<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಕ್ರಿಕೆಟ್ &amp;laquo; WordPress.com Tag Feed</title>
	<link>http://wordpress.com/tag/ಕ್ರಿಕೆಟ್/</link>
	<description>Feed of posts on WordPress.com tagged "ಕ್ರಿಕೆಟ್"</description>
	<pubDate>Wed, 08 Oct 2008 07:06:08 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಡಕ್ ಗೊತ್ತು...ಆದ್ರೆ ಗೋಲ್ಡನ್ ಡಕ್, ಡೈಮಂಡ್ ಡಕ್, ಪ್ಲಾಟಿನಂ ಡಕ್..?]]></title>
<link>http://vijaykannantha.wordpress.com/?p=179</link>
<pubDate>Thu, 21 Aug 2008 06:06:38 +0000</pubDate>
<dc:creator>vijayraj</dc:creator>
<guid>http://vijaykannantha.kn.wordpress.com/2008/08/21/%e0%b2%a1%e0%b2%95%e0%b3%8d-%e0%b2%97%e0%b3%8a%e0%b2%a4%e0%b3%8d%e0%b2%a4%e0%b3%81%e0%b2%86%e0%b2%a6%e0%b3%8d%e0%b2%b0%e0%b3%86-%e0%b2%97%e0%b3%8b%e0%b2%b2%e0%b3%8d%e0%b2%a1%e0%b2%a8%e0%b3%8d/</guid>
<description><![CDATA[ಕ್ರಿಕೇಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಸೊ]]></description>
<content:encoded><![CDATA[<p class="MsoNormal" style="margin:0;"><span style="font-size:10pt;font-family:Tunga;">ಕ್ರಿಕೇಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಸೊನ್ನೆಗೆ ಔಟ್ ಆದಾಗ ಅವನ ಸ್ಕೋರ್ ಡಕ್ ಅಂತ ಹೇಳೋದು ನಮಗೆಲ್ಲಾ ಗೊತ್ತು. ಆದ್ರೆ ಈ ಡಕ್‌ನಲ್ಲಿ ಎಷ್ಟೊಂದು ವೆರೈಟಿ ಇದೆ ಅಂತ ಗೊತ್ತೇ ಇರ್ಲಿಲ್ಲ. ಇಲ್ಲಿದೆ ನೋಡಿ ಕೆಲವು ಅಂತಹ ಡಕ್‌ಗಳ ಸುದ್ದಿ </span><span style="font-size:10pt;" lang="KN"><span style="font-family:Times New Roman;">-</span></span><span style="font-size:10pt;font-family:Tunga;"> </span><span style="font-size:10pt;font-family:Tunga;"></span></p>
<p class="MsoNormal" style="margin:0;"><strong><span style="font-size:10pt;font-family:Tunga;"> </span></strong></p>
<p class="MsoNormal" style="margin:0;"><strong><span style="font-size:10pt;font-family:Tunga;">ಸಿಲ್ವರ್ ಡಕ್ </span></strong><strong><span style="font-size:10pt;" lang="KN"><span style="font-family:Times New Roman;">-</span></span></strong><strong><span style="font-size:10pt;font-family:Tunga;"> </span></strong><span style="font-size:10pt;font-family:Tunga;">ಒಬ್ಬ ಬ್ಯಾಟ್ಸ್‌ಮನ್ ತಾನಾಡಿದ ಎರಡನೆ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು</span><strong><span style="font-size:10pt;font-family:Tunga;"></span></strong></p>
<p class="MsoNormal" style="margin:0;"><strong><span style="font-size:10pt;font-family:Tunga;">ಗೋಲ್ಡನ್ ಡಕ್</span></strong><span style="font-size:10pt;font-family:Tunga;"> - ಒಬ್ಬ ಬ್ಯಾಟ್ಸ್‌ಮನ್ ತಾನಾಡಿದ ಮೊದಲನೇ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು</span><span style="font-size:10pt;font-family:Tunga;"></span></p>
<p class="MsoNormal" style="margin:0;"><strong><span style="font-size:10pt;font-family:Tunga;">ಡೈಮಂಡ್ ಡಕ್</span></strong><span style="font-size:10pt;font-family:Tunga;"> - ಒಬ್ಬ ಬ್ಯಾಟ್ಸ್‌ಮನ್ ಒಂದೂ ಎಸೆತವನ್ನು ಎದುರಿಸದೇ ಔಟಾಗೋದು ( ಸಾಮಾನ್ಯವಾಗಿ ರನ್ ಔಟ್)</span><span style="font-size:10pt;font-family:Tunga;"></span></p>
<p class="MsoNormal" style="margin:0;"><strong><span style="font-size:10pt;font-family:Tunga;">ಪ್ಲಾಟಿನಂ ಡಕ್</span></strong><span style="font-size:10pt;font-family:Tunga;"> </span><span style="font-size:10pt;" lang="KN"><span style="font-family:Times New Roman;">-</span></span><span style="font-size:10pt;font-family:Tunga;"> ಒಂದು ಮ್ಯಾಚ್‌ನ ಮೊದಲನೇ ಬಾಲ್‌ಗೆ ಒಂದೂ ರನ್ ಗಳಿಸದೆ ಔಟಾಗೋದು </span><span style="font-size:10pt;font-family:Tunga;"></span></p>
<p class="MsoNormal" style="margin:0;"><span style="font-size:10pt;font-family:Tunga;"> </span></p>
<p class="MsoNormal" style="margin:0;"><strong><span style="font-size:10pt;font-family:Tunga;">ಪೇರ್ (</span></strong><strong><span style="font-size:10pt;font-family:Arial;">pair</span></strong><strong><span style="font-size:10pt;font-family:Tunga;">)</span></strong><span style="font-size:10pt;font-family:Tunga;"> - ಒಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಮ್ಯಾಚ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾಗೋದು</span><span style="font-size:10pt;font-family:Tunga;"></span></p>
<p class="MsoNormal" style="margin:0;"><strong><span style="font-size:10pt;font-family:Tunga;">ಕಿಂಗ್ಸ್ ಪೇರ್ (</span></strong><strong><span style="font-size:10pt;font-family:Arial;">kings pair</span></strong><strong><span style="font-size:10pt;font-family:Tunga;">) </span></strong><span style="font-size:10pt;font-family:Tunga;">- ಒ ಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಮ್ಯಾಚ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಔಟಾಗೋದು</span><span style="font-size:10pt;font-family:Tunga;"></span></p>
<p class="MsoNormal" style="margin:0;"><strong><span style="font-size:10pt;font-family:Tunga;"> </span></strong></p>
<p class="MsoNormal" style="margin:0;"><span style="font-size:10pt;font-family:Tunga;">ನಮ್ಗೆ ಕ್ರಿಕೆಟ್ ಬಗ್ಗೆ ಎಲ್ಲಾ ಗೊತ್ತು ಅಂದ್ಕೊಂಡು ಬೀಗ್ತಾ ಇರ್ತೀವಿ..ಅದ್ರೆ ಗೊತ್ತಿಲ್ದೇ ಇರೋದು ಎಷ್ಟು ಇರುತ್ತೆ ಅಂತ ವಿಕಿಪಿಡಿಯಾದಲ್ಲಿ ಈ ಮಾಹಿತಿ ಸಿಕ್ಕ ಮೇಲೆ ಗೊ<span style="font-size:10pt;font-family:Tunga;" lang="KN"><span style="font-size:10pt;color:#000000;font-family:Tunga;">ತ್ತಾ</span>ಗಿದ್ದು.</span></span></p>
<p class="MsoNormal" style="margin:0;"><span style="font-size:10pt;font-family:Tunga;"></span></p>
]]></content:encoded>
</item>
<item>
<title><![CDATA[ಯೂಥ್ ಫೋಕಸ್: ಎಂ.ಎಸ್.ಧೋನಿ ಫ್ರಂ ರಾಂಚಿ!]]></title>
<link>http://kalaravapatrike.wordpress.com/2008/07/23/%e0%b2%af%e0%b3%82%e0%b2%a5%e0%b3%8d-%e0%b2%ab%e0%b3%8b%e0%b2%95%e0%b2%b8%e0%b3%8d-%e0%b2%8e%e0%b2%82%e0%b2%8e%e0%b2%b8%e0%b3%8d%e0%b2%a7%e0%b3%8b%e0%b2%a8%e0%b2%bf-%e0%b2%ab%e0%b3%8d%e0%b2%b0/</link>
<pubDate>Wed, 23 Jul 2008 18:13:44 +0000</pubDate>
<dc:creator>uniquesupri</dc:creator>
<guid>http://kalaravapatrike.kn.wordpress.com/2008/07/23/%e0%b2%af%e0%b3%82%e0%b2%a5%e0%b3%8d-%e0%b2%ab%e0%b3%8b%e0%b2%95%e0%b2%b8%e0%b3%8d-%e0%b2%8e%e0%b2%82%e0%b2%8e%e0%b2%b8%e0%b3%8d%e0%b2%a7%e0%b3%8b%e0%b2%a8%e0%b2%bf-%e0%b2%ab%e0%b3%8d%e0%b2%b0/</guid>
<description><![CDATA[ತನ್ನ ತುಂಟ ನಗೆಯ ಮುಖ, ಆಕ್ರಮಣಕಾರಿ ಬ್ಯಾಟಿ]]></description>
<content:encoded><![CDATA[<p>ತನ್ನ ತುಂಟ ನಗೆಯ ಮುಖ, ಆಕ್ರಮಣಕಾರಿ ಬ್ಯಾಟಿಂಗ್, ಶಾಂತ ಸ್ವಭಾವ, ಎಲ್ಲಕ್ಕಿಂತ ಮುಖ್ಯವಾಗಿ ಆತನ ಲೀಡರ್‌ಶಿಪ್ ಗುಣಗಳಿಂದಾಗಿ ಇಪ್ಪತ್ತೇಳು ವರ್ಷದ ಮಹೇಂದ್ರ ಸಿಂಗ್ ಧೋನಿ ಎಂಬ ರಾಂಚಿಯ ಹುಡುಗ ಯುವಕರ ಪಾಲಿನ ಆರಾಧ್ಯ ದೈವವಾಗಿದ್ದಾನೆ. ೨೦೦೬ರಲ್ಲೇ ಎಂ ಟಿವಿಯ ಯೂಥ್ ಐಕಾನ್ ಆಗಿದ್ದಾನೆ.</p>
<p><img src="http://kalaravapatrike.files.wordpress.com/2008/07/dhoni23.jpg" style="width:230px;height:280px;" height="383" alt="Dhoni23.jpg"></p>
<p>ಉತ್ತರಖಂಡದ ಅಲ್ಮೋರದಲ್ಲಿ ಹುಟ್ಟಿದ ಧೋನಿ ಹೈಸ್ಕೂಲು ದಿನಗಳಲ್ಲೇ ಬ್ಯಾಡ್ಮಿಂಟನ್ ಹಾಗೂ ಫುಟ್‌ಬಾಲ್ ಆಡುವುದರಲ್ಲಿ ಆಸಕ್ತಿ ಹೊಂದಿದ್ದ. ಶಾಲೆಯ ಫುಟ್‌ಬಾಲ್ ತಂಡದಲ್ಲಿ ಆತ ಗೋಲ್ ಕೀಪರ್ ಆಗಿದ್ದ. ಒಮ್ಮೆ ಆತನ ಕೋಚ್ ಅವನನ್ನು ಸ್ಥಳೀಯ ಕ್ರಿಕೆಟ್ ಕ್ಲಬ್‌ವೊಂದರಲ್ಲಿ ಕ್ರಿಕೆಟ್ ಆಡಲು ಕಳುಹಿಸಿಕೊಟ್ಟರು. ವಿಕೆಟ್ ಹಿಂದಿನ ಧೋನಿಯ ಚುರುಕಾದ ಓಡಾಟ ಕ್ಲಬ್‌ನ ಗಮನ ಸೆಳೆಯಿತು. ಮುಂದೆ ಫುಟ್‌ಬಾಲ್‌ನ ಗೋಲಿನ ಮುಂದೆ ನಿಲ್ಲುತ್ತಿದ್ದ ಹುಡುಗ ಕ್ರಿಕೆಟ್ ಮೈದಾನದಲ್ಲಿ ವಿಕೆಟ್ ಹಿಂದೆ ನಿಲ್ಲಲು ಶುರು ಮಾಡಿದ, ಹತ್ತನೆಯ ತರಗತಿ ಮುಗಿಯುವಷ್ಟರಲ್ಲಿ ಕ್ರಿಕೆಟ್ ಎಂಬ ಮಾಯಾನಗರಿಯ ಹಾದಿಯಲ್ಲಿ ಅವನು ಸ್ಪಷ್ಟವಾದ ಹೆಜ್ಜೆ ಇಟ್ಟಿದ್ದ.</p>
<p>ಆತ ಇಂದು ಭಾರತದ ಯುವಶಕ್ತಿಯ ಪ್ರತಿನಿಧಿಯಾಗಿರುವುದಕ್ಕೆ ಹಲವು ಕಾರಣಗಳಿವೆ. ಆತ ಹಿಂದೆ ಗಾಡ್ ಫಾದರ್ ಇಟ್ಟುಕೊಂಡು ಮೈದಾನಕ್ಕಿಳಿದವನಲ್ಲ. ಆತನ ಕುಟುಂಬದ ಸರ್‌ನೇಮಿನ ಆಸರೆಯಿಂದ ಆತ ಅವಕಾಶದ ಗೊಂಚಲಿಗೆ ಕೈಹಾಕಲಿಲ್ಲ. ತನ್ನ ಸಾಧನೆಯ ಹಾದಿಯ ಪ್ರತಿ ಅಂಗುಲಂಗುಲನ್ನೂ ಖುದ್ದಾಗಿ ನಡೆದು ಸವೆಸಿದವನು. ಅವನು ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ್ದು ಕೇವಲ ತನ್ನ ಉದ್ದ ಕೂದಲಿನ ಗ್ಲಾಮರ್‌ನಿಂದಲ್ಲ. ಆತನ ಪ್ರತಿಭೆ, ಆತನ ಆತ್ಮವಿಶ್ವಾಸ ಹಾಗೂ ದುಡಿಮೆ ಅವನ ಕಾಲಡಿಗೆ ಪ್ರಸಿದ್ಧಿಯನ್ನೂ, ಹಣವನ್ನೂ ತಂದು ಸುರಿಯಿತು. ಶಕ್ತಿಯುತವಾದ ತೋಳುಗಳ ಮೇಲೆ ಶಾಂತವಾದ ತಲೆಯನ್ನು ಹೊಂದಿರುವ ಈ ಯುವಕನನ್ನು ದೇಶದ ಯುವ ಸಮೂಹ ಆದರ್ಶವಾಗಿ ಕಾಣುತ್ತದೆ. ಆತನ ಸಾಧನೆಯ ಗಾಥೆಯಿಂದ ಇವರೂ ಸ್ಪೂರ್ತಿಯನ್ನು, ಆತ್ಮವಿಶ್ವಾಸವನ್ನು ಮೊಗೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ.</p>
<p>ಧೋನಿಯಂಥ ಡೈನಮಿಕ್ ಆದ ಸಮರ್ಥರಾದ, ಯಾರಿಗೂ ಹೆದರದ ಹುಮ್ಮಸ್ಸಿನ ಯುವಕರು ದೇಶದ ತುಂಬಾ ಇದ್ದಾರೆ. ಪ್ರತಿ ಕ್ಷೇತ್ರದಲ್ಲೂ ಮುನ್ನುಗ್ಗಲು ಹಾತೊರೆಯುತ್ತಾ ನಿಂತಿದ್ದಾರೆ. ಈಗಾಗಲೇ ದುಡಿದು, ಅಂತಃಸತ್ವವನ್ನೆಲ್ಲಾ ಕಳೆದುಕೊಂಡು, ಜಡತೆಯನ್ನು ಮೈಗಂಟಿಸಿಕೊಂಡು, ಸಿನಿಕತೆಯನ್ನೇ ಕಾಯಕವಾಗಿಸಿಕೊಂಡಿರುವ ಹಿರಿಯರು ಅವರನ್ನು ಒಳಕ್ಕೆ ಸೇರಿಸಿಕೊಳ್ಳಬೇಕು. ಅವರಿಗೆ ದಾರಿ ತೋರಿಸಿ ಮುಂದೆ ಜಿಗಿಯಲು ಪ್ರೋತ್ಸಾಹಿಸಬೇಕು. ಚಿಗುರಿಗೆ ಬೇರಿನ ಬೆಂಬಲವಿದ್ದರೆ ಮರದ ಸೊಗಸು ಹೇಗಿರುತ್ತದೆ, ಯೋಚಿಸಿ!</p>
<p>ಇದೇ ತಿಂಗಳ ಏಳಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿಗೆ ನಮ್ಮದೊಂದು ಬಿಲೇಟೆಡ್ ವಿಷಸ್! <br></p>
<p><br></p>
]]></content:encoded>
</item>
<item>
<title><![CDATA[ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್]]></title>
<link>http://nagenagaaridotcom.wordpress.com/?p=269</link>
<pubDate>Mon, 07 Jul 2008 17:20:57 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/07/07/%e0%b2%ad%e0%b2%9c%e0%b3%8d%e0%b2%9c%e0%b2%bf-%e0%b2%b8%e0%b2%bf%e0%b2%82%e0%b2%97%e0%b2%bf%e0%b2%97%e0%b3%86-%e0%b2%b6%e0%b2%be%e0%b2%82%e0%b2%a4%e0%b2%a8%e0%b2%bf%e0%b2%82%e0%b2%a6-%e0%b2%95/</guid>
<description><![CDATA[(ನಗೆ ನಗಾರಿ ಕ್ರೀಡಾ ಬ್ಯೂರೋ)
ದೇಶ ಬಿಟ್ಟು ನ]]></description>
<content:encoded><![CDATA[<p style="text-align:center;"><span style="color:#800000;">(ನಗೆ ನಗಾರಿ ಕ್ರೀಡಾ ಬ್ಯೂರೋ)</span></p>
<p>ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)</p>
<p><a href="http://nagenagaaridotcom.files.wordpress.com/2008/07/14656929_pic1_b.jpg"><img class="aligncenter size-medium wp-image-270" src="http://nagenagaaridotcom.wordpress.com/files/2008/07/14656929_pic1_b.jpg?w=300" alt="" width="300" height="201" /></a></p>
<p>ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.</p>
<p>ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.</p>
<p>ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.</p>
<p>ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.</p>
<p><a href="http://nagenagaaridotcom.wordpress.com/files/2008/07/2008042952831802.jpg"><img class="alignnone size-medium wp-image-271" src="http://nagenagaaridotcom.wordpress.com/files/2008/07/2008042952831802.jpg?w=300" alt="" width="300" height="235" /></a></p>
<p>ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್‌ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.</p>
]]></content:encoded>
</item>
<item>
<title><![CDATA[ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ]]></title>
<link>http://nagenagaaridotcom.wordpress.com/?p=216</link>
<pubDate>Wed, 28 May 2008 05:51:40 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/05/28/%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d-%e0%b2%87%e0%b2%82%e0%b2%a1%e0%b2%bf%e0%b2%af%e0%b2%a8%e0%b3%8d-%e0%b2%aa%e0%b3%87%e0%b2%ae%e0%b3%86%e0%b2%82%e0%b2%9f%e0%b3%8d-%e0%b2%b2/</guid>
<description><![CDATA[(ನಗಾರಿ ಕ್ರೀಡಾ ಬ್ಯೂರೋ)
ಚುನಾವಣೆಯ ಬೀಟಿಗೆ ]]></description>
<content:encoded><![CDATA[<p style="text-align:center;"><span style="color:#800000;">(ನಗಾರಿ ಕ್ರೀಡಾ ಬ್ಯೂರೋ)</span></p>
<p>ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ...</p>
<p>ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು ಹುಟ್ಟಿರುವುದು ಮನುಷ್ಯರಾಗಿ ಎಂಬುದರ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಬದುಕುತ್ತಿರುವಾಗ ಒಬ್ಬೊಬ್ಬನಿಗೆ ಕೋಟಿ ಕೋಟಿ ಹಣವನ್ನು ಸುರಿಯುವುದು ಕಂಡು ನಮ್ಮ ವ್ಯವಸ್ಥೆ ಇದ್ದರೆ ಹೀಗಿರ <a href="http://nagenagaaridotcom.files.wordpress.com/2008/05/qwrasfnm37.jpg"><img class="alignleft size-thumbnail wp-image-217" src="http://nagenagaaridotcom.wordpress.com/files/2008/05/qwrasfnm37.jpg?w=117" alt="" width="117" height="96" /></a>ಬೇಕು, ಪ್ರತಿಭೆ ಇದ್ದವನ ಕಾಲ ಕೆಳಗೆ ಜಗತ್ತನ್ನೇ ಹೆಡೆ ಮುರಿ ಕಟ್ಟಿ ತಂದು ಮಲಗಿಸಬೇಕು. ಪ್ರತಿಭೆ ಇಲ್ಲದ ಬ್ರೂಟುಗಳನ್ನು ಬದುಕುವುದಕ್ಕೂ ಬಿಡಬಾರದು. ಹೆಂಡವನ್ನೋ, ಕಳ್ಳಮಾಲನ್ನೋ, ಪಾನೀಯದ ಹೆಸರಿನಲ್ಲಿ ಕಾರ್ಕೋಟಕವನ್ನೋ ಇವ್ಯಾವುದೂ ಇಲ್ಲವಾದರೆ ಕನಿಷ್ಠ ಪಕ್ಷ ಮಾನ - ಮರ್ಯಾದೆಯನ್ನಾದರೂ ಮಾರಿಕೊಂಡು  ಕಾಸು ಕೂಡಿಡಲಾಗದ ತಂದೆಗೆ ಮಕ್ಕಳನ್ನು ಪಡೆಯುವ ಹಕ್ಕು ಹೇಗೆ ಬರುತ್ತದೆ. ಓದಲು ಕಾಸಿಲ್ಲದೆ ಶಾಲೆಗೆ ಸೇರಲು ಆಗಲಿಲ್ಲ, ಸರ್ಕಾರಿ ಶಾಲೆಗೆ ಸೇರಿದರೂ ಶಿಕ್ಷಕರನ್ನೇ ಏನು, ಶಾಲೆಯ ಕಟ್ಟಡವನ್ನೇ ನೋಡಲಿಲ್ಲ, ಇವೆಲ್ಲಾ ಇದ್ದರೂ ಒಳ್ಳೆಯ ಕೋಚಿಂಗ್ ಪಡೆದು ಮಾರ್ಕು ಗಿಟ್ಟಿಸಿ ತೋರಿಸಲು ಸಾಧ್ಯವಾಗಲಿಲ್ಲ ಎಂಬ ಮಾತ್ರಕ್ಕೆ ಬಡವರ, ದರಿದ್ರರ ಮಕ್ಕಳು ಪ್ರತಿಭಾವಂತರಾಗುತ್ತಾರೆಯೇ? ಇಲ್ಲ. ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಬಿಡಬೇಕು ಎಂದರು ನಗೆಸಾಮ್ರಾಟ್. ‘ಬುದ್ಧಿ, ನಿಮ್ಗೆ ಬುದ್ಧಿ ಇಲ್ಲ. ನಮ್ಮ ಸರ್ಕಾರದವ್ರು ಇದ್ನೆಲ್ಲಾ ಯಾವಾಗೋ ಯೋಚ್ಸಿದಾರೆ ಗೊತ್ತುಂಟಾ? ಅವ್ರೂ ನಿಮ್ಮಂಗೇ ತೀರ್ಮಾನಕ್ಕೆ ಬಂದ್ರು. ಆದ್ರೆ ಅದಕ್ಕೆಲ್ಲಾ ಒಂದು ಗುಂಡನ್ನ ಯೇಸ್ಟ್ ಮಾಡುವಷ್ಟು ಮಡ್ಡಿ ಅಲ್ಲ ನಮ್ಮ ಸರ್ಕಾರ. ಅದ್ಯಾರೋ ಇಟ್ಲರ್ರು  ಯಹೂದಿಗಳ್ನೆಲ್ಲಾ ಗುಂಡಿಯಾಗೆ ಆಕಿ ಗ್ಯಾಸು ಬಿಟ್ಟು ಸಾಯ್ಸಿ ಲಕ್ಷಾಂತರ ರೂಪಾಯಿ ಲುಕ್ಸಾನು ಮಾಡಿಕೊಳ್ಳಾಕೆ ನಮ್ಮ ಸರ್ಕಾರ ಏನು ಮಣ್ಣು ತಿಂತತಾ? ಆ ದರಿದ್ರದವಕ್ಕೆ ಒಟ್ಟೆಗೆ ಹಿಟ್ಟೇ ಇಲ್ಲದ ಹಂಗೆ ಮಾಡಿದ್ರೆ, ಚಳಿಯಾಗೆ ನಡುಗೋವ್ರಿಗೆ ಕಂಬಳಿ ಸಿಗದಂಗೆ ಮಾಡಿದ್ರೆ ಅವ್ರಾಗೆ ಜಂತು ಸತ್ತಂತೆ ಸಾಯ್ತಾರಲುವ್ರಾ? ಅಷ್ಟಕ್ಕೂ ಯಾವ್ನಾದ್ರೂ ಗಟ್ಟಿ ಹೈದ ಬದುಕುಳುದ್ರೆ ಇದ್ದೇ ಐತಲ್ಲಾ, ಕಳ್ಳ ಭಟ್ಟಿ...’ ಎಂದ ಚೇಲ.</p>
<p>‘ಹನ್ನೊಂದು ಮಂದಿ ಮೂರ್ಖರು ಆಡುವ ಆಟವನ್ನು ಹನ್ನೊಂದು ಸಾವಿರ ಮಂಡಿ ಮೂರ್ಖರು ನೋಡುತ್ತಾ ಕೂರುವುದೇ ಕ್ರಿಕೆಟ್’ ಅಂತ ಅದ್ಯಾವುದೋ ಭೂಪ ಹೇಳಿದ್ದನ್ನೇ ಗಾಸ್ಪೆಲ್ ಟ್ರುಥ್ ಅಂತ ನಂಬ್ಕೋಬೇಕಾ (ಈಗ ಬಿಡಿ, ಗಾಸ್ಪೆಲ್ಲು ಹೇಳಿರುವುದರಲ್ಲೇ ಟ್ರುತ್ಥು ಇಲ್ಲ ಅಂತ ಸಂಶೋಧನೆ ಮಾಡ್ತಿದ್ದಾರೆ!)?  ಅಂತ ತಲೆ <a href="http://nagenagaaridotcom.files.wordpress.com/2008/05/buyticketsbuttonwp5.jpg"><img class="alignright size-medium wp-image-218" src="http://nagenagaaridotcom.wordpress.com/files/2008/05/buyticketsbuttonwp5.jpg?w=300" alt="" width="300" height="171" /></a>ಕೆರೆದುಕೊಳ್ತಾ ಸಾಮ್ರಾಟರು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅಲ್ಲಿ ನೆರೆದಿದ್ದ ಯುವ, ಹದಿ-ವೃದ್ಧಾಪ್ಯದ, ಮಧ್ಯವಯಸ್ಕರನ್ನು ಸಂದರ್ಶಿಸಲು ಸಿದ್ಧರಾದರು.</p>
<p>ದೂರದ ದಿಗಂತದ ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟಿಕೊಂಡು ನಿಂತ ಸಾಮ್ರಾಟರನ್ನು ಕೂಗಿ ಕರೆದ ಚೇಲ ಕುಚೇಲ ಅತ್ತ ಕಡೆ ನೋಡಿ ಎಂದ. ಅಲ್ಲಿ ಕ್ರೀಡಾಂಗಣದ ಗೇಟಿನ ಹೊರಗೆ ನೂರಾರು ಮಂದಿ ಕೈಲಿ ಕ್ರಿಕೆಟ್ ಬ್ಯಾಟು ಬದಲಿಗೆ ಹಾಕಿ ಕೋಲು, ತಿರುಪತಿ ತಿಮ್ಮಪ್ಪನ ಹಳೆಯ ಮೇಲಿರುವ ಸಿಂಬಲ್ಲಿನ ಆಕಾರದ ಝಳಪಿಸುವ ಆಯುಧಗಳನ್ನು ಹಿಡಿದುಕೊಂಡು ಗಲಾಟೆ ಹಾಕುತ್ತಿದ್ದರು. ಕೂಡಲೆ ಸಾಮ್ರಾಟರು ಚೇಲನೊಂದಿಗೆ ಅಲ್ಲಿಗೆ ಧಾವಿಸಿದರು. ಆ ಗುಂಪಿನ ಮುಂಚೂಣಿಯಲ್ಲಿ ಮಿಂಚುತ್ತಿದ್ದ ಹುರಿಯಾಳನ್ನು ಪಕ್ಕಕ್ಕೆ ಕರೆದು, ‘ಏನಯ್ಯಾ ಸಮಾಚಾರ’ ಎಂದರು. ಆ ಹುಡುಗ ವೀರಾ‘ವೇಷ’ದಿಂದ ‘ಅಲ್ರೀ, ನಮ್ಮ ದೇಶ ಎಂಥದ್ದು? ನಮ್ಮ ಸನಾತನ ಸಂಸ್ಕೃತಿ ಎಂಥದ್ದು? ನಾವು ಇಡೀ ಜಗತ್ತಿನ ಆಧ್ಯಾತ್ಮಿಕತೆಯನ್ನು ಕಲಿಸಿಕೊಟ್ಟವರು. ಇಡೀ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳಿಕೊಟ್ಟವರು ಭಾರತೀಯರು... ನಾವು... ನಾವು...’ ಎನ್ನುವಷ್ಟರಲ್ಲಿ ಗಂಟಲು ರೇಗಿತು. ‘ಒಂದು ಸಿಗರೇಟಿದೆಯಾ ಸರ್ರು...’ ಅಂದು, ಸಾಮ್ರಾಟರಿಂದ ಪಡೆದು ಅದರ ತುದಿಗೆ ಬೆಂಕಿಕೊಟ್ಟು ಮಾತು ಮುಂದುವರೆಸಿದ, ‘ಹೆಣ್ಣಿಗೆ ದೇವಿಯ ಸ್ಥಾನವನ್ನು ಕೊಟ್ಟವರು ನಮ್ಮ ಪೂರ್ವಜರು. ಅದಕ್ಕಾಗಿಯೇ ನಾವು ಇಂದು ಆಕೆಯನ್ನು ಅಡುಗೆಮನೆ, ದೇವರ ಮನೆಗೆ ಸೀಮಿತಗೊಳಿಸಿ ಹಿರಿಯರ ಆದರ್ಶ ಪಾಲಿಸುತ್ತಿರುವುದು. ಹೆಣ್ಣಿಗೆ ಮಾತೆಯಂತ ಕರೆದವರು ನಮ್ಮ ಹಿಂದಿನವರು. ಅದಕ್ಕಾಗಿಯೇ ಆಕೆಗೆ ‘ಮಾತೆ’ಯಾಗುವ ಕೆಲಸ ಬಿಟ್ಟು ಬೇರಾವುದಕ್ಕೂ ಅವಕಾಶ ಸಿಗದ ಹಾಗೆ ನೋಡಿಕೊಂಡಿದ್ದೇವೆ. ನಾವು ಹೆಣ್ಣಿಗೆ ಇಂಥಾ ಮರ್ಯಾದೆಯನ್ನು ಮಾಡುತ್ತಿರುವಾಗ ಇವರು ಕ್ರಿಕೆಟ್ ಆಡುವ ಇಪ್ಪತ್ತೆರಡು ಮಂದಿ ಗಂಡಸರು ಹಾಗೂ ಅದನ್ನು ನೋಡುವುದಕ್ಕೆ ಬರುವ ಗಂಡಸರ ಮುಂದೆ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದಕ್ಕಾಗಿ ‘ಚೀರ್ ಲೀಡರ್ಸ್’ನ್ನ ಕರೆಸಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ. ಅದಕ್ಕೇ ನಮ್ಮ ‘ಶಾಂತಿಯುತ’ ಪ್ರತಿಭಟನೆ’ ಎನ್ನುತ್ತಾ ಪಕ್ಕದಲ್ಲಿ ಬಿಟ್ಟಿದ್ದ ದೊಣ್ಣೆಯನ್ನೆತ್ತಿಕೊಂಡು ಹೊರಟ.</p>
<p>ಈ ಗುಂಪಿನ ಪಕ್ಕದಲ್ಲೇ ಮತ್ತೊಂದು ಗುಂಪು ನೆರೆಯಲು ಶುರುವಾಗಿತ್ತು. ಅವರದೂ ಅದೇ ಫ್ಯಾನ್ಸಿ ಡ್ರೆಸ್ಸು. ಇವರ  ಗೋಳೇನು ಕೇಳಿಕೊಂಬೋಗು ಎಂದು ಸಾಮ್ರಾಟರು ಕುಚೇಲನನ್ನು ಅಟ್ಟಿದರು. ‘ಅಯ್ಯೋ ಸಾರ್. ಇಲ್ಲಿ ಇವ್ರು ಸಂಸ್ಕಾರ, ಸಂಸ್ಕೃತಿ ಅಂತ ಗಲಾಟೆ ಮಾಡಾಕೆ ಜನರನ್ನ ಬಾಡಿಗೆ ತಂದದ್ದು ಗೊತ್ತಾಗಿ ಅದ್ಯಾರೋ ರೀಜನಲ್ ಓರಾಟಗಾರರು ಓಡಿ ಬಂದ್ರಂತೆ. ಈ ಸ್ಟೇಡಿಯಮ್ಮಿನವ್ರು ಇದೇಸದಿಂದ ಹುಡುಗೀರ್ನ ಕುಣಿಯೋಕೆ ಕರೆಸಿರೋದ್ನ ಕಂಡು ಅವರ ಮುಖಂಡ... ಪ್ರಾದೇಶಿಕ ಪ್ರತಿಭೆಗಳಿಗೆ ಅವಮಾನವಾಗಿದೆ. ನಿಮಗೆ ನಮ್ಮ ಸ್ಟೇಡಿಯಮ್ಮು ಬೇಕು, ನಮ್ಮ ಜನರು ಟಿಕೆಟು ಖರೀದಿಸ್ಬೇಕು, ನಮ್ಮ ಜನರ ದುಡ್ಡು ಬೇಕು ಆದರೆ ನಮ್ಮವರು ಬೇಡ. ಎಲ್ಲದರಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಬೇಕು. ಅಂತ ಓರಾಟ ಶುರು ಅಚ್ಚಿಕೊಂಡವ್ರಂತೆ’ ವರದಿ ಒಪ್ಪಿಸಿದ ಕುಚೇಲ.</p>
<p>ನಮ್ಮ ಯುವಕರಿಗೆ ಪ್ರತಿಭಟನೆಗೆ ಎಂತೆಂಥಾ ವಿಷಯಗಳು ಸಿಕ್ಕುತ್ತವೆ. ಪೂರ್ ಫೆಲೋ ಗಾಂಧಿ ಕೇವಲ ಚಿಟಿಗೆ ಉಪ್ಪಿಗಾಗಿ ಸತ್ಯಾಗ್ರಹ ಮಾಡಿದ. ಇವರ ಬಳಿ<a href="http://nagenagaaridotcom.files.wordpress.com/2008/05/ccprof19.jpg"><img class="aligncenter size-full wp-image-219" src="http://nagenagaaridotcom.wordpress.com/files/2008/05/ccprof19.jpg" alt="" width="380" height="250" /></a> ಇದ್ದಿದ್ದರೆ ಇನ್ನೂ ಎಷ್ಟೆಷ್ಟೋ ಮಹತ್ವದ ವಿಷಯಗಳು ಸಿಕ್ಕುತ್ತಿದ್ದವು ಪ್ರತಿಭಟನೆಗೆ ಎಂದು ಕೊಂಡು ಸಾಮ್ರಾಟರು ಕುಚೇಲನ ಸಮೇತ ಕ್ರೀಡಾಂಗಣದ ಒಳಕ್ಕೆ ಬಂದರು. ಎದುರಿಗೇ ನಾಲ್ಕೈದು ಮಂದಿ ಯುವಕರು, ಸ್ಫುರದ್ರೂಪಿಗಳು ಮುಖ ಗಂಟಿಕ್ಕಿಕೊಂಡು ಕುಳಿತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಗೆಸಾಮ್ರಾಟರು ಇಲ್ಲೊಂದು ಸ್ಟೋರಿ ಸಿಕ್ಕೀತು ಅಂತ ಅಂದುಕೊಂಡು ಅವರ ಬಳಿಗೆ ದೌಡಾಯಿಸಿದರು. ಸಾಮ್ರಾಟರು ಪತ್ರಿಕೆಯವರು ಎಂಬುದನ್ನು ಅರಿತ ಕೂಡಲೇ ಆ ಗುಂಪಿನವರೋ ಗೊಳೋ ಎಂದು ಅಳುತ್ತಾ ಫೋಟೊ ಫೋಸಿಗೆ ಸಿದ್ಧರಾದರು. ಸಾಮ್ರಾಟರು ಏನು ನಿಮ್ಮ ಚರಿತ್ರೆ ಎಂದು ಕೇಳುವ ಮೊದಲೇ ಒಬ್ಬ ಯುವಕ ‘ಅಂಕಲ್, ನೀವೇ ನೋಡಿ... ನಮ್ಮ ದೇಶದಲ್ಲಿ ಎಷ್ಟೆಲ್ಲಾ ಅಸಮಾನತೆ, ಶೋಷಣೆ ನಡೆಯುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಆಶ್ವಾಸನೆ ಕೊಟ್ಟಿದ್ದರೂ ಎಲ್ಲೆಲ್ಲೂ ಬರೀ ಅಸಮಾನತೆ, ಶೋಷಣೆ ನಡೆಯುತ್ತಿದೆ. ಎಲ್ಲಾ ಕಡೆ ಬರೀ ಪಾರ್ಶಿಯಾಲಿಟಿ.’ ಎಂದು ಮಾತಿಗೆ ತೊಡಗಿದ. ಸಾಮ್ರಾಟರಿಗೆ ಈ ಹುಡಗನ ಪ್ರಾಮಾಣಿಕ ಕಳಕಳಿಯನ್ನು ಕಂಡು ಮಮತೆ ಉಕ್ಕಿತು. ‘ಅಲ್ಲಾ ಅಂಕಲ್, ಕ್ರಿಕೆಟ್ ಆಡುವುದು ಹುಡುಗರು, ನೋಡುವ ಬಹುಪಾಲು ಮಂದಿ ಹುಡುಗರು ಹೀಗಿರುವಾಗ ಅಲ್ಲಿ ಮೈದಾನದಲ್ಲಿ ಕುಣಿಯುವುದಕ್ಕೆ ಮಾತ್ರ ಹುಡುಗಿಯರು ಬೇಕಾ? ಚೀರ್ ಗರ್ಲ್ಸ್ ಮಾತ್ರ ಬೇಕಾ? ಚೀರ್ ಬಾಯ್ಸ್ ಯಾಕೆ ಇರಬಾರದು. ಇದು ಹುಡುಗರಿಗೆ ತೋರುತ್ತಿರುವ ಅಸಡ್ಡೆ. ಇದು ಹುಡುಗರ ಮೇಲೆ ನಡೆಯುತ್ತಿರುವ ಶೋಷಣೆ. ಮಹಿಳಾ ಪ್ರಧಾನವಾದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಂಡಸರ ಶೋಷಣೆ’ ಎಂದು ಏರಿದ ದನಿಯಲ್ಲಿ ಭಾಷಣ ಚಚ್ಚುತ್ತಿರುವಂತೆಯೇ ನಗೆ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಬೇತಾಳದಂತೆ ಅಲೆದಾಡುತ್ತಿದ್ದ ‘ಭಾರತದ ಗಡಿಯಾರಗಳು’ ಎಂಬ ಅಚ್ಚ ಇಂಗ್ಲೀಷ್ ಪತ್ರಿಕೆಯ ವರದಿಗಾರ ನಮ್ಮ ಪತ್ರಿಕೆಯ ಮುಖಪುಟಕ್ಕೆ ಒಳ್ಳೆ ಕವರೇಜ್ ಸಿಕ್ಕಿತು ಅಂತ ಅಲ್ಲಿಗೆ ದೌಡಾಯಿಸಿದ. ಸಾಮ್ರಾಟರು ತಣ್ಣಗೆ ಅಲ್ಲಿಂದ ಜಾರಿಕೊಂಡರು.</p>
<p>ಸ್ಟೇಡಿಯಮ್ಮಿನಿಂದ ಹೊರಬಂದು ದಣಿವಾರಿಸಿಕೊಳ್ಳಲು ಸನಿಹದ ಅಂಗಡಿಯಲ್ಲಿ ನೀರು ಕೇಳಿದರೆ ಆತ ‘ನೀರಾದರೆ ಒಂದು ಬಾಟಲಿಗೆ ನೂರು ರೂಪಾಯಿ, ಬೀರಾದರೆ ಐವತ್ತು’  ಅಂದದ್ದು ಕೇಳಿ ದಿಗಿಲಾಗಿ ಓಡಲು ಶುರುಮಾಡಿದವರು ನಗಾರಿಯ ಕಛೇರಿ ತಲುಪಿದಾಗಲೇ ನಿಂತದ್ದು.</p>
]]></content:encoded>
</item>
<item>
<title><![CDATA[ಸೀರಿಯಲ್ ರಕ್ಕಸನ ಸಾವು?!]]></title>
<link>http://nagenagaaridotcom.wordpress.com/2008/04/26/%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%b0%e0%b2%95%e0%b3%8d%e0%b2%95%e0%b2%b8%e0%b2%a8-%e0%b2%b8%e0%b2%be%e0%b2%b5%e0%b3%81/</link>
<pubDate>Sat, 26 Apr 2008 03:38:31 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/04/26/%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d-%e0%b2%b0%e0%b2%95%e0%b3%8d%e0%b2%95%e0%b2%b8%e0%b2%a8-%e0%b2%b8%e0%b2%be%e0%b2%b5%e0%b3%81/</guid>
<description><![CDATA[(ನಗಾರಿ ಮನೋರಂಜನಾ ಬ್ಯೂರೋ)
ಆ ರಕ್ಕಸ ಭೀಕರವಾ]]></description>
<content:encoded><![CDATA[<p style="text-align:center;"><strong>(<span style="color:#008000;">ನಗಾರಿ</span> ಮನೋರಂಜನಾ ಬ್ಯೂರೋ)</strong></p>
<p>ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.</p>
<p>ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, "ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು" ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ. <img src="http://nagenagaaridotcom.files.wordpress.com/2008/04/ipl-collage.jpg"></p>
<p>ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ <a href="http://www.ndtv.com/convergence/ndtvcricket/ipl/news_story.aspx?ID=SPOEN20080047902&#38;keyword=news" target="_blank">ಪ್ರಚಂಡ ಹುಟ್ಟಿಬಿಟ್ಟಿದ್ದಾನೆ</a>. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!</p>
]]></content:encoded>
</item>
<item>
<title><![CDATA[ಸ್ಕೂಪ್: ಆಸ್ಟ್ರೇಲಿಯಾದಿಂದ ದೀಪಿಕಾ ಬುಕ್ಕಿಂಗ್!]]></title>
<link>http://nagenagaaridotcom.wordpress.com/2008/03/13/%e0%b2%b8%e0%b3%8d%e0%b2%95%e0%b3%82%e0%b2%aa%e0%b3%8d-%e0%b2%86%e0%b2%b8%e0%b3%8d%e0%b2%9f%e0%b3%8d%e0%b2%b0%e0%b3%87%e0%b2%b2%e0%b2%bf%e0%b2%af%e0%b2%be%e0%b2%a6%e0%b2%bf%e0%b2%82%e0%b2%a6/</link>
<pubDate>Thu, 13 Mar 2008 04:50:45 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/03/13/%e0%b2%b8%e0%b3%8d%e0%b2%95%e0%b3%82%e0%b2%aa%e0%b3%8d-%e0%b2%86%e0%b2%b8%e0%b3%8d%e0%b2%9f%e0%b3%8d%e0%b2%b0%e0%b3%87%e0%b2%b2%e0%b2%bf%e0%b2%af%e0%b2%be%e0%b2%a6%e0%b2%bf%e0%b2%82%e0%b2%a6/</guid>
<description><![CDATA[(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)
ಈ ಸ್ಫೋಟಕ]]></description>
<content:encoded><![CDATA[<p style="text-align:center;"><strong><span style="color:#800040;">(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)</span></strong></p>
<p style="text-align:left;">ಈ ಸ್ಫೋಟಕವಾದ ಹಾಗೂ ನೆಲಬಿರಿಯುವಂತಹ ಸುದ್ದಿಯನ್ನು '<span style="color:#ff0080;">ನಗೆ ನಗಾರಿ'</span> ಅತಳ, ಸುತಳ, ಪಾತಾಳಗಳನ್ನು ಜಾಲಾಡಿ ಹೆಕ್ಕಿ ಕೊಂಡು ಬಂದು ನಿಮ್ಮ ಮುಂದೆ ಕುಕ್ಕುತ್ತಿದೆ. ಈ ತನಿಖಾ ವರದಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ವಿವಾದಗಳು ಏಳಬಹುದೆಂಬ ಮುನ್ಸೂಚನೆಯನ್ನು ನಮ್ಮ ಹವಾಮಾನ ಇಲಾಖೆ ಕೊಟ್ಟಿರುವುದರಿಂದ ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ.</p>
<p>ಕ್ರಿಕೆಟ್ ಎಂಬ 'ಮೆಂಟಲ್ ಮನ್'ಗಳ ಆಟವನ್ನು ಹುಟ್ಟಿಸಿದ ಇಂಗ್ಲೆಂಡಿನ ತಂಡ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ನೂರೆಂಟು ವಿಧಾನಗಳು ಎಂಬ ಪುಸ್ತಕವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, ಸ್ಟುವರ್ಟ್ ಅಗಲ (Stuart Broad)ನ ಆರು ಎಸೆತಗಳ ಒಂದು ಓವರಿನಲ್ಲಿ <a href="http://news.bbc.co.uk/sport2/hi/cricket/7003537.stm">ಆರು ಸಿಕ್ಸರ್</a> ಚಚ್ಚುವ ಮೂಲಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಯುವರಾಜ್ ಸಿಂಗ್ ಜಗತ್ತು ಬೆಚ್ಚುವಂತೆ ಬೊಬ್ಬಿರಿದು ಅಬ್ಬರಿಸಿ ಕೊಬ್ಬಿಳಿಸಿದ್ದರು. ಅವರನ್ನು ಕೆಣಕಿದ ಆಂಡ್ರೂ ಪ್ಲಿಂಟಾಫ್ ಅಡಗಿಕೊಳ್ಳಲು ಸೌತ್ ಆಫ್ರಿಕಾದ ಸ್ಟೇಡಿಯಮ್ಮಿನಲ್ಲಿ ಬಿಲವನ್ನು ಹುಡುಕುತ್ತಿದ್ದರು. ತಮ್ಮ ಕೆಚ್ಚೆದೆಯ ಚಚ್ಚುವ ಆಟವನ್ನು ಪ್ರದರ್ಶಿಸಿ ಯುವಿ ಆಸ್ಟ್ರೇಲಿಯಾಕ್ಕೆ ಟಿಕ್- ಟ್ವೆಂಟಿ -ಟ್ವೆಂಟಿ ಆಟದಲ್ಲಿ ಬೆವರಿಳಿಸಿದ್ದರು.</p>
<p>ಯುವಿಯ ಸ್ಫೋಟಕ, ಭಯಾನಕ, ಭೀಭತ್ಸಕಾರಿ ಬ್ಯಾಟಿಗೆ ಯಾವ <img src="http://nagenagaaridotcom.files.wordpress.com/2008/03/44126567-yuvraj-new270.jpg">ಎಣ್ಣೆಯನ್ನು ಸವರಿದರೂ ಅದು ಆತನ ಕೈಯಿಂದ ಜಾರಿ ಆತ ಬೋಲ್ಡ್ ಆಗುತ್ತಿರಲಿಲ್ಲ. ಈ ಭಯಾನಕ ಸತ್ಯದಿಂದ ಕಂಗೆಟ್ಟು ಹಗಲಿಡೀ ನಿದ್ರೆ ಮಾಡಲಾರದೆ, ರಾತ್ರಿಯಿಡೀ <img src="http://nagenagaaridotcom.files.wordpress.com/2008/03/ricky-ponting-2-332x440.jpg" style="border-right:#000000 1px outset;border-top:#000000 1px outset;border-left:#000000 1px outset;width:192px;border-bottom:#000000 1px outset;height:270px;" height="275"> <img src="http://nagenagaaridotcom.files.wordpress.com/2008/03/04sld1.jpg" style="border-right:#000000 1px outset;border-top:#000000 1px outset;border-left:#000000 1px outset;width:201px;border-bottom:#000000 1px outset;height:271px;" height="274"></p>
<p>ಎಚ್ಚರವಿರಲಾರದೆ ಕಂಗಾಲಾದ ಆಸ್ಟ್ರೇ-ಲಿಯಾದ ಆಟಗಾರರು ವಿಪರೀತವಾದ ಆತಂಕದಲ್ಲಿದ್ದರು. ಇದು ಸಾಲದು ಎಂಬಂತೆ ನಮ್ಮ ಯವ್ವಿ-ಯವ್ವೀ ರಾಜ ಸಿಂಗರು ಭಾರತದ ಥೇಮ್ಸಾಫಿಂಡಿಯಾ ಪತ್ರಿಕೆಗೆ ಕೊಟ್ಟ ಸಂಶಯ-ದರ್ಶನದಲ್ಲಿ ''ಆಸ್ಟ್ರೇಲಿಯಾದ ಪಿಚ್ಚುಗಳು ನನಗೆ ಅಚ್ಚುಮೆಚ್ಚಿನವು, ಅಲ್ಲಿ ಬೌಲರ್‌ಗಳನ್ನು ಚಚ್ಚುವುದಕ್ಕೆ ನಾನು ಹಲ್ಲು ಕಚ್ಚಿ ಕಾಯುತ್ತಿದ್ದೇನೆ" ಅಂದಾಗ ಕಿರ್ ಕಿರಿ ಪೇಂಟಿಂಗ್ ಬೆಸ್ತು ಬಿದ್ದರು.</p>
<p>ಅಂದು ರಾತ್ರಿಯೇ ಕಿರ್ ಕಿರಿ ಪೇಂಟಿಂಗ್, ಹೇ-ದನಾ, ಸೈಮೊಂಡು, ಬೆಟ್ಟದ ಇಲಿ ಗುಪ್ತ ಸಭೆ ಸೇರಿ ಈ ಯವ್ವಿ ರಾಜನ ಕಿರೀಟ ಉರುಳಿಸೋದಕ್ಕೆ, ಆತನ ಬ್ಯಾಟಿನ ತಪಸ್ಸನ್ನು ಕೆಡಿಸೋದಕ್ಕೆ ಏನು ಮಾಡಬೇಕು ಅಂತ ಮಧ್ಯರಾತ್ರಿಯವರೆಗೂ ಮದ್ಯದ ಜೊತೆ ಸಮಾಲೋಚನೆ ನಡೆಸಿದರು. ಆದರೆ ಅವರ ತಲೆಯಿಂದ ಹತ್ತಾರು ಹೇನುಗಳು ಹೊರಬಂದವೇ ವಿನಃ ಯಾವ ಉಪಾಯವೂ ಬರಲಿಲ್ಲ. ಕೊನೆಗೆ ಕಿರ್ ಕಿರಿ ಪೇಂಟಿಂಗರು ಎಲ್ಲೋ ಕದ್ದು ಓದಿದ್ದ ಸುದ್ದಿಯನ್ನಾಧರಿಸಿ ನೇರವಾಗಿ ಪದ್ಮನಾಭನಗರದ ಮಹಾಮಾಂತ್ರಿಕನ ಬಂಗಲೆಗೆ ಎಸ್.ಟಿ.ಡಿ ಮಾಡಿ ದೀರ್ಘ ಸಮಾಲೋಚನೆ ನಡೆಸಿದ್ದಾಗಿ ತಿಳಿದು ಬಂದಿದೆ.</p>
<p>ಮರುದಿನವೇ ಕಿರ್ ಕಿರಿ ಪೇಂಟಿಂಗ್ ದೀಪಕ್ಕಂಗೂ ಯವ್ವೀ ರಾಜಂಗೂ ಅಫೇರು ಅಂತ ಪೇಪರ್‌ಗಳಿಗೆ ರದ್ದಿ ಹರಿಬಿಟ್ಟಿದ್ದಾನೆ. ರದ್ದಿಯನ್ನು ಸುದ್ದಿಯನ್ನಾಗಿ ಓದಿ ದೀಪಕ್ಕ ಬಿಟ್ಟಿ ಪ್ರಚಾರ ಗಟ್ಟಿ ಪ್ರಚಾರ ಅಂದುಕೊಂಡು ಆಸ್ಟ್ರೇಲಿಯಾಕ್ಕೆ ಕಾಲ್ಕಿತ್ತಿದ್ದಾಳೆ. ಅವಳು ಬಂದದ್ದು ತನ್ನ ಆಟ ನೋಡೋದಕ್ಕೋ, ನನ್ನನ್ನು ನೋಡೋದಕ್ಕೋ ಅಂತ ಭಾರಿ ಕನ್ ಫೂಸ್ ಆದ ಯವ್ವಿರಾಜ ಕಿರಿಕಿರಿ ಮಾಡುವ ಬೌಲರ್‌ಗಳಿಗೆ ಬೇಗ ಔಟ್ ಆಗುವ ಮೂಲಕ ಸರಿಯಾದ ಪಾಠ ಕಲಿಸುತ್ತಾ ಕನಸಿನ ಲೋಕದಲ್ಲಿ ಮುಳುಗಿದ್ದ.</p>
<p>ಇನ್ನೇನು ಶಾಂತಿ ನಂಗೆ ಸಿಕ್ಕರೆ ದೀಪಕ್ಕನ ಜೊತೆ ಪಕ್ಕದ 'ಕೋಣೆ' ಸೇರಬಹುದು ಅಂತ ಮನಸ್ಸಲ್ಲಿ ಮಂಡಿಗೆ ಮುರಿಯುತ್ತಿದ್ದ ಯವ್ವಿರಾಜನ ಹೃದಯ ಒಡೆದು ಚೂರಾಗುವಂತೆ ಪಕ್ಕದ ಕೋಣೆ ದೀಪಕ್ಕ 'ಸಾವು ಹರಿಯಾ' ನಾಯಕ ರಣ 'ಬೀರ'ನಿಗೆ ಪ್ರಪೋಸ್ ಮಾಡಿಬಿಟ್ಟಳು. ಈ ಸುದ್ದಿ ಕೇಳಿ ಯುವ್ವಿ ಎದೆ ಬಕ್ಕ ಬಾರಲು ಬಿದ್ದದ್ದನ್ನು ಕಂಡ ಅತ್ತ ರಣಬೀರನ ಮುಖದಲ್ಲಿ ಪ್ಯಾದೆ ನಗೆಯಿದ್ದರೆ, ಇತ್ತ ಪೇಂಟಿಂಗ್‌ನ ಮುಖದ ಮೇಲೆ ವಿಕಟ ಹಾಸವಿತ್ತು ಎಂಬುದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ.</p>
]]></content:encoded>
</item>

</channel>
</rss>
