್ಕೂ ನನಗೆ ಆಯಿಯ ಪೂರ್ವಾಪರ ಗೊತ್ತಿಲ್ಲ. ಅದನ್ನು ಕೆದಕಿ ತಿಳಿದುಕೊಳ್ಳಬೇಕು ಅಂತಾನೂ ಅನ್ನಿಸಲಿಲ್ಲ. ದೋಸೆ ನೆನಸಿಕೊಂಡಗಲೆಲ್ಲಾ ಆಯಿ ನೆನೆಪಾಗುತ್ತಾಳೆ. ಆಯಿ ಜೊತೆ ಹೊಡೆದ ಜಗಳ ನೆನಪಾಗುತ್ತದೆ. ಈಗ ಅತ್ತೆ ಆಯಿ ದೊಸೆ ಮಾಡಿ ಹಾಕ್ತಿ ಬಾರೋ ಮಾಣಿ ಅಂತ ಕರೆದರೂ ಹೋಗ್ಲಿಕ್ಕೆ ಆಗ್ತಾ ಇಲ್ಲ. ಅತ್ತೆ ಆಯಿ ಹಾಗಲ್ಲ. ಅತ್ತೆ ಮನೆ ದೋಸೆ ಆಗೋವಾಗ ಬೆಳಿಗ್ಗೆ ಏಳೂವರೆಯೇ ಕಳೆದಿರುತ್ತದೆ. ಅತ್ತೆ ಈಗಿನ ಕಾಲದವಳು. ಆದ್ರೂ ಬ್ಲಾಗ್ ಓದಬಹುದಾದಷ್ಟರ ಮಟ್ಟಿಗಿನ ಇಂದಿನ ಕಾಲದವಳಲ್ಲ ಅನ್ನೋ ಭರವಸೆಯಿದೆ. ಹಾಗಾಗಿಯೇ ಆಕೆ ಬಗ್ಗೆನೂ ಒಂಚೂರು ಬರೆದೆ!</h3>
]]></content:encoded>
</item>

</channel>
</rss>
