<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಕಾಲೇಜು &amp;laquo; WordPress.com Tag Feed</title>
	<link>http://wordpress.com/tag/ಕಾಲೇಜು/</link>
	<description>Feed of posts on WordPress.com tagged "ಕಾಲೇಜು"</description>
	<pubDate>Wed, 08 Oct 2008 06:31:02 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಎದೆಯ ದನಿ ೧ (ಧಾರಾವಾಹಿ)]]></title>
<link>http://kalaravapatrike.wordpress.com/2008/08/02/%e0%b2%8e%e0%b2%a6%e0%b3%86%e0%b2%af-%e0%b2%a6%e0%b2%a8%e0%b2%bf-%e0%b3%a7-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf/</link>
<pubDate>Sat, 02 Aug 2008 13:33:28 +0000</pubDate>
<dc:creator>uniquesupri</dc:creator>
<guid>http://kalaravapatrike.kn.wordpress.com/2008/08/02/%e0%b2%8e%e0%b2%a6%e0%b3%86%e0%b2%af-%e0%b2%a6%e0%b2%a8%e0%b2%bf-%e0%b3%a7-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf/</guid>
<description><![CDATA[ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ]]></description>
<content:encoded><![CDATA[<p>ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ ಕೂಡ ಒಂದು ಎಂಬ ನಿರ್ಲಿಪ್ತತೆಯಲ್ಲಿ ಸೂರ್ಯ ಪಶ್ಚಿಮದ ಬಾನಿನಲ್ಲಿ ಮುಳುಗು ಹಾಕುತ್ತಿದ್ದ. ಪಕ್ಷಿಗಳು ಕಚಪಿಚವೆನ್ನುತ್ತಾ ದಿನವನ್ನು ಕಳೆದ ಸಂಭ್ರಮವನ್ನು ಆಚರಿಸುತ್ತಿದ್ದವು. ಮೆಲ್ಲಗೆ ಕತ್ತಲು ಕಿಟಕಿಗಳ ಮೂಲಕ ಬಸ್ಸಿನ ಒಳಕ್ಕೂ ತೂರಲು ಶುರುವಾದದ್ದನ್ನು ಸುಹಾಸ್ ಗಮನಿಸಿದ.</p>
<p>          <img src="http://kalaravapatrike.files.wordpress.com/2008/08/spirituality4.jpg" style="display:block;margin-left:auto;margin-right:auto;text-align:center;" height="334" alt="spirituality4.jpg">        </p>
<p>ಮಾತು ಮುಗಿಸಿದ ಡ್ರೈವರ್ ಬಸ್ಸಿನೊಳಕ್ಕೆ ಹಾರಿ ಬಸ್ಸಿನ ಲೈಟುಗಳನ್ನು ಹತ್ತಿಸಿದ. ಬಸ್ಸಿನೊಳಕ್ಕಿದವರಲ್ಲಿ ಅನೇಕರು ಕಣ್ಣು ಮುಚ್ಚಿ ಎದೆ ಮುಟ್ಟಿಕೊಂಡು ದೇವರನ್ನು ಸ್ಮರಿಸಿದ್ದು ಸುಹಾಸನಿಗೆ ಮಜವಾಗಿ ಕಂಡಿತು. ಡ್ರೈವರ್ ತನ್ನೆದುರಿದ್ದ ದೇವರ ಫೋಟೊಗೆ ಊದುಬತ್ತಿ ಬೆಳಗಿ ಅದನ್ನು ಸ್ಟೇರಿಂಗಿನ ಪಕ್ಕದಲ್ಲಿ ಅಂಟಿಸಿಕೊಂಡಿದ್ದ ಸ್ಟ್ಯಾಂಡಿನೊಳಕ್ಕೆ ಇಟ್ಟ. ಅಲ್ಲೇ ಪಕ್ಕದಲ್ಲಿ ಅಜ್ಜಿಯೊಬ್ಬಳಿಂದ ಕೊಂಡ ಮಲ್ಲಿಗೆ ಹೂವಿನ ಮಾಲೆ ದೇವರ ಫೋಟೊವನ್ನು ಅಪ್ಪಿಕೊಂಡಿತ್ತು. ಕ್ಲೀನರ್ ತನ್ನ ಕೆಲಸ ಮುಗಿಸಿ ಹಸಿಯಾದ ಬನಿಯನ್ ಬಿಚ್ಚಿ ಹಳೆಯ ದೊಗಲೆ ಶರ್ಟಿನೊಳಕ್ಕೆ ನುಸುಳಿದ. ಮೇಲೇರಿಸಿದ್ದ ಪ್ಯಾಂಟಿನ ಮಡಿಕೆಗಳನ್ನು ಬಿಡಿಸಿಕೊಂಡ. ಲಗೇಜ್ ವಿಚಾರದಲ್ಲಿ ಯಾರೊಂದಿಗೋ ಜಗಳ ತೆಗೆದಿದ್ದ ಕಂಡಕ್ಟರ್, 'ಹೌದ್ರೀ, ಲಗೇಜಿಗೂ ಟಿಕೆಟ್ ತಗೋ ಬೇಕು. ನೀವು ಟಿಕೆಟ್ ತಗೊಂಡ್ರೆ ಲಗೇಜನ್ನು ಫ್ರೀ ಸಾಗಿಸ್ತೀವಿ ಅಂತೇನು ನಾವು ಹೇಳಿಲ್ಲ' ಎನ್ನುತ್ತಾ ಸರಸವಾಡುತ್ತಿದ್ದ. ಆದರೆ ಅವನೊಂದಿಗೆ ವಾದಿಸುತ್ತಿದ್ದ ಪ್ರಯಾಣಿಕನಿಗೆ ಅವನ ಯಾವ ಸರಸದ ಮಾತಿನ ಮೇಲೂ ಗಮನವಿರಲಿಲ್ಲ. ಆತ ಧ್ವನಿಯೇರಿಸಿ ಏನನ್ನೋ ಬಡಬಡಿಸುತ್ತಿದ್ದ. ಡ್ರೈವರ್ ಹಾಗೂ ಕ್ಲೀನರ್ ಸಹ ಈ ಜಗಳ ನಡೆಯುತ್ತಿದ್ದ ಜಾಗಕ್ಕೆ ದೌಡಾಯಿಸಿದರು.</p>
<p>ಇದೇ ಸಮಯ ಕಾಯುತ್ತಿದ್ದಂತೆ ಕಾಣುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಕಂಕುಳಲ್ಲಿ ಮಲಗಿದ ಮಗುವನ್ನು ಎತ್ತಿಕೊಂಡು ಬಂದು ಕಾಸಿಗೆ ಕೈ ಚಾಚುತ್ತಿದ್ದಳು. ಯಾರೂ ಆಕೆಯ ಮುಖವನ್ನೂ ಸಹ ನೋಡುವ ಪ್ರಯತ್ನ ಮಾಡದೆ ಆಕೆಯನ್ನು ಮುಂದಕ್ಕೆ ಹೋಗುವಂತೆ ಹೇಳುತ್ತಿದ್ದರು. ಚಿಕ್ಕ ಮಕ್ಕಳು, ಹೆಂಗಸರು, ಫ್ಯಾಮಿಲಿ ಇರುವ ಕಡೆ ಆ ಪುಟ್ಟ ಭಿಕ್ಷುಕಿ ಎರಡು ಮೂರು ಸಲ 'ಮುಂದಕ್ಕೆ ಹೋಗು' ಎಂದು ಹೇಳಿದರೂ ಕದಲದೆ ನಿಲ್ಲುತ್ತಿದ್ದುದನ್ನು ಕಂಡ ಸುಹಾಸನಿಗೆ ಈಕೆ ಪಕ್ಕಾ ಫ್ರೊಫೆಶನಲ್ ಭಿಕ್ಷುಕಿಯಿರಬೇಕು ಎನ್ನಿಸಿತು. ತನ್ನೆದುರು ಆಕೆ ಬಂದು ಕೈಯೊಡ್ಡಿದಾಗ 'ಇದರಲ್ಲಿ ನಿನಗೆ ಎಷ್ಟು ವರ್ಷ ಎಕ್ಸ್ ಪೀರಿಯನ್ಸ್ ಇದೆ' ಎಂದು ಕೇಳಿಬಿಡಬೇಕೆನಿಸಿತು. ಸುಮ್ಮನೆ ಆತ ಆಕೆಯನ್ನು ದಿಟ್ಟಿಸಿದ. ಅವನ ನಗುವನ್ನು ಕಂಡು ಗಾಬರಿಯಾದ ಹುಡುಗಿ ಸುಮ್ಮನೆ ಮುಂದಕ್ಕೆ ಸರಿದಳು. ಆಕೆ ಏತಕ್ಕೆ ಗಾಬರಿಯಾಗಿರಬಹುದು ಎಂದು ಆಲೋಚಿಸಿದ. ತಲೆಯಲ್ಲಿ ಏನೇನೋ ಹರಿದಾಡಿದಂತಾಗಿ ಅರೆಕ್ಷಣ ಸುಹಾಸ ಮೈಮರೆತಿದ್ದ. ಅಷ್ಟರಲ್ಲಿ ಆತನ ಪಕ್ಕದಲ್ಲಿಂದ ಒಂದು ಧ್ವನಿ ಹೊರಟಿತು.</p>
<p>"ನಾನು ಹಾಗೆ ಅರ್ಧಕ್ಕೇ ಕಾಲೇಜು ಬಿಟ್ಟು ಹೋದದ್ದಕ್ಕೆ ಬರೀ ಹೋಂ ಸಿಕ್‌ನೆಸ್ ಕಾರಣ ಅಂತ ನಿಂಗೂ ಅನ್ನಿಸುತ್ತಾ?"</p>
<p>ಸುಹಾಸ ನಸುನಗುತ್ತಾ ಅಮರ್‌ನ ಮುಖ ನೋಡಿದ.</p>
<p>***</p>
<p>"ಇವ್ನು ಚಿಕ್ಕವನಾಗಿದ್ದಾಗ ಹಠ ಮಾಡಿದರೆ ರಾಜಗಿರಿಯ ಹಾಸ್ಟೆಲ್‌ಗೆ ಹಾಕ್ತೀವಿ ನೋಡು ಎಂದು ಇವರು ಗದರಿಸುತ್ತಿದ್ದರು. ಗಪ್ ಚುಪ್ ಆಗಿಬಿಡ್ತಿದ್ದ. ಮನೆ ಬಿಟ್ಟು ಹಾಸ್ಟೆಲ್ಲಿಗೆ ಹೋಗುವುದು ಅಂದರೇನೇ ಹೆದರಿ ನಡುಗುತ್ತಿದ್ದ ಈಗ ನೋಡು ಹೆಂಗೆ ಕುಣಿದುಕೊಂಡು ರೆಡಿಯಾಗ್ತಿದಾನೆ ರಾಜಗಿರಿ ಕಾಲೇಜಿಗೆ ಹೋಗೋದಕ್ಕೆ.." ಸುಹಾಸನ ಅಮ್ಮ ತನ್ನ ಗೆಳತಿಗೆ ಹೇಳುತ್ತಿದ್ದರು. ಸುಹಾಸ ಮುಜುಗರ ತಾಳಲಾಗದೆ ಹಾಲಿನಿಂದ ಎದ್ದು ಹೊರಗಿನ ಕೋಣೆಗೆ ಬಂದ. ತನ್ನ ಕ್ರಿಕೆಟ್ ಬ್ಯಾಟು ಹಾಗೂ ಬಾಲನ್ನು ತೆಗೆದುಕೊಂಡು ಹೋಗಿ ತನ್ನ ರೂಮಿನ ಮೂಲೆಯಲ್ಲಿ ಭದ್ರವಾಗಿರಿಸುತ್ತಾ ಇನ್ನು ಎರಡು ವರ್ಷ ಇವು ಬೇಕಾಗಲ್ಲ ಎಂದುಕೊಂಡ. ಮುಂದೆ ಏನು ಮಾಡಬೇಕು ಅನ್ನೋದು ತೋಚದೆ ವಾಪಸ್ಸು ಹಾಲಿಗೆ ಬಂದು ಕುಳಿತ.</p>
<p>ರಾತ್ರಿ ಹನ್ನೊಂದಕ್ಕೆ ಬಸ್ಸು ಬುಕ್ ಮಾಡಿ ಆಗಿತ್ತು. ಚಿತ್ರದುರ್ಗದಿಂದ ರಾಜಗಿರಿಗೆ ಎಂಟು ತಾಸು ಪ್ರಯಾಣ ಇತ್ತು. ಪಶ್ಚಿಮ ಘಟ್ಟವನ್ನು ಬಳಸಿ ಮಂಗಳೂರು ತಲುಪಿದರೆ ಅಲ್ಲಿಂದ ಒಂದು ತಾಸು ಪ್ರಯಾಣ ಮಾಡಬೇಕಿತ್ತು ರಾಜಗಿರಿಗೆ. ಘಾಟಿಯನ್ನು ಏರಬೇಕು ಎಂಬ ವಿಚಾರವೇ ಸುಹಾಸನ ಹೊಟ್ಟೆಯಲ್ಲಿ ತಳಮಳವನ್ನೇಳಿಸಿತ್ತು. ಆತನಿಗೆ ಬಸ್ ಪ್ರಯಾಣವೆಂದರೇನೆ ಆಗದು. ಅದರಲ್ಲೂ ಗುಡ್ಡಗಾಡುಗಳ ಘಾಟಿಯಾದರಂತೂ ಮುಗಿಯಿತು, ಬಸ್ಸಿನೊಳಗಿಂದ ಘಾಟಿಯನ್ನು ನೋಡುತ್ತಿದ್ದ ಹಾಗೆ ಈತನಿಗೆ ಹೊಟ್ಟೆ ತೊಳಲಿಸಿದಂತಾಗಿ ವಾಂತಿ ಕಾರಿಕೊಂಡು ಬಿಡುತ್ತಿದ್ದ. ಎಷ್ಟೇ ನಿಂಬೆ ಹಣ್ಣು ಮೂಸಿದರೂ ವಾಂತಿ ನಿಲ್ಲುತ್ತಿರಲಿಲ್ಲ. ಪ್ರಯಾಣದುದ್ದಕ್ಕೂ ಹೊಟ್ಟೆಯೊಳಗಿದ್ದುದನೆಲ್ಲಾ ಕಾರಿಕೊಂಡು ಬಸ್ಸು ಇಳಿಯುವಷ್ಟರಲ್ಲಿ ಹತ್ತು ದಿನದಿಂದ ಉಪವಾಸವಿದ್ದವನ ಹಾಗೆ ಸುಸ್ತಾಗಿರುತ್ತಿದ್ದ. ರಸ್ತೆಯನ್ನು ನೋಡುತ್ತಾ ಕೂರು, ಎಚ್ಚರವಾಗಿರಬೇಡ ಮಲಗಿಕೊಂಡುಬಿಡು ಎಂದು ಅಪ್ಪ ಎಷ್ಟೇ ಉಪದೇಶಿಸಿದರೂ ಈತನಿಗೆ ಘಾಟಿಯಲ್ಲಿನ ಬಸ್ ಪ್ರಯಾಣದಲ್ಲಿ ನರಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ಬಸ್ಸಿನ ಟೈಮಿಂಗ್ ವಿಚಾರಿಸುವ ಮುನ್ನ ಅಲ್ಲಿಗೆ ರೈಲು ಇದೆಯಾ ಎಂದು ಕೇಳಿಕೊಳ್ಳುತ್ತಿದ್ದ. ರೈಲಿನಲ್ಲಿ ಸಾವಿರ ಕಿಲೋಮೀಟರ್ ಬೇಕಾದರೂ ಕ್ರಮಿಸಬಲ್ಲೆ ಎಂಬ ವಿಶ್ವಾಸ ಅವನಲ್ಲಿತ್ತು. ರೈಲಿನ ಪ್ರಯಾಣವನ್ನು ಆತ ವಿಪರೀತವಾಗಿ ಎಂಜಾಯ್ ಮಾಡುತ್ತಿದ್ದ. ಎಷ್ಟೋ ಒಳ್ಳೆಯ ಪುಸ್ತಕಗಳನ್ನು ಆತ ಓದಿದ್ದು ರೈಲಿನಲ್ಲಿ ಓಡಾಡುವಾಗಲೇ. ರಾಜಗಿರಿಗೆ ರೈಲು ಇಲ್ಲ ಅಂತ ಕಾಲೇಜಿನ ಆಫೀಸಿನವರು ಫೋನಿನಲ್ಲಿ ಹೇಳಿದಾಗಲೇ ಸುಹಾಸನ ಮುಖದ ಮೇಲೆ ಅಪ್ರಸನ್ನತೆ ಸುಳಿದು ಮಾಯವಾಗಿತ್ತು. ಈಗ ರಾತ್ರಿಯ ಪ್ರಯಾಣವನ್ನು ಹೇಗೆ ನಿಭಾಯಿಸುವುದು ಎಂದು ಆಲೋಚಿಸುತ್ತಾ ಟಿವಿ ಆನ್ ಮಾಡಿದ, 'ಇನ್ನು ಎರಡು ವರ್ಷ ಇದನ್ನೂ ನೋಡೋಕೆ ಆಗೋದಿಲ್ಲ' ಅಂತ ಮತ್ತೆ ಅನ್ನಿಸಿತು. ಅಮ್ಮ ಆಂಟಿಯೊಂದಿಗೆ ಹರಟುತ್ತಿದ್ದದ್ದು ಕಿವಿಗೆ ಬೀಳುತ್ತಲೇ ಇತ್ತು.</p>
<p>          <img src="http://kalaravapatrike.files.wordpress.com/2008/08/sky-river.jpg" style="display:block;margin-left:auto;width:366px;margin-right:auto;height:334px;text-align:center;" height="1200" alt="Sky-River.jpg">        </p>
<p>"ಅಲ್ವೇ ರಾಜಗಿರಿಯ ಕಾಲೇಜಲ್ಲಿ ಸೀಟು ಸಿಕ್ಕೋದು ಬಹಳ ಕಷ್ಟ ಅಂತಾರೆ. ನಮ್ಮ ಅಣ್ಣನ ಮಗನಿಗೆ ಅಲ್ಲಿ ಟ್ರೈ ಮಾಡಿದ್ರು ಎಂ.ಎಲ್.ಎ ಕಡೆಯಿಂದ ಲೆಟರ್ ಒಯ್ದಿದ್ರು ಆದ್ರೂ ಸೀಟ್ ಸಿಕ್ಕಲಿಲ್ಲ. ಅವನ ಪರ್ಸೆಂಟ್ ನೋಡಿ ಎಂಟ್ರೆನ್ಸ್ ಬರೆಯೋಕೆ ಹೇಳಿದ್ರಂತೆ. ಇವರು ಇಂಟರ್ವ್ಯೂನಲ್ಲಿ ಎ.ಎಲ್.ಎ ರೆಕಮಂಡೇಶನ್ ಲೆಟರ್ ಕೊಟ್ಟರೆ ಅದನ್ನು ಪಕ್ಕಕ್ಕಿಟ್ಟು ಪ್ರಶ್ನೆಗಳನ್ನು ಕೇಳಿದರಂತೆ, ಆಮೇಲೆ ಒಂದು ವಾರ ಬಿಟ್ಟು ರಿಸಲ್ಟ್ ಕಳಿಸ್ತೇವೆ ಅಂದ್ರಂತೆ. ಒಂದು ವಾರ ಆದ್ಮೇಲೆ ಸೀಟ್ ಸಿಕ್ಕಿಲ್ಲ ಅಂತ ಉತ್ತರ ಬಂದಿತ್ತು. ನಮ್ಮಣ್ಣ ಏನೆಲ್ಲಾ ಪ್ರಯತ್ನ ಮಾಡಿದ್ರು ಆದ್ರೆ ಸೀಟು ಸಿಕ್ಕಲಿಲ್ಲ. ಸುಹಾಸಂಗೆ ಹೆಂಗೆ ಸಿಕ್ತು? ಪರ್ಸೆಂಟೇಜೇನೋ ಚೆನ್ನಾಗಿದೆ. ಆದ್ರೆ ಅಲ್ಲಿ ಹೊರಗಿನವರಿಗೆ ಸೀಟು ಸಿಕ್ಕೋದು ಕಷ್ಟ ಅಂತಾರಲ್ವಾ?" ಅಮ್ಮನ ಗೆಳತಿ ಅನುರಾಧಾ ಕೇಳಿದರು.</p>
<p>ಅಮ್ಮನಿಗೆ ಸುಹಾಸನ ಬಗ್ಗೆ ಹೇಳಿಕೊಳ್ಳಲು ಸಂಭ್ರಮ, "ಇವಂದು ತೊಂಭತ್ತೈದು ಪರ್ಸೆಂಟು ಇತ್ತಲ್ಲ ಎಸ್.ಎಸ್.ಎಲ್.ಸಿಯಲ್ಲಿ, ಅದಕ್ಕೇ ಎಂಟ್ರೆನ್ಸ್ ಎಕ್ಸಾಂ ಬರೆಯೋದಕ್ಕೆ ಹೇಳಿ ಕಳುಹಿಸಿದ್ರು. ಕಳೆದ ತಿಂಗಳೇ ಹೋಗಿ ಬರೆದು ಬಂದ. ಇವಂಗೂ ಇಂಟರ್ವ್ಯೂ ಮಾಡಿದ್ರು. ಅಷ್ಟೇನು ಚೆನ್ನಾಗಿ ಮಾಡಿಲ್ಲ ಅಂದಿದ್ದ. ಅವ್ರು ರಿಸಲ್ಟು ಕಳ್ಸೋಕೆ ಎರಡು ದಿನ ಮುಂಚೆಯೇ ಇಲ್ಲಿ ಎಲ್ಲಾ ಕಾಲೇಜ್‌ಗಳಲ್ಲಿ ಅಡ್ಮಿಷನ್ ಡೇಟ್ ಮುಗಿದು ಆಗಿತ್ತು. ಇವ್ನ ಎಲ್ಲಾ ಫ್ರೆಂಡ್ಸು ಕಾಲೇಜು ಸೇರಿಕೊಂಡಿದ್ರು. ಅಷ್ಟು ದೂರ ಯಾಕೆ ಹೋಗ್ತೀಯ ಅಂತ ಇವನ ಟೀಚರ್ ಕೇಳಿದ್ರಂತೆ. ಇವನಿಗೆ ಏನೋ ಒಮ್ಮೆ ಮನೆಯಿಂದ ದೂರ ಇದ್ದು ಓದಬೇಕು ಅನ್ನಿಸಿದೆ. ನಂಗೆ ಕಚ್ಚಿಕೊಂಡು ಬೆಳಿದಿದ್ದಾನೆ ಅಂತ ಇವರಪ್ಪ ರೇಗಿಸುತ್ತಿದ್ದರಲ್ಲ, ಅದ್ಕೇ ಏನಾದರಾಗಲೀ ಎರಡು ವರ್ಷ ಅಮ್ಮನಿಂದ ದೂರ ಇರಬೇಕು ಅನ್ನಿಸಿದೆ ಇವ್ನಿಗೆ. ಇಲ್ಲಿ ಎಲ್ಲಾ ಕಾಲೇಜ್ ಅಡ್ಮಿಶನ್ ಮುಗಿದ ಮೇಲೆ ಅಲ್ಲಿಂದ ಫೋನ್ ಬಂದಿತ್ತು. ಸೆಲೆಕ್ಟ್ ಆಗಿದಾನೆ ಅಂದ್ರು. ಹತ್ತು ದಿನದಲ್ಲಿ ಬಂದು ಅಡ್ಮಿಶನ್ ಮಾಡಿಸಿ ಅಂದ್ರು. ಇವ್ರು ಹೋಗಿ ಅಡ್ಮಿಶನ್ ಮಾಡಿಸಿ ಬಂದಿದ್ದಾರೆ." ಅಮ್ಮ ಹೇಳುತ್ತಲೇ ಇದ್ದಳು.</p>
<p>ಸುಹಾಸ ಟಿವಿ ನ್ಯೂಸ್ ನೋಡುವುದರಲ್ಲಿ ಮಗ್ನನಾಗಿದ್ದ. ಸಂಜೆ ಎಂಟಕ್ಕೇ ಮನೆ ಬಿಡಬೇಕು. ಬಸ್ಸು ಕರೆಕ್ಟ್ ಟೈಮಿಗೆ ಹೊರಡುತ್ತಂತೆ, ಅದಕ್ಕೂ ಮುಂಚೆ ಶ್ರೀನಾಥ, ವಿಜಯ್, ಮಂಜುಗೆ ಫೋನ್ ಮಾಡಿ ತಾನು ಹೋಗುತ್ತಿರೋದನ್ನು ತಿಳಿಸಬೇಕು. ಹಂಗೇ ಸುರೇಶ್ ಸರ್‌ಗೂ ಫೋನ್ ಮಾಡ್ಬೇಕು ಅಂದುಕೊಂಡ. ಅದಕ್ಕೂ ಮುನ್ನ ಅರ್ಧಕ್ಕೆ ಬಿಟ್ಟಿದ್ದ ಪ್ಯಾಕಿಂಗನ್ನು ಮುಗಿಸಬೇಕು ಎಂದುಕೊಂಡು ತನ್ನ ರೂಮಿಗೆ ಬಂದ. ಹಾಲಿನಲ್ಲಿ ಅಮ್ಮ ತನ್ನ ಬಟ್ಟೆಗೆ ಇಸ್ತ್ರಿ ಹಾಕುತ್ತಾ ರಾಧಾ ಆಂಟಿಯ ಜೊತೆಗೆ ಮಾತಾಡುತ್ತಿದ್ದುದನ್ನು ಗಮನಿಸಿ ಒಳಕ್ಕೆ ಹೋದ.</p>
<p>ತನ್ನ ರೂಮನ್ನೊಮ್ಮೆ ಗಮನಿಸಿದ. ಇನ್ನೆರಡು ವರ್ಷ ಅದು ಹೇಗೆ ಮನೆ ಬಿಟ್ಟು ಇರುತ್ತೇನೋ ಅನ್ನಿಸಿತು. ಎಲ್ಲಿಗೂ ಹೋಗೋದು ಬೇಡ. ಇಲ್ಲೇ ಮನೆಯಲ್ಲೇ ಇದ್ದು ಬಿಡೋಣ. ಇಲ್ಲೇ ಯಾವ್ದಾದರೂ ಕಾಲೇಜಿಗೆ ಸೇರಿದರೆ ಆಯ್ತು ಅನ್ನಿಸಿತು. ಒಡನೆಯೇ ತಾನು ದುರ್ಬಲನಾಗಬಾರದು. ತಾನು ಅಳುಮುಂಜಿಯಾಗಬಾರದು. ಧೈರ್ಯ ತಂದುಕೊಳ್ಳಬೇಕು. ಎಷ್ಟೋ ಜನಕ್ಕೆ ಸಿಕ್ಕದ ಅವಕಾಶ ನನಗೆ ಸಿಕ್ಕಿದೆ. ಹಾಸ್ಟೆಲ್ಲಿನಲ್ಲಿ ಇದ್ದು ಓದುವ ಹೊಸ ಅನುಭವವನ್ನು ನನ್ನದಾಗಿಸಿಕೊಳ್ಳಬೇಕು. ಎಷ್ಟು, ಅಬ್ಬಬ್ಬಾ ಎಂದರೆ ಎರಡು ವರ್ಷ ಎಂದು ಮನಸ್ಸಿನ ವ್ಯಾಪಾರಗಳನ್ನು ತಹಬಂದಿಗೆ ತಂದುಕೊಂಡು ಪ್ಯಾಕಿಂಗ್ ಮಾಡಲು ತೆಗೆದಿಟ್ಟುಕೊಂಡಿದ್ದ ತನ್ನ ಪುಸ್ತಕಗಳನ್ನು ತಡವಿದ. ಪುಸ್ತಕಗಳ ರಾಶಿಯ ನಡುವೆ ಇಣುಕುತ್ತಿದ್ದ ಕಾರ್ಡನ್ನು ಕೈಗೆತ್ತಿಕೊಂಡ. 'ಟು ಡಿಯರ್ ಸುಹಾಸ್...' ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು ಆಶಾ. ಸುರೇಶ್ ಸರ್ ಅವಳಿಗೆ, ಇನ್ನೂ ನಾಲ್ಕೈದು ಮಂದಿಗೆ ಹೇಳಿ ನನಗೆ ಅಂಥ ಪತ್ರಗಳನ್ನು ಬರೆಸಿದ್ದರು, ನಾನು ದೂರದ ಊರಿಗೆ ಹೋಗುತ್ತಿದ್ದೇನೆ ಎಂಬುದನ್ನು ಕೇಳಿ. ಎಲ್ಲಾ ಗೆಳೆಯರೂ ತಮ್ಮ ನೆನಪುಗಳನ್ನು ಹಂಚಿಕೊಂಡು ಆತ್ಮೀಯವಾಗಿ ಪತ್ರಗಳನ್ನು ಬರೆದು ತಾನು ಶಾಲೆಗೆ ಹೋದಾಗ ಕೊಟ್ಟಿದ್ದರು. ಅವತ್ತು ಗಂಟಲ ಸೆರೆ ಉಬ್ಬಿಬಂದಂತಾಗಿ ಮಾತು ಮರೆತುಹೋಗಿತ್ತು. ಈಗ ಆಶಾ ಬರೆದ ಪತ್ರವನ್ನು ಕೈಗೆತ್ತಿಕೊಂಡು ನಾಲ್ಕು ಸಾಲು ಓದುತ್ತಿದ್ದ ಹಾಗೆ ಮತ್ತೆ ಮನಸ್ಸಿನ ವ್ಯಾಪಾರಗಳು ಜಿಗಿಯಲು ಶುರುಮಾಡಿದ್ದವು. ಯಾವ ರಗಳೆಯೂ ಬೇಡ ಅಂದುಕೊಂಡು ಆ ಪತ್ರವನ್ನೂ, ಇನ್ನುಳಿದ ಐದು ಪತ್ರಗಳನ್ನೂ ಜೋಡಿಸಿ ಒಂದು ಪುಸ್ತಕದೊಳಗಿಟ್ಟು ಟ್ರಂಕಿನಲ್ಲಿಟ್ಟ. ಸುರೇಶ್ ಸರ್ ಅವತ್ತು ಯಾಕೆ ಹಾಗೆ ಹೇಳಿದರು ಎಂಬ ಪ್ರಶ್ನೆ ಧುತ್ತೆಂದು ಎದ್ದು ಅವನ ಪ್ರಜ್ಞೆಯನ್ನೆಲ್ಲಾ ಆವರಿಸಿತು!</p>
<p>          <strong>(ಸಶೇಷ)</strong>        </p>
]]></content:encoded>
</item>
<item>
<title><![CDATA[ಹುಡುಗರ ಸಾಧನೆಗೆ ಹುಡುಗಿಯರು ಕಾರಣ!]]></title>
<link>http://nagenagaaridotcom.wordpress.com/2008/04/26/%e0%b2%b9%e0%b3%81%e0%b2%a1%e0%b3%81%e0%b2%97%e0%b2%b0-%e0%b2%b8%e0%b2%be%e0%b2%a7%e0%b2%a8%e0%b3%86%e0%b2%97%e0%b3%86-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf%e0%b2%af%e0%b2%b0%e0%b3%81/</link>
<pubDate>Sat, 26 Apr 2008 03:40:07 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/04/26/%e0%b2%b9%e0%b3%81%e0%b2%a1%e0%b3%81%e0%b2%97%e0%b2%b0-%e0%b2%b8%e0%b2%be%e0%b2%a7%e0%b2%a8%e0%b3%86%e0%b2%97%e0%b3%86-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf%e0%b2%af%e0%b2%b0%e0%b3%81/</guid>
<description><![CDATA[(ನಗಾರಿ ಸಂ-ಚೋದನಾ ಬ್ಯೂರೋ)
ಹುಡುಗರು ಹುಡುಗಿ]]></description>
<content:encoded><![CDATA[<p style="text-align:center;"><strong>(ನಗಾರಿ ಸಂ-ಚೋದನಾ ಬ್ಯೂರೋ)</strong></p>
<p>ಹುಡುಗರು ಹುಡುಗಿಯರು ಒಟ್ಟಾಗಿ ಕಲಿಯುವಂತಹ ಶಾಲೆಗಳಲ್ಲಿ ಹುಡುಗರ ವರ್ತನೆ ಹೆಚ್ಚು ಸಭ್ಯವಾಗಿರುತ್ತದೆ ಹಾಗೂ ಹುಡುಗರು ಚೆನ್ನಾಗಿ ಓದುತ್ತಾರೆ ಎಂಬುದನ್ನು <a href="http://in.news.yahoo.com/indiaabroad/20080413/r_t_ians_sc/tsc-co-education-better-as-girls-calm-bo-1bdf89b.html" target="_blank">ಪತ್ತೆ ಹಚ್ಚಿದ್ದಾರೆ</a> ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು.</p>
<p>ಹುಡುಗಿಯರೆದುರು ಹುಡುಗರು ಸಭ್ಯವಾಗಿ ವರ್ತಿಸುತ್ತಾರೆ. ಹುಡುಗಿಯರ ಮೆಚ್ಚುಗಾಗಿ ಅವರು ಚೆನ್ನಾಗಿ ಓದುತ್ತಾರೆ. ಹುಡುಗಿಯರು ಹುಡುಗರನ್ನು 'ತಣ್ಣಗೆ' ಮಾಡುತ್ತಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹುಡುಗ ಹುಡುಗಿಯರು ಒಟ್ಟಾಗಿ ಕಲಿಯುವುದರಿಂದ ಅವರ ನಡುವೆ ಹೆಚ್ಚಿನ ಹೊಂದಾಣಿಕೆ ಸಾಧ್ಯವಾಗುತ್ತದೆ ಹೆಚ್ಚು ಪ್ರಬುದ್ಧತೆ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ತರಗತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದಷ್ಟೂ ಹುಡುಗರು ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಂಕಗಳಿಸುತ್ತಾರೆ ಎಂದು ಹೇಳಿದ್ದಾರೆ.</p>
<p>ಈ ಸಂಶೋಧನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದ ನಾಡಿನ ಸಮಸ್ತ ಹುಡುಗರು ಈ ಸಂಶೋಧನೆಯನ್ನು ಸಾದ್ಯಂತವಾಗಿ ಪರಿಶೀಲಿಸಿ ಶೀಘ್ರವೇ ಅದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.</p>
<p>ಈ ಸಂಶೋಧನೆ ನಡೆದಿರುವುದು ಲಂಡನ್ನಿನಲ್ಲಾದರೂ ಅದನ್ನು ನಮ್ಮ ನಾಡಿನ ಹುಡುಗರು ಒಕ್ಕೊರಲಿನಿಂದ ಸ್ವಾಗತಿಸುವುದರ ಹಿಂದಿನ ಮರ್ಮ ಹಾಗೂ ಇದರಿಂದ ಹೇಗೆ ಹುಡುಗರ ಅಂಕ ಹೆಚ್ಚಬಹುದು ಎಂಬುದನ್ನು ಸಂ-ಚೋದಿಸಲು ನಗೆ ಸಾಮ್ರಾಟರು ಹೊರಟರು.</p>
<p>ಕಾಲೇಜುಗಳಲ್ಲಿ ಹುಡುಗರಲ್ಲಿ ಹೆಚ್ಚು ಮಂದಿ ಪರೀಕ್ಷೆಯ ಮುಖವನ್ನೇ ನೋಡಲು ಸಾಧ್ಯವಾಗದಿರುವುದಕ್ಕೆ ಅವರ ಅಟೆಂಡೆನ್ಸ್ ಕೊರತೆಯೇ ಬಹು ಮುಖ್ಯ ಕಾರಣವಾಗಿರುತ್ತದೆ. ಹುಡುಗರು ತರಗತಿಯ ಕ್ಲಾಸು ರೂಮು ಹೇಗಿರುತ್ತದೆ ಎಂಬುದನ್ನೇ ನೋಡಿರದಿದ್ದರೆ ಪರೀಕ್ಷೆಯಲ್ಲಿ ಉತ್ತರ ಹೇಗೆ ಬರೆಯಲು ಸಾಧ್ಯ ಎನ್ನುತ್ತಾರೆ ಉಪನ್ಯಾಸಕರು. ಕನಿಷ್ಠ ಪಕ್ಷ ಹುಡುಗರು ತರಗತಿಗಳಿಗೆ ಬಂದು ಕುಳಿತರೆ ತಾವು ಒದರುವ ಅಸಂಖ್ಯ ಪದಗಳಲ್ಲಿ ಒಂದೆರಡಾದರೂ ಸ್ವಪ್ರಯತ್ನದಿಂದ ಹುಡುಗರ ಕಿವಿಗಳನ್ನು ಹೊಕ್ಕು ಅವರ ಮೆದುಳಿನಲ್ಲಿ ದಾಖಲಾಗಬಹುದು ಎಂಬ ದೂರದ ಆಸೆ ಉಪನ್ಯಾಸಕರದು.</p>
<p>ಆದರೆ ಹುಡುಗರೇಕೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂಬುದನ್ನು ಪತ್ತೆ ಹಚ್ಚಲು ಹೊರಟ ಸಾಮ್ರಾಟರಿಗೆ ಅನೇಕ ಕಾರಣಗಳು ಸಿಕ್ಕವು. ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಸಿನೆಮಾ ಥಿಯೇಟರುಗಳು, ಕಾಫಿ ಡೇಗಳು, ಕಾಲೇಜು ಕ್ಯಾಂಟೀನುಗಳು, ಬೇರೆಯ ತರಗತಿಯ ಕ್ಲಾಸ್ ರೂಮುಗಳ ಬಳಿ ಬೀಟ್ ಹಾಕುವುದಕ್ಕೆ ಬಲವಾದ ಕಾರಣವಿದೆ. ತಮ್ಮ ತರಗತಿಯಲ್ಲಿ ಇಲ್ಲದ ಹುಡುಗಿಯರಿಗಾಗಿ ಇವರು ಕ್ಲಾಸ್ ರೂಮ್‌ನಿಂದ ತಪ್ಪಿಸಿಕೊಂಡು ಹೊರಗೆ ಅಲೆಯುವ ಕಷ್ಟವನ್ನು ಪಡಬೇಕಾಗುತ್ತದೆ.</p>
<p>ಆದ್ದರಿಂದ ತರಗತಿಯಲ್ಲಿ ಹುಡುಗಿಯರ ಸಂಖ್ಯೆಯನ್ನು ಹೆಚ್ಚು ಮಾಡುವುದರಿಂದ ಹುಡುಗರು ಅವರಿಗಾಗಿ ಹೊರಗೆ ಅಲೆಯುವ ತಾಪತ್ರಯ ತಪ್ಪುತ್ತದೆ. ಅಲ್ಲದೆ ಹುಡುಗರ ಸಂಖ್ಯೆಗಿಂತ ಹೆಚ್ಚು ಹುಡುಗರು ತರಗತಿಯಲ್ಲಿದ್ದರೆ ಎಲ್ಲರಿಗೂ ಆಯ್ಕೆಯ ಸ್ವಾತಂತ್ರವೂ ಸಿಕ್ಕುತ್ತದೆ. ಇದರಿಂದ ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಹೊರಗೆ ಬೀಟ್ ಹಾಕುವುದು ತಪ್ಪುತ್ತದೆ. ಆಗ ಅವರು ದಿನ ನಿತ್ಯ ತಪ್ಪದೆ, ಸಮಯಕ್ಕೆ ಸರಿಯಾಗಿ ತರಗತಿಗೆ ಬರುತ್ತಾರೆ. ಇದರಿಂದ ಅವರ ಹಾಜರಾತಿಯೂ ಉತ್ತಮವಾಗುತ್ತದೆ. ಅಪರೂಪಕ್ಕೆ ಅವರ ಕಿವಿಯ ರಕ್ಷಣಾ ಕೋಟೆಯನ್ನು ಬೇಧಿಸಿ ಕೆಲವು ಪಾಠಗಳು ಮೆದುಳನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂಬ ಸಂ-ಚೋಧನೆಯನ್ನು ಮಾಡಿ ವರದಿ ತಯಾರಿಸಿದ್ದಾ ಸಾಮ್ರಾಟರು.</p>
<p>ಈ ನಡುನೆ ಲೇಡಿ ಲೆಕ್ಚರರ್ ತೆಗೆದುಕೊಳ್ಳುವ ಸಬ್ಜೆಕ್ಟಿನಲ್ಲಿ ಹುಡುಗರ ಹಾಜರಾತಿ ಅತ್ಯಧಿಕವಾಗಿರುವ ಸತ್ಯಸಂಗತಿಯನ್ನು ಪತ್ತೆ ಹಚ್ಚಿರುವ ಸಾಮ್ರಾಟರ ಚೇಲ ಕುಚೇಲನು ಈ ಸಂಗತಿಯನ್ನೂ ವರದಿಯಲ್ಲಿ ಸೇರಿಸಲು ಸಾಮ್ರಾಟರ ಬೆನ್ನು ಬಿದ್ದಿದ್ದಾನೆ.</p>
]]></content:encoded>
</item>
<item>
<title><![CDATA[ಕನಸು ಕಂಗಳ ಹುಡುಗ]]></title>
<link>http://pratispandana.wordpress.com/2007/10/15/%e0%b2%95%e0%b2%a8%e0%b2%b8%e0%b3%81-%e0%b2%95%e0%b2%82%e0%b2%97%e0%b2%b3-%e0%b2%b9%e0%b3%81%e0%b2%a1%e0%b3%81%e0%b2%97/</link>
<pubDate>Mon, 15 Oct 2007 08:14:29 +0000</pubDate>
<dc:creator>Ganesh K</dc:creator>
<guid>http://pratispandana.kn.wordpress.com/2007/10/15/%e0%b2%95%e0%b2%a8%e0%b2%b8%e0%b3%81-%e0%b2%95%e0%b2%82%e0%b2%97%e0%b2%b3-%e0%b2%b9%e0%b3%81%e0%b2%a1%e0%b3%81%e0%b2%97/</guid>
<description><![CDATA[ ಕನಸು ಮಾರುವ ಕಾರ್ಖಾನೆ.
ವಿಧಾನ ಸೌಧದಂಥಾ ಭ]]></description>
<content:encoded><![CDATA[<p> <span style="font-size:medium;">ಕನಸು ಮಾರುವ ಕಾರ್ಖಾನೆ.</span></p>
<p><span style="font-size:medium;">ವಿಧಾನ ಸೌಧದಂಥಾ ಭವ್ಯ ಅರಮನೆ.</p>
<p>ಹೊಸತನ, ಹೊಸ ಹುರುಪು, ನವಚೈತನ್ಯ</p>
<p>ನನ್ನಂಥ ಕನಸು ಕಂಗಳ ಯುವಕನಿಗೆ ಎಲ್ಲ ಅನನ್ಯ.</p>
<p> </p>
<p>ಹೊಸ ದಿಗಂತದೆಡೆ ಕೈಚಾಚಿ,</p>
<p>ಹೊಸ ಅನುಭವಗಳ ಹೊರಚಾಚಿ</p>
<p>ನಿಂತಿದ್ದೇನೆ ನಾ ಇಲ್ಲಿ ಅನನುಭವಿ.</p>
<p>ಮಾಯಾ ಲೋಕದ ಅನನುಭವಗಳ ಅನುಭವಿ!</p>
<p> </p>
<p>ಒಂದು ದಿಗಂತದಲ್ಲಿ ನಾನು,</p>
<p>ಮತ್ತೊಂದು ದಿಗಂತಕ್ಕೆ ನನ್ನ ಕನಸು.</p>
<p>ಮಧ್ಯೆ ಸಾಗಿದರೂ ಸಾಗಿದರೂ ಸಾಗುವ ದಾರಿ ತೋರುವ ಎಂಜಿನಿಯರಿಂಗು</p>
<p>ಇವೆಲ್ಲ ಸಂಬಂಧಗಳ ನಡುವೆ ಮೂಕ ಪ್ರೇಕ್ಷಕ ಮನಸು!</p>
<p> </p>
<p>ಮೊಗೆ-ಒಗೆದು ತೆಗೆದರೂ ಹಳತೆಂಬುದಿಲ್ಲ.</p>
<p>ತೆರೆ-ತೆರೆದು ನೋಡಿದರೂ ವಿಸ್ಮಯವೇ ಎಲ್ಲ!</p>
<p>ಲೋಕಕ್ಕೊಂದು ಕಾಣ್ಕೆಗೆ ಕನಸಿನಲೂ ನನಸಿನಲೂ ಅದೇ ಗುಂಗು.</p>
<p>ಹೊಸತನದ ಸಾಕ್ಷಿಗೆ, ದಿಗ್ದರ್ಶನಕೆ ಎಂಜಿನಿಯರಿಂಗು.</p>
<p> </p>
<p>ನಾನು ನನ್ನವರಿಲ್ಲವೆಂಬ, ಇದ್ದರೂ ಕಡಿಮೆ ಎಂಬ ಅನಾಥ ಪ್ರಜ್ಞೆ.</p>
<p>ಇಂದಲ್ಲ ನಾಳೆ ನಮ್ಮರಾಗುವರು ಬಿಡು, ಅವಜ್ಞೆ.</p>
<p>ಕನಸಿನ ಕನ್ನಿಕೆಯರಾರೂ ದೊರಕಲಿಲ್ಲ ಸ್ನೇಹಕ್ಕೆ</p>
<p>ಬಿಡಿ, ಬೇಸರವಿಲ್ಲ ಅದಕ್ಕೆ..!</p>
<p> </p>
<p>ಕಾರಿಡಾರುಗಳಲ್ಲಿ ತಾಜಾ ತರುಣಿಯರ ಮೆರವಣಿಗೆ.</p>
<p>ಪ್ರೇರಣೆ, ಪ್ರೇರೇಪಣೆಯೇ ಈ ಬರವಣಿಗೆ!</p>
<p>ಏಕೆ ಹಿಡಿಸಲಿಲ್ಲವೋ ನಾನು ತಿಲೋತ್ತಮೆಯರಂಥ ತರುಣಿಯರಿಗೆ</p>
<p>ಬಹುಷಃ ಇರಬೇಕೇನೋ ನನ್ನ ಕೊರವಣಿಗೆ!</p>
<p> </p>
<p>ಕಾಲ ಬದಲಾದಂತೆ..,</p>
<p>ಕನಸುಗಳು ಮಾಸುತ್ತವೆ,</p>
<p>ಮನಸುಗಳು ಮಾಗುತ್ತವೆ,</p>
<p>ಕಾಯ ಬಾಗುತ್ತದೆ,</p>
<p>ಹೊಸತನವೂ ಹಳತಾಗುತ್ತದೆ.</p>
<p>ಹಳತಾಗುವ ಮುನ್ನ ಹೊಸತನವನ್ನೊಮ್ಮೆ</p>
<p>ಎಡತಾಗುವ, ಸವಿಯುವ ಬಯಕೆ!</p>
<p> </p>
<p>ಈಗ ಸಿಕ್ಕವರಾರೂ ಮುಂದೆ ಸಿಗುವುದಿಲ್ಲ.</p>
<p>ಮುಂದೆ ಸಿಗುವವರನ್ನು ಒಮ್ಮೆಯೂ ನೋಡಿಲ್ಲ.</p>
<p>ಸಿಕ್ಕಾಗ ಮಜಾ ಉಡಾಯಿಸು ಎನ್ನುತ್ತೆ ಉಡಾಫೆಯ ಬ್ರೈನು.</p>
<p>ಯಾರು ಸಿಕ್ಕರೇನು, ಸಿಗದಿದ್ದರೇನು ಸಾಗುತ್ತದೆ ಜೀವನದ ಟ್ರೈನು!</p>
<p> </p>
<p>ಮೊದಲ ತೊದಲುಗಳೆಲ್ಲ ಈಗ ಧ್ವನಿಯಾಗಿವೆ.</p>
<p>ಅದಲು ಬದಲಾಗಿ ಪ್ರತಿಧ್ವನಿಯಾಗಿವೆ.</p>
<p>ಮೊದಲು ಮೊದಲು ಎಲ್ಲವೂ ಸರಿಯಾಗಿರುತ್ತದೆ.</p>
<p>ಖುಶಿ ಕೊಡುತ್ತದೆ, "ಮೊದಲ" ವೈಶಿಷ್ಟ್ಯವೇ ಅದು ತಾನೇ..?</p>
<p> </p>
<p>ಹಿಂತಿರುಗಿ ನೋಡಿದಾಗ,</p>
<p>ಮಸುಕು ಮಸುಕಾದ ಕನಸುಗಳ ಸಂತೆ.</p>
<p>ಪಿಸುಮಾತಿನ ಗುಸು-ಗುಸುಗಳ ಅಂತೆ ಕಂತೆ.</p>
<p>ಏನೇ ಆಗಲಿ, ಎಲ್ಲ ಇರಬೇಕಲ್ಲ</p>
<p><font size="4">ನಾವು ಇಷ್ಟಪಟ್ಟಂತೆ..?..!!</p>
<p></font></span> </p>
]]></content:encoded>
</item>

</channel>
</rss>
